Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

ಬರದೋರು :   ಬೊಳುಂಬು ಕೃಷ್ಣಭಾವ°    on   06/01/2014    3 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು
ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್ |
ಕವಿರ್ಮನೀಷೀ ಪರಿಭೂಸ್ಸ್ವಯಂಭೂರ್ಯಾಥಾತಥ್ಯऽತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||
ವಿಭಾಗ:
ಸ ಪರ್ಯಗಾತ್ ಶುಕ್ರಂ ಅಕಾಯಂ ಅವ್ರಣಂ ಅಸ್ನಾವಿರಂ ಶುದ್ಧಂ ಅಪಾಪವಿದ್ಧಮ್ |
ಕವಿಃ ಮನೀಷೀ ಪರಿಭೂಃ ಸ್ವಯಂಭೂಃ ಯಾಥಾತಥ್ಯತಃ ಅರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||
ಸರ್ವ ವ್ಯಾಪ್ತನು ದೇಹರಹಿತನು ನ್ಯೂನವಿರದವ ಜ್ಯೋತಿಯು
ಬಂಧರಹಿತನು ಪಾಪರಹಿತನು ಪೂರ್ಣಪ್ರಜ್ಞನು ಶುದ್ಧನು
ಆದಿ ರಹಿತನು ನಿಯಮಕನುಗುಣ ಜ್ಞಾನ ಸಂಪದವೀವನು ||೮||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಅದು ಎಲ್ಲವನ್ನೂ ವ್ಯಾಪಿಸಿರುತ್ತು, ತೇಜೋಮಯವಾಗಿರುತ್ತು, ರೋಗಮುಕ್ತವಾಗಿರುತ್ತು ಮತ್ತೂ ನರಮಂಡಲಂಗಳಿಂದೊಡಗೂಡಿದ ದೇಹ ಅದಾಗಿಂಡಿರುತ್ತಿಲ್ಲೆ. ಅದು  ಸ್ವಚ್ಛವಾಗಿರುತ್ತು, ಪಾಪಂಗಳಿಂದ ಮುಕ್ತವಾಗಿರುತ್ತು, ಶುದ್ಧವಾಗಿರುತ್ತು ಮತ್ತೂ ಅದು ಸ್ವಯಂವೇದ್ಯವಾಗಿರುತ್ತು. ಅದು ಎಲ್ಲೋಡಿಕ್ಕೂ ಎಲ್ಲೋರಲ್ಲಿಯೂ ಇರುತ್ತು. ಆ ಪರಮ ಚೇತನವೇ ನವಗೆ ಕವಿಯೂ ಮನೀಷಿಯೂ ಆಗಿಂಡಿಪ್ಪದು – ಸರ್ವಜ್ಞನೂ ಮನಸ್ಸಿನ ನಿಯಂತ್ರಿಸುವವನೂ ಆಗಿಂಡಿಪ್ಪದು. ಎಲ್ಲಾ ಕಾಲಲ್ಲಿಯೂದೆ (ಶಾಶ್ವತರುಗೊವಕ್ಕೆ – ಶಾಶ್ವತರಾದ ಸಂವತ್ಸರ ರೂಪದ ಪ್ರಜಾಪತಿಗೊವಕ್ಕೆ) ತಕ್ಕುದಾದ ಸಂಪದಂಗಳ ವಿಭಾಗ ಮಾಡಿಕೊಟ್ಟದೂದೆ ಆ ಚೈತನ್ಯವೇ. ಹಾಂಗೆ ಹೇಳಿರೆ ಎಲ್ಲೋರ ಇಚ್ಛೆಗಳ ಪೂರಯಿಸುತ್ಸು ಆ ಪರಮ ಪಾವನ ಚೇತನವಲ್ಲದ್ದೆ ಬೇರೆಯಲ್ಲ ಎಂಬ ಅರ್ಥ.
ದೇಹವೇ ಇಲ್ಲದ್ದ, ಪರಿಶುದ್ಧವಾದ, ರೋಗಂಗೊ ಅಂಟದ್ದ, ಆ ಪರತತ್ತ್ವಕ್ಕೆ ಮೆದುಳು ಬೇಕಾವುತ್ತಿಲ್ಲೆ, ನರಮಂಡಲಂಗೊ ಬೇಕಾವುತ್ತಿಲ್ಲೆ. ಅದು ನಮ್ಮ ಕಣ್ಣಿಗೆ ಕಾಣುವ ಬೆಚಚ್ಚಿಂಗಿಂತ ಭಿನ್ನವಾದ ವಿಶಿಷ್ಟವಾದ ಆನಂದಮಯ ಬೆಚಚ್ಚು. ಅದು ಆಥವಾ  ಆ ಪರಮ ಚೈತನ್ಯ, ಆ ವೈಚಿತ್ರ್ಯ ಎಲ್ಲದಕ್ಕೂ  ಕಾರಣಕರ್ತನಾಗಿಂಡಿದ್ದರೂ ಅದಕ್ಕೆ ಕರ್ಮಬಂಧನ ಇಲ್ಲೆ. ತಿರುತಿರುಗಿದ ಬುಗರಿ ತಿರುಗೆ(ಪುನಃ) ತಿರೆಗುರುಳಿದರೆ(ಭೂಮಿಗೆ ಉರುಳಿಯಪ್ಪಗ) ತಿರಿದುದನು (ಬೇಡಿಗೊಂಡದರ) ತೆರೆದೀವ(ತೆರೆ = ಹುಡುಕಿ, ತೆರೆದೀಯು = ಹುಡುಕಿ ಕೊಡುವದು ಎಂಬ ಅರ್ಥವಲ್ಲ, ಒಂದನ್ನೂ ಬಿಡದ್ದೆ ಎಂಬ ಭಾವ.) – ಬುಗರಿ ತಿರುಗಿದ ಹಾಂಗೆ ನಮ್ಮ ಜೀವನ. ಕರ್ಮಂಗಳ ಮಾಡಿಗೊಂಡೇ ಇರೆಕಾವುತ್ತು, ಮಾಡೆಕ್ಕಾದ ಕರ್ಮಂಗಳ ತಪ್ಪುಸಲೆ ಕ್ಷಣಕಾಲಕ್ಕೂ ಆರಿಂಗೂ ಎಡಿಯ. ಹಾಂಗೆ ತಿರುತಿರುಗಿ ಒಂದು ದಿನ ಉರುಳುವಗ ನಮ್ಮ ನಮ್ಮ  ಕರ್ಮಕ್ಕೆ ಫಲವ ಆ ಪರಮ ಚೇತನ ಕೊಡುತ್ತು.
ಒಂಬತ್ತನೆಯ ಮಂತ್ರಂದ ಮುಂದಂಗೆ ಸಾಧನೆಯ ಮಾರ್ಗದ ವಿವರಣ ಸಿಕ್ಕುತ್ತು.
~ಗೀತ~
ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ
ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ
ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ
~~~~
(ಇನ್ನೂ ಇದ್ದು)

3 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

    1. ಧನ್ಯವಾದಂಗೊ ಚೆನ್ನೈಭಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×