Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

ಬರದೋರು :   ಬೊಳುಂಬು ಕೃಷ್ಣಭಾವ°    on   18/11/2013    2 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು
ಓಂ ಈಶಾ ವಾಸ್ಯಮಿದಗ್‍ಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||೧||
ಈಶನಿಂದಾವೃತವು ಎಲ್ಲೆಡೆ ಚಲನೆಯಲ್ಲಿಹ ಜಗವಿದು
ಉಣ್ಣು ಆತನು ಇತ್ತ ತುತ್ತನು; ಬಯಸದಿರು  ಪರಸೊತ್ತನು
ಯಾರದೈಸಿರಿ? ಯಾವುದೈಸಿರಿ? ಪರಮ ಸುಖ ಪರಮಾತ್ಮನು ||೧||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಏವೊತ್ತೂ ಚಲನೆಲಿಪ್ಪ ಈ ಜಗತ್ತಿಲಿ ಇಪ್ಪದೆಲ್ಲವನ್ನೂ ಒಳಗೊಂಡವನಾದ ಒಬ್ಬ° ಇದ್ದ°. ಒಳಗೊಂಬದು ಹೇಳಿರೆ ಆವರಿಸುವದು, ಮುಚ್ಚಿಗೊಂಬದು ಹೇಳುವ ಅರ್ಥ. ಎಲ್ಲದರಲ್ಲಿಯೂ ಅವ° ಇದ್ದ°. ಅವನೇ ಜಗದೀಶ್ವರ°. ಅವ° ಕೊಟ್ಟದು ನವಗೆ. ನಮ್ಮ ದುಡಿಮೆಯ ಫಲವಾಗಿ ಬಂದದು ನಮ್ಮದು (ಅಂದಂದ್ರಾಣ ಉಪಯೋಗಕ್ಕಾಗಿ). ಹಾಂಗೆ ಬಂದ ಫಲ ಅನುಭೋಗಿಸುವದು ತಪ್ಪಲ್ಲ. ಆದರೆ ಅದರ ಮೋಹಕ್ಕೆ ತುತ್ತಾಯೆಕ್ಕಾದ್ದಿಲ್ಲೆ. ಅಂಥ ಸಂಪತ್ತು ಶಾಶ್ವತವಾಗಿ ಆರ ಸ್ವತ್ತೂ ಅಲ್ಲ. (ಅದು ಅವನದ್ದು.) ಇನ್ನೊಬ್ಬನ ಸಂಪತ್ತಿನ ಬಗೆಗೆ ವ್ಯಾಮೋಹ ತಪ್ಪು.
ಆ ಪರಮ ಪಾವನ ಚೈತನ್ಯವ ಅರುತಂಡು ನಾವು ಈ ಜಗತ್ತಿಲಿ ಬದುಕ್ಕಿ ಸಾಧಿಸೆಕ್ಕು. ಈ ಜಗತ್ತಿಲಿ ಇಪ್ಪದೆಲ್ಲವನ್ನೂ ಒಳಗೊಂಡವ° ಅವ° ಆದ ಕಾರಣ ಇ ಜಗತ್ತಿಲಿಯೇ ಅವ° ಇದ್ದ° ಹೇಳಿ ಗೊಂತಾವುತ್ತು. ಬುದ್ಧಿಂದಲೂ ಮನಸ್ಸಿಂದಲೂ ನವಗೆ ಪ್ರಾಪ್ತವಾದ ಪ್ರತಿಯೊಂದುದೇ ಅವನ ಆವಾಸಸ್ಥಾನವಾಗಿರುತ್ತು.
ನವಗೆ ಎಲ್ಲೋರಿಂಗೂ ಬಯಕೆಗೊ ಇರುತ್ತು. ಆ ಬಯಕೆಗಳ ಸಾಕ್ಷಾತ್ಕರನ ಆಯೆಕ್ಕಾರೆ ನಾವು ಸಂತತ ಪ್ರಯತ್ನ ಮಾಡೆಕ್ಕಾವುತ್ತು. ಆದರೆ ದುಃಖಂಗೊ ಬಪ್ಪದು ಹಾಂಗಲ್ಲ. ಅದು ಏವೊತ್ತಿಂಗೆ ಬೇಕಾರೂ ಬಕ್ಕು. ಆದ ಕಾರಣ ನಾವು ವೈರಾಗ್ಯಶೀಲರಾಯೆಕ್ಕು. ವೈರಾಗ್ಯ ಹೇಳಿರೆ ಇಹಲೋಕದ ನಿರಾಕರಣವಲ್ಲ. ನಮ್ಮ ಕೆಲಸಂಗಳ ನಾವು ಫಲಾಭಿಸಂಧಿ ಇಲ್ಲದ್ದೆ ಮಾಡೆಕ್ಕು. ಈ ಸಂಪತ್ತು ಶಾಶ್ವತವಾಗಿ ನಮ್ಮದಲ್ಲ; ಅದೆಲ್ಲವೂ ಅವನದ್ದು. ಅವ° ಕೊಟ್ಟದರ ಅನುಭೋಗಿಸುವಗ ಅವನತ್ರೆ ನವಗೊಂದು ಉತ್ತರವಾದಿತ್ವ ಇಪ್ಪದರ ನೆಂಪು ಮಾಡಿಗೊಳೆಕ್ಕು.
(ಇನ್ನೂ ಇದ್ದು)

2 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

  1. ದೇವರು ಕೊಟ್ಟದರಲ್ಲಿ ಚೂರು ಭಾಗವ ಅವಂಗೆ ಕೊಟ್ಟು “ಆನು ಕೊಟ್ಟೆ” ಹೇಳಿ ಜಂಭ ಪಡುವ ಮನುಷ್ಯರಿಂಗೆ ಉತ್ತಮ ಪಾಠ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×