ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಆತ್ಮೀಯ ಬೈಲಿಂಗೆ,
ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ಅಗ್ನಿ ಮೀಳೇ ಪುರೋಹಿತಂ “ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.
ಶರ್ಮಪ್ಪಚ್ಚಿ
~~~
ಅಗ್ನಿ ಮೀಳೇ ಪುರೋಹಿತಂ
(ಋಗ್ವೇದದ ಅಗ್ನಿಮೀಳೇ ಪುರೋಹಿತಂ ಮೊದಲ್ಗೊಂಡು ಒಂಭತ್ತು ಮಂತ್ರಂಗೊ)
ಅಗ್ನಿ ಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ |
ಹೋತಾರಂ ರತ್ನಧಾತಮಮ್ ||೧||
ಅಗ್ನಿಃ ಪೂರ್ವೇಭಿರ್ ಋಷಿಭಿರೀಡ್ಯೋ ನೂತನೈರುತ | ಸ ದೇವಾ ಏಹ ವಕ್ಷತಿ ||೨||
ಅಗ್ನಿನಾ ರಯಿವಶ್ನವತ್ ಪೋಷಮೇವ ದಿವೇ ದಿವೇ |
ಯಶಸಂ ವೀರವತ್ತವಮ್ ||೩||
ಅಗ್ನೇಯಂ ಯಜ್ಞಮಧ್ವರಂ ವಿಶ್ವತಃ ಪರಿಭೂರಸಿ | ಸ ಇದ್ದೇವೇಷು ಗಚ್ಛತಿ ||೪||
ಅಗ್ನಿರ್ಹೋತಾ ಕವಿಕ್ರತುಃ ಸತ್ಯಶ್ಚಿತ್ರಶ್ರವಸ್ತಮಃ |
ದೇವೋ ದೇವೇಭಿರಾಗಮತ್ ||೫||
ಯದಂಗದಾಶುಷೇ ತ್ವಮಗ್ನೇ ಭದ್ರಂ ಕರಿಷ್ಯಸಿ | ತವೇತ್ತತ್ ಸತ್ಯಮಂಗಿರಃ ||೬||
ಉಪತ್ವಾಗ್ನೇ ದಿವೇ ದಿವೇ ದೋಷಾ ವಸ್ತರ್ಧಿಯಾ ವಯಮ್ |
ನಮೋ ಭರಂತ ಏಮಸಿ ||೭||
ರಾಜಂತ ಮಧ್ವರಾಣಾಂ ಗೋಪಾಮೃತಸ್ಯ ದೀದಿವಮ್ | ವರ್ಧಮಾನಂ ಸ್ವೇ ದಮೇ ||೮||
ಸ ನಃ ಪಿತೇವ ಸೂನವೇsಗ್ನೇ ಸೂಪಾಯನೋ ಭವ |
ಸಚಸ್ವಾ ನಃ ಸ್ವಸ್ತಯೇ ||೯||
ಓಂ ಶಾಂತಿಃ ಶಾಂತಿಃ ಶಾಂತಿಃ
ಸ್ತುತಿಪೆನಗ್ನಿಯ (ಕನ್ನಡ ಗೀತೆ)
ಸ್ತುತಿಪೆನಗ್ನಿಯ ಪೂರ್ವ ಜನಕನ ಯಜ್ಞ ಋತ್ವಿಜ ತೇಜದವನ |
ಸರ್ವಮಂಗಳ ಧರಿಸಿದಾತನ ಸೂರ್ಯಗ್ರಹಗಳ ಧರಿಸಿದವನ ||೧||
ಪೂರ್ವ ನೂತನ ಋಷಿನಮಸ್ಕೃತ ಅಗ್ನಿ ದೇವನು ಪರಮ ಪುರುಷ|
ದೈವ ಕೃಪೆಯನು ಕರುಣಿಪನವ ದೇವತೆಗಳನು ಒಲಿಸಿ ಕೊಡುವ ||೨||
ಅಗ್ನಿ ದೇವನ ಕೃಪೆಯ ಕಾರಣ ನರಗೆ ಐಸಿರಿ ಹರಿದು ಬರಲು |
ವೃದ್ಧಿಗೊಳ್ಳುತ ಕೀರ್ತಿ ತರುವುದು ವೀರ ವಿದ್ವಾಂಸರನು ಸಹಿತ ||೩||
ಹಿಂಸೆಗೊಳ್ಳದ ಯಾವ ಯಜ್ಞವು, ಅಗ್ನಿ ದೇವನೆ, ವಿಶ್ವದೆಲ್ಲು |
ರಕ್ಷಿಸುತ್ತಿಹೆ, ವ್ಯಾಪಿಸುತ್ತಿಹೆ, ದೇವ ಮಾನವರಲ್ಲಿ ಮೆರೆದು ||೪||
ಸರ್ವದಾತನು ಸರ್ವಜ್ಞಾನಿಯು ಅಗ್ನಿ ದೇವನು ಜಗದ ಕರ್ತೃ |
ಶ್ರವಣ ಪುಣ್ಯವ ಪಡೆಯಲದ್ಭುತ ದೇವ ಮಾನವರಿಂದ ಸಾಧ್ಯ ||೫||
ಸರ್ವ ಪ್ರಿಯನಾಗಿರುವ ಅಗ್ನಿಯೆ ದಾನಿ ಸಜ್ಜನರನ್ನು ಪೊರೆವೆ |
ಅಂತರಾತ್ಮನೆ ನೀಡು ರಕ್ಷಣೆ ಸತ್ಯವ್ರತವಿದುನಿನ್ನ ತಿಳಿವೆ ||೬||
ಎಲ್ಲ ದಿನ ದಿನ ಬುದ್ಧಿ ಪೂರ್ವಕ ನಮಿಸಿ ಸ್ತುತಿಪೆನು ನಾನು ನಿನಗೆ|
ಹಗಲು ರಾತ್ರಿಯು ನಿನ್ನ ಬಳಿಯಲಿ ಬಂದು ಸೇರ್ವೆವು ಪೂಜಿಸುತಲಿ ||೭||
ದೀಪ್ತವಾಗಿಹ ಯಜ್ಞ ಧಾರ್ಮಿಕ ರಕ್ಷಿಪಾತನ ಸತ್ಯ ಪ್ರಭೆಗೆ |
ಬೆಳೆದು ನಿಂತಿಹ ಸರ್ವ ಶ್ರೇಷ್ಠನ ಹೊಂದುತಿರುವೆವು ಮೋಕ್ಷ ಸುಖಕೆ ||೮||
ವೇದ ಜ್ಞಾನದ ಅಗ್ನಿ ದೇವನೆ ಪಿತನು ಪುತ್ರನ ಪೊರೆವ ತೆರದಿ।
ಸುಖವನೀಯುತ ಜ್ಞಾನದಾತನೆ ನಮಗೆ ಮಂಗಳ ನೀಡು ಮುದದಿ ||೯||
ಓಂ ಶಾಂತಿಃ ಶಾಂತಿಃ ಶಾಂತಿಃ
ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಅಗ್ನಿಯ ಹೊಗಳಿ ‘ನಮಗೆ ಮಂಗಳ ನೀಡು ಮುದದಿ’ ಹೇಳಿ ಬೇಡಿಗೊಂಬ ಮಂತ್ರದ ಅನುವಾದವ ಪದ್ಯರೂಪಲ್ಲಿ ಸರಳವಾಗಿ ಸುಂದರವಾಗಿ ಬರದ್ದದು ಲಾಯಕ ಆಯ್ದು ಹೇಳಿ ಹೇಳುತ್ತು- ‘ಚೆನ್ನೈವಾಣಿ’
[ಉತ್ತರುಸಿ]
kannada padya roopalli banda samskrtha shloka moolada ghanasthike, gaambheeryadottinge moodi baindu.
[ಉತ್ತರುಸಿ]
ಡಾಕ್ಟ್ರೇ,
ನಿಂಗಳ ಇಲ್ಲಿ ಕಂಡು ಕೊಶೀ ಆತು.
ಬತ್ತಾ ಇರಿ, ನಿಂಗಳ ಅನಿಸಿಕೆಗಳ ಬರದು ಪ್ರೋತ್ಸಾಹಿಸುತ್ತಾ ಇರಿ
[ಉತ್ತರುಸಿ]
ಸಂಸ್ಕೃತಲ್ಲಿ ಈಗ ಳ ಕಾರ ಬರವದು ಕಮ್ಮಿ ,ವೇದಮಂತ್ರಲ್ಲಿ ಇದ್ದು ಹೇಳಿ ಕಾಣುತ್ತು.ಮರಾಠಿಲಿ ಬರೆತ್ತವು. ಹಿಂದಿಲಿ ಳ ಕಾರ ಬರೆತ್ತವೇ ಇಲ್ಲೆ ಹೇಳಿ ಕಾಣುತ್ತು.ಗೊಂತಿದ್ದವು ಈ ಬಗ್ಗೆ ತಿಳಿಸುವಿರಾ?
[ಉತ್ತರುಸಿ]
ಧನ್ಯವಾದಂಗೋ !
[ಉತ್ತರುಸಿ]