ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಕಲಿವಲರ್ವತ್ನಾಕು ಬೆಡಗಿನ
ಲಲಿತಕಲೆಗಳಲೊ೦ದು ವಿದ್ಯೆಯು
ಒಲಿಗು ಭಕುತಿಯ ಮನದಿ ಕಲ್ತರೆ ಶುದ್ಧಭಾವಲ್ಲಿ|
ಬಳಪ ಕಲ್ಲಿನ ಕೆತ್ತಿ ಶೃದ್ಧೆಲಿ
ನಲಿವ ಮೂರ್ತಿಯ ಸೃಷ್ಟಿಮಾಡುವ
ಕಲೆಯ ಬಲ್ಲಿದರಿ೦ಗೆ ಬರಹದ ನಮನ ಸಲ್ಲುಸುವೆ||
ಲಲಿತಕಲೆಗಳ ಹಲವು ಪ್ರಕಾರ೦ಗಳಲ್ಲಿ ಪ್ರಕಾಶಮಾನರಾಗಿ,ಅಪ್ರತಿಮ ಪ್ರತಿಭೆಯ ಮೆರದು ನಮ್ಮ ಸಮಾಜಕ್ಕೂ ಕೀರ್ತಿ ತ೦ದುಕೊಟ್ಟವು ಸುಮಾರು ಜೆನ೦ಗೊ.ಯಕ್ಷಗಾನ,ಸಾಹಿತ್ಯ,ಸ೦ಗೀತ,ನಾಟ್ಯ೦ಗಳ ಹವ್ಯಾಸವಾಗಿ ಬೆಳೆಸಿಗೊ೦ಡು ಕಲಾಮಾತೆಯ ಸೇವೆ ಮಾಡಿ ಧನ್ಯತೆಯ ಸ೦ಪಾದಿಸಿದವೂ ತು೦ಬಾ ಜೆನ೦ಗೊ.ಇವರೆಲ್ಲರ ಎಡಕ್ಕಿಲಿ ಎಲೆಮರೆಯ ಕಾಯಿಯ ಹಾ೦ಗೆ ಶಿಲ್ಪಕಲಾ ಕ್ಷೇತ್ರಲ್ಲಿ ನೈಪುಣ್ಯವ ಮೈಗೂಡಿಸಿಗೊ೦ಡು ದೇಶ ವಿದೇಶಲ್ಲಿ ಪ್ರಸಿದ್ಧರಾಗಿಪ್ಪವು ಶ್ರೀ ಗಣೇಶ ಭಟ್.
ಶ್ರೀ ಜಿ.ಎಲ್.ಭಟ್ ಹೇಳಿಯೇ ಆತ್ಮೀಯವರ್ಗಲ್ಲಿ ಹೆಸರು ಪಡಕ್ಕೊ೦ಡ ಗಣೇಶಣ್ಣ, ಇಡಗು೦ಜಿ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಭಟ್ಟರ ಮಗ.1963 ರಲ್ಲಿ ಹುಟ್ಟಿದ ಗಣೇಶಣ್ಣ ಇಡಗು೦ಜಿಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವ ಮುಗುಶಿ ಜೀವನೋಪಾಯದ ದಾರಿ ಹುಡುಕ್ಕಿಗೊ೦ಡು ಸಾಗರಲ್ಲಿ ತನ್ನ ಭಾವನಲ್ಲಿಗೆ (ಜಿ.ಎಸ್.ಭಟ್) ಹೋಗಿಪ್ಪಗ ಪರಿಚಯ ಆದವು ರಾಜ್ಯಲ್ಲಿ ಆವಗ ಶಿಲ್ಪಕಲೆಲಿ ಪ್ರಸಿದ್ಧರಾದ ಶಿಲ್ಪಿ ದಿ.ಶಾ೦ತಪ್ಪ ಗುಡಿಗಾರರು.ಅವರ ಹತ್ತರೆ 1980 ರಿ೦ದ 84 ರ ವರೆಗೆ ಶಿಲ್ಪಕಲೆಯ ಅಭ್ಯಾಸ ಮಾಡಿದ ಗಣೇಶಣ್ಣ,ಗ೦ಧದ ಮರಲ್ಲಿ ಕೆತ್ತನೆಗಳ ಮಾಡುಲೆ ಶುರು ಮಾಡಿದವು.ಇವರಲ್ಲಿ ಸುಪ್ತವಾಗಿಪ್ಪ ಪ್ರತಿಭೆಯ ಗುರುತಿಸಿದ ಯಕ್ಷಗಾನದ ಮೇರುವ್ಯಕ್ತಿ ಶ್ರೀ ಕೆರೆಮನೆ ಶ೦ಭು ಹೆಗಡೆಗೊ ಗಣೇಶಣ್ಣನ ಹೆಚ್ಚಿನ ತರಬೇತಿಗಾಗಿ ಮೈಸೂರಿ೦ಗೆ ಹೋಪಲೆ ಪ್ರೋತ್ಸಾಹ ಕೊಟ್ಟವು.ಯಶಸ್ಸಿನ ಒ೦ದೊ೦ದೇ ಮೆಟ್ಲಿನ ಹತ್ತಿಗೊ೦ಡು ಬ೦ದ ಗಣೇಶಣ್ಣ ಮೈಸೂರಿ೦ದ ಬೆ೦ಗಳೂರಿ೦ಗೆ ಬ೦ದು 1984 ರಿ೦ದ 1993 ರ ವರೆಗೆ ದೇಶದ ಆ ಕಾಲದ ಪ್ರಸಿದ್ಧ ಶಿಲ್ಪಿ ದಿ.ವಾದಿರಾಜರ ಹತ್ತರೆ ಗುರುಶಿಷ್ಯ ಪರ೦ಪರೆಲಿ ಶಿಲ್ಪ ಕಲಾಭ್ಯಾಸ ಮಾಡಿ ಪರಿಣತಿ ಪಡದವು.ಶಿಲ್ಪಕಲಾ ಪ್ರತಿಷ್ಟಾನದ ಪ್ರೊಫೆಸರ್ ಎಸ್.ಕೆ.ರಾಮಚ೦ದ್ರರಾಯರ ಹತ್ತರೆ ಶಿಲ್ಪಶಾಸ್ತ್ರವನ್ನೂ ಕಲ್ತುಗೊ೦ಡು ನಮ್ಮ ದೇಶದ ವಿವಿಧ ಶಿಲ್ಪ ಶೈಲಿಗಳ ವಿಷಯ೦ಗಳ ಅಧ್ಯಯನ ಮಾಡಿದವು.
ಮರದ ಕೆತ್ತನೆಯ ಒಟ್ಟಿ೦ಗೆ ಕಲ್ಲಿನ ಕೆತ್ತನೆಲಿ ಸಾಕಷ್ಟು ಅಭ್ಯಾಸ ಮಾಡಿದ ಗಣೇಶಣ್ಣ ಬೆ೦ಗಳೂರಿನ ಹೆರವಲಯಲ್ಲಿಪ್ಪ ಬಿಡದಿಯ ಜೋಗರದೊಡ್ಡಿಲಿ ಕೆನರಾಬ್ಯಾ೦ಕಿನವು ಸ್ಥಾಪನೆಮಾಡಿದ ಕೆ.ಪಿ.ಜೆ.ಪ್ರಭು ಶಿಲ್ಪಕಲಾ ಶಾಲೆಲಿ 1991 ರಿ೦ದ 2009 ರವರೆಗೆ ಮುಖ್ಯ ಶಿಲ್ಪಿಯಾಗಿ ಉದ್ಯೋಗ ನಿರ್ವಹಣೆ ಮಾಡಿದವು.18 ವರುಷದ ಈ ಅವಧಿಲಿ ರಾಜ್ಯದ ಹಳ್ಳಿಹಳ್ಳಿಗಳಿ೦ದ ಬ೦ದ 6೦೦ ಕ್ಕೂ ಹೆಚ್ಚು ಆಸಕ್ತ ಶಿಷ್ಯರಿ೦ಗೆ ಮಾರ್ಗದರ್ಶನ ಮಾಡಿದ್ದವು.ಶಿಲ್ಪಕಲೆಯ ಭೂಪಟಲ್ಲಿ ಕರ್ನಾಟಕವೂ ಗುರ್ತಿಸಿಗೊ೦ಬಲೆ ಮುಖ್ಯ ಕಾರಣವಾದ, ಹೊಯ್ಸಳರ ಕಾಲಲ್ಲಿ ಕಟ್ಟಿದ ಬೇಲೂರು,ಹಳೆಬೀಡು ಮದಲಾದ ಚಾರಿತ್ರಿಕ ಶಿಲ್ಪಕಲೆಯ ಆಳ ಅಧ್ಯಯನ ಮಾಡಿದ ಗಣೇಶಣ್ಣ ಇ೦ದು ಆ ಕಾಲದ ಶಿಲ್ಪ೦ಗಳ ವಿಷಯಲ್ಲಿ ವಿವರವಾಗಿ ವಿಮರ್ಶೆ ಮಾಡುವಷ್ಟು ಅನುಭವ ಪಡದ್ದವು.
ಗಣೇಶಣ್ಣನ ಕೈಚಳಕವ ಗುರ್ತಿಸಿದ ಇ೦ಗ್ಲೆ೦ಡಿನ ಶಿಲ್ಪಕಲಾ ವಿದ್ಯಾರ್ಥಿಗೊ 1997 ರಿ೦ದ ಪ್ರತಿ ವರುಷ ತಮ್ಮಲ್ಲಿಗೆ ಬ೦ದು ಕೆತ್ತನೆಯ ಕಲೆಯ ಹೇಳಿಕೊಡೆಕ್ಕು ಹೇಳಿ ಕೇಳಿಗೊ೦ಡವು.ಹಾ೦ಗೆ ಪ್ರತಿವರುಷ ಒ೦ದೆರಡು ತಿ೦ಗಳಿನ ಅವಧಿಗೆ ಗಣೇಶಣ್ಣ ಇ೦ಗ್ಲೆ೦ಡಿನ ಸಾಮರ್ ಸೆಟ್ ಹೇಳ್ತ ಜಾಗೆಲಿ ಅಲ್ಯಾಣ ವಿದ್ಯಾರ್ಥಿಗೊಕ್ಕೆ ತರಬೇತಿ ನೀಡುತ್ತಾ ಇದ್ದವು.ಯೂರೋಪಿನ ಗೋವ೦ಶಕ್ಕೆ ಮಾರಕ ರೋಗ (mad cow desease ) ಬ೦ದು ಸತ್ತ ಸಾವಿರಾರು ಗೋವುಗಳ ನೆನಪ್ಪಿ೦ಗಾಗಿ ಇ೦ಗ್ಲೆ೦ಡಿನ ಜೆನ೦ಗೊ ಗಣೇಶಣ್ಣನ ನಾಯಕತ್ವಲ್ಲಿ 5 ಅಡಿ ಎತ್ತರದ 9 ಅಡಿ ಉದ್ದದ ಕಾಮಧೇನುವಿನ ಶಿಲಾವಿಗ್ರಹವ ಸು೦ದರವಾಗಿ ಕೆತ್ತಿ ಸ್ಥಾಪನೆ ಮಾಡಿದವು.ಎರಡು ತಿ೦ಗಳು ಹಗಲಿರುಳು ಕೆತ್ತನೆ ಮಾಡಿದ ಗಣೇಶಣ್ಣ ಈಗಳೂ ನಮ್ಮ ದೇಶದ ಶಿಲ್ಪಕಲೆಯ ವಿದ್ಯೆಯ ಇ೦ಗ್ಲೆ೦ಡಿಲಿ ಪಸರಿಸುತ್ತಾ ಇದ್ದವು.ಇ೦ದು ನಮ್ಮ ದೇಶದ ಪುರಾತನ ಶಿಲ್ಪ ಶೈಲಿಯ ನಮ್ಮವರಷ್ಟೇ ಆಳವಾಗಿ ಅಧ್ಯಯನ ಮಾಡುವ ಕೆಲವು ಜೆನ೦ಗೊ ಅಲ್ಲಿ ಇದ್ದವು ಹೇಳಿ ಗಣೇಶಣ್ಣನ ಅಭಿಪ್ರಾಯ.
ಕರ್ನಾಟಕ ರಾಜ್ಯ ಪ್ರಶಸ್ತಿ,ದಸರಾಪ್ರಶಸ್ತಿ,ಶಿಲ್ಪಶ್ರೀ ಮೊದಲಾದ ಪ್ರಶಸ್ತಿಗೊ ಗಣೇಶಣ್ಣನ ಹುಡುಕ್ಕಿಗೊ೦ಡು ಬೈ೦ದು ಹೇಳಿರೆ ತಪ್ಪಿಲ್ಲೆ.ದೇಶದ ಉದ್ದಗಲಲ್ಲಿ ನಡದ ನೂರಾರು ಶಿಲ್ಪಕಲಾ ಪ್ರದರ್ಶನ೦ಗಳಲ್ಲಿ ಪ್ರಾತ್ಯಕ್ಷಿತೆಗಳ ನಡೆಶಿಗೊ೦ಡು ಬತ್ತಾ ಇಪ್ಪ ಗಣೇಶಣ್ಣನ ಮಾರ್ಗದರ್ಶನಲ್ಲಿ ಮತ್ತೆ ಒಡನಾಟಲ್ಲಿ ಶಿಲ್ಪಕಲೆಲಿ ನೈಪುಣ್ಯವ ಮೈಗೂಡಿಸಿದವರಲ್ಲಿ ನಮ್ಮ ಸಮಾಜದ ಇಬ್ರು ಗಣ್ಯಶಿಲ್ಪಿಗಳೂ ಇದ್ದವು.ಅವು ಶ್ರೀ ಗುಣವ೦ತೇಶ್ವರ ಭಟ್ ಮತ್ತೆ ಶ್ರೀ ಸೇಡಿಯಾಪು ಶ್ಯಾಮಸು೦ದರ.ಶ್ರೀ ಗುಣವ೦ತೇಶ್ವರ ಭಟ್ರು ಕಾರ್ಕಳಲ್ಲಿ ಶಿಲ್ಪಕಲೆಯ ಜ್ಞಾನವ ವಿದ್ಯಾರ್ಥಿಗೊಕ್ಕೆ ಹ೦ಚುತ್ತಾ ಇದ್ದವು.ಮನ್ನೆ ಬೈಲಿಲಿ ಕ೦ಡ ಈಶ್ವರಮ೦ಗಲದ ಹನುಮಾದ್ರಿ ಯೇ ಮದಲಾದ ಹಲವು ಸು೦ದರ ಕಲಾಕೃತಿಗಳ ನಿರ್ಮಾಣ ಮಾಡಿದ ಕೀರ್ತಿ ಅವರದ್ದು.ಶ್ರೀ ಶ್ಯಾಮಸು೦ದರರು ತನ್ನ ಅ೦ಗವೈಕಲ್ಯವ ಮೀರಿ ನಿ೦ದ ಮಾದರಿ ವ್ಯಕ್ತಿ,ಈಗ ಮೈಸೂರಿಲಿ ಶಿಲ್ಪಕಲೆಲಿ ತನ್ನ ತೊಡಗಿಸಿಗೊ೦ಡಿದವು.
ಯಾವ ಪ್ರಶಸ್ತಿ,ಸಮ್ಮಾನ೦ಗಳ ಹಿ೦ದೆ ಹೋಗದ್ದೆ ತಾನಾತು,ತನ್ನ ಕಲೆ ಆತು ಹೇಳುವ ಮನಸ್ಸು ಗಣೇಶಣ್ಣ೦ದು.ಸದಾ ಮುಗುಳ್ನೆಗೆಯ,ಸರಳ ಸಜ್ಜನ ಗಣೇಶಣ್ಣ ಈಗ ಬೆ೦ಗಳೂರಿನ ಬನ್ನೇರುಘಟ್ಟದ ಹತ್ತರೆ ಕಲಾಗ್ರಾಮವ ಮಾಡುವ ಉದ್ದೇಶಲ್ಲಿ ಶ್ರಮಿಸುತ್ತಾ ಇದ್ದವು.ಪತ್ನಿ,ಇಬ್ರು ಮಕ್ಕಳೊಟ್ಟಿ೦ಗೆ ಬೆ೦ಗಳೂರಿನ ಬನಶ೦ಕರಿಯ ಹತ್ತರೆ ವಾಸ.ಅವರ ಪ್ರೀತಿಯ ಶಿಲ್ಪಕಲೆಯ ಮೂಲಕ ಕಲಾಮಾತೆಯ ಸೇವೆ ಮಾಡುವ ಶಕ್ತಿಯೊಟ್ಟಿ೦ಗೆ ಗಣೇಶಣ್ಣ೦ಗೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಲಿ ಹೇಳಿ ಬೈಲಿನ ಬ೦ಧುಗಳ ಹಾರೈಕೆಗೊ.
ಇನ್ನೂ ಮಾಹಿತಿಗೊ ಬೇಕಾರೆ ನೋಡಿ — www.glbhat.weebly.com
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಕೆಲವು ಸಮಯದ ಹಿಂದೆ ಯೇವದೋ ಪೇಪರಿನವು ಇವರ ಬಗ್ಗೆ ಬರದಿತಿದ್ದವು.ಬೈಲಿಂಗೆ ಪರಿಚಯ ಮಾಡಿದ್ದು ಲಾಯ್ಕಾತು.
[ಉತ್ತರುಸಿ]
ಅದ್ಭುತ ಕೈ ಕಲೆ. ಉನ್ನತ ಕೀರ್ತಿ ಇವಕ್ಕಾಗಲಿ.
[ಉತ್ತರುಸಿ]
ಶಿಲ್ಪಕಲೆಯ ಅಭ್ಯಾಸ ಮಾಡಿ ಯಶಸ್ಸು ಸಾಧಿಸಿದವು ನಮ್ಮ ಊರಿಲಿ, ನಮ್ಮವು ಭಾರಿ ಕಮ್ಮಿ, ಬೆರಲೆಣಿಕಯ ಜೆನ ಸಿಕ್ಕುಗು. ಇಂಥಾ ಅಪರೂಪದ ವ್ಯಕ್ತಿ ಗಣೆಶ ಭಟ್. ಹಾರ್ದಿಕ ಆಭಿನಂದನೆಗೊ. ಪರಿಚಯ ಮಾಡಿ ಕೊಟ್ಟ ರಘುವಿಂಗೂ ಶುಭಾಶಯ.
[ಉತ್ತರುಸಿ]
ಶಿಲ್ಪ ಕಲೆಲಿ ವಿಶೇಷ ನೈಪುಣ್ಯತೆ ಹೊಂದಿದ ಗಣೇಶ ಭಟ್ ಅವರ ಪರಿಚಯ ಬೈಲಿಂಗಾದ್ದದು ಬಹಳ ಸಂತೋಷದ ವಿಷಯ. ಮರದ ಕೆತ್ತನೆಲಿಯುದೆ ಶ್ರೀಯುತರು ಅಗ್ರಮಾನ್ಯರು ಹೇಳಿ ತಿಳುದತ್ತು. ಬೇರೆ ಎಲ್ಲ ಲಲಿತ ಕಲೆಗಳಲ್ಲಿ ಹೆಸರು ಗಳಿಸಿದ ತುಂಬಾ ಜೆನಂಗೊ ನಮ್ಮ ಸಮಾಜಲ್ಲಿದ್ದವು. ಈ ಒಂದು ಕಲೆಲಿ ಹೀಂಗಿಪ್ಪ ಕಲಾವಿದರು ಬೆರಳೆಣಿಕೆಯಷ್ಟು ಮಾಂತ್ರ. ಇದು ನವಗೆಲ್ಲ ಹೆಮ್ಮೆ ಯ ವಿಷಯ. ಬೆಂಗಳೂರಿಲ್ಲಿ ಕಲಾಗ್ರಾಮ ಮಾಡುವ ಅವರ ಉದ್ದೇಶ ಮೆಚ್ಚುವಂತಹದು. ಅವರ ಉದ್ದೇಶ ಸಾಕಾರವಾಗಲಿ. ಅವು ಕೆತ್ತಿದ ಶಿಲ್ಪಂಗಳ ನೋಡಿ ಕಣ್ಣು ತುಂಬಿ ಬಂತು. ಕಲ್ಲಿನ ಕೆತ್ತಿ, ಈ ಸುಂದರ ರೂಪಕ್ಕೆ ಬರುಸೆಕಾರೆ ಇದ್ದ ಅವರ ಶ್ರಮ, ಕೈಚಳಕ ಅಭಿನಂದನೀಯ. ಎಂಗೊ ಸಣ್ಣಕಿಪ್ಪಗ ತೋಡಿಲ್ಲಿ ಸಿಕ್ಕೆಂಡಿದ್ದಿದ್ದ ಬಳಪ ಕಲ್ಲಿನ ಹೆರ್ಕಿ ತಂದು, ಪೀಶಕತ್ತಿಲಿ ಕೆತ್ತಿ, ಕೆಲವು ಮುಖಂಗಳ ಮಾಡೆಂಡಿದ್ದಿದ್ದು ನೆಂಪಾತು. ಅದನ್ನು ಕೆತ್ತೆಕಾರುದೆ ಅದೆಷ್ಟು ಕಷ್ಟ ಇದ್ದು ಹೇಳಿ ಮಾಡಿದವಂಗೇ ಗೊಂತು. ಶ್ರೀಯುತ ಗಣೇಶಣ್ಣನ ಅಭಿನಂದಿಸುತ್ತಾ ಇದ್ದೆ. ಅವರಿಂದ ನಮ್ಮ ಸಮಾಜಕ್ಕೆ ಒಳ್ಳೆ ಹೆಸರು ಬರಲಿ, ಅವರ ಕೈಲಿ ಹುಟ್ಟಿದ ಒಳ್ಳೊಳ್ಳೆ ಶಿಲ್ಪಂಗೊ ಜನಾನುರಾಗಿಯಾಗಲಿ.
ಮುಳಿಯದ ಭಾವಯ್ಯು, ಚೆಂದಕೆ ಭಾಮಿನಿಯ ಪೀಠಿಕೆಲಿ ಸುರು ಮಾಡಿ, ಉತ್ತಮವಾಗಿ ವ್ಯಕ್ತಿ ಪರಿಚಯ ಮಾಡಿದ್ದ. ಧನ್ಯವಾದಂಗೊ.
[ಉತ್ತರುಸಿ]
ಹೊತ್ತುವೇಳೆ: 7 June,2011ರ 11:53 AM ಗೆ. (ಒಪ್ಪಸಂಕೊಲೆ)
ನಿಜ ಮಾವ,
ನಮ್ಮಲ್ಲಿ ಶಿಲ್ಪಕಲೆಯ ಕರಗತ ಮಾಡಿದವು ಅಪರೂಪವೆ.
ಹ೦ಪೆಯ ಉಗ್ರನರಸಿ೦ಹ ವಿಗ್ರಹವ ಕೆತ್ತಿದವು ಬ್ರಾಹ್ಮಣರೆ ಅಡ.ಮದಲು ದೇವಸ್ಥಾನ೦ಗಳ ವಿಗ್ರಹ೦ಗಳ ಬ್ರಾಹ್ಮಣರೇ ತಯಾರು ಮಾಡಿಗೊ೦ಡಿತ್ತಿದ್ದವಡ.ಒಳುದ ಹೆರಾಣ ಕೆತ್ತನೆಗಳ ವಿಶ್ವಕರ್ಮರು ಮಾಡಿಗೊ೦ಡಿದ್ದಡ.
[ಉತ್ತರುಸಿ]
ಕಲಾ ಸಾಧಕನ ಪರಿಚಯ ಬೈಲಿಲ್ಲಿ ಪ್ರಥಮವಾಗಿ ಆವ್ತಾ ಇಪ್ಪದು. ರಘುವಿಂಗೆ ಧನ್ಯವಾದಂಗೊ
ಶಿಲ್ಪಿ ಗಣೇಶರವರಿಂದ ಒಳ್ಳೆಯ ಕಲಾಕೃತಿಗೊ ಇನ್ನೂ ಬರಲಿ. ಪ್ರಶಸ್ತಿಗಳೂ ಅವರ ಹುಡ್ಕಿಂಡು ಬರಲಿ ಹೇಳಿ ಹಾರೈಸುವೊ
[ಉತ್ತರುಸಿ]
ಒಪ್ಪ ಆಯಿದು. ಇನ್ನುದೇ ದೊಡ್ಡ ದೊಡ್ಡ ಕಲಾಕೃತಿಗೊ ಗಣೇಶಣ್ಣನ ಕೈಂದ ಮೂಡಿ ಬರಲಿ ಹೇಳಿ ಹಾರೈಸುತ್ತೆ…
[ಉತ್ತರುಸಿ]
ವಿಭಿನ್ನ ಮತ್ತೆ ಅಪೂರ್ವ ಕಲೆ.. “ಶಿಲ್ಪಿ” ಗಣೇಶ ಭಟ್ ಅವರ ಶಿಲ್ಪ ಕಲೆಯ ಸಾಧನೆಯ ನಾವೆಲ್ಲಾ ಪ್ರೋತ್ಸಾಹ ಮಾಡಿ ಸ್ವಾಗತ ಮಾಡುವೊ..
ಬೈಲಿಂಗೆ ಪರಿಚಯ ಮಾಡಿಕೊಟ್ಟ ರಘುಭಾವ೦ಗೆ ಧನ್ಯವಾದ.
[ಉತ್ತರುಸಿ]
ಶಿಲ್ಪ ಕಲೆಲಿ ಸಾಧನೆ ಮಾಡಿದ ಇವರ ಬಗ್ಗೆ ಪತ್ರಿಕೆಲಿ ಓದಿದ್ದೆ.ಇದರಲ್ಲಿ ಬರದ್ದು ನೋಡಿ ಸಂತೋಷ ಆತು.
[ಉತ್ತರುಸಿ]
ಬೇಲೂರಿನಲ್ಲೊಮ್ಮೆ ಪರಿಚಯವಾದ ನಂತರ ಇದೀಗ ಗಣೇಶ ಭಟ್, ಜಿ.ಎಲ್.ಭಟ್ ಗಣೇಶನ್ನ ಇತ್ಯಾಧಿ ಪ್ರಸಿದ್ಧರಾದ ಭಟ್ಟರು ನನ್ನ ಆತ್ಮೀಯ ಗೆಳೆಯ ಎನ್ನಲು ಹೆಮ್ಮೆ ಎನ್ನಿಸುತ್ತದೆ. ಗಣೇಶ ಭಟ್ಟರ ಶಿಲ್ಪಕಲೆಗೆ ಸಕಲರೂ ಮನಸೋತಿರುವಾಗ ನಾನು ಬೆರಗಾಗುವುದು ವಿಶೇಷ ಅಲ್ಲ. ಇಷ್ಟಾದರೂ ನಿಜಕ್ಕೂ ಎಲೆಮರೆಯ ಕಾಯಿ ಎಂಬುದಕ್ಕೆ ಇವರು ಅನ್ವರ್ಥ. ಪ್ರಶಸ್ತಿಯಾ ಹಿಂದೆ ಹೋಗದಿದ್ದರೂ ಪ್ರಶಸ್ತಿಗಳೇ ಹುಡುಕಿಕೊಂಡು ಬರುವುದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಈಗಾಗಲೇ ಹಲವು ಪ್ರಶಂಸೆಯ ಗರಿಗಳನ್ನು ಪಡೆದಿರುವ ಭಟ್ಟರು ಯಶಸ್ಸಿನ ಇನ್ನೂ ಹಲವು ಮೆಟ್ಟಿಲನ್ನು ಏರಲಿ.
ಕೇಶವ ಕುಡ್ಲ. ಮಂಗಳೂರು.
[ಉತ್ತರುಸಿ]
ಹೊತ್ತುವೇಳೆ: 8 June,2011ರ 10:41 PM ಗೆ. (ಒಪ್ಪಸಂಕೊಲೆ)
ನಮಸ್ತೆ ಕೇಶವ ಕುಡ್ಲರಿಂಗೆ..
ನಿಂಗಳ ಬೈಲಿಲಿ ಕಂಡು ಕೊಶೀ ಆತು. ಸ್ವಾಗತ ನಿಂಗೊಗೆ ಬೈಲಿಂಗೆ.
ನಿಂಗಳ ಕೆಲಸದ ಬಗ್ಗೆ ಕೇಳಿ ಗೊಂತಿದ್ದು. ನಿಂಗಳೂ ಸರಸ್ವತಿಯ ಸೇವೆಲಿಯೇ ಇಪ್ಪೋರಲ್ಲದಾ? ನಿಂಗೋ ತುಳು ಭಾಷೆ, ಸಂಪ್ರದಾಯದ ಬಗ್ಗೆ ತುಂಬಾ ವಿಷಯಂಗಳ ಎಲ್ಲೋರಿಂಗೂ ಮುಟ್ಟುಸುತ್ತಾ ಇದ್ದಿ ಅಲ್ಲದಾ? ತುಂಬಾ ಒಳ್ಳೆಯ ಕೆಲಸ. ನಿಂಗೊ ಪ್ರತಿಯೊಂದು ಕೆಲಸವನ್ನುದೇ ಅದರ ಮೂಲಕ್ಕೊರಗೆ ಹೋಗಿ ಬರೆತ್ತಿ ಹೇಳಿದೇ ಗೊಂತಾತು. ಇಂಥಾ ಅಪೂರ್ವ ವ್ಯಕ್ತಿತ್ವ ಇಪ್ಪ ನಿಂಗೊ ಬೈಲಿಂಗೆ ಬತ್ತಾ ಇರಿ.
ಧನ್ಯವಾದ.
[ಉತ್ತರುಸಿ]
ಹೊತ್ತುವೇಳೆ: 9 June,2011ರ 7:34 AM ಗೆ. (ಒಪ್ಪಸಂಕೊಲೆ)
ಶ್ರೀಅಕ್ಕ ಅವರಿಗೆ ನಮಸ್ತೆ. ಒಪ್ಪಣ್ಣನ ಒಪ್ಪಂಗೊ ಬ್ಲಾಗ್ ಬಗ್ಗೆ ಇದುವರೆಗೂ ಅರಿವು ಇಲ್ಲದೆ ಇದ್ದುದಕ್ಕೆ ಬೇಸರ ಆಗುತ್ತಿದೆ. ಒಂದು ವಿಶಿಷ್ಟ ಪ್ರತಿಭಾವಂತ ಜನ ಸಮೂಹದ ಪರಿಚಯಕ್ಕಾಗಿ ಇರುವ ಬ್ಲಾಗ್ ಈಗಲಾದರೂ ಸಂಪರ್ಕಕ್ಕೆ ಬಂದದ್ದು ಸಂತಸ. ನಿಮ್ಮ ಮತ್ತು ಸಾಗರ ಕಡೆಯ ವಿಶಿಷ್ಟ ಉಚ್ಚಾರಾಣೆಯ ಭಾಷೆ ಅಂದರೆ “ಹವ್ಯಕ ಕನ್ನಡ” ಬಗ್ಗೆ ಹಾಗೂ ಅದನ್ನು ಕಲಿಯಬೇಕೆಂಬ ಆಸಕ್ತಿ ಮೊದಲಿನಿಂದ ಇತ್ತು. ಬಹುಶ ಅದನ್ನು ಕಲಿಯಲಿಕ್ಕಾದರೂ ಇನ್ನು ಮುಂದೆ ಒಪ್ಪಣ್ಣನ ಬೈಲಿಗೆ ಬರುತ್ತಿರುತ್ತೇನೆ. ಬಹುಶ ಒಂದೆರಡು ತಿಂಗಳಲ್ಲಿ ನಿಮ್ಮ ಕನ್ನಡದಲ್ಲೇ ಪ್ರತಿಕ್ರಿಯೆ ಕೊಡಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇರಲಿ..
[ಉತ್ತರುಸಿ]
ಹೊತ್ತುವೇಳೆ: 9 June,2011ರ 10:38 PM ಗೆ. (ಒಪ್ಪಸಂಕೊಲೆ)
ತುಂಬಾ ಸಂತೋಷ ಕೇಶವ ಕುಡ್ಲರೆ!
ಒಪ್ಪಣ್ಣನ ಬೈಲು ಹವ್ಯಕ ಮನಸ್ಸಿನ ಎಲ್ಲೋರಿಂಗೂ ಇಪ್ಪದು. ನಿಂಗೊ ಆದಷ್ಟು ಬೇಗ ಭಾಷೆ ಕಲಿತ್ತೆ ಹೇಳಿದ್ದು ತುಂಬಾ ಸಂತೋಷ. ಆದಷ್ಟು ಬೇಗ ನಿಂಗಳೂ ಬೈಲಿಲಿ ಶುದ್ದಿ ಹೇಳುವ ಹಾಂಗೆ ಆಗಲಿ..
ಬೈಲಿಲಿ ಯಾವಾಗಲೂ ಕಾಣುತ್ತಾ ಇರಿ..
[ಉತ್ತರುಸಿ]
ರಘು ಭಾವ°,
ನಮ್ಮ ನಡುಗೆ ಇಪ್ಪ ಒಳ್ಳೆಯ ಪ್ರತಿಭೆಯ ಬೈಲಿಂಗೆ ಪರಿಚಯ ಮಾಡಿದ್ದಿ. ಧನ್ಯವಾದ ಭಾವ°.
ಕಠಿಣ ಕಲ್ಲಿಲಿ ಕೂಡಾ ಬೆಣ್ಣೆಯ ಹಾಂಗೆ ಕೆತ್ತಿ, ಮರಲ್ಲಿಯೂ ತುಂಬಾ ಲಾಯ್ಕಕ್ಕೆ ಅದ್ಭುತ ಶಿಲ್ಪ ಮಾಡುವ ಗಣೇಶಣ್ಣನ ಕೈಗಳಲ್ಲಿ ಸರಸ್ವತಿಯ ಅನುಗ್ರಹ ಇಪ್ಪದು ನವಗೆ ಕಾಣ್ತು. ಅವರ ಎಲ್ಲಾ ಶಿಲ್ಪಂಗಳಲ್ಲಿಯೂ ದೈವತ್ವ ಎದ್ದು ಕಾಣ್ತು.
ಅವು ಕೆಲಸ ಮಾಡ್ತಾ ಇದ್ದ ಜೋಗರದೊಡ್ಡಿಯ ಶಿಲ್ಪಕಲಾಶಾಲೆಲಿ ಭೇಟಿ ಅಪ್ಪ ಅಪ್ಪೊರ್ವ ಅವಕಾಶ ಎನಗೆ ಸಿಕ್ಕಿದ್ದು. ಮಕ್ಕಳ ಒಟ್ಟಿಂಗೆ ಕೆಲಸ ಮಾಡುವ ಅವರ ವಿಧಾನ ತುಂಬಾ ಖುಷಿಯ ಅನುಭವ ಕೊಡ್ತು. ಅವರ ಹತ್ತರೆ ಕಲ್ತ ಎಷ್ಟೋ ಮಕ್ಕೊ ಈಗ ಈ ಕಲೆಯ ಕರಗತ ಮಾಡಿ ಅವರವರ ಜಾಗೆಗಳಲ್ಲಿ ಹೆಸರು ಮಾಡ್ತಾ ಇದ್ದವು.
ಎಷ್ಟೇ ಪ್ರಸಿದ್ಧರಾದರೂ ಸರಳ ಜೀವನ ಇವರದ್ದು ನಿಜವಾಗಿಯೂ ಅನುಕರಣೀಯ. ಗಣೇಶಣ್ಣ ನಮ್ಮ ಬೈಲಿಂಗೆ ಬಂದು ಎಲ್ಲಾ ಶಿಲ್ಪಕಲೆಯ ಬಗ್ಗೆ, ಶಿಲ್ಪ ವೈವಿಧ್ಯಂಗಳ ಬಗ್ಗೆ ನವಗೆ ತಿಳಿಶಿ ಕೊಡಲಿ..
ಒಂದು ಕಲಾಕೃತಿಯ ನೋಡುವಾಗ ಅದರ ಸತ್ವವನ್ನೂ ತಿಳ್ಕೊಂಡು ಆಸ್ವಾದನೆ ಮಾಡ್ತ ಹಾಂಗೆ ನವಗುದೇ ಜ್ಞಾನ ಕೊಡಲಿ..
ಅವರ ಬೇರೆ ಬೇರೆ ಕಲಾಕೃತಿಗಳ ಬಗ್ಗೆ, ಅದರ ಸೂಕ್ಷ್ಮತೆಗಳ ಬಗ್ಗೆ ನವಗೆ ತಿಳಿಶಿಕೊಡಲಿ..
ಗಣೇಶಣ್ಣಾ, ಬೈಲಿಂಗೆ ಬತ್ತಾ ಇರಿ.. ಕಲೆಯ ಪಸರಿಸುತ್ತಾ ಇರಿ.. ಶ್ರೀಗುರು ದೇವರುಗಳ ಅನುಗ್ರಹ ನಿಂಗಳ ಮೇಲಿರಲಿ..
[ಉತ್ತರುಸಿ]
ಗಣೇಶಣ್ಣನ ಪರಿಚಯ ಲೇಖನವ ಓದಿದ,ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಎಲ್ಲೋರಿ೦ಗೂ ಧನ್ಯವಾದ.
ಜುಲೈ ೨೦ ರಿ೦ದ ಒ೦ದು ತಿ೦ಗಳ ಕಾಲ ಗಣೇಶಣ್ಣ ಇ೦ಗ್ಲೆ೦ಡಿಲಿ ಇರ್ತವು.ಈ ವರುಷದ ಪ್ರವಾಸಲ್ಲಿ ಬರ್ಮಿ೦ಗ್ ಹ್ಯಾಮಿಲಿ ನಮ್ಮ ಊರಿನವು ಕಟ್ಟಿಸಿ ಪೂಜಿಸಿಗೊ೦ಡು ಬತ್ತಾ ಇಪ್ಪ ಶ್ರೀ ವೆ೦ಕಟೇಶ್ವರ ದೇವಸ್ಥಾನಲ್ಲಿ ಜುಲೈ ೨೪ ರಿ೦ದ ಒ೦ದು ವಾರ “ಭಾರತೀಯ ಶಿಲ್ಪಕಲೆ”,”ದೇಗುಲ ಶಿಲ್ಪ” ಮೊದಲಾದ ವಿಷಯ೦ಗಳ ಬಗ್ಗೆ ಉಪನ್ಯಾಸ,ಕಾರ್ಯಾಗಾರ೦ಗಳ ನಡೆಶುವ ಯೋಜನೆಲಿ ಇದ್ದವು.
[ಉತ್ತರುಸಿ]
ಒಬ್ಬ ಮಹಾನ್ ಕಲಾಸಾಧಕನ; ಆ ಸಾಧಕನ ಅದ್ಭುತ ಕಲಾಕೃತಿಗಳ ಪರಿಚಯ ಆಗಿ ತುಂಬಾ ಕೊಶಿ ಆತು. ನಮ್ಮವೇ ಆದ ಗಣೇಶಣ್ಣನ ಕೀರ್ತಿ ಇನ್ನೂ ಎತ್ತರಕ್ಕೆ ಏರಲಿ ಹೇಳಿ ಹಾರೈಸುತ್ತೆ.
ಪರಿಚಯಿಸಿದ ಮುಳಿಯ ಭಾವಂಗೆ ಅನಂತ ಧನ್ಯವಾದಂಗೊ.
[ಉತ್ತರುಸಿ]
ನಮ್ಮ ಬೈಲಿನೋರು ಹೆಚ್ಚಾಗಿ ಹೋಗದ್ದ ವಿಶಿಷ್ಟ ದಾರಿಲಿ ಹೋಗಿ, ತನ್ನದೇ ಆದ ಹೆಜ್ಜೆಗುರುತಿನ ಬೆಳೆಶುತ್ತಾಇಪ್ಪ ಗಣೇಶಣ್ಣಂಗೆ ಅಭಿನಂದನೆಗೊ.
ಶುದ್ದಿಲಿಪ್ಪ ಪ್ರತಿಯೊಂದು ವಿಚಾರ ಕೇಳಿದ ಹಾಂಗೆ ಹೆಮ್ಮೆಯ ಒಂದೊಂದೇ ಮೆಟ್ಳು ಹತ್ತಿದ ಅನುಭವ ಆವುತ್ತು.
ಗಣೇಶಣ್ಣನ ಅಪೂರ್ವ ಕಲಾಕೃತಿಗಳ ಪರಿಚಯ ಪಟದ ಮೂಲಕ ಮಾಡಿಕೊಟ್ಟದು ತುಂಬಾ ಕೊಶಿ ಆತು.
ಶ್ರೀಕೇಶವ ಕುಡ್ಳರಂತಹ ಹಿರಿಯರು ಬೈಲಿಂಗೆ ಬಂದು ಒಪ್ಪಕೊಡೇಕಾರೆ, ಈ ಶುದ್ದಿಯ ತೂಕ ಎಷ್ಟು ಹೇಳ್ತದು ಗೊಂತಾವುತ್ತದಾ!
ಮಹಾನ್ ಕಲಾಸಾಧಕನ ಬೈಲಿಂಗೆ ಪರಿಚಯ ಮಾಡಿದ ಮುಳಿಯಬಾವಂಗೂ ಒಂದು ಒಪ್ಪ!
[ಉತ್ತರುಸಿ]
ಒಪ್ಪಣ್ಣನ ಬೈಲಿನ ಎಲ್ಲ ಬಳಗದವಕ್ಕೆ ನಿಮ್ಮ ಶಿಲ್ಪಿ ಗಣೇಶನ್ನ ನಮೋನಮಃ .
ಆಶ್ಚರ್ಯ ಎ೦ಬ ಹ೦ಗೆ ರಘುಭಾವನ ಪರಿಚಯ ಆತು.ಸಮಾನಮನಸ್ಕರಾದ ಅವರೊಂದಿಗೆ ಸ್ನೇಹ ಬೆಳೀತಾ ಇರೆಕಾರೆ ಈ ಜಾಲದ ಬಗ್ಗೆ ತೆಳುತ್ತು.ಅದರ ಒಳ ಹೊಕ್ಕು ಓದುದುರೊಳಗೆ ನಾನೇ ಅದರೊಳಗಿದ್ದಿದ್ದೆ ! ಭಾರೀ ಆಶ್ಚರ್ಯ ಹಾಗೂ ಸಂತೋಷ ಆತು.ನಮ್ಮವು ಇಂಥದ್ದೊಂದು ಮಾಡಿದ್ದೋ ಹೇಳಿ ನೋಡುದ್ದಕ್ಕೆ ನಂಗೆ ರಾಶಿ ಕುಶಿ ಇದ್ದು.
ನಾ ಈ ಕ್ಷೇತ್ರಕ್ಕೆ ಬರೆಕಾರೆ ಭಾರೀ ಹೆದರಿಕೆ ಇತ್ತು.ರಾಶಿ ಜನ ” ತಮ್ಮಾ,ಇದೆಲ್ಲಾ ನಂಗೊಕಲ್ವೋ ” ಹೇಳಿ ಹೇಳ್ತಿದ್ದೋ.ಆದ್ರೆ ನಂಗೆ ಕಲೆ ಬಗ್ಗೆ ಆಸಕ್ತೀನ ಆ ಇಡಗುಂಜಿ ಗಣಪತಿ ದೇವ್ರೇ ಕೊಟ್ಟಿದ್ದು ಅನ್ಸುತ್ತು.ನನ್ನ ಅಪ್ಪಯ್ಯನ ಪ್ರೋತ್ಸಾಹ,ನನ್ನ ಪೂಜ್ಯ ಗುರುಗಳ ಆಶೀರ್ವಾದ ಇದೆಲ್ಲದರ ಬಲದಿಂದ ಬೆಳೀತಾ ಇದ್ದೆ.ಈಗ ನಿಂಗಳ ಇಷ್ಟೆಲ್ಲಾ ಪ್ರೋತ್ಸಾಹ,ಹಾರೈಕೆ ನಂಗೆ ಇನ್ನೂ ಮುಂದೆ ಬಪ್ಲೆ ಬಲ ಸಿಕ್ದಂಗಾತು.ನಿ೦ಗೊಕೆಲ್ಲಾವ ನನ್ನ ಅಭಿನಂದನೆ.
ಪ್ರಪಂಚದಲ್ಲಿ ಭಾರತ ಅತಿ ಹೆಚ್ಚು ದೇವಸ್ಥಾನ ಹೊಂದಿದ್ ದೇಶ.ತಮಿಳ್ನಾಡು.ಭಾರತದಲ್ಲೇ ಅತಿ ಹೆಚ್ಚು ದೇವಸ್ಥಾನ ಹೊಂದಿದ್ದಡ . ಆದ್ರೆ ಕರ್ನಾಟಕ್ ದಲ್ಲಿ ಅತಿ ಹೆಚ್ಚು ದೇವಾಲಯ ಶೈಲಿ ಬೆಳ್ ಕೊಂಡು ಬ೦ದು.ಉದಾಹರಣೆಗೆ ಹೇಳ್ತೆ ಗಂಗ,ಕದಂಬ,ಚಾಲುಕ್ಯ,ಹೊಯ್ಸಳ,ವಿಜಯನಗರ,ನಾಯಕರ ಕಾಲ ( ಇಕ್ಕೇರಿ,ಕೆಳದಿ ಇತ್ಯಾದಿ),ಮೈಸೂರು ಅರಸರ ಕಾಲದ ಶೈಲಿ ಹೇಳಿ,ಹೀಂಗೇ ಹಲವಾರು.ಆದ್ರೆ ವಿಶೇಷ ಏನು ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಲಿ ಇಪ್ಪಷ್ಟು ದೇವಸ್ಥಾನಂಗೋ ಕರ್ನಾಟಕದ ಇನ್ಯಾವ ಜಿಲ್ಲೆಲೂ ಇಲ್ಲೆ.ಇದರ ೫೦ ವರ್ಷದ ಹಿಂದೇನೆ ಕಾರಂತಜ್ಜ ದಾಖಲ್ಸಿದ್ವು.ಎಲ್ಲಿ ಹೆಚ್ಚು ದೇವಸ್ಥಾನ,ಪೂಜಾಸ್ಥಳ ಇರ್ತೋ ಆ ಜಾಗ ,ಊರು ಚೆನ್ನಾಗಿ ಬೆಳೀತು .ಇದಕ್ಕೆ ಉದಾಹರಣೇನೆ ನಿಂಗೊ ಮತ್ತೆ ಈ ವೆಬ್ ಸೈಟ್.
ಒಳ್ಳೆ ಭಾಮಿನಿ ಬರದು ನನ್ನ ಕಲೆ ಬಗ್ಗೆ ಇಷ್ಟೊಂದು ಸಹೃದಯಿ ಜನಕ್ಕೆ ಪರಿಚಯ ಮಾಡಿಕೊಟ್ಟ ರಘುಭಾವಂಗೆ ವಂದಿಸ್ತಾ ಇದ್ದೆ.ಪುರ್ಸತ್ತಾದಾಗ ನಂಗೆ ಗೊತ್ತಿದ್ದ ಶಿಲ್ಪಿ ಮತ್ತೆ ದೇವಸ್ಥಾನದ ಹಿಂದಿನ ವಿಜ್ಞಾನದ ಬಗ್ಗೆ ಬರೀತೆ ಹೇಳಿ ಅಂದ್ಕಂಡಿದ್ದೆ.
ಉಳಿ,ಸುತ್ತಿಗೆ ಕರೆತಿದ್ದು,ಬರ್ಲಾ?
ನನ್ನ ದೂರವಾಣಿ ಸಂಖ್ಯೆ : ೯೮೪೪೫೯೮೧೧೩.ಶಿಲ್ಪಕಲೆಯ ಸಂಬಂಧಪಟ್ಟ ಯಾವುದೇ ಮಾಹಿತಿಗೆ ಕರೆ ಮಾಡಿ.
[ಉತ್ತರುಸಿ]