Oppanna.com

ಸರಸ್ವತಿ ಶಂಕರ್ ಬರೆದ ಇನ್ನೂ ಎರಡು ಕೃತಿಗೊ

ಬರದೋರು :   ಗೋಪಾಲಣ್ಣ    on   11/03/2013    3 ಒಪ್ಪಂಗೊ

ಗೋಪಾಲಣ್ಣ

Sogu -book release-3-3-2013ಬೆಂಗಳೂರಿನ ಸರಸ್ವತಿ ಶಂಕರ್ ಬರೆದ ‘ಸೋಗು” ಹೇಳುವ ಕಥಾಸಂಕಲನ ಮತ್ತೆ “ಹಸಿರು ಪೆಟ್ಟಿಗೆ” ಹೇಳುವ ಮಕ್ಕಳ ಕಥೆಗಳ ಸಂಕಲನ ಮಾರ್ಚಿ ೩ ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿಲಿ ಬಿಡುಗಡೆ ಆತು.ಪ್ರಸಿದ್ಧ ವೈದ್ಯೆ [ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ] ಡಾ॥ ವಸುಂಧರಾ ಭೂಪತಿ ಪುಸ್ತಕ ಬಿಡುಗಡೆ ಮಾಡಿದವು. ವಿಜಯಾ ಕಾಲೇಜಿನ ಡೀನ್ ಪ್ರೊ॥ಆರ್.ವಿ.ಪ್ರಭಾಕರ ಸಮಾರಂಭದ ಅಧ್ಯಕ್ಷಸ್ಥಾನ ಅಲಂಕರಿಸಿದವು.ಅವಧಾನಿ ಮತ್ತೆ ವಿದ್ವಾಂಸ ಡಾ॥ ಕಬ್ಬಿನಾಲೆ ವಸಂತ ಭಾರದ್ವಾಜ ಮುಖ್ಯ ಅತಿಥಿ ಆಗಿ ಬಂದು,ಕೃತಿ ಪರಿಚಯ ಮಾಡಿ ಕೊಟ್ಟವು.
ಈ ಕೃತಿಗಳ ಬೆಂಗಳೂರಿನ ರವಿ ಪ್ರಕಾಶನದವು ಪ್ರಕಟಿಸಿದ್ದವು.
ಸರಸ್ವತಿ ಶಂಕರ್ ಬಗ್ಗೆ ವಿವರ ಆನು ಅವರ ಪ್ರವಾಸ ಕಥನದ ಬಿಡುಗಡೆಯ ಬಗ್ಗೆ ಬರೆವಾಗ ಬರೆದ್ದೆ. ಅವು ಈ ವರೆಗೆ ಬರೆದ ಕೃತಿಗೊ ೧]ತೆನೆಗಳು -ಕಥಾಸಂಕಲನ- ೨]ಜ್ವಾಲೆ- ಕಾದಂಬರಿ ೩]ಬಿರುಗಾಳಿ-ಕಾದಂಬರಿ ೪]ಸುಮಸಂಚಯ-ಕಥಾಸಂಕಲನ ೫] ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಪ್ರವಾಸ ಕಥನ ೬]ಹೆಣ್ಣು ಹೊನ್ನು -ಕಾದಂಬರಿ ಮತ್ತೆ ಈ ಮೇಲಿನ ಎರಡು ಹೊಸ ಕೃತಿಗೊ.

3 thoughts on “ಸರಸ್ವತಿ ಶಂಕರ್ ಬರೆದ ಇನ್ನೂ ಎರಡು ಕೃತಿಗೊ

  1. ಸರಸ್ವತಿ ಅತ್ತೆಯ ನಿರ೦ತರ ಸಾಹಿತ್ಯ ಕೃಷಿ ಕೊಶಿ ಕೊಟ್ಟತ್ತು. ಶುಭಾಶಯ೦ಗೊ.
    ಶುದ್ದಿ ಹ೦ಚಿದ ಗೋಪಾಲಣ್ಣ೦ಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×