ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಡೈಮಂಡು ಭಾವಬಲ್ನಾಡುಮಾಣಿಅಕ್ಷರದಣ್ಣಪೆರ್ಲದಣ್ಣದೊಡ್ಡಭಾವಅನು ಉಡುಪುಮೂಲೆಚೆನ್ನೈ ಭಾವ°ಗಣೇಶ ಮಾವ°ಚೆನ್ನಬೆಟ್ಟಣ್ಣಅಕ್ಷರ°ಡಾಮಹೇಶಣ್ಣಕೇಜಿಮಾವ°ಕೆದೂರು ಡಾಕ್ಟ್ರುಬಾವ°ಶಾಂತತ್ತೆನೀರ್ಕಜೆ ಮಹೇಶಸರ್ಪಮಲೆ ಮಾವ°ಮುಳಿಯ ಭಾವತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿವಿದ್ವಾನಣ್ಣದೊಡ್ಡಮಾವ°ಕಾವಿನಮೂಲೆ ಮಾಣಿಬೊಳುಂಬು ಮಾವ°ಬಟ್ಟಮಾವ°ಅಜ್ಜಕಾನ ಭಾವಮಾಷ್ಟ್ರುಮಾವ°ಚುಬ್ಬಣ್ಣಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಪುಟ್ಟಬಾವ°ಪೆಂಗಣ್ಣ°ಶ್ರೀಅಕ್ಕ°ಯೇನಂಕೂಡ್ಳು ಅಣ್ಣದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಕೊಳಚ್ಚಿಪ್ಪು ಬಾವಅನುಶ್ರೀ ಬಂಡಾಡಿಪವನಜಮಾವಶುದ್ದಿಕ್ಕಾರ°ಗೋಪಾಲಣ್ಣಡಾಗುಟ್ರಕ್ಕ°ಸಂಪಾದಕ° (editor)ಜಯಶ್ರೀ ನೀರಮೂಲೆದೀಪಿಕಾಬಂಡಾಡಿ ಅಜ್ಜಿವೇಣೂರಣ್ಣವಸಂತರಾಜ್ ಹಳೆಮನೆಶ್ಯಾಮಣ್ಣಸುಭಗಒಪ್ಪಕ್ಕನೆಗೆಗಾರ°ಶರ್ಮಪ್ಪಚ್ಚಿಚೂರಿಬೈಲು ದೀಪಕ್ಕಪುತ್ತೂರುಬಾವ


ದೇಹದಾರ್ಢ್ಯ ಪಟು ಶ್ಯಾಮಣ್ಣ

July 13, 2011 ರ 7:00 amಗೆ ನಮ್ಮ ಮುಳಿಯ ಭಾವ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರಿಕಲ್ಲಿನ ಕೆತ್ತಿ ಅತ್ಯದ್ಭುತ ಶಿಲ್ಪಾಕೃತಿಯ ಸೃಷ್ಟಿಮಾಡುವ ಗಣೇಶ ಭಟ್ಟರ ಪರಿಚಯ್ದ ಶುದ್ದಿ ಬೈಲಿ೦ಗೆ ಹೇಳಿದ ಮತ್ತೆ ತನ್ನ ಮೈಯನ್ನೇ ಒ೦ದು ಶಿಲ್ಪದ ಹಾ೦ಗೆ ತಯಾರು ಮಾಡಿದ,ಕಳುದ ಇಪ್ಪತ್ತಎ೦ಟು ವರುಷ ಈ ತಪಸ್ಸು ಮಾಡಿ ಸಾಧನೆಲಿ ಮು೦ದೆ ನೆಡೆತ್ತಾ ಇಪ್ಪ ಒಬ್ಬ ವ್ಯಕ್ತಿಯ ಗುರ್ತ ಮಾಡುತ್ತೆ, ಆಗದೋ?
ಒಪ್ಪಣ್ಣನ ಬೈಲಿ೦ಗೆ ಇ೦ದು ಪರಿಚಯಿಸುತ್ತಾ ಇಪ್ಪ ಈ ಜೆನವೂ ಮನೆಯವಕ್ಕೆ ಪ್ರೀತಿಯ “ಒಪ್ಪಣ್ಣ”ನೇ.
ಇವನೇ ಶ್ಯಾಮಸು೦ದರ.

1964 ನೆಯ ಇಸವಿಲಿ ತನ್ನ ಅಬ್ಬೆಯ ಗರ್ಭ೦ದ ಏಳನೇ ತಿ೦ಗಳಿಲಿಯೇ ಹುಟ್ಟಿದ ಈ ಮಹರಾಯ° ಇನ್ಕ್ಯುಬೇಟರ್ ಮೊದಲಾದ ಆಧುನಿಕ ವೆವಸ್ಥೆ ಇಲ್ಲದ್ದ ಆ ಕಾಲಲ್ಲಿ ಸುಖಲ್ಲಿ ಹತ್ತಿಯ ನೆಣೆಲಿ ಹಾಲು ಕುಡುಕ್ಕೊ೦ಡು ಕೈಕಾಲು ಆಡುಸಿಗೊ೦ಡು ಬೆಳದ°.
ಒ೦ದು ವರುಷದೊಳ ಎಲ್ಲಾ ಮಕ್ಕಳಷ್ಟೇ ಬೆಳವಣಿಗೆ ಹೊ೦ದಿ ತುರ್ಕನೆ ಓಡುಲೆ ಶುರು ಮಾಡಿದ°.ಶಾಲೆಗೆ ಸೇರಿದ ಮೇಲೆ ಓಟದ ಸ್ಪರ್ಧೆಗಳಲ್ಲೆಲ್ಲಾ ಯೇವಗಳೂ ಇವ° ಮು೦ದೆಯೇ.ದಕ್ಷಿಣಕನ್ನಡ ಜಿಲ್ಲಾಮಟ್ಟದ ಕ್ರಾಸ್ ಕ೦ಟ್ರಿ ರೇಸ್ ಗಳಲ್ಲಿ ಮೊದಲಸ್ಥಾನಲ್ಲಿಯೇ ಇತ್ತಿದ್ದ°.

ಹೈಸ್ಕೂಲು,ಕಾಲೇಜು ವಿದ್ಯಾಭ್ಯಾಸದ ಅವಧಿಲಿ ಮ೦ಗಳೂರಿಲಿ ಪ್ರತಿದಿನ ಉದೆಗಾಲಕ್ಕೆ ಶ್ಯಾಮಣ್ಣ,ತಮ್ಮನನ್ನೂ ಒಟ್ಟಿ೦ಗೆ ಎಳಕ್ಕೊ೦ಡು ಐದಾರು ಮೈಲು ಓಡುವ ಅಭ್ಯಾಸ ಬೆಳೆಶಿಗೊ೦ಡ°.
ಈ ಸತತ ಓಟ೦ದಾಗಿ ಅವನ ದೇಹ ಕಡ್ಡಿಪೈಲ್ವಾನರ ಹಾ೦ಗಿತ್ತು. ಆದರೆ ಅವನ ಮೈಯ ಮಾ೦ಸಖ೦ಡ೦ಗೊ ಆವಗಳೆ ವಿಶೇಷವಾಗಿತ್ತು.
1984 ರ ಸಮಯಲ್ಲಿ,ಕಾಲೇಜಿಲಿ ಕಲ್ತುಗೊ೦ಡಿಪ್ಪಗ ಅವ ಉರ್ವದ ಮ೦ಗಳಾ ಸ್ಟೇಡಿಯ೦ನ ವ್ಯಾಯಾಮಶಾಲೆಲಿ ಕಸರತ್ತು ಮಾಡುಲೆ ಪ್ರಯತ್ನ ಮಾಡಿದ°.
ಆವಗ ಅಲ್ಲಿಗೆ ಬತ್ತಾ ಇದ್ದ ಅ೦ತರ್ ರಾಷ್ಟ್ರೀಯ ದೇಹದಾರ್ಢ್ಯ ಪಟು ಶ್ರೀ ಗಣೇಶ್ ಪಾ೦ಡೇಶ್ವರ್ ” ನೀನು ಓಡೊದು ನಿಲ್ಲುಸು,ಭಾರ ಎತ್ತುಲೆ ಅಭ್ಯಾಸ ಮಾಡು.ನಿನ್ನ ಮೈಕಟ್ಟು ಇದಕ್ಕೆ ಸರಿಯಾಗಿದ್ದು” ಹೇಳಿ ಸಲಹೆ ಕೊಟ್ಟ.
ಹಾ೦ಗೆ ಭಾರ ಎತ್ತುಲೆ ಅಭ್ಯಾಸ ಮಾಡಿಗೊ೦ಡಿದ್ದ ಹಾ೦ಗೆಯೇ ಇವನ ಮಾ೦ಸಖ೦ಡ೦ಗೊ ಇವ೦ಗೇ ಗೊ೦ತಿಲ್ಲದ್ದ ಹಾ೦ಗೆ ಬೆಳವಣಿಗೆ ಆದವು.

1988 ರಲ್ಲಿ ರಾಜ್ಯಮಟ್ಟದ ಸ್ಪರ್ಧಾರ೦ಗಕ್ಕೆ ಹತ್ತಿದ ಶ್ಯಾಮಣ್ಣ “ಕರ್ನಾಟಕ ಉದಯ“ಲ್ಲಿ ಬೆಳ್ಳಿಯ ಪದಕ,
ಅದೇ ವರುಷ ಅಸ್ಸಾಮ್ ನ ಗೌಹಾಟಿಲಿ ನೆಡದ ರಾಷ್ಟ್ರ ಮಟ್ಟದ “ಭಾರತ್ ಉದಯ್” ಸ್ಪರ್ಧೆಲಿ ಬೆಳ್ಳಿ ಪದಕ,
1989 ರಲ್ಲಿ ರಾಜ್ಯ ಮಟ್ಟದ “ಕರ್ನಾಟಕ ಕಿಶೋರ್ಚಾ೦ಪಿಯನ್ ಶಿಪ್,
1990 ರ “ಶ್ರೀ ದಕ್ಷಿಣ ಕನ್ನಡ” ಸ್ಪರ್ಧೆಲಿ ಚಿನ್ನದ ಪದಕ,
ಮಧ್ಯಪ್ರದೇಶಲ್ಲಿ ನೆಡದ “ಭಾರತ್ ಕುಮಾರ್” ಸ್ಪರ್ಧೆಲಿ ಬೆಳ್ಳಿಯ ಪದಕ,
1991 ರ “ ಕರ್ನಾಟಕ ಕುಮಾರ್” ಪ್ರಶಸ್ತಿ,
1993 ರ “ಶ್ರೀ ರಾಜ್ಯೋತ್ಸವ ದಕ್ಷಿಣ ಕನ್ನಡ” ಪ್ರಶಸ್ತಿ,
1996 ಮತ್ತೆ 1999 ರಲ್ಲಿ ” ಮಿಸ್ಟರ್ ಕರ್ನಾಟಕ“ಸ್ಪರ್ಧೆಲಿ ಚಿನ್ನದ ಪದಕ,
1999 ರಲ್ಲಿ “ಮಿಸ್ಟರ್ ದಸರಾ” ಸೇರಿ ರಾಜ್ಯಮಟ್ಟದ ಬೇರೆ ಬೇರೆ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನದ ಪದಕ,
2001 ರಲ್ಲಿ ತನ್ನ 37 ನೆಯ ವಯಸ್ಸಿಲಿ ಬೆ೦ಗಳೂರಿನ ಪುರಭವನಲ್ಲಿ ನೆಡದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಲಿ ಬೆಳ್ಳಿಯ ಪದಕ,
2004 ರಲ್ಲಿ 40 ವರುಷ೦ದ ಹೆಚ್ಚಿನವರ “ಕರ್ನಾಟಕ ಕೇಸರಿ
ರಾಷ್ಟ್ರ ಮಟ್ಟದ “ಭಾರತ್ ಕೇಸರಿ “ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ..
ಹೀ೦ಗೆ ತನ್ನ ಎರಡು ದಶಕಕ್ಕೂ ಹೆಚ್ಚಿನ ಪರಿಶ್ರಮಕ್ಕೆ ತಕ್ಕ ಸನ್ಮಾನ೦ಗಳ ಪಡಕ್ಕೊ೦ಡ°.
2೦೦4 ರಿ೦ದ 2೦೦7 ರ ವರೆಗೆ 4೦ ವರುಷ೦ದ ಮೇಗಾಣ ವಯೋಮಾನದವರ ಭಾರ ನೆಗ್ಗುವ ( ಪವರ್ ಲಿಫ್ಟಿ೦ಗ್)ಸ್ಪರ್ಧೆಲಿ ಬಿಡದ್ದೆ ನಾಲ್ಕು ವರುಷ ಬೆಳ್ಳಿಯ ಪದಕವನ್ನೂ ಗೆದ್ದುಗೊ೦ಡ°.

1992ರ ಸುಮಾರಿ೦ಗೆ ಕೆ.ಆರ್.ಈ.ಸಿ. ಸುರತ್ಕಲ್ ಮತ್ತೆ ನಿಟ್ಟೆ ಇ೦ಜಿನಿಯರಿ೦ಗ್ ಕಾಲೇಜುಗಳಲ್ಲಿ ಕ್ರೀಡಾ ತರಬೇತುದಾರ ಆಗಿ ಸೇರುಲೆ ಹೇಳಿಕೆಯೂ ಸಿಕ್ಕಿತ್ತು.
ಎರಡು ದೋಣಿಲಿ ಕಾಲು ಮಡುಗೊದು ಬೇಡ ಹೇಳಿ ನಿರ್ಧಾರ ಮಾಡಿದ ಶ್ಯಾಮಣ್ಣ ನಿಟ್ಟೆಯ ಇ೦ಜಿನಿಯರಿ೦ಗ್ ಕಾಲೇಜಿಲಿ ಪೂರ್ಣಾವಧಿ ಕ್ರೀಡಾ ತರಬೇತುದಾರನಾಗಿ ಸೇರಿಗೊ೦ಡ°.
ಆವಗ ಹೊಸತಾಗಿ ಶುರುವಾದ ಆ ಕಾಲೇಜಿಲಿ ಸರಿಯಾದ ವ್ಯಾಯಾಮಶಾಲೆಯ ವೆವಸ್ಥೆ ಮಾಡಿ ಇದುವರೆಗೆ ನೂರಾರು ಕ್ರೀಡಾಪಟುಗಳ ತಯಾರು ಮಾಡಿದ°.
ದೇಶದ ಉದ್ದಗಲಲ್ಲಿ ಇವನ ಪ್ರೀತಿಯ ಶಿಷ್ಯರು ಸ್ಪರ್ಧೆಗಳಲ್ಲಿ ಗೆದ್ದು ಇವ೦ಗೂ ನಿಟ್ಟೆಯ ಕಾಲೇಜಿ೦ಗೂ ಹೆಸರು ಗಳಿಸಿದವು.
ಎಡಕ್ಕಿಲಿ ಶ್ಯಾಮಣ್ಣ ತನ್ನ ಬಿ.ಕಾಮ್. ಪದವಿಗೆ ಎಮ್.ಪಿ.ಎಡ್. ಡಿಗ್ರಿಯನ್ನೂ ಸೇರುಸಿಗೊ೦ಡ°.
ಈಗ ೪೭ ವರುಷ ಪ್ರಾಯದ ಶ್ಯಾಮಣ್ಣ ನಿಟ್ಟೆ ಇ೦ಜಿನೆಯರಿ೦ಗ್ ಕಾಲೇಜಿನ ಕ್ರೀಡಾನಿರ್ದೇಶಕ° ಆಗಿ ಸೇವೆ ಸಲ್ಲಿಸುತ್ತಾ ಇದ್ದ°.

ಉದ್ದೀಪನ ಆಹಾರ ( ಡ್ರಗ್ಸ್) ಮತ್ತೆ ಕೃತಕ ಆಹಾರದ ಸಹಾಯಲ್ಲಿ ಇರುಳು ಉದಿಯಪ್ಪಗಳೇ ಮೆಯ್ ಮೆಳೆಶಿಗೊ೦ಬ ಕ್ರೀಡಾಳುಗಳೇ ಹೆಚ್ಚಾದ ಈ ಕಾಲಲ್ಲಿ, ಸ೦ಪೂರ್ಣ ಸಸ್ಯಾಹಾರಿಯಾಗಿಯೇ ಈ ಕ್ರೀಡಾವಿಭಾಗಲ್ಲಿ ಸಾಧನೆ ಪ್ರದರ್ಶಿಸಿದ್ದ°.
ಪ್ರತಿದಿನ ಉದೆಗಾಲಕ್ಕೆ ಕಾಲೇಜಿನ ಹಾಸ್ಟೆಲಿ೦ಗೆ ಹೋಗಿ ಮಕ್ಕಳ ಏಳುಸಿ ಐದು ಕಿಲೋಮೀಟರು ಓಡಿ ಜಿಮ್ ತರಬೇತಿ ಕೊಟ್ಟು ಕ್ಲಾಸುಗೊ ಸುರು ಆದ ಮೇಲೆ ಮನಗೆ ಬಕ್ಕು.
ಹೊತ್ತೋಪ್ಪಗ ತಿರುಗಿ ಮಕ್ಕಳೊಟ್ಟಿ೦ಗೆ ಕಸರತ್ತು ತೆಗಗು.
ತನ್ನ ಹವ್ಯಾಸವನ್ನೇ ಉದ್ಯೋಗವಾಗಿ ಮಾಡಿಗೊ೦ಬ ಯೋಗ ಇವ೦ಗೆ ಸಿಕ್ಕಿದ್ದು ಹೇಳುಲೆ ಅಡ್ಡಿಯಿಲ್ಲೆ.

2೦೦7 ರಲ್ಲಿ,ಮಲೇಶಿಯಾಲ್ಲಿ ನೆಡದ ಹಿರಿಯರ ( 4೦ ವರುಷ೦ದ ಮೇಲ್ಪಟ್ಟ ) ಓಟದ ಸ್ಪರ್ಧೆಲಿ ಶ್ಯಾಮಣ್ಣ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ 2೦೦ ಮೀಟರ್,4೦೦ ಮೀಟರ್ ,4 x 4೦೦ ಮೀಟರು ರಿಲೇ  ಈ ಓಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದು ಕೂಟದ “ಅತ್ಯುತ್ತಮ ಕ್ರೀಡಾಪಟು” ಹೇಳ್ತ ಪ್ರಶಸ್ತಿ  “ಕೀರ್ತಿ” ಗೂ ಪಾತ್ರನಾಯಿದ° .
“ಕೀರ್ತಿ”,ಹ್ಮ್,ಇವನ ಹೆ೦ಡತಿಯ ಹೆಸರೂ ಅದುವೇ.
ಅನುರಾಗದ ದಾ೦ಪತ್ಯಲ್ಲಿ ಹುಟ್ಟಿದ ಮಗನ ಹೆಸರು ಅನುರಾಗ.
ಶ್ಯಾಮಣ್ಣ ಹವ್ಯಾಸಿ ಯಕ್ಷಗಾನ ಕಲಾವಿದ°.
ಕಾರ್ಕಳದ ಆಸುಪಾಸಿಲಿ ನೆಡೆತ್ತ ಹವ್ಯಾಸಿಗಳ ಯಕ್ಷಗಾನ೦ಗಳಲ್ಲಿ ಬಣ್ಣದ ವೇಷ,ಹೆಣ್ಣುಬಣ್ಣ,ರಾಜವೇಷ,ಹಾಸ್ಯ ಎಲ್ಲವನ್ನೂ ಆಸಕ್ತಿದಾಯಕವಾಗಿ ಮಾಡುವ ಶಕ್ತಿಯಿಪ್ಪ ಒಬ್ಬ ಕಲಾವಿದ ಇವ°.
ಈಗಳೂ ಗೆದ್ದೆ ಹೂಡೊದರಿ೦ದ ಹಿಡುದು ಅಡಕ್ಕೆ ಕೊಯ್ವವರೆಗೆ ಏವ ಕೆಲಸಕ್ಕೂ ರೆಡಿ.

ಚೆಲ,
ಈ ಮುಳಿಯಭಾವ ಇಷ್ಟು ಸಲಿಗೆಲಿ ಪರಿಚಯ ಮಾಡುತ್ತಾ ಇದ್ದ,ಎ೦ತ ಕತೆ ಹೇಳಿ ಯೋಚನೆಯೋ?
ಅಪ್ಪು,ಸಲಿಗೆ ಇಲ್ಲದ್ದೆ ಮತ್ತೆ೦ತರ?
ಇವ° ಎನ್ನ ಅಣ್ಣ.
ಮುಳಿಯ ಕೇಶವಯ್ಯ, ದೇವಿಯರ ಪ್ರಥಮ ಪುತ್ರ ಮುಳಿಯದ ಶ್ಯಾಮಸು೦ದರ.

ದೇಹದಾರ್ಡ್ಯ ಪ್ರದರ್ಶನದ ವೀಡ್ಯ:

ದೇಹದಾರ್ಢ್ಯ ಪಟು ಶ್ಯಾಮಣ್ಣ , 5.0 out of 5 based on 5 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

  1. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: +2 (from 2 votes)

    ಯಬಾ…!!!!
    ಫಟಂಗಳ ನೋಡಿ ಬಿಟ್ಟ ಕಣ್ಣು ಬಿಟ್ಟ ಹಾಂಗೆ ಒಳುದತ್ತು…!!

    [ಉತ್ತರುಸಿ]

  2. Gopalakrishna BHAT S.K.
    ಗೋಪಾಲಣ್ಣ
    VA:F [1.9.3_1094]
    Rating: +2 (from 2 votes)

    ನಮ್ಮವರಲ್ಲೂ ಇಂತ ಸಾಧನೆ ಇಪ್ಪದು ಸಂತೋಷದ ವಿಷಯ. ಶಾಮಣ್ಣಂಗೆ ಅಭಿನಂದನೆಗೊ.

    [ಉತ್ತರುಸಿ]

  3. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +2 (from 2 votes)

    ಯಪೋ… ಇವನೇ.!! ‘ಬಲುತೋಷವಾಯ್ತೆನಗೆ ಈ ಜೆನವ ನೋಡಿ….’.

    ಇನ್ನೂ ಉನ್ನತ ಕೀರ್ತಿ ಯಶಸ್ಸು ಸಿಕ್ಕಲಿ ಹೇಳಿ ಬೈಲಿಂದ ಹಾರ್ದಿಕ ಕಾಮನೆ.

    [ಉತ್ತರುಸಿ]

  4. ತೆಕ್ಕುಂಜ ಕುಮಾರ
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: +2 (from 2 votes)

    ಒಪ್ಪಣ್ಣಲ್ಲಿ ‘ಒಪ್ಪಣ್ಣ’ನ ಪರಿಚಯ ಲಾಯಿಕ್ಕಯಿದು. ಮಂಗಳೂರು ಆಕಾಶವಾಣಿಲಿ ಕಾರ್ಯಕ್ರಮ ಸಂಯೊಜಕ ಆಗಿಯೂ ಕೆಲಸ ಮಾಡಿದ್ದ. ಇದರ ಹೇಳುಲೆ ಬಿಟ್ಟತ್ತೋ ರಘು. ‘ಒಪ್ಪಣ್ಣ’ನ ಕಂಠ ಸ್ವರ ಒಳ್ಳೆದಿದ್ದು.
    ಹವ್ಯಾಸಿ ಯಕ್ಶಗಾನಲ್ಲಿ ‘ಕೋಟಿ ಚೆನ್ನಯ’ರ ಪಾತ್ರ – ಮುಳಿಯ ಶ್ಯಾಮ – ಮುಳಿಯ ರಘು ಒಳ್ಳೆ ರೈಸುತ್ತು ಹೇಳಿ ಕೇಳಿದ್ದೆ.

    [ಉತ್ತರುಸಿ]

    ವಿವೇಕ ಮುಳಿಯ ಉತ್ತರ ಕೊಟ್ಟದು:
    ವಿವೇಕ ಮುಳಿಯ

    VN:F [1.9.3_1094]
    Rating: 0 (from 0 votes)

    ಆಕಾಶವಾಣಿಲಿ ಇವನ ಸ್ವರ- ಕೆ.ಆರ್.ರೈ’ ಯ ಹಾ೦ಗೆ ಇತ್ತಲ್ದಾ ಮಾವ? ಎಲ್ಲರೂ ಹೇಳುಗು ಅವಗ. ಆನು ಸಣ್ಣ ಇತ್ತಿದ್ದೆ. ಈಗಳೂ ನೆ೦ಪಿದ್ದು ಇವನ ಸ್ವರ ;)

    ವಿವೇಕ ಮುಳಿಯ

    [ಉತ್ತರುಸಿ]

  5. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +2 (from 2 votes)

    ಶಾಮಣ್ಣನ ಪರಿಚಯ ಬೈಲಿಲ್ಲಿ ನೋಡಿ ತುಂಬಾ ಸಂತೋಷ ಆತು. ಸಣ್ಣ ಇಪ್ಪಗಂದಳೇ ಕಂಡು ಮಾತಾಡಿ ಗೊಂತಿದ್ದರೂ ಇವನ ಬಹುಮುಖ ಪ್ರತಿಭೆಯ ಸಾಧನೆಯ ಪರಿಚಯ ಈಗ ಇಲ್ಲಿಯೇ ಆದ್ದಷ್ಟೆ.
    ಸಾಧನೆಯ ಕ್ಷೇತ್ರಲ್ಲಿ, ಇನ್ನು ಮುಂದೆಯೂ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗೊ.

    [ಉತ್ತರುಸಿ]

  6. ವಿವೇಕ ಮುಳಿಯ
    ವಿವೇಕ ಮುಳಿಯ
    VN:F [1.9.3_1094]
    Rating: 0 (from 0 votes)

    ಎ೦ಗಳ ಒಪ್ಪಣ್ಣನ ಪರಿಚಯ ನಮ್ಮ ಒಪ್ಪಣ್ಣ.ಕಾಮ್’ಲಿ ನೋಡಿ ಭಾರೀ ಸ೦ತೋಷ ಆತು :)

    ಹಾ೦ಗೆ ಇವನ ದೇಹದಾರ್ಡ್ಯ ಪ್ರದರ್ಶನ ಇಲ್ಲಿ ನೋಡಿಕ್ಕಿ :)

    http://www.youtube.com/watch?v=naQISwOZyuI

    ವಿವೇಕ ಮುಳಿಯ

    [ಉತ್ತರುಸಿ]

  7. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +1 (from 1 vote)

    ವಾರೆ ವಾಹ್. ಎಂತ ಮೈ ಕಟ್ಟು, ಎಂತ ಮೈ ಕಟ್ಸು !! ಒಪ್ಪಣ್ಣನ ಪರಿಚಯವ ವಿವರವಾಗಿ ತಿಳುದು ಕೊಶಿ ಆತದ. ಈ ಒಪ್ಪಣ್ಣನ ಕಂಡು ಮಾತಾಡಿ ಒಳ್ಳೆ ಗುರ್ತ ಇದ್ದು. ಅವನ ಸಾಧನೆ ಎಲ್ಲ ಗೊಂತಿತ್ತು. ಅಂಗಿ ಹಾಕಿಂಡಿಪ್ಪಗ ಕಂಡದದ. ಅವನ ವಿವಿಧ ಸಾಧನೆಗಳ ಒಟ್ಟಿಂಗೆ ಫೊಟೊಂಗಳನ್ನುದೆ ನೋಡಿ ತುಂಬಾ ಹೆಮ್ಮೆ ಆತು. ಇದರ ಒಟ್ಟಿಂಗೆ ಯಕ್ಸಗಾನ ರಂಗಲ್ಲಿಯುದೆ, ರಂಗು ರಂಗಿನ ವೇಷ ಹಾಕಿ ಮಿಂಚುತ್ತಾ ಇದ್ದದು (ತಮ್ಮನ ಹಾಂಗೆ) ಮತ್ತುದೆ ಸಂತೋಷ ಕೊಟ್ಟತ್ತು. ಈಗಳೂ ಗೆದ್ದೆ ಹೂಡೊದರಿ೦ದ ಹಿಡುದು ಅಡಕ್ಕೆ ಕೊಯ್ವವರೆಗೆ ಏವ ಕೆಲಸಕ್ಕೂ ರೆಡಿ ಹೇಳ್ತ ಮಾತು ಕೇಳಿ ಮನತುಂಬಿ ಬಂತು.
    ಮುಳಿಯ ಶ್ಯಾಮಣ್ಣಂಗೆ ಅಭಿನಂದನೆಗೊ. ಈ ಮುಳಿಯ ಸಹೋದರರ ನೆನಸುವಗ, ಭೀಮಾರ್ಜುನರ ನೆಂಪಾವ್ತಾನೇ !!

    [ಉತ್ತರುಸಿ]

  8. Soumya
    VA:F [1.9.3_1094]
    Rating: +2 (from 2 votes)

    ನಮ್ಮಲ್ಲಿ ಈಗಳೂ sports ಇಂಗೆ ಹೆಚ್ಚು ಪ್ರಾಮುಖ್ಹ್ಯತೆ ಕೊಡ್ತಿಲ್ಲೆ. ಒಂದು ೨೦-೨೫ ವರ್ಷ ಮೊದ್ಲೇ discourage ಮಾಡದಕ್ಕೆ, ನಿಂಗಳ ಅಬ್ಬೆ-ಅಪ್ಪಂಗೆ ಎನ್ನ appreciations. ಅಣ್ಣಂಗೂ ಶುಭಾಶಯಂಗೊ.

    [ಉತ್ತರುಸಿ]

  9. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: 0 (from 0 votes)

    ಯಬೋ..!! ಭಾರೀ ಕಟ್ಟು ನಿಟ್ಟು ಆಗಿ ವ್ಯಾಯಾಮ ಮಾಡಿ- ಲೋಹದ ಮೈಕಟ್ಟು ಬೆಳೆಶಿದ್ದವು, ರಘು ಭಾವ ಹೇಳಿದಾ೦ಗೆ ತನ್ನ ತಾನೆ ಒ೦ದು ಶಿಲ್ಪದ ಹಾ೦ಗೆ ತಯಾರು ಮಾಡಿದವ್ವು – ಮುಳಿಯ ಶ್ಯಾಮಣ್ಣನ ಸಾಧನೆ ಮೆಚ್ಚೆಕೇ..!!

    [ಉತ್ತರುಸಿ]

  10. ಲನಾ
    VA:F [1.9.3_1094]
    Rating: 0 (from 0 votes)

    ಯಕ್ಷಗಾನದ ಪಟ ಮೊದಾಲು ನೋಡಿದೆ ಆನು.. ಇವರ ಸಾಧನೆ ಬಗ್ಗೆ ಓದಿ ಖುಷಿ ಆತು… ಃ)

    ಬಣ್ಣದ ವೇಷ ಚುಟ್ಟಿ ಮಡುಗಿದ್ದ ಅಲ್ಲಾ ಕೃತಕ ಚುಟ್ಟಿಯಾ ಮದಾಲು ನೋಡಿದೆ…

    ನಿಜ ಜೀವನಲ್ಲಿ ಭೀಮನಾಂಗಿಪ್ಪ ಇವು , ಆಟಲ್ಲಿ ಭೀಮನ ಪಾತ್ರ ಮಾಡಿರೆ ಲಾಯ್ಕಕ್ಕು ಅಲ್ಲದಾ ?

    [ಉತ್ತರುಸಿ]

  11. ಸರ್ಪಮಲೆ ಮಾವ
    ಸರ್ಪಮಲೆ ಮಾವ°
    VA:F [1.9.3_1094]
    Rating: +4 (from 4 votes)

    ನಮ್ಮ ಹವ್ಯಕರಲ್ಲಿ ಬೇರೆ ಬೇರೆ ಕ್ಷೇತ್ರಲ್ಲಿ ಸಾಧನೆ ಮಾಡಿದವು ತುಂಬಾ ಜೆನ ಇದ್ದವು; ಆದರೆ ಹೆಚ್ಚಿನವು ತೆರೆಯಮರೆಲೇ ಇಪ್ಪವು. ಪ್ರಚಾರ ಬಯಸದ್ದವು. ಅವರ ಬಗ್ಗೆ ಮಾಧ್ಯಮಂಗಳಲ್ಲಿ ಬರವಲೆ, ಮಾತಾಡ್ಳೆ ಬಿಡುತ್ತವಿಲ್ಲೆ. ಆದ ಕಾರಣ ಅಂತವರ ಬಗ್ಗೆ ನವಗೇ ಗೊಂತಿರುತ್ತಿಲ್ಲೆ.

    ಶ್ಯಾಮಸುಂದರನ ವಿಷಯ ಅವನ ತಮ್ಮನೇ ಬರದ್ದು ನೋಡಿ ಬಾರೀ ಸಂತೋಷ ಆತು. ಬಹುಶಃ ದೇಹದಾರ್ಢ್ಯಲ್ಲಿ, ಭಾರ ನೆಗ್ಗುವದರಲ್ಲಿ ಶ್ಯಾಮನ ಹಾಂಗೆ ಸಾಧನೆ ಮಾಡಿದವು ನಮ್ಮೋರಲ್ಲಿ ಆರೂ ಇಲ್ಲೆ!

    ನಿಟ್ಟೆ ಕಾಲೇಜಿಲ್ಲಿ ಅವ° ಮಾಡುವ ಕೆಲಸವ ರಘು ಒಂದೇ ವಾಕ್ಯಲ್ಲಿ ಹೇಳಿದ್ದ° {” ಪ್ರತಿದಿನ ಉದೆಗಾಲಕ್ಕೆ ಕಾಲೇಜಿನ ಹಾಸ್ಟೆಲಿ೦ಗೆ ಹೋಗಿ ಮಕ್ಕಳ ಏಳುಸಿ ಐದು ಕಿಲೋಮೀಟರು ಓಡಿ ಜಿಮ್ ತರಬೇತಿ ಕೊಟ್ಟು ಕ್ಲಾಸುಗೊ ಸುರು ಆದ ಮೇಲೆ ಮನಗೆ ಬಕ್ಕು.”}
    ಅಷ್ಟೇ ಅಲ್ಲ, ಪ್ರತಿ ಕ್ರೀಡಾಳುವಿನ ಪ್ರಗತಿಯ ಸೂಕ್ಷ್ಮವಾಗಿ ಗಮನಿಸುಗು, ದಾರಿ ತಪ್ಪದ್ದ ಹಾಂಗೆ ನೋಡ್ಯೊಂಗು. ಬರೇ ಕ್ರೀಡಾರಂಗಲ್ಲಿ ಮಾಂತ್ರ ಅಲ್ಲ, ಆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನೂ ತಿಳುಕ್ಕೊಂಡು ಸರಿಯಾದ ಮಾರ್ಗದರ್ಶನ ಮಾಡುಗು.

    ನಿಟ್ಟೆ ಕ್ಯಾಂಪಸ್ಸಿಲ್ಲಿಪ್ಪ ಎಲ್ಲಾ ಕ್ರೀಡಾಸೌಲಭ್ಯಂಗಳ ಅಲ್ಲಿಪ್ಪ ಎಲ್ಲಾ ಸಂಸ್ಥಗೊ ಸಮನ್ವಯಂದ ಸಮಾನವಾಗಿ ಉಪಯೋಗುಸುತ್ತವು.
    ಆನು ನಿಟ್ಟೆ ಕಾಲೇಜಿನ (Dr. NSAM First Grade College) ಪ್ರಿನ್ಸಿಪಾಲ ಆಗಿಪ್ಪಗ ಶ್ಯಾಮನ ನಿಕಟ ಸಂಪರ್ಕ ಇತ್ತಿದ್ದು.
    ದೇಹದಾರ್ಡ್ಯ, ಭಾರ ನೆಗ್ಗುವದು ಇತ್ಯಾದಿಗಳಲ್ಲಿ ಎನ್ನ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿದ್ದದು.

    ಈ ಸಸ್ಯಾಹಾರಿ ಬ್ರಾಹ್ಮಣ ದೇಹದಾರ್ಡ್ಯ ಪಟುವಿನ ಸಾಧನೆ ಅಸಾಮಾನ್ಯ!! ಕೆಲವು ತಿಂಗಳು ಹಿಂದೆ ನಿಟ್ಟೆಲಿ ಸಿಕ್ಕಿಪ್ಪಗ ಟೊಪ್ಪಿ ಮಡಿಕ್ಕೊಂಡಿತ್ತಿದ್ದ; ಕೆಲವೇ ದಿನದ ಮದಲು ತಲೆಯ ಶಸ್ತ್ರ ಚಿಕಿತ್ಸೆ ಆದ್ದದು ಗೊಂತಾತು. ಈ ಪ್ರಾಯಲ್ಲಿ (ವರ್ಷ ೪೭ ಆತಿಲ್ಲೆಯೋ)ಯೂ ದೇಹದಾರ್ಡ್ಯ, ಭಾರ ನೆಗ್ಗುವದರಲ್ಲಿ ಮದಲಾಣ ಉತ್ಸಾಹವೇ ಇಪ್ಪದು ನೋಡುವಾಗ ಆಶ್ಚರ್ಯ ಆವುತ್ತು!

    ಅವ° ಸಣ್ಣ ಇಪ್ಪಗ ಶಾಲೆ ಕಾಲೇಜುಗೊಕ್ಕೆ ಓಡಿಗೊಂಡೇ ಹೋಯ್ಕೊಂಡಿತ್ತಿದ್ದಡ. ಉದಿಯಪ್ಪಗ ವ್ಯಾಯಾಮ ಶಾಲೆಂದ ಬಂದು ಮಂಗಳೂರಿಂದ ಸುರತ್ಕಲ್ಲಿಂಗೆ ಓಡಿಯೊಂಡೇ ಹೋಪದರ ಇಂದು ಗ್ರೇಶಲೆಡಿಗೊ?

    ವೇದಿಕೆಲಿ ಅವನ ದೇಹ ಡಾರ್ಢ್ಯ ಪ್ರದರ್ಶನ ನೋಡ್ಳೆ ಚೆಂದ! ಸಂಗೀತಕ್ಕೆ ಅವ ಸ್ನಾಯುಗಳ ಕೊಣುಶುವ ಚೆಂದ ನೋಡೆಕ್ಕಾದ್ದೆ!! (ಯು ಟ್ಯೂಬಿನ ವೀಡ್ಯೊಲ್ಲಿಯೂ ಕಾಣ್ತು). ಯಕ್ಷಗಾನಲ್ಲಿಯೂ ಸಮಾನ ಆಸಕ್ತಿ ಬೆಳೆಶೆಂಡಿದ.

    ರಘು ಹೇಳಿದ ಹಾಂಗೆ, ” ಹವ್ಯಾಸವನ್ನೇ ಉದ್ಯೋಗವಾಗಿ ಮಾಡಿಗೊ೦ಬ ಯೋಗ” ಎಲ್ಲೋರಿಂಗೂ ಸಿಕ್ಕುತ್ತಿಲ್ಲೆ. ಶ್ಯಾಮಂಗೆ ಸಿಕ್ಕಿದ್ದು. ಅವನ ಸಾಧನೆಯ ಜೆನ ಇನ್ನೂ ಹೆಚ್ಚು ಗುರುತಿಸುವ ಹಾಂಗೆ ಆಗಲಿ, ಅವಂಗೆ ಇನ್ನೂ ಹೆಚ್ಚಿನ ಯಶಸ್ಸು, ಕೀರ್ತಿ ಬರಲಿ ಹೇಳಿ ಎನ್ನ ಹಾರೈಕೆ. ರಘು ಅವನ ಬಗ್ಗೆ ಹೆಚ್ಚು ಜೆನಕ್ಕೆ ಗೊಂತಪ್ಪಲೆ ಬರದ್ದಕ್ಕೆ ಅಭಿನಂದನೆ.

    [ಉತ್ತರುಸಿ]

  12. ಪುಟ್ಟಭಾವ ಹಾಲುಮಜಲು
    ಪುಟ್ಟಬಾವ°
    VA:F [1.9.3_1094]
    Rating: 0 (from 0 votes)

    ಶಾಮಣ್ಣನ ಸಾಧನೆ ಮೆಚ್ಚೆಕ್ಕಾದ್ದೆ…..ಅವರ ತಮ್ಮಂದುದೆ….

    [ಉತ್ತರುಸಿ]

  13. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಶ್ಯಾಮಣ್ಣನ ಸಾಧನೆಯ ನೋಡಿದ, ಮೆಚ್ಚಿಗೆಯ ಮಾತಾಡಿದ ಎಲ್ಲೋರಿ೦ಗೂ ಧನ್ಯವಾದ.
    ಅಣ್ಣನ ಸಾಧನೆಯ,ಚಟುವಟಿಕೆಗಳ ಹತ್ತರ೦ದ ಗಮನಿಸಿದ ಸರ್ಪಮಲೆ ಮಾವನ ಒಪ್ಪ ಓದಿಯಪ್ಪಗ ಈ ಪರಿಚಯ ಲೇಖನ ಬರದ್ದು ಸಾರ್ಥಕ ಆತು ಅನಿಸಿತ್ತು.ಧನ್ಯವಾದ ಮಾವ.

    [ಉತ್ತರುಸಿ]

  14. ಸುಭಗ
    ಸುಭಗ
    VN:F [1.9.3_1094]
    Rating: 0 (from 0 votes)

    ‘ಘನ ಶ್ಯಾಮ ಸುಂದರ ರೂಪಂ’!!
    ಮುಳಿಯ ಭಾವಾ, ಶ್ಯಾಮಣ್ಣನ ಅದ್ಭುತ ಸಾಧನೆ ಕಂಡು ತುಂಬಾ ಕೊಶಿ ಆತು. ಹವ್ಯಕ ಮಾಂತ್ರ ಅಲ್ಲ; ಬಹುಶಃ ಇಡೀ ಬ್ರಾಹ್ಮಣವರ್ಗಲ್ಲಿಯೇ ಈ ಕ್ಷೇತ್ರಲ್ಲಿ ಈ ನಮೂನೆ ಸಾಧನೆ ಮಾಡಿದವು ಈ ತಲೆಮಾರಿನವು ಆರೂ ಇರವು. (ಮದಲೆ ಸಾಹಿತಿಯಾಗಿಯೂ ಪ್ರಸಿದ್ಧಿಹೊಂದಿದ ಕೆ.ವಿ.ಅಯ್ಯರ್ ಹೇಳ್ತವು ಒಬ್ಬ ಇತ್ತಿದ್ದವು)
    ಇದರೊಟ್ಟಿಂಗೆ ಇನ್ನಿತರ ಹವ್ಯಾಸಂಗಳನ್ನೂ ಬೆಳಶಿಯೊಂಡಿದವು ಹೇಳುವ ವಿಚಾರ ಗೊಂತಾಗಿ ಶ್ಯಾಮಣ್ಣನ ಮೇಲೆ ಮತ್ತಷ್ಟು ಅಭಿಮಾನ ಬತ್ತು. ಶುಭವಾಗಲಿ..

    [ಉತ್ತರುಸಿ]

  15. ಶ್ರೀಅಕ್ಕ°
    ಶ್ರೀಅಕ್ಕ°
    VN:F [1.9.3_1094]
    Rating: 0 (from 0 votes)

    ರಘು ಭಾವ°,

    ಅಣ್ಣನ ಬಗ್ಗೆ ತುಂಬಾ ಚೆಂದಲ್ಲಿ, ಅಭಿಮಾನಲ್ಲಿ ಬರದ್ದಿ. ನಮ್ಮ ನಡುಗೆ ಇಪ್ಪ ಇಂಥಾ ಅಪರೂಪದ ವೆಕ್ತಿತ್ವ ಈಗ ಆದರೂ ಬೈಲಿಲಿ ಅನಾವರಣಗೊಂಡದು ಕಂಡು ಕೊಶೀ ಆತು.

    ಶಿಶು ಒಂದು ವೇಳೆ ತಿಂಗಳಾಗದ್ದೆ ಹುಟ್ಟಿದರೆ ಅದನ್ನೇ ನಿತ್ಯ ಹೇಳಿಗೊಂಡು, ಆ ಮಗುವಿನ ಮನಸ್ಸಿಲಿ ತಾನು ಎಲ್ಲಿಯೋ ಕೊರತೆ ತೆಕ್ಕೊಂಡು ಹುಟ್ಟಿದ್ದು ಹೇಳುವಂಥಾ ಭಾವನೆ ಬಂದು, ಆ ಮಗು ಎಲ್ಲದರಲ್ಲಿಯೂ ಹಿಂದೆಯೇ ಒಳಿವ ಹಾಂಗೆ ಆವುತ್ತು. ನಿಂಗಳ ಹೆತ್ತೋರಿಂಗೆ ಕೋಟಿ ಕೋಟಿ ವಂದನೆಗಾ!! ಏಳು ತಿಂಗಳಿಲಿ ಹುಟ್ಟಿದ ಮಗ° ಬೆಳವಷ್ಟೂ ಬೆಳವಲೆ ಪ್ರೋತ್ಸಾಹ ಮಾಡಿ ನಾವೆಲ್ಲ ಹೆಮ್ಮೆ ಪಡುವಂಥಾ ವೆಕ್ತಿಯಾಗಿ ರೂಪಿಸಿದವು.

    ಹುಟ್ಟು ಬೇಗ ಆದರೂ, ಬೆಳವವಕ್ಕೆ ಯಾವ ಅಡ್ಡಿಯೂ ಇಲ್ಲೆ ಹೇಳಿ ಸಾಧನೆ ಮಾಡಿ ತೋರ್ಸಿ ಮಾದರಿ ಆದ ಶಾಮಭಾವಂಗೆ ಅಭಿನಂದನೆಗಾ!!! ಈಗಳೂ ನಿಷ್ಟೆಲಿ ಉದೆಕಾಲಕ್ಕೆ ಮಕ್ಕಳ ಏಳುಸಿ, ಅವರ ತಿದ್ದಿ, ಅಭ್ಯಾಸ ಮಾಡ್ಸಿ ಆ ಮಕ್ಕಳ ಮುಂದೆ ತಪ್ಪ ನಿಂಗಳ ಶ್ರಮವ ಮೆಚ್ಚೆಕ್ಕೆ!! ನಮ್ಮ ಯುವ ಪೀಳಿಗೆಗೆ ಒಂದು ಆದರ್ಶ ಆದಿ ನಿಂಗೋ!!

    ಇನ್ನೂ ಸಾಧನೆಗಳ ಸಾಧಿಸಿ..
    ನಮ್ಮ ಸಮಾಜದ ಮಕ್ಕಳನ್ನೂ ನಿಂಗಳ ಹಾಂಗೆ ಹೆರ, ಒಳ ಗಟ್ಟಿ ಮಾಡಿ ಬೆಳೆಶಿ…

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME