Oppanna.com

ನೆರಿಯ ಅಜಿತೇಶಂಗೆ ಚಿನ್ನದ ಪದಕ…

ಬರದೋರು :   ಗೋಪಾಲಣ್ಣ    on   01/06/2012    13 ಒಪ್ಪಂಗೊ

ಗೋಪಾಲಣ್ಣ

ಕಾಸರಗೋಡು ತಾಲೂಕು ಬಾಡೂರು ಗ್ರಾಮದ ನೆರಿಯ ತರವಾಡು ಮನೆಯ ಕುಡಿಯಾದ ಎನ್.ಎಚ್.ಅಜಿತೇಶ ಕಳುದ ವರ್ಷ ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಎಮ್.ಎಸ್ಸಿ.[ಮಾನವ ಪ್ರಜ್ಞೆ ಮತ್ತು ಯೋಗವಿಜ್ಞಾನ] ಲ್ಲಿ ಪ್ರಥಮ ಸ್ಥಾನ ಪಡೆದ್ದ.
ಮತ್ತೆ ಅವಂಗೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಲ್ಲಿ ನಡೆದ ೩೦ನೇ ಘಟಿಕೋತ್ಸವಲ್ಲಿ ಮುಖ್ಯಮಂತ್ರಿ ಶ್ರೀ ಸದಾನಂದ ಗೌಡರ ಕೈಯಿಂದ ಬಂಗಾರದ ಪದಕ ಸಿಕ್ಕಿದ್ದು. [ಚಿತ್ರ ನೋಡಿ].

ಧರ್ಮತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ಟ ಮತ್ತೆ ಶ್ರೀಮತಿ ವೀಣಾ ಇವರ ಪುತ್ರನಾದ ಅಜಿತೇಶ ಬಾಲ್ಯಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿ.
ಪಾಠಲ್ಲಿ ಮಾತ್ರ ಅಲ್ಲ, ಸಂಗೀತ, ಹರಿಕಥೆಗಳನ್ನೂ ಕಲ್ತು, ಕಾರ್ಯಕ್ರಮ ಕೊಡುತ್ತಾ ಇತ್ತಿದ್ದ.
ಧರ್ಮತ್ತಡ್ಕಲ್ಲಿ ಎಸ್.ಎಸ್.ಎಲ್.ಸಿ, ಮಂಗಳೂರಿಲಿ ಕೆನರಾ ಕಾಲೇಜಿಲಿ ಪಿ.ಯು.ಸಿ, ಮತ್ತೆ ವಿಶ್ವವಿದ್ಯಾಲಯ ಕಾಲೇಜಿಲಿ ಬಿ.ಎಸ್ಸಿ. ಮಾಡಿದ ಇವ ಕೊಣಾಜೆಲಿ ಎಮ್.ಎಸ್ಸಿ.ಮಾಡಿ, ಈ ಉನ್ನತ ಸಾಧನೆ ಮಾಡಿದ ಕೀರ್ತಿಗೆ ಪಾತ್ರ ಆಯಿದ.

ಮುಂದೆ ಯೋಗಲ್ಲಿಯೇ ಡಾಕ್ಟರೇಟ್ ಮಾಡುವ ಆಸೆ ಇವಂದು.
ಅಜಿತೇಶಂಗೆ ನಾವು ಅಭಿನಂದನೆ ಸಲ್ಲಿಸುವೊ. ಅವನ ಸಾಧನೆ ಇನ್ನೂ ಮುಂದುವರಿದು, ಅವಂಗೆ ಯಶಸ್ಸು ಸಿಕ್ಕಲಿ ಹೇಳಿ ದೇವರಲ್ಲಿ ಪ್ರಾರ್ಥಿಸುವೊ.

13 thoughts on “ನೆರಿಯ ಅಜಿತೇಶಂಗೆ ಚಿನ್ನದ ಪದಕ…

  1. ಅಜಿತೇಶಂಗೆ ಅಭಿನಂದನೆಗೊ.
    ಸಾಧನೆಯ ಮಾರ್ಗಲ್ಲಿ ಯಶಸ್ಸು ಸಿಕ್ಕಲಿ ಹೇಳಿ ಹಾರೈಕೆಗೊ

  2. ಅಜಿತಂಗೆ ಅಭಿನಂಧನೆಗ..ಎನ್ನ ಸಹಪಾಠಿ..ಆತ್ಮೀಯ ಗೆಳೆಯನೂ ಅಪ್ಪು..ಅವನ ಆಸೆಯ ಗುರುಹಿರಿಯರ ದಯೆಂದ ನೆರವೇರಲಿ..ದೇವತಾನುಗ್ರಹ ಜೊತೆಗಿರಲಿ..

  3. ಅಭಿನಂದನೆಗೊ . ಶುಭವಾಗಲಿ. ಇನ್ನಷ್ಟು ಸಾಧನೆ ಯಶಸ್ಸು ಲಭಿಸಲಿ, ಕೀರ್ತಿಗಳಿಸಲಿ.

  4. “ಅಜಿತೇಶ” ಹೆಸರಿ೦ಗೆ ತಕ್ಕ ಸಾಧನೆ ಮಾಡ್ತಾ ಇಪ್ಪದು ಕ೦ಡು ಸ೦ತೋಷ ಆತು.”ಸೋಲಿಲ್ಲದ್ದ ಸರದಾರ “೦ಗೆ ಅಭಿನ೦ದನೆಗೊ.ಶುಭವಾಗಲಿ.

  5. ಈ ಮಾಣಿಯ ಎನಗೆ ಗೊಂತಿದ್ದು ! ನಮ್ಮ ಚೆಕ್ಕೆ ಪ್ರಸನ್ನಕ್ಕಂಗೆ ನೆರೆಕರೆ..ಮೊದಲು ಆನು ಪ್ರಸನ್ನಕ್ಕನ ಮನೆಗೆ ಹೋಗಿಪ್ಪಗೆಲ್ಲ ಈ ಮಾಣಿ ಅಲ್ಲಿ ಸುಮಾರು ಸರ್ತಿ ಸಿಕ್ಕಿದ್ದ.. ಈಗ ಊರಿಂಗೆ ಹೋಪದೇ ಕಮ್ಮಿ ಆಯ್ಸು..
    ಶುದ್ದಿ ಓದಿ ಸಂತೋಷ ಆತು.. ಒಳ್ಳೆದಾಗಲಿ 🙂

  6. ಅಜಿತೇಶಂಗೆ ಅಭಿನಂದನೆಗೊ….ಶುಭ ಹಾರೈಕೆಗೊ. ಒಳ್ಳೆದಾಗಲಿ…

  7. ಅಜಿತೇಶಂಗೆ ಅಭಿನಂದನೆಗೊ. ಮುಂದೆಯೂ ಯಶಸ್ಸಿನ ಮೆಟ್ಟಲು ಏರುತ್ತ ಸಾಗಲಿ ಹೇಳ್ತ ಅಶಯಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×