Oppanna.com

ಕಠೋಪನಿಷತ್-ಪ್ರಥಮ ವಲ್ಲೀ

ಬರದೋರು :   ಶರ್ಮಪ್ಪಚ್ಚಿ    on   16/01/2012    4 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ಪ್ರಥಮ ವಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್

(ಕೃಷ್ಣ ಯಜುರ್ವೇದೀಯ ಕಠ ಶಾಖಾ) -ಪ್ರಥಮ ವಲ್ಲೀ

ಉಶನ್ ಹ ವೈ ವಾಜಸ್ರವಸಃ ಸರ್ವವೇದಸಂ ದದೌ|

ತಸ್ಯ ಹ ನಚಿಕೇತಾ ನಾಮ ಪುತ್ರ ಅಸ ||೧||

ತಂ ಹ ಕುಮಾರಮ್ ಸತತಂ ದಕ್ಷಿಣಾಸು ನೀಯಮಾನಾಸು

ಶ್ರದ್ಧಾSSವಿವೇಶ; ಸೋSಮನ್ಯತ ||೨||

ಪಿತೋದಕಾ ಜಗ್ಧತೃಣಾ ದುಗ್ಧದೋಹಾ ನಿರಿಂದ್ರಿಯಾಃ |

ಆನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಛತಿ ತಾ ದದತ್ ||೩||

ಸ ಹೋವಾಚ ಪಿತರಂ ತತ ಕಸ್ಮೈಮಾಂ ದಾಸ್ಯಸೀತಿ|

ದ್ವಿತೀಯಂ ತೃತೀಯಂ ತಂ ಹೋವಾಚ ಮೃತ್ಯವೇ ತ್ವಾ ದದಾಮೀತಿ ||೪||

ಬಹೂನಾಮೇಮಿ ಪ್ರಥಮೋ ಬಹೂನಾಮೇಮಿ ಮಧ್ಯಮಃ|

ಕಿಂ ಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾದ್ಯ ಕರಿಷ್ಯತಿ ||೫||

ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾSಪರೇ |

ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ ||೬||

ವೈಶ್ವಾನರಃ ಪ್ರವಿಶತ್ಯತಿಥಿರ್ಬ್ರಾಹ್ಮಣೋ ಗೃಹಾನ್ |

ತಸ್ಯೈತಾಂ ಶಾತಿಂ ಕುರ್ವಂತಿ ಹರ ವೈವಸ್ವತೋದಕಮ್ ||೭||

ಆಶಾ ಪ್ರತೀಕ್ಷೇ ಸಂಗತಂ ಸೂನೃತಾಂ ಚೇಷ್ಟಾಪೂರ್ತೇ ಪುತ್ರ ಪಶೂಂಶ್ಚ ಸರ್ವಾನ್|

ಏತದ್ವೃಂಕ್ತೇ  ಪುರುಷಾಸ್ಯಾಲ್ಪಮೇಧಸೋ

ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ ||೮||

ತ್ರಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ |

ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿಮೇSಸ್ತು

ತಸ್ಮಾತ್ ಪ್ರತಿ ತ್ರೀನ್ ವರಾನ್ ವೃಣೀಷ್ಟ ||೯||

ಶಾಂತ ಸಂಕಲ್ಪಃ ಸುಮನಾ ಯಥಾ ಸ್ಯಾದ್-

ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ|

ತ್ವತ್ಪ್ರಸೃಷ್ಟಂ ಮಾSಭಿವದೇತ್ ಪ್ರತೀತ

ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ ||೧೦||

ಯಥಾ ಪುರಸ್ತಾದ್ಭವಿತಾ ಪ್ರತೀತ ಔದ್ದಾಲಕಿರಾರುಣಿರ್ಮತ್ಪ್ರಸೃಷ್ಟಃ |

ಸುಖಂ ರಾತ್ರೀಃಶಯಿತಾ ವೀತಮನ್ಯುಸ್ತ್ವಾಂದದೃಶಿವಾನ್

ಮೃತ್ಯುಮುಖಾತ್ ಪ್ರಮುಕ್ತಮ್ ||೧೧||

ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ ನ ತತ್ರ ತ್ವಂ ನ ಜರಯಾ ಬಿಭೇತಿ|

ಉಭೇ ತೀರ್ತ್ವಾ ಅಶನಾಯಾಪಿಪಾಸೇ

ಶೋಕಾತಿಗೋ ಮೋದತೇ ಸ್ವರ್ಗ ಲೋಕೇ ||೧೨||

ಸ ತ್ವಮಗ್ನಿಂ ಸ್ವರ್ಗ್ಯಮಧ್ಯೇಷಿ ಮೃತ್ಯೋ

ಪ್ರಬ್ರೂಹಿ ತಂ ಶ್ರದ್ಧಧಾನಾಯ ಮಹ್ಯಮ್|

ಸ್ವರ್ಗ ಲೋಕಾ ಅಮೃತತ್ವಂ ಭಜಂತ ಏತದ್ದ್ವಿತೀಯೇನ ವೃಣೇ ವರೇಣ ||೧೩||

ಪ್ರ ತೇ ಬ್ರಮೀಮಿ ತದು ಮೇ ನಿಬೋಧ ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್|

ಅನಂತಲೋಕಾಪ್ತಿಮಥೋ ಪ್ರತಿಷ್ಟಾಂ

ವಿದ್ದಿ ತ್ವಮೇತಂ ನಿಹಿತಂ ಗುಹಾಯಾಮ್ ||೧೪||

ಲೋಕಾದಿಮಗ್ನಿಂ ತಮುವಾಚ ತಸ್ಮೈ ಯಾ ಇಷ್ಟಕಾ ಯಾವತೀರ್ವಾ ಯಥಾ ವಾ|

ಸ ಚಾಪಿ ತತ್ ಪ್ರತ್ಯವದದ್ಯಥೋಕ್ತಮಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ ||೧೫||

ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ ವರಂ ತವೇಹಾದ್ಯ ದದಾಮಿ ಭೂಯಃ |

ತವೈವ ನಾಮ್ನಾ ಭವಿತಾSಯಮಗ್ನಿಃ

ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ ||೧೬||

ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ |

ಭ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ

ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ ||೧೭||

ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಮ್|

ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ

ಶೋಕಾತಿಗೋ ಮೋದತೇ ಸ್ವರ್ಗಲೋಕೇ ||೧೮||

ಏಷತೇSಗ್ನಿರ್ನಚಿಕೇತಃ ಸ್ವರ್ಗ್ಯೋ ಯಮವೃಣೀಥಾ ದ್ವಿತೀಯೇನ ವರೇಣ|

ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಸ್ತೃತೀಯಂ ವರಂ ನಚಿಕೇತೋ ವೃಣೀಷ್ಟ||೧೯||

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇSಸ್ತಿತ್ಯೇಕೇ ನಾಯಮಸ್ತೀತೀ ಚ್ಯೆಕೇ|

ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂ ವರಾಣಾಮೇಷ ವರಸ್ತೃತೀಯಃ ||೨೦||

ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ ನ ಹಿ ಸುವಿಜ್ಞೇಯಮಣುರೇಷ ಧರ್ಮಃ|

ಅನ್ಯಂ ವರಂ ನಚಿಕೇತೋ ವೃಣೀಷ್ಟಿ

ಮಾ ಮೋಪರೋತ್ಸೀರತಿ ಮಾ ಸೃಜೈನಮ್ ||೨೧||

ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ ತ್ವಂ ಚ ಮೃತ್ಯೋ ಯನ್ನ  ಸುಜ್ಞೇಯಮಾತ್ಥ |

ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ

ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್ ||೨೨||

ಶತಾಯುಷಃ ಪುತ್ರ ಪೌತ್ರಾನ್ ವೃಣೀಷ್ಟ ಬಹೂನ್ ಪಶೂನ್ ಹಸ್ತಿ ಹಿರಣ್ಯಮಶ್ವಾನ್|

ಭೂಮೇರ್ಮಹದಾಯತನಂ ವೃಣೀಷ್ಟ

ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ ||೨೩||

ಏತತ್ತುಲ್ಯಂ ಯದಿ ಮನ್ಯಸೇ ವರಂ ವೃಣೀಷ್ಟ ವಿತ್ತಂ ಚಿರಂಜೀವಿಕಾಂ ಚ |

ಮಹಾ ಭೂಮೌ ನಚಿಕೇತಸ್ತ್ವಮೇಧಿ ಕಾಮಾನಾಂ ತ್ವಾ ಕಾಮಭಾಜಂ ಕರೋಮಿ ||೨೪||

ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ

ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ |

ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ |

ಅಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ ನಚಿಕೇತೋ ಮರಣಂ ಮಾನುಪ್ರಾಕ್ಷೀಃ||೨೫||

ಶ್ವೋಭಾವಾ ಮರ್ತಸ್ಯ ಯದಂತತಕೈತತ್

ಸರ್ವೇಂದ್ರಿಯಾಣಾಂ ಜರಯಂತಿ ತೇಜಃ |

ಅಪಿ ಸರ್ವಂ ಜೀವಿತಮಲ್ಪಮೇವ ತವೈವ ವಾಹಾಸ್ತವ ನೃತ್ಯಗೀತೇ ||೨೬||

ನ ವಿತ್ತೇನ ತರ್ಪಣೀಯೋ ಮನುಷ್ಯೋಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ|

ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ

ವರಸ್ತು ಮೇ ವರಣೀಯಃ ಸ ಏವ ||೨೭||

ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ ಮರ್ತ್ಯಃ ಕ್ವಧಸ್ತಃ ಪ್ರಜಾನನ್|

ಅಭಿಧ್ಯಾಯನ್ ವರ್ಣರತಿಪ್ರಮೋದಾನ್

ಅತಿದೀರ್ಘೇ ಜೀವಿತೇ ಕೋ ರಮೇತ ||೨೮||

ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ ಸಾಂಪರಾಯೇ ಮಹತಿ ಬ್ರೂಹಿ ನಸ್ತತ್

ಯೋSಯಂ ವರೋ ಗೂಢಮನುಪ್ರವಿಷ್ಟೋ

ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ ||೨೯||

ಕಠೋಪನಿಷತ್ (ಕನ್ನಡ ಗೀತೆ) –ಮೊದಲೆನಯ ವಲ್ಲಿ

ವಾಜಸ್ರವಸನು ಫಲವನಾಶಿಸಿ ದಾನವೆಲ್ಲವನಿತ್ತನು

ಯಜ್ಞಗೈದನು ವಿಶ್ವಜಿತ್ತನು; ಅವನ ಮಗ ನಚಿಕೇತನು ||೧||

ಯಾಗ ಸಫಲಕೆ ಕೊಡಲು ದಕ್ಷಿಣೆ ಶ್ರದ್ಧೆ ಹೊಕ್ಕಿತು ಬುದ್ಧಿಯ

ಮುಗ್ಧ ಬಾಲಕ ಗೈದ ಚಿಂತನೆ; ಯಾವ ಕಾರ್ಯವು ಉತ್ತಮ ||೨||

ನೀರು ಹೀರದ ಹಾಲು ನೀಡದ ನಿಷ್ಪ್ರಯೋಜಕ ದನಗಳ

ದಾನ ನೀಡಲು ದಾನಿ ಪೊಗುವನು ನಂದವಿಲ್ಲದ ಲೋಕವ ||೩||

ಎಂದು ಮೆಲ್ಲನೆ ಕೇಳ್ದ ತಂದೆಯ ’ನನ್ನನೀಯುವೆ ಯಾರಿಗೆ?’

ಎರಡು ಬಾರಿಯು ಮೂರು ಬಾರಿಯು ಕೇಳೆ ನುಡಿದನು”ಮೃತ್ಯುಗೆ’ ||೪||

ನಾನು ಉತ್ತಮ ಬಹಳ ಜನರಲಿ ಮತ್ತು ಮಧ್ಯಮವಿರುತಲಿ

ಕಾರ್ಯವಾವುದು ಯಮನಿಗೀಯಲು ನನ್ನ ತಂದೆಗೆ ಇದರಲಿ ||೫||

ಹಿಂದೆ ತೋರಿದ ಮುಂದೆ ತೋರುವ ದಾರಿ ಯೋಚಿಸೆ ಎಂದಿಗು

ಸಸ್ಯದಂತೆಯೆ ಸತ್ತು ಜನಿಸುವ ನರನ ಜೀವನ ಸಂದಿತು ||೬||

(ಎಂದು ಯೋಚಿಸಿ ಮೃತ್ಯು ಲೋಕದಿ ಮೂರು ದಿನಗಳ ಕಾಯಲು)

ಅಲ್ಲಿ ನಿರಶನವಿದ್ದ ವಿಪ್ರನ ನೋಡಿ ಯಮ ತಾ ನೆನೆದನು)

ಅತಿಥಿ ಬ್ರಾಹ್ಮಣ ಅಗ್ನಿ ತೆರದಲಿ ಮನೆಯ ಪೊಗುವನು; ಎಚ್ಚರ!

ಶಾಂತಿಗೈಯಲು ಪಾದದೋದಕ ನೀಡು ತ್ವರೆಯಿಂ ಸ್ವಾಗತ ||೭||

ಕನಸು ಅಶೆಗಳಂತೆ ಸಜ್ಜನ ಸಂಗ ಸತ್ಪಲ ಪುತ್ರರು

ಸರ್ವನಾಶವ ಗೈವನಾತನು ಹಸಿದ ಬ್ರಾಹ್ಮಣ ಶತ್ರುವು ||೮||

(ತನ್ನ ತಪ್ಪನು ಮನ್ನಿಸೆನ್ನುತ ಯಮನು ಅತಿಥಿಗೆ ನುಡಿದನು)

ಮೂರು ರಾತ್ರಿಯು ಅನ್ನವುಣ್ಣದೆ ನನ್ನ ಮನೆಯೊಳ ಅತಿಥಿಗೆ

ನಮಿಪೆ ಬ್ರಾಹ್ಮಣ! ಮೂರು ವರಗಳನೀವೆ ನನ್ನಯ ಶ್ರೇಯಕೆ ||೯||

(ಶ್ರೇಯವೊಂದೇ ಮನದಿ ನೆನೆಯುತ ಮೃತ್ಯುವಿಗೆ ನಚಿಕೇತನು)

ಶಾಂತನಾಗಲಿ ತಂದೆ ಗೌತಮ ಕೋಪವಾರಲಿ ಪ್ರೀತಿಯು

ನಾನು ಮರಳಲು ಮೊದಲಿನಂತೆಯೆ ನಿನ್ನ ಬಳಿಯಿಂ ವರವಿದು ||೧೦||

(ಮುದದ ಮನದಲಿ ಯಮನು ನುಡಿದನು ಅತಿಥಿಯನು ಸಂತೈಸುತ)

ಮೃತ್ಯು ಮುಖದಿಂ ಮರಳಿ ನಿನ್ನನು ತಂದೆ ಗುರುತಿಸಿ ಹರುಷದಿ

ಕೋಪ ಹರಿಸುತ ಸುಖದ ನಿದ್ರೆಯ ನನ್ನ ದಯೆಯಿಂ ಪಡೆಯಲಿ ||೧೧||

(ಎರಡನೆಯ ವರವಿನ್ನು ಕೇಳುತ ಮೃತ್ಯುವಿಗೆ ನಚಿಕೇತನು)

ಸ್ವರ್ಗ ಲೋಕದಿ ಭಯವೆ ಇಲ್ಲದೆ ಮುಪ್ಪು ಮೃತ್ಯುವು ಕಾಣದು

ಹಸಿವೆ ದಾಹವನೆರಡಗೆಲ್ಲುತ ಶೋಕವಿರದಾನಂದವು ||೧೨||

ಮೃತ್ಯು ದೇವನೆ ಸ್ವರ್ಗದಗ್ನಿಯ ಪೇಳು ವಿಸ್ತರ ಬಗೆಯನು

ನಿಷ್ಟೆಯಿಂ ವರವ ಕೇಳ್ವೆನೆರಡನು ಉಣ್ಣಲಮೃತದ ಸುಖವನು ||೧೩||

(ಯಮನು ಆಲಿಸಿ ವಚನ ತೀರಿಸೆ ಅತಿಥಿ ಬ್ರಾಹ್ಮಣಗೆಂದನು)

ಸ್ವರ್ಗದಗ್ನಿಯ ಪೇಳುತಿರುವೆನು ಧ್ಯಾನದಿಂ ನಚಿಕೇತನೆ

ಬುದ್ಧಿಗುಹೆಯಲಿ ಪಡೆದು ಆಶ್ರಯ ಗ್ರಹಿಸು ಸ್ವರ್ಗದ ಸಾಧನೆ ||೧೪||

ಅಗ್ನಿ ಮೂಲವ ಇಡುವ ಇಟ್ಟಿಗೆ ವಿವರವರುಹಿದ ಯಾಗಕೆ

ಪಡೆದ ಉತ್ತರದಿಂದ ತುಷ್ಟನು ಮತ್ತೆ ಯಮ ನಚಿಕೇತಗೆ ||೧೫||

ಹರುಷದಿಂದಲಿ ಮರಳಿ ಪೇಳ್ದನು ವರವ ಪುನರಪಿ ನೀಡುವೆ

ನಿನ್ನ ಹೆಸರನು ಅಗ್ನಿಗಿಡುವೆನು; ಹಾರ ಬಹುವಿಧ ವೀಯುವೆ ||೧೬||

ಮೂರುಸಲ ನಚಿಕೇತ ಅಗ್ನಿಯ ಮೂರು ಸಂಧಿಯ ಕರ್ಮವ

ಗೈದು ಜಯಿಪರು ಜನ್ಮ ಮೃತ್ಯುವ ದೇವ ದಯೆಯಲಿ ಶಾಂತಿಯ ||೧೭||

ತಿಳಿದವನು ನಚಿಕೇತ ಯಜ್ಞವ ಮೃತ್ಯು ಜಯಿಪನು ಗೈಯುತ

ಶೋಕ ದಾಟುತ ಸ್ವರ್ಗ ಮಾರ್ಗದಿ ಪರಮ ಸಂತಸ ಹೊಂದುತ ||೧೮||

ಅಗ್ನಿಯಿದು ನಚಿಕೇತ ಸ್ವರ್ಗಕೆ ವರವನೆರಡಲಿ ತಿಳಿಸಿದೆ

ಅಗ್ನಿಯಿದ ನಚಿಕೇತನೆನುವರು; ಮೂರನೆಯ ವರ ನೀಡುವೆ ||೧೯||

(ಕೊನೆಯ ವರ ನಚಿಕೇತ ಕೇಳಿದ ಆತ್ಮ ತತ್ವ ವಿಚಾರವ)

ಕೆಲವರೆಂಬರು ಉಳಿವುದೆಂಬರು ಇನ್ನು ಕೆಲವರು ಉಳಿಯದು

ಸತ್ತ ನಂತರ ಸತ್ಯವಾವುದು ಮೂರನೆಯ ವರ ಕರುಣಿಸು ||೨೦||

ಮೃತ್ಯುವೆಂದನು ಧರ್ಮ ಸೂಕ್ಷ್ಮವು ದೇವತೆಗಳಿಗು ತಿಳಿಯದು

ಸೂಕ್ಷ್ಮ ತತ್ವವು ಗ್ರಾಹ್ಯ ಕ್ಲಿಷ್ಟವು; ಕೇಳು ಬೇರೆಯ ವರವನು ||೨೧||

(ಹಠವ ತೊರೆಯದೆ ಮುಗ್ಧ ಬಾಲಕ ಯಮನ ಬಳಿಯಲಿ ನುಡಿದನು)

ದೈವ ಚಿಂತನೆ ನಿಲುವಿಗೆಟಕದ ತತ್ವ ತಿಳಿಯರು ಇತರರು

ಯಮನೆ ಬೇಡುವೆ ವರವರೇಣ್ಯನೆ, ನನ್ನ ಇಷ್ಟದ ವರವಿದು ||೨೨||

(ಮನದ ದೃಢತೆಯನರಿವ ಪರಿಯಲಿ ಯಮನು ತೋರಿದ ಭೋಗವ)

ನೂರು ವರುಷವು ಪುತ್ರ ಪೌತ್ರರ ಆನೆ ಹಸುಗಳ ಹೊನ್ನನು

ಭೂರಿ ಭೂಮಿಯ ದೀರ್ಘದಾಯುವ ಸುಖದ ಬಯಕೆಗಳಾಶಿಸು ||೨೩||

ಇಷ್ಟ ಪಟ್ಟರೆ ಧನದ ರಾಶಿಯ ಚಿರದ ಜೀವನ ರಾಜ್ಯವ

ಕಾಮ ಕಾಮಿಪ ಭೋಗ್ಯವೆಲ್ಲವ ಕೇಳು ಕೊಡುವೆನು ಸಂಪದ ||೨೪||

ಭೋಗ್ಯವಾವುದು ಕಷ್ಟ ಲಭಿಸಲು ಹೇಳು ಮನಸಿನ ಇಚ್ಛೆಯ

ರಥಗಳಿಲ್ಲಿವೆ ರಮೆಯರಿಲ್ಲಿವೆ ವೀಣೆ ವಾದ್ಯವು ದುರ್ಲಭ

ನಿನ್ನ ಸೇವೆಗೆ ಸಿದ್ಧ ಬದ್ಧವು ಮರೆತು ಬಿಡು ನೀ ಮರಣವ ||೨೫||

(ಬುದ್ಧಿಯೊಳಗಡೆ ಶ್ರದ್ಧೆ ಕದಲದೆ ಪಟ್ಟು ಹಿಡಿದನು ಹುಡುಗನು)

ಅಂತ್ಯವಿರುವುದು ಕ್ಷಣಿಕ ಸುಖವದು ಸರ್ವ ಇಂದ್ರಿಯ ಹರಣವು

ಅಲ್ಪದಾಯುವು; ನೃತ್ಯಗಾನವು ನಿನ್ನೊಳಿರಲಿ ಇವೆಲ್ಲವು ||೨೬||

ಧನವನಾರ್ಜಿಸೆ ಬರದು ತೃಪ್ತಿಯು; ಧನವು ನಿನ್ನಯ ವ್ಯಾಪ್ತಿಯು

ಮನುಜ ಜೀವನ ನಿನ್ನ ದಾಸ್ಯವು; ನೀಡು ನನಗದೆ ವರವನು ||೨೭||

ಶಾಸ್ವತಾಮೃತವೊಲಿದು ಬಂದಿರೆ ಜೀರ್ಣದೇಹದ ಮನುಜನು

ದೀರ್ಘದಾಯುವು ಭೋಗ ಭಾಗ್ಯವು ಕೀಳು ಎಂಬುದ ತಿಳಿವನು ||೨೮||

ಮುಕ್ತ ಸಂಶಯದಿಂದ ಮನುಜಗೆ ಮುಕ್ತಿ ದಾರಿಯ ತೋರಿಸು

ಬೇರೆ ವರ ನಚಿಕೇತ ಕೇಳನು, ಮೃತ್ಯು ದೇವರೆ ಕರುಣಿಸು ||೨೯||

ಓಂ ಶಾಂತಿಃ ಶಾಂತಿಃ ಶಾಂತಿಃ

ದ್ವಿತೀಯ ವಲ್ಲಿ ಇನ್ನಾಣ ವಾರಕ್ಕೆ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “ಕಠೋಪನಿಷತ್-ಪ್ರಥಮ ವಲ್ಲೀ

  1. ನಚಿಕೇತನ ಹಾಂಗೆ ಹಠ ಹಿಡುದರೆ ಜೀವನ್ಮುಕ್ತಿ ಸಿಕ್ಕುಗು 🙂

  2. ಲಾಯಕ ಆಯ್ದಿದು. ಧನ್ಯವಾದ ಅಪ್ಪಚ್ಚಿಗೆ.

  3. ನಚಿಕೇತನ ಹಾಂಗೆ ಹಟ ಹಿಡಿದು ಕೇಳುವ ಗುಣ ಇಲ್ಲದ್ದರೆ ಅಧ್ಯಾತ್ಮ ಗೊಂತಾಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×