Oppanna.com

ಭವಾನ್ಯಷ್ಟಕಮ್

ಬರದೋರು :   ಶ್ರೀಅಕ್ಕ°    on   26/09/2014    5 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನವರಾತ್ರಿಯ ಶುಭಾಶಯಂಗೊ…

ಶ್ರೀ ಶಂಕರಾಚಾರ್ಯರ ಒಂದು ಅಪೂರ್ವ ಕೃತಿ. ಭವನ ಪತ್ನಿ ಭವಾನೀ ಹೇಳಿ ಪಾರ್ವತಿಯ ಕಲ್ಪಿಸಿ, ಒಬ್ಬ° ಮನುಷ್ಯನ ಎಲ್ಲಾ ಭಾವನೆಗಳ, ಅವನ ಜೀವನದ ಏರಿಳಿತಂಗಳ, ಮನುಷ್ಯಾವಸ್ಥೆಯ ವಿಪರೀತಂಗಳ ಕಲ್ಪಿಸಿ, ತೀರಾ ಭೂಮಿಗಿಳುದು ಶರಣಾಗಿ ಅಬ್ಬೆಯ ಹತ್ತರೆ “ಎನಗೆ ನೀನೇ ಗೆತಿ” ಹೇಳಿ ದೈನ್ಯಲ್ಲಿ ಕೇಳಿಗೊಂಬ ಒಂದು ದೇವೀ ಸ್ತೋತ್ರ.
ಈ ಲೋಕಲ್ಲಿ ಎನಗೆ ಆರೂ ಇಲ್ಲೆ, ಈ ಅನಂತ ಭವಸಾಗರಲ್ಲಿ ಮಹಾ ದುಃಖಂದ ಕೆಟ್ಟ ರೀತಿಲಿ ಇಪ್ಪವ°, ಮಂತ್ರ, ತಂತ್ರ,ನ್ಯಾಸ ತಿಳಿಯದ್ದವ°, ಪುಣ್ಯ, ಜ್ಞಾನದ ಅರಿವಿಲ್ಲದ್ದವ °, ಕೆಟ್ಟ ಕೆಲಸ, ಕೆಟ್ಟ ಸಂಗಲ್ಲಿಪ್ಪವ°, ಬ್ರಹ್ಮ, ವಿಷ್ಣು, ಮಹೇಶಾದಿ ಯಾವ ದೇವರನ್ನೂ ಕಂಡವ° ಅಲ್ಲ, ತುಂಬಾ ತುಂಬಾ ಕಷ್ಟಲ್ಲಿಪ್ಪ, ಅತ್ಯಂತ ದರಿದ್ರನ ಹಾಂಗೆ ಇಪ್ಪ ಆನು ಭವಾನಿಯಾದ ಅಬ್ಬೆಯೇ ನಿನಗೆ ಸಂಪೂರ್ಣ ಶರಣಾಯಿದೆ.
ಎನ್ನ ಸರ್ವಸ್ವವ ಸಮರ್ಪಿಸಿ ಶರಣಾದ ಎನ್ನ, ನೀನು ಯಾವುದೇ ವಿವಾದ, ದುಃಖ, ಪ್ರಮಾದ, ಪ್ರವಾಸ, ನೀರು, ಬೆಂಕಿ, ಪರ್ವತ, ಶತ್ರುಗೋ, ಅರಣ್ಯಲ್ಲಿ ಎಲ್ಲಿಯೇ ಇದ್ದರೂ, ಯಾವುದೇ ವಿಪತ್ತಿಲಿ ಇದ್ದರೂ ರಕ್ಷಣೆ ಮಾಡು..
ಈ ನಿನ್ನ ಮಗನ ಕಾಪಾಡು ಹೇಳಿ ಕೇಳಿಗೊಂಬದು ಈ ಸ್ತೋತ್ರದ ಭಾವಾರ್ಥ.

ಭವಾನ್ಯಷ್ಟಕಮ್ :

ನ ತಾತೋ ನ ಮಾತಾ ನ ಬಂಧುರ್ನ ದಾತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ |
ನ ಜಾಯಾಂ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||1||

ಭವಾಬ್ಧಾವಪಾರೇ ಮಹಾದುಃಖ-ಭೀರುಃ
ಪ್ರಪಾತಃ ಪ್ರಕಾಮೀ ಪ್ರಲೋಭೀ ಪ್ರಮತ್ತಃ |
ಕುಸಂಸಾರ-ಪಾಶ-ಪ್ರಬದ್ಧಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||2||

ನ ಜಾನಾಮಿ ದಾನಂ ನ ಚ ಧ್ಯಾನ-ಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರ ಮಂತ್ರಂ |
ನ ಜಾನಾಮಿ ಪೂಜಾಂ ನ ಚನ್ಯಾಸ ಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||3||

ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ |
ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತಃ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||4||

ಕುಕರ್ಮೀ ಕುಸಂಗೀ ಕುಬುದ್ಧಿಃ ಕುದಾಸಃ
ಕುಲಾಚಾರಹೀನಃ ಕದಾಚಾರಲೀನಃ |
ಕುದೃಷ್ಟಿಃ ಕುವಾಕ್ಯ ಪ್ರಬಂಧಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||5||

ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ ನಿಶಿಥೇಶ್ವರಂ ವಾ ಕದಾಚಿತ್ |
ನ ಜಾನಾಮಿ ಚಾsನ್ಯತ್ ಸದಾsಹಂ ಶರಣ್ಯೇ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||6||

ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾsನಲೇ ಪರ್ವತೇ ಶತ್ರು-ಮಧ್ಯೇ |
ಅರಣ್ಯೇ-ಶರಣ್ಯೇ ಸದಾ ಮಾಂ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||7||

ಅನಾಥೋ ದರಿದ್ರೋ ಜರಾ-ರೋಗಯುಕ್ತೋ
ಮಹಾಖಿನ್ನದೀನಃ ಸದಾಜಾಡ್ಯ-ವಕ್ತ್ರಃ |
ವಿಪತ್ತೌ ಪ್ರವಿಷ್ಟಃ ಪ್ರಣಷ್ಟಃ ಸದಾsಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||8||

~*~*~

ಸೂ:
ಶ್ಲೋಕದ ದ್ವನಿರೂಪ ಇಲ್ಲಿದ್ದು:

5 thoughts on “ಭವಾನ್ಯಷ್ಟಕಮ್

  1. ಅದ್ಬುತವಾಗಿದೆ… ಧನ್ಯವಾದಗಳು….

  2. ಸಂಪೂರ್ಣ ಶರಣಾಗತಿಯಾಗಿ ನೀನೇ ಗತಿ ಹೇಳಿ ಅಡ್ಡಬಿದ್ದರೆ, ಅವರ ಮೇಲೆತ್ತುಲೆ ದೇವರು ಸದಾ ಸಿದ್ಧನಾಗಿರ್ತ
    ಶಂಕರಾಚಾರ್ಯರ ಅಪೂರ್ವ ಕೃತಿಗಳ ಒಂದಾದ ಮತ್ತೆ ಒಂದು ಕೊಡ್ತಾ ಇಪ್ಪ “ಶ್ರೀ” ಗೆ ಧನ್ಯವಾದಂಗೊ

  3. ‘ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ’ – ಒಳ್ಳೆ ಲಾಯಕ ಇದ್ದು. ಒಳ್ಳೆ ಕೃತಿಗಳ ಸಂಗ್ರಹಿಸಿ ಬೈಲಿಂಗೆ ಹಂಚಿದ್ದಿ. ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×