Oppanna.com

ಮುಕುಂದಾಷ್ಟಕಮ್

ಬರದೋರು :   ಗಣೇಶ ಮಾವ°    on   01/09/2010    6 ಒಪ್ಪಂಗೊ

ಗಣೇಶ ಮಾವ°

ಆಟಿ ತಿಂಗಳು ಮುಗುದ ಹಾಂಗೆ ಹಬ್ಬಂಗ ಒಂದೊಂದೇ ಸುರು ಆತು.
ಮೊನ್ನೆ ರಕ್ಷಾಬಂಧನ ಮತ್ತೆ ನೂಲಹುಣ್ಣಮೆ ಬೈಲಿನೋರು ಎಲ್ಲೋರು ಸೇರಿ ಸಂಭ್ರಮಲ್ಲಿ ಆಚರಣೆ ಮಾಡಿ ಆತು.
ಇದರ ಬಗ್ಗೆ ನಾವು ಮಾತಾಡ್ತಾ ಇದ್ದ ಹಾಂಗೆ ಅಷ್ಟಮಿ ಕೂಡಾ ಹತ್ತರೆ ಬಂತು.
ಶ್ರೀ ಕೃಷ್ಣನ ಜನ್ಮ ದಿನ ಆದ ಇಂದು ನಾವು ಬೈಲಿಲಿ ಎಲ್ಲೋರು ಸೇರಿ ಸಂಭ್ರಮವಲ್ಲಿ ಅಷ್ಟಮಿ ಆಚರಣೆ ಮಾಡುವ°.
ಬಟ್ಟಮಾವ° ಬಂದು ಹೊತ್ತೋಪಗ ಅಷ್ಟಮಿ ಪೂಜೆ ಮಾಡ್ತವು.
ಶ್ರೀ ಅಕ್ಕ,ಸೌಮ್ಯಕ್ಕ,ಶಾಂತತ್ತೆ ಎಲ್ಲೋರು ಸೇರಿ ಕೊಟ್ಟಿಗೆ ಮಾಡ್ತವಡ.
ಅಂಬಗ ನಾವು ಬಟ್ಟಮಾವ ಪೂಜೆ ಮಾಡಿದ ಕೂಡ್ಲೆ ಎಲ್ಲೋರು ಸೇರಿ ಶ್ರೀಕೃಷ್ಣನ ಅತ್ಯಂತ ಮಹತ್ವವ ತಿಳಿಶುವ ಮುಕುಂದಾಷ್ಟಕ ಹೇಳುವ ಆಗದಾ?

ಮುಕುಂದಾಷ್ಟಕಮ್:
ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 1 ||

ಬಾಲಂ ಮುಕುಂದಂ ಮನಸಾಸ್ಮರಾಮಿ

ಆಲೋಕ್ಯ ಮಾತುರ್ಮುಖಮಾದರೇಣ
ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ |
ತಂ ಚಿನ್ಮಯಂ ದೇವಮನಂತಮಾದ್ಯಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 2 ||

ಲಂಬಾಲಕಂ ಲಂಬಿತ ಹಾರಯಷ್ಟಿಂ
ಶೃಂಗಾರ ಲೀಲಾಂಕುರ ದಂತಪಂಕ್ತಿಮ್ |
ಬಿಂಬಾಧರಾ ಪೂರಿತ ವೇಣುನಾದಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 3 ||

ಶಿಕ್ಯೇ ನಿಧಾಯಾಜ್ಯ ಪಯೋದಧೀನಿ
ಕಾರ್ಯಾಂಗತಾಯಾಂ ವ್ರಜನಾಯಿಕಾಯಾಮ್ |
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 4 ||

ಇಂದೀವರ ಶ್ಯಾಮಲ ಕೋಮಲಾಂಗಂ
ಇಂದ್ರಾದಿ ದೇವಾರ್ಚಿತ ಪಾದಪದ್ಮಮ್ |
ವೇದಸ್ತುತಂಚಾಶ್ರಿತ ಕಲ್ಪವೃಕ್ಷಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 5 ||

ಉಲೂಖಲೇ ಬದ್ಧಮುದಾರ ಶೌರ್ಯಂ
ಉತ್ತುಂಗ ಯುಗ್ಮಾರ್ಜನಭಂಜನತಮ್ |
ಉತ್ಫಲ್ಲ ಪದ್ಮಾಯತ ಚಾರುನೇತ್ರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 6 ||

ಯಮಸ್ಯ ಶಾಂತಸ್ಥಿತಕಾಲಿಕಸ್ಯ
ಫಣಾಗ್ರರಂಗೇ ಕೃತತಾಂಡವಂತಮ್ |
ಧೃತ್ವಾತು ಹಸ್ತೇನ ತದೀಯ ಪುಚ್ಛಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 7 ||

ಸಂಹೃತ್ಯ ಲೋಕಾನ್ನವ ಪತ್ರಮಧ್ಯೇ
ಶಯಾನಮಾದ್ಯಂತಮನೇಕರೂಪಮ್ |
ಸರ್ವೇಶ್ವರಂ ಸರ್ವಹಿತಾವತಾರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 8 ||

ಏತನ್ಮುಕುಂದಾಷ್ಟಕಮಾದರೇಣ
ಸಕೃತ್ ಪಠೇದ್ಯಃ ಸ ಲಭೇತನ್ಮರ್ತ್ಯಃ |
ಜ್ಞಾನಂಪರಂ ಪಾಪಹರಂ ಪವಿತ್ರಂ
ಆಯುಷ್ಯ ವಿದ್ಯಾಂಚ ಯಶಸ್ತಥೈವ ||

6 thoughts on “ಮುಕುಂದಾಷ್ಟಕಮ್

  1. ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು – ಅದಕ್ಕಾಗಿ ನೇಲುತ್ತ ಒಂದು ಸಂಕೋಲೆ ಇತ್ತಿದ್ದರೆ ತುಂಬ ಒಳ್ಳೆದಿತ್ತು

    1. ಗುತ್ತಿನ ಸದಾಶಿವ ಮಾವನ ಸಲಹೆ ತುಂಬಾ ಕೊಶಿ ಆತು.
      ಅಂದಿಂದಲೇ ಅದರ ಯೋಚನೆ ಇತ್ತು. ಇಂದು ನಿಂಗೊ ಹೇಳಿಅಪ್ಪಗ ಈಗಳೇ ಮಾಡಿಕ್ಕುವೊ° ಕಂಡತ್ತು.
      ಸರಿ ಆತೋ ನೋಡಿಕ್ಕಿ ಒಂದರಿ.
      ಕೊಶಿ ಆದರೆ (ಆಗದ್ರೂ) ಹೇಳಿಕ್ಕಿ! ಆತೋ?
      ಏ°?

      ಗುರಿಕ್ಕಾರ°

      1. ಈ ವೆವಸ್ಥೆ ಭಾರೀ ಲಾಯ್ಕಾಯಿದು. ಈಗ ಎಲ್ಲಾ ಶುದ್ದಿಗಳನ್ನೂ ಪ್ರಿಂಟ್ ತೆಗವಲಾವುತ್ತಲ್ಲ!
        ತುಂಬಾ ಧನ್ಯವಾದಂಗೊ ಗುರಿಕ್ಕಾರರಿಂಗೆ.

  2. ಗಣೇಶಮಾವಾ..
    ರಾಗಲ್ಲಿ ಹೇಳಿರೆ ಕುಂಞಿಕುಂಞಿ ಬಾಲಕೃಷ್ಣಂಗಳ ಮುದ್ದು ಮಾಡಿ ಒರಗುಸಲಕ್ಕು – ಅಷ್ಟು ಇಂಪಾದ ಅಷ್ಟಕಂಗೊ..
    ಅಷ್ಟಮಿ ದಿನ ಕಂಡು ಕೊಶಿ ಆತು ಮಾವ°..

  3. ಕೃಷ್ಣ ಜಯಂತಿಯ ಈ ಸಂದರ್ಭಲ್ಲಿ ಅಷ್ಟಕ ಸಕಾಲಿಕ. ವಟಪತ್ರಶಾಹಿಯಾದ ಬಾಲಕೃಷ್ಣನ ಪಟ ತುಂಬಾ ಚೆಂದ ಕಾಣುತ್ತು.

  4. ಮಾವಾ,ಎಷ್ಟು ಚೆಂದದ ಅಷ್ಟಕ.. ಧನ್ಯವಾದಂಗೋ..
    ಅಷ್ಟಕದ ಭಜನೆಯ ಕಲಿವ° ಬಾ ಬೇಗ
    ಕಷ್ಟ೦ಗಳೆದುರುಸುವ ಶಗುತಿ ಬಕ್ಕೀಗ
    ನಷ್ಟ೦ಗೊ ನಶಿಸಿ ಸುಖ ತುಂಬಿ ನವರಾಗ
    ಇಷ್ಟ೦ಗೊ ಬೈಲಿಲಿ ಹರಿಯಲಿ ಸರಾಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×