ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿತೆಕ್ಕುಂಜ ಕುಮಾರ ಮಾವ°ಪವನಜಮಾವಚೆನ್ನೈ ಭಾವ°ಎರುಂಬು ಅಪ್ಪಚ್ಚಿಸರ್ಪಮಲೆ ಮಾವ°ಶೇಡಿಗುಮ್ಮೆ ಪುಳ್ಳಿಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಬೊಳುಂಬು ಮಾವ°ಮಂಗ್ಳೂರ ಮಾಣಿಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಕೇಜಿಮಾವ°ಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಯೇನಂಕೂಡ್ಳು ಅಣ್ಣಪೆಂಗಣ್ಣ°ಕಳಾಯಿ ಗೀತತ್ತೆಸುಭಗಗೋಪಾಲಣ್ಣಮುಳಿಯ ಭಾವವಿದ್ವಾನಣ್ಣದೊಡ್ಡಭಾವಡಾಮಹೇಶಣ್ಣಶ್ಯಾಮಣ್ಣಅನು ಉಡುಪುಮೂಲೆವೇಣಿಯಕ್ಕ°ಡೈಮಂಡು ಭಾವಅಕ್ಷರ°ವೇಣೂರಣ್ಣದೀಪಿಕಾಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆದೇವಸ್ಯ ಮಾಣಿಪೆರ್ಲದಣ್ಣಶ್ರೀಅಕ್ಕ°ಪುತ್ತೂರುಬಾವಗಣೇಶ ಮಾವ°ಬಟ್ಟಮಾವ°ಒಪ್ಪಕ್ಕಪುಟ್ಟಬಾವ°ಶುದ್ದಿಕ್ಕಾರ°ಶಾಂತತ್ತೆಮಾಷ್ಟ್ರುಮಾವ°ಸಂಪಾದಕ° (editor)ಜಯಶ್ರೀ ನೀರಮೂಲೆಚೂರಿಬೈಲು ದೀಪಕ್ಕಡಾಗುಟ್ರಕ್ಕ°ಬಲ್ನಾಡುಮಾಣಿಚುಬ್ಬಣ್ಣಕಾವಿನಮೂಲೆ ಮಾಣಿದೊಡ್ಡಮಾವ°ನೀರ್ಕಜೆ ಮಹೇಶನೆಗೆಗಾರ°ಪುತ್ತೂರಿನ ಪುಟ್ಟಕ್ಕಅಕ್ಷರದಣ್ಣ


ಮಹತೋ ಮಹೀಯಾನ್

November 14, 2011 ರ 6:00 amಗೆ ನಮ್ಮ ಶರ್ಮಪ್ಪಚ್ಚಿ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ಮಹತೋ  ಮಹೀಯಾನ್ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಮಹತೋ  ಮಹೀಯಾನ್

(ಮಹಾನಾರಾಯಣೋಪನಿಷತ್ ನ ಸುರುವಾಣ ಏಳು ಮಂತ್ರಂಗೊ)

ಅಂಭಸ್ಯ ಪಾರೇ ಭುವನಸ್ಯ ಮಧ್ಯೆ ನಾಕಸ್ಯ ಪೃಷ್ಟೇ ಮಹತೋ ಮಹೀಯಾನ್|

ಶುಕ್ರೇಣ ಜ್ಯೋತಿಗ್ಂಷಿ ಸಮನುಪ್ರವಿಷ್ಟಃ ಪ್ರಜಾಪತಿಶ್ಚರತಿ ಗರ್ಭೇ ಅಂತಃ ||೧||

ಯಸ್ಮಿನ್ನಿದಗ್ಂ ಸಂ ಚ ವಿಚೈತಿ ಸರ್ವಂ ಯಸ್ಮಿನ್ದೇವಾ ಅಧಿ ವಿಶ್ವೇ ನಿಷೇದುಃ |

ತದೇವ ಭೂತಂ ತದು ಭವ್ಯ ಮಾ ಇದಂ ತದಕ್ಷರೇ ಪರಮೇ ವ್ಯೋಮನ್ ||೨||

ಯೇನಾವೃತಂ ಖಂ ಚ ದಿವಂ ಮಹೀಂ ಚ ಯೇನಾದಿತ್ಯಸ್ತಪತಿ ತೇಜಸಾ ಬ್ರಾಜಸಾ ಚ |

ಯಮಂತ ಸ್ಸಮುದ್ರೇ ಕವಯೋ ವಯಂತಿ ಯದಕ್ಷರೇ ಪರಮೇ ಪ್ರಜಾಃ ||೩||

ಯತಃ ಪ್ರಸೂತಾ ಜಗತಃ ಪ್ರಸೂತೀ ತೋಯೇನ ಜೀವಾನ್ಪೃಚಸರ್ಜ ಭೂಮ್ಯಾಮ್ |

ಯದೋಷಧೀಭಿಃ ಪುರುಷಾನ್ ಪಶೂಗ್ ಶ್ಚ ವಿವೇಶ ಭೂತಾನಿ ಚರಾಚರಾಣಿ ||೪||

ಅತಃ ಪರಂ ನಾನ್ಯದಣೀಯಸಗ್ಂ ಹಿ ಪರಾತ್ಪರಂ ಯನ್ಮಹತೋ ಮಹಾಂತಮ್ |

ಯದೇಕಮವ್ಯಕ್ತ ಮನಂತರೂಪಂ ವಿಶ್ವಂ ಪುರಾಣಂ ತಮಸಃ ಪರಸ್ತಾತ್ ||೫||

ತದೇವರ್ತಂ ತದುಸತ್ಯಮಾಹುಸ್ತದೇವ ಬ್ರಹ್ಮ ಪರಮಂ ಕವೀನಾಮ್ |

ಇಷ್ಟಾಪೂರ್ತಂ ಬಹುಧಾ ಜಾತಂ ಜಾಯಮಾನಂ ವಿಶ್ವಂ ಭಿಭರ್ತಿ ಭುವನಸ್ಯ ನಾಭಿಃ ||೬||

ತದೇವಾಗ್ನಿಸ್ತದ್ವಾಯುಸ್ತಥ್ಸೂರ್ಯಸ್ತದು ಚಂದ್ರಮಾಃ |

ತದೇವ ಶುಕ್ರಮಮೃತಂ ತದ್ಬ್ರಹ್ಮತದಾಪಸ್ಸ ಪ್ರಜಾಪತಿಃ ||೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಮಹಿಮಾತಿ ಮಹಿಮ (ಕನ್ನಡ ಗೀತೆ)

ಪಾರವರಿಯದ ಕಡಲ ನೀರಲಿ ಭೂಮಿ ಮಧ್ಯದಿ ಸ್ವರ್ಗ ದಾಚೆ |

ಮಹಿಮೆ ಹಿರಿಮೆಯ ಬ್ರಹ್ಮ ನೆಲಸಿಹ ಜೀವ ಚೈತನ್ಯಗಳನು ತುಂಬಿ |

ಬೀಜ ರೂಪದಿ ಜ್ಯೋತಿ ಬೆಳಗುತ ಅಂತರಾತ್ಮನು ಮೆರೆವನೊಳಗೆ ||೧||

ವಿಶ್ವದೆಲ್ಲೆಡೆ ಸೃಷ್ಟಿಲಯಪಿತ ದೇವತೆಗಳನು ಪೊರೆವ ಶಕ್ತಿ |

ಹಿಂದೆ ಮುಂದೆಯು ಎಂದಿಗೆಂದಿಗು ಅದುವೆ ಅಕ್ಷರ ವ್ಯೋಮ ರೂಪಿ ||೨||

ವ್ಯಾಪ್ತನಾತನು ಸರ್ವ ದಿಶೆಯಲಿ ಭೂಮಿ ಸ್ವರ್ಗಗಳಲ್ಲು ಮಧ್ಯೆ|

ಸೂರ್ಯನುರಿವನು ಬೆಳಕನೀವನು; ಮುನಿಯ ಹೃದಯಾಕಾಶದಲ್ಲಿ |

ಬಂಧಗೊಳುವನು ಧ್ಯಾನಗೈಯಲು; ಅವನೆ ಅಕ್ಷರ ಪ್ರಜಾಪತಿಯು ||೩||

ಪ್ರಕೃತಿಯಾತನ ಮೊದಲ ಸೃಷ್ಟಿಯು; ಪಂಚ ಭೂತಗಳಿಂದ ಜನನ |

ವನದ ಔಷಧಿ, ಪ್ರಾಣಿ, ಮನುಜರ, ಚರಾಚರಗಳ ಪ್ರಾಣ ತುಂಬಿ ||೪||

ಶ್ರೇಷ್ಠರಲ್ಲಿಯು ಶ್ರೇಷ್ಠನಾತನು ಒಬ್ಬನಲ್ಲದೆ ಇಬ್ಬರಲ್ಲ |

ವ್ಯಕ್ತಗೊಳ್ಳದೆ ರೂಪನಂತದಿ ವಿಶ್ವವ್ಯಾಪ್ತನು ಪೂರ್ವದಿಂದ |

ಕತ್ತಲಾಚೆಗೆ ಉತ್ತಮೋತ್ತನು ಅಣುಗಳಿಂದಲು ಸಣ್ಣಗಿಹನು ||೫||

ಧರ್ಮವದುವೇ ಸತ್ಯವದುವೇ ಪರಮ ಬ್ರಹ್ಮನು ಅದುವೆಯೆಂದು |

ಪೇಳ್ವರೆಲ್ಲರು ಜ್ಞಾನವಂತರು ಪೂಜ್ಯ ಋಷಿಗಳು ಘೋಷಿಸಿಹರು |

ಧರೆಯ ಧರಿಸಿದ ನಾಭಿಯದುವೇ, ಮುಂದೆ ಹಿಂದೆಯು ಇರುವುದದುವೆ ||೬||

ಅಗ್ನಿಯದುವೇ ವಾಯುವದುವೇ ಸೂರ್ಯನದುವೇ ಚಂದ್ರ ಕೂಡ

ಶುಕ್ರವದುವೇ ಅಮೃತವದುವೇ ಜಲವು ಅದುವೇ ಪ್ರಜಾಪತಿಯು ||೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
ಮಹತೋ  ಮಹೀಯಾನ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

ಮಹತೋ ಮಹೀಯಾನ್, 5.0 out of 5 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶರ್ಮಪ್ಪಚ್ಚಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: 0 (from 0 votes)

    ಈ ಕಂತೂ ಲಾಯಕ ಆಯ್ದು. ಧನ್ಯವಾದ ಅಪ್ಪಚ್ಚಿಗೆ.

    [ಉತ್ತರುಸಿ]

  2. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: 0 (from 0 votes)

    ಧನ್ಯವಾದ ಅಪ್ಪಚ್ಚಿ… ಆನು ಹರೇ ರಾಮದ ಸಹಾಯಂದ, ಗುರುಗಳ ಅಶೀರ್ವಾದಂದ ದೇವರು ಹೇಳಿರೆ ಎಂತರ,ಹೇಂಗೆ ಹೇಳಿ ತಿಳುಕ್ಕೊಂಬಲೇ ಪ್ರಯತ್ನ ಪಡುತ್ತಾ ಇದ್ದೆ. ತಿಳುಕ್ಕೊಂದಷ್ಟೂ ಎನಗೆ ಏನೂ ಗೊಂತಿಲ್ಲೇ ಹೇಳಿ ಅನ್ನಿಸುತ್ತು… ಆದರೆ ಕಲಿವಲೆ ಮಾಂತ್ರ ತುಂಬಾ ಆಸಕ್ತಿದಾಯಕವಾದ ವಿಷಯ… ಸಂಸ್ಕ್ರುತಲ್ಲಿ ಅರ್ಥ ಮಾಡಿಗೊಮ್ಬಷ್ಟು ಜ್ಹಾನ ಎನಗಿಲ್ಲೇ… ಕನ್ನಡ ಅನುವಾದ ಓದುವಾಗ “ಅಪ್ಪಪ್ಪು ದೇವರು ಹೀಂಗೆ ಇಪ್ಪದು” ಹೇಳಿ ಅನ್ನಿಸುತ್ತು.

    [ಉತ್ತರುಸಿ]

  3. ಕೃಷ್ಣ ಭಟ್, ಶೇಡಿಗುಮ್ಮೆ
    VA:F [1.9.3_1094]
    Rating: 0 (from 0 votes)

    ಧನ್ಯವಾದಂಗೋ !

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME