Oppanna.com

ಕಠೋಪನಿಷತ್ -ತೃತೀಯ ವಲ್ಲೀ

ಬರದೋರು :   ಶರ್ಮಪ್ಪಚ್ಚಿ    on   30/01/2012    2 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ತೃತೀಯ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~



ಕಠೋಪನಿಷತ್ (ತೃತೀಯ ವಲ್ಲೀ)

ಋತಂ ಪಿಬಂತೌ ಸುಕೃತಸ್ಯ ಲೋಕೇ ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ |

ಛಾಯಾತಪೌ ಬ್ರಹ್ಮವಿದೋ ವದಂತಿ

ಪಂಚಾಗ್ನಯೋ ಯೇ ಚ ತ್ರಿಣಾಚಿಕೇತಾಃ ||೧||

ಯಃ ಸೇತುರೀಜಾನಾನಾಮಕ್ಷರಂ ಬ್ರಹ್ಮ ಯತ್ ಪರಮ್ |

ಅಭಯಂ ತಿತೀರ್ಷತಾಂ ಪಾರಂ ನಾಚಿಕೇತಂ ಶಕೇಮಹಿ ||೨||

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು |

ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ||೩||

ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್ |

ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ||೪||

ಯಸ್ತ್ವ ವಿಜ್ಞಾನವಾನ್ ಭವತ್ಯಯುಕ್ತೇನ ಮನಸಾ  ಸದಾ|

ತಸ್ಯೇಂದ್ರಿಯಾಣ್ಯವಶ್ಯಾನಿ ದುಷ್ಟಾಶ್ವಾ ಇವ ಸಾರಥೇಃ ||೫||

ಯಸ್ತು ವಿಜ್ಞಾನವಾನ್ ಭವತಿ ಯುಕ್ತೇನ ಮನಸಾ ಸದಾ |

ತಸ್ಯೇಂದ್ರಿಯಾಣಿ ವಶ್ಯಾನಿ ಸದಶ್ವಾ  ಇವ ಸಾರಥೇಃ ||೬||

ಯಸ್ತ್ವವಿಜ್ಞಾನವಾನ್ ಭವತ್ಯಮನಸ್ಕಃ ಸದಾSಶುಚಿಃ |

ನ ಸ ತತ್ಪದಮಾಪ್ನೋತಿ ಸಂಸಾರಂ ಚಾಧಿಗಚ್ಛತಿ ||೭||

ಯಸ್ತು ವಿಜ್ಞಾನವಾನ್ ಭವತಿ ಸಮನಸ್ಕಃ ಸದಾSಶುಚಿಃ |

ಸ ತು ತತ್ಪದಮಾಪ್ನೋತಿ ಯಸ್ಮಾದ್ಭೂಯೋ ನ ಜಾಯತೇ ||೮||

ವಿಜ್ಞಾನಸಾರಥಿರ್ಯಸ್ತು ಮನಃಪ್ರಗ್ರಹವಾನ್ ನರಃ |

ಸೋSಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್ ||೯||

ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಶ್ಚ ಪರಂ ಮನಃ |

ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ ಪರಃ ||೧೦||

ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ |

ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ ||೧೧||

ಏಷ ಸರ್ವೇಷು ಭೂತೇಷು ಗೂಢೋSSತ್ಮಾ ನ ಪ್ರಕಾಶತೇ |

ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮ ದರ್ಶಿಭಿಃ ||೧೨||

ಯಚ್ಛೇದ್ವಾಙ್ಮನಸೀ ಪ್ರಾಜ್ಞಸ್ತದ್ಯಚ್ಚೇಜ್ಜ್ಞಾನ ಆತ್ಮನಿ |

ಜ್ಞಾನಮಾತ್ಮನಿ ಮಹತಿ ನಿಯಚ್ಛೇತ್ ತದ್ಯಚ್ಛೇಚ್ಛಾಂತ ಆತ್ಮನಿ ||೧೩||

ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ |

ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ

ದುರ್ಗಂ ಪಥಸ್ತತ್ ಕವಯೋ ವದಂತಿ ||೧೪||

ಅಶಬ್ದಮಸ್ಪರ್ಶಮರೂಪಮವ್ಯಯಂ ತಥಾSರಸಂ ನಿತ್ಯಮಗಂಧವಚ್ಚ ಯತ್ |

ಅನಾದ್ಯನಂತಂ ಮಹತಃ ಪರಂ ಧ್ರುವಂ

ನಿಚಾಯ್ಯ ತನ್ಮೃತ್ಯುಮುಖಾತ್ ಪ್ರಮುಚ್ಯತೇ ||೧೫||

ನಾಚಿಕೇತಮುಪಾಖ್ಯಾನಂ ಮೃತ್ಯುಪ್ರೋಕ್ತಂ ಸನಾತನಮ್ |

ಉಕ್ತ್ವಾ ಶ್ರುತ್ವಾ ಚ ಮೇಧಾವೀ ಬ್ರಹ್ಮ ಲೋಕೇ ಮಹೀಯತೇ ||೧೬||

ಯ ಇಮಂ ಪರಮಂ ಗುಹ್ಯಂ ಶ್ರಾವಯೇದ್ಬ್ರಹ್ಮಸಂಸದಿ |

ಪ್ರಯತಃ ಶ್ರಾದ್ಧಕಾಲೇ ವಾ ತದಾನಂತ್ಯಾಯ ಕಲ್ಪತೇ ||

ತದಾನಂತ್ಯಾಯ ಕಲ್ಪತ ಇತಿ ||೧೭||

ಕಠೋಪನಿಷತ್ (ಮೂರನೆಯ ವಲ್ಲಿ)-ಕನ್ನಡ ಗೀತೆ

ನಿಯಮ ನಿರತರು ಪುಣ್ಯವಂತರು ಸೇರಿ ಹೃದಯದ ಗುಹೆಯನು

ನೆರಳು ಬಿಸಿಲುಗಳಂತೆಯಿರುವರು ಜೀವನೂ ಪರಮಾತ್ಮನು ||೧||

ನಾಚಿಕೇತವು ಸೇತು ಸ್ವರ್ಗಕೆ ಪರಮ ಅಕ್ಷರ ಪದವಿದು

ಜಗವ ದಾಟಲು ಅಭಯ ಹೊಂದಲು ಇಂದು ನಾವು ಸಮರ್ಥರು ||೨||

ಆತ್ಮನೊಡೆಯನು ರಥದಿ ಕುಳಿತಿಹ ರಥ ಶರೀರವು ಸ್ಥೂಲವು

ಬುದ್ಧಿ ಸಾರಥಿ ನಡೆಸುತಿರುವನು ಮನವು ಕೈ ಕಡಿವಾಣವು ||೩||

ಇಂದ್ರಿಯಂಗಳು ಹಯಗಳೆಂಬರು ವಿಷಯ ಗಮನವೆ ಗೊಡವೆಯು

ಬೋಗಿಯೆಂಬರು ಈ ಸಮೂಹವ ದೇಹವಿಂದ್ರಿಯ ಮನವನು ||೪||

ಯೋಗವಿಲ್ಲದೆ ಜ್ಞಾನವಿಲ್ಲದೆ ಮನವು ಚಲಿಸಲು ಎಲ್ಲೆಡೆ

ವಶದಿ ಸಾರಥಿ ಇರದೆ ಇಂದ್ರಿಯ ತುಂಟ ಕುದುರೆಗಳಂತೆಯೆ ||೫||

ಯೋಗಯುಕ್ತನು ಜ್ಞಾನಯುಕ್ತನು ಮನದ ದಾರವ ಹಿಡಿಯುತ

ಇಂದ್ರಿಯಂಗಳು ವಶದಿ  ಬರುವವು ಕುದುರೆ ತೆರದಲಿ ಶಿಸ್ತಿನ ||೬||

ಜ್ಞಾನವಿರದವ ಮನದ ದಾಸನು ನಿತ್ಯ ಶುಚಿಯಿರದವನಿಗೆ

ಹೊಂದಲಾಗದು ಪರಮ ಪದವನು ಲೋಕ ಜೀವನವಾತಗೆ ||೭||

ಜ್ಞಾನ ಪಡೆದವ ಮನವ ಗೆದ್ದವ ನಿತ್ಯ ಶುಚಿಯಿರುವಾತನು

ಹೊಂದುತಿರುವನು ಪರಮ ಪದವನು ಆತನೆಂದಿಗು ಅಮರನು ||೮||

ಯಾರಿಗಿದೆ ವಿಜ್ಞಾನಿ ಸಾರಥಿ ಮನದ ಮೇಲಿನ ಹಿಡಿತವು

ಯಾತ್ರೆಯಂತಿಮ ಗುರಿಯ ಸೇರುವನದುವೆ ವಿಷ್ಣುವ ಪಾದವು ||೯||

ಇಂದ್ರಿಯಗಳಿಗು ಹಿರಿದು ವಿಷಯವು ಹಿರಿದು ವಿಷಯಕೆ ಮನವದು

ಮನಸಿಗಿಂತಲು ಹಿರಿದು ಬುದ್ಧಿಯು ಹಿರಿದು ಶ್ರೇಷ್ಠವು ಆತ್ಮವು ||೧೦||

ಮಹತ್ ಗಿಂತಲು ಹಿರಿದವ್ಯಕ್ತವು ಹಿರಿದು ಅಂತಿಮ ಪುರುಷನು

ಹಿರಿದು ಪುರುಷನಿಗಿಲ್ಲ ಯಾವುದು ಅಲ್ಲೆ ಕೊನೆಯದು ಶ್ರೇಷ್ಠವು ||೧೧||

ಸರ್ವ ಪ್ರಾಣಿಗಳಲ್ಲಿ ಅಡಗಿದ ಆತ್ಮನೆಂದಿಗು ತೋರನು

ಸೂಕ್ಷ್ಮ ಬುದ್ಧಿಯ ಸೂಕ್ಷ್ಮ ಜನರಿಂ ಧ್ಯಾನ ಸೂಕ್ಷ್ಮದಿ ಕಾಂಬನು ||೧೨||

ಪ್ರಾಜ್ಞ ಹಿಡಿಯಲಿ ಮಾತು ಮನವನು ಮತ್ತೆ ಜ್ಞಾನವ ಆತ್ಮದಿ

ತತ್ವ ಜ್ಞಾನವ ಮಹತ್ ನಲ್ಲಿಯು ಮಹತ್ ಶಾಂತದ ಆತ್ಮದಿ ||೧೩||

ಎದ್ದು ನಿಲ್ಲಿರಿ! ಕೊಳ್ಳಿರೆಚ್ಚರ!ಹೊಂದಿಕೊಳ್ಳಿರಿ ಶ್ರೇಷ್ಠರ

ಋಷಿಗಳೆನುವರು ದಾರಿ ದುರ್ಗಮ ಅಲಗಿನಂತಿದೆ ಕತ್ತಿಯ ||೧೪||

ಶಬ್ದ ಸ್ಪರ್ಶವು  ರಸವು ರೂಪವು ಗಂಧವಿಲ್ಲದೆ ಶಾಶ್ವತ

ಆದಿಯಿರದಾನಂತ ಶ್ರೇಷ್ಠನ ತಿಳಿದು ಜಯಿಪರು  ಮೃತ್ಯುವ ||೧೫||

ಮೃತ್ಯುವಿಂ ನಚಿಕೇತ ಪಡೆದಿಹ ಹಳೆಯ ಶಾಶ್ವತ ಕಥೆಯಿದು

ಹೇಳಿ ಕೇಳಿದ ಬುದ್ಧಿವಂತನು ಬ್ರಹ್ಮ ಲೋಕದಿ ಪೂಜ್ಯನು ||೧೬||

ಶುಚಿಯ ಮನದಲಿ ಬ್ರಹ್ಮ ಸದನದಿ ಪರಮ ಗೌಪ್ಯವ ಪಠಿಸಲು

ಶ್ರಾದ್ಧ ಕಾಲದಿ ಶ್ರವಣಗೊಂಡರೆ ಫಲಗಳಕ್ಷಯ ಪ್ರಾಪ್ತಿಯು ||೧೭||

||ಓಂ ಶಾಂತಿಃ ಶಾಂತಿಃ ಶಾಂತಿಃ ||

ಚತುರ್ಥ ವಲ್ಲೀ ಇನ್ನಾಣ ವಾರಕ್ಕೆ
ಫ್ರಥಮ ವಲ್ಲೀ – ಇಲ್ಲಿ ನೋಡಿ

ದ್ವಿತೀಯ ವಲ್ಲೀ – ಇಲ್ಲಿ ನೋಡಿ

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಕಠೋಪನಿಷತ್ -ತೃತೀಯ ವಲ್ಲೀ

  1. ಕಠೋಪನಿಷತ್.. ಇದು ಕಠಿಣ ಹೇಳ್ವ ಅರ್ಥಲ್ಲಿ ಆದಿಕ್ಕೋ ಈ ಹೆಸರು ಬಂದದು ಹೇಳಿ ಗ್ರೇಶಿ ಹೋತು. ಗಹನವೂ ಸ್ವಾರಸ್ಯವೂ ಆಗಿದ್ದು ಹೇಳಿ -‘ಚೆನ್ನೈವಾಣಿ’.

  2. ವಿವೇಕಾನಂದರ ಪ್ರಿಯವಾದ ವಾಕ್ಯಂಗಳ [ಉತ್ತಿಷ್ಠತ,ಜಾಗ್ರತ] ಮೂಲ ಎಲ್ಲಿ ಹೇಳಿ ಗೊಂತಾತು.
    ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×