Oppanna.com

ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ

ಬರದೋರು :   ಅನಿತಾ ನರೇಶ್, ಮಂಚಿ    on   30/05/2012    13 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ಪ್ರತಿಷ್ಠಾನವು ನೆಡೆಶಿದ “ವಿಷು ವಿಶೇಷ ಸ್ಪರ್ಧೆ – 2012“ರಲ್ಲಿ ದ್ವಿತೀಯ ಸ್ಥಾನ ಗಳುಸಿದ ಲಘುಬರಹ “ನೆಂಪಣ್ಣ”.
ಲಘುಬರಹದ ಲೇಖಕಿ ್ರೀಮತಿ ಅನಿತಾ ನರೇಶ್ ಮಂಚಿ ಇವಕ್ಕೆ ಹೃತ್ಪೂರ್ವಕ ಅಭಿನಂದನೆಗೊ.
ಅನಿತಕ್ಕನ ಹವ್ಯಕ ಸಾಹಿತ್ಯ ಸೇವೆ ಇನ್ನೂ ಮುಂದುವರಿಯಲಿ. ಇನ್ನೂ ರಚನೆಗೊ, ಸಾಹಿತ್ಯಂಗೊ ಇವರ ಕೈಲಿ ಬರಳಿ – ಹೇಳ್ತದು ನಮ್ಮ ಹಾರೈಕೆ.

ಲೇ. ಅನಿತಾ ನರೇಶ್ ಮಂಚಿ

ನೆಂಪಣ್ಣ (ಲಘುಬರಹ)

“ಇದಾ ಇಲ್ಲಿ ಗೆಣಪ್ಪ ಬೈಂದ.. ಆನು ಪಕ್ಕ ತೋಟಕ್ಕೆ ಹೋಗಿ ನಾಲ್ಕು ಅರಿಕ್ಕೆಲು ಹುಲ್ಲು ಮಾಡಿಕೊಂಡು ಬತ್ತೆ, ನಿಂಗ ಒಂದರಿ ಮಾತಾಡಿ ನಿಘಂಟು ಮಾಡಿ” ಸಾವಿತ್ರಿ ಶಂಭಣ್ಣಂಗೆ ಕೇಳುವ ಹಾಂಗೆ ಮೆಲ್ಲೆ ಹೇಳಿ ಹೆರಟತ್ತು.
‘ಹ್ಹೋ.. ಗೆಣಪ್ಪ.. ಬಾ ಬಾ.. ಈಗೆಲ್ಲಿಂದ ಬಂದದು ನೀನು ಈ ನಟಬೆಶಿಲಿಂಗೆ..!? ಅಲ್ಲ ಆನೆಂತ ಜನ ಹೇಳಿ.. ಬೆಶಿಲು ಹೇಳಿ ಮನೆ ಒಳ ಕೂದರೆ ನಮ್ಮ ಕೆಲಸ ಅಪ್ಪಲಿದ್ದಾ.. ಇಲ್ಲೆನ್ನೆ.. ಎಂತಾರು ಜೆಂಬ್ರ ಇತ್ತಾಯಿಕ್ಕು ಇತ್ಲಾಗಿ ಅಲ್ಲದೋ.. ’
ಅಪ್ಪು ಮಾವ ವೈದಿಕಕ್ಕೆ ಹೋಪಲಿತ್ತು .. ಊಟ ಆದ ಕೂಡ್ಲೇ ಹೆರಟೆ. ಇದು ನಿಂಗೋ..’

‘ಹ್ಹೋ.. ಇದಾ ಈಗ ನೆಂಪಾತು ನೋಡು..ಅಲ್ಲಿ ಕಾಫಿ ಆಗಿರ ಹಾಂಗಾರೆ.. ಈಗೆಂತಕ್ಕು ಆಸರಿಂಗೆ..? ಕಾಫಿಯೋ, ಚಾಯವೋ ಆಯೆಕ್ಕಾದರೆ ಅತ್ತೆ ತೋಟಂದ ಬರೆಕ್ಕಷ್ಟೆ.. ಶರ್ಬತ್ತು ಅಕ್ಕಾರೆ ರೆಡಿ ಇದ್ದು ಕೊಡ್ತೆ..ಸೆಖೆಗೆ ಅದುವೇ ಲಾಯಿಕಪ್ಪದು..
ಎಂತಾ ಬೆಶಿ ಮಾರಾಯ ತಡವಲೆಡಿತ್ತಿಲ್ಲೆ.. ಫ್ಯಾನ್ ಹಾಕುವ ಹೇಳಿರೆ ಈ ಕರೆಂಟಿಂದೊಂದು ಉಪದ್ರ.. ನೋಡಿದಾ.. ಮೈ ಮೇಲೆ ಅರ್ಧ ಇಂಚು ದಪ್ಪಕ್ಕೆ ಬೆಗರ್ಸೆರೆ ಬಿದ್ದಿದು..!!
ಅದಾ.. ಈಗ ನೆಂಪಾತು ನೋಡು ಕರೆಂಟು ಹೇಳುವಾಗ.. ಮಕ್ಕೊಗೆ ಪರೀಕ್ಷೆ ಎಲ್ಲಾ ಮುಗುತ್ತಾ.. ಮುಗುದರೂ ರಗಳೆಯೇ..ಆದರೆ ಈಗ ಬೀಜದ ಗುಡ್ಡೆ, ಮಾವಿನಕಾಯಿ ಹೇಳಿ ಎಲ್ಲಾ ಹೆರ ತಿರುಗುತ್ತವಿಲ್ಲೆ.
ಎಷ್ಟೊತ್ತಿಂಗೆ ನೋಡಿರೂ ಟಿ ವಿ ಇಲ್ಲದ್ದರೆ ಕಂಪ್ಯೂಟರ್..
ನಿನ್ನಲ್ಲಿಯೂ ಇದ್ದಾಯಿಕ್ಕು ಅದು.. ಅಲ್ಲ.. ಬೇಕಪ್ಪ.. ಕಾಲಕ್ಕೆ ತಕ್ಕ ಹಾಂಗೆ ಕೋಲ.. ನೀ ಎಂತ ಹೇಳ್ತೆ..’

‘ಅಪ್ಪಪ್ಪು ಮಾವ.. ಪರೀಕ್ಷೆ ಇಂದು ಅಖೇರಿ. ಈಗ ಶಾಲೆಗೆ ಹೋಯೆಕ್ಕು ಮಗಳ ಕರಕ್ಕೊಂಡು ಬಪ್ಪಲೆ..ಮತ್ತೇ.. ನಿಂಗಾ..’

‘ಅದಾ.. ಈಗ ನೆಂಪಾತು ನೋಡು..ಶಾಲೆ ಹೇಳುವಾಗ .. ನಿಂಗಳ ಮನೆಯ ಹತ್ರೆ ಇತ್ತಿದ್ದ ಅಲ್ಲದಾ ಶಂಕರ ಹೇಳಿ ..
ಅವ ಎನ್ನ ಶಾಲೆ ಫ಼್ರೆಂಡ್ ಮಾರಾಯಾ.. ಈಗಳೂ ಅಲ್ಲೇ ಇದ್ದನಾ.. ಜಾಗೆ ಮಾರಿ ಹೋವ್ತಡ ಹೇಳಿ ಸುದ್ಧಿ ಇತ್ತೊಂದರಿ..
ಇದಾ.. ಎಂಗಳ ಮದುವೆ ಆದ ಸುರುವಿಲಿ ಮಾರಾಯನೇ..ಹೇಳಿರೆ ಈಗೊಂದು ನಲ್ವತ್ತು ವರ್ಷ ಮೊದಲು.. ಆನುದೇ ನಿನ್ನತ್ತೆದೇ ಶಂಕರ ಒತ್ತಾಯ ಮಾಡಿದ ಹೇಳಿ ಅವನ ಮನೆಗೆ ಹೋದ್ದು..
ಸಪೂರದ ಕಟ್ಟಪುಣಿ ಇದಾ ಅವನಲ್ಲಿಗೆ ಹೋಪಲೆ.. ನಿನ್ನತ್ತೆ ಹೊಸ ಜಾಗೆಯ ಗೆಬ್ಬಾಯಿಸಿಕೊಂಡು ಹೋಗಿ ತುಳುಂಕನೇ ಗೆದ್ದೆಗೆ ಬೀಳೆಕ್ಕಾ…!!
ಸುತ್ತಿದ ಸೀರೆ ಎಲ್ಲಾ ಚೆಂಡಿ .. ಅದರ ನೆಗ್ಗುಲೆ ಹೋಗಿ ಆನುದೆ ಪೂರ್ತಿ ಕಿರಿಂಚಿ ಮೆತ್ತಿಕೊಂಡೆ.. ಹಾಂಗೆ ಹೋದ್ದು ಅವನಲ್ಲಿಗೆ.. ಮತ್ತೆ ಅವನ ಹೆಂಡತಿ ಮಾತುಲೆ ಕೊಟ್ಟ ವಸ್ತ್ರಲ್ಲಿಯೇ ಇಬ್ರೂ ಮನೆಗೆ ಬಂದದು..’

‘ಹ್ಹ..ಹ್ಹ.. ಅಪ್ಪಾ.. ಮಾವ.. ಅವು ಈಗಳೂ ಅಲ್ಲೆ ಇದ್ದವು.. ಭಾರೀ ಕೃಷಿ ಅವರದ್ದು.. ’

‘ಅಪ್ಪನ್ನೆ.. ನೀನು ಕೃಷಿ ಹೇಳುವಾಗ ನೆಂಪಾತು ನೋಡು.. ಅಂದು ಭಾರೀ ಭಾರೀ ವೆನಿಲ್ಲಾ ಹಾಕಿತ್ತಿದ್ದ ಅಲ್ಲದಾ ಅವ..
ಬಳ್ಳಿ ಮಾರಿಯೇ ಒಳ್ಳೇ ಪೈಸೆ ಆದಿಕ್ಕು ಅವಂಗೆ..ಎಂಗಳಲ್ಲಿಯೂ ರಜ್ಜ ಇದ್ದು ಆದರೆ ಈಗ ಅಡಕ್ಕೆ ಮರದ ಕೊಬೆಲಿಪ್ಪ ಆ ಬಳ್ಳಿಯ ಮುತ್ಸುದು ಹೇಂಗೆ ಹೇಳಿ ತಲೆಬೆಶಿ ಮಾರಾಯ..
ಅದಾ.. ಅಡಕ್ಕೆ ಹೇಳುವಾಗ ನೆಂಪಾತು ನೋಡು.. ಈಗ ರಜಾ ಅಡಕ್ಕೆ ಕ್ರಯ ಪೊಕ್ಕುತ್ತಾ ಇದ್ದದ. ಸಧ್ಯ ಕೊಟ್ಟೆಯಾ..?
ಎಂತಾದರೆಂತ ನಮ್ಮ ಅಡಕ್ಕೆಗೆ ರೇಟ್ ಏರೆಕ್ಕರೆ ಮೊದಲೇ ಬಾಕಿ ಇಪ್ಪದರದ್ದು ಎಲ್ಲಾ ರೇಟು ತಲೆಂದ ಕಡ್ಪ ಹೋಗಿ ಆಗಿರ್ತು.ನಾವು ಮೊದಲಿದ್ದ ಹಾಂಗೇ ಇಪ್ಪದು..ಇಲ್ಲಿಂದ ಹತ್ರಾಣ ಪೇಟೆಗೆ ಹೋಯೆಕ್ಕಾರೆ ಬಸ್ಸಿಂಗೆ ಸುಮಾರು ಸೊರ್ಗೆಕ್ಕು.. ಇನ್ನು ಹೋಪ ಮಾರ್ಗದ ಕತೆ ಹೇಳಿ ಪೂರೈಸ.. ’

‘ಅದಪ್ಪು ಮಾವ.. ಮೊನ್ನೆ ನಿಂಗೋ…. ’

‘ಇದಾ ಮಾರ್ಗ ಹೇಳುವಾಗ ನೆಂಪಾತು ನೋಡು..ನಿನ್ನ ತೋಟದ ಮಾರ್ಗ ಸರಿ ಆತಾ.. ಜೆ ಸಿ ಬಿ ಲಿ ಗರ್ಪುಸಿದ್ದಾ..
ಅಲ್ಲ ಅದರೆಲ್ಲ ಕೆಲ್ಸದವರತ್ರೆ ಮಾಡ್ಸುವ ಆಲೋಚನೆಯೇ ಇಲ್ಲೆನ್ನೆ ಈಗ.. ಮಣ್ಣು ಇತ್ತಿಲ್ಲೆಯಾ ಸುಮಾರು.. ಅದರೆಂತ ಮಾಡಿದೆ.. ತೋಟಕ್ಕೆ ಹಿಡಿಶೆಕ್ಕಾತು.. ನಾಲ್ಕು ಅಡಕ್ಕೆ ಆದರೂ ಹೆಚ್ಚಾವ್ತಿತ್ತು.. ’

‘ಹೂಂ ಹಿಡಿಶೆಕ್ಕು ಮಾವ ಜನ ಆಯೆಕ್ಕನ್ನೆ ಅದಕ್ಕೂ.. ಮತ್ತೇ ..’

‘ಅಪ್ಪಪ್ಪಾ .. ಈಗ ನಿತ್ಯದ ಕೆಲಸ ಮುಗುಶುದೇ ರಗಳೆ.. ಹೊಸತ್ತೆಂತನ್ನೂ ಎಳದು ಹಾಕಿಕೊಂಬಲೇ ಎಡಿತ್ತಿಲ್ಲೆ..
ಅದಪ್ಪು ಅಡಕ್ಕೆ ಎಲ್ಲಾ ಒಳ ಬಿದ್ದತ್ತಾ.. ಎಂಗೊಗೂ ಇದಾ ಈ ಜಾಲಿಲಿ ಇಪ್ಪದಿಷ್ಟಿದ್ದು ಇದು ಒಳ ಹೋದರೆ ನೆಮ್ಮದಿ.. ರಜೆಲಿ ಬಪ್ಪ ಪುಳ್ಯಕ್ಕೊಗೆ ಆಡುಲೂ ಜಾಗೆ ಬೇಕನ್ನೆ..’

‘ಹುಂ .. ಅಪ್ಪಪ್ಪು ಮಾವ.. ಹ್ಹೋ.. ಹೊತ್ತಾದ್ದು ಗೊಂತೇ ಅಯಿದಿಲ್ಲೆ .. ಎನಗೆ ತಡ ಆವ್ತುಮಗಳ ಕರಕ್ಕೊಂಡು ಬಪ್ಪಲೆ .. ಆನಿನ್ನು ಬತ್ತೆ ಮಾವಾ.. ಅತ್ತೆಗೂ ಹೇಳಿಕ್ಕಿ.. ’

‘ಆತಂಬಗ ..ಸುಮಾರು ಹೊತ್ತಾತನ್ನೇ, ಗೊಂತಾಯಿದಿಲ್ಲೆ ..ಆಗಾಗ ಬತ್ತಾ ಇರು ಹೀಂಗೆ.. ’

ಸಾವಿತ್ರಿ ತೋಟಂದ ಬಂದದು, ಕತ್ತಿ ಕೆಳ ಮಡುಗದ್ದೆ ಕೇಳಿತ್ತು..
‘ಅಪ್ಪೊ.. ಯಾವಾಗಂಗೆ ಪೂಜೆ ನಿಘಂಟು ಮಾಡಿದಿ ನಿಂಗ.. ಚೈತ್ರ, ಚೈತನ್ಯ , ಪುಳ್ಳಿಯಕ್ಕ ಎಲ್ಲಾ ಬಪ್ಪ ದಿನಕ್ಕೆ ಅವಂಗೆ ಪುರುಸೊತ್ತಿದ್ದಡವಾ..?
ಇದೆಂತದಿದು.. ಈ ಶರ್ಬತ್ತು ಮಾಡಿ ಮಡುಗಿದ್ದರ ಅವಂಗೆ ಕೊಟ್ಟಿದಿಲ್ಲಿರಾ ಎಂತ..? ಮಾಡಿದ್ದು ಹಾಂಗೇ ಇದ್ದು..!!
ಅವನ ಫೋನ್ ಮಾಡಿ ಬಪ್ಪಲೆ ಹೇಳಿ ಒಂದು ಲೋಟ ಆಸರಿಂಗೂ ಕೊಡದ್ದದಿದ್ದಾ ನಿಂಗ..’ಅಂತೆ ಅಲ್ಲ ನಿಂಗಳ ಎಲ್ಲರೂ ನೆಂಪಣ್ಣ ಹೇಳುದು..!!

‘ಛೇ.. ಇದಾ. ಈಗ ನೆಂಪಾತಿದ .. ಅವನ ಪೂಜೆಗೆ ದಿನ ಕೇಳುಲೆ ಆನೇ ಬಪ್ಪಲೆ ಹೇಳಿದ್ದು ಹೇಳಿ.. ಅದೊಂದು ಕೇಳುಲೆ ಬಾಕಿ ಆತನ್ನೆ.. ’

~*~*~

ಸೂ:

  • ವಕೀಲ, ಛಾಯಾಗ್ರಾಹಕ, ಪ್ರಗತಿಪರ ಕೃಷಿಕ ಪತಿ ಶ್ರೀಯುತ ರಾಮ ನರೇಶ ಮಂಚಿ ಇವರ ಒಟ್ಟಿಂಗೆ ತೋಟದ ಕೃಷಿಲಿ ಹೆಗಲುಕೊಟ್ಟೊಂಡು, ಸಾಹಿತ್ಯ ಕೃಷಿಯನ್ನೂ ಮಾಡ್ತಾ ಇದ್ದವು ಅನಿತಕ್ಕ.
  • ಅನಿತಕ್ಕನ “ಮಹತಿ” ಶುದ್ದಿಗೊ ಅವರ ಬ್ಲೋಗು kadalu.blogspot.com ಲಿ ಕಾಂಬಲಕ್ಕು.
  • ಅನಿತಕ್ಕನ ವಿಳಾಸ:
    ಅನಿತಾ ನರೇಶ್ ಮಂಚಿ
    ಮಂಚಿ ಗ್ರಾಮ ಮತ್ತು ಅಂಚೆ
    ಬಂಟ್ವಾಳ ತಾಲೂಕು
    ದ. ಕ. ಜಿಲ್ಲೆ.
    ಪಿನ್: 574323

13 thoughts on “ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ

  1. Nempannana nempina gaali tampaagi beesithu Anithakka Nareshannana kelidde tilisi aata? Abhinandane

  2. ಲಾಯ್ಕ ಆಯಿದು… ಅಭಿನಂದನೆಗೊ…
    ಸಾಹಿತ್ಯ ಕೃಷಿ ಹೀಂಗೆ ಮುಂದುವರಿಯಲಿ ಹೇಳಿ ಹಾರೈಕೆ…

  3. ನ೦ಗಳ ಭಾಷೆಯ ಸ೦ಭಾಷಣೇನ ಸೂಕ್ಶ್ಮವಾಗಿ ಗ್ರೈಶಿದ್ರೆ ಎ೦ಥ ಚೊಲೋ ಮಜಾ ಸಿಕ್ತು ಅನ್ನೋದುಕ್ಕೆ ಇದೇ ಬರಹ ಸಾಕು. ಅನಿತಕ್ಕಾ, ಚೊಲೋ ಬೈ೦ದು, ಸ್ಪರ್ಧೆಯಲ್ಲಿ ಗೆದ್ದದ್ದಕ್ಕೂ ಅಭಿನ೦ದನೆಗೊ.

  4. ಎಲ್ಲರಿಂಗೂ ಧನ್ಯವಾದಂಗೋ.. ನಿಂಗಳ ಹಾರೈಕೆ ಯಾವಾಗಲೂ ಇರಲಿ..

  5. ಲಾಯಕಲ್ಲಿ ಓದಿಸಿಕೊಂಡು ಹೋತು. ಕಡೇಂಗೆ ಬಾರೀ ಲಾಯಕ ಇತ್ತು.

  6. ನಮ್ಮ ಭಾಶೆಲಿ ಬರದ್ದರ ಮೊದಲ ಬಾರಿಗೆ ಓದಿದ್ದು. ಭಾರಿ ಲಾಯಿಕ ಆತು. ಲಿಂಕು ಕಳ್ಸಿದ್ದಕ್ಕೆ ಧನ್ಯವಾದ. ನಿನ್ನೆ ನೋಡಿತ್ತಿದ್ದೆ, ಇಂದು ನೆಂಪಾತಷ್ಟೆ ನೋಡು. ಎನ್ನತ್ತರೆ ಕನ್ನಡದ ಲಿಪಿ ಇಲ್ಲದ್ದ ಕಾರಣ ಬರವಲೆ ರಜ ಕಷ್ಟ ಆವ್ತ ಇದ್ದು. ಅನಿತಕ್ಕಗೆ ಶುಭಾಶಯ.

  7. ನಿನ್ನೆಯೇ ನೆಂಪಣ್ಣನ ಕಥೆಯ ಓದಿತ್ತಿದ್ದೆ. ಒಪ್ಪ ಕೊಡ್ಳೆ ನೆಂಪಾತಿಲ್ಲೆ. ಇಂದು ನೆಂಪು ಮಾಡಿ ಒಪ್ಪ ಕೊಡ್ತಾ ಇದ್ದೆ. ಲಘು ಬರಹ ಲಘುವಲ್ಲ ಗುರುತರವಾಗಿಯೇ ಇದ್ದು. ಓದುಸೆಂಡು ಹೋವ್ತು. ಬಹುಮಾನ ಗಿಟ್ಟಿಸೆಂಡದಕ್ಕೆ ಅಭಿನಂದನೆಗೊ. ಅನಿತಕ್ಕನ ಬರಹಂಗೊ ಬೈಲಿಂಗೆ ಮರೆಯದ್ದೆ ಬತ್ತಾ ಇರಳಿ.

  8. ಲಾಯ್ಕ ಆಯಿದು.ಹೀಂಗೆ ಸಿಕ್ಕಿದ ವಿಷಯ ಎಲ್ಲಾ ಮಾತಾಡಿ ಬೇಕಾದ್ದರ ಮರೆತ್ತು ಹೋಪದು ಇದ್ದಲ್ಲದೊ?ನೈಜ ನಿರೂಪಣೆ.

  9. ಅಕ್ಕಾ
    ಬರಹ ಓದುಸಿಗೋ೦ಡು ಹೋತು.
    ಹಾ೦ಗೆಯೆ ನಿ೦ಗಳ ಬ್ಲಾಗ್ ನೋಡಿದೆ ರಜ್ಜ. ಬಹಳ ಸುಲಲಿತವಾಗಿ ಆಸಕ್ತಿಪೂರ್ವಕವಾಗಿ ಓದುಸಿಗೊ೦ಡು ಹೋವ್ತು ನಿ೦ಗಳ ಬರಹ೦ಗ
    ಇನ್ನಾನು ನಿ೦ಗಳ ಬ್ಲಾಗ್ ನ ರೆಗ್ಯುಲರ್ ವಿಸಿಟರ್:)

  10. ಬರಹ ಲಾಯಕ್ಕಿದ್ದು. ಒಳ್ಳೆ ಹೆಸರು.. ಮರೆಗುಳಿಯವಂಗೆ “ನೆಂಪ ಣ್ಣ”.

  11. ಗಣಪ್ಪ ಹೇಳಿಯಪ್ಪಗ ನೆಂಪಾತು ನೋಡಿ.. “ಆದಿಯಲಿ ಗಜಮುಖನ…”. ಈ ಕತೆಲಿಯೂ ಸುರುವಿಂಗೆ ಗಣಪ್ಪನೇ ಬಂದ ಅದಾ..

    ಕಾಪಿ ಚಾ ಸರಬತ್ತು ಹೇಳ್ವಾಗ ನೆಂಪಾತು… ಬೆಶಿಲಿಂಗೆ ಮಜ್ಜಿಗೆ ನೀರು ಪಷ್ಟ್ಲಾಸು.

    ಅಡಕ್ಕೆ ಹೇಳುವಾಗ ನೆಂಪಾತು… ಒಂದಾರಿ ಎಲೆಅಡಕೆ ತಿಂದುಗೊಂಡೇ ಕತೆ ಓದಿಕ್ಕುವೋದು.

    ಕತೆ ಓದಿ ಮುಗಿಶಿಯಪ್ಪಗ ನೆಂಪಾತು.. ಇದು ಕತೆ ಅಲ್ಲ ಲಘುಬರಹ., ನ್ಯಾಚುರಲ್ ಆಗಿ ಬರದ್ದವು.

    ನೆಂಪಣ್ಣ ಹೇಳ್ವಾಗ ನೆಂಪಾತು.. ನಮ್ಮ ಬೈಲ ಕೆಪ್ಪಣ್ಣ, ಪೆಂಗಣ್ಣ, ಪೆದ್ದಣ್ಣನ ಕೂಟುಗಟ್ಟಿನವೇ ಆರಾರು ಆದಿಕ್ಕೋದು ಈ ನೆಂಪಣ್ಣ. ಹಾ° ಎನ್ನ ಇನ್ನು ನೆಂಪಣ್ಣ ಹೇಳಿಕ್ಕಲಾಗನ್ನೆ., ಬರದಿಕ್ಕುತೆ ಈಗಳೇ- “ಲಘುಬರಹ ಲಾಯಕ ಆಯ್ದು, ಬಹುಮಾನ ಪಡದ್ದಕ್ಕೆ ಅಭಿನಂದನೆ., ಬೈಲಿಂಗೆ ಬಂದುಗೊಂಡಿರಿ, ಶುದ್ದಿ ಹೇಳಿಗೊಂಡಿರಿ” ಹೇದು ‘ಚೆನ್ನೈವಾಣಿ’.

  12. ಎಲ್ಲಾ ಮಾತಾಡೀ ಮಾತಾಡೀ… ಕೇಳೆಕ್ಕಾದ್ದರ ಮರದ್ದದೆಯೋ?
    ಅನಿತಕ್ಕನ ಲಘುಬರಹ ಕೊಶಿ ಕೊಟ್ಟತ್ತು.
    ಅಭಿನ೦ದನೆಗೊ.ಹವ್ಯಕ ಭಾಷೆಲಿ ಸಾಹಿತ್ಯಕೃಷಿ ಹೀ೦ಗೆಯೇ ಮು೦ದುವರಿಯಲಿ ಹೇಳಿ ಹಾರೈಕೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×