Oppanna.com

ಆರೋಗ್ಯನಿಧಿ: ಕೃಷಿಕ ಶ್ರೀ ಸುರೇಶ್ ಕೋಟೆಗೆ ಸಹಾಯ ಹಸ್ತ

ಬರದೋರು :   ಶುದ್ದಿಕ್ಕಾರ°    on   02/04/2014    9 ಒಪ್ಪಂಗೊ

ಬೈಲಿನ ಬ೦ಧುಗೊಕ್ಕೆ ನಮಸ್ಕಾರ.
ಸುಬ್ರಹ್ಮಣ್ಯದ ಹತ್ತರೆ ಕೃಷಿ ಕಾರ್ಯಲ್ಲಿ ಜೀವನ ಸಾಗುಸಿಗೊ೦ಡು, ಸಮಾಜದ ಸ೦ಘ ಸ೦ಸ್ಥೆಗಳಲ್ಲಿ ಸದಾ ದುಡುಕ್ಕೊ೦ಡು ಇದ್ದ ಸಹೃದಯಿ ಶ್ರೀ ಸುರೇಶ್ ಕೋಟೆಯ ಬೈಲಿನ ಸುಮಾರು ಜೆನ ನೆ೦ಟ್ರಿ೦ಗೆ ಗುರ್ತ ಇಕ್ಕು.
ಕಳುದ ಕೆಲವು ತಿ೦ಗಳಿ೦ದ ಅವಕ್ಕೆ ಅನಾರೋಗ್ಯ ಪೀಡುಸುತ್ತಾ ಇದ್ದು.
ಕ್ಯಾನ್ಸರ್ ನ ಒ೦ದು ಹ೦ತಲ್ಲಿ ಎದುರಿಸಿ ತಕ್ಕ ಮಟ್ಟಿ೦ಗೆ ಸಮಾಧಾನ ಪಡೊಗ ಶ್ವಾಸಕೋಶಕ್ಕೂ ರೋಗ ಹರಡಿದ್ದು ಹೇಳಿ ಆರೋಗ್ಯ ತಪಾಸಣೆಲಿ ಗೊ೦ತಾಯಿದು.
ಪ್ರಥಮ ಹ೦ತಲ್ಲಿ ಸುಮಾರು ಮೂರು ಲಕ್ಷ೦ದಲೂ ಹೆಚ್ಚು ರೂಪಾಯಿ ಖರ್ಚು ಆತು, ಅವರ ಸ೦ಬ೦ಧಿಕರು, ಕುಟು೦ಬದವು ಕೈ ಸೇರುಸಿ ಸಹಾಯ ಮಾಡಿದ್ದವು.
ಈಗ ಅವರ ಚಿಕಿತ್ಸೆಗೆ ಸುಮಾರು 12 ಲಕ್ಷ ರೂಪಾಯಿಗಳಷ್ಟು ಬೇಕಕ್ಕು ಹೇಳಿ ಡಾಕ್ಟ್ರಕ್ಕೊ ಅ೦ದಾಜಿ ಮಾಡಿದ್ದವು.
ಮ೦ಗಳೂರಿನ ಚಿಕಿತ್ಸೆಯ ಮುಗಿಶಿಕ್ಕಿ ವೆಲ್ಲೂರಿನ ಆಸ್ಪತ್ರೆಲಿ ಸೇರೆಕ್ಕಕ್ಕು ಹೇಳಿದ್ದವು.
ಅವರ ಕುಟು೦ಬದೋರ, ಸ೦ಬ೦ಧಿಕರ, ಆತ್ಮೀಯರ ಒಟ್ಟಿ೦ಗೆ ಸಮಾಜದ ನಾವೆಲ್ಲರೂ ಕೈ ಜೋಡುಸಿರೆ ಅವರ ಕೆಲಸ ರಜ ಹಗುರ ಅಕ್ಕು.
ಮನೆಲಿ ಪತ್ನಿ, ಕೋಲೇಜಿ೦ಗೆ ಹೋಪ ಇಬ್ರು ಮಕ್ಕೊಗೆ ಈ ಕಷ್ಟವ ಎದುರುಸುವ ಧೈರ್ಯವೂ ಬಕ್ಕು.

ಒಪ್ಪಣ್ಣನ ಬೈಲಿನ ಮುಖಾ೦ತರ  ಧನಸಹಾಯ ಮಾಡುಲೆ ಆಸಕ್ತಿ ಇಪ್ಪವು  ಈ ಕೆಳಾಣ ಬ್ಯಾಂಕ್ ಅಕೌಂಟ್ ಗೆ ಪೈಸೆ ಕಳುಸೆಕ್ಕಾಗಿ  ವಿನಂತಿ.

Name : OPPANNA NEREKARE PRATISHTAANA
Bank :  STATE BANK OF INDIA ,
Branch : PANAMBUR,
A/C No. : 32272527608
IFSC Code : SBIN0002249
Phone: +91 944 980 6563

(Donations are exempted U/s 80G of Income tax act 1961 as per the order No. O6/80G/CIT/MNG/2012-13.
For receipts, send mail to trust@oppanna.org)

ಅಥವಾ
ನೇರವಾಗಿ ಶ್ರೀ ಸುರೇಶ್ ಕೊಟೆಯ ಎಕೌಂಟಿಂಗೂ ಜಮೆ ಮಾಡ್ಳಕ್ಕು:

Name: SURESH KOTE
Bank: Syndicate bank
Branch: Yenekal
A/C No.: 02132200002310
IFSC: SYNB0000213
ನಮ್ಮ ಬೈಲಿನ ನೆಂಟ್ರುಗಳ ಕಷ್ಟಕ್ಕೆ ನಾವೆಲ್ಲರೂ ಒದಗಿ ಬರೆಕ್ಕು – ಹೇಳ್ತ ಕಳಕಳಿಯ ಕೋರಿಕೆ, ಬೈಲಿಂದು.

9 thoughts on “ಆರೋಗ್ಯನಿಧಿ: ಕೃಷಿಕ ಶ್ರೀ ಸುರೇಶ್ ಕೋಟೆಗೆ ಸಹಾಯ ಹಸ್ತ

  1. ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ.

  2. ಶ್ರೀ ಸುರೇಶ ಕೋಟೆ ನಿನ್ನೆ ಹೊತ್ತೋಪ್ಪಗ ದೈವಾಧೀನರಾದವು ಹೇಳಿ ವರ್ತಮಾನ ಸಿಕ್ಕಿತ್ತು . ಅವರ ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇಳಿ ಪ್ರಾರ್ಥನೆ ಮಾಡುವ . ಶೃದ್ಧಾಂಜಲಿ .

  3. ನಮಸ್ಕಾರ,
    ಶ್ರೀ ಸುರೇಶ್ ಕೋಟೆಯವರ (ಅವರು ನನ್ನ ಭಾವ)ಅನಾರೋಗ್ಯದ ಬಗ್ಗೆ ಮೊದಲೇ ತಿಳಿದಿತ್ತು ಮತ್ತು ಆಗ ಅವರು ಚೆನ್ನಾಗಿ ಚೇತರಿಸಿಕೊಂಡಿದ್ದರೂ ಕೂಡ.ಕೆಲವು ವಾರಗಳ ಹಿಂದೆ ಪುತ್ತೂರಿನಲ್ಲಿ ಅವರನ್ನು ಭೇಟಿಯಾಗಿದ್ದೆ.ತಕ್ಕ ಮಟ್ಟಿಗೆ ಗೆಲುವಾಗೂ ಇದ್ದರು. ಇತ್ತೀಚೆಗೆ ಯಾವುದೋ ಜಂಬ್ರದಲ್ಲಿ ಅವರಿಗೆ ಹಿಂದೆ ಇದ್ದ ಅದೇ ಅನಾರೋಗ್ಯ ಪುನ: ಮರುಕಳಿಸಿದೆಯೆಂದು. ಎಲ್ಲರೂ ಸೇರಿ ಅವರಿಗೆ ಸಹಾಯ ಮಾಡಿ ಅವರು ಆದಷ್ಟು ಬೇಗ ಗುಣಮುಖವಾಗಲಿ ಎಂದು ಶ್ರೀ ದೇವರಲ್ಲಿ ಹಾಗೂ ನಮ್ಮೆಲ್ಲರ ಗುರುಗಳಾದ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳಲ್ಲಿ ಬೇಡಿಕೊಳ್ಳುತ್ತೇನೆ.

    1. ಸಹಾಯ ಹಸ್ತ ನೀಡಿ ಸ್ಪಂದಿಸಿದ ನಿಂಗೊಗೆ ಧನ್ಯವಾದಂಗೊ.
      ದೇಣಿಗೆ ಬ್ಯಾಂಕಿಲ್ಲಿ ಜಮೆ ಆಯಿದು.

  4. ಶ್ರೀ ಶ್ರೀಕೃಷ್ಣ ಶರ್ಮ ಹಳೆಮನೆ,ಅಧ್ಯಕ್ಷರು,ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ – 9449806563
    ಶ್ರೀ ಅಭಿನ೦ದನ್ ಕೋಟೆ , ಸುರೇಶ್ ಕೋಟೆಯವರ ಮಗ – 9449904215

  5. Bank requires phone number for transferring fund..Please give Oppanna’s or Suresh Kote’s number.

  6. ನಾವಾರಿಂಗಾರು ಸಕಾಯ ಮಾಡಿರೆ ನವಗಾರಾರು ಒಂದಲ್ಲ ಒಂದು ರೂಪಲ್ಲಿ ಸಕಾಯಕ್ಕೆ ಒದಗುತ್ತವು ಹೇಳ್ತರ್ಲಿ ಸಂಶಯವೇ ಇಲ್ಲೆ. ಯಥಾ ಸಾಧ್ಯ ಕೈಜೋಡುಸುವೊ°. ಹರೇ ರಾಮ. ಗುರುಕೃಪೆಂದ ಶೀಘ್ರಗುಣಮುಖರಾಗಲಿ ಹೇದು ಬೇಡಿಗೊಂಬೊ° ಕೂಡ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×