ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್, 4.0 out of 5 based on 4 ratings

ಬೆಶಿ ಬೆಶಿ ಒಪ್ಪಂಗೊ..

  • shyamaraj.d.k: Lekhana layaka ayidu Oppanna.
  • ಗಣೇಶ ಮಾವ°: ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು...
  • ಗುತ್ತಿನ ಸದಾಶಿವ°: ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು –...
  • ಶ್ರೀಕೃಷ್ಣ ಶರ್ಮ.: ಚುಬ್ಬಣ್ಣ ತೆಗದ ಪಟಂಗೊ ಚೆಂದ ಚೆಂದ ಇದ್ದು. ಇನ್ನೂ ಹೀಂಗಿಪ್ಪದು ಬರಲಿ
  • ಡಾ.ಸೌಮ್ಯ ಪ್ರಶಾಂತ: ಎನಗುದೇ ದಿವ್ಯ ಹೇಳಿದ್ದು ಸರಿ ಕಾಣ್ತು..ದೇವರಕೋಣೆ ಸಣ್ಣದಿಪ್ಪದು ಆದಿಕ್ಕು ಶುಭ ಅತ್ತೆಯ...
  • Akshara: gooood one…. :)
  • Akshara: tumbaa laayka iddu..
  • ಶ್ರೀಕೃಷ್ಣ ಶರ್ಮ.ಹಳೆಮನೆ: ನಮ್ಮ ಜೀವಮಾನ ಇಡೀ ಎಂತಾದರೂ ಕಲಿವಲೆ ಇದ್ದೇ ಇರ್ತು. ಗುರುಗಳ ಮಾರ್ಗದರ್ಶನ ಯಾವಾಗಲೂ...
  • ದಿವ್ಯಾ: ದೇವರ ಕೋಣೆ ದೊಡ್ಡ ಇದ್ದು ಹೇಳಿ ಆರಾದರೂ ದೇವರ ಕೋಣೆಯ ಒಳಗೆ ನಾಯಿಯ ಹೋಪಲೆ ಬಿಡ್ತವ ಒಪ್ಪಣ್ಣ...
  • ದಿವ್ಯಾ: ಒಪ್ಪಣ್ಣ….. ಈ ಲೇಖನ ಓದಿ ಅಪ್ಪಗ ಎನಗೆ ಒಂದು ಸಂಶಯ ಬಂತು .. ಎಂತ ಹೇಳಿದರೆ ಒಬ್ಬನ ಮನೆಯ ದೇವರ...
  • ಶ್ರೀಶ. ಹೊಸಬೆಟ್ಟು: ಒಪ್ಪಣ್ಣ, ನೀನು ಶುಭತ್ತೆಯ ಹೀಂಗೆಲ್ಲ ಹೇಳಿರೆ ಹೇಂಗೆ? ಪಾಪ ಮನೆ ಕಟ್ಟುವಾಗ ಮಗಂಗೊಂದು...
  • ಶ್ರೀಶ. ಹೊಸಬೆಟ್ಟು: [ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.] ನಾರಾಯಣಂಗೆ ಮತ್ತೆ...
  • ಶ್ರೀದೇವಿ ವಿಶ್ವನಾಥ್: ಒಪ್ಪಣ್ಣ, ಶುದ್ದಿ ಲಾಯ್ಕಾಯಿದು.ಈಗಾಣ ಜೆನಂಗೊಕ್ಕೆ, ಸಣ್ಣ ಕುಟುಂಬ, ಸಣ್ಣ ದೇವರ ಕೋಣೆ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪಟಂಗೊ ಲಾಯಿಕ ಬಯಿಂದು. ಇದಕ್ಕೆ contrast ಪಟಂಗೊ ಬೇಕಾರೆ ನಮ್ಮ ರೋಡ್ ಗಳದ್ದು...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಚೆನ್ನಬೆಟ್ಟನ ಮದುವೆಗೆ ಹೋಗಿತ್ತಿದ್ದೆ. ಈಗ ಸಟ್ಟುಮುಡಿಗೆ ಕೂಡಾ ಹೋದ ಹಾಂಗೆ ಆತು....
  • ಕೆದೂರುಡಾಕ್ಟ್ರು: {ಸಿನೆಮ ನೋಡ್ಲೆ ಬ೦ದ ಕಾರು!} ಆ ಕಾರು ನಮ್ಮಲಿಯಾಣ ಸಿನೆಮ ತಿಯೇಟರಿನಶ್ಟು ದೊಡ್ಡವೇ ಇದ್ದನ್ನೆ!
  • ಅಜ್ಜಕಾನ ಭಾವ: {ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ} ಅದಾ.....
  • ಅಜ್ಜಕಾನ ಭಾವ: ಮಾವ ನಿಂಗೊಳ ಚುಟುಕು ಸಾಂಧರ್ಬಿಕವಾಗಿ ಲಾಯ್ಕಲ್ಲಿ ಬೈಂದು.. ನಿಂಗೊ ಹೇಳಿದ “ಒಂದು...
  • ಪುಟ್ಟಭಾವ ಹಾಲುಮಜಲು: [ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ.] ಬೇರೆಯವ್ವು ಅನುಭವಂದ ಹೇಳಿದ್ದರ...
  • ಪುಟ್ಟಭಾವ ಹಾಲುಮಜಲು: [ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ] ಹೇಳುಲೇ ಎಡಿಯ!! ಬೋಂಡ ಆದಿಕ್ಕು!!
  • ಪುಟ್ಟಭಾವ ಹಾಲುಮಜಲು: ತಲೆಕ್ಕೊಂಬು ಮಾಡಿರೆ ಬೇಗ ತಲೆಗೆ ಹೋಗಿ ಬೇಗ ಹೇಳಿಕೊಡುಗು!!!!
  • ಚುಬ್ಬಣ್ಣ...: “…..ಐರಾವತಲ್ಲಿ ದೇವೇಂದ್ರನ ಹಾಂಗೆ ಹೆರಟಿದೆ” ಬಾವ… :P ಎನಗೆ ಒ೦ದು...
  • ಪುಟ್ಟಭಾವ ಹಾಲುಮಜಲು: ಭಾವಾ!! ಮದಿಮ್ಮಾಯನ ಸ್ವಾಗತ ಮಾಡಿದ್ದೂ ಭಾರೀ ಲಾಯ್ಕಯ್ದು!! ಅದು ಸರಿ !! ಉದಿಯಪ್ಪಗಳೇ...
  • raghumuliya: ಒಪ್ಪಣ್ಣಾ, ಒಳ್ಳೆಯ ಲೇಖನ. ತರವಾಡು ಮನೆಗಳ ದೇವರ ಕೋಣೆ ಮನೆಯ ಮಧ್ಯಲ್ಲಿದ್ದು, ಅದರ ಸುತ್ತಲೂ...
  • Jayalakshmi Pailoor: Theertha ellinda kudiyakku? Enage artha ayiddille. Chandana, kumkuma,...
  • ಗೋಪಾಲ ಮಾವ: ಬೆಂಗಳೂರಿಂದ ಮಂಗಳೂರಿಂಗೆ ಐರಾವತಲ್ಲಿ ಇಳಿದು ಬಂದ ಅನುಭವ, ಸಟ್ಟುಮುಡಿಯ ವಿವರಣೆ ಶೈಲಿ...
  • ಅಜ್ಜಕಾನ ಭಾವ: {ಅಂತೂ ಹೋದ ಎನಗೆ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು. ಓದಿದ ನಿಂಗೊಗೆ ?? } ಬಂದ್...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್

    July 31, 2010 ರ 8:00 amಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 41 ಒಪ್ಪಂಗೊ.

    ನಮ್ಮ ಬೈಲಿನ ಹೆಮ್ಮೆಯ ಮಾಣಿ ಕೇಮಹೇಶಣ್ಣ ಕಳುದವಾರಂದ ಡಾಕುಟ್ರುಮಹೇಶಣ್ಣ ಆದವು.

    (ಮದ್ದು ಕೊಡ್ತ ಡಾಗುಟ್ರು ಅಲ್ಲ, ಓದಿ ಅಪ್ಪ ಡಾಕುಟ್ರು! )
    ನಾವೆಲ್ಲರೂ ಹೆಮ್ಮೆ ಪಡುವಂತಹ, ನಮ್ಮ ಹಿಂದಾಣೋರ ಬಗ್ಗೆ ಮಾಡಿದ ಅಧ್ಯಯನ. ಬೊಂಬಾಯಿಯ ಐಐಟಿ ಅದರ ಗುರುತಿಸಿ ಗೌರವಿಸಿದ್ದು.
    ಬೈಲಿಲಿ ಅವರ ಗುರುತಿಸೇಕಾದ್ದು ನಮ್ಮ ಹೆಮ್ಮೆಯ ಕರ್ತವ್ಯ.

    ಬನ್ನಿ, ಅವು ಮಾಡಿದ ದೊಡ್ಡ ಕೆಲಸದ ಬಗ್ಗೆ ಸಣ್ಣ ವಿಶಯ ಅವರ ಮಾತುಗಳಲ್ಲೇ ತಿಳ್ಕೊಂಬ:

    ಶೀರ್ಷಕ:
    A Critical Study of Siddhanta-darpana of Nilakantha Somayaji
    (‘ನೀಲಕಂಠ-ಸೋಮಯಾಜಿ-ಕೃತಸ್ಯ ಸಿದ್ಧಾಂತದರ್ಪಣಸ್ಯ ವಿಮರ್ಶಾತ್ಮಕಮಧ್ಯಯನಮ್ ’)

    ಡಾ. ಕೂಳಕ್ಕೂಡ್ಳು ಮಹೇಶ್ (K-M)

    ಈ ಗ್ರಂಥ ಭಾರತೀಯ ಖಗೋಳ ಶಾಸ್ತ್ರದ (Indian astronomy) ಕೆಲವು ನಿಯಮಂಗಳ ಬಗ್ಗೆ ಮಾತಾಡ್ತು.
    ನೀಲಕಂಠ (೧೫ ನೆ ಶತಾಬ್ದಿ) ನಮ್ಮ ದೇಶದ ಒಬ್ಬ ಅತ್ಯಂತ ಮೇಧಾವೀ ಗಣಿತ-ಖಗೋಳಜ್ಞ. (ನವಗೆ ಗೊಂತಾದ್ದದು ಈಗ!!)  ನೀಲಕಂಠನ ಭಾಷೆ, ವ್ಯಾಖ್ಯಾನ, ವಿಷಯವ ಹೇಳುವ ಶೈಲಿ ಎಲ್ಲವೂ ಅದ್ಭುತ.
    ಒಬ್ಬ ವಿಜ್ಞಾನಿಗೆ ಇರೆಕಾದ ದೃಷ್ಟಿ, ಒಬ್ಬ ಮಾಷ್ಟ್ರಾಗಿ ಮಕ್ಕೊಗೆ ಹೇಳುವ ಹಿತವಚನ ಹೀಂಗಿಪ್ಪದೆಲ್ಲ ಇದರಲ್ಲಿ ಸಿಕ್ಕುತ್ತು.
    ಇದರಲ್ಲಿಪ್ಪ  ಗ್ರಹ-ಭ್ರಮಣ ರೂಪರೇಖೆ  (planetary model) ತುಂಬಾ ಮಹತ್ತ್ವದ್ದು.
    ಅಯನಾಂಶದ ಚಲನೆಯ ಕಣ್ಣಿಂಗೆ ಕಟ್ಟುವ ಹಾಂಗೆ ವಿವರಣೆ, ಭುಜಾ-ಕೋಟಿ-ಕರ್ಣ-ನ್ಯಾಯಕ್ಕಿಪ್ಪ ಉಪಪತ್ತಿ (ಪ್ರೂಫ್) . . .
    Planetary Model ನ ಬಗ್ಗೆ ಭಾರತೀಯರಿಂಗೆ ಇದ್ದ ಕಲ್ಪನೆ ಎಂತದು ಹೇಳಿ ಬೇರೆ ಯಾವ ಗ್ರಂಥಲ್ಲಿಯು ಸಿಕ್ಕದ್ದ ಮಾಹಿತಿ ಇದರಲ್ಲಿದ್ದು.
    ಬರೇ ಭೂಮಿಯ ಸುತ್ತ ಎಲ್ಲಾ ಸುತ್ತುತ್ತು ಹೇಳಿ ನಂಬ್ಯೊಂಡು ಕೂದವಲ್ಲ  ನಮ್ಮ ಪೂರ್ವಜರು!!

    ಮಾಡಿದ ಕೆಲಸ ಎಂತರ?
    ಸಂಪೂರ್ಣ ಗ್ರಂಥದ ಭಾಷಾಂತರ ಇಂಗ್ಲಿಶಿಲ್ಲಿ, ಬೇಕಾದಲ್ಲಿ ವಿವರಣೆಗೆ ಚಿತ್ರಂಗೋ, ಆಧುನಿಕ ಗಣಿತದ ಭಾಷೆಲ್ಲಿ ವಿವರಣೆ, ವಿಷಯದ ಮಹತ್ತ್ವ ಪ್ರತಿಪಾದನೆ,. . . . . . . .

    ಆಶ್ರಯ:

    • Cell for Indian Science and Technology in Sanskrit
      (‘ಸಂಸ್ಕೃತಸ್ಥ-ವಿಜ್ಞಾನ-ತಂತ್ರಜ್ಞಾನ-ನಿರೂಪಣ-ಕಕ್ಷಃ’)
    • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಮುಂಬಯಿ
      (ಭಾರತೀಯ ಪ್ರೌದ್ಯೋಗಿಕೀ ಸಂಸ್ಥಾನಂ )
    ಎನ್ನ ಗುರುಗೋ:
    ಶ್ರೀ  ರಾಮಸುಬ್ರಹ್ಮಣ್ಯಂ

    ಸಂಸ್ಕೃತಲ್ಲಿಪ್ಪ ವಿಜ್ಞಾನವಿಷಯವ ಆಧರಿಸಿ IIT ಲ್ಲಿ ಆದ ಒಂದು ಮೊದಲ PhD ಇದು ಹೇಳಿ ಹೇಳಲಕ್ಕು.

    - ಕೇಮಹೇಶಣ್ಣ

    ಈ ಕೊಶಿಯ ಶುದ್ದಿ ಗೊಂತಾದ ಕೂಡ್ಳೇ ದೊಡ್ಡಭಾವ, ಶರ್ಮಪ್ಪಚ್ಚಿ ಎಲ್ಲೊರುದೇ ಮಿಂಚಂಚೆ ಬರದು ತಿಳುಸಿದವು.
    ಅದಕ್ಕೆ ಅವು ಸಂತೋಶಲ್ಲಿ ಹೀಂಗೆ ಹೇಳಿದವು:

    ನಮಸ್ಕಾರ,
    ಎನ್ನ ಶೋಧ ಕಾರ್ಯದ ಬಗ್ಗೆ ದೊಡ್ಡ ಭಾವನ ಬ್ಲೋಗಿಲ್ಲಿ ವಿವರಣೆ ಇದ್ದು.

    ಗುರು ಹಿರಿಯರ, ನಮ್ಮವರ ಎಲ್ಲೋರ ಆಶೀರ್ವಾದ, ಪ್ರೀತಿ, ವಿಶ್ವಾಸ, ಅಭಿಮಾನ….. ಇಪ್ಪದರಿಂದಲೇ ಅದ ಎನಗೆ ಇದೆಲ್ಲ ಸಾಧ್ಯ ಆದ್ದದು!

    ಹವ್ಯಕ ಸಮಾಜಂದ, ಕೃಷಿ ಪರಿವಾರಂದ ಸಿಕ್ಕಿದ, ಎನಗೆ ಅರಡಿಯದ್ದೆ ಬಂದಂತಹ ಕೆಲವು ಸಾಮರ್ಥ್ಯಂಗ, ಒಳ್ಳೆ ಗುಣಂಗ ಜೀವನಲ್ಲಿ ತುಂಬಾ ದಾರಿ ತೋರುಸಿದ್ದು ಹೇಳಿ ಭಾವಪೂರ್ಣವಾಗಿ ಆನು ಮನಸ್ಸಿಲ್ಲೇ ಹೇಳಿಕೊಳ್ಳುತ್ತೆ ಅಂಬಗಂಬಗ.
    ಹಿರಿಯರು ಕೊಟ್ಟ  ಕೆಲವೊಂದು ಸಂಸ್ಕಾರ ಇಪ್ಪ ಕಾರಣ ಹೋದಲ್ಲೆಲ್ಲ ಉತ್ತಮ ಜನರ ಆಶಿಸ್ಸು ಸಿಕ್ಕಲೆ ಅನುಕೂಲ ಆದ್ದದು ತುಂಬಾ ಅನುಭವಕ್ಕೆ ಬಯಿಂದು.

    ಭಾರತದ ಜ್ಞಾನ-ಸಂಸ್ಕೃತಿಯ  ಪರಂಪರೆ ಇಷ್ಟು ಸಮೃದ್ಧವಾಗಿ ಇಪ್ಪದರಿಂದಲೇ ನಾವು ಎಂತ ಮಾಡದ್ರೂ ರಜ ವಿವೇಚನೆ-ಬುದ್ಧಿಶಕ್ತಿ ಬಂದು ದಾರಿತೋರುಸುವದು,
    ಅಪ್ಪಲ್ಲದ?

    - ಡಾ | ಮಹೇಶ ಕೂಳಕ್ಕೂಡ್ಳು
    Research Scholar,
    Cell for Indian Science and Technology in Sanskrit,
    Indian Institute of Technology,
    Powai, Mumbai- 400076.
    Ph: 9869101325.

    ಆಗಲಿ, ಅವು ಇನ್ನೂ ಎತ್ತರಕ್ಕೆ ಹೋಗಲಿ. ಭಾರತಮಾತೆಗೆ, ನಮ್ಮ ಸಮಾಜಕ್ಕೆ ಇನ್ನುದೇ ತುಂಬಾ ಸೇವೆ ಮಾಡ್ಳಿ.
    ದೇವರು ಅದಕ್ಕಿಪ್ಪ ಎಲ್ಲ ಸವುಕರಿಯವನ್ನುದೇ ಒದಗುಸಿ ಕೊಡಲಿ ಹೇಳುದೇ ಬೈಲಿನವರ ಆಶಯ.

    ಸೂ: ಬೈಲಿಲಿ ಅವರ ಹೆಸರು ಡಾಮಹೇಶಣ್ಣ ಹೇಳಿ ಬದಲಾಯಿಸಿದ್ದು. (ಮೊದಲು ಕೇಮಹೇಶಣ್ಣ ಹೇಳಿ ಇತ್ತು!)

    ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್, 4.0 out of 5 based on 4 ratings
    VN:F [1.9.3_1094]
    ರೇಟೆಷ್ಟು :
    Rating: 4.0/5 (4 votes cast)

    ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್ - ಈ ಶುದ್ದಿಗೆ ಇದುವರೆಗೆ 41 ಒಪ್ಪಂಗೊ

    1. ಶ್ರೀದೇವಿ ವಿಶ್ವನಾಥ್
      ಶ್ರೀಅಕ್ಕ°

      )

      ಡಾಮಹೇಶಣ್ಣ… ಅಭಿನಂದನೆಗಾ…. ತುಂಬಾ ಒಳ್ಳೆ ಕೆಲಸ… ಅದರಲ್ಲೂ ನಮ್ಮ ಸಂಸ್ಕೃತಿ, ಸಂಸ್ಕೃತದ ವಿಷಯವನ್ನೇ ತೆಕ್ಕೊಂಡು, ಅದರಲ್ಲಿ ಪ್ರಥಮರಾಗಿ PhD ಮಾಡಿ ಎಂಗೊ ಎಲ್ಲೋರು ಸಂಭ್ರಮಿಸುವ ಹಾಂಗೆ ಮಾಡಿದ್ದಿ… ಕೆಲವು ವರ್ಷದ ಸಾಧನೆ ಇಕ್ಕು ಇದರಲ್ಲಿ, ಅದು ಫಲಪ್ರದ ಆದ್ದದು ತುಂಬಾ ಕೊಶಿ ಆತು.. ಸಂಪೂರ್ಣ ಗ್ರಂಥವ ಇಂಗ್ಲಿಷಿಂಗೆ ಭಾಷಾಂತರ ಮಾಡಿದ್ದು ತುಂಬಾ ಒಳ್ಳೇದಾತು…ಇನ್ನು ಮುಂದಾಣವಕ್ಕೆ ದಾರಿ ತೋರ್ಸುಗು… ನಿಂಗೊ ಇನ್ನುದೆ ಅಪೂರ್ವ ಗ್ರಂಥಂಗಳ ಬೆಣಚ್ಚಿಂಗೆ ತನ್ನಿ.. ಇನ್ನೂ ನಮ್ಮಲ್ಲಿಪ್ಪ ಪ್ರತಿಭೆಗೊಕ್ಕೆ ಮೇಲೆ ಬಪ್ಪಲೆ ಸಹಾಯ ಮಾಡಿ.. ನಿಂಗಳ ಸಾಧನೆಯ ಎಂಗೊ ಗೌರವಿಸುತ್ತೆಯಾ° .. ಒಳ್ಳೆದಾಗಲಿ…
      ಶುದ್ದಿಕ್ಕಾರೋ°.., ನಮ್ಮ ಬೈಲಿನೋನೆ ಆದರೂ ಒಳ್ಳೆ ಪ್ರತಿಭೆಯ ಗುರುತಿಸಿ, ಗೌರವಿಸಿ ಬೈಲಿನ ಎದುರು ನಿಲ್ಲುಸಿದ ಎಲ್ಲೋರಿಂಗೂ ಧನ್ಯವಾದ ಆತಾ… ಪಟ ಲಾಯ್ಕಿದ್ದು.. ಶುದ್ದಿಕ್ಕಾರಂಗೆ ಬೇಕಾದ ಹಾಂಗೆ ಪಟಂಗ ಸಿಕ್ಕುತ್ತಲ್ಲದಾ? ಈ ಪಟ ಡಾಮಹೇಶಣ್ಣ ತನಗಾಗಿ ಹೇಳಿಯೇ ಮಾಡ್ಸಿದ ಹಾಂಗಿದ್ದು.. ;-)

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಶ್ರೀ ಅಕ್ಕಾ!
      ಮಹಾನ್ ಸಂತೋಷಃ!! :)
      ಆ ಮೇಲೆ ಇಪ್ಪ ಪಟ ಒಂದು ಹೂದೋಟ ನೋಡ್ಲೆ ಹೋಗಿಪ್ಪಗ ತೆಗದ್ದದು. ಆನು ಹೋಪಗಳೇ ಅಲ್ಲಿ ಹಾಂಗೆ ಬರದು ರೆಡಿ ಮಾಡಿ ಮಡುಗಿತ್ತಿದ್ದವು. :)

      [ಉತ್ತರುಸಿ]

    2. ಗಣೇಶ ಮಾವ°
      ಗಣೇಶ ಮಾವ°

      )

      ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ ಪ್ರಬಂಧ ಎಂಗೊಗೆ ಒಳ್ಳೆ ಮಾರ್ಗದರ್ಶನ ಅಕ್ಕು ಖಂಡಿತಾ!! .ಗುರುಗೊ ಮತ್ತು ದೇವರ ಅನುಗ್ರಹಲ್ಲಿ ನಿಂಗಳ ಪ್ರತಿಭೆ ಇನ್ನಷ್ಟು ಉದ್ದೀಪನವಾಗಲಿ ಹೇಳಿ ಹಾರೈಸುತ್ತೆ.. ಗುಡ್ ಲಕ್…

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಗಣೇಶ ಮಾವ,
      ಧನ್ಯವಾದಃ,
      ಭವತಃ ಕಾರ್ಯೇ ಅಪಿ ಶುಭಂ ಭವತು!

      [ಉತ್ತರುಸಿ]

    3. ಶ್ರೀಕೃಷ್ಣ ಶರ್ಮ. ಹಳೆಮನೆ
      ಶರ್ಮಪ್ಪಚ್ಚಿ

      )

      ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ ಇಲ್ಲದ್ದ ವಿಶಯ ಯಾವುದೂ ಇಲ್ಲೆ ಹೇಳುವದರ ಜೆನಂಗೊಕ್ಕೆ ತೋರುಸುವ ಒಳ್ಳೆ ಕೆಲಸಕ್ಕೆ ಕೈ ಹಾಕಿದ್ದೆ.ಈ ನಿನ್ನ ಸಾಧನೆ ನಮ್ಮೂರ ಮಕ್ಕೊಗೆ ಸಂಸ್ಕೃತಲ್ಲಿ ಅಧ್ಯಯನ ಮಾಡ್ಲೆ ಸ್ಪೂರ್ತಿ ಕೊಡುವ ಹಾಂಗೆ ಆಗಲಿ. ಶುಭವಾಗಲಿ

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಅಪ್ಪಚ್ಚಿ,
      ಅಪ್ಪು, ಸಂಸ್ಕೃತ ಕ್ಷೇತ್ರವುದೇ successful career ಗೆ ಒಂದು ಆಯ್ಕೆ ಅಪ್ಪಲೆಡಿಗು ಹೇಳುವದು ಬಹಳಷ್ಟು ಜೆನಂಗೊಕ್ಕೆ ತಿಳುಶೆಕಾದ ಆವಶ್ಯಕತೆ ಇದ್ದು.

      {…ಸ್ಪೂರ್ತಿ ಕೊಡುವ ಹಾಂಗೆ ಆಗಲಿ}
      ನಿಂಗಳ ಆಶಯಂಗೋ ಹೊಸ ಹುರುಪು ಕೊಡ್ತಾ ಇದ್ದು. ಖುಷಿ ಆತು.

      [ಉತ್ತರುಸಿ]

    4. ನೀರ್ಕಜೆ ಚಿಕ್ಕಮ್ಮ

      )
      VA:F [1.9.3_1094]
      Rating: 0 (from 0 votes)

      ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..

      [ಉತ್ತರುಸಿ]

    5. ಅಡ್ಕತ್ತಿಮಾರುಮಾವ°
      ಅಡ್ಕತ್ತಿಮಾರುಮಾವ°

      )
      VN:F [1.9.3_1094]
      Rating: 0 (from 0 votes)

      ಡಾ.ಮಹೇಶ ಣ್ಣೋ..ಶುಭಾಶಯಂಗ…

      [ಉತ್ತರುಸಿ]

    6. ಗುರಿಕ್ಕಾರ°
      ಗುರಿಕ್ಕಾರ°

      )

      ಕೂಳಕ್ಕೋಡ್ಳು ಮಹೇಶಣ್ಣಂಗೆ ಅಭಿನಂದನೆಗೊ.
      ಡಾಕುಟ್ರು ಆದ ಲೆಕ್ಕಲ್ಲಿ ಒಂದರಿ ಬಾಯಿಚೀಪೆ ಮಾಡಿ ಬಿಡಿ ಆತೋ?

      ಗುರುಗಳ, ದೇವರ ಅನುಗ್ರಹ ಯೇವತ್ತೂ ನಿಂಗಳ ಮೇಲಿರಲಿ..
      ಹರೇರಾಮ…

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಗುರಿಕ್ಕಾರ್ರೆ,
      ಅಪ್ಪಪ್ಪು, ಬಾಯಿಚೀಪೆ ಮಾಡೆಕು,
      ಡಾಕ್ಟ್ರಕ್ಕಂದ್ರು, ಬಂಡಾಡಿ ಅಜ್ಜಿಯುದೆ ಹೇಳ್ಯೊಂಡು ಇತ್ತಿದ್ದವು, ಪೇಟೆಲ್ಲಿ ಸಿಕ್ಕುವದೆಲ್ಲ ಬೇಡ, ಇಲ್ಲಿಯೇ……………. ಹೇಳಿ. ನಿಂಗಳತ್ರೆ ಹೇಳಿದ್ದವಿಲ್ಲೆಯೋ ಅಂಬಗ? ಹೊಸ ರುಚಿ ಎಂತಾರು ಮಾಡಿ ಮಡುಗಿದ್ದವೋ ಎಂತದೋ? ಏ°? :)

      [ಉತ್ತರುಸಿ]

    7. ಒಪ್ಪಣ್ಣ
      ಒಪ್ಪಣ್ಣ

      )

      ಕೂಳಕ್ಕೋಡ್ಳು ಅಣ್ಣಾ..
      ಅಭಿನಂದನೆಗೊ, ಇನ್ನೂ ಎತ್ತರದ ಜೀವನ ನಿಂಗಳದ್ದಾಗಲಿ..

      ಶುಭಮ್ ಭದ್ರಮ್ ಭೂಯಾತ್!!

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: +1 (from 1 vote)

      ಒಪ್ಪಣ್ಣಾ !
      ಎತ್ತರಕ್ಕೆ ಹತ್ತುಸುವಗ, ಹತ್ತರಾಣವು (ನಿಂಗಳ ಹಾಂಗಿಪ್ಪವು) ಒಟ್ಟಿಂಗೆ ಇರ್ತವು ಹೇಳಿ ಧೈರ್ಯ ಇದ್ದಿದ! ತೋಂಪಟ ಮಾಡಿಯಪ್ಪಗ ಹಾಂಗಾಗಿ ಕೊಶಿ ಅಪ್ಪದು! :)

      ಸಣ್ಣ ಮಾಣಿ ಆಯನಲ್ಲಿ ದೇವರ ಕಾಂಬಲೆ ದೊಡ್ಡವರ ಹೆಗಲಿಲ್ಲಿ ಕೂದ ಹಾಂಗೆ. ಆಧಾರ ಗಟ್ಟಿ ಬೇಕನ್ನೇ?

      [ಉತ್ತರುಸಿ]

    8. ಕೆಪ್ಪಣ್ಣ
      ಕೆಪ್ಪಣ್ಣ

      )
      VA:F [1.9.3_1094]
      Rating: 0 (from 0 votes)

      ಮಹೇಶಣ್ಣಾ. ಧನ್ಯವಾದಂಗೊ ನಿಂಗಳ ಸಾಧನೆ ಎಂಗಳಂತವಕ್ಕೆ ಸ್ಫೂರ್ತಿ.. ಬಾಯಿ ಒಂದರಿ ಚೀಪೆ ಮಾಡೆಕ್ಕು ನಿಂಗೊ..
      ಶೈಕ್ಷಣಿಕ ಕ್ಷೇತ್ರಲ್ಲಿ ನಿಂಗೊ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಹೇಳ್ತದೆ ಹಾರೈಕೆ.

      [ಉತ್ತರುಸಿ]

    9. ರಘು ಮುಳಿಯ
      ಮುಳಿಯ ಭಾವ

      )
      VA:F [1.9.3_1094]
      Rating: 0 (from 0 votes)

      ಮಹೇಶಾ.. ನೀನು ದಾಗುಟ್ರಾದ ಶುದ್ದಿ ಕೇಳಿ ಭಾರಿ ಸಂತೋಷ ಆತು.
      ಭವತಃ ಸಫಲತಾಯೈ ಅಭಿನಂದನಂ. ಶುಭಂ ಭೂಯಾತ್.

      [ಉತ್ತರುಸಿ]

    10. ಕಡಾರು ಪುಟ್ಟಬಾವ
      ಪುಟ್ಟಬಾವ°

      )
      VA:F [1.9.3_1094]
      Rating: 0 (from 0 votes)

      ಶುಭಾಶಯಂಗ ಮಹೇಶಣ್ಣ!! ನಿಂಗ ಹೀಂಗೆ ಮುಂದೆಯೂ ನಮ್ಮ ಹಿರಿಯರು ಕೊಟ್ಟ ಅಮೂಲ್ಯ ಸಂಪತ್ತಿನ ಸಂಶೋಧನೆ ಮಾಡಿ ಹೇಳುದೆ ನಮ್ಮ ಹಾರೈಕೆ/ ಆಶಯ.

      [ಉತ್ತರುಸಿ]

    11. ಕೆದೂರುಡಾಕ್ಟ್ರು
      ಕೆದೂರು ಡಾಕ್ಟ್ರುಬಾವ°

      )

      ಧನ್ಯವಾದ೦ಗ…

      [ಉತ್ತರುಸಿ]

      ದೊಡ್ಡಭಾವ

      ದೊಡ್ಡಭಾವ ಉತ್ತರ ಕೊಟ್ಟದು:

      ಎಲ್ಲೋರೂ ಶುಭಾಶಯ ಹೇಳಿಗೊಂಡು ಇಪ್ಪಗ ಕೆದೂರು ಡಾಕ್ಟ್ರು ಧನ್ಯವಾದ ಹೇಳಿದ್ದು ಆರಿಂಗೆ ಹೇಳಿ ಒಂದು ಸಣ್ಣ ಕನುಫ್ಯೂಸು ಬಯಿಂದು ದೊಡ್ಡಭಾವಂಗೆ…

      [ಉತ್ತರುಸಿ]

      ನೆಗೆಗಾರ°

      ನೆಗೆಗಾರ° ಉತ್ತರ ಕೊಟ್ಟದು:

      ಮೊನ್ನೆ ಕಿದೂರು ಜೆಂಬ್ರ ಕಳುದ ಮತ್ತೆ ಎಲ್ಲೋರತ್ರೂ ಹಾಂಗೇ ಹೇಳುದಡ.
      ಈಗೀಗ ಒರಕ್ಕಿಲಿದೇ ಅದನ್ನೇ ಹೇಳ್ತವು- ಹೇಳಿ ಕಿದೂರುಒಕೀಲ್ತಿ ಹೇಳಿತ್ತಿದ್ದವು!! ;-)

      [ಉತ್ತರುಸಿ]

      ದೊಡ್ಡಭಾವ

      ದೊಡ್ಡಭಾವ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಅದು ಸರಿ, ಎಂತ್ಸಕೂ ನಮ್ಮ ಬೈಲಿಲ್ಲಿ ಕೆದೂರು ಡಾಕ್ಟ್ರ ಕಾಣದ್ದೆ ಸುಮಾರು ಸಮಯ ಆಗಿದ್ದತ್ತು, ಇಂದು ಅವರ ಕಂಡಪ್ಪಗ ಖೊಷಿ ಆತು…

      [ಉತ್ತರುಸಿ]

      ಕೆದೂರು ಡಾಕ್ಟ್ರುಬಾವ°

      ಕೆದೂರುಡಾಕ್ಟ್ರು ಉತ್ತರ ಕೊಟ್ಟದು:

      @ನಗೆಗಾರ- ವಕೀಲ್ತಿ ಒರಗುಲೇ ಬಿಡ್ತಿಲ್ಲೆ! ಇನ್ನು ಮಾತಾಡುದು ಎಲ್ಲಿ೦ದ?

      [ಉತ್ತರುಸಿ]

      ನೆಗೆಗಾರ°

      ನೆಗೆಗಾರ° ಉತ್ತರ ಕೊಟ್ಟದು:

      ನಿಂಗೊಗೆ ಮಾತಾಡ್ಳೆ ಬಿಡವು, ಗೊಂತಿದ್ದು – ಅವು ಒಕೀಲಕ್ಕ° ಅಲ್ಲದೋ! ;-)
      ಆದರೆ ಒರಗಲೆ ಬಿಡ್ತವಿಲ್ಲೆ ಎಂತ್ಸಕ್ಕೋ? ಉಮ್ಮಪ್ಪ!!

      [ಉತ್ತರುಸಿ]

      ದೊಡ್ಡಭಾವ

      ದೊಡ್ಡಭಾವ ಉತ್ತರ ಕೊಟ್ಟದು:

      ಪಾಪ, ಕೆದೂರು ಡಾಕ್ತ್ರಿಂಗೆ ಇಲ್ಲಿಯೂ ಸ್ಪೆಲ್ಲಿಂಗು ತಪ್ಪಿ ಹೋದ್ಸೋ ಹೇಂಗೆ…! ಅವ್ವು ಬೈಲಿಂಗೆ ಬಾರದ್ದೆ ಸುಮಾರು ಸಮಯ ಆತಾನೆ..!

      [ಉತ್ತರುಸಿ]

      ನೆಗೆಗಾರ°

      ನೆಗೆಗಾರ° ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      {ಇಲ್ಲಿಯೂ ಸ್ಪೆಲ್ಲಿಂಗು ತಪ್ಪಿ ಹೋದ್ಸೋ}
      ಯೇ ಡಾಗ್ಟ್ರೆ, ಇಲ್ಲಿ ತಪ್ಪರೆ ಸಾರ ಇಲ್ಲೆ. ಅಲ್ಲಿ – ಮದ್ದು ಬರೆತ್ತಲ್ಲಿ ತಪ್ಪಿರೆ ಒಯಿವಾಟು ಕೆಡುಗು.
      ತಲೆಬೇನೆ ಕಮ್ಮಿ ಅಪ್ಪಲೆ ಮದ್ದು ಬರದ್ದು ತಪ್ಪಿ ಕಾಲುಬೇನೆ ಜೋರಕ್ಕು!
      ಮತ್ತೆ ಡಾಗುಟ್ರಕ್ಕನ ಕಶಾಯವೇ ಗೆತಿ..

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      ಡಾಗುಟ್ರ ಬಾವಾ. ನಿಂಗೊ ಹೀಂಗೆ ಹೇಳಿ ನಮ್ಮ ಒಪ್ಪಣ್ಣ ಈಗಲೇ ತಲೆ ಬೆಶಿ ಮಾಡುಲೆ ಶುರು ಮಾಡಿದ್ದ. ಜೋರು ಮಳೆ ಇದ್ದರೂ ಬೆಶಿ ಕಮ್ಮಿ ಅಯಿದೇ ಇಲ್ಲೆ.. ಎಂತ ಮಾಡುದೋ? ದೊಡ್ಡಣ್ಣನತ್ರ ಎಂತಾರು ಮದ್ದು ಇದ್ದೋ..

      [ಉತ್ತರುಸಿ]

      ಕೆದೂರು ಡಾಕ್ಟ್ರುಬಾವ°

      ಕೆದೂರುಡಾಕ್ಟ್ರು ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      @ಆಜ್ಜಕಾನ- ಅಯ್ಯೋ! ಒಪ್ಪಣ್ಣ ಈಗಲೇ ಎ೦ತಕೆ ತಲೆಬೆಶಿ ಮಾಡುದು? ಇನ್ನೂ ಸಮಯ ಇದ್ದನ್ನೆ?

      [ಉತ್ತರುಸಿ]

      ಕೆದೂರು ಡಾಕ್ಟ್ರುಬಾವ°

      ಕೆದೂರುಡಾಕ್ಟ್ರು ಉತ್ತರ ಕೊಟ್ಟದು:

      ಹಹಹಾ…..ಬರವಗ ರೆಜಾ ಸ್ಪೆಲ್ಲಿ೦ಗು ತಪ್ಪಿತ್ತು ದೊಡ್ಡಬಾವಾ, ಬರೆಯದ್ದೆ ಕೆಲಾವು ಸಮಯ ಆತನ್ನೆ, ಹಾ೦ಗಾಗಿ..

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      ಡಾಗುಟ್ರ ಬಾವಾ.. ವಕೀಲ್ತಿ ಬೈಲಿಂಗೆ ವಕೀಲ್ತಿಗೆ ಹೇಳಿ ಕೊಡುಗೋ..?

      [ಉತ್ತರುಸಿ]

      ಕೊಳಚ್ಚಿಪ್ಪು ಬಾವ

      ಕೊಳಚಿಪ್ಪು ಭಾವ ಉತ್ತರ ಕೊಟ್ಟದು:

      ಅಜ್ಜಕಾನ ಭಾವ ಈಗಳೇ ಇಷ್ಟು ಕಾನೂನು ಮಾತಾಡ್ತೆ ಇನ್ನು ನೀನು ವಕಾಲತ್ತು ಕಲ್ತರೆ .. ಎಂಗಳ ಗತಿ ?

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಬೈಲಿಲಿ ಹೇಳಿರೆ ಆನು ಒಬ್ಬನೆ ಅಲ್ಲಾ ಎಲ್ಲರುದುದೆ ಕಲ್ವಲಾವುತ್ತನ್ನೆ.. ತಲೆಬೆಶಿ ಮಾಡೆಡ.. ಎಂತಾರು ಆದರೆ ರಾಮಮೋಹನಣ್ಣನೋ ರಾಮ ಭಟ್ರೊ ಇದ್ದವನ್ನೆ..

      [ಉತ್ತರುಸಿ]

      ಕೆದೂರು ಡಾಕ್ಟ್ರುಬಾವ°

      ಕೆದೂರುಡಾಕ್ಟ್ರು ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಕೇಳಿ ನೋಡುವ°(ಫೀಚು ಎಶ್ಟು ಹೇಳ್ತವು ಗೊ೦ತಿಲ್ಲೆ!!)

      [ಉತ್ತರುಸಿ]

    12. Rajanarayana Halumajalu

      )

      Hare Rama,

      ಅದ್ಭುತ ಸಾಧನೆ ………… ಮಹೇಶಣ್ಣ ನಿನಗೊಂದು ದೊಡ್ಡ ನಮಸ್ಕಾರ …… ನಮ್ಮ ಹಿರಿಯರು ಎಷ್ಟು ಬುದ್ದಿವಂತರು, ಸಂಸ್ಕೃತ ಜ್ಞಾನ ಭಂಡಾರ ಲ್ಲಿ ನಾವೆಷ್ಟು ಗಟ್ಟಿಗರು ಹೇಳಿ ಲೋಕಕ್ಕೆ ತೋರ್ಸಿಕೊಟ್ಟಿದೆ. ಅದುದೇ Ph D ಮಾಡಿದ್ದು IIT Bombay Li. ಸೂಪರ್ .
      .
      ಗುರಿಕ್ಕಾರೆ , Dr ಮಹೇಶಣ್ಣ೦ಗೆ ಒಂದು ಆಟಿಸಂಮನಕ್ಕೆ ಏರ್ಪಾಟು ಅಯೆಕು ಬೈಲಿಲಿ.

      [ಉತ್ತರುಸಿ]

      ದೊಡ್ಡಭಾವ

      ದೊಡ್ಡಭಾವ ಉತ್ತರ ಕೊಟ್ಟದು:

      ಪಾಪ, ಡಾಮಹೇಶಣ್ಣಂಗೆ ಮದುವೆಯೇ ಆಯಿದಿಲ್ಲೆ, ಮತ್ತೆ ಆಟಿ ಸಂಮಾನ ಮಾಡ್ಸು ಹೇಂಗೆ….?!

      [ಉತ್ತರುಸಿ]

      ಮುಳಿಯ ಭಾವ

      ರಘು ಮುಳಿಯ ಉತ್ತರ ಕೊಟ್ಟದು:

      ಭಾವಾ..ರಾಜಣ್ಣ ಗುರಿಕ್ಕಾರರ ಹತ್ರೆ ಹೇಯಿದ್ಸೂ ಅದನ್ನೇ..ಮಹೇಶಂಗೆ ಬೇಗ ಆಟಿ ಸಮ್ಮಾನ ಅಪ್ಪ ಹಾಂಗೆ ವೆವಸ್ತೆ ಮಾಡ್ಸೆಕ್ಕು ಹೇಳಿ..ಈ ಆಟಿ ಕಳಾತು. ವರುಷ ಓಡುತ್ತಿಲ್ಲೆಯೋ ಒಂದರಿ ಮಾವಿನ ಹಣ್ಣು, ಹಲಸಿನ ಹಣ್ಣು ತಿನ್ದಪ್ಪಗ .. ಇನ್ನಾಣ ಆಟಿಗಾದರೂ.. ಎಂತ ಮಹೇಶೋ

      [ಉತ್ತರುಸಿ]

      ಮಹೇಶ, ಕೂಳಕ್ಕೋಡ್ಲು ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      :)

      [ಉತ್ತರುಸಿ]

    13. ಗೋಪಾಲ ಮಾವ
      ಬೊಳುಂಬು ಮಾವ°

      )
      VA:F [1.9.3_1094]
      Rating: 0 (from 0 votes)

      ಡಾ.ಮಹೇಶಂಗೆ ಅಭಿನಂದನೆಗೊ. ವಿಷಯ ಕೇಳಿ ತುಂಬಾ ಕೊಶಿ ಆತು. ಇನ್ನುದೆ ತುಂಬಾ ಗರಿಗೊ ನಿನ್ನ ಕಿರೀಟಲ್ಲಿ ಬರಲಿ.

      [ಉತ್ತರುಸಿ]

    14. ಅಜ್ಜಕಾನ ಭಾವ
      ಅಜ್ಜಕಾನ ಭಾವ

      )
      VN:F [1.9.3_1094]
      Rating: 0 (from 0 votes)

      ಡಾಮಹೇಶಣ್ಣಂಗೆ ಅಭಿನಂದನೆಗೊ. ನಿಂಗಳ ಮುಂದಾಣ ಬದುಕು ಹಸನಾಗಿರಲಿ ಹೇಳಿ ದೇವರಲ್ಲಿ ಪ್ರಾರ್ಥನೆ. ಘಟ್ತ ಹತ್ತಿದ ಕಾರಣ ರಜಾ ತಡವಾತು. ಬೇಜಾರು ಮಾಡೆಡಿ..

      [ಉತ್ತರುಸಿ]

    15. ವೇಣೂರಣ್ಣ
      ವೇಣೂರಣ್ಣ

      )
      VN:F [1.9.3_1094]
      Rating: 0 (from 0 votes)

      ಮಹೇಶಾ.. ನಿನಗೆ PhD award ಆದ್ದು ಕೇಳಿ ಭಾರಿ ಸಂತೋಷ ಆತು. ಒಳ್ಳೆಯ ಸಾಧನೆಗೆ ಸಂದ ಪ್ರತಿಫಲ. ಎಲ್ಲೋರಿಂಗೂ ಇದು ಹೆಮ್ಮೆಯ ವಿಷಯ

      [ಉತ್ತರುಸಿ]

    16. ಕೊಳಚಿಪ್ಪು ಭಾವ
      ಕೊಳಚ್ಚಿಪ್ಪು ಬಾವ

      )
      VA:F [1.9.3_1094]
      Rating: 0 (from 0 votes)

      ಮಹೇಶಣ್ಣ ..congrats.

      [ಉತ್ತರುಸಿ]

    17. ಕೃಷ್ಣಪ್ರಕಾಶ ಬೊಳುಂಬು

      )
      VA:F [1.9.3_1094]
      Rating: 0 (from 0 votes)

      ಮಹೇಶ..
      ನೀನು ಹೇಳಿದ ಹಾಂಗೆ, ಸಂಸ್ಕೃತದ ಬಗ್ಗೆ ಹೆಚ್ಚು ಜೆನ ಅಧ್ಯಯನ ಮಾಡುವ ಹಾಂಗೆ ಅಪ್ಪಲೆ ನಿನ್ನ ಈ ಸಾಧನೆ ಮಾರ್ಗದರ್ಶಿಯಾಗಲಿ.

      [ಉತ್ತರುಸಿ]

    18. ಮಹೇಶ, ಕೂಳಕ್ಕೋಡ್ಲು

      )

      ನಿಂಗಳ ಅಭಿನಂದನೆ ಸಿಕ್ಕುವಗ ತುಂಬಾ ಸಂತೋಷ ಆವುತ್ತು. ಎಲ್ಲೋರ ಹಾರೈಕೆಗಳ, ನಿರೀಕ್ಷೆಗಳ ಸಾಕಾರ ಮಾಡ್ಲೆ ಪ್ರಯತ್ನ ಮಾಡ್ತೆ.
      ಧನ್ಯೋಸ್ಮಿ!!

      ಮುಂದುವರಿದ ಸುದ್ದಿ: ನಿನ್ನೆ ಆಷಾಢ ಕೃಷ್ಣ-ಏಕಾದಶೀ ದಿನ (ಆಗಸ್ಟ್ ೬, ಶುಕ್ರವಾರ) ದೀಕ್ಷಾಂತ ಸಮಾರೋಹ (convocation) ಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದವು.

      [ಉತ್ತರುಸಿ]

      ಮುಳಿಯ ಭಾವ

      ರಘು ಮುಳಿಯ ಉತ್ತರ ಕೊಟ್ಟದು:

      VA:F [1.9.3_1094]
      Rating: +1 (from 1 vote)

      ಎನ್ನ ಹಾರೈಕೆ ನಿರೀಕ್ಷೆ ಸಾಕಾರ ಆಯೆಕ್ಕಾರೆ ಕೂಳಕ್ಕೋಡ್ಲು ಅಪ್ಪಚ್ಚಿ ಪ್ರಯತ್ನ ಮಾಡೆಕ್ಕೋ ಹೇಳಿ.. ನೀನು ಮಾಡಿಕ್ಕೆಡಾ !!

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: