Oppanna.com

ಕಠೋಪನಿಷತ್ -ಪಂಚಮ ವಲ್ಲೀ

ಬರದೋರು :   ಶರ್ಮಪ್ಪಚ್ಚಿ    on   13/02/2012    6 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ಪಂಚಮ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್ (ಪಂಚಮ ವಲ್ಲೀ)

ಪುರಮೇಕಾದಶದ್ವಾರಮಜಸ್ಯಾವಕ್ರಚೇತಸಃ|

ಅನುಷ್ಠಾಯ ನ ಶೋಚತಿ ವಿಮುಕ್ತಶ್ಚ ವಿಮುಚ್ಯತೇ || ಏತದ್ವೈತತ್|| ೧||

ಹಂಸಃ ಶುಚಿಷದ್ವಸುರಂತರಿಕ್ಷಸದ್ಧೋತಾ ವೇದಿಷದತಿಥಿರ್ದುರೋಣಸತ್ |

ನೃಷದ್ವರಸದೃತಸದ್ವ್ಯೋಮಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||೨||

ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ |

ಮಧ್ಯೇ ಮಾಮನಮಾಸೀನಂ ವಿಶ್ವೇ ದೇವಾ ಉಪಾಸತೇ ||೩||

ಅಸ್ಯ ವಿಸ್ರಂಸಮಾನಸ್ಯ ಶರೀರಸ್ಥಸ್ಯ ದೇಹಿನಃ |

ದೇಹಾದ್ವಿಮುಚ್ಯಮಾನಸ್ಯ ಕಿಮತ್ರ ಪರಿಶಿಷ್ಯತೇ ||ಏತದ್ವೈತತ್ ||೪||

ನ ಪ್ರಾಣೇನ ನಾಪಾನೇನ ಮರ್ತ್ಯೋ ಜೀವತಿ ಕಶ್ಚನ |

ಇತರೇಣ ತು ಜೀವಂತಿ ಯಸ್ಮಿನ್ನೇತಾವುಪಾಶ್ರಿತೌ ||೫||

ಹಂತ ತ ಇದಂ ಪ್ರವಾಕ್ಷ್ಯಾಮಿ ಗುಹ್ಯಂ ಬ್ರಹ್ಮ ಸನಾತನಮ್ |

ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ ||೬||

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ

ಸ್ಥಾಣುಮನ್ಯೇSನುಸಂಯಂತಿ ಯಥಾಕರ್ಮ ಯಥಾಶ್ರುತಮ್ ||೭||

ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ |

ತದೇವ ಶುಕ್ರಂ ತದ್ಭ್ರಹ್ಮ ತದೇವಾಮೃತಮುಚ್ಯತೇ |

ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ ||ಏತದ್ವೈತತ್||೮||

ಅಗ್ನಿರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ |

ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ||೯||

ವಾಯುರ್ಯಥೈಕೋ ಭುವನಂ ಪ್ರವಿಷ್ಟೋ ರೂಪಂ ರೂಪಂ ಪ್ರತಿರೂಪೋ ಬಭೂವ |

ಏಕಸ್ತಥಾ ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಹಿಶ್ಚ ||೧೦||

ಸೂರ್ಯೋ ಯಥಾ ಸರ್ವಲೋಕಸ್ಯಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ|

ಏಕಸ್ತಥಾ ಸರ್ವ ಭೂತಾಂತರಾತ್ಮಾ ನ ಲಿಪ್ಯತೇ ಲೋಕದುಃಖೇನ ಬಾಹ್ಯಃ ||೧೧||

ಏಕೋ ವಶೀ ಸರ್ವಭೂತಾಂತರಾತ್ಮಾ ಏಕಂ ರೂಪಂ ಬಹುಧಾ ಯಃ ಕರೋತಿ|

ತಮಾತ್ಮಸ್ಥಂ ಯೇSನುಪಶ್ಯಂತಿ ಧೀರಾಸ್ತೇಷಾಂ ಸುಖಂ ಶಾಶ್ವತಂ ನೇತರೇಷಾಮ್ ||೧೨||

ನಿತ್ಯೋSನಿತ್ಯೋನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್ |

ತಮಾತ್ಮಸ್ಥಂ ಯೇSನುಪಶ್ಯಂತಿ ಧೀರಾಸ್ತೇಷಾಂ ಶಾಂತಿಃ ಶಾಶ್ವತೀ ನೇತರೇಷಾಮ್ ||೧೩||

ತದೇತದಿತಿ ಮನ್ಯಂತೇSನಿರ್ದೇಶ್ಯಂ ಪರಮಂ ಸುಖಮ್ |

ಕಥಂ ನು ತದ್ವಿಜಾನೀಯಾಂ ಕಿಮು ಭಾತಿ ವಿಭಾತಿ ವಾ||೧೪||

ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ

ನೇಮಾ ವಿದ್ಯುತೋ ಭಾಂತಿ ಕುತೋSಯಮಗ್ನಿಃ |

ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ||೧೫||

ಕಠೋಪನಿಷತ್ (ಐದನೆಯ ವಲ್ಲಿ)-ಕನ್ನಡ ಗೀತೆ

ದೇಹದಲಿ ಹನ್ನೊಂದು ದ್ವಾರದಿ ವಾಸಿಪಾವ್ಯಯ ತೇಜನು

ಧರ್ಮ ಮಾರ್ಗದಿ ನಡೆದುಕೊಂಡರೆ ದುಃಖಭಾಗಿಯ ಆಗನು

ದೇಹದಂತ್ಯದಿ ಮುಕ್ತನಾತನು; ಈತನೇ ಜೀವಾತ್ಮನು ||೧||

ನಿರ್ಮಲಾತ್ಮನು ಚಲಿಪನೆಲ್ಲೆಡೆ ಅಂತರಿಕ್ಷದಿ ಸೂಕ್ಷ್ಮನು

ಯಾಜಿ ಯಜ್ಞದಿ ಅತಿಥಿ ಮನೆಯಲಿ ಮನುಜರೊಳಗಿಹ ದೇವನು

ಶ್ರೇಷ್ಠರಲ್ಲಿಯು ಸತ್ಯ ನಿತ್ಯನು ಮಹಿಮೆ ಹಿರಿಮೆಯ ರೂಪನು ||೨||

ಪ್ರಾಣ ಮೇಗಡೆ ಎಳೆದುಗೊಂಬನು ಕೆಳಗಪಾನವ ದೂಡುವ

ಸಕಲ ದೇವತೆ ಪೂಜ್ಯ ಸುಂದರ ಆತ್ಮ ಮಧ್ಯದಿ ನೆಲಸಿಹ ||೩||

ಕ್ರಿಯಾ ನಿರತನು ದೇಹಧಾರಿಯು ದೇಹ ತೊರೆಯುತ ನಡೆವನು

ಇವನ ವಿಷಯದಿ ಉಳಿದುದೇನಿದೆ? ಈತನೇ ಜೀವಾತ್ಮನು ||೪||

ಪ್ರಾಣದಿಂದಲಪಾನದಿಂದಲು ಮನುಜ ಬದುಕಲಸಾಧ್ಯವು

ಯಾವನಾಶ್ರಯವಿವುಗಳೆರಡಕು ಆತನಿಂದಲೆ ಜೀವವು ||೫||

ಕೇಳು, ಗೌತಮ, ಗೂಢ ಜ್ಞಾನವ ನಿತ್ಯ ಸತ್ಯ ಸನಾತನ

ಆತ್ಮ ಹೊಂದುವುದಾವ ಗತಿಯನು ದೇಹ ಹೊಂದಲು ಮರಣವ ||೬||

ದೇಹಿಗೊಂಬನು ವಿವಿಧ ಜನ್ಮವ ಕರ್ಮ ಜ್ಞಾನಕೆ ಅನುಗುಣ

ಜೀವ ಜಂತುಗಳಾಗಿ ಜನನವು; ಕೆಲವರು ಪಡೆವರು ಮೋಕ್ಷವ ||೭||

ದೇಹ ನಿದ್ರಿಸೆ ಕರ್ಮ ನಿರತನು ಆತ್ಮನೆಚ್ಚರವಿರುವನು

ಶುದ್ಧನಾತನು ಹಿರಿಯನಾತನು ಅಮರನಾತನು ಧಾತೃವು

ಮೀರಲಾತನ ಸಾಧ್ಯವಿಲ್ಲವು; ಈತನೇ ಜೀವಾತ್ಮನು||೮||

ಅಗ್ನಿ ಲೋಕದಿ ಪೊಗುತ ವಸ್ತುಗಳಂತೆ ಪಡೆವುದು ರೂಪವ

ಸರ್ವ ಪ್ರಾಣಿಗಳಲ್ಲಿ ಆತ್ಮನು ಹಾಗೆ ಒಳಗಿಹ ಹೊರಗಿಹ ||೯||

ವಾಯು ಜಗದಲಿ ಪೊಗುತ ವಸ್ತುಗಳಂತೆ ಪಡೆವುದು ರೂಪವ

ಸರ್ವ ಪ್ರಾಣಿಗಳಲ್ಲಿ ಆತ್ಮನು ಹಾಗೆ ಒಳಗಿಹ ಹೊರಗಿಹ ||೧೦||

ಸರ್ವ ಲೋಕದ ನಯನ ಸೂರ್ಯನು ಕಣ್ಣ ದೋಷಕಬಾಧ್ಯನು

ಅಂತರಾತ್ಮನು ಇದುವೆ ತೆರದಲಿ ಜಗದ ದುಃಖಕಭಾಗಿಯು ||೧೧||

ಎಲ್ಲ ಪ್ರಾಣಿಗಳಂತರಾತ್ಮನು ಪ್ರಕೃತಿಯಲಿ ಪರಮಾತ್ಮನು

ಆತ್ಮನರಿತರೆ ಸುಖವು ಶಾಶ್ವತ; ಮಿಕ್ಕ ಜನರಿಗೆ ಸಿಕ್ಕದು ||೧೨||

ನಿತ್ಯನೆಲ್ಲೆಡೆ ಜಡದಿ ಚೇತನ ಕಾಮ ಪೂರ್ಣನು ಒಂಟಿಯು

ಆತ್ಮನರಿತರೆ ಸುಖವು ಶಾಶ್ವತ; ಮಿಕ್ಕ ಜನರಿಗೆ ಸಿಕ್ಕದು ||೧೩||

ಪೇಳಲರಿಯದ ಪರಮ ಸುಖವದು ತಿಳಿವರಿಂತಿದ ಮನುಜರು

ತಾನೆ ಹೊಳೆವುದೆ? ಹೊಳೆಯುತಿರುವುದೆ ಬೇರೆ ಬೆಳಕಿನ ಪ್ರಭೆಯಲಿ ||೧೪||

ಸೂರ್ಯ ಬೆಳಗನು ಚಂದ್ರ ತಾರಕ ಮಿಂಚು ಅಗ್ನಿಯು ಬೆಳಗದು

ಬೆಳಗಲದುವೇ ಸರ್ವರದರಲಿ ಬೆಳಕುಗೊಳ್ಳುತ ಹೊಳೆವುದು||೧೫||

॥ಓಂ ಶಾಂತಿಃ ಶಾಂತಿಃ ಶಾಂತಿಃ ॥

ಷಷ್ಠ ವಲ್ಲೀ ಇನ್ನಾಣ ವಾರಕ್ಕೆ

ಚತುರ್ಥ ವಲ್ಲೀ ಗೆ ಇಲ್ಲಿ ನೋಡಿ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

6 thoughts on “ಕಠೋಪನಿಷತ್ -ಪಂಚಮ ವಲ್ಲೀ

  1. “ದೇಹಿಗೊಂಬನು ವಿವಿಧ ಜನ್ಮವ ಕರ್ಮ ಜ್ಞಾನಕೆ ಅನುಗುಣ

    ಜೀವ ಜಂತುಗಳಾಗಿ ಜನನವು; ಕೆಲವರು ಪಡೆವರು ಮೋಕ್ಷವ”
    ಬ೦ಧನ೦ದ ಬಿಡುಗಡೆ ಸಿಕ್ಕೆಕ್ಕಾರೆ ಸುಲಭ ಇದ್ದು..ಅರ್ಥಪೂರ್ಣ ಅನುವಾದ.

  2. ಗೋಪಾಲಣ್ಣನೊಟ್ಟಿಂಗೆ ನಮ್ಮದೂ ಇತ್ಲಾಗಿಂದ.

  3. ಹರೇ ರಾಮ,
    ಮೊದಲಿಂಗೆ ನಮ್ಮ ಆಂತರ್ಯಲ್ಲಿಪ್ಪ ಆ ಜೀವಾತ್ಮನ ಕಂಡುಗೊಲ್ಲೆಕ್ಕು… ನಂತರ ಅದೇ ಚೈತನ್ಯ ಎಲ್ಲ ಮನುಷ್ಯರಲ್ಲಿಯೂ,ಎಲ್ಲ ಜೀವಿಗಳಲ್ಲಿಯೂ ಇಡೀ ಜಗತ್ತಿನ ಚರಾಚರಗಳಲ್ಲಿ ಇಪ್ಪ ಚೈತನ್ಯ ಹೇಳುದರ ಅರ್ಥ ಮಾಡಿಗೊಲ್ಲೆಕ್ಕು… ಆ ಆಂತರ್ಯ ಹೇಳಿದ ಹಾಂಗೆ ನಡಕ್ಕೊಂಡರೆ ನಾವು ಧರ್ಮ ಮಾರ್ಗಲ್ಲಿ ನಡದ ಹಾಂಗೆ ಆವುತ್ತು… ಇದರಿಂದ ಎಲ್ಲೋರಿಂಗೂ ಒಳಿತಾವುತ್ತು… ಆ ಆಂತರ್ಯಕ್ಕೆ ವಿರುದ್ದವಾಗಿ ನಡಕ್ಕೊಂಡರೆ ನಾವು ಅಧರ್ಮ ಮಾರ್ಗಲ್ಲಿ ನಡದ ಹಾಂಗೆ ಆವುತ್ತು…ಆ ಚೈತನ್ಯ ಒಂದೇ ಆದ ಕಾರಣ ಅಧರ್ಮ ಮಾಡಿರೆ ನಮಗೂ,ಇತರರಿಂಗೂ ತೊಂದರೆ ಆವುತ್ತು…(ನಾವು ಬೇರೆ,ಇತರ ಜೀವಿಗ ಬೇರೆ ಹೇಳುವ ಬೇಧ ಇರುತ್ತಿಲ್ಲೇ…) ಈ ಹಾದಿಲ್ಲಿ ಮುನ್ನಡವಗ ಕೆಲವು ಸರ್ತಿ ಹೊಗಳಿಕೆ ಸಿಕ್ಕುತ್ತು, ಕೆಲವು ಸರ್ತಿ ಬೈಗುಳ ಸಿಕ್ಕುತ್ತು. ಎರಡನ್ನೂ ಅವಂಗೆ ಬಿಟ್ಟು ನಾವು ಆಂತರ್ಯ ಹೇಳಿದ ಹಾದಿಲ್ಲಿ ಮುನ್ನಡೆಕು… ಇದುವೇ ಜೀವನ… ಸುಖ,ದುಃಖಗಳ ಮೀರಿದ ಶಾಶ್ವತವಾದ ಆನಂದ…ಪರಮಾನಂದ…

  4. ತಸ್ಯ ಭಾಸಾ ಸರ್ವಮಿದಂ ವಿಭಾತಿ-ಸತ್ಯವಾದ ಮಾತು.
    ಕಠೋಪನಿಷತ್ ನಾವು ನಿತ್ಯವೂ ನೋಡುವ ಆದರೆ ಗೋಷ್ಟಿ ಮಾಡದ್ದ ವಿಷಯಂಗಳ ಹೇಳುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×