Oppanna.com

ಕೆಲವು ಚೂರ್ಣಿಕೆಗೊ

ಬರದೋರು :   ಬಟ್ಟಮಾವ°    on   02/07/2010    28 ಒಪ್ಪಂಗೊ

ಬಟ್ಟಮಾವ°

ಎಲ್ಲೊರಿಂಗೂ ನಮಸ್ಕಾರ ಇದ್ದು!
ಅನುಪ್ಪತ್ಯದ ಎಡಕ್ಕಿಲಿ ಇತ್ಲಾಗಿ ಬಪ್ಪದು ಹೇಳಿರೆ ತಾರಕಲ್ಲಿ ರುದ್ರ ಹೇಳಿದಷ್ಟು ಕಷ್ಟದ ಕೆಲಸ.
ಆದರೂ ಒಂದರಿ ಬಂದಿಕ್ಕಿದ್ದು.
ಜೆಂಬ್ರಂಗೊಕ್ಕೆ ಚೂರ್ಣಿಕೆಗಳ ಬರದುಕೊಡಿ ಬಟ್ಟಮಾವ ಹೇಳಿದ ನಮ್ಮ ಒಪ್ಪಣ್ಣ.
ಚೂರ್ಣಿಕೆಗೊ ಬರವಲೆ ಕೂದರೆ ನೆಂಪಾಗ, ಉಂಬಲೆ ಕೂಬಗಳೇ ನೆಂಪಪ್ಪದು ಮಾಣೀ – ಹೇಳಿದೆ.
ಎಂತ ಹೇಳಿರೂ ಕೇಳಲೇ ಕೇಳ!
ಎಷ್ಟಾದರೂ ನವಗೆ ಗೊಂತಿಪ್ಪದರ ಹೇಳಿಕೊಡದ್ದೆ ಆವುತ್ತೋ!
ಇದಾ, ಎಂಗೊ ಸಣ್ಣ ಇಪ್ಪಗ ಹೇಳಿಗೊಂಡಿದ್ದ ಕೆಲವು. ಬಿಟ್ಟು ಹೋದ್ದದಿದ್ದರೆ ಸೇರುಸಿಗೊಳಿ, ಆತೋ?

(ಅನ್ನಪೂರ್ಣಾಷ್ಟಕ, ಶಂಕರಾಚಾರ್ಯ)
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ |
ನಿರ್ಧೂತಾಖಿಲ ಘೋರಪಾವನ ಕರೀ ಪ್ರತ್ಯಕ್ಷ ಮಾಹೇಶ್ವರೀ ||
ಪ್ರಾಲೇಯಾಚಲವಂಶ ಪಾವನಕರೀ ಕಾಶೀ ಪುರಾಧೀಶ್ವರೀ |
ಭಿಕ್ಷಾಂದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||

(ಗೆಣವತಿ ಸ್ತುತಿ)
ಶುಂಡಾಮಂಡಿತ ರತ್ನಪೂರ್ಣ ಕಲಶಂ ಸಿಂಹಾಸನಸ್ಥಂ ಪ್ರಭುಂ |
ಷಟ್‌ಕೋಣಾಂತ ಹಿಮಾದ್ರಿ ತನಯಾ ಸೂನುಂ ಪ್ರಸನ್ನಾನನಮ್ ||
ಲಕ್ಷ್ಮ್ಯಾಲಿಂಗಿತ ವಿಗ್ರಹಂ ತ್ರಿನಯನಂ ಭಕ್ತೇಶು ಕಲ್ಪದ್ರುಮಮ್
ಮಂತ್ರಾಧೀನ ತನುಂ ಮಹಾಗಣಪತಿಂ ವಂದೇ ಮಹೇಶಾರ್ಚಿತಂ ||

(ಶಿವಮಾನಸಪೂಜಾ)
ಆತ್ಮಾತ್ವಂ ಗಿರಿಜಾಮತಿಃ ಸಹಚರಾಃ ಪ್ರಾಣಾಃಶರೀರಂ ಗೃಹಂ |
ಪೂಜಾತೇ ವಿಷಯೋಪಭೋಗ ರಚನಾ ನಿದ್ರಾ ಸಮಾಧಿ ಸ್ಥಿತಿಃ ||
ಸಂಚಾರಃ ಪದಯೋ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾಗಿರೋ |
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||

(ರಾಮನ ಸ್ತೋತ್ರ)
ವೈದೇಹೀ ಸಹಿತಂ ಸುರದ್ರುಮತಲೇ ಹೈಮೇ ಮಹಾ ಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇವಾಚಯತಿ ಪ್ರಭಂಜನ ಸುತಂ ತತ್ವಂ ಮುನಿಭ್ಯಃ ಪರಂ |
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

 

(ಲೀಲಾಶುಕನ ಕಾವ್ಯ)
ಸಾಯಂಕಾಲೇ ವನಾಂತೇ ಕುಸುಮಿತ ಸಮಯೇ ಸೈಕತೇ ಚಂದ್ರಿಕಾಯಾಂ |
ತ್ರೈಲೋಕ್ಯಾಕರ್ಷಣಾಂಗಂ ಸುರುನರ ಗಣಿಕಾ ಮೋಹನಾಪಾಂಗಮೂರ್ತಿ |
ಸೇವ್ಯಂ ಶೃಂಗಾರ ಭಾವೈಃ ನವರಸ ಭರಿತೈಃ ಗೋಪಕನ್ಯಾ ಸಹಸ್ರೈಃ
ವಂದೇಹಂ ರಾಸಕೇಲೀರತ ಅತಿಸುಭಗಂ ಪಶ್ಯ ಗೋಪಾಲಬಾಲಮ್ ||

ಕಸ್ತೂರೀ ತಿಲಕಂ ಲಲಾಟಫಲಕೇ ವಕ್ಷಸ್ಥಲೇ ಕೌಸ್ತುಭಂ |
ನಾಸಾಗ್ರೇ ನವಮೌಕ್ತಿಕಂ ಕರತಲೇವೇಣುಂ ಕರೇ ಕಂಕಣಮ್ ||
ಸರ್ವಾಂಗೇ ಹರಿಚಂದನಂ ಚ ಕಲಯನ್ ಕಂಠೇಚ ಮುಕ್ತಾವಲೀ |
ಗೋಪಸ್ತ್ರೀ ಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾಮಣೀ ||

ಪಕ್ಕನೆ ಒಂದೇ ಸರ್ತಿಗೆ ಎಲ್ಲ ನೆಂಪಾಗದ್ದಕ್ಕೆ, ನಿದಾನಕ್ಕೆ UGG Stiefeletten günstig ಒಂದೊಂದೇ ಸೇರುಸುವೊ, ಆಗದೋ?
ನಿಂಗೊಗೆ ನೆಂಪಾದ್ದರ ಹೇಳಿಕ್ಕಿ!
ಹ್ಮ್, ರಜಾ ಅಂಬೆರ್ಪು!
ಇಂದಿರುಳಿಂಗೆ ಗುರುವಾಯನಕೆರೆಗೆ ಎತ್ತೆಕ್ಕು, ನಾಳೆ ಗ್ರಾಶಾಂತಿ!
ಅಕ್ಕಂಬಗ, ಹಂತಿಲಿ ಕಾಂಬೊ°.
~
ನಿಂಗಳ,
ಬಟ್ಟಮಾವ°

28 thoughts on “ಕೆಲವು ಚೂರ್ಣಿಕೆಗೊ

  1. ಕೆಲವು ಶುಭಾಷಿತ ಶ್ಲೋಕಂಗಳ ಚೂರ್ಣಿಕೆಲಿ ಬತ್ತಾಂಗೆ ಮಾಡೆಕು ಭಟ್ತಮಾವ. ಎಲ್ಲಾ ಕಡೆ ಒಂದೇ ಹಾಂಗಿರ್ತು ಬಾರದ್ದೆ ಅಪರೂಪದ ಮತ್ತು ಸ್ವಾರಸ್ಯದ ಹಲವು ಶ್ಲೋಕಂಗೋ ಇದ್ದನ್ನೇ ( ಎನಗೆ ಗೊಂತಿಲ್ಲೇ- ಎಡೆ ಎಡೆಲಿ ಕೆಲವು ದಿಕ್ಕೆ ಕೇಳುತ್ತು -ಖುಷಿಯಾವ್ತು) ಅದು ಪ್ರಚಲಿತಕ್ಕೆ ಬರೆಕು ಹೇಳಿ ಆಶಯ.

  2. ಇನ್ನೂ ಬೇಕು ಯೆಂಗೊಗೆ ಭಟ್ಟ ಮಾವ
    ಯೆವುತ್ತು ನಿಂಗೋಗೆ ಬಿಡುವು ಸಿಕ್ಕುಗು ಕಾದೊಂಡಿದ್ದೆಯೋ.

  3. Ee choornike heenge intha raagalle haadekku heli idda? Yaradru haadidre mp3 upload maadidre engalu kalile sulabha aavthu alda?

  4. nagegaarana haadilli kone saalu appachi aliyan surudungu heli kelida nempu.
    haange uuta aada melana ondu sloka eddu bhatta mavanatre hellaga andare helutte.ningo heleyi helta dairyalli barette.darburasya bhayam naasti tasso mahaa paapaha nishabdo prana sankataa…. bhojananthe madya madye bhara bharaa..
    uttara ningoge gontaagikkallado.

  5. ಅಪ್ಪಚ್ಹಿ ಅಳಿಯಂಗೆ ಸೊಪ್ಪಿನ ಮೇಲಾರ
    ಅಪ್ಪಚ್ಚಿ ಅಳಿಯಂಗೆ ಸೊಪ್ಪಿನ ಮೇಲಾರ
    ಹುಲ್ಲಕ್ಕಿ ಅಶನ ಕಸಂಟೆಣ್ಣೆ |
    ಹುಲ್ಲಕ್ಕಿ ಅಶನ ಕಸಂಟೆಣ್ಣೆ ಬಳಿಸಿದರೆ
    ಅಪ್ಪಚ್ಚಿ ಅಳಿಯ° ಉಂಡೇಳುಗು ||

    1. ಅಪ್ಪೋ ನಗೆಗಾರ,
      ಇದರ ಯಾವ ರಾಗಲ್ಲಿ ಹಾಡಿದ್ದು?:) 🙂

  6. ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
    ಶಂಖಪ್ರಭಶ್ಚ ನಿಧನಶ್ಚ ಗವೀಶಯಾನ:
    ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
    ಆದ್ಯಕ್ಷರ ರಹಿತೋ ಸಹಿತೋಪಿ ದೇವ:

  7. ಭಾವಯ್ಯ, ಇದೆಲ್ಲಾ ಬೈಪ್ಪಣೆ ಚೂರ್ಣಿಕೆ ಅಲ್ಲದೋ. ಹಂತಿಲಿ ಕೂದು ಪಾಯಸ ಸುರಿವಗ ನಿತ್ಯಾನಂದಕರಿಯೇ ಸರಿ…

    1. ಎ೦ತದೇ ಹೇಳಿ ಭಾವಯ್ಯ.. ನಿ೦ಗೊ ಭಾಮಿನಿಲಿ ರಜ ಬಲವೇ…
      ಭಾರೀ ಲಾಯಿಕ ಆಯಿದು…

  8. ಕನ್ನಡದ ಒಂದು ಭಾಮಿನಿ ಷಟ್ಪದಿ ನೆನಪ್ಪಾತು..
    ಸಿಟಿಯ ಬಸ್ಸಲಿ ನಿಂತು ಪಯಣಿಸೆ
    ಬೂಟುಗಾಲ ಮಹಾನುಭಾವನು
    ಮೆಟ್ಟಿ ಕಾಲನು ಕ್ಷಮಿಸಿರೆನ್ದನು ನೋಡಲಿಲ್ಲೆನುತಾ
    ಕೆಟ್ಟನೈ ನೋಡದೆಲೆ ಈತನು
    ಇಷ್ಟು ತುಳಿದನು ನೋಡಿದರೆ ಇ
    ನ್ನೆಷ್ಟನರ್ಥವೋ ಎನುತ ಕಾಲನು ಹಿಂದಕೆಳಕೊಂಡೆ.

    1. ವಾ ವಾ ವಾ.. ಭಾರೀ ಪಷ್ಟಾಯಿದು, ಬಾಳೆಹಣ್ಣು ಪ್ರತಮದ ಹಾಂಗೆ 🙂
      { ನ್ನೆಷ್ಟನರ್ಥವೋ ಎನುತ ಕಾಲನು ಹಿಂದಕೆಳಕೊಂಡೆ. }
      ವೊ – ಹೃಸ್ವ ಆಯೆಕ್ಕಡ ಅಲ್ಲದೋ ಮುಳಿಯಭಾವಯ್ಯಾ?
      ಅಕೇರಿಯಾಣ ಗೆರೆಲಿ 3-4-3-4-3-4-2 – ಹೀಂಗೆ ಬರೆಕ್ಕು ಹೇಳಿ ನೆಲ್ಲಿಕಳಯ ಕನ್ನಡವಂಡಿತರು ಹೇಳಿತ್ತಿದ್ದವು. 😉
      ಮತ್ತೆ ಸರೀ ಅರಡಿಯ ನವಗೆ!

      1. ಭಾವಯ್ಯಾ..ರಜಾ ಅಡ್ಜಸ್ಟ್ ಮಾಡ್ರೀ..

      2. ಮುಳಿಯ ಬಾವಾ ಓದುಲೆ ಪಷ್ಟಾಯಿದು. ಜಾಸ್ತಿ ನವಗರಡಿಯ.. ಮಾಷ್ಟ್ರುಮಾವನ ಸಣ್ಣ ಮಗನ ಮದುವೆಲಿ ಇದರ ಹೇಳೆಕ್ಕಡ ನಿಂಗೊ.. ತಂಗೆ ಹೇಳಿಯೊಂಡಿತ್ತು..

    2. ಇದು ಆರು ಬರೆದ್ದು? ಅ.ರಾ.ಮಿತ್ರನೊ?

  9. bhatta mavana ”kelavu choornikego”bhari laikaatu baraddu.
    ningala biduvilladda samayallu purusottu maadi baraddakke kushi aatu.
    idara bhattakkala baindale kelule kushi allado bhatta mava.innu malegala aadaru purusottille.aati tingalu bandare durga namaskara adu bitre innondu hange karya krama irtallada.ningoge shishyavarga sumaru iddanne.ninga yava manetanakke
    seridavu heli gontaidillenne.manjalagiriyo pallatadkavo kayaravo barlayabetto
    ummappa bhatta mava sikkuvagale kelutte.antu karyakramangala chendakke madsigondu bannishishyavargadavakke preeti irali good luck.

  10. ಶಿವಮಾನಸಪೂಜಾದ ಒಳುದ ಶ್ಲೋಕ೦ಗೋ…
    http://www.shaivam.org/ska.htm ೦ದ ತೆಕ್ಕೊ೦ಡದು..
    ರತ್ನೈಃ ಕಲ್ಪಿತಮಾಸನ೦ ಹಿಮಜಲೈಃ ಸ್ನಾನ೦ ಚ ದಿವ್ಯಾ೦ಬರ೦
    ನಾನಾರತ್ನವಿಭೂಷಿತ೦ ಮೃಗಮದಾಮೋದಾ೦ಕಿತ೦ ಚ೦ದನ೦ |
    ಜಾಜೀಚ೦ಪಕ ಬಿಲ್ವಪತ್ರರಚಿತ೦ ಪುಷ್ಪ೦ ಚ ಧೂಪ೦ ತಥಾ
    ದೀಪ೦ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತ೦ ಗೃಹ್ಯತಾ೦ ||೧||
    ಸೌವರ್ಣೇ ನವರತ್ನಖ೦ಡರಚಿತೇ ಪಾತ್ರೇ ಘೄತ೦ ಪಾಯಸ೦
    ಭಕ್ಷ್ಯ೦ ಪ೦ಚವಿಧ೦ ಪಯೋದಧಿಹಿತ೦ ರ೦ಭಾಫಲ೦ ಪಾನಕ೦ |
    ಶಾಕಾನಾಮಯುತ೦ ಜಲ೦ ರುಚಿಕರ೦ ಕರ್ಪೂರ ಖ೦ಡೊಜ್ವಲ೦
    ತಾ೦ಬೂಲ೦ ಮನಸಾಮಯಾ ವಿರಚಿತ೦ ಭಕ್ತ್ಯಾ ಪ್ರಭೋ ಸ್ವೀಕುರು ||೨||
    ಛತ್ರ೦ ಚಾಮರಯೋರ್ಯುಗ೦ ವ್ಯಜನಕ೦ ಚಾದರ್ಶಕ೦ ನಿರ್ಮಲ೦
    ವೀಣಾಭೇರಿಮೃದ೦ಗಕಾಹಲಕಲಾ ಗೀತ೦ ಚ ನೃತ್ಯ೦ ತಥಾ |
    ಸಾಷ್ಟಾ೦ಗ೦ ಪ್ರಣತಿ ಸ್ತುತಿರ್ಬಹುವಿಧಾ ಏತತ್ಸಮಸ್ತ೦ ಮಯಾ
    ಸ೦ಕಲ್ಪೇನ ಸಮರ್ಪಿತ೦ ತವ ವಿಭೋ ಪೂಜಾ೦ ಗೃಹಾಣ ಪ್ರಭೋ ||೩||
    ಕರಚರಣಕೃತ೦ ವಾ ಕಾಯಜ೦ ಕರ್ಮಜ೦ ವಾ
    ಶ್ರವಣನಯನಜ೦ ವಾ ಮಾನಸ೦ ವಾಪರಾಧ೦ |
    ವಿಹಿತಮವಿಹಿತ೦ ವಾ ಸರ್ವಮೇತತ್ಕ್ಷಮಸ್ವ
    ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶ೦ಭೋ ||೫||
    ಇತಿ ಶ್ರೀಮದ್ ಶ೦ಕರಾಚಾರ್ಯ ವಿರಚಿತ ಶಿವಮಾನಸಪೂಜಾ ಸಮಾಪ್ತ೦

  11. ಬಟ್ಟ ಮಾವ ಕೊಟ್ಟ ಚೂರ್ಣಿಕಗಳ ನೋಡಿ ಸಂತೋಷ ಆತು. ಇನ್ನೂ ಹೀಂಗಿಪ್ಪ ಚೂರ್ಣಿಕಗಳ ಕೊಡಿ ಮಾವ!

  12. ಕೆಲವು ಚೂರ್ಣಿಕಗೊ ನಮ್ಮ ಹವ್ಯ ಭಾಷೆಲಿ ಇದ್ದು. ಬಿಲ್ಲಂಪದವು ನಾರಾಯಣ ಭಟ್ರಿಂಗೆ ಗೊಂತಿದ್ದು.

    1. ಹವ್ಯಕ ಚೂರ್ಣಿಕೆಗಳನ್ನು ಬರದಿದ್ದರೆ ಒಳ್ಳೆದಿತ್ತು . ಕಲ್ತು ಹೇಳುಲಕ್ಕನ್ನೇ.. ಹಾಂಗೆ ಕನ್ನಡದ ಸೋಮೇಶ್ವರ ಶತಕ , ಕುವೆಂಪುವಿನ “ಗಿಳಿಯ ಮರಿಯನು ತಂದು ” ಪದ್ಯವನ್ನು ಹೇಳ್ತವು . ಕೆಳುಲೇ ಕೊಶಿಯಪ್ಪ ಅರ್ಥಪೂರ್ಣ ಪದಂಗಳೂ ಮೊದಲು ಜೆಮ್ಬರಂಗಳಲ್ಲಿ ಕೆಳುಲೇ ಸಿಕ್ಯೊಂಡಿತ್ತು. ಈಗ ಆರಿಂಗೂ ಪುರುಸೋತ್ತಿಲ್ಲೇ ! ಎಲ್ಲರೂ ಹೇಳುದು “ಟೈಮಿಲ್ಲ ರೀ. ನಂಗೆ ಟೈಮಿಲ್ಲಾರಿ ನಂಗೆ ಟೈಮಿಲ್ಲ ಟೈಮಿಲ್ಲ ಟೈಮಿಲ್ಲ !”

  13. ಈಗ ಬಫ಼ೆ ಊಟ ಸುರು ಆದ ಮತ್ತೆ ನಮ್ಮ ಕ್ರಮಂಗೊ ಎಲ್ಲ ಒಂದೊಂದೆ ಕಮ್ಮಿ ಆಉತ್ತಾ ಇದ್ದು. ಊಟ ದಕ್ಷಿಣೆ, ಚೂರ್ಣಿಕೆ ಎಲ್ಲ ಮಾಯ ಆಉತ್ತಾ ಇದ್ದು.

  14. ಬಟ್ಟ ಮಾವಾ°.., ಅಂತೂ ಅಂಬೇರ್ಪಿನ ಎಡೆಲಿ ಬೈಲಿಂಗೆ ಬಂದು ರಜ್ಜ ಚೂರ್ಣಿಕೆಗಳ ಹೇಳಿ ಕೊಟ್ಟು ಹೋದಿಯನ್ನೇ… ಧನ್ಯವಾದಂಗ… ಆದರೆ ಇದು ಸಾಲ ಇದಾ…. ಎಂತಕ್ಕೆ ಹೇಳಿರೆ, ನಾಳ್ದು, ಮಾಷ್ಟ್ರು ಮಾವನ ಸಣ್ಣ ಮಗನ ಸಟ್ಟು ಮುಡಿಗೆ ಅಪ್ಪಗ ಬೈಲಿನವು ಎಲ್ಲಾ ಸೇರುವಾಗ ಒಬ್ಬೊಬ್ಬಂಗೆ ಒಂದೊಂದಾರೂ ಹೇಳಲೇ ಸಿಕ್ಕೆಕ್ಕನ್ನೇ… ಅದಕ್ಕೆ ರಜ್ಜ ಸಮಯ ಇದ್ದು.. ಅದರ ಎಡಕ್ಕಿಲಿ ಎಂಗೊಗೆ ಇನ್ನುದೆ ರಜ್ಜ ಚೂರ್ಣಿಕೆಗಳ ಹೇಳಿ ಕೊಡಿ ಆತಾ? ಬೈಲಿನ ಮರ್ಯಾದಿ ಹೋಪಲೆ ಎಡಿಯ ಇದಾ ಹಾಂಗೆ!!!!

  15. ಬಟ್ಟಮಾವ, ಸುಮಾರು ಸಮಯಂದ ಕಾದುಗೋಂಡಿತ್ತಿದ್ದೆ,, ಚೂರ್ಣಿಕೆಯ ಇಲ್ಲಿ ಬರದ್ದಕ್ಕೆ 🙂 ಧನ್ಯವಾದಂಗೊ.. ಆನುದೆ ರಜ ಪ್ರಯತ್ನ ಮಾಡಿದೆ.. 🙂 ಹಂತಿಲಿ ಹೇಳಿರೆ ಕೂದವು ಎಲ್ಲ ಗೋವಿಂದ ಹೇಳೆಕ್ಕಾರೆ ಮೊದಲೇ ಓಡಿದರೆ ಕಷ್ಟ,, ಎನ್ನ ಕೋಗಿಲೆ ಕಂಠವ ಕೇಳಿ,, 🙂 ಹಾಂಗಾಗಿ ಬೆಶಿನೀರಕೊಟ್ಟಗೆಲಿ ಮಾತ್ರ ಹೇಳುದು ಆನು . … 🙂

  16. ಲೇಖನ ತುಂಬಾ ಲಾಯ್ಕ ಆಯ್ದು ಒಪ್ಪಣ್ಣ 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×