Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20

ಬರದೋರು :   ಚೆನ್ನೈ ಬಾವ°    on   15/03/2012    24 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಶ್ರೀ ಭಗವಾನುವಾಚ –

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ ।
ಗತಾಸೂನಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ ॥೧೧॥

ಪದವಿಭಾಗ

ಶ್ರೀ ಭಗವಾನ್ ಉವಾಚ –
ಅಶೋಚ್ಯಾನ್ ಅನ್ವಶೋಚಃ ತ್ವಮ್ ಪ್ರಜ್ಞಾ-ವಾದಾನ್ ಚ ಭಾಷಸೇ । ಗತ-ಅಸೂನ್ ಅಗತ-ಅಸೂನ್ ಚ ನ ಅನುಶೋಚಂತಿ ಪಂಡಿತಾಃ॥

ಅನ್ವಯ

ಶ್ರೀ ಭಗವಾನ್ ಉವಾಚ – ತ್ವಮ್ ಅಶೋಚ್ಯಾನ್ ಅನ್ವಶೋಚಃ । (ತ್ವಮ್) ಪ್ರಜ್ಞಾ-ವಾದಾನ್ ಚ ಭಾಷಸೇ । ಪಂಡಿತಾಃ ಗತಾಸೂನ್ ಅಗತಾಸೂನ್ ಚ ನ ಅನುಶೋಚಂತಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮಪುರುಷ ಹೇಳಿದ°, ತ್ವಮ್ – ನೀನು, ಅಶೋಚ್ಯಾನ್ – ದುಃಖಿಸಲೆ ಅರ್ಹವಲ್ಲದ್ದರ ಕುರಿತು, ಅನ್ವಶೋಚಃ – ದುಃಖಿಸಿಗೊಂಡಿದ್ದೆ.  (ತ್ವಮ್ – ನೀನು) ಪ್ರಜ್ಞಾ-ವಾದಾನ್ – ವಿದ್ವದ್ವಚನಂಗಳ, ಚ – ಕೂಡ, ಭಾಷಸೇ – ಹೇಳುತ್ತ ಇದ್ದೆ, ಪಂಡಿತಾಃ – ವಿದ್ವಾಂಸರು, ಗತ-ಅಸೂನ್ – ಗತಿಸಿದ ಜೀವಿಗಳ, ಅಗತ-ಅಸೂನ್ – ಗತಿಸಿರದ ಜೀವಿಗಳ, ಚ – ಕೂಡ, ನ ಅನುಶೋಚಂತಿ – ವಿಷಾದಿಸುತ್ತವಿಲ್ಲೆ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ (ಶ್ರೀಕೃಷ್ಣ) ಹೇಳಿದ° – ನೀನು ವಿದ್ವಾಂಸರಂತೆ ಮಾತಾಡುತ್ತ ಇದ್ದೆ. ಆದರೆ, ಶೋಕಕ್ಕೆ ಯೋಗ್ಯವಲ್ಲದ್ದರ ಕುರಿತು ಚಿಂತೆಮಾಡ್ಯೊಂಡು ಇದ್ದೆ. ವಿದ್ವಾಂಸರು (ಪಂಡಿತರು) ಸತ್ತವಕ್ಕಾಗಲೀ (ಗತಿಸಿಹೋದವಕ್ಕಾಗಿ), ಬದುಕಿಪ್ಪವಕ್ಕಾಗಲೀ ದುಃಖಿಸುತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ°, ಅರ್ಜುನ° ಹೇದ ಗುರುಸ್ಥಾನವ ಸ್ವೀಕರುಸಿ, ಶಿಷ್ಯನ (ಅರ್ಜುನನ) ‘ಮೂರ್ಖ°’ ಹೇದು  ಪರೋಕ್ಷವಾಗಿ ದಂಡುಸುತ್ತ°. ವಿದ್ವಾಂಸನ ಹಾಂಗೆ ಮಾತಾಡುತ್ತೆ ನೀನು. ಆದರೆ ದೇಹ ಹೇದರೆಂತರ ಆತ್ಮಹೇದರೆಂತರ ಹೇದು ತಿಳುದ ಪಂಡಿತಂಗೊ ದೇಹದ ಯಾವುದೇ ಹಂತದ ವಿಷಯದ ಬಗ್ಗೆ ದುಃಖಿಸುತ್ತವಿಲ್ಲೆ. ದೇಹಲ್ಲಿ ಜೀವ ಇಪ್ಪ ಸ್ಥಿತಲಿ ಆಗಲಿ, ಜೀವ ಇಲ್ಲದ ಸ್ಥಿತಿಲಿ ಆಗಲಿ ಚಿಂತೆಪಡುತ್ತವಿಲ್ಲೆ. ಅರ್ಥಾತ್, ಭೌತಿಕ ವಿಷಯಲ್ಲಿ ವಿದ್ವಾಂಸಂಗೊ ಚಿಂತೆಪಟ್ಟುಗೊಂಡಿರ್ತವಿಲ್ಲೆ. ದೇಹ ಮತ್ತು ಭೌತಿಕ ವಿಷಯಂಗೊ ಇಂದು ಇರ್ತು, ನಾಳೆ ಹೋವ್ತು. ದೇಹವು ಆತ್ಮದಷ್ಟು ಮುಖ್ಯ ಅಲ್ಲ. ಇದರ ತಿಳ್ಕೊಂಡವನೇ ವಿದ್ವಾಂಸ. ಭೌತಿಕ ವಿಷಯಂಗೊ ವಿದ್ವಾಂಸರ ಚಿಂತೆಗೆ ಕಾರಣ ಆಗಿರ್ತಿಲ್ಲೆ.

ಇದು ಭಗವಂತನ ಉಪದೇಶದ ಸುರುವಾಣ ನುಡಿ. ಇದು ಇಡೀ ಗೀತೆಗೆ ಪಂಚಾಂಗ. ಕೃಷ್ಣ° ಹೇಳುತ್ತ° – “ಆರಿಂಗೆ ಬೇಕಾಗಿ ನೀ ಕೂಗಲಾಗದೋ ಅವರ ಬಗ್ಗೆ ಕೂಗುತ್ತ ಇದ್ದೆ. ಆದರೆ ಎಲ್ಲ ತಿಳುದ ಮಹಾಜ್ಞಾನಿಯ ಹಾಂಗೆ ಮಾತುಗಳನ್ನೂ ಹೇಳ್ತಾ ಇದ್ದೆ”. ಅರ್ಜುನಂಗೆ ಕಂಡದು ಯುದ್ಧ ಆದರೆ ಗುರು ಹಿರಿಯರು ಸಾಯುತ್ತವು ಮತ್ತು ಕೆಲವು ದುಷ್ಟಂಗೊ ಉಳುದು ಹೋಕು, ಇದರಿಂದ ಸಮಾಜ ಕೆಟ್ಟು ಹೋಕು ಹೇಳ್ವ ಭಯ. ಅದರಿಂದ ದುಃಖ. ದುಃಖಕ್ಕೆ ಮೂಲ ಭಯ. ಭಯಕ್ಕೆ ಮೂಲ ಅಜ್ಞಾನ. ಜೀವ ಅನಾದಿ ನಿತ್ಯ. ಜೀವಕ್ಕೆ ಈ ಭೌತಿಕ ಶರೀರ ಒಂದು ಪಂಜರದ ಹಾಂಗೆ. ಈ ಪಂಜರದೊಳ ಸಿಕ್ಕಿ ಹಾಕಿಯೊಂಬದೇ ಹುಟ್ಟು. ಪಂಜರಂದ ಹೊರ ಹೋಪದೇ ಸಾವು. ಹಳೆ ಅಂಗಿ ಕಳಚಿ ಹೊಸ ಅಂಗಿ ಧರುಸುತ್ತಾಂಗೆ. ಈ ಜ್ಞಾನ ನವಗಿದ್ದರೆ ನವಗೆ ಸಾವಿನ ಭಯ ಬೇಕಾಗಿಲ್ಲೆ. ಸಾವು ಭಯಾನಕ ಅಲ್ಲ. ಹುಟ್ಟಿಬಂದವಂಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲೆ. ಆತ್ಮ ಅನಾದಿ ನಿತ್ಯ. ಆದರೆ, ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಂದ ಪ್ರಕೃತಿಯೆಡೆಂಗೆ ಪಯಣಿಸುವ ಕ್ರಿಯೆ ಸಾವು. ಹಾಂಗಾಗಿ ಅಳುದವರ ಬಗ್ಗೆ ಆಗಲಿ, ಅಳಿಯದ್ದವರ ಬಗ್ಗೆ ಆಗಲಿ ಜ್ಞಾನಿಗೊ ಚಿಂತೆಪಡುತ್ತವಿಲ್ಲೆ ಹೇದು ಇದರ ಬನ್ನಂಜೆಯವು ವ್ಯಾಖ್ಯಾನಿಸುತ್ತವು.

ಶ್ಲೋಕ

ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ ।
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ॥೧೨॥

ಪದವಿಭಾಗ

ನ ತು ಏವ ಅಹಮ್ ಜಾತು ನ ಆಸಮ್ ನ ತ್ವಮ್ ನ ಇಮೇ ಜನ-ಅಧಿಪಾಃ । ನ ಚ ಏವ ನ ಭವಿಷ್ಯಾಮಃ ಸರ್ವೇ ವಯಮ್ ಅತಃ ಪರಮ್॥

ಅನ್ವಯ

ಅಹಂ ಜಾತು ನ ಆಸಂ  (ಇತಿ) ನ ತು ಏವ,   ತ್ವಂ (ಜಾತು ನ ಆಸೀಃ ಇತಿ) ನ, ಇಮೇ ಜನಾಧಿಪಾಃ (ಜಾತು ನ ಆಸನ್ ಇತಿ) ನ,  ಅತಃ ಪರಂ ಚ ವಯಂ ಸರ್ವೇ ನ ಭವಿಷ್ಯಾಮಃ (ಇತಿ) ನ ಏವ ।

ಪ್ರತಿಪದಾರ್ಥ

ಅಹಮ್ – ಆನು, ಜಾತು ನ ಆಸಮ್ – ಏವ ಕಾಲಲ್ಲಿಯೂ ಅಸ್ತಿತ್ವಲ್ಲಿ ಇತ್ತಿದ್ದಿಲ್ಲೆ, (ಇತಿ – ಹೇದು) ನ ತು ಏವ – ಖಂಡಿತವಾಗಿಯೂ ಎಂದಿಂಗೂ ಇಲ್ಲೆ,   ತ್ವಮ್ – ನೀನು (ಜಾತು ನ ಆಸೀಃ ಇತಿ – ಏವಕಾಲಲ್ಲಿಯೂ ಅಸ್ತಿತ್ವದಲ್ಲಿ ಇತ್ತಿದ್ದಿಲ್ಲೆ ಹೇದು),  ನ – ಅಲ್ಲ , ಇಮೇ ಜನಾಧಿಪಾಃ – ಈ ರಾಜರುಗೊ, (ಜಾತು ನ ಆಸನ್ ಇತಿ – ಅಸ್ತಿತ್ವಲ್ಲಿ ಇತ್ತಿದ್ದವಿಲ್ಲೆ ಹೇದು) ನ – ಇಲ್ಲೆ,  ಅತಃ ಪರಮ್ ಚ – ಇನ್ನು ಮುಂದೆಯೂ ಕೂಡ, ವಯಮ್ ಸರ್ವೇ – ನಾವು ಎಲ್ಲೋರು, ನ ಭವಿಷ್ಯಾಮಃ – ಇರ್ತಿಲ್ಲೆ (ಇತಿ – ಹೇದು) ನ ಏವ – ಖಂಡಿತವಾಗ್ಯೂ ಇಲ್ಲೆ.

ಅನ್ವಯಾರ್ಥ

ಆನು ಇತ್ತಿಲ್ಲೆ ಹೇಳ್ವ ಕಾಲವೇ ಇತ್ತಿಲ್ಲೆ. ನೀನೂ ಮತ್ತೆ ಈ ರಾಜರುಗಳೂ ಇಲ್ಲದ್ದಿತ್ತಿದ್ದ ಕಾಲವೂ ಇತ್ತಿದ್ದಿಲ್ಲೆ. ಭವಿಷ್ಯಲ್ಲಿಯೂ ನಾವೆಲ್ಲರೂ ಇರ್ತಿಲ್ಲೆ ಹೇಳ್ಳೂ ಇಲ್ಲೆ.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷ° ಸಕಲ ಜೀವರಾಶಿಗಳ ಪಾಲುಸುವದು. ಅವರವರ ವೈಯಕ್ತಿಕ ಕರ್ಮ ಮತ್ತು ಕರ್ಮಫಲನುಸಾರ ಅವನ ಪಾಲುಸುತ್ತ° – ಭಗವಂತ°. ಭಗವಂತ° ಸ್ವಾಂಶಂದ ಪ್ರತಿಯೊಂದು ಜೇವಿಯ ಹೃದಯಲ್ಲಿ ಪ್ರಜ್ಞಾಪೂರ್ಣವಾಗಿ ವಾಸಿಸುತ್ತ°. ಅತಿಸಾತ್ವಿಕರು ಮಾತ್ರ ತನ್ನ ಒಳವೂ ಹೆರವೂ ಒಬ್ಬನೇ ದೇವ ಇಪ್ಪದಾಗಿ ತಿಳಿದಿರ್ತವು. ಅವಕ್ಕೆ ಮಾತ್ರ ಪರಿಪೂರ್ಣ ನಿತ್ಯ ಶಾಂತಿಯ ಪಡವಲೆ ಸಾಧ್ಯ. ಭಗವಂತ°, ಅರ್ಜುನ° ಮತ್ತೆ ರಣರಂಗಲ್ಲಿ ಸೇರಿಪ್ಪ ಎಲ್ಲಾ ರಾಜರುಗಳೂ ನಿತ್ಯ ಜೀವಿಗೊ. ಜೀವಾತ್ಮರುಗಳ ಪಾಲುಸುವವನೇ ಭಗವಂತ°. ಅಲ್ಲಿ ಜೀವಾತ್ಮರಾಗಿ ನಿಂದಿಪ್ಪ ಎಲ್ಲೋರೂ ಭೂತಕಾಲಲ್ಲಿ ಪ್ರತ್ಯೇಕ ಅಸ್ತಿತ್ವಲ್ಲಿ ಇತ್ತಿದ್ದವಿಲ್ಲೆ ಹೇಳಿಯೋ,  ಭವಿಷ್ಯಲ್ಲಿ ಪ್ರತ್ಯೇಕ ಅಸ್ತಿತ್ವಲ್ಲಿ ಉಳಿತ್ತವು ಹೇಳಿಯೋ ಅರ್ಥವಲ್ಲ. ಅವೆಲ್ಲ ಜೀವಾತ್ಮವಾಗಿಯೇ ಇತ್ತಿದ್ದವು, ಇರ್ತವು ಹೇದು ಅರ್ಥ. ಹಾಂಗಾಗಿ ವ್ಯಕ್ತಿಗತವಾಗಿ ಆರೊಬ್ಬನ ಬಗ್ಗೆಯೂ ಚಿಂತೆ ಸಾಧು ಅಲ್ಲ.

ಬನ್ನಂಜೆ ಹೇಳ್ತವು – ಆತ್ಮ ಎಂದಿಂಗೂ ಶಾಶ್ವತ. ಪ್ರತಿಯೊಂಡು ಜೀವಕ್ಕೂ ಅದರದ್ದೇ ಆದ ಸ್ವಭಾವ ಇರ್ತು. ಜೀವ ಒಂದು ಬೀಜ ಇದ್ದ ಹಾಂಗೆ. ಭಗವಂತ° ತೋಟಗಾರನ ಹಾಂಗೆ. ಪರಮಾತ್ಮ ಈ ಪ್ರಪಂಚ ಹೇಳ್ವ ತೋಟವ ಸೃಷ್ಟಿ ಮಾಡಿ, ಈ ಜೀವವ ಆ ತೋಟಲ್ಲಿ ಬಿತ್ತಿದ°. ಅದಕ್ಕೊಂದು ಅಸ್ತಿತ್ವವ ಕೊಟ್ಟ°. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚಲ್ಲಿ ಬೆಳೆತ್ತು. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಆದ್ದರಿಂದಲೇ ಈ ಪ್ರಪಂಚ ಇಷ್ಟೊಂದು ವೈವಿಧ್ಯಪೂರ್ಣ.

ಶ್ಲೋಕ

ದೇಹಿನೋsಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿಃ ಧೀರಸ್ತತ್ರ ನ ಮುಹ್ಯತಿ ॥೧೩॥

ಪದವಿಭಾಗ

ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ । ತಥಾ ದೇಹಾಂತರ-ಪ್ರಾಪ್ತಿಃ ಧೀರಃ ತತ್ರ ನ ಮುಹ್ಯತಿ ॥

ಅನ್ವಯ

ದೇಹಿನಃ ಅಸ್ಮಿನ್ ದೇಹೇ ಯಥಾ ಕೌಮಾರಂ ಯೌವನಂ ಜರಾ, ತಥಾ ದೇಹಾಂತರ-ಪ್ರಾಪ್ತಿಃ । ತತ್ರ ಧೀರಃ ನ ಮುಹ್ಯತೇ ।

ಪ್ರತಿಪದಾರ್ಥ

ದೇಹಿನಃ – ದೇಹಿಗಳ, ಅಸ್ಮಿನ್-ದೇಹೇ – ಈ ಶರೀರಲ್ಲಿ, ಯಥಾ – ಹೇಂಗೆ (ಏವ್ ರೀತಿಲಿ), ಕೌಮಾರಮ್ – ಕೌಮಾರ್ಯ, ಯೌವನಮ್ – ಯೌವ್ವನ, ಜರಾ – ಮುಪ್ಪು, ತಥಾ – ಹಾಂಗೇ, ದೇಹಾಂತರ-ಪ್ರಾಪ್ತಿಃ  – ಶರೀರಾಂತರ ಹೊಂದುವದು, ಧೀರಃ – ಧೀರನಾದವ°, ತತ್ರ – ಅಂಬಗ, ನ ಮುಹ್ಯತಿ – ಭ್ರಾಂತಿಗೊಳ್ಳುತ್ತನಿಲ್ಲೆ.

ಅನ್ವಯಾರ್ಥ

ದೇಹಸ್ಥ ಅತ್ಮವು ಈ ದೇಹಲ್ಲಿ ಬಾಲ್ಯಂದ ಯೌವನಕ್ಕೆ, ಮುಪ್ಪಿಂಗೆ ಹೇಂಗೆ ಸಾಗುತ್ತೋ ಹಾಂಗೆಯೇ ಆತ್ಮವೂ ಶರೀರ ಸಾವಿನ ನಂತರ ಮತ್ತೊಂದು ದೇಹಕ್ಕೆ ಸಾಗುತ್ತು. ಧೀರನಾದವ° ಇದಕ್ಕೆ ಭ್ರಾಂತಿಗೊಳ್ಳುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಪ್ರತಿಯೊಂದು ಜೀವಿಯೂ ಪ್ರತ್ಯೇಕ ಆತ್ಮ. ಜೀವಿ ನಿಮಿಷ ನಿಮಿಷಕ್ಕೂ ತನ್ನ ದೇಹಸ್ಥಿತಿಯ ಬದಲಾಯಿಸಿಗೊಂಡಿರ್ತು. ಬಾಲ್ಯ – ಯೌವ್ವನ – ವಾರ್ಧಕ್ಯ. ಆದರೆ ಆ ಶರೀರಲ್ಲಿ ಇಪ್ಪದು ಒಂದೇ ಆತ್ಮ . ಈ ಆತ್ಮ ಕಟ್ಟಕಡೇಂಗೆ ಶರೀರ ಸಾಯುವ ಸಮಯಲ್ಲಿ ದೇಹವ ಬದಲಾಯಿಸಿ ಇನ್ನೊಂದು ದೇಹವ ಪ್ರವೇಶಿಸುತ್ತು. ಮುಂದಾಣ ಜನ್ಮಲ್ಲಿ ನಿಶ್ಚಯವಾಗಿಯೂ ಅದಕ್ಕೆ ಭೌತಿಕ ಅಥವಾ ಅಭೌತಿಕ ದೇಹ ಇಪ್ಪದ್ದಾದ್ದರಿಂದ ಅರ್ಜುನ° ದುಃಖಿಸೆಕ್ಕಾದ್ದೇ ಇಲ್ಲೆ. ಭೀಷ್ಮ ದ್ರೋಣರ ವಿಷಯಲ್ಲಿ ಅವಂಗೆ ತುಂಬಾ ಕಳಕಳಿ ಇಪ್ಪದಾದರೂ ಅವರ ಸಾವಿನ ಬಗ್ಗೆ ಚಿಂತುಸೆಕ್ಕಾದ್ದಿಲ್ಲೆ. ಅದರ ಬದಲು ಅವರ ಹಳೆಯ ದೇಹವ ಬಿಟ್ಟು ಹೊಸ ದೇಹವ ಪ್ರವೇಶಿಸಿ ತಮ್ಮ ಚೈತನ್ಯವ ಮತ್ತೆ ಪಡಕ್ಕೊಳ್ಳುತ್ತವು ಹೇಳಿ ಸಂತೋಷಡ್ಳಕ್ಕು.  ಜೀವಾತ್ಮ, ಪರಮಾತ್ಮ ಮತ್ತು ಐಹಿಕ, ಅಧ್ಯಾತ್ಮಿಕ ಪ್ರಕೃತಿ ಇವುಗಳ ಸ್ವರೂಪದ ಬಗ್ಗೆ ಪರಿಪೂರ್ಣ ಅರಿವಿಪ್ಪವನೇ ಧೀರ° (ಧೀಃ+ರಃ) ಎಂದೆನಿಸಿಗೊಳ್ತ°. ಇಂತಹ ಮನುಷ್ಯರು ದೇಹದ ಬದಲಾವಣೆ ಕುರಿತು ಮೋಸಗೊಳ್ಳುತ್ತವಿಲ್ಲೆ. ಧೀರ ಹೇದರೆ ಅರಿವಿನ ಆನಂದವ ಅನುಭವುಸುವ ಜ್ಞಾನಿ. ಎಲ್ಲಿ ಜ್ಞಾನ ಇರ್ತೋ ಅಲ್ಲಿ ದುಃಖವ ಇಲ್ಲೆ.

ಶ್ಲೋಕ

ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋsನಿತ್ಯಾಃ ತಾನ್ ತಿತಿಕ್ಷಸ್ವ ಭಾರತ ॥೧೪॥

ಪದವಿಭಾಗ

ಮಾತ್ರಾ-ಸ್ಪರ್ಶಾಃ ತು ಕೌಂತೇಯ ಶೀತ-ಉಷ್ಣ-ಸುಖ-ದುಃಖ-ದಾಃ । ಆಗಮ ಅಪಾಯಿನಃ ಅನಿತ್ಯಾಃ ತಾನ್ ತಿತಿಕ್ಷಸ್ವ ಭಾರತ॥

ಅನ್ವಯ

ಹೇ ಕೌಂತೇಯ!, ಮಾತ್ರಾ-ಸ್ಪರ್ಶಾಃ ತು ಶೀತ-ಉಷ್ಣ-ಸುಖ-ದುಃಖ-ದಾಃ, ಆಗಮ ಅಪಾಯಿನಃ, ಅನಿತ್ಯಾಃ । ಹೇ ಭಾರತ! ತಾನ್ ತಿತಿಕ್ಷಸ್ವ ।

ಪ್ರತಿಪದಾರ್ಥ

ಹೇ ಕೌಂತೇಯ – ಏ ಕುಂತೀಪುತ್ರನೇ!,ಮಾತ್ರಾ-ಸ್ಪರ್ಶಾಃ – ಇಂದ್ರಿಯಾನುಭವಂಗೊ, ತು – ಕೇವಲ, ಶೀತ-ಉಷ್ಣ-ಸುಖ-ದುಃಖ-ದಾಃ  –  ಚಳಿಗಾಲ-ಬೇಸಗೆಗಾಲ-ಸುಖ ಸಂತೋಷ-ಚಿಂತೆ ವ್ಯಥೆಗಳ ಕೊಡುವಂತಹವುಗೊ, ಆಗಮ – ತೋರುವಂತಹವುಗೊ (ಕಾಂಬಂತಾದ್ದು), ಅಪಾಯಿನಃ – ಮರೆಯಪ್ಪಂತಾದವುಗೊ, ಅನಿತ್ಯಾಃ – ಅಶಾಶ್ವತವಾದವುಗೊ, ಹೇ ಭಾರತ! – ಏ ಭರತ ಕುಲದವನೇ!, ತಾನ್ – ಅವೆಲ್ಲವ, ತಿತಿಕ್ಷಸ್ವ – ಸಹಿಸಿಗೊಂಬಲೆ ಪ್ರಯತ್ನುಸು.

ಅನ್ವಯಾರ್ಥ

ಹೇ ಕೌಂತೇಯ!, ಸುಖದುಃಖಂಗೊ ರಜ ಸಮಯ ಕಾಣಿಸಿಗೊಳ್ತು. ಕ್ರಮೇಣ ಮಾಯವಾವ್ತು. ಚಳಿಗಾಲ, ಬೇಸಗೆಗಾಲ ಕಾಣಿಸಿಗೊಂಡು ಮಾಯವಾವ್ತು. ಅವ್ವು ಇಂದ್ರಿಯಂಗಳ ಗ್ರಹಣ ಶಕ್ತಿಂದ ಉದ್ಭವವಾವ್ತು. ಅವುಗಳಿಂದ ಕ್ಷೋಭೆಗೊಳಗಾಗದ್ದೆ ಸಹಿಸಿಗೊಂಬಲೆ ನೀನು ಕಲಿಯೆಕು.

ತಾತ್ಪರ್ಯ / ವಿವರಣೆ

ಕರ್ತವ್ಯ ನಿರ್ವಹಣೆಲಿ, ಅಶಾಶ್ವತವಾದ ಸುಖ ದುಃಖ ಆಗುಹೋಗುಗಳ ಸಹಿಸಿಗೊಂಬಲೆ ಕಲಿಯೆಕ್ಕು. ಮಾಘಮಾಸ (ಜನವರಿ – ಪೆಬ್ರವರಿ)ಲ್ಲಿಯೂ ಉದಿಗಾಲಕ್ಕೇ ಮೀಯೆಕು. ಆ ಕಾಲಲ್ಲಿ ವಿಪರೀತ ಚಳಿ ಇರ್ತು. ಆದರೂ, ಆಚಾರನಿಷ್ಠನಾದವ° ತಣ್ಣೀರಿಲ್ಲಿ ಮೀವಲೆ ಹಿಂಜರಿತ್ತನಿಲ್ಲೆ. ಮೇ ತಿಂಗಳ ಕಡುಬೇಸಗೆಲಿ ಹೆಮ್ಮಕ್ಕೊ ಅಡಿಗೆ ಮಾಡ್ಳೆ ಹಿಂಜರಿತ್ತವಿಲ್ಲೆ. ಹವೆಯ ಅನನುಕೂಲಂಗಳ ಲಕ್ಷ್ಯಮಾಡದ್ದೆ ತನ್ನ ಕರ್ತವ್ಯಂಗಳ ಮಾಡೇಕು. ಯುದ್ಧ ಮಾಡುತ್ಸು ಕ್ಷತ್ರಿಯನ ಧರ್ಮ. ಬಂಧುಮಿತ್ರರೊಟ್ಟಿಂಗೆ ಯುದ್ಧಮಾಡೇಕ್ಕಾಗಿ ಬಂದರೂ ಕ್ಷತ್ರಿಯನಾದವ° ತನ್ನ ನಿಯತ ಧರ್ಮಂದ ಹಿಂಜರಿವಲಾಗ. ವಿದ್ಯೆಯ ಪೀಠಕ್ಕೆ ಏರ್ಲೆ ಮನುಷ್ಯ ಧರ್ಮ ನಿಯಮಂಗಳ ಪಾಲುಸೆಕ್ಕು. ಅದರಿಂದ ವಿದ್ಯೆ ಮತ್ತು ಭಕ್ತಿಂದ ಮಾತ್ರ ಮನುಷ್ಯ ಮಾಯೆಯ ಮುಷ್ಠಿಂದ ಪಾರಪ್ಪಲೆ ಸಾಧ್ಯ.

ಇಲ್ಲಿ ಭಗವಂತ°, ಅರ್ಜುನನ ಎರಡು ಹೆಸರಿಂದ ನೆನಪುಸುತ್ತ°. ೧. ‘ಕೌಂತೇಯ’ – ಕುಂತಿಯಿಂದಲಾಗಿ ಅವ° ಬಹುದೊಡ್ಡವಂಶಕ್ಕೆ ಸೇರಿದವ°. ೨. ‘ಭಾರತ’ – ತನ್ನ ಅಪ್ಪನ ವಂಶ ಭರತವಂಶಲ್ಲಿ ಜನಿಸಿದ ಹಿರಿಮೆ. ಈ ಎರಡು ಹೆಸರಿಂದ ಅರ್ಜುನ° ಬಹುದೊಡ್ಡ ಪರಂಪರೆಲಿ ಜನಿಸಿ ಜವಾಬ್ದಾರಿ ಇಪ್ಪವ° ಹೇದು ಸೂಚಕ. ಮಹತ್ವದ ಆ ಪರಂಪರೆಯ ನೆಂಪಿಸಿಗೊಂಡು ತನ್ನ ಕರ್ತ್ವವ್ಯಲ್ಲಿ ನುಣುಚಿಗೊಂಬಲಾಗ ಹೇದು ಕೃಷ್ಣನ ಮಾತು.

ಬನ್ನಂಜೆ ಇದರ ಹೀಂಗೆ ವ್ಯಾಖ್ಯಾನಿಸುತ್ತವು – ಜೀವನಲ್ಲಿ ಸುಖ-ದುಃಖ ಚಳಿ-ಸೆಕೆ ಇದಕ್ಕೆಲ್ಲ ಒಂದು ವ್ಯವಸ್ಥೆ ಇಲ್ಲೆ. ಒಬ್ಬಂಗೆ ಸುಖ ಆಗಿಪ್ಪದು ಇನ್ನೊಬ್ಬಂಗೆ ದುಃಖವಾಗಿಕ್ಕು. ಅದು ಶೀತೋಷ್ಣದ ಹಾಂಗೆ. ಒಂದರಿಯಂಗೆ ಸುಖಕೊಟ್ಟ ವಸ್ತು ಮುಂದೆ ಅದುವೇ ದುಃಖವಾಗಿಯೂ ಪರಿಣಮಿಸುಗು. ಸುಖ ದುಃಖ ಜೀವದ ಧರ್ಮ ಅಲ್ಲ. ಅದು ಬಂದು ಹೋಪಂತದ್ದು. ಅದು ನಮ್ಮ ಮಾನಸಿಕ ಕಲ್ಪನೆಯ ಫಲ. ‘ಎನ್ನ’ ಹೇಳುವದು ದುಃಖಕ್ಕೆ ಮೂಲ ಕಾರಣ. ಒರಕ್ಕಿಲ್ಲಿ ನವಗೆ ‘ಎನ್ನ’ ಇರ್ತಿಲ್ಲೆ. ಹಾಂಗಾಗಿ ಒರಕ್ಕಿಲಿ ನವಗೆ ಚಿಂತೆಯೋ, ದುಃಖವೋ ಇರ್ತಿಲ್ಲೆ. ಎಚ್ಚರ ಮತ್ತು ಕನಸ್ಸಿಲ್ಲಿ ಮಾತ್ರ ಈ ಸಮಸ್ಯೆ. ನಾವೇ ನಮ್ಮ ಮಾನಸಿಕ ಭಾವನೆಗಳಿಂದ ಮತ್ತು ಅನುಭವಂದ ಅನುಭೂತಿ ಪಟ್ಟುಗೊಂಬದು ಈ ಸುಖ-ದುಃಖಂಗೊ. ಇದರಿಂದ ಪಾರಪ್ಪ ಉಪಾಯಂಗಳ ನಾವೇ ಕಲ್ತುಗೊಳ್ಳೆಕ್ಕು. ದುಃಖದ ಮೂಲ ಅನ್ವೇಷಣೆ ಮಾಡಿರೆ ಸತ್ಯದ ಅರಿವಾವ್ತು ಮತ್ತು  ದುಃಖವು ಸಹ್ಯವಾವ್ತು. ನಮ್ಮ ಜೀವನಲ್ಲಿ ಅದೆಷ್ಟೊ ವಿಷಯಂಗಳ ಗಮನಿಸಿರೆ ಈ ಸೂಕ್ಷ್ಮ ಅರ್ಥ ಅಕ್ಕು. ಎಷ್ಟೋ ಸರ್ತಿ ನವಗಾದ ತೊಂದರೆ ನಷ್ಟವ ಚಿಂತಿಸಿ ಕಡೇಂಗೆ ನಾವು ಸಮಾಧಾನ ಪಟ್ಟುಗೊಂಬದು ‘….ಆಗಲಿ., ಇಷ್ಟರ್ಲಿ ಹೋತನ್ನೇ’. ಇದನ್ನೇ ರಜಾ ಆಳವಾಗಿ ಚಿಂತಿಸಿರೆ ಮೇಗೆ ಹೇದ ವಿಷಯ ವಿಹಿತ ಅಕ್ಕು.

ಶ್ಲೋಕ

ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋsಮೃತತ್ವಾಯ ಕಲ್ಪತೇ ॥೧೫॥

ಪದವಿಭಾಗ

ಯಮ್  ಹಿ ನ ವ್ಯಥಯಂತಿ ಏತೇ ಪುರುಷಮ್ ಪುರುಷ-ಋಷಭ । ಸಮ-ದುಃಖ-ಸುಖಮ್ ಧೀರಮ್ ಸಃ ಅಮೃತತ್ವಾಯ ಕಲ್ಪತೇ ॥

ಅನ್ವಯ

ಹೇ ಪುರುಷ ಋಷಭ!,  ಯಂ ಸಮ-ದುಃಖ-ಸುಖಂ ಧೀರಂ ಪುರುಷಮ್ ಏತೇ ನ ವ್ಯಥಯಂತಿ ಹಿ., ಸಃ ಅಮೃತತ್ವಾಯ ಕಲ್ಪತೇ ।

ಪ್ರತಿಪದಾರ್ಥ

ಹೇ ಪುರುಷ ಋಷಭ! – ಮಾನವ ಶ್ರೇಷ್ಠನೇ!, ಯಮ್ – ಆರ, ಸಮ-ದುಃಖ-ಸುಖಮ್ – ಸರಿಸಮಾನವಾಗಿಪ್ಪ (ವ್ಯತ್ಯಾಸಗೊಳ್ಳದ್ದ) ಧೀರಮ್-ಪುರುಷಮ್  — ಸಹಿಷ್ಣುವಾದ ವ್ಯಕ್ತಿಯ,  ಏತೇ – – ಇವೆಲ್ಲವೂ, ನ ವ್ಯಥಯಂತಿ – ದುಃಖಕ್ಕೆ ಒಳಪಡಿಸಲ್ಪಡುತ್ತಿಲ್ಯೋ, ಹಿ – ಖಂಡಿತವಾಗಿಯೂ,    ಸಃ – ಅವ°, ಅಮೃತತ್ವಾಯ – ಮೋಕ್ಷಕ್ಕೆ, ಕಲ್ಪತೇ – ಅರ್ಹನಾದವ° ಹೇದು ತಿಳಿಯಲ್ಪಡುತ್ತ°

ಅನ್ವಯಾರ್ಥ

ಪುರುಷಶ್ರೇಷ್ಠನೇ! (ಅರ್ಜುನನೇ), ಯಾವಾತ° ಸುಖದುಃಖಂಗಳಿಂದ ಖಂಡಿತವಾಗ್ಯೂ ವಿಚಲಿತನಾಗದ್ದೆ ಉಭಯ ಸ್ಥಿತಿಲ್ಲಿಯೂ ದೃಢನಾಗಿಪ್ಪವನಾಗಿರ್ತನೋ ಆ ಮನುಷ್ಯ° ಮೋಕ್ಷಕ್ಕೆ ಅರ್ಹನಾದವ° ಹೇದು  ತಿಳಿಯಲ್ಪಡುತ್ತ°.

ತಾತ್ಪರ್ಯ / ವಿವರಣೆ

ಆಧ್ಯಾತ್ಮಿಕ ಸಾಕ್ಷಾತ್ಕಾರದ ಮೇಗಾಣ ಹಂತವ ಮುಟ್ಳೆ ದೃಢಸಂಕಲ್ಪ ಮಾಡಿ ಸುಖದುಃಖಂಗಳ ಸಮಚಿತ್ತಲ್ಲಿ ಸಹಿಸಿ ಮುಂದೆಕ್ಕೆ ಹೋಪವನೇ ಮುಕ್ತಿಗೆ ಅರ್ಹನಾಗಿರುತ್ತ°. ವರ್ಣಾಶ್ರಮ ಧರ್ಮಲ್ಲಿ ನಾಲ್ಕನೇದು ಸಂನ್ಯಾಸಾಶ್ರಮ. ಬಹು ಶ್ರಮದಾಯಕ ತಾಳ್ಮೆದಾಯಕ. ಆದರೆ, ಬದುಕಿನ ಪರಿಪೂರ್ಣ ಮಾಡ್ಳೆ ಬಯಸುವವ° ನಿಶ್ಚಯವಾಗಿಯೂ ಯಾವುದೇ ಕಠಿನ ಆ ಸನ್ನಿವೇಶಂಗಳ ಸಹಿಸಿ ಸನ್ಯಾಸಾಶ್ರಮವ ಸ್ವೀಕರುಸುತ್ತ°. ಸಾಂಸಾರಿಕ ಮೋಹ ಮತ್ತು ಹೆಂಡತಿ ಮಕ್ಕಳ ಸಂಬಂಧ ಬಿಟ್ಟಿಕ್ಕಿ ಸನ್ಯಾಸಾಶ್ರಮ  ಹಿಡಿವದು ಅಷ್ಟು ಸುಲಭವಲ್ಲ. ಆದರೆ, ಇಂತಹ ಕಷ್ಟಂಗಳನ್ನೂ ಸಹಿಸಿಗೊಂಬಲೆ ಸಮರ್ಥನಾದರೆ ನಿಶ್ಚಯವಾಗಿಯೂ ಅವನ ಆಧ್ಯಾತ್ಮ್ಕ ಸಾಕ್ಷಾತ್ಕಾರದ ಮಾರ್ಗ ಸುಗಮವಾವ್ತು, ಪೂರ್ಣವಾವ್ತು.  ಹಾಂಗೇ ತನ್ನ ಕುಟುಂಬ, ಬಂಧು ಮಿತ್ರರೊಟ್ಟಿಂಗೆ ಯುದ್ಧಮಾಡ್ಳೆ ಕಷ್ಟವಪ್ಪದಾದರೂ ಅರ್ಜುನ° ಕ್ಷತ್ರಿಯನಾಗಿ ತನ್ನ ಕರ್ತವ್ಯಲ್ಲಿ ಮುಂದುವರಿಯೆಕ್ಕು ಹೇದು ಭಗವಂತನ ಉಪದೇಶ ಇಲ್ಲಿ.

ಬನ್ನಂಜೆ ಇದರ ಈ ರೀತಿ ವ್ಯಖ್ಯಾನಿಸುತ್ತವು – ಕೃಷ್ಣ° ಹೇದ ಆ ‘ಸೀತೋಷ್ಣ ಸುಖದುಃಖ’ ಯಾವ ಪುರುಷಂಗೆ ತಾಂಟುತ್ತಿಲ್ಲ್ಯೋ ಅವನೇ ‘ಧೀರ°’. ಇಲ್ಲಿ ಪುರುಷ ಹೇದರೆ ಗಂಡಸು ಹೇಳ್ವ ಅರ್ಥ ಅಲ್ಲ. ಪುರುಷರಿಂಗೆ ಮಾತ್ರ ಮೋಕ್ಷ ಸಾಧನೆ ಸಾಧ್ಯ ಹೇಳ್ವದು ತಪ್ಪು ಕಲ್ಪನೆ. ಇಲ್ಲಿ ಪುರುಷ ಹೇದರೆ ‘ಪುರದಲ್ಲಿ ಇರುವ ಜೀವ’. ಪುರ ಹೇದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಹೇದರೆ ಮಾನವರು (ಸಾಧಕ ಜೀವ / human being ).

ನಮ್ಮ ಜೀವನಲ್ಲಿ ಎಲ್ಲೋರು ಸುಖಪಡುಲೇ ಹಾತೊರೆತ್ತವು. ಆದರೆ ದುಃಖ ಅದರ ಮೂಲ ಹೇದು ತಿಳುದಿರ್ತವಿಲ್ಲೆ. ದುಃಖದ ಮೂಲ ಭಯ. ಭಯದ ಮೂಲ ಅಜ್ಞಾನ. ಹಾಂಗಾಗಿ ಜ್ಞಾನವಂತನಾಗಿ ಸುಖದುಃಖಂಗಳ, ಸಿಹಿಕಹಿಗಳ, ಶೀತೋಷ್ಣವ ಸಮಚಿತ್ತಂದ ಸ್ವೀಕರುಸೆಕು. ಇವ್ವು ಜೀವನಲ್ಲಿ ಬಪ್ಪ ಅಲೆಗೊ. ಇದರಲ್ಲಿ ಒಂದು ಬೇಕು ಇನ್ನೊಂದು ಬೇಡ ಹೇಳ್ವ ಆಯ್ಕೆ ಇಲ್ಲೆ. ಏವುದು ಬಂದರೂ ಸಮರ್ಥವಾಗಿ ಸ್ವೀಕರುಸಿ ನಿಭಾಯಿಸುವವನೇ ಧೀರ°. ಇಂತಹ ಮಾನಸಿಕ ಸಮತೋಲನಂದ ಭಗವಂತನ ತಿಳುದು ಮೋಕ್ಷ ಪಡವಲೆ ಸಾಧ್ಯ.

ಶ್ಲೋಕ

ನಾಸತೋ ವಿದ್ಯತೇಭಾವೋ ನಾsಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋsನ್ತಃ ತ್ವನಯೋಸ್ತತ್ತ್ವದರ್ಶಿಭಿಃ ॥೧೬॥

ಪದವಿಭಾಗ

ಅಸತಃ ವಿದ್ಯತೇ ಭಾವಃ ನ ಅಭಾವಃ ವಿದ್ಯತೇ ಸತಃ । ಉಭಯೋಃ ಅಪಿ ದೃಷ್ಟಃ ಅಂತಃ ತು ಅನಯೋಃ ತತ್ವ-ದರ್ಶಿಭಿಃ ॥

ಅನ್ವಯ

ಅಸತಃ ಭಾವಃ ನ ವಿದ್ಯತೇ ಸತಃ ಅಭಾವಃ ನ ವಿದ್ಯತೇ । ತತ್ತ್ವ-ದರ್ಶಿಭಿಃ ತು ಉಭಯೋಃ ಅಪಿ ಅನಯೋಃ ಅಂತಃ ದೃಷ್ಟಃ ।

ಪ್ರತಿಪದಾರ್ಥ

ಅಸತಃ  ಭಾವಃ – ಅಸ್ತಿತ್ವಲ್ಲಿ ಇಲ್ಲದ್ದೇ ಇಪ್ಪದರ ಉಳಿವು,  ನ ವಿದ್ಯತೇ – ಎಂದಿಂಗೂ ಇರ್ತಿಲ್ಲೆ, ಸತಃ – ಶಾಶ್ವತವಾದ್ದು,  ಅಭಾವಃ –   ಇಲ್ಲದ್ದಪ್ಪ ಗುಣ, ನ ವಿದ್ಯತೇ – ಎಂದಿಂಗೂ ಇರ್ತಿಲ್ಲೆ,  ತತ್ತ್ವ-ದರ್ಶಿಭಿಃ – ಸತ್ಯದ ದೃಷ್ಟಾರರಿಂದ, ಉಭಯೋಃ – ಎರಡರ, ಅಪಿ – (ಕೂಡ) ಸ್ಪಷ್ಟವಾಗಿ, ಅನಯೋಃ – ಅವ್ವೆರಡರ, ಅಂತಃ – ಅಂತಿಮ ತೀರ್ಮಾನವು,  ದೃಷ್ಟಃ – ನೋಡಲ್ಪಟ್ಟಿದು.

ಅನ್ವಯಾರ್ಥ

ಅಸತ್ಯವಾಗಿಪ್ಪದಕ್ಕೆ ಅಸ್ತಿತ್ವ ಇರುತ್ತಿಲ್ಲೆ. ಸತ್ಯವಾಗಿಪ್ಪದ್ದಕ್ಕೆ ನಾಶವೂ ಇರ್ತಿಲ್ಲೆ. ಇವ್ವೆರಡರ ಸ್ವರೂಪ ಜ್ಞಾನಿಗೊಕ್ಕೆ ತಿಳುದಿರ್ತು.

ತಾತ್ಪರ್ಯ / ವಿವರಣೆ

ಅಸ್ತಿತ್ವದಲ್ಲದ್ದಿಪ್ಪದು (ಐಹಿಕ ದೇಹ) ಶಾಶ್ವತವಾಗಿ ಉಳಿತ್ತಿಲ್ಲೆ. ಸತ್ಯವಾದ್ದು (ಆತ್ಮ) ನಿರಂತರವಾಗಿ ಬದಲಾವಣೆ ಆಗದ್ದೆ ಇರ್ತು.  ಈ ಎರಡರ ತತ್ವದ ಸತ್ಯದ ತೀರ್ಮಾನ ಜ್ಞಾನಿಗೊ ದೃಷ್ಟಾಂತಂದ ತಿಳುದಿರ್ತವು.

ಬದಲಾವಣೆ ಆವ್ತಲೇ ಇಪ್ಪ ದೇಹಕ್ಕೆ ಉಳಿವು ಶಾಶ್ವತ ಅಲ್ಲ. ಜೀವಕಣಗಳ ಕ್ರಿಯೆ ಮತ್ತು ಪ್ರಕ್ರಿಯೆಂಗಳಿಂದ ಪ್ರತಿಕ್ಷಣಕ್ಕೂ ದೇಹ ಬದಲಾವಣೆ ಹೊಂದುತ್ತಾ ಇರ್ತು. ಹೀಂಗೆ ದೇಹದ ಬೆಳವಣಿಗೆ ಮತ್ತು ವೃದ್ಧಾಪ್ಯಕ್ಕೆ ಒಳಗಾವ್ತು. ಆದರೆ, ಆತ್ಮವು ನಿರಂತರ ಶಾಶ್ವತ ವಾದ್ದು. ದೇಹಲ್ಲಿ ಮತ್ತು ಮನಸ್ಸಿಲ್ಲಿ ಏನೇ ಬದಲಾವಣೆ ಆದರೂ ಆತ್ಮ ಮಾತ್ರ ನಿರಂತರ ಒಂದೇ ರೀತಿಲಿ ಒಳಿತ್ತು. ಭೌತಿಕ ದೇಹಕ್ಕೂ ಆತ್ಮಕ್ಕೂ ಇದೇ ವ್ಯತ್ಯಾಸ.

ಅಜ್ಞಾನದ ಪ್ರಭಾವಂದ ದಿಗ್ಭ್ರಮೆಯಾದ ಎಲ್ಲ ಜೀವಿಗೊಕ್ಕೆ ಭಗವಂತನ ಮಾರ್ಗದರ್ಶನದ ಪ್ರಾರಂಭ ಇದುವೇ. ಅಜ್ಞಾನವ ಹೋಗಲಾಡುಸೆಕ್ಕಾರೆ ಪೂಜಿಸುವವ° ಮತ್ತು ಪೂಜನೀಯವಾಗಿಪ್ಪವ ಇವರ ನಿರಂತರ ಸಂಬಂಧ ಮತ್ತೆ ಸ್ಥಾಪಿಸೆಕ್ಕು. ಇದರ ಪರಿಣಾಮವಾಗಿ ಜೀವಿಗೊ ಮತ್ತು ದೇವೋತ್ತಮ ಪರಮ ಪುರುಷನ ನಡುವಿನ ವ್ಯತ್ಯಾಸದ ಅರಿವು ಖಚಿತವಕ್ಕು. ಸುಖ ದುಃಖವ ಮೀರಿ ನಿಂಬಲೆಡಿಗು. ಅದೊಂದು ಮಾನಸಿಕ ಸ್ಥಿತಿ. ಸತ್‍ಂದ ಅಭಾವವಿಲ್ಲೆ, ಅಸತ್‍ಂಲ್ಲಿ ಭಾವವಿಲ್ಲೆ. ಹೇಳಿರೆ., ಒಳ್ಳೆಯ ಕೆಲಸ ಮಾಡುವದಿರಿಂದ ಎಂದೂ ದುಃಖಪಡೆಕ್ಕಾದ್ದಿಲ್ಲೆ., ಕೆಟ್ಟ ಕೆಲಸ ಮಾಡಿ ಎಂದಿಂಗೂ ಸುಖ ಇಲ್ಲೆ. ಕೆಲವೊಂದರಿ ಕೆಟ್ಟ ಕೆಲಸ ಮಾಡುತ್ತವು ಸುಖ ಪಡುವವರಾಂಗೆ ಭಾಸ ಆದರೂ, ಅದು ತಾತ್ಕಾಲಿಕ. ಅಧರ್ಮದ ಹಾದಿ ತುಳುದವ° ಎಂದೂ ಯಶಸ್ಸು ಕಾಂಬಲೆ ಸಾಧ್ಯವಿಲ್ಲೆ. ಮಹಾಭಾರತ ಯುದ್ಧಕ್ಕೆ ಕಾರಣರಾದವು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಂದ ಯುದ್ಧಕ್ಕೆ ಸಜ್ಜಾದ್ದು. ಒಳ್ಳೆ ಕೆಲಸ ಮಾಡುವಾಗ ಆರ ಭಯವೂ ಬೇಡ. ಹಾಂಗಾಗಿ ದುಃಖವು ಅನಗತ್ಯ. ಧರ್ಮರಕ್ಷಣೆ ಕಾರ್ಯಲ್ಲಿ ‘ಎನ್ನವು’ ಹೇಳ್ವ ಮಾತು ಸಲ್ಲ.

ಬನ್ನಂಜೆ ಇನ್ನೂ ಇದರ ವಿಶ್ಲೇಷಿಸಿ ಹೇಳ್ತವು – ‘ಅಸತ್’ ಹೇದರೆ ಈ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿಪ್ಪ ಮೂಲ ಪ್ರಕೃತಿ. ಪ್ರಕೃತಿ ಅನಾದಿ ನಿತ್ಯ. ಈ ಪ್ರಕೃತಿಯ ಸೃಷ್ಟಿ ಮಾಡಿದ ಭಗವಂತ° (ಪುರುಷ°) ಅನಾದಿ ನಿತ್ಯ. ಪ್ರಕೃತಿ ಮತ್ತು ಪುರುಷಂಗೆ ಅಧೀನವಾಗಿಪ್ಪ ಜೀವ ಕೂಡ ಅನಾದಿ ನಿತ್ಯ. ಜೀವಕ್ಕೆ ಈ ಸ್ಥೂಲ ದೇಹ ಬಪ್ಪಂದ ಮದಲೂ ಜೀವ ಇತ್ತು. ಮುಂದೆಯೂ ಇರ್ತು. ಪಂಚಭೌತಿಕ ಶರೀರ ಕೇವಲ ಅತಿಥಿ. ಹೀಂಗಿಪ್ಪಗ ದೇಹಾಭಿಮಾನ ಸಲ್ಲ.

ಶ್ಲೋಕ

ಅವಿನಾಶಿ ತು ತದ್ ವಿದ್ಧಿ ಯೇನ ಸರ್ವಮಿದಂ ತತಮ್।
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ ಕರ್ತುಮರ್ಹತಿ ॥೧೭॥

ಪದವಿಭಾಗ

ಅವಿನಾಶಿ ತು ತತ್ ವಿದ್ಧಿ  ಯೇನ  ಸರ್ವಮಿದಮ್ ತತಮ್। ವಿನಾಶಮ್ ಅವ್ಯಯಸ್ಯ ಅಸ್ಯ ನ ಕಶ್ಚಿತ್ ಕರ್ತುಮ್ ಅರ್ಹತಿ ॥

ಅನ್ವಯ

ಯೇನ ಇದಂ ಸರ್ವಂ ತತಮ್, ತತ್ ತು ಅವಿನಾಶಿ ತತ್ ತ್ವಂ ವಿದ್ಧಿ । ಅಸ್ಯ ಅವ್ಯಯಸ್ಯ ವಿನಾಶಂ ಕರ್ತುಂ ಕಶ್ಚಿತ್ ನ ಅರ್ಹತಿ ।

ಪ್ರತಿಪದಾರ್ಥ

ಯೇನ – ಏವುದರಿಂದ, ಇದಮ್ ಸರ್ವಮ್ – ಈ ದೇಹದ ಎಲ್ಲವು,  ತತಮ್ – ವ್ಯಾಪಿಸಿದ್ದೋ, ತತ್ ತು – ಅದಾದರೋ, ಅವಿನಾಶಿ – ಏವತ್ತೂ ನಾಶವಾಗದ್ದು. ತತ್ ತ್ವಮ್  ವಿದ್ಧಿ – ಅದರ ನೀನು ತಿಳುಕ್ಕೊ. ಅಸ್ಯ ಅವ್ಯಯಸ್ಯ – ಈ  ಅವಿನಾಶಿಯಾದ್ದರ,  ವಿನಾಶಮ್ ಕರ್ತುಮ್ – ನಾಶಮಾಡ್ಳೆ, ಕಶ್ಚಿತ್ – ಆರೊಬ್ಬನೂ, ನ ಅರ್ಹತಿ – ಅರ್ಹನಾಗಿರುತ್ತನಿಲ್ಲೆ. 

ಅನ್ವಯಾರ್ಥ

ದೇಹವ ಯಾವುದು ವ್ಯಾಪಿಸಿಗೊಂಡಿದ್ದೋ ಅದು ಅವಿನಾಶಿ ಹೇಳಿ ತಿಳಿಯೆಕು. ನಾಶವಿಲ್ಲದ್ದ (ಅವಿನಾಶಿಯಾದ) ಆತ್ಮವ ಆರೊಬ್ಬನಿಂದಲೂ ನಾಶಮಾಡ್ಳೆ ಎಡಿಯ.

ತಾತ್ಪರ್ಯ / ವಿವರಣೆ

ಯಾವುದು ಎಲ್ಲಾ ಕಡೆ ವ್ಯಾಪಿಸಿಗೊಂಡಿದ್ದೋ ಅದಕ್ಕೆ ನಾಶ ಇಲ್ಲೆ. ಅದು ಅಕ್ಷರ. ಅ ವರ್ಣಂದದ ಕ್ಷ ವರೆಂಗೆ ಇಪ್ಪ ಐವತ್ತೊಂದು ವರ್ಣಂಗೊ. ಈ ಐವತ್ತೊಂದು ಅಕ್ಷರಂಗಳೇ ಮೂಲಭೂತವಾಗಿಪ್ಪ ಇಡೀ ಶಬ್ದ ಪ್ರಪಂಚ. ಅದು ನಾಶಮಾಡಲೆಡಿಯದ್ದ ತತ್ವ.  ಹಾಂಗಾಗಿ ಭಗವಂತ°, ಪ್ರಕೃತಿ, ಜೀವ ಮತ್ತೆ ಈ ಎಲ್ಲಾ ತತ್ವಂಗಳ ಪ್ರತಿಪಾದುಸುವ ಶಬ್ದ – ವೇದ. ಇವೆಲ್ಲ ಅನಾದಿ ನಿತ್ಯ. ಆರಿಂದಲೂ ನಾಶ ಮಾಡ್ಳೆ ಸಾಧ್ಯ ಇಲ್ಲೆ. ದೇಹವ ಆವರಿಸಿಪ್ಪದು ಯಾವುದು ಹೇದು ಎಲ್ಲೋರಿಂಗೂ ಗೊಂತಿದ್ದು. ಇದು ಪ್ರಜ್ಞೆ. ಒಂದು ದೇಹದ ನೋವು ನಲಿವು ಇನ್ನೊಂದು ದೇಹಕ್ಕೆ ಗೊಂತಾಗ. ಹಾಂಗಾಗಿ ಪ್ರತಿಯೊಂದು ದೇಹಲ್ಲಿಯೂ ಒಂದು ಪ್ರತ್ಯೇಕ ಆತ್ಮ ಇದ್ದು ಹೇದು ಆತು. ಆತ್ಮದ ಅಸ್ತಿತ್ವದ ಲಕ್ಷಣ ವೈಯಕ್ತಿಕ ಪ್ರಜ್ಞೆಯಾಗಿ ಕಾಣಿಸಿಗೊಳ್ಳುತ್ತು. ಆತ್ಮವು ಒಂದು ಕೂದಲಿನ ಮೊನೆಯ ಮೇಲ್ಭಾಗದ ಹತ್ತು ಸಾವಿರ ಭಾಗದ ಒಂದು ಭಾಗದಷ್ಟಕ್ಕೆ ಇರ್ತು ಶ್ವೇತಾಶ್ವತರ ಉಪನಿಷತ್ತಿಲ್ಲಿ ಹೇಳಿದ್ದಡ. ಹಾಂಗಾಗಿ ಆತ್ಮದ ಪ್ರತಿ ಬಿಡಿ ಅಣುವೂ ಒಂದು ಆಧ್ಯಾತ್ಮಿಕ ಅಣು. ಇದು ಭೌತದ್ರವ್ಯದ ಅಣುಗಳಿಂತ ಸಣ್ಣದು. ಇಂತಹ ಅಣುಗಳ ಲೆಕ್ಕಮಾಡ್ಳೂ ಎಡಿಯ. ಈ ಬಹುಸೂಕ್ಷ್ಮವಾದ ಆಧ್ಯಾತ್ಮ್ಕ ಕಿಡಿಯೇ ಐಹಿಕ ದೇಹದ ಮೂಲತತ್ವ. ಒಂದು ಔಷಧಿಯ ಚೈತನ್ಯಶಾಲಿ ತತ್ವವು ದೇಹದಲ್ಲೆಲ್ಲಾ ಹಬ್ಬುತ್ತ ಹಾಂಗೆ ಈ ಆಧ್ಯಾತ್ಮಿಕ ಕಿಡಿಯ ಪ್ರಭಾವ ದೇಹವನ್ನೆಲ್ಲ ಆವರುಸುತ್ತು. ಆತ್ಮದ ಈ ಪ್ರವಾಹವು ದೇಹಲ್ಲ್ಯೆಲ್ಲ ಪ್ರಜ್ಞೆ ಹೇದು ಅನುಭವವಪ್ಪದು. ಆತ್ಮದ ಅಸ್ತಿತ್ವಕ್ಕೆ ಇದೇ ಪ್ರಮಾಣ ಹೇದು ವಿದ್ವಾಂಸರ ವ್ಯಾಖ್ಯಾನ.

ಶ್ಲೋಕ

ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋsಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ ॥೧೮॥

ಪದವಿಭಾಗ

ಅಂತವಂತಃ ಇಮೇ ದೇಹಾಃ ನಿತ್ಯಸ್ಯ ಉಕ್ತಾಃ ಶರೀರಿಣಃ । ಅನಾಶಿನಃ ಅಪ್ರಮೇಯಸ್ಯ ತಸ್ಮಾತ್ ಯುಧ್ಯಸ್ವ ಭಾರತ ॥

ಅನ್ವಯ

ಅನಾಶಿನಃ ಅಪ್ರಮೇಯಸ್ಯ ನಿತ್ಯಸ್ಯ ಶರೀರಿಣಃ ಇಮೇ ದೇಹಾಃ ಅಂತವಂತಃ ಉಕ್ತಾಃ । ಹೇ ಭಾರತ!, ತಸ್ಮಾತ್ ಯುಧ್ಯಸ್ವ ।

ಪ್ರತಿಪದಾರ್ಥ

ಅನಾಶಿನಃ – ಎಂದಿಂಗೂ ನಾಶವಾಗದ್ದವುಗೊ, ಅಪ್ರಮೇಯಸ್ಯ – ಅಳೆವಲೆಡಿಯದ್ದ, ನಿತ್ಯಸ್ಯ – ಅಸ್ತಿತ್ವಲ್ಲಿ ಶಾಶ್ವತವಾದ, ಶರೀರಿಣಃ – ದೇಹಧಾರಿ ಆತ್ಮನ, ಇಮೇ ದೇಹಾಃ – ಈ ಎಲ್ಲ ಭೌತಿಕ ಶರೀರಂಗೊ, ಅಂತವಂತಃ – ನಾಶವಪ್ಪಂತವು, ಉಕ್ತಾಃ – ಹೇಳಲಾಯ್ದು, ಹೇ ಭಾರತ! – ಓ ಭರತವಂಶದವನೇ!, ತಸ್ಮಾತ್ – ಹಾಂಗಾಗಿ, ಯುಧ್ಯಸ್ವ – ನೀನು ಯುದ್ಧಮಾಡು.

ಅನ್ವಯಾರ್ಥ

ಜೀವಾತ್ಮ° ಶರೀರಧಾರಿಯಾಗಿದ್ದೂ ನಿತ್ಯನೂ, ನಾಶರಹಿತನೂ, ಅಗೋಚರನೂ ಆಗಿದ್ದರೂ ಅವನ ದೇಹಕ್ಕೆ (ಶರೀರಕ್ಕೆ) ನಾಶವು ತಪ್ಪಿದ್ದಲ್ಲ. ಹಾಂಗಾಗಿ ಹೇ ಭರತವಂಶಜನೇ! ಯುದ್ಧಮಾಡು.

ತಾತ್ಪರ್ಯ / ವಿವರಣೆ

ಐಹಿಕ ದೇಹದ ನಾಶ ಸ್ವಭಾವಸಿದ್ಧವಾದ್ದು. ಅದು ಎಂದು ಬೇಕಾರು ನಾಶ ಅಪ್ಪಲೆಡಿಗು. ಏವತ್ತು ನಾಶ ಆವ್ತು ಹೇಳ್ವದು ಮಾತ್ರ ವಿಷಯ. ಆದರೆ, ಅದರ ಅನಿಶ್ಚಿತ ಕಾಲದ ವರೇಂಗೆ ಉಳಿಸಿಕೊಂಬಲೆ ಸಾಧ್ಯ ಇಲ್ಲೆ. ಆದರೆ, ಆತ್ಮ ಅತಿ ಸೂಕ್ಷ್ಮವಾಗಿಯೂ ಕಣ್ಣಿಂಗೆ ಕಾಣದ್ದೆಯೂ ಇಪ್ಪದು. ಐಹಿಕ ದೇಹವ ಬಹುಕಾಲ ಉಳುಸುವ ಹಾಂಗೂ ಇಲ್ಲೆ, ಶಾಶ್ವತವಾಗಿ ರಕ್ಷಿಸಿಗೊಂಬಲೂ ಎಡಿಯ. ಹಾಂಗಾಗಿ ಎರಡು ಕಾರಣಂದಲೂ ಶೋಕಕ್ಕೆ ಕಾರಣವೇ ಇಲ್ಲೆ. ಸಂಪೂರ್ಣ ಆತ್ಮದ ಸೂಕ್ಷ್ಮಾಂಶವು ಅದರ ಕರ್ಮಕ್ಕೆ ಅನುಗುಣವಾಗಿ ಐಹಿಕ ಶರೀರವ ಪಡಕ್ಕೊಳ್ಳುತ್ತು. ಹಾಂಗಾಗಿ ಧಾರ್ಮಿಕ ಸೂತ್ರಂಗಳ ಅನುಷ್ಠಾನಂದ ಪ್ರಯೋಜನ ಪಡಕ್ಕೊಳ್ಳೆಕ್ಕು. ಸೂರ್ಯನ ಪ್ರಕಾಶ ಇಡೀ ವಿಶ್ವವ ಪಾಲುಸುತ್ತ ಹಾಂಗೆ ಆತ್ಮದ ಪ್ರಕಾಶ ಈ ಐಹಿಕ ಶರೀರವ ಪಾಲುಸುತ್ತು. ಆತ್ಮವು ಐಹಿಕ ದೇಹವ ತ್ಯಜಿಸುತ್ತಲೇ ದೇಹ ಕೊಳವಲೆ ಸುರುವಾವ್ತು. ಹಾಂಗಾಗಿ ದೇಹವ ಪಾಲುಸುದು ಆತ್ಮವೇ. ಧಾರ್ಮಿಕ ಗುರಿಯ ಐಹಿಕ ಮತ್ತು ಶಾರೀರಿಕ ಕಾರಣಂಗೊಕ್ಕೆ ಬಲಿಕೊಡದ್ದೆ ಯುದ್ಧ ಮಾಡು ಹೇಳಿ ಅರ್ಜುನಂಗೆ ಕೃಷ್ಣ° ಹೇಳುತ್ತ°.

ಭೌತಿಕ ಶರೀರ ಅಂತವಂತ (ನಾಶವಾಗುವಂತದ್ದು). ಕೇವಲ ಕಣ್ಣಿಂಗೆ ಕಾಂಬ ಈ ಸ್ಥೂಲ ಶರೀರ ಮಾತ್ರ ನಾಶ ಅಪ್ಪದೇ ಹೊರತು ಆತ್ಮ ಅಲ್ಲ. ಆತ್ಮವು ಭಗವಂತನ ಪ್ರತಿಬಿಂಬ. ಹಾಂಗಾಗಿ ಈ ಜೀವ (ಆತ್ಮ) ನಿತ್ಯ. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಹೇಳ್ವಾಂಗೆ ಯುದ್ಧ ಮಾಡು ಹೇದು ಅರ್ಜುನಂಗೆ ಭಗವಂತ° ಉಪದೇಶಿಸುತ್ತ°. ನಾವು ನಮ್ಮ ದೈನಂದಿನ ಜೀವನಲ್ಲಿ ಮಾಡುವ ಕರ್ಮ ಕೂಡ ಹೀಂಗೆ. ಅದು ಭಗವಂತನ ಅರ್ಪಣಾ ರೂಪಲ್ಲಿರೆಕು. ಹಾಂಗಿಗಿಯೇ ಧಾರ್ಮಿಕ ಪೂಜಾ ಕಾರ್ಯದ ಅಕೇರಿಗೆ ಹೇಳುವದು – “ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ದ್ಯಾತ್ಮನಾವಾ ಪ್ರಕೃತೇಃ ಸ್ವಭಾವಾತ್ । ಕರೋಮಿಯದ್ಯತ್ಸಕಲಂ ಪರಸ್ಮೈ ನಾರಾಯಣೇತಿ ಸಮರ್ಪಯಾಮಿ”॥ – ಕಾಯಾ-ವಾಚಾ-ಮನಸಾ ಬುದ್ಧಿಪೂರ್ವಕ ಪ್ರಕೃತಿಸ್ವಭಾವಂದ ಮಾಡಿದ ಏವ ಈ ಕರ್ಮ/ಕಾರ್ಯ ಇದ್ದೋ ಅದೆಲ್ಲವ ಪರಬ್ರಹ್ಮನಾದ ನಾರಾಯಣಂಗೆ ಸಮರ್ಪುಸುತ್ತೆ.

ನವಗೆ ದೇಹ ಕೊಟ್ಟದು ಭಗವಂತ°. ಹಾಂಗಾಗಿ ಈ ದೇಹ ಹೋಪಗ ಕೂಗೇಕ್ಕಾದ ಅಗತ್ಯ ಇಲ್ಲೆ. ನಮ್ಮ ಪ್ರತಿಯೊಂದು ಕರ್ತವ್ಯವ ಭಗವಂತನ ಪೂಜೆ ಹೇಳಿ ಮಾಡಿ ಸಾವಿಂಗೆ ಹೆದರದೆ ಬದುಕಿರೆ ಜೀವನ ಸಾರ್ಥಕ ಹೇದು ಬನ್ನಂಜೆಯವರ ವ್ಯಾಖ್ಯಾನ.

ಶ್ಲೋಕ

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥೧೯॥

ಪದವಿಭಾಗ

ಯಃ ಏನಮ್ ವೇತ್ತಿ ಹಂತಾರಮ್ ಯಃ ಚ ಏನಮ್ ಮನ್ಯತೇ ಹತಮ್ । ಉಭೌ ತೌ ನ ವಿಜಾನೀತಃ ನ ಅಯಮ್ ಹಂತಿ ನ ಹನ್ಯತೇ ॥

ಅನ್ವಯ

ಯಃ ಏನಂ ಹಂತಾರಂ ವೇತ್ತಿ, ಯಃ ಚ ಏನಂ ಹತಂ ಮನ್ಯತೇ ತೌ ಉಭೌ ನ ವಿಜಾನೀತಃ, ಅಯಂ ನ ಹಂತಿ ನ ಹನ್ಯತೇ ।

ಪ್ರತಿಪದಾರ್ಥ

ಯಃ – ಆರು, ಏನಮ್ – ಇದರ, ಹಂತಾರಮ್ – ಕೊಲ್ಲುವವ ಹೇದು, ವೇತ್ತಿ – ತಿಳಿತ್ತನೋ, ಯಃ – ಆರು, ಚ – ಕೂಡ, ಏನಮ್ – ಇದರ , ಹತಮ್ – ಕೊಲ್ಲಲ್ಪಡುತ್ತು ಹೇದು, ಮನ್ಯತೇ – ಗ್ರೇಶುತ್ತನೊ, ತೌ ಉಭೌ – ಅವಿಬ್ರೂ,  ನ ವಿಜಾನೀತಃ – ಅರಡಿಯದ್ದೋರು (ತಿಳುವಳಿಕೆ ಇಲ್ಲದ್ದವು), ಅಯಮ್ – ಅದು, ನ ಹಂತಿ – ಎಂದಿಂಗೂ ಕೊಲ್ಲುತ್ತಿಲ್ಲೆ,  ನ ಹನ್ತ್ಯತೇ – ಕೊಲ್ಲಲ್ಪಡುತ್ತಿಲ್ಲೆ.

ಅನ್ವಯಾರ್ಥ

ಆತ್ಮಕ್ಕೆ ಸಾವು ಇದ್ದು ಹೇಳ್ವವನನ್ನೂ, ಅದರ ಕೊಲ್ಲಲೆಡಿಗು ಹೇಳ್ವವನನ್ನೂ ತಿಳುವಳಿಕೆ ಇಲ್ಲದ್ದ ಅಜ್ಞಾನಿ ಹೇದು ತಿಳುಕ್ಕೊ. ಸತ್ಯಾಂಶ ಎಂತ ಹೇದರೆ ಈ ಆತ್ಮ ಸಾಯುತ್ತನೂ ಇಲ್ಲೆ, ಕೊಲ್ಲಲ್ಪಡುತ್ತನೂ ಇಲ್ಲೆ.

ತಾತ್ಪರ್ಯ / ವಿವರಣೆ

ದೇಹಸ್ಥ ಜೀವಿಗೆ ಮಾರಕ ಆಯುಧ ಅಥವಾ ಇನ್ಯಾವುದೋ ಕಾರಣಂದ ಘಾಸಿ ಅಪ್ಪಗ ಆ ದೇಹದೊಳಗಣ ಜೀವಿಯು (ಆತ್ಮವು) ಸಾಯುತ್ತಿಲ್ಲೆ. ಯಾವುದೇ ರೀತಿ ಐಹಿಕ ಆಯುಧ ಕಾರಣಂದ ಆತ್ಮವ ಕೊಲ್ಲಲೆಡಿಯ. ಆತ್ಮ ಸಾವಲೂ ಇಲ್ಲೆ. ಸಾವದು ಐಹಿಕ ದೇಹ ಮಾತ್ರ. ಹೀಂಗೇದಮಾತ್ರಕ್ಕೆ ದೇಹವ ಕೊಲ್ಲುಲೆ ಸ್ವಾತಂತ್ರ್ಯ ಇದ್ದು ಹೇದು ಗ್ರೇಶಲೆಡಿಯ. ವೇದದ ಆದೇಶ – ‘ಮಾ ಹಿಂಸ್ಯಾತ್ ಸರ್ವಾಭೂತಾನಿ’ –  ಆರಿಂಗೂ ಹಿಂಸೆ ಮಾಡಬೇಡ. ಅಧಿಕಾರ ಇಲ್ಲದ್ದೆ ಆರನ್ನೇ ಕೊಲ್ಲುವದು ಹೇಯ ಕೃತ್ಯ. ಇದಕ್ಕೆ ದೇಶದ ಕಾನೂನಿಂದಲೂ ಭಗವಂತನ ಕಾನೂನಿನ ಪ್ರಕಾರವೂ ಶಿಕ್ಷೆಯಾಗತಕ್ಕದ್ದು. ಕೃಷ್ಣ° ಇಲ್ಲಿ ಅರ್ಜುನಂಗೆ ಯುದ್ಧಮಾಡು ಹೇಳುತ್ತ ಇಪ್ಪದು ಧಾರ್ಮಿಕ ಕರ್ತವ್ಯಂದಲೇ (ಭಗವಂತನ ಆದೇಶ) ಹೊರತು ಮನಸ್ವೇಚ್ಛೆಂದ ಅಲ್ಲ.

ಬನ್ನಂಜೆ ಹೇಳ್ತವು – ಜೀವವ (ಆತ್ಮವ) ಕೊಲ್ಲಲೆಡಿಗು, ಕೊಲ್ಲುತ್ತೆ ಹೇದು ಗ್ರೇಶುತ್ತವಂಗೆ ಅಲ್ಲ ಅದು ನಾಶ ಆತು ಸತ್ತತ್ತು  ಹೇದು ಗ್ರೇಶುವವಂಗೆ ತಿಳುವಳಿಕೆ ಇಲ್ಲೆ. ಎಂತಕೆ ಹೇದರೆ ಆತ್ಮ (ಜೀವ) ಸಾಯಿತ್ತೂ ಇಲ್ಲೆ, ಸಾಯಿಸಲ್ಪಡುತ್ತೂ ಇಲ್ಲೆ. ನವಗೆ ಸಾಯುತ್ತು, ಸತ್ತತ್ತು ಹೇದು ಕಾಂಬದು  ಭೌತಿಕ ಶರೀರ ಮಾತ್ರ. ಆತ್ಮಕ್ಕೆ ದೇಹದ ಮೂಲಕ ಕೊಲ್ಲುವ ವಾ ಸಾಯುವ ಸ್ವಾತಂತ್ರ್ಯ ಇಲ್ಲೆ. ಇಲ್ಲಿ ಅರ್ಜುನಂಗೆ ಕೌರವಾದಿಗೊ ಎನ್ನ ಕೈಂದ ಸಾಯುಗು ಹೇದು ಕಾಂಬದು ಬರೇ ಭ್ರಮೆ. ಸೃಷ್ಟಿ-ಸ್ಥಿತಿ-ಸಂಹಾರ ಕರ್ತನಾದ ಭಗವಂತನ ಇಚ್ಛೆ ಇಲ್ಲದ್ದೆ ಯಾವುದೂ ನಡೆತ್ತಿಲ್ಲೆ. ಅವನ ಇಚ್ಛೆಗೆ ವಿರುದ್ಧ ನವಗೆ ಏನೂ ಮಾಡ್ಳೆ ಸಾಧ್ಯ ಇಲ್ಲೆ.

ಶ್ಲೋಕ

ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾsಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋsಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥

ಪದವಿಭಾಗ

ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾ ವಾ ನ ಭೂಯಃ । ಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ ॥

ಅನ್ವಯ

ಅಯಂ ಕದಾಚಿತ್ ನ ಜಾಯತೇ, ನ ವಾ ಮ್ರಿಯತೇ, (ಅಯಂ) ಭೂತ್ವಾ ಭೂಯಃ ಅಭವಿತಾ ವಾ ನ । ಅಯಮ್ ಅಜಃ  ನಿತ್ಯಃ ಶಾಶ್ವತಃ ಪುರಾಣಃ, ಶರೀರೆ ಹನ್ಯಮಾನೇ ನ ಹನ್ಯತೇ ।

ಪ್ರತಿಪದಾರ್ಥ

ಅಯಮ್ – ಇದು, ಕದಾಚಿತ್ – ಏವತ್ತೂ (ಭೂತ, ವರ್ತಮಾನ, ಭವಿಷ್ಯತ್), ನ ಜಾಯತೇ – ಹುಟ್ಟುತ್ತಿಲ್ಲೆ, ನ ವಾ ಮ್ರಿಯತೇ – ಸಾಯುತ್ತೂ ಸಾನ ಇಲ್ಲೆ, (ಅಯಮ್ – ಇದು) ಭೂತ್ವಾ – ಅಸ್ತಿತ್ವಕ್ಕೆ ಬಂದು, ಭೂಯಃ – ಮತ್ತೆ ಬಂದು, ಅಭವಿತಾ – ಅಸ್ತಿತ್ವಕ್ಕೆ ಬಪ್ಪ, ವಾ – ಅಥವಾ, ನ – ಎಂದಿಂಗೂ ಇಲ್ಲೆ. ಅಯಮ್ – ಇದು, ಅಜಃ – ಹುಟ್ಟಿದ್ದು ಅಲ್ಲದ್ದು, ನಿತ್ಯಃ – ನಿತ್ಯವಾದ್ದು, ಶಾಶ್ವತಃ – ಶಾಶ್ವತವಾದ್ದು, ಶಾಶ್ವತಃ – ಶಾಶ್ವತವಾದ್ದು (ಅಳಿಯದ್ದು), ಪುರಾಣಃ – ಅತ್ಯಂತ ಪುರಾತನವಾದ್ದು, ಶರೀರೇ – ದೇಹಲ್ಲಿ, ಹನ್ಯಮಾನೇ – ಕೊಲ್ಲಲ್ಪಡ್ಳೆ ಎಡಿಗಪ್ಪದು, ನ – ಅಲ್ಲ/ಇಲ್ಲೆ,  ಹನ್ಯತೇ – ಕೊಲ್ಲಲ್ಪಡುವದು.

ಅನ್ವಯಾರ್ಥ

ಈ ಆತ್ಮ ಹುಟ್ಟುತ್ತೂ ಇಲ್ಲೆ, ಸಾಯುತ್ತೂ ಇಲ್ಲೆ. ಮದಲು ಇದ್ದು ಮತ್ತೆ ಇಲ್ಲದ್ದಿಪ್ಪವ ಹೇದು ಆವ್ತನೂ ಇಲ್ಲೆ. ಆತ್ಮಕ್ಕೆ ಹುಟ್ಟು ಇಲ್ಲೆ, ಸಾವೂ ಇಲ್ಲೆ. ಆತ್ಮ ಬೆರೆ ರೂಪ ಪಡವಲೆ ಇಲ್ಲೆ. ಬಹಳ ಪುರಾತನವಾದ ಆತ್ಮ ದೇಹವ ಕೊಂದರೆ ಸಾಯ.

ತಾತ್ಪರ್ಯ / ವಿವರಣೆ

ಆತ್ಮಕ್ಕೆ ಏವತ್ತೂ ಹುಟ್ಟೂ ಇಲ್ಲೆ, ಸಾವೂ ಇಲ್ಲೆ. ಅದು ಹಿಂದೆ ಹುಟ್ಟಿದ್ದಿಲ್ಲೆ, ಈಗ ಹುಟ್ಟಿ ಬತ್ತಿಲ್ಲೆ, ಮುಂದೆ ಹುಟ್ಟುತ್ತೂ ಇಲ್ಲೆ . ಅದು ಜನ್ಮರಹಿತವಾದ್ದು, ನಿತ್ಯವಾದ್ದು, ಶಾಶ್ವತವಾದ್ದು, ಪುರಾತನವಾದ್ದು. ದೇಹವ ಕೊಂದಪ್ಪಗ ಆತ್ಮ ಸಾಯುತ್ತಿಲ್ಲೆ.  ದೇಹಕ್ಕೆ ಆರು ಬಗೆಯ ಪರಿವರ್ತನೆ ಇದ್ದು. ಅದು ಅಬ್ಬೆಯ ಗರ್ಭಲ್ಲಿ ಹುಟ್ಟುತ್ತು, ರಜಾ ಕಾಲ ಅಲ್ಲಿರ್ತು, ಭೂಮಿಗೆ ಬತ್ತು, ಬೆಳೆತ್ತು, ಕೆಲವು ಪರಿಣಾಮ – ಬದಾಲವಣೆ ಹೊಂದುತ್ತು, ಕ್ರಮೇಣ ಕ್ಷೀಣಿಸುತ್ತು, ಕಡೇಂಗೆ ಮಾಯವಾಗಿ ಜನಂಗೊ ಮರದು ಬಿಡ್ತವು. ಆದರೆ ಆತ್ಮ ಇದಾವುದೇ ಪರಿವರ್ತನಗೆ ಒಳಪಟ್ಟುದಲ್ಲ. ಆತ್ಮ ಹುಟ್ಟುತ್ತಿಲ್ಲೆ. ಆದರೆ, ಅದು ಒಂದು ಐಹಿಕ ದೇಹವ ಧರಿಸಿಗೊಂಬುದರಿಂದ ದೇಹ ಜನ್ಮ ತಾಳುತ್ತು. ಆತ್ಮಕ್ಕೆ ಹುಟ್ಟು, ಭೂತಮ್ ವರ್ತಮಾನ, ಭವಿಷ್ಯತ್ ಹೇದು ಇಲ್ಲೆ. ಆತ್ಮ ನಿತ್ಯವಾದ್ದು, ಶಾಶ್ವತವಾದ್ದು, ಪುರಾತನವಾದ್ದು. ಅದರ ಕುರುಹು ಯಾವುದೇ ಚರಿತ್ರೆಲಿ ಇಲ್ಲೆ. ದೇಹದ ಬದಲಾವಣೆ ಅಪ್ಪಂತೆ ಆತ್ಮಕ್ಕೆ ಬದಲಾವಣೆ ಅಪ್ಪಲಿಲ್ಲೆ. ಅದಕ್ಕೆ ವೃದ್ಧಿ ಕ್ಷೀಣ ಇಲ್ಲೆ. ಆತ್ಮಕ್ಕೆ ಉಪಉತ್ಪತ್ತಿಯೂ ಇಲ್ಲೆ. ದೇಹದ ಉಪ ಉತ್ಪತ್ತಿಗಳಾದ ಮಕ್ಕೊ ಪ್ರತ್ಯೇಕವಾದ, ಭಿನ್ನವಾದ ಆತ್ಮಂಗಳೇ. ಶರೀರದ ಕಾರಣಂದಾಗಿ ನಿರ್ದಿಷ್ಟ ವ್ಯಕ್ತಿಯ ಮಕ್ಕೊ ಆಗಿ ಕಾಣಿಸಿಗೊಂಬದು. ಆತ್ಮದ ಇರುವಿಕೆಂದ ದೇಹ ಬೆಳೆತ್ತು. ಆದರೆ ಆತ್ಮಕ್ಕೆ ಶಾಖೆಗೊ ಆಗಲೀ ಬದಲಾವಣೆಗೊ ಆಗಲೀ ಇಲ್ಲೆ.

ಕಠೋಪನಿಷತ್ತಿಲ್ಲಿ ಬಪ್ಪ ಇದೇ ಭಾಗ –  “ನ ಜಾಯತೇ ಮ್ರಿಯತೇ ವಾ ವಿಪಶ್ಚಿನ್ ನಾಯಂ ಕುತಶ್ಚಿನ್ ನ ಬಭೂವ ಕಶ್ಚಿತ್ । ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ” ॥ ಕಠೋ..೧.೨.೧೮) . ಮೇಗಾಣ ಅದೇ ತಾತ್ಪರ್ಯ ಇಲ್ಲಿಯೂ. ಇದೇ ಕಠೋಪನಿಷತ್ತಿಲ್ಲಿ ಬಪ್ಪ- “ಅಣೋsರಣೀಯಾನ್ ಮಹತೋ ಮಹೀಯಾನ್ ಆತ್ಮಾಸ್ಯ ಜಂತೋರ್ನಿಹಿತೋ ಗುಹಾಯಾಮ್। ತಂ ಅಕ್ರತುಃ ಪಶ್ಯತಿ ವೀತ ಶೋಕೋ ಧಾತುಃ ಪ್ರಸಾದಾನ್ ಮಹಿಮಾನಮ್ ಆತ್ಮನಃ” ॥ (ಕಠೋ.. ೧.೨.೨೦)- ಪರಮಾತ್ಮವೂ ಜೀವಾತ್ಮವೂ ಜೀವಿಯ ದೇಹ ಎಂಬ ಒಂದೇ ವೃಕ್ಷದ ಮೇಗೆ, ಒಂದೇ ಹೃದಯಲ್ಲಿ ನೆಲೆಸಿದ್ದು. ಎಲ್ಲ ಐಹಿಕ ಬಯಕೆಗಳಿಂದ ಮತ್ತು ಶೋಕಂಗಳಿಂದ ಮುಕ್ತನಾದವ° ಮಾತ್ರ ಪರಮಾತ್ಮನ ಕೃಪೆಂದ ಆತ್ಮದ ಮಹಿಮೆಯ ತಿಳ್ಕೊಂಬಲೆ ಎಡಿತ್ತ°.

ಕೃಷ್ಣಪರಮಾತ್ಮ° ಆದಿಮೂಲ°. ಅರ್ಜುನ° ತನ್ನ ನಿಜವಾದ ಸ್ವರೂಪವ ಮರೆತಿಪ್ಪ ಜೀವಾತ್ಮ°. ಹಾಂಗಾಗಿ ಜೀವಾತ್ಮ° ಪರಮಾತ್ಮನಿಂದ ಅವನ ನೈಜ ಪ್ರತಿನಿಧಿಯಿಂದ (ಗುರು ಕೃಷ್ಣನಿಂದ) ಜ್ಞಾನೋದಯ ಪಡೆಯೇಕ್ಕಾಗಿದ್ದು.

ಮುಂದೆ ಎಂತ ಆತು.. ಬಪ್ಪ ವಾರ ನೋಡುವೋ°

ಶ್ಲೋಕಂಗೊ ಕೆಮಿಲಿ ಕೇಳ್ಳೆ –

BHAGAVADGEETHA – CHAPTER 02 SHLOKAS 11 – 20 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in


…. ಮುಂದುವರಿತ್ತು

24 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20

  1. ಚೆನ್ನೈ ಭಾವ .. ಎ೦ತಾ ಹೇಳುದು ಗೊತ್ತಿಲ್ಲೆ … ನಮೋನಮಃ ಹೇಳ್ತಾ ಇದ್ದೆ …
    ನಿಧಾನಕ್ಕೆ ಇಲ್ಲಿಯವರೆಗೆ ಬಂದು ಮುಟ್ಟಿದ್ದೆ .. ಮುಂದೆ ಮುಂದೆ ಕರ್ಕೊಂಡು ಹೋಗಿ .. 🙂

    1. ಗೀತಾಚಾರ್ಯಂಗೆ ಅರ್ಪಣೆ . ಬನ್ನಂಜೆ ಮೊದಲಾದ ಮೇಧಾವಿಗೊಕ್ಕೆ ನಮೋ ನಮಃ . ಎನ್ನದು ಬರೇ ಸಂಗ್ರಹ.

  2. ಬಹುಶಃ ಮೋಹಲ್ಲಿ ಕುರುಡಾಗಿ ಮನಸ್ಸು ಬುದ್ಧಿಯ ಅದಕ್ಕೆ ಬೇಕಾದ ಹಾಂಗೆ ಆಡುಸುತ್ತೋ ತೋರುತ್ತು..
    ಸರಿ ತಪ್ಪಿನ ವಿವೇಚನೆ ಇಲ್ಲದ್ದೆ, ಈಗ ಅನ್ಸಿದ್ದರ ಮಾತ್ರ ಸತ್ಯ ಗ್ರೇಶಿಯೊಂಡು, “ಯುದ್ಧ ಮಾಡೆ” ಹೇಳಿ ಕೂದ ಅರ್ಜುನನ ಕೃಷ್ಣ ನಿಧಾನಕ್ಕೆ ದಾರಿಗೆ ತತ್ತಾ ಇದ್ದ°.
    “ಅಪ್ಪೋ?, ಭಾರೀ ಗೊಂತಿಪ್ಪೋರ ಹಾಂಗೆ ಮಾತಾಡ್ತಾ ಇದ್ದೆ ಅನ್ನೇ..? ಈ ದೇಹಂಗಳ ಒಳ ಇಪ್ಪ ಆತ್ಮ (ನಾವು) ಸಾವಲಿಲ್ಲೆ ಹೇಳಿ ಗೊಂತಿಲ್ಲೆಯೋ ನಿನಗೆ? ಸತ್ತು ಬೀಳುದು ಈ ದೇಹ ಅಲ್ಲದೋ? ನೀನು ಧೀಶಕ್ತಿ ಇಪ್ಪವ°, ಗೊಂತಿಪ್ಪವ° ನೀನು ಬೇಜಾರು ಮಾಡುತ್ಸು ಸರಿಯೋ? ಆತ್ಮ ಹುಟ್ಟುದೂ ಹೇಳಿ ಇದ್ದೋ, ಸಾವದೂ ಹೇಳಿ ಇದ್ದೋ, ಅದೊಂದು ಏವತ್ತೂ ಇಪ್ಪ ಪ್ರಜ್ಣ್ಘೆ ಅಲ್ಲದೋ?”

    {ಆದ್ದರಿಂದ ಆತ್ಮದ ಪ್ರತಿ ಬಿಡಿ ಅಣುವೂ ಒಂದು ಆಧ್ಯಾತ್ಮಿಕ ಅಣು. ಇದು ಭೌತದ್ರವ್ಯದ ಅಣುಗಳಿಂತ ಸಣ್ಣದು. ಇಂತಹ ಅಣುಗಳ ಲೆಕ್ಕಮಾಡ್ಳೂ ಎಡಿಯ. ಈ ಬಹುಸೂಕ್ಷ್ಮವಾದ ಆಧ್ಯಾತ್ಮ್ಕ ಕಿಡಿಯೇ ಐಹಿಕ ದೇಹದ ಮೂಲತತ್ವ. ಒಂದು ಅಔಷಧಿಯ ಚೈತನ್ಯಶಾಲಿ ತತ್ವವು ದೇಹದಲ್ಲೆಲ್ಲಾ ಹಬ್ಬುತ್ತ ಹಾಂಗೆ ಈ ಆಧ್ಯಾತ್ಮಿಕ ಕಿಡಿಯ ಪ್ರಭಾವ ದೇಹವನ್ನೆಲ್ಲ ಆವರುಸುತ್ತು. } – ಇದೀಗ new scienceಲಿ ಹೇಳ್ತವಿದಾ, matter is not made up of matter, but the energy ಹೇಳಿ. ಅದು ಇಲ್ಲಿಯೇ ಬಂತನ್ನೇ?

    ಅದಪ್ಪು ಭಾವಾ,
    ಎಂದೋ ಕೇಳಿದ ಪ್ರಷ್ನೆ ನೆಂಪಾವುತ್ತು.
    “ಆತ್ಮದ ಸಂಖ್ಯೆ ಸ್ಥಿರವೇ?
    ಹೌದಾದರೆ, ಜನಸಂಖ್ಯೆ ದಿನೇ ದಿನೇ ಹೆಚ್ಚಲು ಕಾರಣವೇನು?
    ಇಲ್ಲವಾದರೆ, ಆತ್ಮದ ಉತ್ಪತ್ತಿ ಎಲ್ಲಿಂದ?

    1. [ಅವಿನಾಶಿ ತು ತದ್ ವಿದ್ಧಿ ಏನ ಸರ್ವಮಿದಂ ತತಂ।
      ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ ಕರ್ತುಮರ್ಹತಿ ॥೧೭॥ ] ಈ ವಿಶ್ಲೇಷಣೆಯ ಗಮನಿಸಿರೆ, ಆತ್ಮಾ ತು ಅವಿನಾಶಿ ಹೇಳಿ ನಾವು ತಿಳ್ಕೊಂಡತ್ತು. ವಿಜ್ಞಾನಿಗಳೂ ಹೇಳುವದು ಈ ಪ್ರಪಂಚಲ್ಲಿ ಯಾವುದೊಂದನ್ನೂ ಹೊಸತ್ತಾಗಿ ಸೃಷ್ಟಿ ಮಾಡ್ಳೆ ಎಡಿಯ ಹೇಳಿಯೇ. ಬರೇ ರೂಪಾಂತರ ಹೇದು ಅವರ ವಾದವೂ. ಆತ್ಮ ಸ್ಥೂಲ-ಸೂಕ್ಷ್ಮ-ಲಿಂಗವ್ಯಾಪಿಯಾಗಿ ಇದ್ದು.
      ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾsಯಂ ಭೂತ್ವಾ ಭವಿತಾ ವಾ ನ ಭೂಯಃ ।
      ಅಜೋ ನಿತ್ಯಃ ಶಾಶ್ವತೋsಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥ – ಎಂಬ ಆಧಾರಂದ ಹೇಳ್ತರೆ, ಆತ್ಮ ಎಂಬುದು ಹುಟ್ಟು ಸಾವಿಂಗೆ ಒಳಪಟ್ಟದಲ್ಲ. ಅತ್ಮಾ ಎಂಬುದು ಭಗವಂತನ ವಿಭಿನ್ನಾಂಶ. ಸರ್ವ ಚರಾಚರಲ್ಲಿ ವ್ಯಾಪಿಸಿಪ್ಪದು.
      ಜೀವಿಯು ಕರ್ಮಫಲಾನುಕ್ಕನುಗುಣವಾಗಿ ಈ ದೇಹವಬಿಟ್ಟು ಇನ್ನೊಂದು ದೇಹವಾಗಿ ಜನಿಸುತ್ತ°. ಅದು ಯಾವ ದೇಹ? – ಸ್ಥೂಲವೋ, ಸೂಕ್ಷ್ಮವೋ, ಲಿಂಗವೋ ಎಂಬುದು ನಾವು ನಿರ್ಧರಿಸಿ ಬಪ್ಪದಲ್ಲ. ಈಗ ಮನುಷ್ಯ ಜನಸಂಖ್ಯೆ ಹೆಚ್ಚಿಗೆ ಇದ್ದಾಂಗೆ ಕಾಣುತ್ತು. ಮದಲಿಂಗೆ ಇಷ್ಟು ಇತ್ತಿಲ್ಲೆ ಹೇಳಿರೆ ಅದು ಬೇರೆ ರೂಪಲ್ಲಿ (ಸ್ಥೂಲ-ಸೂಕ್ಷ್ಮ-ಲಿಂಗ) ಇತ್ತು ಹೇಳಿ ಅರ್ಥೈಸೆಕ್ಕಾವ್ತು. ಆ ಜನ್ಮದ ಕರ್ಮಫಲವ ಅನುಸರಿಸಿ ಈ ಕಾಲಲ್ಲಿ ಮನುಷ್ಯ ಜನ್ಮವ ಪಡಕ್ಕೊಂಡದು. ಮದಲೆ ಯಾವ ಜನ್ಮ ಇತ್ತು ಹೇಳ್ತದು ನವಗೆ ಗೊಂತಿಪ್ಪಲೆ ಇಲ್ಲೆ. ‘ಜಂತೂನಾಂ ನರಜನ್ಮ ದುರ್ಲಭಂ’ – ಹಾಂಗಾರೆ ಈ ಮನುಷ್ಯ ಜನ್ಮ ಪಡೆಕ್ಕಾರೆ ಮದಲೆಷ್ಟು ಜನ್ಮಂಗೊ ಯಾವ ರೂಪಲ್ಲಿ ಇತ್ತೋ, ಮುಂದಾಣ ಜನ್ಮಲ್ಲಿ ನಾವು ಮನುಷ್ಯರಾಗಿಯೇ ಹುಟ್ಟುಗೋ ಹೇಳಿ ನಾವು ನಿರ್ಧರುಸಲೆ ಇಲ್ಲೆ. ಅದು ಜೀವಿಯ ಕರ್ಮ ಫಲ. ಹಾಂಗಾರೆ ಜಗತ್ತಿನ ಸೃಷ್ಟಿಯೊಟ್ಟಿಂಗೇ ‘ಆತ್ಮಾ’ ಹೇಳ್ವ ವಿಷಯ ಇತ್ತಿದ್ದು ಹೇಳಿ ತಿಳ್ಕೊಳ್ಳೆಕ್ಕಾವ್ತು. ಆತ್ಮಾ ಇಲ್ಲದ್ದೆ ದೇಹಕ್ಕೆ ಶಕ್ತಿಯೂ, ಚಲನೆಯೂ ಇಲ್ಲೆ.

  3. ತಿದ್ದುಪಡಿ — ನಿಶ್ವಸಿತಂ (X ) ನಿ : ಶ್ವಸಿತಂ — (ಸರಿ) ನಿ ಆದ ಮೇಲೆ ಒಂದು ವಿಸರ್ಗ ಬೇಕು — ಈ ಗೂಗಲ್ ಕ್ಕನ್ನಡಲ್ಲಿ ನಿ ಆದ ಮೇಲೆ ವಿಸರ್ಗ ತಪ್ಪದು ಹೆಂಗೆ ಹೇಳಿ ಎನಗೆ ಗೊಂತಿಲ್ಲೇ. ನ ಆದ ಮೇಲೆ ವಿಸರ್ಗೆ ಸರಿಯಾಗಿ ಬತ್ತು – ನಃ |

    1. ಗೂಗುಲ್ ಕನ್ನಡ ಚಿಂತೆ ಬಿಡಿ ಮಾವ°. ಇದೇ ನಮ್ಮ ಬೈಲಿಲಿ ಬಲದ ಹೊಡೆಲಿ ಮೇಗೆ ಇದಾ ಯಾವ ಭಾಷೆ ಬೇಕಾರು ಸಿಲೆಕ್ಟ್ ಮಾಡಿ ಸುಲಭಲ್ಲಿ ಟೈಪ್ ಮಾಡ್ಳೆ ಸುಲಭ ಆವ್ತು. ಅಕ್ಷರ ಕೆಲವು ಹೇಂಗೆ ಹೇಳಿ ಗೊಂತಾಗದ್ರೆ ಅಲ್ಲೇ ಬಲದ ಹೊಡೆಲಿ ಇಪ್ಪ ? ಪ್ರಶ್ನಾರ್ಥಕ ಚಿಹ್ನೆ ಒತ್ತಿರೆ ಸಹಾಯ ಸಿಕ್ಕುತ್ತು. ಸಹಾಯ ಹೈಡ್ ಮಾಡ್ಳೆ ಅದೇ ಪ್ರಶ್ನಾರ್ಥಕ ಚಿಹ್ನೆ ಒತ್ತಿರೆ ಆತು. ಒಂದರಿ ಅಭ್ಯಾಸ ಅಪ್ಪನ್ನಾರ ರಜ ಎಡಕ್ಕು ಮುಡಕ್ಕು ಅಕ್ಕು. ಸಾರದ್ದಲ್ಲ.

      ನಿಂಗಳ ಅಭಿಮಾನಕ್ಕಂತೂ ನಮೋ ನಮಃ ।

  4. ಸ್ಥೂಲ- ಸೂಕ್ಷ್ಮ ; ಪ್ರಕೃತಿ -ಪುರುಷ; ನಾಶ -ಅವಿನಾಶ ಹಿಂಗೆ ಆಳವಾಗಿ ತಿಳಿವಲೆ ಹೋದಸ್ಟು ಅದು ಮತ್ತಷ್ಟು ನಿಗೂಡವೇ ಅವುತ್ತು . ಬೈಲಿನ ಮಿತಿಯೊಳ ಈ ವಿಶಯ೦ಗಳ ನಿ೦ಗೊ ಚಂದಕೆ ವಿವರಿಸಿದ್ದಿ . ಅಧ್ಯಾಯದ ಅಂಖೆಗಳ ಒಟ್ಟಿ೦ಗೆ ತಲೆಬರಹಲ್ಲಿ ಅದರ ತಾತ್ಪರ್ಯದ ಹೆಸರುದೆ ಇದ್ದರೆ ಒಳ್ಳೆದಲ್ಲದ? ಉದಾ ೧. ಅರ್ಜುನ ವಿಷಾದ ಯೋಗ ೨.ಸಾಂಖ್ಯ ಯೋಗ ಈ ತರ .
    ಮನುಷ್ಯ ತನ್ನ ವಿಕ್ರುತಿ೦ದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು.—-ಇದು ಬೌತಿಕವಾಗಿಯು ಅಪ್ಪು. ಮಾನಸಿಕವಾಗಿಯು ಅಪ್ಪು. ಗಾಂಧಿಯ ಹಾಂಗೆ ಬದುಕಿಪ್ಪಗಲೇ ಸಾವಲೆ ಎಡಿಗಾದರೆ ಮತ್ತೂ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ .
    ಸನ್ಯಾಸಿಗೊ ಸ್ತಿಥಪ್ರಜ್ನ ಸ್ತಿಥಿ ಬಪ್ಪಲೆ ಅವಕ್ಕೆ ಅನುಕೂಲ ಕರವಾದ ವಾತವರಣಲ್ಲೆ ಇರುತ್ತವು. ಆದರೆ ದಿನನಿತ್ಯವೂ ಕುರುಕ್ಷೆತ್ರಲ್ಲಿಯೇ ಇಪ್ಪ ಸಂಸಾರಿಗೊಕ್ಕೆ ಎಲ್ಲವು ಪ್ರತಿಕೂಲವೆ ಆಗಿರುತ್ತು.ಹಾ೦ಗಿಪ್ಪ ಕಾರಣ೦ದಾಗಿಯೆ ಗಾಂಧಿ ಮಹಾತ್ಮ ಅನ್ನಿಸಿಗೊಂಡದು .

    1. ಅಪ್ಪು… “ಗಾಂಧಿಯ ಹಾಂಗೆ ಬದುಕಿಪ್ಪಗಲೇ ಸಾವಲೆ ಎಡಿಗಾದರೆ ಮತ್ತೂ ಒಳ್ಳೆದು ಹೇಳಿ ಎನ್ನ ಅಭಿಪ್ರಾಯ” ಒಳ್ಳೆ ಅಭಿಪ್ರಾಯ… ಇನ್ನೊಂದು ವಿಷಯ ಎಂತರ ಹೇಳಿರೆ ನಮ್ಮ ಸಮಾಜಕ್ಕೆ ಸನ್ಯಾಸಿಗಳ ಸರಿಯಾಗಿ ಉಪಯೋಗಿಸಿಗೊಮ್ಬಲೆ ಗೊಂತಿಲ್ಲೇ… ಸನ್ಯಾಸಿಗೋ ಬಯಸುದು “ಸರ್ವೇ ಜನಾ: ಸುಖಿನೋ ಭವಂತು” ಹೇಳಿ ಮಾಂತ್ರ… ಹಾಂಗಿಪ್ಪಗ ಅವು ಹೇಳುದು ನಮ್ಮ ಒಳಿತಿಂಗೊಸ್ಕರ ಮಾಂತ್ರ ಅಲ್ಲದ್ದೆ ಅವಕ್ಕೆ ಅದರಿಂದ ಯಾವುದೇ ಪ್ರಯೋಜನ ಇಲ್ಲೇ… ಅವು ಹೇಳಿದ್ದರ ಅನುಸರಿಸಿರೆ ಮತ್ತು ಜಾಸ್ತಿ ಜಾಸ್ತಿ ಅವರ ಕಡೆ ಒಲವು ತೋರುಸಿರೆ ಎಲ್ಲಿ ತಾವೂ ಸನ್ಯಾಸಿ ಆಗಿ ಬಿಡುಗೋ… ಹೇಳುವ ಒಂದು ತಪ್ಪು ಕಲ್ಪನೆ ಸಮಾಜಲ್ಲಿ…

      ಇನ್ನೊಂದು ತಪ್ಪು ಅಭಿಪ್ರಾಯ ಕೇಳಿ ಬಪ್ಪದು… ಎಲ್ಲ ಕಡೆ ರಾಜಕೀಯವೇ… ‘ಮಠ’ ಲ್ಲಿಯೂ ರಾಜಕೀಯ… ನಾವು ಎಂತಕೆ ಮಠ ಲ್ಲಿ ರಾಜಕೀಯ ನಡವಲೆ ಬಿಡೆಕ್ಕು… ಅದು ನಮ್ಮದು ಅಲ್ಲದ… ನಾವೇ ಸರಿ ಮಾಡೆಕ್ಕು… ನಾವು ಕೊಟ್ಟ ಆರ್ಥಿಕ ಸಂಪತ್ತು ಸರಿಯಾಗಿ ವಿನಿಯೋಗ ಆವುತ್ತಿಲ್ಲೇ ಹೇಳಿ ಅನ್ನಿಸಿರೆ ನಾವೇ ಜವಾಬ್ದಾರಿ ತೆಕ್ಕೊಂಡು ಮಾಡಿರೆ ಆತು… ಅಥವಾ ಆರು ಸರಿಯಾಗಿ ವಿನಿಯೋಗಿಸುತ್ತವ ಅವಕ್ಕೆ ಕೊಟ್ಟರೆ ಆತು… ಎಲ್ಲವೂ ಗುರುಸೇವೆಯೇ… ಒಟ್ಟಾರೆಯಾಗಿ ಗುರುಗೋ ಬಯಸುದು ಸ್ವಸ್ಥ ಸಮಾಜ… ಆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾವು ಯಾವ ತರಲ್ಲಿ ನೆರವಾದರೂ ಅದು ಗುರುಸೇವೆಯೇ…

  5. ನಮ್ಮ ಹವ್ಯಕರ ಗುರು ಪರಂಪರೆ “ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಪರಂಪರೆ | ಶ್ರೀ ಆಚಾರ್ಯ ಶಂಕರರ “ದಿವ್ಯ ಹಸ್ತದ್ವಯ” ಗಳ (ಎರಡು ದಿವ್ಯ ಹಸ್ತಂಗಳ ) ಪ್ರತೀಕ ವಾಗಿ ನವಗೆ ಎರಡು ಮಠನ್ಗೋ (ಮಠ ಗಳು) ೧. ಈಗ “ಗೋ ಸಂರಕ್ಷಣಾ ಕಾರ್ಯ” ಮತ್ತು “ರಾಮಾಯಣ ಕಥಾ” ವಿಶೇಷವ ಜನಮನಕ್ಕೆ ಮುಟ್ಟುಸುತ್ತಾ ಇಪ್ಪಂತಹಾ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮಿಗಳು – ಶ್ರೀ ಸಂಸ್ಥಾನ ರಾಮಚಂದ್ರಾಪುರ ಮಠ ೨. “ವನ ಸಂರಕ್ಷಣಾ” ಕಾರ್ಯ ಮತ್ತು “ಶ್ರೀಮದ್ಭಗವದ್ಗೀತಾ ಅಭಿಯಾನ” ದ ಮೂಲಕ ಶ್ರೀಮದ್ಭಗವದ್ಗೀತೆ ಯ ಸಾರ ಸರ್ವಸ್ವ ವ ಅಖಿಲ ಕರ್ನಾಟಕದ ಮನೆ ಮನೆ ಗೆ ಮುಟ್ಟುಸುತ್ತಾ ಇಪ್ಪ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸ್ವರ್ಣವಲ್ಲೀ ಸಂಸ್ಥಾನ |
    ಈ ದಿವ್ಯ ಹಸ್ತನ್ಗಳೆರಡರ ಪುರ್ಣಾನುಗ್ರಹ ಕ್ಕಾಗಿ ಕೆಳಗಿನ ಶ್ಲೋಕ ಒಂದರ ಮೂಲಕ ಬೇಡಿಗೊಂದು ಒಂದನೇ ಅಧ್ಯಾಯ ವ ಮುಂದುವರಿಸುವಾ |

    ಸರ್ವಮಿದಂ ಕೃತಮತ್ರ ಗುರು ಸಮರ್ಪಣಂ |
    ಯಸ್ಯಾನುಗ್ರಹಾದೇವ ವರಮಿದಂ ಜೀವನಂ ||
    ಅರ್ಥ : ಸರ್ವಂ ಇದಂ = ಇವುಗಳೆಲ್ಲವೂ (ಹೇಳಿದರೆ ನಾವು ಯಾವುದರ ಎಲ್ಲಾ ನಮ್ಮದು ಹೇಳಿ ಭ್ರಮಿಸಿದ್ದೋ ಅದೆಲ್ಲಾ) ಕೃತಂ ಅತ್ರ = ಇಲ್ಲಿ ಮಾಡಲ್ಪಟ್ಟಿದು , ಗುರುಸಮರ್ಪಣಂ = ಗುರುಸಮರ್ಪಣೆ, | ಯಸ್ಯ = ಯಾರ (ಯಾವ ಗುರುವಿನ), ಅನುಗ್ರಹಾತ್ ಏವ = ಅನುಗ್ರಹದಿಂದಲೇ, ವರಂ ಇದಂ ಜೀವನಂ = ಈ ಜೀವನವು ವರವಾಗಿದೆಯೋ ||

    ಯಾವ ಸದ್ಗುರಿವಿನ ಅನುಗ್ರಹ ದಿಂದ ಈ ಜೀವನ ವು ವರವಾಗಿ ನಿಂತಿದೆಯೋ ಆ ಗುರುಪಾದಗಳಿಗೆ ಇವುಗಳೆಲ್ಲವನ್ನೂ ಅರ್ಪಿಸಿದ್ದೇನೆ ||

    1. ಈಶ್ವರ ಮಾವನ ಜೊತೆ ಎರಡು ದಿವ್ಯ ಹಸ್ತಂಗಳ ಪೂರ್ಣಾನುಗ್ರಹ ಬೇಡಿಗೊಂಡು ಶಿರಸಾ ಪ್ರಣಾಮಗಳು…

  6. “ಪ್ರತಿಯೊಬ್ಬನೂ ಇಲ್ಲಿ ಓದುವಾಗ,ಬರವಾಗ ನಮ್ಮ ನಾವು ಗೀತಾ ಮಾತೆಗೆ ಸಂಪೂರ್ಣ ಸಮರ್ಪಿಸಿಗೊಂಡು ಇರೆಕು… ಹಾಂಗಾರೆ ಜ್ಞಾನ – ವಿಜ್ಞಾನ ಎರಡೂ ಅತ್ಯಂತ ಸುಲಭಲ್ಲಿ ಸಿದ್ದಿಸುತ್ತು…” ಹೇಳುವ ಈಶ್ವರ ಮಾವನ ಪ್ರಾರ್ಥನೆ ತುಂಬಾ ಇಷ್ಟ ಆತು… ಎಲ್ಲರೂ ಈಶ್ವರ ಮಾವನ ಜೊತೆ ಸೇರಿ ಪ್ರಾರ್ಥಿಸುವ…

    ಈ ಒಪ್ಪಣ್ಣ ತಾಣಲ್ಲಿ ಓದುವ, ಬರವ ಪ್ರತಿಯೊಂದು ವಾಕ್ಯವೂ ‘ಎಲ್ಲರೂ ಆನಂದಲ್ಲಿ ಇರೆಕು’ ಹೇಳಿ ಬಯಸುವ ಗುರು ರಾಘವೇಶ್ವರ ಭಾರತೀ ಸ್ವಾಮಿಗಳ ಚರಣಗಳಿಗೆ ಸಮರ್ಪಿಸುವ…

  7. ಇಲ್ಲಿ ಸಂಸ್ಕೃತ ಮತ್ತು ಎಲ್ಲಾ ವಿಷಯಲ್ಲಿ ಎನಗೆ ಮಾರ್ಗದರ್ಶನ ನೀಡುವವರು – 1. ಎನ್ನ ಗುರುಗಳು – ಶ್ರೀ ಬಳ್ಳಾರಿ ಗೋವಿಂದ ಭಟ್ – ಘನ ಪಾಠ (Paathi ), ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು. 2 ಎನ್ನ ಒಡನಾಡಿ ಶ್ರೀ ಕೆಕಣಾಜೆ ಬಾಲ ಕೃಷ್ಣ ಭಟ್ಟ — ಸಂಸ್ಕೃತ ಪ್ರಾಧ್ಯಾಪಕ.
    ಆದರೂ ಇಲ್ಲಿ ಏನಾದರು ತಪ್ಪು ಬಂದು ಹೋದರೆ ಅದ ರ ಉತ್ತರದಾಯಿತ್ವ ಎನ್ನದೆ ಆಗಿರಲಿ | ಇಲ್ಲಿ ಬಪ್ಪ ಎಲ್ಲ ಸರಿಯಾದ ಧನಾತ್ಮಕ ವಿಷಯಂಗೋ “ಶ್ರೀ ಗೀತಾ ಮಾತೆ” ಮತ್ತು ನಮ್ಮ ಗುರು ಪರಂಪರಗೆ ಸಮರ್ಪಿತವಾಗಲಿ ||

    1. ಎದುರ್ಕಳ ಮಾವನ ವಿವರಣೆ ಒಳ್ಳೆ ಲಾಯಕ ಆವ್ತು ಓದಿ ತಿಳ್ಕೊಂಬಲೆ. ಆಸಕ್ತಿಂದ ಎದುರುನೋಡುತ್ತೆ ಮುಂದಾಣ ಭಾಗಂಗಳ

  8. ಯಾವಳ (ಯಾವ ಮಾತೆ ಯ) ಅನುಗ್ರಹಂದಾಗಿ ಸಮಸ್ತ ಶಾಸ್ತ್ರಾರ್ಥ ದ ಜ್ಞಾನ – ವಿಜ್ಞಾನ ಎರಡೂ “ಸಿದ್ಧಿಸುತ್ತೋ” ಅಂತಹಾ ಗೀತಾ ಮಾತೆಯೇ, ಸರ್ವಜ್ಞಳೇ, ವೇದ ಮಾತೆಯೇ – ಎನ್ನ (ಇಲ್ಲಿ “ಎನ್ನ” ಹೇಳಿ ಇದ್ದರೂ ಇದರ ಓದುವೊರಿಂಗು ಬರವಲೆ ಸಹಕರಿಸುವ ಎಲ್ಲರಿಂಗು ಅನ್ವಯಿಸುತ್ತು) , ಹವ್ಯಕ ಭಾಷೆಲಿ ದಿವ್ಯವಾದ ಶ್ರೀಮದ್ಭಗವದ್ಗೀತೆ ಯ ಭಾಷ್ಯ ವ ಬರವಲೆ “ಸಶಕ್ತ” ನಾಗಿ ಮಾಡು || ಹೇ ಮಾತೇ, ಆನು ಇಲ್ಲಿ ನಿಮಿತ್ತ ಮಾತ್ರ — ಇದೆಲ್ಲವೂ, ಈ ವಾಕ್ಯ ಸಮಸ್ತಂಗಳೂ (ಈ ವಿಷಯಲ್ಲಿ ಹಿಂದೆ ಬರದ್ದು, ಮುಂದೆ ಬರವದು ಎಲ್ಲವೂ) ನಿನ್ನ ಉಸಿರಿನ ಮೂಲಕವೇ ಬಪ್ಪಂತಹಾ ನಿನ್ನದೇ ಆದ ವಚನ ಪ್ರಸಾದಂಗೋ ಹೇಳಿ ತಿಳುಕ್ಕೊಳ್ಳುತ್ತೆ | ಈ ಸಮಸ್ತ ಭಾಷ್ಯಂಗಳೂ ಸರ್ವ ಭಾವಂಗಳಲ್ಲಿಯೂ ಪ್ರಣಾಮಗಳೊಂದಿಗೆ ನಿನಗೇ ಸಮರ್ಪಿಸಲ್ಪಟ್ಟಿದು ||

  9. ಯಯಾ = ಯಾವಳಿಂದ (ಯಾವಳ ಕೃಪೆಯಿಂದ) | ಸಿದ್ಧಿರ್ಭವತಿ = ಸಿದ್ಧಿಸುತ್ತೋ | ಸಮಸ್ತ ಶಾಸ್ತ್ರಾರ್ಥ ಜ್ಞಾನಂ = ಎಲ್ಲಾ ಶಾಸ್ತ್ರಾರ್ಥಂಗಳ ಜ್ಞಾನವು | ಸವಿಜ್ಞಾನಂ= ವಿಜ್ಞಾನ ದ ಒಡನೆ (ವಿಜ್ಞಾನ ಹೇಳಿದರೆ ಗಳಿಸಿಕೊಂಡ ಜ್ಞಾನದ ಸ್ವಾನುಭಾವೀಕರಣ, ಆಚರಣೆಲಿ ಅಳವಡಿಸಿ ಗೊಂಬದು) | ಸಾ = ಆ, ಗೀತಾಮಾತಾ = ಗೀತಾ ಮಾತೆಯೇ | ವಿಶ್ವವೇದಾ = ಸರ್ವಜ್ಞಳೇ | ವೇದ ಮಾತಾ = ವೇದ ಮಾತೆಯೇ | ಸಶಕ್ತಂ ಕರು ಮೇ = ಎನ್ನ ಸಶಕ್ತನಾಗಿ ಮಾಡು — (ಯಾವ ವಿಷಯಲ್ಲಿ ?), ಹವ್ಯ ವಾಚಾ = ಹವ್ಯಕ ಭಾಷೆಲಿ (ಎಂತ ಮಾಡುಲೆ ?) — ಲೇಖಿತುಂ = ಬರವಲೆ (ಎಂತರ ಬರವಲೆ ?), ಭಾಷ್ಯಂ = ಭಾಷ್ಯವ (ಯಾವ ಭಾಷ್ಯವ ?) ಗೀತಾಯಾಃ ದಿವ್ಯಂ = ದಿವ್ಯವಾದ, ದೈವೀ ಸಂಪನ್ನತೆಯಿಂದ ಕೂಡಿದ ಶ್ರೀಮದ್ಭಗವದ್ಗೀತೆ ಯ || (ಹೇ ಮಾತೆಯೇ) ಅಹಂ = ಆನು , ನಿಮಿತ್ತಂ = ನಿಮಿತ್ತ ಮಾತ್ರ | ತ್ವಯಾ ಏವ = ನಿನ್ನಿಂದಲೇ, ನಿಶ್ವಸಿತಂ = ಉಸಿರಲ್ಪಟ್ಟಿದು, ಇದಂ ವಾಕ್ಯಂ ಸಮಸ್ತಂ = ಈ ವಾಕ್ಯ ಸಮಸ್ತಂಗಳೂ|| ಭಾಷ್ಯಂ ಇದಂ ಸರ್ವಂ = ಈ ಭಾಷ್ಯ ಸರ್ವಸ್ವವೂ, ಸಮರ್ಪಿತಂ ಸರ್ವ ಭಾವೇನ = ಸರ್ವಭಾವಂದಲೂ ಸಮರ್ಪಿತವಾಯಿದು, ತುಭ್ಯಂ ಸಪ್ರಣಾಮಂ = ಪ್ರಣಾಮ ಗಳೊಂದಿಗೆ ನಿನಗೆ ||

  10. {ಶ್ರೀ ಭಗವಾನ್ ಉವಾಚ -} ಶುರು ಅಪ್ಪದ್ದೆ ಭಗವದ್ಗೀತೆ ಓದುಲೆ ಸಮಯ ಹೆಚ್ಚು ಬೇಕಾವುತ್ತು.
    ಯೇವತ್ತರಾಣ ಹಾಂಗೆ ಲಾಯಕಲ್ಲಿ ಬರೆತ್ತಾ ಇದ್ದಿ ಭಾವ.

  11. ಬರವ ಮೊದಲು “ಗೀತಾ ಮಾತೆ” ಯ ಸಾನಿಧ್ಯಲ್ಲಿ ಒಂದು ಪ್ರಾರ್ಥನೆ — (ಛಂದೋ ಬದ್ಧ ವಾಗಿಲ್ಲೇ)– ನಮ್ಮೆಲ್ಲರ ಪರವಾಗಿ |
    ಯಯಾ ಸಿದ್ಧಿರ್ಭವತಿ ಸಮಸ್ತ ಶಾಸ್ತ್ರಾರ್ಥ ಜ್ಞಾನಂ ಸವಿಜ್ಞಾನಂ |
    ಸಾ ಗೀತಾ ಮಾತಾ ವಿಶ್ವ ವೇದಾ ವೇದ ಮಾತಾ |
    ಸಶಕ್ತಂ ಕುರು ಮೇ ಹವ್ಯ ವಾಚಾ ಲೇಖಿತುಮ್ ಭಾಷ್ಯಂ ಗೀತಾಯಾಃ ದಿವ್ಯಂ |
    ಅಹಂ ನಿಮಿತ್ತಂ ತ್ವಯಾ ಏವ ನಿಶ್ವಸಿತಮಿದಂ ವಾಕ್ಯಂ ಸಮಸ್ತಂ |
    ಭಾಷ್ಯಮಿದಂ ಸರ್ವಂ ಸಮರ್ಪಿತಂ ಸರ್ವ ಭಾವೇನ ತುಭ್ಯಂ ಸಪ್ರಣಾಮಂ ||

    ಇದರ ಅರ್ಥ ಬರದು ಮುಂದುವರಿತ್ತೆ. ಈ ಪ್ರಾರ್ಥನೆ ಚೆನ್ನೈ ಭಾವಂಗು ಮತ್ತು ಇಲ್ಲಿ ಓದುವವರಿಂಗು ಕೂಡಿ ಬರದ್ದು.

    1. [ಅಹಂ ನಿಮಿತ್ತಂ ತ್ವಯಾ ಏವ ನಿಶ್ವಸಿತಮಿದಂ ವಾಕ್ಯಂ ಸಮಸ್ತಂ |
      ಭಾಷ್ಯಮಿದಂ ಸರ್ವಂ ಸಮರ್ಪಿತಂ ಸರ್ವ ಭಾವೇನ ತುಭ್ಯಂ ಸಪ್ರಣಾಮಂ ॥] – ಇದನ್ನೇ ಅತೀ ನಿರೀಕ್ಷೆಲಿ ಕಾಯ್ತಾ ಇದ್ಯೋ°. ಆ ಭಾಗ ಶೀಘ್ರಲ್ಲಿ ಬೈಲಿಂಗೆ ಬಪ್ಪಂತಾಗಲಿ ಎಂಬುದೀಗ ಗೀತಾ ಉತ್ಸಾಹಿಗಳ ಪರವಾಗಿ -‘ಚೆನ್ನೈವಾಣಿ’

  12. ಭಾವಯ್ಯನ ಶ್ರಮ ಮೆಚ್ಚೆಕ್ಕಾದ್ದೇ. ವಿವರಣೆ ಚೆಂದಕೆ ಬತ್ತಾ ಇದ್ದು.

  13. ವಾರಂದ ವಾರಕ್ಕೆ ಇನ್ನೂ ಇನ್ನೂ ಉತ್ತಮ ರೀತಿಲ್ಲಿ ವಿವರಣೆ ಕೊಡುತ್ತಾ ಇಪ್ಪ ಚೆನ್ನೈ ಭಾವನ ಬಗ್ಗೆ ಹೇಳುಲೆ ಯಾವುದೇ ಶಬ್ದಂಗ ಇಲ್ಲೇ… ನಮೋ ನಮ:

    1. ಇಷ್ಟು ದೊಡ್ಡಕ್ಕೆ ಬೇಡ ಅಕ್ಕಾ°. ಇದು ನಾಕು ದಿಕ್ಕಂದ ಓದಿ ಆಯ್ದ ಸಂಗ್ರಹ ಅಷ್ಟೆ. ಎನ್ನ ಸ್ವಂತದ್ದು ಹೇಳಿರೆ ತಾಳ್ಮೆಲಿ ಕೂದು, ಭಗವದ್ಗೀತೆಯ ಭಾವವ ಅನುಭವಿಸಿ ಹವ್ಯಕ ಭಾಷೆಲಿ ಬರದ್ದು ಮಾತ್ರ ಎಂಬುದು ಪ್ರಾಮಾಣಿಕ ಸತ್ಯ. ನಿಂಗೊ ಎಲ್ಲೋರ ಪ್ರೋತ್ಸಾಹವೇ ಕಾರಣ. ಧನ್ಯವಾದಂಗೊ ಯಾವತ್ತೂ.

  14. ಧನ್ಯವದಂಗೊ ಭಾವಯ್ಯ. ಓದ್ಲೆ ರಜ್ಜ ಹೊತ್ತು ಬೇಕಾತು. ಒಳ್ಲೆದಾಯಿದು ಬರದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×