ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಭವಂತಃ ಸರ್ವಜ್ಞಾಃ ….
ನಿನ್ನೆ, ಅದಾ., ನಮ್ಮ ಮಹೇಶಣ್ಣ ಭವಂತಃ ಸರ್ವಜ್ಞಾಃ ಹೇಳಿ ನಾಕು ಗೆರೆ ಬರದು ನೆಂಪು ಮಾಡಿಸಿದವಿಲ್ಲಿ ಅಪ್ಪೋ. ಅದರ ಇಡೀ ಭಾಗವ ಇಲ್ಲಿ ಒಂದರಿ ಓದಿರೆ ಹೇಂಗೆ ಹೇಳಿ ತೋರಿತ್ತು. ನವಗೆ ಇದು ಹೊಸತ್ತು ಏನೂ ಅಲ್ಲ ಅಪ್ಪೋ!, ಎಲ್ಲಾ ಮದುವೆ ಸಟ್ಟುಮುಡಿಲಿ ಇದರ ಕೇಳಿ ಕೇಳಿ ಬೊಡುದಿಕ್ಕು. ಅಂದರೆ ಎಂತರ ಕೇಳಿರೆ ಭವಂತಃ ಸರ್ವಜ್ಞಾಃ ಹೇಳಿ ನಾಕೋ ಎಂಟೋ ಗೆರೆ ಕೇಳಿದ್ದು ಹೇಳ್ಳೆ ನೆಂಪು ಅಕ್ಕಷ್ಟೇ. ಬಾಕಿ ನಾವೆಲ್ಲಿ ಕೆಮಿಕೊಟ್ಟು ಕೇಳಿದ್ದು!! ಬೈಲ ಓದುಗರಿಂಗಾಗಿ ಇದಾ ಇಲ್ಲಿ –
ಮಂತ್ರಬಿನ್ನಹಂ
ಪೂರ್ವಂ ಸಭಾಂ ನಮಸ್ಕೃತ್ಯ ಪಶ್ಚಾದಾಸನಪೂರ್ವಕಂ |
ಕೃತ್ವೋಪಚಾರಂ ಕಾಲೀನಂ ಸಭಾಂ ಸ್ತೋತುಂ ಸಮಾರಭೇತ್ ||
ಮೊದಲಿಗೆ ಸಭೆಯನ್ನು ನಮಸ್ಕರಿಸಿ (ವಂದಿಸಿ) , ಆಸನೋಪಾಚರಾದಿಗಳನ್ನು ನೀಡಿ ಬಳಿಕ ಸಭೆಯನ್ನು ಕುರಿತು ಸ್ತುತಿಸಲು ಪ್ರಾರಂಭಿಸುವುದು –
ಭವಂತಃ ಸರ್ವಜ್ಞಾಃ ಸಕಲ ಭುವನೇ ರೂಢಯಶಸೋ
ವಯಂ ತಾವದ್ಬಾಲಾಃ ಸರಸವಚನೇ ನೈವ ನಿಪುಣಾಃ |
ತಥಾಪೀಯಂ ವಾಣೀ ವಿಶತು ಭವತಾಂ ಕರ್ಣಕುಹರಂ
ಕಿಶೋರಸ್ಯಾಲಾಪಃ ಖಲು ಭವತಿ ಪಿತ್ರೋರತಿಮುದೇ ||
ಭವಂತಃ ಸರ್ವಜ್ಞಾಃ – ನೀವೆಲ್ಲರೂ ಸರ್ವಜ್ಞರಾದಂಥವರುಗಳು
ಸಕಲಭುವನೇ ರೂಢಯಶಸಃ – ಸಮಸ್ತಲೋಕಗಳಲ್ಲಿಗೂ ಪ್ರಖ್ಯಾತ ಕೀರ್ತಿಯುಳ್ಳಂಥವರುಗಳು
ವಯಂ ತಾವದ್ಬಾಲಾಃ – ನಾವಾದರೋ ಬಾಲಕರು
ಸರಸವಚನೇ ನೈವ ನಿಪುಣಾಃ – ರಸಭರಿತವಾಗಿರುವ ವಾಕ್ಯವನ್ನು ನುಡಿಯುವುದರಲ್ಲಿ ನಿಪುಣರಲ್ಲಾ
ತಥಾಪಿ – ಹಾಗಾದರೂ
ಇಯಂ ವಾಣೀ – ಈ ವಾಕ್ಯವು
ವಿಶತು ಭವತಾಂ ಕರ್ಣಕುಹರಂ – ನಿಮ್ಮ ಕರ್ಣರಂಧ್ರವನ್ನೂ ಪ್ರವೇಶಿಸಲಿ
ಕಿಶೋರಸ್ಯಾಲಪಃ – ಬಾಲಕನ ತೊದಲು ನುಡಿಯು
ಖಲು ಭವತಿ ಪಿತ್ರೋರತಿಮುದೇ – ತಾಯಿತಂದೆಯವರಿಗೆ ಯಾವಪ್ರಕಾರವಾಗಿ ಅತ್ಯಂತ ಸಂತೋಷಕ್ಕೋಸ್ಕರವಾಗುತ್ತದೆಯೋ ಅದೇ ಪ್ರಕಾರವಾಗಿ ನೀವೆಲ್ಲರೂ ಸಂತೋಷಪಡಬೇಕು.
ಪುತ್ರೋತ್ಸವೇ ಮೌಂಜಿಬಂಧೇ ಕನ್ಯಾಯಾಃ ಪ್ರಥಮಾರ್ತವೇ |
ವಿವಾಹೇ ಯಜ್ಞಸಮಯೇ ಬಿನ್ನಹಂ ಪಂಚಸು ಸ್ಮೃತಮ್ ||
ಪುತ್ರೋತ್ಸವೇ – ಪುತ್ರೋತ್ಸವವಾದ ನಾಮಕರಣದಲ್ಲಿ
ಮೌಂಜಿಬಂಧೇ – ಉಪನಯನದಲ್ಲಿ
ಕನ್ಯಾಯಾಃ ಪ್ರಥಮಾರ್ತವೇ – ಕನ್ನಿಕೆಯ ಪ್ರಥಮ ಋತುವಿನಲ್ಲಿ ಮಾಡತಕ್ಕಂಥಾ ಬ್ರಹ್ಮೋದನ ಕರ್ಮದಲ್ಲಿ
ವಿವಾಹೇ – ವಿವಾಹದಲ್ಲಿ
ಯಜ್ಞಸಮಯೇ – ಅನ್ವಾಹಾರ್ಯ, ಆಹವನೀಯ, ಗಾರ್ಹಪತ್ಯಗಳೆಂಬ ತ್ರೇತಾಗ್ನಿಗಳಿಂದ ಮಾಡತಕ್ಕಂಥಾ ಯಜ್ಞ ಸಮಾರಂಭದಲ್ಲಿ
ಬಿನ್ನಹಂ ಪಂಚಸು ಸ್ಮೃತಮ್ – ಇವೈದು ಸ್ಥಳಗಳಲ್ಲಿಯೂ ಬ್ರಹ್ಮಸಭೆಯನ್ನು ಕುರಿತು ಬಿನ್ನಹವನ್ನು ಮಾಡಬೇಕು
ಆಶೀಃಪೂರ್ವಕಮಿತ್ಯೇಕೇ ನಮಃ ಪೂರ್ವಂ ತು ಕೇಚನ |
ಬಿನ್ನಹಂ ವೇದಪೂರ್ವಂ ಸ್ಯಾದಿತಿ ಸರ್ವೈರ್ವಿನಿಶ್ಚಿತಮ್ ||
ಆಶೀಃಪೂರ್ವಕಮಿತ್ಯೇಕೇ – ಆಶೀಃಪುರಸ್ಸರವಾಗಿ ಬಿನ್ನಹ ಮಾಡಬೇಕುಂಬುದೊಂದು ಮತ
ನಮಃ ಪೂರ್ವಂ ತು ಕೇಚನ – ನಮಸ್ಕಾರಪೂರ್ವಕವಾಗಿ ಬಿನ್ನಹ ಮಾಡಬೇಕು ಎಂಬುದು ಕೆಲವರ ಮತ
ಬಿನ್ನಹಂ ವೇದಪೂರ್ವಂ ಸ್ಯಾದಿತಿ ಸರ್ವೈರ್ವಿನಿಶ್ಚಿತಮ್ – ವೇದಪೂರ್ವಕವಾಗಿ ಬಿನ್ನಹ ಮಾಡಬೇಕೆಂಬುದು ಸರ್ವಸಮ್ಮತ
ತತ್ರಾದಾವಾಶೀಃ ಪೂರ್ವಿಕಾ ವಿಜ್ಞಾಪನಾ ಕಥಮಿತ್ಯಾಕಾಂಕ್ಷಾಮಾಹ -
ಇವುಗಳ ಪೈಕಿ ಆಶೀಃಪೂರ್ವಕವಾದ ಬಿನ್ನಹವು ಯಾವುದಯ್ಯಾ ಎಂದರೆ –
ಸ್ವಸ್ತೀತಿ ಪ್ರತಿಭಾಷಿತೋ ಮುನಿವರೈಃ ಸಂಸ್ತೂಯಮಾನಃ ಸುರೈಃ
ಪಾರ್ಶ್ವೇ ಪದ್ಮಜಪದ್ಮನಾಭಪುರುಹೂತಾದ್ಯೈರ್ಜಯೇತ್ಯರ್ಚಿತಃ
ಅಗ್ರೇಚಾಪ್ಸರಸಂ ಗಣ್ಯೆರಹರಹರ್ ನರ್ತದ್ಭಿರಾಹ್ಲಾದಿತಃ
ಸಂತುಷ್ಟೋ ಗಿರಿಜಾವಿವಾಹಸಮಯೇ ಸ್ಯಾತ್ಸಂಪದೇನೋ ಮೃಡಃ ||
ಗಿರಿಜಾವಿವಾಹಸಮಯೇ – ಶ್ರೀಪಾರ್ವತೀದೇವಿಯ ಪಾಣಿಗ್ರಹಣ ಕಾಲದಲ್ಲಿ
ಸ್ವಸ್ತೀತಿ ಪ್ರತಿಭಾಷಿತೋ ಮುನಿವರೈಃ – ವಸಿಷ್ಠವಾಮದೇವಾದಿ ಮುನಿಶ್ರೇಷ್ಠರಿಂದ ಮಂಗಲವೆಂದು ಶ್ಲಾಘಿಸಲ್ಪಟ್ಟಂಥಾ
ಸಂಸ್ತೂಯಮಾನಃ ಸುರೈಃ – ದೇವಸಮೂಹಗಳಿಂದ ಸ್ತುತಿಸಲ್ಪಟ್ಟಂಥಾ
ಪಾರ್ಶ್ವೇ ಪದ್ಮಜಪದ್ಮನಾಭಪುರುಹೂತಾದ್ಯೈರ್ಜಯೇತ್ಯರ್ಚಿತಃ – ಪಾರ್ಶ್ವಭಾಗಗಳಲ್ಲಿ ಪದ್ಮಾಸನ ಪದ್ಮನಾಭ ದೇವೇಂದ್ರನೇ ಮೊದಲಾದ ಪ್ರಧಾನ ದೇವತೆಗಳಿಂದ ಜಯಜಯವೆಂದು ಪೂಜಿಸಲ್ಪಟ್ಟಂಥಾ
ಅಗ್ರೇಚಾಪ್ಸರಸಂ ಗಣ್ಯೆರಹರಹರ್ ನರ್ತದ್ಭಿರಾಹ್ಲಾದಿತಃ – ಎದುರಿನಲ್ಲಿ ಪ್ರತಿದಿನವೂ ನಾನಾವಿಧವಾದ ನರ್ತನವನ್ನು ಮಾಡುತ್ತಿರುವಂಥಾ ಅಪ್ಸರಃಸ್ತ್ರೀ ಸಮೂಹಗಳಿಂದ ಸಂತೋಷಿಸಲ್ಪಡುವಂಥಾ
ಸಂತುಷ್ಟಃ – ಸ್ವಯಂ ಅತ್ಯಂತ ಸಂತೋಷಯುಕ್ತನಾದಂಥಾ
ಮೃಡಃ – ಸುಖಕರನಾದ ಪರಮೇಶ್ವರನು
ಸ್ಯಾತ್ ಸಂಪದೇ ನಃ – ನಮಗೆ ಉತ್ತರೋತ್ತರವಾಗಿ ಮಂಗಲವನ್ನುಂಟುಮಾಡಲಿ.
ಎಂಬುದೀಗ ಆಶೀಃಪೂರ್ವಕವಾದ ಬಿನ್ನಹವು
ನಮಃಪೂರ್ವಿಕಾ ವಿಜ್ಞಾಪನಾ ಕಥಮಿತ್ಯಾಕಾಂಕ್ಷಾಯಾಮಾಹ-
ನಮಸ್ಕಾರಪೂರ್ವಕವಾದ ಬಿನ್ನಹವು ಯಾವುದಯ್ಯಾ ಎಂದರೆ-
ಸರ್ವಾಶಾಪರಿಪೂರಣಕ್ಷಮಕರಂ ಸರ್ವೋಪಕಾರೋದಯಂ
ಸನ್ಮಾರ್ಗಾಭಿರತಂ ಸಮಸ್ತತಮಸಃ ಪ್ರಧ್ವಂಸಿ ಸತ್ಯಾಸ್ಪದಂ |
ಬ್ರಹ್ಮಾವಾಸಮಶೇಷವೇದನಿಲಯಂ ವಿದ್ಯಾಧರಾರಾಧಿತಂ
ಪ್ರಖ್ಯಾತಂ ಭುವಿ ಭಾನವೀಯಮಿವ ವೋ ವಂದೇ ಸಭಾಮಂಡಲಂ ||
ಸರ್ವಾಶಾಪರಿಪೂರಣಕ್ಷಮಕರಂ – ಸಮಸ್ತ ಮನೋರಥಗಳನ್ನು ಪರಿಪೂರ್ತಿ ಮಾಡುವುದರಲ್ಲಿ ಸಮರ್ಥಗಳಾದ ಹಸ್ತಗಳುಳ್ಳಂಥಾದ್ದು ಸಭಾಮಂಡಲ
ಸರ್ವಾಶಾಪರಿಪೂರಣಕ್ಷಮಕರಂ – ಸಮಸ್ತ ದಿಕ್ಕುಗಳ ಪರಿವ್ಯಾಪ್ತಿಯಲ್ಲಿ ಸಮರ್ಥಗಳಾದ ಕಿರಣಗಳುಳ್ಳಂಥಾದ್ದು ಸೂರ್ಯದೇವರ ಮಂಡಲ
ಸರ್ವೋಪಕಾರೋದಯಂ – ಸಮಸ್ತ ವರ್ಣಾಶ್ರಮಗಳಿಗೆ ವಿಹಿತಾವಿಹಿತವಿವೇಕೋಪದೇಶರೂಪವಾದ ಉಪಕಾರಕ್ಕಾಗಿ ಉದಯ ಉಳ್ಳಂಥಾದ್ದು ಸಭಾಮಂಡಲ
ಸರ್ವೋಪಕಾರೋದಯಂ – ಸಮಸ್ತ ಪ್ರಾಣಿಗಳಿಗೆ ಸ್ವಸ್ವ ವ್ಯವಹಾರಸಿದ್ಧಿಗೋಸ್ಕರ ಆವಿರ್ಭಾವವುಳ್ಳಂಥಾದ್ದು ಸೂರ್ಯದೇವರ ಮಂಡಲ
ಸನ್ಮಾರ್ಗಾಭಿರತಂ – ಶ್ರುತಿಸ್ಮೃತಿಪುರಾಣೋಕ್ತ ಮಾರ್ಗದಲ್ಲಿ ಆಸಕ್ತವಾದಂಥಾದ್ದು ಸಭಾಮಂಡಲ
ಸನ್ಮಾರ್ಗಾಭಿರತಂ – ಶ್ರೇಷ್ಠವಾದ ಆಕಾಶಮಾರ್ಗದಲ್ಲಿ ಸಂಚಾರವುಳ್ಳಂಥಾದ್ದು ಸೂರ್ಯದೇವರ ಮಂಡಲ
ಸಮಸ್ತ ತಮಸಃ ಪ್ರಧ್ವಂಸಿ – ಸಮಸ್ತ ಅಜ್ಞಾನಗಳನ್ನು ಜ್ಞಾನೋಪದೇಶದಿಂದ ದೂರ ಮಾಡುವಂಥಾದ್ದು ಸಭಾಮಂಡಲ
ಸಮಸ್ತ ತಮಸಃ ಪ್ರಧ್ವಂಸಿ – ಸಮಸ್ತ ಅಂಧಕಾರಗಳನ್ನು ಸ್ವಕಿರಣಪ್ರಸರಣಶಕ್ತಿಯಿಂದ ನಾಶ ಮಾಡುವಂಥಾದ್ದು ಸೂರ್ಯದೇವರ ಮಂಡಲ
ಸತ್ಯಾಸ್ಪದಂ – ಯಥಾರ್ಥಕ್ಕೆ ಸ್ಥಾನವಾದಂಥಾದ್ದು ಸಭಾಮಂಡಲ
ಸತ್ಯಾಸ್ಪದಂ – ಯಥಾರ್ಥಕ್ಕೆ ಸ್ಥಾನವಾದಂಥಾದ್ದು ಸೂರ್ಯದೇವರ ಮಂಡಲ
ಬ್ರಹ್ಮಾವಾಸಂ – ಬ್ರಾಹ್ಮಣರಿಗೆ ಆವಾಸಸ್ಥಾನವಾದಂಥಾದ್ದು ಸಭಾಮಂಡಲ
ಬ್ರಹ್ಮಾವಾಸಂ – ತಪಸ್ವಿಗಳಿಗೆ ಆವಾಸಸ್ಥಾನವಾದಂಥಾದ್ದು ಸೂರ್ಯದೇವರ ಮಂಡಲ
ಅಶೇಷವೇದನಿಲಯಂ – ಋಗ್ಯಜುಸ್ಸಾಮಾಥರ್ವಣಗಳೆಂಬ ಸಮಸ್ತ ವೇದಗಳಿಗೆ ಆವಾಸಸ್ಥಾನವಾದಂಥಾದ್ದು ಸಭಾಮಂಡಲ
ಅಶೇಷವೇದನಿಲಯಂ – ತ್ರಿವೇದಮೂರ್ತಿಯಾದುದರಿಂದ ವೇದಗಳಿಗೆ ಆವಾಸಸ್ಥಾನವಾದಂಥಾದ್ದು ಸೂರ್ಯದೇವರ ಮಂಡಲ
ವಿದ್ಯಾಧರಾರಾಧಿತಂ – ಚತುಃಷಷ್ಟಿಕಲಾ ವಿದ್ಯಾಪ್ರವೀಣರಿಂದ ಸೇವಿಸಲ್ಪಟ್ಟಂಥಾದ್ದು ಸಭಾಮಂಡಲ
ವಿದ್ಯಾಧರಾರಾಧಿತಂ – ವಿದ್ಯಾಧರರುಗಳೆಂಬ ದೇವತೆಗಳಿಂದ ಆರಾಧಿಸಲ್ಪಟ್ಟಂಥಾದ್ದು ಸೂರ್ಯದೇವರ ಮಂಡಲ
ಭುವಿ ಪ್ರಖ್ಯಾತಂ – ಭೂಮಿಯಲ್ಲಿ ಪ್ರಖ್ಯಾತವಾದಂಥಾದ್ದು ಸಭಾಮಂಡಲ
ಭುವಿ ಪ್ರಖ್ಯಾತಂ – ಭೂಮಿಯಲ್ಲಿ ಪ್ರಖ್ಯಾತವಾದಂಥಾದ್ದು ಸೂರ್ಯದೇವರ ಮಂಡಲ
ಭಾನವೀಯಮಿವ ಸ್ಥಿತಂ ವಃ ಸಭಾಮಂಡಲಂ ವಂದೇ – ಇನ್ನೊಂದು ಸೂರ್ಯಮಂಡಲವೇ ಎಂಬ ಹಾಗಿರುವಂಥಾ ನಿಮ್ಮ ಸಭಾಮಂಡಲವನ್ನು ಕುರಿತು ಸಮಸ್ಕರಿಸುತ್ತೇನೆ.
ಮಹತ್ತ್ಯಾಗದಯಾಯುಕ್ತಾಂ ಸತ್ಯಭಾಮಾಸಮನ್ವಿತಾಂ |
ಸುದರ್ಶನಯುತಾಂ ವಂದೇ ಸಭಾಂ ವಿಷ್ಣೋರಿವಾಕೃತಿಂ ||
ಮಹತ್ತ್ಯಾಗದಯಾಯುಕ್ತಾಂ – ಮಹತ್ತಾದ ತ್ಯಾಗದಿಂದಲೂ ದಯೆಯಿಂದಲೂ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಮಹತ್ತ್ಯಾ ಗದಯಾ ಯುಕ್ತಾಂ – ಮಹತ್ತಾದ ಕೌಮೋದಕೀ ಗದೆಯಿಂದ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
ಸತ್ಯ-ಭಾ-ಮಾ-ಸಮನ್ವಿತಾಂ – ಸತ್ಯದಿಂದಲೂ ಕಾಂತಿಯಿಂದಲೂ ಸಂಪತ್ತಿನಿಂದಲೂ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಸತ್ಯಭಾಮಾಸಮನ್ವಿತಾಂ – ಸತ್ಯಭಾಮಾದೇವಿಯಿಂದ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
ಸು ದರ್ಶನಯುತಾಂ – ಮಂಗಲಕಾರವಾದ ದರ್ಶನದಿಂದ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಸುದರ್ಶನಯುತಾಂ – ಸುದರ್ಶನಚಕ್ರ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
ವಂದೇ ಸಭಾಂ ವಿಷ್ಣೋರಿವಾಕೃತಿಂ – ಈ ರೀತಿಯಿಂದ ವಿಷ್ಣುವಿನ ಆಕೃತಿಗೆ ಸಮಾನವಾದಂಥಾ ಬ್ರಹ್ಮಸಭೆಯನ್ನು ಕುರಿತು ನಮಸ್ಕರಿಸುತ್ತೇನೆ ಎಂಬುದೀಗ ನಮಸ್ಕಾರಪೂರ್ವಕವಾದ ಬಿನ್ನಹವು.
ಓಂ ನಮಃ ಸದಸೇ | ನಮಃ ಸದಸ್ಪತಯೇ | ನಮಃ ಸಖೀನಾಂ ಪುರೋಗಾಣಾಂ ಚಕ್ಷುಷೇ | ನಮೋ ದಿವೇ | ನಮಃ ಪೃಥಿವ್ಯೈ | ಸಪ್ರಥ ಸಭಾಂ ಮೇ ಗೋಪಾಯ | ಯೇ ಚ ಸಭ್ಯಾಃ ಸಭಾಸದಃ | ತಾನಿಂದ್ರಿಯಾವತಃ ಕುರು | ಸರ್ವಮಾಯುರುಪಾಸತಾಂ | ಅಹೇರ್ಬುಧ್ನಿಯ ಮಂತ್ರಂ ಮೇ ಗೋಪಾಯ | ಯಮೃಷಯಸ್ತ್ರಯೀವಿದಾ ವಿದುಃ | ಋಚಃ ಸಾಮಾನಿ ಯಜೂಗ್೦ಷಿ | ಸಾ ಹಿ ಶ್ರೀರಮೃತಾ ಸತಾಂ |
ಎಂಬುದೀಗ ಸ್ವಸ್ತಿಶ್ರೀಮನ್ಮಹಾಸಭಾಸಭ್ಯರಿಗೆ ವೇದಪೂರ್ವಕವಾದ ಬಿನ್ನಹವು .
ಸಭೆಯು ಯಾವುದಯ್ಯಾ ಎಂದರೆ –
ರತ್ನಭೂತೈಶ್ಚ ವಿದ್ವದ್ಭಿಃ ಕ್ಷತ್ರಿಯಾಂಕಪ್ರಭೂತ್ತಮೈಃ |
ಮಾನ್ಯೈರನ್ಯಜನೈರ್ಯುಕ್ತಾ ಸಾ ಸಭಾ ಪರಿಕೀರ್ತಿತಾ ||
ರತ್ನಭೂತೈಶ್ಚ ವಿದ್ವದ್ಭಿಃ – ಮಹಾಗಂಭೀರವಾದ ಸಮುದ್ರದಲ್ಲಿ ಬೆಳೆಯುವ ರತ್ನಗಳ ಹಾಗಿರುವಂಥಾ ವೇದ ವೇದಂಗಾದಿಗಳನ್ನು ತಿಳಿದವರಾದ ವಿದ್ವಜ್ಜನರುಗಳಿಂದಲೂ
ಕ್ಷತ್ರಿಯಾಂಕಪ್ರಭೂತ್ತಮೈಃ – ರಾಜಗುಣತೇಜೋವಿರಾಜಿತರಾಗಿ ಸಿಂಹಾಸನಸ್ಥರಾದಂಥಾ ಪ್ರಭೂತ್ತಮ ಜನಗಳಿಂದಲೂ
ಮಾನ್ಯೈರನ್ಯಜನೈರ್ಯುಕ್ತಾ – ಮಾನ್ಯರಾದ ಅನ್ಯ ಜನರುಗಳಿಂದಲೂ ಕೂಡಿರುವಂಥಾದ್ದು ಯಾವುದುಂಟೋ
ಸಾ ಸಭಾ ಪರಿಕೀರ್ತಿತಾ – ಅದು ಸಭೆ ಎಂದು ಹೇಳಲ್ಪಟ್ಟಿದೆ.
ಢಕ್ಕಾಭೇರಿಮೃದಂಗತೂರ್ಯಮುರಲೀವೀಣಾದಿವಾದ್ಯೈಃ ಶುಭೈಃ
ನಾನಾಬಂಧುಸುಹೃತ್ಪುರೋಹಿತಜನೈರನೈಶ್ಚ ಮಾನೈಃಸ್ತಥಾ |
ಕನ್ಯಾರ್ಥೀ ಗೃಹಮಾಗತೋ ವರ ಇತಿ ಜ್ಞಾತ್ವಾ ಮುಹೂರ್ತೇ ಶುಭೇ
ವಧ್ವಾಭೇತ್ಯಾ ಗೃಹೇ ಪೃಥಕ್ ಪೃಥಕ್ ಇವ ಆರಾಧಯೇತ್ಸಾದರಂ ||
ವರನು ಕನ್ಯಾರ್ಥಿಯಾಗಿ ಅಥವಾ ಕನ್ಯಾಸಮೇತನಾಗಿ ವಿದ್ವಜ್ಜನರುಗಳಿಂದಲೂ ಬಂಧುಜನರುಗಳಿಂದಲೂ ಢಕ್ಕಾಭೇರಿ ಮೃದಂಗ ತೂರ್ಯ ಮುರಲೀ ವೀಣಾದಿ ವಾಲಗದೊಂದಿಗೆ ದಿಬ್ಬಣರೂಪವಾಗಿ ಬರುವಂಥಾ ಸುಮೂಹೂರ್ತದಲ್ಲಿ ಅಭ್ಯುತ್ಥಾನಾದಿ ಷೋಡಶೋಪಚಾರಗಳಿಂದ ಪ್ರತ್ಯೇಕಪ್ರತ್ಯೇಕವಾಗಿ ಉಪಚರಿಸಬೇಕು.
ಆ ಷೋಡಶೋಪಚಾರಗಳು ಯಾವುದಯ್ಯಾ ಎಂದರೆ –
ಅಭ್ಯುತ್ಥಾನಂ ಚಾಸನಂ ಸ್ವಾಗತೋಕ್ತಿಃ ಪಾದ್ಯಂ ಚಾರ್ಘ್ಯಂ ಮಧುಪರ್ಕಾಚಮೌ ಚ |
ಸ್ನಾನಂ ವಾಸಂ ಭೂಷಣಂ ಗಂಧಮಾಲ್ಯೇ ಧೂಪೋ ದೀಪಃ ಸೋಪಹಾರಃ ಪ್ರಣಾಮಃ ||
ಅಭ್ಯುತ್ಥಾನಾಸನಸ್ವಾಗತಪಾದ್ಯಾರ್ಘ್ಯ ಮಧುಪರ್ಕಾಚಮನಸ್ನಾನವಸ್ತ್ರಾಭರಣ ಗಂಧಮಾಲ್ಯಧೂಪದೀಪ ನೈವೇದ್ಯ ನಮಸ್ಕಾರಗಳೆಂಬವೀಗ ಷೋಡಶೋಪಚಾರಗಳು.
ಈ ಷೋಡಶೋಪಚಾರಗಳಲ್ಲಿ ಆರು ಉಪಚಾರಗಳು ಅತ್ಯಂತ ಶ್ರೇಷ್ಠಗಳಾಗಿಹವು
ಅವು ಯಾವುದಯ್ಯಾ ಎಂದರೆ –
ಅಭ್ಯುತ್ಥಾನಮಥಾಸಿಕಾವಿತರಣಂ ಭೂಯೋ ವಚಃ ಸ್ವಾಗತಂ
ಪಾದ್ಯಂ ವೀಜನಮಕ್ಷತಮ್ ಕ್ರಮವಶಾದರ್ಘ್ಯಂನಿರರ್ಘ್ಯ ಕ್ರಿಯಾನ್ |
ಕೇಚಿತ್ಪ್ರಾಹುರಿಮಾನ್ ಷಡುತ್ತಮತಮಾನತ್ರೋಪಚಾರಾನ್ ಪರೇ
ಪೂಜ್ಯಂ ವಂದನಮೇಕಮೇವ ಕಥಯಂತ್ಯಸ್ಮಾದೃಶಾಂ ತತ್ ಕ್ಷಮಂ ||
ಅಭ್ಯುತ್ಥಾನಮಥಾಸಿಕಾವಿತರಣಂ ಭೂಯೋ ವಚಃ ಸ್ವಾಗತಂ ಪಾದ್ಯಂ ವೀಜನಮಕ್ಷತಮ್ ಕ್ರಮವಶಾದರ್ಘ್ಯಂನಿರರ್ಘ್ಯ ಕ್ರಿಯಾನ್ – ಅಭ್ಯುತ್ಥಾನಾಸನಸ್ವಾಗತಪಾದ್ಯವೀಜನಾಕ್ಷತಗಳೆಂಬವೇಗ ಆರು ಉಪಚಾರಗಳು
ಕೇಚಿತ್ಪ್ರಾಹುರಿಮಾನ್ ಷಡುತ್ತಮತಮಾನತ್ರೋಪಚಾರಾನ್ – ಇಂತಹ ಮಂಗಲಕಾರ್ಯದಲ್ಲಿ ಈ ಆರು ಉಪಚಾರಗಳನ್ನು ಅತ್ಯಂತ ಶ್ರೇಷ್ಠಗಳನ್ನಾಗಿ ಕೆಲವರು ಹೇಳುತ್ತಿಹರು
ಪರೇ ಪೂಜ್ಯಂ ವಂದನಮೇಕಮೇವ ಕಥಯಂತಿ – ಒಂದು ನಮಸ್ಕಾರೋಪಚಾರವನ್ನೇ ಸರ್ವೋಪಚಾರಕ್ಕೂ ಶ್ರೇಷ್ಠವಾದದ್ದನ್ನಾಗಿ ಬೇರೆ ಕೆಲವರು ಹೇಳುವರು
ಅಸ್ಮಾದೃಶಾಂ ತತ್ ಕ್ಷಮಂ – ಎಲ್ಲಾ ಉಪಚಾರಗಳನ್ನು ಮಾಡುವುದರಲ್ಲಿ ಅಸಮರ್ಥನಾದ ನನ್ನಂಥವರಿಂದ ಮಾಡತಕ್ಕ ಉಪಚಾರಗಳಲ್ಲಿ ಯಾವ ವಂದನಾತ್ಮಕೋಪಚಾರವು ಅತಿ ಯೋಗ್ಯವಾಗಿದೆಯೋ ಅಂಥಾ ಈ ನಮಸ್ಕಾರ ಒಂದನ್ನೇ ಸ್ವೀಕರಿಸಿ ನನ್ನನ್ನು ನೋಡಿ ಸುಕ್ಷಮಿಸಿಕೊಳ್ಳಬೇಕು.
ನಾಸ್ತಿ ಸತ್ಯಾತ್ಪರೋ ಧರ್ಮಃ ಸಂತುಷ್ಟಿರ್ನಾತ್ಮಜಾತ್ಪರಾ |
ನಾನ್ನದಾನಾತ್ಪರಂ ದಾನಂ ವಂದನಾನ್ನೋಪಚಾರಕಂ ||
[(ನಮ್ಮಲ್ಲಿ ಎಂತ ಆವ್ತು ಹೇಳಿರೆ, ಇಷ್ಟು ಮನೆ ಯಜಮಾನ ಹೇಳಿಯಪ್ಪಗ ಬಂದವಕ್ಕೆ, ಕೂದವಕ್ಕೆ, ನಿಂದೊಂಡಿಪ್ಪೋವಕ್ಕೆ ಸಭೆಲಿಪ್ಪೋರಿಂಗೆ ಸಂಪೂರ್ಣ ತೃಪ್ತಿ ಆವ್ತು. ಆದಕಾರಣ, ಅಲ್ಲಿಗೆ ಮನೆ ಯಜಮಾನ, ಸಭಗೆ ಒಂದು ನೀಟಂಬ ಅಡ್ಡಬೀಳುವದು. ಮನಗೆ ಬಂದ ಅತಿಥಿಗೆ ಮನೆಯವ° ಆದರಲ್ಲಿ ಬರಮಾಡಿ ನಮಸ್ಕಾರ ಹೇಳಿ ಸ್ವಾಗತಿಸಿಯಪ್ಪಗ ನವಗೆ ಎಲ್ಲಿಲ್ಲದ್ದ ಸಂತೋಷ ತೃಪ್ತಿ ಆವ್ತು ಅಪ್ಪೋ. ಅದೇ ವಿಷಯ ಇಲ್ಲಿಯೂ. ಎಷ್ಟೊಂದು ಸರಳ ಮತ್ತು ಸುಂದರ ಜೊತಗೆ ಆದರ! . ಇನ್ನೊಂದು ವಿಷಯವೂ ಇದ್ದು - ಇಷ್ಟು ಆಗಿಯೊಂಡಿಪ್ಪಗ ಕರೆಕರೆಂದ ಕಿರಿಕಿರಿ ಕಿಟಿಕಿಟಿ ಸುರುವಾವ್ತು, ಮತ್ತೊಂದು ಹೊಡೆಲಿ ಕಿಣಿಕಿಣಿ ಪಿರಿಪಿರಿಯೂ ಕೇಳುತ್ತು. ಇನ್ನಾರಿಂಗೆ ಈ ದೊಂಡೆ ಪಸೆ ಆರ್ಸುವದು ಹೇಳಿ ಇಲ್ಲಿಗೆ ನಿಲ್ಸೇಕ್ಕಾವ್ತು ಭಟ್ಟಮಾವ°. )
ಕಿವಿಯಿಂದ ಕೇಳಲೂ. ತುಪ್ಪೆಕ್ಕಲ್ಲು ಭಾವಂದ್ರ ಧ್ವನಿ -
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.
ಇದರ ಉತ್ತರಾರ್ಧ ಇನ್ನೂ ರಜಾ ಇದ್ದು. ಸಾಮಾನ್ಯ ನಮ್ಮಲ್ಲಿ ಈಗ ಹೇಳ್ವದು ಬಿಟ್ಟಿದವು. ಎನ್ನತ್ರವೂ ಅದರ ಧ್ವನಿ ಇಲ್ಲೆ. ನಮ್ಮ ಓದುಗರಿಂಗೆ ಬೇಕಾಗಿ ಇಲ್ಲಿ ಬರೆತ್ತಾ ಇದ್ದೆ ಅದರನ್ನೂ.]
ಅಭ್ಯುತ್ಥಾನೋಪಚಾರ
ಅಭ್ಯುತ್ಥಾನೋಪಚಾರದ ಕ್ರಮವು ಹ್ಯಾಗಯ್ಯಾ ಎಂದರೆ –
ನಾನಾಮಂಗಲವೇದವಾದ್ಯ ರಭಸಾsನೇಕಾಪ್ತವರ್ಗಾನ್ವಿತೋ
ನಿಷ್ಕ್ರಮ್ಯಾಲಯತೋ ವಿಶಾಲವದನಃ ಪ್ರಾಪ್ಯಾಭಿಮುಖ್ಯಂ ಪುನಃ |
ಬಂಧೂನಾಂ ಪರಿಗೃಹ್ಯ ಹಸ್ತಮಥ ತಾನಾತ್ಮಾಲಯಾಯಾನಯೇತ್
ಅಭ್ಯುತ್ಥಾನಮಿದಂ ತ್ವಮುಷ್ಯ ಗೃಹಿಣಶ್ಚಾಯುರ್ಯುಶೋ ವೃದ್ಧಿಕೃತ್ ||
ನಾನಾಮಂಗಲವೇದವಾದ್ಯ ರಭಸಾsನೇಕಾಪ್ತವರ್ಗಾನ್ವಿತಃ – ನಾನಾ ಪ್ರಕಾರಗಳಾದ ಸ್ವಸ್ತಿಸೂಕ್ತ , ಮಂಗಲಸೂಕ್ತ ಮೊದಲಾದ ವೇದಘೋಷಗಳಿಂದಲೂ, ನಾನಾ ಪ್ರಕಾರಗಳಾದ ಆನಕಗೋಮುಖಭೇರಿತೂರ್ಯಪಟಹನಿಸ್ಸಾಳಮೃದಂಗಗಳೆಂಬ ವಾದ್ಯರಭಸಗಳಿಂದಲೂ, ಅನೇಕವಾದ ಬಂಧುಜನರುಗಳಿಂದಲೂ ಸಮೇತನಾಗಿ
ನಿಷ್ಕ್ರಮ್ಯಾಲಯತೋ ವಿಶಾಲವದನಃ ಪ್ರಾಪ್ಯಾಭಿಮುಖ್ಯಂ ಪುನಃ – ತನ್ನ ಮನೆಯಿಂದ ಹೊರಟು ವಿಕಸಿತಮುಖವುಳ್ಳವನಾಗಿ ಅಭಿಮುಖ್ಯವನ್ನು ಪಡೆದು
ಬಂಧೂನಾಂ ಪರಿಗೃಹ್ಯ ಹಸ್ತಮ್ – ಆ ಬಂದಿರುವಂಥಾ ಬಂಧುಜನರ ಹಸ್ತವನ್ನು ಸ್ವಹಸ್ತದಿಂದ ಹಿಡುದುಕೊಂಡು
ಅಥಾ ತಾನಾತ್ಮಾಲಯಾಯಾನಯೇತ್ – ಆ ಬಂಧುಜನರನ್ನು ತನ್ನ ಮನೆಗೆ ಕರೆದುಕೊಂಡು ಬರಬೇಕು
ಅಭ್ಯುತ್ಥಾನಮಿದಂ ತ್ವಮುಷ್ಯ ಗೃಹಿಣಶ್ಚಾಯುರ್ಯುಶೋ ವೃದ್ಧಿಕೃತ್ – ಇದೀಗ ಅಭ್ಯುತ್ಥಾನೋಪಚಾರ. ಈ ಅಭ್ಯುತ್ಥಾನೋಪಚಾರವನ್ನು ಮಾಡುವುದರಿಂದ ಮನೆ ಯಜಮಾನನು ಆಯಸ್ಸನ್ನೂ ಸತ್ಕೀರ್ತಿಯನ್ನೂ ಸಂಪದಭಿವೃದ್ಧಿಯನ್ನೂ ಹೊಂದುವನು.
ಆಸನೋಪಚಾರ ಕರ್ತವ್ಯ
ಆಸನೋಪಚಾರ ಕ್ರಮವು ಹ್ಯಾಗಯ್ಯಾ ಎಂದರೆ –
ನಾರಾಯಣೋ ಭುಜಗಭೋಗಮಯಂ ವಿರಂಚಿಃ
ಪದ್ಮಾಸನಂ ಶಶಿಧರೋ ವರಯೋಗ ಪೀಠಂ
ಭೂಪಾನಾಮಾಗತಾನಾಂ ನಿಜಸದನಮನೇಕಾರ್ಹರತ್ನಾಭಿರಾಮಂ
ಕರ್ತಾಹರ್ಯಕ್ಷಪೀಠಂ ವಿಕಸಿತವದನಃ ಕಲ್ಪಯೇತ್ ಗ್ರಾಮಪಾನಾಂ
ಪರ್ಯಂಕಂ ವಾ ಮುನೀನಾಮಪಿ ಚ ಬಹುವಿದಾಂ ಸದ್ಬ್ರಸೀಂ ಕೂರ್ಮಪೀಠಂ
ನೄಣಾಮನ್ಯಚ್ಚ ತೇನಾಮರಪತಿರತುಲಾಂ ಪ್ರೀತಿಮಾಪ್ಯೇಷ್ಟದಸ್ಸ್ಯಾತ್ ||
ನಾರಾಯಣೋ ಭುಜಗಭೋಗಮಯಂ – ಕ್ಷೀರಸಾಗರವಾಸಿಯಾದಂಥಾ ಶ್ರೀಮನ್ನಾರಾಯಣನು ತನ್ನ ಮನೆಗೆ ಬಿಜಯ ಮಾಡುತ್ತಿರಲಾಗಿ ಆ ದೇವರಿಗೆ ಕಮಲಾಸನವನ್ನು ಕೊಟ್ಟು ಉಪಚರಿಸಬೇಕಾಗಿಹುದು
ವಿರಂಚಿಃ ಪದ್ಮಾಸನಂ – ಸತ್ಯಲೋಕವಾಸಿಯಾದ ಬ್ರಹ್ಮದೇವನು ತನ್ನ ಮನೆಗೆ ಬಿಜಯ ಮಾಡುತ್ತಿರಲಾಗಿ ಆ ದೇವರಿಗೆ ಕಮಲಾಸನವನ್ನು ಕೊಟ್ಟು ಉಪಚರಿಸಬೇಕಾಗಿಹುದು
ಶಶಿಧರೋ ವರಯೋಗ ಪೀಠಂ – ಕೈಲಾಸವಾಸಿಯಾದ ಪರಮೇಶ್ವರನು ತನ್ನ ಮನೆಗೆ ಬಿಜಯ ಮಾಡುತ್ತಿರಲಾಗಿ ಆ ದೇವರಿಗೆ ಯೋಗಾಸನವನ್ನು ಕೊಟ್ಟು ಉಪಚರಿಸಬೇಕಾಗಿಹುದು
ಭೂಪಾನಾಮಾಗತಾನಾಂ ನಿಜಸದನಮ್ – ಭೂಮಿಯನ್ನು ಪರಿಪಾಲಿಸುವಂಥಾ ಅರಸನು ತನ್ನ ಮನೆಗೆ ಬರುತ್ತಿರಲಾಗಿ ಆ ಮಹಾನುಭಾವರಿಗೆ
ಅನೇಕಾರ್ಹರತ್ನಾಭಿರಾಮಂಕರ್ತಾಹರ್ಯಕ್ಷಪೀಠಂ ವಿಕಸಿತವದನಃ ಕಲ್ಪಯೇತ್ – ವಿಕಸಿತ ಮುಖವುಳ್ಳವನಾಗಿ ಅನರ್ಘ್ಯಗಳಾದ ಮುತ್ತು ಮಾಣಿಕ್ಯ ವಜ್ರ ವೈಡೂರ್ಯ ಗೋಮೇಧ ವಿದ್ರುಮ ಪುಷ್ಯರಾಗ ಮರಕತ ಮಹಾನೀಲಗಳೆಂಬ ನವರತ್ನಗಳಿಂದ ಖಚಿತವಾದ ಸಿಂಹಾಸನವನ್ನು ಕೊಟ್ಟು ಉಪಚರಿಸಬೇಕಾಗಿಹುದು.
ಗ್ರಾಮಪಾನಾಂ ಪರ್ಯಂಕಂ – ಗ್ರಾಮಗಳನ್ನು ಪರಿಪಾಸುವಂಥಾ ಪ್ರಭೂತ್ತಮ ಜನರುಗಳು ಬರುತ್ತಿರಲಾಗಿ ಆ ಮಹಾನುಭಾವರಿಗೆ ಮಂಚಾಸನವನ್ನು ಕೊಟ್ಟು ಉಪಚರಿಸಬೇಕು.
ಮುನೀನಾಮ್ ಸದ್ಬ್ರಸೀಂ – ತಪೋನಿಧಿಗಳಾದ ಮುನಿಶ್ರೇಷ್ಠರು ತನ್ನ ಮನೆಗೆ ಚಿತ್ತೈಸುತ್ತಿರಲಾಗಿ ಆ ಮಹಾತ್ಮರಿಗೆ ಅಗ್ರಸಹಿತವಾದ ದರ್ಭಾಸನವನ್ನು ಕೊಟ್ಟು ಉಪಚರಿಸಬೇಕು
ಅಪಿ ಚ ಬಹುವಿದಾಂ ಕೂರ್ಮಪೀಠಂ – ವೇದಶಾಸ್ತ್ರಸಂಪನ್ನರಾದ ವಿದ್ವಾಂಸರಿಗೆ ಕೂರ್ಮಾಸನವನ್ನು ಕೊಟ್ಟು ಉಪಚರಿಸಬೇಕು.
ನೄಣಾಮನ್ಯಚ್ಚ – ಇತರ ಜನರಿಗೆ ಕಟರತ್ನಕಂಬಲಾದ್ಯಾಸನ ಕೊಟ್ಟು ಉಪಚರಿಸಬೇಕು .
ಇದೀಗ ಆಸನೋಪಚಾರ. ಈ ಆಸನೋಪಚಾರ ಮಾಡುವುದಿರಿಂದ –
ಅಮರಪತಿರತುಲಾಂ ಪ್ರೀತಿಮಾಪ್ಯೇಷ್ಟದಸ್ಸ್ಯಾತ್ – ತ್ರಯಸ್ತ್ರಿಂಶತ್ ಕೋಟಿ ದೇವತೆಗಳಿಗೂ, ಭೂರ್ಭುವಃಸ್ವಗಳೆಂಬ ಮೂರು ಲೋಕಗಳೀಗೂ ಅಧಿಪತಿಯಾದ ದೇವೇಂದ್ರನು ಅಸದೃಶ ಪ್ರೀತಿಯನ್ನು ಪಡೆದು ಮನೆ ಯಜಮಾನನಿಗೆ ಇಷ್ಟಾರ್ಥವನ್ನು ಕೊಡುವವನಾಗುವನು.
ಸ್ವಾಗತೋಪಚಾರ
ಅದರ ಕ್ರಮವು ಹ್ಯಾಗಯ್ಯಾ ಎಂದರೆ –
ಅಸ್ಮದ್ದಿಷ್ಟವಶಾದಭಾವಿ ಭಾವತಾಮಭ್ಯಾಗಮೇನೇದಮ
ಪ್ಯಾಸೀನ್ಮತ್ಸದನಂ ಪದಾಂಬುಜರಜಸ್ತೋಮೈಃ ಪವಿತ್ರೀಕೃತಂ |
ಯುಷ್ಮದ್ದರ್ಶನಲಾಲಿತೋsಸ್ಮ್ಯಹಮಪಿ ಕ್ಷೇಮಂ ಹಿ ವೋ ಮಂದಿರೇs
ಪೀತ್ಥಂ ತಚ್ಚರಣೌ ಸ್ಪೃಶನ್ನುಪನಮೇತ್ ಕೃಷ್ಣಾಧ್ವನಾಂ ಪ್ರೀತಯೇ ||
ಅಸ್ಮದ್ದಿಷ್ಟವಶಾತ್ – ನಮ್ಮ ಭಾಗ್ಯತಿಶಯದ ದೆಸೆಯಿಂದ
ಅಭಾವಿ ಭವತಾಮಭ್ಯಾಗಮೇನ – ಆಯಾಚಿತವಾಗಿ ನಿಮ್ಮ ಈ ಆಗಮನವಾಯಿತು
ಇದಮಪ್ಯಾಸೀನ್ಮತ್ಸದನಂ ಪದಾಂಬುಜರಜಸ್ತೋಮೈಃ ಪವಿತ್ರೀಕೃತಂ – ಈ ನನ್ನ ಮನೆಯು ಕೂಡ ನಿಮ್ಮ ಪಾದಪಂಕಜರೇಣುಸಮೂಹಗಳಿಂದ ಪವಿತ್ರೀಕರಿಸಲ್ಪಟ್ಟಿತು
ಯುಷ್ಮದ್ದರ್ಶನಲಾಲಿತೋsಸ್ಮ್ಯಹಮಪಿ – ನಿಮ್ಮ ದರ್ಶನದಲ್ಲಿ ನಾನು ಕೂಡಾ ಆಸಕ್ತಿಯುಳ್ಳವನಾಗಿರುತ್ತೇನೆ
ಕ್ಷೇಮಂ ಹಿ ವೋ ಮಂದಿರೇಪಿ – ನಿಮ್ಮ ಮಂದಿರದಲ್ಲಿ ಎಲ್ಲರಿಗೂ ಕ್ಷೇಮವಷ್ಟೆ?
ಇತ್ಥಂ ತಚ್ಚರಣೌ ಸ್ಪೃಶನ್ನುಪನ್ – ಈ ಪ್ರಕಾರವಾಗಿ ಆ ಬಂದಂತಾ ದಿಬ್ಬಣಿಗರ ಪಾದಸ್ಪರ್ಶನ ಮಾಡುವವನಾಗಿ
ಉಪನಮೇತ್ – ನಮಸ್ಕಾರ ಮಾಡಬೇಕು.
ಕೃಷ್ಣಾಧ್ವನಾಂ ಪ್ರೀತಯೇ – ಇದೀಗ ಸ್ವಾಗತೋಪಚಾರ., ಈ ಸ್ವಾಗತೋಪಾಚಾರ ಮಾಡುವುದರಿಂದ ಅನ್ವಾಹಾರ್ಯ ಆಹವನೀಯ ಗಾರ್ಹಪತ್ಯಗಳೆಂಬ ತ್ರೇತಾಗ್ನಿಗಳು ಸುಪ್ರೀತರಾಗಿ ಮನೆ ಯಜಮಾನನಿಗೆ ಇಷ್ಟಾರ್ಥವನ್ನು ಕೊಡುವವರಾಗುವರು.
ಪಾದ್ಯೋಪಚಾರ
ಪಾದ್ಯೋಪಚಾರವು ಹ್ಯಾಗಯ್ಯಾ ಎಂದರೆ –
ಸದ್ಗುಗ್ಗುಲ್ಲಗರುಪ್ರಧೂಪಿತಲಸ್ತುಂಭಾಂಭಸಾಂಘ್ರಿದ್ವಯಂ
ಪ್ರಕ್ಷಾಳ್ಯೇದಮಥೋ ಸ್ವಕೀಯ ಸಿರಸಿ ಪ್ರೋಕ್ಷ್ಯಾದರಾದ್ವಾಸಸಾ |
ತೌ ಸಂಮೃಜ್ಯ ಪುನರ್ಯಥೋಚಿತಮಿತಿ ಪ್ರಾಪ್ತಾನ್ ಸುಸಂಭಾವಯೇ
ದ್ಧೃಷ್ಟಾಃ ಪುಷ್ಟಶರೀರಿಣೋsಸ್ಯ ಪಿತರಸ್ತೇಷ್ಟದಾಃ ಸ್ಯುಃ ಸದಾ ||
ಸದ್ಗುಗ್ಗುಲ್ಲಗರುಪ್ರಧೂಪಿತಲಸ್ತುಂಭಾಂಭಸಾ – ಅಗರು ಗುಗ್ಗುಲು ಲಾವಂಚವೇ ಮೊದಲಾದ ಸುಗಂಧದ್ರವ್ಯಗಳಿಂದ ಸುಧೂಪಿತವಾದ ಕಲಶದಲ್ಲಿ ಉದಕವನ್ನು ತೆಗೆದುಕೊಂಡು
ಅಂಘ್ರಿದ್ವಯಂ ಪ್ರಕ್ಷಾಳ್ಯ – ಆ ಬಂದಂತಾ ದಿಬ್ಬಣಿಗರ ಪಾದಗಳನ್ನು ಆಜಂಘಾಂತವಾಗಿ ತೊಳೆದು
ಇದಮಥೋ ಸ್ವಕೀಯ ಸಿರಸಿ ಪ್ರೋಕ್ಷ್ಯಾದರಾತ್ – ಗಂಗಾತೀರ್ಥಕ್ಕೆ ಸಮಾನವಾದ ಆ ಪಾದತೀರ್ಥವನ್ನೂ ಅತ್ಯಂತ ಆದರದಿಂದ ತನ್ನ ತಲೆಯಲ್ಲಿ ಪ್ರೋಕ್ಷಿಸಿಕೊಂಡು
ತೌ ವಾಸಸಾ ಸಂಮೃಜ್ಯ – ಶುಭ್ರವಾದಂಥಾ ವಸ್ತ್ರಗಳನ್ನು ತೆಗೆದುಕೊಂಡು ಆ ಪಾದಗಳನ್ನು ಆರ್ದ್ರತ್ವವು ಅಡಗುವ ಮರ್ಯಾದೆಯಲ್ಲಿ ಒರೆಸಿ
ಪುನರ್ಯಥೋಚಿತಮಿತಿ ಪ್ರಾಪ್ತಾನ್ ಸುಸಂಭಾವಯೇತ್ – ಬಂದಂಥಾ ದಿಬ್ಬಣಿಗರನ್ನು ಪುನಃ ಯಥಾಯೋಗ್ಯವಾಗಿ ಉಪಚರಿಸಬೇಕು.
ಹೃಷ್ಟಾಃ ಪುಷ್ಟಶರೀರಿಣೋsಸ್ಯ ಪಿತರಸ್ತೇಷ್ಟದಾಃ ಸ್ಯುಃ ಸದಾ – ಇದೀಗ ಪಾದ್ಯೋಪಚಾರ., ಈ ಪಾದ್ಯೋಪಚಾರವನ್ನು ಮಾಡುವುದರಿಂದ ಅರ್ಯಮಾದಿ ಪಿತೃಗಳು ಸಂತುಷ್ಟರಾಗಿಯೂ, ಪರಿಪುಷ್ಟವಾದ ಶರೀರವುಳ್ಳವರಾಗಿಯೂ ಮನೆ ಯಜಮಾನನಿಗೆ ಇಷ್ಟಾರ್ಥವನ್ನು ಕೊಡುವವರಾಗುವರು.
ವೀಜನೋಪಚಾರ
ಅದರ ಕ್ರಮವು ಹ್ಯಾಗಯ್ಯಾ ಎಂದರೆ –
ಅಥ ಸ್ವಾಸನೇಪೂಪವಿಷ್ಟೇಷು ತೇಷು
ಶ್ರಮಾಂಭಃಪ್ಲುತಾಂಗೇಷು ದೂರಾಧ್ವಗತ್ಯಾ |
ಶನೈವೀರ್ಜಯೇತ್ತಾವೃಂತಾನಿಲೇನ
ಶ್ರಮಚ್ಛೇದಿನಾ ತೇನ ವಾಯುಃ ಪ್ರಸನ್ನಃ ||
ದೂರಾಧ್ವಗತ್ಯಾ – ದೂರ ಮಾರ್ಗವನ್ನು ನಡೆದು ಬಂದುದರಿಂದ
ಶ್ರಮಾಂಭಃ ಪ್ಲುತಾಂಗೇಷು – ಶ್ರಮಪಟ್ಟ ಶರೀರ ದಿಂದುಂಟಾದ ಬೆವರಿನಿಂದ ವ್ಯಾಪ್ತವಾದ ಅವಯವಗಳುಳ್ಳಂಥಾ
ತೇಷು – ಆ ಬಂದಂಥಾ ದಿಬ್ಬಣಿಗರು
ಅಥ ಸ್ವಾಸನೇಪೂಪವಿಷ್ಟೇಷು – ತಮತಮಗೆ ಯೋಗ್ಯವಾಗಿ ಕೊಟ್ಟಂಥಾ ಆಸನಗಳಲ್ಲಿ ಕುಳಿತಿರಲಾಗಿ
ಶನೈವೀರ್ಜಯೇತ್ತಾವೃಂತಾನಿಲೇನ – ತಾಲಪತ್ರದಿಂದ ಬಿರಚಿತವಾದ ಬೀಸಣಿಗೆಯನ್ನು ತೆಗೆದುಕೊಂಡು ಮೆಲ್ಲಮೆಲ್ಲನೆ ವೀಜಿಸಬೇಕು.
ಶ್ರಮಚ್ಛೇದಿನಾ ತೇನ – ಈ ಪ್ರಕಾರವಾಗಿ ವೀಜಿಸುವುದರಿಂದ ಅವರುಗಳ ಶ್ರಮವೆಲ್ಲವೂ ಪರಿಹಾರವಾಗುವುದು.
ಇದೀಗ ವೀಜನೋಪಚಾರ . ಈ ವೀಜನೋಪಚಾರವನ್ನು ಮಾಡುವುದರಿಂದ-
ವಾಯುಃ ಪ್ರಸನ್ನಃ – ಸಕಲಪ್ರಾಣಾತ್ಮಕನಾದ ವಾಯುದೇವನು ಸಂತುಷ್ಟನಾಗಿ ಇಷ್ಟಾರ್ಥವನ್ನು ಕೊಡುವವನಾಗುವನು.
ಅಕ್ಷತೋಪಚಾರ
ಇದರ ಕ್ರಮವು ಹ್ಯಾಗಯ್ಯಾ ಎಂದರೆ-
ಸುರೋಚನಾಕುಂಕುಮಕಾಂಚನೀರಸದ್ರವೀಕೃತಾಖಂಡಿತಶಾಲಿತಂಡುಲಾನ್ |
ಸುಗಂಧಪುಷ್ಪಾಗರುಚಂದನಾಂಕಿತಾನಿಹಾಕ್ಷತಾನಾಹುರಮಂಗಲಚ್ಛಿದಃ ||
ಏಭಿಃ ಪುರಂಧ್ರೀಯುಗಳೋಪನೀತೈರಭ್ಯರ್ಚನೀಯಾ ವಿಧಿವದ್ವಿಜೇಂದ್ರಾಃ |
ತೇನೇಷ್ಟದಾಸ್ತುಷ್ಟಧಿಯಃ ಸುರಾಃ ಸ್ಯುಃ ಪ್ರತ್ಯಕ್ಷದೇವಾಃ ಖಲು ಭೂಮಿದೇವಾಃ ||
ಸುಗಂಧಪುಷ್ಪಾಗರುಚಂದನಾಂಕಿತಾನ್ – ಒಳ್ಳೆ ಪರಿಮಳವುಳ್ಳ ಪುಷ್ಪಾಗರು ಶ್ರೀಗಂಧ ಮೊದಲಾದ ಸುಗಂಧದ್ರವ್ಯಗಳಿಂದ ಯುಕ್ತವಾದಂಥಾ
ಸುರೋಚನಾಕುಂಕುಮಕಾಂಚನೀರಸದ್ರವೀಕೃತಾಖಂಡಿತಶಾಲಿತಂಡುಲಾನ್ – ಶೋಭನಗಳಾದ ಗೋರೋಚನ ಕುಂಕುಮ ಹರಿದ್ರಾರಸಗಳಿಂದ ದ್ರವೀಕೃತಗಳಾದ ಖಂಡವಾಗದೇ ಇರುವ ಶಾಲೀತಂಡುಲಗಳನ್ನು
ಇಹಾಕ್ಷತಾನಾಹುರಮಂಗಲಚ್ಛಿದಃ – ಇಂತಹ ಮಂಗಲಕಾರ್ಯಗಳಲ್ಲಿ ಅಮಂಗಲವನ್ನು ನಾಶಿಸುವಂಥಾ ಮಂಗಲಾಕ್ಷತಗಳನ್ನಾಗಿ ಹೇಳುವರು.
ಏಭಿಃ ಪುರಂಧ್ರೀಯುಗಳೋಪನೀತೈಃ – ಇಂತಹ ಮಂಗಲಾಕ್ಷತಗಳನ್ನು ತೆಗೆದುಕೊಂಡು ಪತಿವ್ರತೆಯಾರಾದ ಯುಗ್ಮ ಸ್ತ್ರೀಯರು ಸಭಾಮಂಡಲವನ್ನು ಪ್ರವೇಶಿಸಿ
ಪ್ರತ್ಯಕ್ಷದೇವಾಃ ಖಲು ಭೂಮಿದೇವಾಃ – ಭೂಮಿದೇವರು ಪ್ರತ್ಯಕ್ಷ ದೇವತೆಗಳ ಹಾಗೇ ಇರುವವರಾದುದರಿಂದ
ಅಭ್ಯರ್ಚನೀಯಾ ವಿಧಿವದ್ವಿಜೇಂದ್ರಾಃ – ದ್ವಿಜಶ್ರೇಷ್ಠರಾದ ವೇದವೇದಾಂಗಾಡಿಗಳನ್ನು ತಿಳಿದಂಥಾ ವಿದ್ವಾಂಸರುಗಳಿಗೆ ವರಪೂರ್ವಕವಾಗಿ ಲಲಾಟದಲ್ಲಿ ಅರ್ಚಿಸಬೇಕು.
ತೇನೇಷ್ಟದಾಸ್ತುಷ್ಟಧಿಯಃ ಸುರಾಃ ಸ್ಯುಃ – ಇದೀಗ ಅಕ್ಷತೋಪಚಾರ. ಈ ಅಕ್ಷತೋಪಚಾರವನ್ನು ಮಾಡುವುದರಿಂದ ಇಂದ್ರಾದಿ ದೇವತೆಗಳು ಸಂತುಷ್ಟಚಿತ್ತರಾಗಿ ಇಷ್ಟಾರ್ಥವನ್ನು ಕೊಡುವವರಾಗುವರು.
ಈ ಪ್ರಕಾರವಾಗಿ ಷಡುಪಚಾರಗಳನ್ನು ಮಾಡಿ ಮುಂದೆ ಶ್ರೇಷ್ಠವಾದ ಅರ್ಘ್ಯೋಪಚಾರವನ್ನು ಮಾಡಬೇಕು.
ಅರ್ಘ್ಯೋಪಚಾರ
ಅರ್ಘ್ಯೋಪಚಾರವು ಶ್ರೇಷ್ಠವು ಹ್ಯಾಗಯ್ಯಾ ಎಂದರೆ-
ನದೀನಾಂ ಗಂಗೇಡ್ಯಾ ತರುಷು ಮಹಿತಾಃ ಕಲ್ಪತರವಃ
ಸುರಾಣಾಂ ದೇವೇಂದ್ರಸ್ತರಣಿರಪಿ ಸರ್ವಗ್ರಹಗಣೇ |
ಯಥಾ ಕಾಶೀ ಕ್ಷೇತ್ರೇಷ್ವಪಿ ಚ ಗಿರಿಶೋ ಮೂರ್ತಿಷು ತಥಾ
ವಿಧೀನಾಮರ್ಘ್ಯಾಖ್ಯೋ ವಿಧಿರಿಹ ಸ ಉಕ್ತೋsಧಿಕತರಃ ||
ನದೀನಾಂ ಗಂಗೇಡ್ಯಾ – ಎಲ್ಲಾ ನದಿಗಳಲ್ಲಿ ಗಂಗಾ ದೇವಿಯು ಹ್ಯಾಗೆ ಪೂಜ್ಯಲಾಗುವಳೋ ಹಾಗೆ,
ತರುಷು ಮಹಿತಾಃ ಕಲ್ಪತರವಃ – ಭೂಮಿಯಲ್ಲಿರುವ ಎಲ್ಲಾ ವೃಕ್ಷಗಳ ಮಧ್ಯದಲ್ಲಿ ಕಲ್ಪವೃಕ್ಷಗಳು ಹ್ಯಾಗೆ ಪೂಜ್ಯವಾಗಿವೆಯೋ ಹಾಗೆ,
ಸುರಾಣಾಂ ದೇವೇಂದ್ರಃ – ಎಲ್ಲಾ ದೇವತೆಗಳ ಮಧ್ಯದಲ್ಲಿ ದೇವೇಂದ್ರನು ಹ್ಯಾಗೆ ಪೂಜ್ಯನಾದವನೋ ಹಾಗೆ,
ಸರ್ವಗ್ರಹಗಣೇ ತರಣಿರಪಿ – ಎಲ್ಲಾ ಗ್ರಹರ ಮಧ್ಯದಲ್ಲಿ ಸೂರ್ಯನು ಹ್ಯಾಗೆ ಪೂಜ್ಯನಾದವನೋ ಹಾಗೆಯೇ,
ಕ್ಷೇತ್ರೇ ಕಾಶೀ ಯಥಾ – ಗೋಕರ್ಣಾದಿ ಮಹಾಕ್ಷೇತ್ರಗಳ ಮಧ್ಯದಲ್ಲಿ ಕಾಶೀಕ್ಷೇತ್ರವು ಹ್ಯಾಗೆ ಪೂಜ್ಯವಾಗಿದೆಯೋ ಹಾಗೆ,
ಅಪಿ ಚ ಗಿರಿಶೋ ಮೂರ್ತಿಷು ತಥಾ – ಮತ್ತು ಸಮಸ್ತ ಮೂರ್ತಿಗಳ ಮಧ್ಯದಲ್ಲಿ ಪರಮೇಶ್ವರನು ಹ್ಯಾಗೆ ಪೂಜ್ಯನಾದವನೋ ಹಾಗೆ,
ವಿಧೀನಾಮರ್ಘ್ಯಾಖ್ಯೋ ವಿಧಿಃ – ಹಿಂದೆ ಹೇಳಲ್ಪಟ್ಟಂಥಾ ಷೋಡಶೋಪಚಾರಗಳ ಮಧ್ಯದಲ್ಲಿ ಈ ಅರ್ಘ್ಯೋಪಚಾರವು
ಇಹ ಸ ಉಕ್ತೋsಧಿಕತರಃ – ಇಂತಹ ಮಂಗಳಕಾರ್ಯದಲ್ಲಿ ಅತ್ಯಂತ ಅಧಿಕತರವಾದದ್ದನ್ನಾಗಿ ಹೇಳುವರು.
ಇಂತೊಪ್ಪುವ ಅರ್ಘ್ಯೋಪಚಾರಕ್ಕೆ ಸಾಧನಗಳು ಯಾವುದಯ್ಯಾ ಎಂದರೆ –
ರತ್ನಾನ್ಯಂಬರಮುತ್ತಮಂ ಮಲಯಜಃ ಕಸ್ತೂರಿಕಾ ಕುಂಕುಮಂ
ಕರ್ಪೂರಾಗರು ಚಾರುಗಂಧ ಸುಮನೋ ಗಾವೋ ಹಿರಣ್ಯಾನಿ ಚ |
ಯೋಪಾ ವೇಷಕರೀ ವೃಷಶ್ಚ ಕೃಷಿಕೃತ್ ಕ್ಷೋಣೀ ಫಲಾಢ್ಯಸ್ತರುಃ
ಪ್ರೋಕ್ತಾನ್ಯರ್ಘ್ಯವಿಧೇಶ್ಚ ಸರ್ವಮುನಿಭಿರ್ದ್ರವ್ಯಾಣಿ ವಿದ್ವಜ್ಜನೈಃ ||
ರತ್ನಾನಿ – ಮುಟ್ಟು ಮಾಣಿಕ್ಯ ವಜ್ರ ವೈಡೂರ್ಯ ಗೋಮೇಧಗಳೇ ಮೊದಲಾದ ನವರತ್ನಗಳು
ಅಂಬರಮುತ್ತಮಂ – ಶುಭ್ರಗಳಾದಂಥಾ ವಸ್ತ್ರಗಳು
ಮಲಯಜಕಸ್ತೂರಿಕಾಕುಂಕುಮಂಕರ್ಪೂರಾಗರುಚಾರುಗಂಧಸುಮನಃ – ಶ್ರೀಗಂಧ ಕಸ್ತೂರಿ ಕುಂಕುಮ ಕರ್ಪೂರ ಅಗರು ಪುಷ್ಪ ಮೊದಲಾದ ಸುಗಂಧದ್ರವ್ಯಗಳು
ಗಾವಃ – ಗೋವುಗಳು
ಹಿರಣ್ಯಾನಿ ಚ – ಸುವರ್ಣಮಯಗಳಿಂದ
ಕೃಷಿಕೃತ್ ವೃಷಶ್ಚ – ಉದ್ಯೋಗ ಮಾಡುವಂಥಾ ಎತ್ತುಗಳು
ಕ್ಷೋಣೀ – ಒಳ್ಳೆ ಬೆಳೆ ಆಗುವಂಥಾ ಭೂಮಿಗಳು
ಫಲಾಢ್ಯಸ್ತರುಃ – ಫಲಭರಿತಗಳಾದಂಥಾ ವೃಕ್ಷಗಳು
ಪ್ರೋಕ್ತಾನ್ಯರ್ಘ್ಯವಿಧೇಶ್ಚ – ಅರ್ಘ್ಯೋಪಚಾರಕ್ಕೆ ಈ ಹೇಳಿದ ದ್ರವ್ಯಗಳು
ಸರ್ವಮುನಿಭಿರ್ದ್ರವ್ಯಾಣಿ ವಿದ್ವಜ್ಜನೈಃ – ಸಾಧನಗಳಾಗಿ ಸಮಸ್ತಮುನಿಗಳಿಂದಲೂ ವಿದ್ವಾಂಸರುಗಳಿಂದಲೂ ಹೇಳಲ್ಪಟ್ಟವುಗಳು.
ಇಂತಹ ಅರ್ಘ್ಯೋಪಚಾರಕ್ಕೆ ಅರ್ಹರಾದವರು ಯಾರಯ್ಯಾ ಎಂದರೆ-
ಸ್ನಾತಕಂ ಗುರುಮಭೀಷ್ಟಮೃತ್ವಿಜಂ ಸಂಯುಜಾ ಚ ಸಹ ಮೇದಿನೀಪತಿಂ |
ಅರ್ಘ್ಯಭಾಜನಮಿತಿ ಬ್ರುವಂತಿ ತಮ್ ಷಟ್ ಚ ತೇ ಯುಗಪದಾಗತಾಃ ಸದಃ ||
ಸ್ನಾತಕಂ – ತ್ರಿವಿಧಸ್ನಾತಕನು
ಗುರುಂ – ಆಚಾರ್ಯನು
ಅಭೀಷ್ಟಂ – ಇಷ್ಟನಾದವನು
ಋತ್ವಿಜಂ – ಪುರೋಹಿತನು
ಸಹ ಸಂಯುಜಾ ಚ – ಅಳಿಯನಿಂದ ಸಹಿತನಾದ ಮಾವನು
ಮೇದಿನೀಪತಿಂ – ರಾಜ್ಯವನ್ನಾಳುವ ಅರಸನು
ಷಡರ್ಘ್ಯಭಾಜಃ – ಈ ಆರು ಮಂದಿಗಳು ಈ ಅರ್ಘ್ಯೋಪಚಾರಕ್ಕೆ ಅರ್ಹರಾದವರು.
ಇತಿ ಬ್ರುವಂತಿ – ಎಂದು ಎಲ್ಲವರೂ ಹೇಳುತ್ತಿಹರು.
ತೇ ಚ ಯುಗಪದಾಗತಾಃ ಸದಃ – ಈ ಆರು ಮಂದಿಗಳು ಏಕಕಾಲದಲ್ಲಿ ಮಹಾಸಭೆಯನ್ನು ಬಂದಿರುವುದಾದುದರಿಂದ ಈ ಅರ್ಘ್ಯೋಪಚಾರವನ್ನು ಮಾಡಲೇಬೇಕು.
ಈ ಅರ್ಘ್ಯೋಪಚಾರವನ್ನು ಪೂರ್ವದಲ್ಲಿ ಆಚರಿಸಿದವರು ಯಾರಯ್ಯಾ ಎಂದರೆ –
ದತ್ತಾತ್ರೇಯ ಮಹಾಮುನೌ ಸ್ವಭವನಂ ಪ್ರತ್ಯಾಗತೇ ಸಾದರಾ
ಚ್ಚಕ್ರೇsರ್ಘ್ಯಂ ಕಿಲ ಕಾರ್ತವೀರ್ಯನೃಪತಿಃ ಕೃಷ್ಣಸ್ತಥಾ ನಾರದೇ |
ಶ್ರೀಕೃಷ್ಣಾಯ ಚ ಪಾಂಡವೋ ದಶರಥೋ ವಿಶ್ವಾದಿ ಮಿತ್ರಾಯ ಚ
ಸ್ವಂ ಸ್ವಂ ಗೇಹಮುಪಾಗತಾಯ ವಿದುಷೇ ಕುರ್ವಂತಿ ಸರ್ವೇ ಜನಾಃ ||
ಕಾರ್ತವೀರ್ಯನೃಪತಿಃ – ಹಿಂದೆ ಮಾಹಿಷ್ಮತೀ ಪಟ್ಟಣದಲ್ಲಿ ಕಾರ್ತವೀರ್ಯಾರ್ಜುನರಾಯನು ಭೂಚಕ್ರವನ್ನು ಪಾಲಿಸುತ್ತಿರಲಾಗಿ
ದತ್ತಾತ್ರೇಯ ಮಹಾಮುನೌ ಸ್ವಭವನಂ ಪ್ರತ್ಯಾಗತೇ – ದತ್ತಾತ್ರೇಯ ಮಹಾಮುನೀಶ್ವರನು ತನ್ನ ಮನೆಗೆ ಬರುತ್ತಿರಲಾಗಿ
ಸಾದರಾಚ್ಚಕ್ರೇsರ್ಘ್ಯಂ ಕಿಲ – ಆ ಕಾರ್ತವೀರ್ಯಾರ್ಜುನರಾಯನು ಇದೇ ಕ್ರಮದಿಂದ ಅರ್ಘ್ಯೋಪಚಾರವನ್ನು ಮಾಡಿದನು.
ಕೃಷ್ಣಸ್ತಥಾ ನಾರದೇ – ನಾರದ ಮುನಿಯು ದ್ವಾರಕಾ ಪಟ್ಟಣಕ್ಕೆ ಬರುತ್ತಿರಲಾಗಿ ಶ್ರೀಕೃಷ್ಣ ಸ್ವಾಮಿಯು ಇದೇ ಕ್ರಮದಿಂದ ಅರ್ಘ್ಯೋಪಚಾರವನ್ನು ಮಾಡಿದನು.
ಶ್ರೀಕೃಷ್ಣಾಯ ಚ ಪಾಂಡವಃ – ಶ್ರೀಕೃಷ್ಣ ದೇವನು ಹಸ್ತಿನಾವತಿಗೆ ಬರುತ್ತಿರಲಾಗಿ ಧರ್ಮರಾಯನು ಇದೇ ರೀತಿಯಲ್ಲಿ ಅರ್ಘ್ಯೋಪಚಾರವನ್ನು ಮಾಡಿದನು.
ದಶರಥೋ ವಿಶ್ವಾದಿ ಮಿತ್ರಾಯ ಚ – ಅಯೋಧ್ಯಾಪಟ್ಟಣಕ್ಕೆ ವಿಶ್ವಾಮಿತ್ರನು ಬರುತ್ತಿರಲಾಗಿ ದಶರಥ ಮಹಾರಾಜನು ಇದೇ ರೀತಿಯಲ್ಲಿ ಅರ್ಘ್ಯೋಪಚಾರವನ್ನು ಮಾಡಿದನು.
ಸ್ವಂ ಸ್ವಂ ಗೇಹಮುಪಾಗತಾಯ ವಿದುಷೇ ಕುರ್ವಂತಿ ಸರ್ವೇ ಜನಾಃ – ಇದೇ ರೀತಿಯಲ್ಲಿ ತಂತಮ್ಮ ಮನೆಗೆ ವೇದವೇದಾಂಗಾದಿಗಳನ್ನು ತಿಳಿದವರಾದ ವಿದ್ವಾಂಸರುಗಳು ಬರುತ್ತಿರಲಾಗಿ ಎಲ್ಲ ಜನರೂ ಈ ಅರ್ಘ್ಯೋಪಚಾರವನ್ನು ಮಾಡುವರು.
ಪ್ರೋಕ್ತಾನ್ ಷಟ್ಕದಶೋಪಚಾರನಿವಹಾನ್ ಪ್ರತ್ಯೇಕಮಾದ್ಯಂಸ್ತು ಯಾನ್
ಶ್ರೇಷ್ಠಾನ್ ಪಂಚ ವರಾಗ್ರಣೀರಿತಿತರಾಂ ಕುರ್ಯಾತ್ ಷಡೇತಾನ್ ಗೃಹೀ |
ಪ್ರತ್ಯುತ್ಥಾನಸುವಾಸನಾದ್ಯಮವಚಃ ಪಾದ್ಯಂ ತಥಾ ವೀಜನಂ
ಮಾಂಗಲ್ಯಾಕ್ಷತಮರ್ಘ್ಯಮೇವಮಪರಂ ಸರ್ವಾನ್ಮುಚೇದ್ವಂದನಂ ||
ಪ್ರೋಕ್ತಾನ್ ಷಟ್ಕದಶೋಪಚಾರನಿವಹಾನ್ – ಹಿಂದೆ ಹೇಳಿದಂಥಾ ಷೋಡಶೋಪಚಾರಗಳನ್ನುಅವರು ತತ್ ಕ್ಷಣದಲ್ಲೇ ಪ್ರತ್ಯೇಕ ಪ್ರತ್ಯೇಕವಾಗಿ ಉಪಚರಿಸಬೇಕೆಂಬುದು ಕರ್ತವ್ಯ. ಅದು ಕೂಡದಿದ್ದರೆ,
ಕುರ್ಯಾತ್ ಷಡೇತಾನ್ ಗೃಹೀ – ಉತ್ತಮಗಳಾದಂಥಾ ಆರು ಉಪಚಾರಗಳನ್ನು ಮಾಡಬೇಕೆಂಬುದು ಕರ್ತವ್ಯ.
ಶ್ರೇಷ್ಠಾನ್ ಪಂಚ ವರಾಗ್ರಣೀರಿತಿ – ಆಶಕ್ತನಾಗಿದ್ದವನು ಶ್ರೇಷ್ಠಗಳಾದಂಥಾ ಐದು ಉಪಚಾರಗಳನ್ನು ಮಾಡಬೇಕೆಂಬುದು ಕರ್ತವ್ಯ.
ಅವು ಯಾವುದಯ್ಯಾ ಎಂದರೆ-
ಪ್ರತ್ಯುತ್ಥಾನ – ಎದುರುಗೊಳ್ಳೋಣ
ಸ್ವಾಸನಾನ್ – ಆಸನಗಳನ್ನು ಕೊಡೋಣ
ಯಮವಚಃ – ಕುಶಲಕ್ಷೇಮವನ್ನು ಸುವಚನದಿಂದ ಕೇಳೋಣ
ಪಾದ್ಯಂ – ಶುದ್ಧೋದಕದಿಂದ ಪಾದಪ್ರಕ್ಷಾಳನೆಯನ್ನು ಮಾಡೋಣ
ವೀಜನಂ – ಅಲವಟ್ಟಗಳಿಂದ ಚೆನ್ನಾಗಿ ವೀಜಿಸುವುದು
ಮಾಂಗಲ್ಯಾಕ್ಷತ - ಗಂಧಾಕ್ಷತೆಗಳನ್ನು ಕೊಡುವುದು
ಅಪರಮುಕ್ತಂ ಸರ್ವಾನ್ – ಈಗ ಹೇಳಿದಂಥಾ ಸರ್ವೋಪಚಾರಗಳಿಗೂ
ಮುಚೇದ್ವಂದನಂ – ವಂದನೋಪಚಾರವೇ ಶ್ರೇಷ್ಠವು.
ವಂದನೋಪಚಾರವೇ ಶ್ರೇಷ್ಠವು ಹ್ಯಾಗಯ್ಯಾ ಎಂದರೆ –
ನಾಸ್ತಿ ಸತ್ಯಾತ್ಪರೋ ಧರ್ಮಃ ಸಂತುಷ್ಟಿರ್ನಾತ್ಮಜಾತ್ಪರಾ |
ನಾನ್ನದಾನತ್ಪರಂ ದಾನಂ ವಂದನಾನ್ನೋಪಚಾರಕಂ |
ತಸ್ಮಾದ್ವಂದನೋಪಚಾರೇಣೈವ ಸರ್ವೇsಪ್ಯೂಪಚಾರಾಃ
ಕೃತಾಃ ಸಂತ್ವಿತಿ ಮದೀಯಾ ವಿಜ್ಞಾಪನಾ ||
ಇತ್ಯುಕ್ತ್ವಾ ನಮಸ್ಕುರ್ಯಾತ್
ಓಂ ಭಾಗಧೇಯೇ ನೈವೇನಂ ಪ್ರಣಯತಿ | ಬ್ರಾಹ್ಮಣ ಆರ್ಷೇಯ ಉದ್ಧರೇತ್ | ಬ್ರಾಹ್ಮಣೋ ವೈ ಸರ್ವಾ ದೇವತಾಃ | ಸರ್ವಾಭಿರೇವೈನಂ ದೇವತಾಭಿರುದ್ಧರತಿ | ಸರ್ವೆಭ್ಯೋ ಬ್ರಾಹ್ಮಣೇಭ್ಯೋ ನಮಃ ||
|| ಓಂ ಸ್ವಸ್ತಿ ||
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನೈ ಭಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಹರೇ ರಾಮ,
ಮೇಲಿಂದ ಮೇಲೆ ಮದುವೆ ಶುದ್ದಿಗೋ… ಬೈಲಿನವಕ್ಕೆಲ್ಲ ಗೌಜಿಯೇ ಗೌಜಿ…
[ಉತ್ತರುಸಿ]
ಈ ಸಭಾವ೦ದನೆಯ ಕೆಮಿಕೊಟ್ಟು ಕೇಳಿಯಪ್ಪಗ ಅಪ್ಪ ಆನ೦ದವೇ ಬೇರೆ. ಅರ್ಥಪೂರ್ಣ ಮಾತುಗೊ,ನಾವು ಜೆ೦ಬ್ರಲ್ಲಿ ಕೆಮಿ ಕೊಡದ್ದೆ ಸೋಲುತ್ತು.ಇಡೀ ಹೇಳುವೋರೂ ಕಮ್ಮಿ ಇಕ್ಕೊ ಏನೊ !!
ನಮ್ಮ ಹೆರಿಯೋರ ನಮ್ರತೆ ಎಷ್ಟಿತ್ತು ಹೇಳೊದಕ್ಕೆ ಈ ಮಾತೇ ಸಾಕ್ಷಿ ಅಲ್ಲದೋ?
{ಎಲ್ಲಾ ಉಪಚಾರಗಳನ್ನು ಮಾಡುವುದರಲ್ಲಿ ಅಸಮರ್ಥನಾದ ನನ್ನಂಥವರಿಂದ ಮಾಡತಕ್ಕ ಉಪಚಾರಗಳಲ್ಲಿ ಯಾವ ವಂದನಾತ್ಮಕೋಪಚಾರವು ಅತಿ ಯೋಗ್ಯವಾಗಿದೆಯೋ ಅಂಥಾ ಈ ನಮಸ್ಕಾರ ಒಂದನ್ನೇ ಸ್ವೀಕರಿಸಿ ನನ್ನನ್ನು ನೋಡಿ ಸುಕ್ಷಮಿಸಿಕೊಳ್ಳಬೇಕು.}
ಚೆನ್ನೈಭಾವ೦ಗೆ ಅನ೦ತ ಧನ್ಯವಾದ೦ಗೊ.
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:18 PM ಗೆ. (ಒಪ್ಪಸಂಕೊಲೆ)
ಒಂದು ನಮಸ್ಕಾರ ಎಷ್ಟು ಅತಿ ವಿನಯ ನಮ್ರತೆ ಮತ್ತು ಭಾವನೆಂದ ಕೂಡಿದ್ದಪ್ಪೋ. ನಮ್ಮ ಸಂಸ್ಕಾರದ ಹಿರಿಮೆ ಪ್ರತಿಯೊಂದು ವಿಷಯಲ್ಲಿಯೂ ಪ್ರತಿಬಿಂಬಿತ ಆವ್ತು. ವರ್ಷಕ್ಕೆ ಅದೆಷ್ಟು ಮದುವಗೆ ನಾವು ಹೋವುತ್ತೋ, ಅಂದರೂ, ಒಂದು ಹತ್ತು ನಿಮಿಷ, ಸಭೆಯ ಉದ್ದೇಶಿಸಿ ಮಾಡುವ ಈ ಮಂತ್ರ ಬಿನ್ನಹ ಪೂರ್ತಿಯಾಗಿ ಕೇಳುಲೆ ನವಗೆ ಎಡಿತ್ತಿಲ್ಲೆ ಹೇಳಿ ಆದ್ದು ನಿಜವಾಗಿ ಬೇಸರ. ಈ ಮಂತ್ರವ ಭಟ್ಟಮಾವಂದ್ರು ಕಕ್ಷಿಲಿ ಹೇಳುವದರ ಕೇಳ್ಳೂ ಚಂದ, ನೋಡ್ಳೂ ಚಂದ. ಒಪ್ಪಕ್ಕೆ ಧನ್ಯವಾದ ಭಾವಯ್ಯ.
[ಉತ್ತರುಸಿ]
ಇದು ನಮ್ಮ ಸಂಪ್ರದಾಯ ! ಹೇಳಿ ಅಭಿಮಾನ ಮೂಡಿತ್ತು/ವರ್ಧಿಸಿತ್ತು. ಧನ್ಯವಾದಾಃ !!
(ಏಷಃ ಅಸ್ಮಾಕಂ ಸಂಪ್ರದಾಯಃ ! ಇತಿ ಗೌರವಭಾವನಾ ವರ್ಧಿತಾ!!)
~~
ಎರಡರ್ಥ ಕೊಡುವ ಈ ಶ್ಲೋಕವ ಗಮನಿಸಿದ್ದೀರೊ?
(ದ್ವಂದ್ವಾರ್ಥಯುಕ್ತಂ ಏನಂ ಶ್ಲೋಕಂ ಪರಿಶೀಲಯಂತು -)
ಮಹತ್ತ್ಯಾಗದಯಾಯುಕ್ತಾಂ ಸತ್ಯಭಾಮಾಸಮನ್ವಿತಾಂ |
ಸುದರ್ಶನಯುತಾಂ ವಂದೇ ಸಭಾಂ ವಿಷ್ಣೋರಿವಾಕೃತಿಂ ||
[ಉತ್ತರುಸಿ]
ಹೊತ್ತುವೇಳೆ: 22 November,2011ರ 5:39 PM ಗೆ. (ಒಪ್ಪಸಂಕೊಲೆ)
ನಿಜವಾಗಿಯೂ ಮಹೇಶಣ್ಣ ಹೇಳುತ್ತ ಹಾಂಗೆ “ಏಷಃ ಅಸ್ಮಾಕಂ ಸಂಪ್ರದಾಯಃ ! ಇತಿ ಗೌರವಭಾವನಾ ವರ್ಧಿತಾ” ನಮ್ಮಲ್ಲಿ ಅದೆಷ್ಟು ಸಂಪುತ್ತುಗ ಹುದುಗಿದ್ದು… ಅವುಗಳ ಚೂರು ಹೆರ ತೆಗದು ತೋರ್ಸಿದ ಚೆನ್ನೈ ಭಾವಂಗೆ ಧನ್ಯವಾದಂಗೋ…
[ಉತ್ತರುಸಿ]
ಹೊತ್ತುವೇಳೆ: 22 November,2011ರ 5:53 PM ಗೆ. (ಒಪ್ಪಸಂಕೊಲೆ)
ಅಪ್ಪು,
ಎರಡೂ ಸ೦ದರ್ಭಕ್ಕೆ ಅರ್ಥಪೂರ್ಣವಾಗಿದ್ದು.
[ಉತ್ತರುಸಿ]
ಹೊತ್ತುವೇಳೆ: 22 November,2011ರ 9:02 PM ಗೆ. (ಒಪ್ಪಸಂಕೊಲೆ)
ತುಂಬಾ ಲಾಯಿಕ ಇದ್ದು
ಮಹತ್ +ತ್ಯಾಗ+ ದಯಾಯುಕ್ತಾಂ – ಮಹತ್ತಾದ ತ್ಯಾಗದಿಂದಲೂ ದಯೆಯಿಂದಲೂ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಮಹತ್ತ್ಯಾ+ ಗದಯಾ + ಯುಕ್ತಾಂ – ಮಹತ್ತಾದ ಕೌಮೋದಕೀ ಗದೆಯಿಂದ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
ಸತ್ಯ-ಭಾ-ಮಾ-ಸಮನ್ವಿತಾಂ – ಸತ್ಯದಿಂದಲೂ ಕಾಂತಿಯಿಂದಲೂ ಸಂಪತ್ತಿನಿಂದಲೂ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಸತ್ಯಭಾಮಾ +ಸಮನ್ವಿತಾಂ – ಸತ್ಯಭಾಮಾದೇವಿಯಿಂದ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
ಸು + ದರ್ಶನಯುತಾಂ – ಮಂಗಲಕಾರವಾದ ದರ್ಶನದಿಂದ ಕೂಡಿಕೊಂಡಿರುವಂಥಾದ್ದು ಸಭಾಮಂಡಲ
ಸುದರ್ಶನ + ಯುತಾಂ – ಸುದರ್ಶನಚಕ್ರ ಯುಕ್ತವಾದಂಥಾದ್ದು ವಿಷ್ಣುಮೂರ್ತಿ
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:28 PM ಗೆ. (ಒಪ್ಪಸಂಕೊಲೆ)
ಸಂಸ್ಕೃತ ಪಾಠಕ್ಕೆ ಪೂರಕವಾಗಿ ಒಳ್ಳೆತ ಅರ್ಥಮಾಡಿಗೊಂಬಲೂ ಈ ಮಂತ್ರಭಿನ್ನಹ ಭಾಗ ಸಹಕಾರಿ ಆವ್ತು ಹೇಳಿ ಅಪ್ಪಚ್ಚಿಯ ಒಪ್ಪ ನೋಡಿರೇ ಗೊಂತಾವ್ತು. ಕೆಲವು ಬಾರಿ ಕೇಳಿದವರಲ್ಲಿ ನಿಂಗಳೂ ಒಬ್ಬ ಎಂಬುದೀಗ ನಿಸ್ಸಂದೇಹ. ಧನ್ಯವಾದ.
[ಉತ್ತರುಸಿ]
ಹೊತ್ತುವೇಳೆ: 24 November,2011ರ 1:29 PM ಗೆ. (ಒಪ್ಪಸಂಕೊಲೆ)
ಜೆಮ್ಬಾರಂಗಳಲ್ಲಿ ಇದರ ಕೇಳುವದು ಎನಗೆ ತುಂಬಾ ಕೊಶಿ ಕುಡುವ ಸಂಗತಿ. ಪೂರ್ಣ ಪಾಠ ಸರಿಯಾಗಿ ಕೇಳಿತ್ತಿದ್ದಿಲ್ಲೆ. ಇಲ್ಲಿ ಇದರ ಸರಿಯಾದ ವಿವರ ಸಿಕ್ಕಿತ್ತು.
ಅದರಲ್ಲಿಯೂ, ಕೆಲವು ಕಡೆಲಿ ಎರಡೆರಡು ಅರ್ಥ ಕೊಡುವದು ಕೇಳುವಾಗ ತುಂಬಾ ಕೊಶಿ ಆವ್ತು
ಇದಕ್ಕೊಂದು ಉತ್ತರಾರ್ಧ ಭಾಗ ಇದ್ದು ಹೇಳಿ ಈಗ ಗೊಂತಾದ್ದಷ್ಟೆ.
ಅದರದ್ದು ಧ್ವನಿ ಸಂಪಾದುಸಲೆ ಎಡಿಗಾರೆ ಒಳ್ಳೆದಿತ್ತಿದ್ದು.
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:22 PM ಗೆ. (ಒಪ್ಪಸಂಕೊಲೆ)
ಮಹೇಶಣ್ಣ ಬೆಟ್ಟೆತ್ತಿ ತೋರ್ಸಿದ್ದು ಲಾಯಕ ಆಯ್ದು. ನಿಂಗಳ ವಿದ್ಯಾರ್ಥಿಗೊ ಸರಿಯಾಗಿ ಪುನಃ ಕೇಳಿ ಅರ್ಥಮಾಡಿ ಸಂತೋಷವ ಇಲ್ಲಿ ಹಂಚಿಗೊಂಡದ್ದು ಲಾಯಕ ಆತು. ಧನ್ಯವಾದ ಮಹೇಶಣ್ಣ.
[ಉತ್ತರುಸಿ]
ಯಭಾ…ಮ೦ತ್ರದ ವಿವರಣೆ ಭಾರಿ ಲಾಯಕೆ ಆಯಿದು.. ಹೀ೦ಗೆಲ್ಲಾ ಇರ್ತೋ?
ಅರ್ಥ ತಿಳುಶಿದ್ದು ಒಳ್ಳೆದೇ ಆತು..
ಚೆನ್ನೈಭಾವ ಧನ್ಯವಾದ೦ಗೊ.
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:31 PM ಗೆ. (ಒಪ್ಪಸಂಕೊಲೆ)
ಅಂಬಗಂಬಗ ಕೇಳಿಗೊಂಡಿರಿ, ಓದಿಗೊಂಡಿರಿ ಚುಬ್ಬಣ್ಣ. ನಮ್ಮತನ ಇದರಲ್ಲಿ ಇದ್ದಪ್ಪೋ. ನಮ್ಮತನ ನೆಂಪು ಮಾಡ್ಳೆ ಇಂದು ಒಳ್ಳೆ ಸಹಕಾರಿ ಅಲ್ಲದೋ. ಒಪ್ಪಕ್ಕೆ ಧನ್ಯವಾದ.
[ಉತ್ತರುಸಿ]
ಭಾವ ಬಹು ದೊಡ್ಡ ಪ್ರಯತ್ನ ನಿಂಗಳದ್ದು..ಎಷ್ಟು ಧನ್ಯವಾದ ಹೇಳಿದರೂ ಸಾಲ.. ಎನಗೆ ಓದಲೇ ಕೆಲವು ಸಮಯ ಹಿಡುದತ್ತು.. ಇನ್ನು ನಿಂಗೊಗೆ ಬರವಲೆ ಎಷ್ಟು ಸಮಯ ಬೇಕಾದಿಕ್ಕು ಹೇಳಿ ಆನೇ ಯೋಚಿಸಿಕೊಂಡೆ….
ನಿಂಗಳ ಶ್ರದ್ಧೆ ಮೆಚ್ಚೆಕ್ಕಾದ್ದೆ… ಧನ್ಯವಾದಂಗೊ…
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:35 PM ಗೆ. (ಒಪ್ಪಸಂಕೊಲೆ)
ಪ್ರೀತಿಯ ಒಪ್ಪಕ್ಕೆ ಧನ್ಯವಾದ ಸೂರ್ಯಣ್ಣ. ಡಾ.ಮಹೇಶಣ್ಣ ನಾಕು ಗೆರೆ ಬರದು ತೋರ್ಸಿಯಪ್ಪಗ, ಅದು ಪೂರ್ತಿ ಇಲ್ಲಿ ಬಾರದ್ದೆ ಮನಸ್ಸು ಕೇಳಿತ್ತಿಲ್ಲೆ ಇದಾ. ಹಠಗಟ್ಟಿ ಕೂದು ಬರದ್ದದೆ. ಸಮಯ ಸುಮಾರು ಬೇಕಾದ್ದು ಅಪ್ಪು, ಅಂದರೂ, ಇರುಳು ಎರಡು ಗಂಟೆ ಆದರೂ ಬಚ್ಚಿದ್ದಿಲ್ಲೇ!!
[ಉತ್ತರುಸಿ]
ತುಂಬಾ ಧನ್ಯವಾದ..ಆನು ಪ್ರತೀ ಮದುವೆಲಿಯೂ ಕೆಮಿ ಕೊತ್ತು ಕೇಳುವದು ಈ ಸಬಾವಂದನೆ..ಬಟ್ಟಮಾವನ ಸ್ವರಲ್ಲಿ ಕೇಳುದೇ ಪುಳಕ ಆವುತ್ತು..ಸುಮಾರು ದಿನಂದ ಕಾದೊಂಡಿತ್ತಿದ್ದೆ..ಮಹೇಶಣ್ಣ ನೆಂಪು ಮಾಡಿದ್ದು, ಬಾವ ಪುರ್ಣ ಕೊಟ್ಟದೂ ಒಪ್ಪ ಆತು..
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:56 PM ಗೆ. (ಒಪ್ಪಸಂಕೊಲೆ)
ಕುಮಾರಣ್ಣ., ನಮ್ಮ ಬೈಲಿಲಿ ಒಬ್ಬ ಅಭಿಮಾನಿ ಇದ್ದಾ°… ದಿನಾ ಇದರ ಕೇಳಿಗೊಂಡೇ ಒರಗುವದಡ!!
[ಉತ್ತರುಸಿ]
ಸಭಾ ವಂದನೆಯ ಇಷ್ಟೊಂದು ಚೆಂದಕೆ ಪ್ರಸ್ತುತ ಪಡುಸಿದ ಚೆನ್ನೈಭಾವಂಗೆ ವಂದನೆಗೊ. ಭಟ್ಟ ಮಾವ°ನ ಬಾಯಿಂದ ಕೇಳಿದ ಹಾಂಗೇ ಆತದ. ಮದುಮ್ಮಾಯನ ಎದುರುಗೊಂಡು ಇಷ್ಟೆಲ್ಲ ಅರ್ಥ ಇಪ್ಪ ಶ್ಲೋಕಂಗಳ ಹೇಳಿ ವಿವರುಸುವಗ ಮಕ್ಕೊ/ಹೆಮ್ಮಕ್ಕೊ ಪಟ್ಟಾಂಗಲ್ಲಿ ಮುಳುಗಿ ಇದರ ಆಸ್ವಾದಿಸದ್ದೆ ಇರ್ತದು ಬೇಜಾರಿನ ವಿಷಯ. ಮಹೇಷಣ್ಣ ಪುನಃ ತೋರುಸಿಕೊಟ್ಟ ದ್ವಂದ್ವಾರ್ಥದ ಶ್ಲೋಕವಂತೂ ಅದ್ಭುತ.
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:49 PM ಗೆ. (ಒಪ್ಪಸಂಕೊಲೆ)
ಬೊಳುಂಬು ಮಾವಂಗೆ ಧನ್ಯವಾದ. ಬೈಲಿಲಿ ಈ ಶುದ್ದಿ ಬಂದ ಲೆಕ್ಕಲ್ಲ್ಯಾರು ಇನ್ನಾಣ ಮದುವೆಗಳಲ್ಲಿ ಚಂದಕ್ಕೆ ಕೂದು ಕೇಳುವ ಅನುಕೂಲ ಲಭಿಸಲಿ ಹೇಳಿ ಬಯಸುವೋ°.
[ಉತ್ತರುಸಿ]
ಆನು ಅದೆಷ್ತೋ ಸಮಯಂದ ಈ ಶ್ಲೋಕಂಗಳ ಕೇಳೆಕ್ಕು, ಅದರ ಅಥ೯ ತಿಳಿಯೆಕ್ಕು ಹೇಳಿ ಆಸೆಪಟ್ಟುಗೊಂಡು ಇತ್ತೆ. ಇಂತಹ ಲೇಖನ ಬರದು ಮಹದುಪಕಾರ ಮಾಡಿದ ಚೆನ್ಯೆ ಬಾವಂಗೆ ಎಷ್ಠು ದನ್ಯವಾದ ಹೇಳಿದರುದೆ ಕಡಮ್ಮೆಯೆ. ಹೇಳಿದ ಹಾಂಗೆ ಸಹಸ್ರ ಅಂದ್ಫ್ರ ದಶ೯ನ ಶಾಂತಿಯ ಬಗೆಗೆ ಆರಿಂಗಾದರುದೆ ಮಾಹಿತಿ ಇದ್ದಾ. ೮೧ ವರುಷ ಕಳುದಪ್ಪಗ ಮಾಡುವ ಈ ಶಾಂತಿಯ ಉದ್ದೇಶ ಅದರಲ್ಲಿ ಎಂತಲ್ಲ ಮಾಡುಅ ಕ್ರಮ್ ಇದ್ದು ಹೇಳಿ ತಿಳಿಸುವಿರಾ
[ಉತ್ತರುಸಿ]
ಹೊತ್ತುವೇಳೆ: 23 November,2011ರ 11:20 PM ಗೆ. (ಒಪ್ಪಸಂಕೊಲೆ)
ಮರುವಳ ಮಾವನ ಅಭಿಮಾನದ ಒಪ್ಪಕ್ಕೆ ಧನ್ಯವಾದ.
ಹೇಳಿದಾಂಗೆ ನಿಂಗೊ ಹೇಳಿದ ‘ಸಹಸ್ರ ಅಂದ್ಫ್ರ ದಶ೯ನ ಶಾಂತಿ’ – ಇದು ಸಹಸ್ರಚಂದ್ರದರ್ಶನ ಶಾಂತಿ ಬಗ್ಗೆ ಕೇಳಿದ್ದಾದಿಕ್ಕು ಹೇಳಿ ಗ್ರೇಶುತ್ತೆ. ಈ ಬಗ್ಗೆ ಕಿಂಚಿತ್ ನಾವು ವಿವಾಹ ಸಂಸ್ಕಾರ ಶುದ್ದಿ ಕೊನೆಲಿ ಮಾತಾಡಿದ್ದು ನೋಡಿ. ನಮ್ಮ ಜೀವನಲ್ಲಿ ಅರುವತ್ತು ಸಂವತ್ಸರ (ವರ್ಷ) ಕಳುದಪ್ಪಗ ಸಂವತ್ಸರ ಚಕ್ರದ ಒಂದು ಸುತ್ತು ಪೂರ್ಣ ಆವ್ತು. ಅಷ್ಟರಲ್ಲಿ ದೇಹದ ಶಕ್ತಿ ಉಡುಗಿ ಅರುವತ್ತರ ಅರೆಮರುಳು ಸುರುವಾವ್ತು. ಆ ದೋಷ ನಿವೃತ್ತಿಗೆ ‘ಉಗ್ರರಥ ಶಾಂತಿ’ ಹೇಳಿ ಒಂದು ಸಂಸ್ಕಾರ. ವೈದೀಕ ಕಾರ್ಯಕಲಾಪದ ಬಗ್ಗೆ ಭಟ್ಟಮಾವಂದ್ರ ಹತ್ರೇ ಕೇಳೆಕ್ಕಷ್ಟೆ. ಮೃತ್ಯು ಭಯ ನಿವಾರಣಗೆ ಬೇಕಾಗಿ ಮತ್ತು ದೇಹಲ್ಲಿ ಶಕ್ತಿ ವೃದ್ದಿಸಲೆ ಅರೋಗ್ಯ ಅಭಿವೃದ್ಧಿಗೂ ಬೇಕಾಗಿ ಮೃತ್ಯುವಿನ ಪ್ರಾರ್ಥಿಸಿ ಹೋಮದ ಮೂಲಕ ಸಂತೋಷಪಡುಸುವದು. ಅರುವತ್ತರ ನಂತರ ಪ್ರತಿ ಐದು ವರ್ಷಕ್ಕೊಂದು ಸಂಸ್ಕಾರ ಹೇಳಿದ್ದವು.
60 ಉಗ್ರರಥ ಶಾಂತಿ 65 ಮಹಾರಥೀ ಶಾಂತಿ 70 ಭೀಮರಥ ಶಾಂತಿ 75 ಐಂದ್ರೀ ಶಾಂತಿ 80 ಸಹಸ್ರಚಂದ್ರದರ್ಶನ ಶಾಂತಿ 85 ರೌದ್ರೀ ಶಾಂತಿ 90 ಸೌರೀ ಶಾಂತಿ 95 ತ್ರ್ಯಂಬಕ ಮೃತ್ಯುಂಜಯ ಶಾಂತಿ 100 ಮಹಾಮೃತ್ಯುಂಜಯ ಶಾಂತಿ ( ಶತಮಾನ ಶಾಂತಿ / ಕನಕಾಭಿಷೇಕ). ಸಹಸ್ರಚಂದ್ರ ದರ್ಶನ ಹೇಳಿರೆ ವ್ಯಕ್ತಿ ಒಬ್ಬಂಗೆ ಎಂಬತ್ತು ವರ್ಷ ಕಳುದಪ್ಪಗ ಅವನ ಜೀವನಲ್ಲಿ ಸಹಸ್ರ ಪೌರ್ಣಮಿ ದರ್ಶನ ಆಗಿರುತ್ತು. ಅರ್ಥಾತ್, ಸಾವಿರ ಹುಣ್ಣಮೆಚಂದ್ರ ಕಂಡ ಸಮಯ. ಎಂಬತ್ತರ ಪ್ರಾಯ ದಾಂಟಿದ ಮತ್ತೆ ಆಯುರಾರೋಗ್ಯ ಸಂಪ್ರಾರ್ಥಿಸಿ ಮಾಡುವದು ‘ಸಹಸ್ರಚಂದ್ರದರ್ಶನ ಶಾಂತಿ’
[ಉತ್ತರುಸಿ]
ಇಂಥಾ ಶ್ರೀಮಂತ ಸಂಪ್ರದಾಯ ನಮದು ಹೇಳ್ತ ಹೆಮ್ಮೆ ಆವುತ್ತು. “ಅಥಿತಿ ದೇವೋ ಭವ” ಹೇಳ್ತ ಪೂಜ್ಯ ಭಾವನೆಂದ ಗೌರವಿಸುವ ಸತ್ ಸಂಪ್ರದಯ ನಮ್ಮದು. ಮದುವೆ ಸಮಾರಂಭಲ್ಲಿ ಆನು ಇದರ ಕೇಳುಲೆ ಬೇಕಾಗಿಯೇ ಮುಂದೆ ಕೂದ್ದದಿದ್ದು. ಇದರ ಸಂಗ್ರಹಿಸಿ, ಸಂಪಾದಿಸಿ ಬೈಲಿಲಿ ಕೊಟ್ಟದು ನಮ್ಮೆಲ್ಲರ ಭಾಗ್ಯ. ಈ ಶ್ರಮಕ್ಕೆ ನಾವು ಚೆನ್ನೈಭಾವಂಗೆ ಶಿರಬಾಗಿಸಲೇ ಬೇಕು…
ಭಾವಯ್ಯ…ನಮೋನ್ನಮಃ !
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:47 PM ಗೆ. (ಒಪ್ಪಸಂಕೊಲೆ)
ನಮೋನ್ನಮಃ ಭಾವಯ್ಯ. ಆಸಕ್ತಿಂದ ಓದಿ ಕೇಳಿ ಆನಂದಿಸಿ ಕೊಟ್ಟ ಒಪ್ಪಕ್ಕೆ ಮಾವಂಗೆ ಧನ್ಯವಾದ. ಇನ್ನಾಣ ಮದುವೆಲಿ ನವಗೆಲ್ಲಾ ಇದು ಲಾಯಕ ಕೇಳುವ ಹಾಂಗೇ ಒದಗಿ ಬರಲಿ ಹೇಳಿ ಆಶಿಸುವೋ°. ಬೈಲಿನೋರು ಪ್ರತ್ಯೇಕ ಆಸಕ್ತಿಂದ ಈ ಸಂದರ್ಭವ ಚಂದಗಾಣಿಸಿ ಕೊಡೆಕು ಹೇಳಿ ಈ ಮೂಲಕ ಕೇಳಿಗೊಂಬ.
[ಉತ್ತರುಸಿ]
ನಮಸ್ಕಾರ ಬಾವಂಗೆ..
ನಿಂಗಳ ಷೋಡಷಸಂಸ್ಕಾರದ ಲೇಖನಂಗಳಲ್ಲಿ ತುಂಬಾ ಚೆಂದಕೆ ಬೈಲಿಂಗೆ ತಿಳುಶಿಕೊಟ್ಟಿದಿ. ಖಂಡಿತವಾಗಿಯೂ ಪ್ರತಿಯೊಬ್ಬಂಗೂ ಸಂಗ್ರಹ ಮಾಡಿ ರೆಫರ್ ಮಾಡುವಂತಹ ಬರಹ. ತುಂಬಾ ಪುರುಸೊತ್ತಿಲ್ಲಿ ಬರದ್ದಿ..ಇನ್ನೂ ಹೀಂಗೆಯೇ ಬರಲಿ..
ಹಾಂಗೆಯೇ ಈಗ ಸಭಾವಂದನೆ.. ಇದು ಎಲ್ಲ್ರೂ ಎಲ್ಲಾ ಮದುವೆಗಳಲ್ಲೂ ಕೇಳುವದೇ, ಆದರೆ ಅರ್ಥಸಹಿತ ಬೈಲಿಂಗೆ ಕೊಟ್ಟದು ಅದ್ಭುತ ಆಯಿದು, ಆನು ಸಣ್ಣ ಆಗಿಪ್ಪಗ ೨-೩ ಪ್ಯಾರ ಬಾಯಿಪಾಠ ಬನ್ದೊಂಡಿದ್ದತ್ತು..ಹೇಳಿರೆ ಮಂಟಪದತ್ರೆ ಓಂಗ್ಯೊಡಿದ್ದತ್ತು.. ಇದರ ಎನ್ನ ಮಾಷ್ಟ್ರು ಮಂಜಳಗಿರಿ ಭಟ್ರ ಹತ್ತರೆ ಈ ಸರ್ತಿ ಕೇಳೆಕು ಹೇಳಿ ಆಲೋಚನೆ ಮಾಡಿತ್ತಿದ್ದೆ..ನಿಂಗೊ ಕೊಟ್ಟದು ತುಂಬಾ ಕೊಶಿ ಆತು
ಧನ್ಯವಾದಂಗೊ..
[ಉತ್ತರುಸಿ]
ಹೊತ್ತುವೇಳೆ: 23 November,2011ರ 10:42 PM ಗೆ. (ಒಪ್ಪಸಂಕೊಲೆ)
ಕುಮಾರಣ್ಣನ ಒಪ್ಪ ನೋಡಿ ಖುಶೀ ಆತು. ನಮ್ಮಾಂಗಿರ್ತವು ಮದುವಗೆ ಸಮಯಕ್ಕೆ ಸರಿಯಾಗಿ ಹೋಗಿಯೊಂಡಿತ್ತಿದ್ದು , ನಿಂಗೊ ಹೇಳಿದಾಂಗೆ ಮಂಟಪ ಹತ್ರೆ ಕೂದು ಮಂತ್ರ ಬಿನ್ನಹ ಕೇಳಿ ಆಸ್ವಾದುಸಲೆ ಓಂಗ್ಯೊಂಡಿದ್ದತ್ತು ಆದರೆ ಪ್ರತಿ ದಿಕ್ಕೆಯುದೇ ಪೂರ್ತಿ ಕೇಳಿಕ್ಕಲೆ ಎಡಿಗಾವ್ತಿಲ್ಲೆ. ಅಂದರೂ, ಮಂತ್ರಬಿನ್ನಹದ ಬಗ್ಗೆ ಪ್ರೀತಿ, ಅಭಿಮಾನ, ಆಸಕ್ತಿ ಕೇಳಿದಷ್ಟೂ ಹೆಚ್ಚಿಗೆ ಆವ್ತಪ್ಪೋ. ಇದರ ಕಮ್ಮಿಲಿ ಎರಡು ಸರ್ತಿ ಒಳ್ಳೆ ಹುರುಪಿಲ್ಲಿ ಕೂದು ಕೇಳಿದ್ದಿ ಖಂಡಿತ. ಸಂಸ್ಕಾರ ಶುದ್ದಿಗಳನ್ನೂ, ಇದನ್ನೂ ಪ್ರೋತ್ಸಾಹಿಸಿ ಕೊಟ್ಟ ಒಪ್ಪಕ್ಕೆ ಧನ್ಯವಾದ ಕುಮಾರಣ್ಣ.
[ಉತ್ತರುಸಿ]
ನಮಸ್ಕಾರ,
.
ಭಾರೀ ಲಾಯ್ಕಾಯಿದು. ಇದರ ಓದುವಗ ಪುರೋಹಿತರ ಸ್ವರಲ್ಲಿ ಕೇಳಿದ ಹಾಂಗೇ ಆತು. ಪ್ರಾಯಶಃ ಇದು ನಮ್ಮವರಲ್ಲಿ ಮಾತ್ರ ಇಪ್ಪದೋ ಹೇಳಿ.ಇದರ ಎಲ್ಲೋರಿಂಗೂ ಸರೀ ಕೇಳ್ಳೆ ಸಿಕ್ಕುದು ಅವರವರ ಮದುವೆಲಿ ಮಾಂತ್ರವೋ ಹೇಳಿ
ಸಂಗ್ರಹಯೋಗ್ಯವಾದ ಲೇಖನ. ಆನು ಇದರ ಪ್ರಿಂಟು ತೆಗದು ಮಡಿಕ್ಕೊಂಡಿದೆ.
ಧನ್ಯವಾದ,
ಮುರಳಿ
[ಉತ್ತರುಸಿ]
ಹೊತ್ತುವೇಳೆ: 24 November,2011ರ 12:01 AM ಗೆ. (ಒಪ್ಪಸಂಕೊಲೆ)
ನಮಸ್ಕಾರ ಮುರಳಿ ಅಣ್ಣಂಗೂ. ಅವರವರ ಮದುವೆಲಿ … ಹೆ…ಹೆ..ಲಾಯಕ ಒಪ್ಪ ಬರದ್ದಿ . ಧನ್ಯವಾದ.
[ಉತ್ತರುಸಿ]
ಭಾವಯ್ಯ, ಇದರ ವಿವರವಾಗಿ ಬರದು ತಿಳ್ಸಿದ್ದಕ್ಕೆ ಧನ್ಯವಾದಂಗೊ. ಇದೆಲ್ಲ ನಾವು ಸರಿಯಾಗಿ ಕೇಳ್ತೇ ಇಲ್ಲೆ. ನಾವು ಜಂಬ್ರಂಗೊಕ್ಕೆ ಹೋಪದು ಊಟಕ್ಕಪ್ಪಗಲ್ಲದ!!
[ಉತ್ತರುಸಿ]
ಹೊತ್ತುವೇಳೆ: 24 November,2011ರ 8:23 AM ಗೆ. (ಒಪ್ಪಸಂಕೊಲೆ)
ಧನ್ಯವಾದ ಭಾವಯ್ಯ.
[ಉತ್ತರುಸಿ]
ಹೊತ್ತುವೇಳೆ: 24 November,2011ರ 6:03 PM ಗೆ. (ಒಪ್ಪಸಂಕೊಲೆ)
ಹ೦ತಿಲಿ ಕೂದರೆ ತಡ ಅಕ್ಕು ಹೇಳಿ “ಬೈಪ್ಪಣೆ”ಗೆ ಸೇರಿಗೊ೦ಬದು ಅಲ್ಲದೊ? ಆವಗ ಚೂರ್ಣಿಕೆಯೂ ತಪ್ಪುಗದಾ..
[ಉತ್ತರುಸಿ]
Chennai Bhava Laikaidu. Idu samskaranda ( maduveya) hechu, namma nadavalikegala heluthu. Namma sampradayalli navu innobbara(athitigala) henge gouravisuthu heluthadara heluthu. Englishilli heluva “humility” ya bagge heluthu. Bahushaha bahalshtu bere jatiya ,jagagala mduve nodida aanu khandita helte intaha sampradaya berellu ille. Idara artha tiludare kelavu sarti kannilli neeru bathu .Entaha samskrutiya navu alakshya maduthu. Adara bagge asaddeye? all gontilleyo ? Athava bekagilleyo? .Namma oorilli matra idara puorhitaru kannadalli vivarisi helidaru navu tilukoltille. Uttara kannadada Havyakaralli artha vivarane ille. Shake hand maduva krama banda matte, baippane oota shuruvada matte , umbade maduveya mukhya karykrama . Maduvege hopade umbalaidu.
Navu yavaga tidduvadu ? Tiddekka ? Elloru alochane madekku.
[ಉತ್ತರುಸಿ]
ಹೊತ್ತುವೇಳೆ: 26 November,2011ರ 11:43 PM ಗೆ. (ಒಪ್ಪಸಂಕೊಲೆ)
ಶುದ್ದಿಯ ಓದಿ ಮೆಚ್ಚುಗೆಯ ಒಪ್ಪಕ್ಕೆ ವೈ.ವಿ ಭಾವಂಗೆ ಧನ್ಯವಾದ. ನಿಂಗಳ ಅಕೇರಿಯಾಣ ಗೆರೆ ಪ್ರತಿಯೊಬ್ಬನೂ ಗಂಭೀರವಾಗಿ ಚಿಂತುಸೆಕ್ಕಾದ್ದೆ. ತೀರ್ಮಾನ ಆವಕ್ಕವಕ್ಕೆ ಬಿಟ್ಟದು.
ಎಂತಾರು., ಮನೆಗಳಲ್ಲಿ ಜಂಬಾರ ಮಾಡಿಗೊಂಬಲೆ ಈಗಾಣ ಪರಿಸ್ಥಿತಿಲಿ ಎಡಿಗಾವ್ತಿಲ್ಲೇಲಿ ಛತ್ರಕ್ಕೋ ಕಲ್ಯಾಣಮಂಟಪಕ್ಕೋ ಹೋಪಲೆ ಸುರುಮಾಡಿತ್ತು. ಅಲ್ಲಿ ಸಭಿಕರು ಬೇರೆ, ಮಂಟಪಲ್ಲಿ ಇಪ್ಪೋರು ಬೇರೆ ಹೇಳಿ ಸಾರ್ವಜನಿಕ ಸಭಾವೇದಿಕೆ ಹಾಂಗೆ ನಡೆತ್ತು. ಅಲ್ಲಿ ಮಂಟಪಲ್ಲಿ ಎಂತದೋ ನಡೆತ್ತು. ಬಂದದಕ್ಕೆ ಬೇಗ ಒಂದಾರಿ ವಸಗೆ ಹಾಕಿ ಉಂಡಿಕ್ಕಿ ಹೋದರಾತು ಹೇಳಿ ಸಭೆಲಿಪ್ಪವಕ್ಕೂ. ಕಲ್ಯಾಣಮಂಟಪಂಗಳಲ್ಲಿ ಎತ್ತರದ ಪ್ರತ್ಯೇಕ ವೇದಿಕೆಲಿ ಕಾರ್ಯಕ್ರಮಂಗಳ ಮಾಡುವದರ ಬಿಟ್ಟು, ಮದಲೆ ಮನೆ ಚಪ್ಪರಂಗಳಲ್ಲಿ ಆಗಿಯೋಂಡಿದ್ದಾಂಗೆ ಬಂದೊರಿಂಗೂ ಬಂದ ಕಾರ್ಯಕ್ರಮಲ್ಲಿ ಜೆವಾಬ್ದಾರಿ ಇದ್ದು ಹೇಳಿ ಪಾಲ್ಗೊಂಬ ಅವಾಕಾಶ ಮಾಡಿರೆ ಎಲ್ಲೋರು ಒಪ್ಪತ್ತುಮುಂಚಿತವಾಗಿ ಬಂದು ಕಾರ್ಯಕ್ರಮ ಚಂದಗಾಣಿಸಿಕೊಟ್ಟು ಆಶೀರ್ವದಿಸೆಕು ಹೇಳ್ವ ಹೇಳಿಕೆ ಅರ್ಥಪೂರ್ಣ ಅಕ್ಕೊ ಹೇಳಿ ಎನ್ನ ಅನಿಸಿಕೆ.
[ಉತ್ತರುಸಿ]
ನಮ್ಮ ಬೈಲ್ಲಿ ಅತಿ ಹೆಚ್ಚು ಕ್ರಿಯಾಶೀಲ ವ್ಯಕ್ತಿ ಚೆನ್ನೈ ಭಾವ°; ನಮ್ಮ ಎಲ್ಲ ಸಂಸ್ಕಾರಂಗಳ ವಿವರಿಸಿದ್ದಲ್ಲದ್ದೆ, ನಮ್ಮ ಬಟ್ಟ ಮಾವಂದಿರ ಸ್ವರಲ್ಲೇ ಮಂತ್ರಂಗಳ ಕೇಳುವ ಅವಕಾಶವ ಕೂಡಾ ಮಾಡಿ ಕೊಡುವ ಈ ಭಾವಯ್ಯನ ಕೆಲಸವ ಎಷ್ಟು ಹೊಗಳಿದರೂ ಸಾಲ!
ಸಣ್ಣ ಇಪ್ಪಗ ಮದುವೆಲಿ ಹೆಚ್ಚು ಆಸಕ್ತಿಂದ ಕೇಳೆಂಡಿದ್ದ ಈ ಉಪಚಾರವ ಕೇಳುವಾಗ ಅಪ್ಪ ಸಂತೋಷದ ರೋಮಾಂಚನವ ಅನುಭವಿಸೆಕೇ ವಿನಹ ವಿವರುಸಲೆ ಸಾಧ್ಯ ಇಲ್ಲೆ! ಆದರೆ ಇತ್ತೀಚಗೆ ಇದರ ಹೇಳುವದೇ ಕಮ್ಮಿ ಆದ ಹಾಂಗೆ ಕಾಣ್ತು. ಎಷ್ಟೋ ಸಮಯಂದ ಸಭಾ ವಂದನೆಯ ಸರಿಯಾಗಿ ಕೇಳಿದ್ದಿಲ್ಲೆ. ಈಗ ಕೇಳಿ ಸಂತೋಷ ಆತು. ಚೆನ್ನೈ ಭಾವಂಗೆ ಕೃತಜ್ಞತೆಯ ಒಪ್ಪ!
ಆದರೆ ಈ ಬಟ್ಟ ಮಾವನ ಸ್ವರವ ನಮ್ಮ ಕಂಪ್ಯೂಟರಿಂಗೆ ಇಳಿಶಿಗೊಂಬದು (download ಮಾಡುದು) ಹೇಂಗೆ ಹೇಳಿ ಗೊಂತಾವುತ್ತಿಲ್ಲೆ. ಇದರಿಂದ ಮದಲೆ ನಮ್ಮ ಬೈಲಿಲ್ಲಿ ಕೊಟ್ಟ ಎಲ್ಲ ಧ್ವನಿಗಳನ್ನೂ ಒಳಿಶಿಗೊಂಡಿದೆ. ವಿವರವಾಗಿ ತಿಳಿಶಿದರೆ ಎನ್ನ ಹಾಂಗಿಪ್ಪ ಕಂಪ್ಯೂಟರು ನಿರಕ್ಷರಕುಕ್ಷಿಗೊಕ್ಕೆ (computer illiterates) ಉಪಕಾರ ಅಕ್ಕು!
ಇದೇ ರೀತಿ ಉಪನಯನ, ಮದುವೆಗಳಲ್ಲಿ ಆಶೀರ್ವಾದ ಮಾಡಿ ಉಡುಗೊರೆ ಕೊಡುವಾಗ ಬಟ್ಟ ಮಾವ ಹೇಳುವ ಉಪಚಾರದ ಮಾತುಗಳ ಈಗ ಎಲ್ಲಿಯೂ ಹೇಳುತ್ತವಿಲ್ಲೆ!
[ಉತ್ತರುಸಿ]
ಹೊತ್ತುವೇಳೆ: 27 November,2011ರ 12:04 AM ಗೆ. (ಒಪ್ಪಸಂಕೊಲೆ)
ಸರ್ಪಮಲೆ ಮಾವನ ಪ್ರೀತಿಯ ಒಪ್ಪ ನೋಡಿ ಅತ್ಯಂತ ಸಂತೋಷ ಆತು. ನಮ್ಮ ಬೈಲು ಹೇಳ್ವ ಹೆಮ್ಮೆ ನವಗೆ. ನಮ್ಮತನ ಬೇಕೋ ಬೇಡದೋ ಹೇಳ್ವದು ಅವಕ್ಕವಕ್ಕೆ ಬಿಟ್ಟದು. ಆದರೆ ನಮ್ಮತನ ಎಂತದು ಹೇಳಿ ಗೊಂತಿಪ್ಪದರ ಬರದು ಉಳುಸಿ ಮಡುಗಲೆ ಬೈಲು ಅತ್ತ್ಯುತ್ತಮ ವೇದಿಕೆ. ಮಾವ° ಹೇಳಿದಾಂಗೆ ‘ಸ್ವಾಭಿಮಾನ – ಉಪಚಾರ ಕ್ರಮಂಗೊ ನಮ್ಮದರಲ್ಲೇ ಇಪ್ಪದು. ಅದರ ಅನುಭವಿಸಿಯೇ ತಿಳಿಯೆಕು ಹೊರತು ವಿವರುಸಲೆ ಶಬ್ದಂಗೊ ಸಾಲ’.
ಬಂದವನ ಎದುರುಗೊಂಬ ಲಾಗಾಯ್ತು ಅವನ ಯೋಗ್ಯ ರೀತಿಲಿ ಉಪಚರಿಸಿ ಕಳುಸಿಕೊಡ್ತಲ್ಲಿವರೇಗೂ ಮನೆಯಜಮಾನನ ಔದಾರ್ಯ ಅವರ್ಣನೀಯ. ಬಂದವನೂ ವಸಗೆ ಮಾಡಿ ಮಂತ್ರಾಕ್ಷತೆ ಹಾಕಿ ತುಂಬು ಮನಸ್ಸಿಂದ ಆಶೀರ್ವದಿಸುವಾಗ ಮನೆಯಜಮಾನನ ಪರವಾಗಿ ಭಟ್ಟಮಾವ° ಪ್ರತ್ಯೇಕ – “ಏನಯ್ಯಾ …. ಭಟ್ರೇ , ತಾವೇ ಒಪ್ಪತ್ತು ಮುಂಚಿತವಾಗಿ ಬಂದು ಈ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟು …ರನ್ನು ಆಶೀರ್ವದಿಸಿದ್ದಲ್ಲದ್ದೇ ಇದೇನು ಇಷ್ಟು ವಿಶೇಷ ಉಪಚಾರಂತ ಕೇಳಿಕೊಳ್ಳುತ್ತಾನೆ ಇತ್ತ ಕಡೆ ಮನೆ ಯಜಮಾನ” ಹೇಳಿ ಅವನ ವಸಗೆಯ ಅಭಿನಂದಿಸುವ / ಕೃತಜ್ಞತೆ ಹೇಳುವ ಮಾತು ಎಷ್ಟೊಂದು ಒಪ್ಪ. ಅದಲ್ಲದೇ ಅವಂಗೆ ಒಂದರಿ ವೀಳ್ಯತಟ್ಟೆ ಮುಟ್ಟಿಸಿ ಗೌರವಿಸುವುದೂ (ಉಪಚಾರ ಕೇಳ್ವದು) ಕೂಡ.
[ಉತ್ತರುಸಿ]
ಈ ಬಟ್ಟ ಮಾವನ ಸ್ವರವ ನಮ್ಮ ಕಂಪ್ಯೂಟರಿಂಗೆ ಇಳಿಶಿಗೊಂಬದು (download ಮಾಡುದು) ಹೇಂಗೆ ಹೇಳಿ ಗೊಂತಾವುತ್ತಿಲ್ಲೆ. ಇದರಿಂದ ಮದಲೆ ನಮ್ಮ ಬೈಲಿಲ್ಲಿ ಕೊಟ್ಟ ಎಲ್ಲ ಧ್ವನಿಗಳನ್ನೂ ಒಳಿಶಿಗೊಂಡಿದೆ. ವಿವರವಾಗಿ ತಿಳಿಶಿದರೆ ಎನ್ನ ಹಾಂಗಿಪ್ಪ ಕಂಪ್ಯೂಟರು ನಿರಕ್ಷರಕುಕ್ಷಿಗೊಕ್ಕೆ (computer illiterates) ಉಪಕಾರ ಅಕ್ಕು!
[ಉತ್ತರುಸಿ]
ಹೊತ್ತುವೇಳೆ: 1 December,2011ರ 9:19 AM ಗೆ. (ಒಪ್ಪಸಂಕೊಲೆ)
ತಾಂತ್ರಿಕ ಕಾರಣ. ಗುರಿಕ್ಕಾರ್ರ ಸಂಪರ್ಕಿಸಿ.
[ಉತ್ತರುಸಿ]