Oppanna.com

ಸಾಧನೆಯ ಹಾದಿಲಿ ‘ಪ್ರಸನ್ನಕ್ಕ’

ಬರದೋರು :   ಸುವರ್ಣಿನೀ ಕೊಣಲೆ    on   18/03/2012    27 ಒಪ್ಪಂಗೊ

ಸುವರ್ಣಿನೀ ಕೊಣಲೆ

ಬೈಲಿಂಗೆ ಬಾರದ್ದೆ ಸುಮಾರು ದಿನ ಆತದಾ, ಕಾಣೆಯಾದವರ ಪಟ್ಟಿಗೆ ಎನ್ನ ಹೆಸರು ಸೇರಿತ್ತೋ ಏನ ಹೇಳಿ ಗ್ರೇಶಿದೆ.
ಒಂದೇ ಮನೆಯವ್ವು ನಾವು..ರಜ್ಜ ದಿನ ಹೆರ ಹೋಗಿ ಬಪ್ಪದು ಎಲ್ಲ ಇದ್ದದೇ ಆದರೆ ಅಕೇರಿಗೆ ಮನೆಗೇ ಬಂದೆತ್ತೆಕನ್ನೇ !
ಇಲ್ಲಿಗೆ ಬಾರದ್ದರೂ ಮರತ್ತಿದಿಲ್ಲೆ  ಆನೂ ಆರನ್ನೂ ಮರದ್ದಿಲ್ಲೆ, ಎನ್ನನ್ನೂ ಆರೂ ಮರದ್ದವಿಲ್ಲೆ!
ಸುಮಾರು ದಿನಂದ ಹೇಳುಲೆ ಬಾಕಿ ಇಪ್ಪ ಶುದ್ದಿ ಸುಮಾರಿದ್ದು, ಯೇವುದರಿಂದ ಶುರು ಮಾಡೆಕು ಹೇಳಿಯೇ ಅಂದಾಜಿ ಆವ್ತಿಲ್ಲೆ !

ಓ ಮೊನ್ನೆ ವಿಶ್ವ ಹೆಮ್ಮಕ್ಕಳ ದಿನ ಕಳುತ್ತದ, ಅದೇ ರೀತಿ ಅಮ್ಮಂದ್ರ ದಿನವೂ ಬಪ್ಪದಿದ್ದು. ಹೆಮ್ಮಕ್ಕೊಗೆ..
ಅಮ್ಮಂದ್ರಿಂಗೆ ಒಂದು ದಿನಲ್ಲಿ ಗೌರವ..ಪ್ರೀತಿ..ಅಭಿನಂದನೆ..ಧನ್ಯವಾದ ಎಲ್ಲ ಕೊಟ್ಟರೆ ಸಾಕಾ? ಹೇಳಿ ಮುಗಿಗಾ?
ಆದರೂ ಒಂದು ದಿನ ಅದಕ್ಕೆ ಬೇಕಾಗಿ ಮೀಸಲಿಡುವ ಪ್ರಯತ್ನ ಪಾಶ್ಚಾತ್ಯರದ್ದು. ನವರಾತ್ರಿಲಿ,ದೇವಿ ಪೂಜೆಲಿ ನಾವುದೇ ಆ ಮಹತ್ತರ ಶಕ್ತಿಗೆ ಕೃತಜ್ಞತೆ ಹೇಳುವ ಪ್ರಯತ್ನವನ್ನೇ ಮಾಡುದಲ್ಲದಾ?!
ಸಮಾಜಲ್ಲಿ, ನಿತ್ಯಜೀವನಲ್ಲಿ ಹೆಮ್ಮಕ್ಕೊ ಅನುಭವಿಸುವ ಸಹಿಸುವ ಸಮಸ್ಯೆಗೊ ಅದೆಷ್ಟೋ..
ಅದೆಲ್ಲವನ್ನೂ ಮೀರಿ ಬೆಳೆವ ಶಕ್ತಿಯ, ತಾಳ್ಮೆಯ ಅದೆಲ್ಲಿಂದಲೋ ಕೊಟ್ಟಿದ ದೇವರು ಹೆಮ್ಮಕ್ಕೊಗೆ. ಅದೇ ರೀತಿ ಸಾಧನೆ ಮಾಡಿದ ಒಂದು ಅಕ್ಕನ ಕಥೆ ಇದು…
ಕುಂಬ್ಳೆ ಸೀಮೆಯ ಒಂದು ಗ್ರಾಮಲ್ಲಿ ಹುಟ್ಟಿ ಬೆಳೆದ ಅಕ್ಕ ’ಪ್ರಸನ್ನಾ’, ನಮ್ಮ ಸಮಾಜಲ್ಲಿ ಸಾಮಾನ್ಯವಾಗಿ ಅಪ್ಪಹಾಂಗೆ 18-19 ರ ಪ್ರಾಯಕ್ಕೆ ಮದುವೆ ಆಗಿ ಬಂದದು ಕೂಡುಕುಟುಂಬಕ್ಕೆ.
ಮನೆ ತುಂಬ ಜನ, ಹಟ್ಟಿ ಕೆಲಸ, ಮಡಿ-ಮೈಲಿಗೆ, ಆಳುಗೊ ಅಡಕ್ಕೆ ತೋಟ… ಒಬ್ಬ ಮಗ..
ಇದೆಲ್ಲದರ ನಿಭಾಯಿಸಿಗೊಂಡು ಹೆರಟ ಈ ಅಕ್ಕ ಒಬ್ಬ ಸಾಮಾನ್ಯ ಹೆಮ್ಮಕ್ಕೊ ಆಗಿತ್ತಿದ್ದವು. ಆದರೆ ಅವರ ಒಳಾಣ ಒಂದು ಚೈತನ್ಯ ಅವರ ಸುಮ್ಮನಿಪ್ಪಲೆ ಬಿಟ್ಟತ್ತಿಲ್ಲೆ…
ತನ್ನ ಮನಸ್ಸಿನ ಭಾವನೆಗೊಕ್ಕೆ ಒಂದು ರೂಪ ಕೊಟ್ಟವು.
ಸಂಸಾರದ ನೂರು ಜಂಜಾಟಂಗಳ ನಡೂಕೆ ಪೆನ್ನು ಕಾಗದ ಜೀವನದ ಇನ್ನೊಂದು ಹಂತಕ್ಕೆ ಅವರ ಏರ್ಸಿತ್ತು.
ಓದುವ ಹವ್ಯಾಸ ಮೊದಲಿಂದಲೇ ಇದ್ದ ಅಕ್ಕ ಮನೆಗೆಲಸದ ಮಧ್ಯೆ ಪುರ್ಸೊತ್ತಪ್ಪಗ ಬರವಲೆ ಶುರು ಮಾಡಿದವ್ವು. ಬರದ್ದರ ಪತ್ರಿಕೆಗೊಕ್ಕೆ ಕಳುಸಿದವು, ಉದಯವಾಣಿ,ಹೊಸದಿಗಂತ,ಕೋಲಾರ ಪತ್ರಿಕೆ,ತುಷಾರ, ಸುಧಾ,ಮಂಜುವಾಣಿ, ಬಾಲಮಂಗಳ, ಗಿಳಿವಿಂಡು ಇತ್ಯಾದಿ ಪತ್ರಿಕೆಗಳಲ್ಲಿ ಅವರ ಕಥೆ, ಕವನ, ಲೇಖನಂಗೊ ಪ್ರಕಟ ಆತು.

ಅಡುಗೆಕೋಣೆಲಿ ಒಲೆಯ ಮುಂದೆ ಹೆಚ್ಚು ಹೊತ್ತು ಕಳಕ್ಕೊಂಡಿದ್ದ ಒಂದು ಅಕ್ಕನ ಸಾಧನೆ ಇಷ್ಟಕ್ಕೇ ನಿಂದಿದಿಲ್ಲೆ…”ಅಖಿಲ ಭಾರತ ಮಟ್ಟದ ದಿ|ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಕಥಾ ಸ್ಪರ್ಧೆ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸಿದ ಚುಟುಕುಕಥಾ ಸ್ಪರ್ಧೆ, ಕಣಿಪುರ ಪ್ರತಿಷ್ಠಾನ ನಡೆಸ್ದ ’ಶೇಣಿ ಸಂಸ್ಕರಣಾಲೇಖನ ಸ್ಪರ್ಧೆ”ಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದವು. ಆರಿಂಗೂ ಗೊಂತಿಲ್ಲದ್ದ ಒಬ್ಬ ಸಾಮಾನ್ಯ ಹೆಮ್ಮಕ್ಕೊ ಲೇಖಕಿ “ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ’ ಆಗಿ ಬೆಳದವು.
ಈಗ ಸುಮಾರು ಪತ್ರಿಕೆಂದ ಅವಕ್ಕೆ ಅಂಕಣ ಬರವಲೆ ಆಹ್ವಾನ ಇದ್ದು, ಕೆಲವು ಜನ ಅವರ ಕಥಾ ಸಂಕಲನ ಮಾಡುಲೂ ಮುಂದೆ ಬಯಿಂದವು.
ಊರಿಲ್ಲಿ ಕೆಲವು ಶಾಲೆಗಳಿಂಗೆ, ಬೇರೆ ಬೇರೆ ಕಡೆಂಗೆ ಅವಕ್ಕೆ ಭಾಷಣ ಮಾಡುಲೆ ಸಂಪನ್ಮೂಲ ವ್ಯಕ್ತಿ ಆಗಿಯೂ ದಿನಿಗೇಳುತ್ತವು.

ಇದೆಲ್ಲದರ ಮಧ್ಯೆ ಅವ್ವು ತಮ್ಮ ಕರ್ತವ್ಯವ ಎಂದೂ ಮರದ್ದವಿಲ್ಲೆ; ಅವರ ಹತ್ತರೆ ಅವರ ಬಗ್ಗೆ ಕೇಳಿರೆ ಅವ್ವು ಹೇಳುದು ’ಆನು ಗೃಹಿಣಿ’ ಹೇಳಿ.
ಒಬ್ಬ ವ್ಯಕ್ತಿಯಾಗಿ ಅವ್ವು ಮಾಡ್ತಾ ಇಪ್ಪ ಸಾಧನೆ ಅಭಿನಂದನಾರ್ಹ, ಅದರೊಟ್ಟಿಂಗೆ ಅಮ್ಮ ಆಗಿ ಅವ್ವು ಅವರ ಮಗ ’ವಿನಯಶಂಕರ’ನನ್ನೂ ಕೂಡ ಉತ್ತಮ ವ್ಯಕ್ತಿ ಅಪ್ಪ ಹಾಂಗೆ ಮಾಡಿದ್ದವು.
ಈ ಮಾಣಿ ಸಣ್ಣ ಪ್ರಾಯಲ್ಲಿಯೇ ಕಥೆ ಕವನ ಬರವಲೆ ಶುರು ಮಾಡಿದ, ಅವ ಬರದ್ದು ಬಾಲಮಂಗಳ ಗಿಳಿವಿಂಡು ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟ ಆತು.
ಈ ಪುಟ್ಟು ಮಾಣಿಗೆ ಸಾಹಿತ್ಯ ಪರಿಷತ್ತಿನ ಸನ್ಮಾನವೂ ಸಿಕ್ಕಿದ್ದು.

ಗೃಹಿಣಿ ಇದ್ದರೇ ಅಲ್ಲದಾ ನಮ್ಮ ಮನೆ ಬೆಳಗುದು? ಪ್ರಸನ್ನಕ್ಕನ ಹಾಂಗಿದ್ದ ಅಕ್ಕಂದ್ರಿಂದಾಗಿಯೇ ನಮ್ಮ ಸಮಾಜ ಎತ್ತರಕ್ಕೆ ಏರುದು, ಅಲ್ಲದಾ?
ನಮ್ಮ ಬೈಲಿಂಗೆ ಬೇಕಾಗಿಯೇ ಅವ್ವು ಬರದ ಒಂದು ಕಥೆಯ ಬೈಲಿಲ್ಲಿ ಹಾಕುತ್ತೆ.
ನಿಂಗೊಗೆ ಅವರ ಸಾಧನೆ ನೋಡಿ ಸಂತೋಷ ಆದರೆ, ಅವಕ್ಕೆ ಅಭಿನಂದನೆ ಹೇಳುವ ಮನಸ್ಸಾದರೆ, ಪ್ರೋತ್ಸಾಹಿಸುವ ಮನಸ್ಸಾದರೆ ಈ ವಿಳಾಸಕ್ಕೆ ಒಂದು ಕಾಗದ ಅಥವಾ ಕಾರ್ಡ್ ಬರದು ಹಾಕಿಕ್ಕಿ. (ಅವಕ್ಕೆ ಬೈಲಿಂಗೆ ಬಂದು ನೋಡುವ ವ್ಯವಸ್ಥೆ ಸದ್ಯ ಇಲ್ಲೆ)

ವಿಳಾಸ:
ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ,
ಚೆಕ್ಕೆಮನೆ, ಧರ್ಮತಡ್ಕ ಅಂಚೆ,
ವಯಾ: ಮಂಗಲ್ಪಾಡಿ,
ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ – 671324

ನಮ್ಮ ಪ್ರಸನ್ನಕ್ಕಂಗೆ ಬೈಲಿನ ಕಡೇಂದ ಅಭಿನಂದನೆ ಮತ್ತೆ ನಮ್ಮ ಶುಭಹಾರೈಕೆಗೊ… 🙂

27 thoughts on “ಸಾಧನೆಯ ಹಾದಿಲಿ ‘ಪ್ರಸನ್ನಕ್ಕ’

  1. navajivana high school ,peradala,badiadka lli enna vidyaarthini aagidda prasnna nge shubha haaraisutte.uttama parichaya lekhana baradu pratibheya gurutisida dr.suvarnini akkangude dhanyavaad.

  2. ಪ್ರಸನ್ನಕ್ಕ೦ಗೆ ಅಭಿನ೦ದನೆಗಳುದೆ ಶುಭಹಾರೈಕೆಗಳುದೆ. ಇಲ್ಲಿ ಅವರಬಗ್ಗೆ ಶುದ್ದಿ ಬರದ ಸುವರ್ಣಿನಿ ಅಕ್ಕ೦ಗೆ ಧನ್ಯವಾದ೦ಗೊ

  3. ಡಾಗುಟ್ರಕ್ಕೋ,
    ರಜ್ಜ ಸಮಯ ಬಿಟ್ಟೇ ಬೈಲಿಂಗೆ ಬಂದರೂ ಕೂಡಾ ತುಂಬಾ ಒಳ್ಳೆ ಜನರ ಕರ್ಕೊಂಡು ಬಯಿಂದಿ. ತುಂಬಾ ಲಾಯ್ಕಾತು.

    [ಸಮಾಜಲ್ಲಿ, ನಿತ್ಯಜೀವನಲ್ಲಿ ಹೆಮ್ಮಕ್ಕೊ ಅನುಭವಿಸುವ ಸಹಿಸುವ ಸಮಸ್ಯೆಗೊ ಅದೆಷ್ಟೋ..
    ಅದೆಲ್ಲವನ್ನೂ ಮೀರಿ ಬೆಳೆವ ಶಕ್ತಿಯ, ತಾಳ್ಮೆಯ ಅದೆಲ್ಲಿಂದಲೋ ಕೊಟ್ಟಿದ ದೇವರು ಹೆಮ್ಮಕ್ಕೊಗೆ. ]

    ನಿಂಗೋ ಹೇಳಿದ ಹಾಂಗೆ ದೇವರು ಹೆಮ್ಮಕ್ಕೊಗೆ ವಿಶೇಷ ಶಕ್ತಿ ಕೊಟ್ಟಿದವು. ನಮ್ಮ ಸಮಾಜಲ್ಲಿ ತುಂಬಾ ಜನ ಪ್ರತಿಭಾವಂತ ಹೆಮ್ಮಕ್ಕೋ ಇದ್ದವು. ಅವರ ಎಲ್ಲರ ಅನುಭವ, ಅಂದಾಜುಗೋ ಅಕ್ಷರ ರೂಪಕ್ಕೆ ಬಂದರೆ ಅದುವೇ ಒಂದು ಆಸ್ತಿ ಅಕ್ಕು ಮುಂದಾಣವಕ್ಕೆ!
    ಚೆಕ್ಕೆ ಮನೆ ಪ್ರಸನ್ನಕ್ಕಂಗೆ ಸರಸ್ವತಿಯ ಅನುಗ್ರಹ ಇರಲಿ..
    ಅವಕ್ಕೆ ಬೈಲಿಂಗೆ ಸ್ವಾಗತ. ಅವರ ಚೆಂದಕ್ಕೆ ಪರಿಚಯಿಸಿದ ನಿಂಗೊಗೆ ಧನ್ಯವಾದಂಗೋ.

  4. ಗೃಹಿಣಿಯಾಗಿ ಮನೆಯ ಬೆಳಗಿದ್ದು ಮಾತ್ರ ಅಲ್ಲದ್ದೆ, ಸಾಹಿತ್ಯ ಕ್ಷೇತಲ್ಲಿಯೂ ಸಾಧನೆಯ ಮಾಡಿದ “ಪ್ರಸನ್ನಾ” ಅಕ್ಕನ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಂಗೊ
    ಅವರ ಸಾಹಿತ್ಯ ಕೃಷಿ ನಮ್ಮ ಬೈಲಿಲ್ಲಿಯೂ ಮುಂದುವರಿಯಲಿ.

    1. ಅಪ್ಪು ಶರ್ಮಪ್ಪಚ್ಚಿ, ನಮ್ಮ ಒಂದು ಅಕ್ಕ ಹೀಂಗೆ ಸಾಧನೆ ಮಾಡಿದ್ದು ನೋಡುಲೆ ಹೆಮ್ಮೆ ಆವ್ತು 🙂 ನಮ್ಮೆಲ್ಲರ ಶುಭ ಹಾರೈಕೆ ಅವರೊಟ್ಟಿಂಗೆ ಎಂದಿಂಗೂ ಇರಲಿ 🙂

  5. “ಪ್ರಸನ್ನಾ” ಅಕ್ಕನ ಪರಿಚಯ ಲೇಖನ ನೋಡಿ ಅತ್ಯಾನ೦ದ ಆತು. ಇವರ ಬರಹ೦ಗಳ ಓದಿದ್ದಿಲ್ಲೆನ್ನೇ, ಸುವರ್ಣಿನಿ ಅಕ್ಕಾ.
    ಬೈಲಿಲಿ ಇವರ ಅ೦ಕಣ/ಕಥಾಸಾಹಿತ್ಯದ ಪರಿಚಯವೂ ಆಗಲಿ.
    ಶುಭಾಶಯ೦ಗೊ.

  6. ಪ್ರಸನ್ನಕ್ಕನ ಬೈಲಿಂಗೆ ಪರಿಚಯಿಸಿದ ಸುವರ್ಣಿನಿಗೆ ಧನ್ಯವಾದಂಗ… ಅವರ ವೈಯುಕ್ತಿಕವಾಗಿಯೂ ಪರಿಚಯ ಇಪ್ಪ ಎನಗೆ ಅವರ ಬಗ್ಗೆ ತುಂಬಾ ಹೆಮ್ಮೆ ಇದ್ದು… ಸಾಧಿಸುವ ಛಲ ಇದ್ದರೆ ಹಳ್ಳಿ ಕುಟುಂಬದ ಉತ್ತಮ ಗೃಹಿಣಿ ಆಗಿದ್ದುಗೊಂಡೂ ಸಾಧಿಸುಲಕ್ಕು ಹೇಳುದಕ್ಕೆ ಪ್ರಸನ್ನಕ್ಕ ಅತ್ಯುತ್ತಮ ಉದಾಹರಣೆ… ಪ್ರಸನ್ನಕ್ಕನ ಕಥೆ, ಕವನ, ಲೇಖನಂಗೊ ಕ್ಕೆ ಕಾಯ್ತಾ ಇರುತ್ತೆಯ…

    1. ಜಯಶ್ರೀ ಅಕ್ಕ, ನಿಂಗೊಗೆ ಅವರ ಪರಿಚಯ ಇದ್ದು ಹೇಳಿ ಕೇಳಿ ಸಂತೋಷ ಆತು. ವೈಯಕ್ತಿಕವಾಗಿಯೇ ಅವಕ್ಕೆ ಬೈಲಿನ ಕಡೇಂದ ಒಂದು ಅಭಿನಂದನೆ ಹೇಳಿಕ್ಕಿ, ನಿಂಗೊ ಭೇಟಿ ಆದಪ್ಪಗ 🙂
      ಅವ್ವು ಸಮಯ ಸಿಕ್ಕಿಯಪ್ಪಗ ಬೈಲಿಂಗೆ ಅವರ ಸಾಹಿತ್ಯಕೃಷಿಯ ಪರಿಚಯಿಸುಲೆ ಒಪ್ಪಿದ್ದವು 🙂

      1. ಖಂಡಿತ ಬೈಲಿನ ಕಡೇಂದ ಅವಕ್ಕೆ ಅಭಿನಂದನೆ ಹೇಳುತ್ತೆ… 🙂 ಅವರ ಕಥೆಯ ಮೂಲಕ ಅವರ ಬೈಲಿಂಗೆ ಕರಕ್ಕೊಂಡು ಬತ್ತಾ ಇಪ್ಪ ಸುವರ್ಣಿನಿಗೂ ಅಭಿನಂದನೆಗೋ…

  7. ಪ್ರಸನ್ನಕ್ಕಂಗೆ ಅಭಿನಂದನೆಗೊ. ಅವರ ಕಥೆಗೊ ಬೈಲಿಂಗೂ ಬರಳಿ. ಪರಿಚಯಿಸಿದ ಸುವರ್ಣಿನಿಗೆ ಧನ್ಯವಾದಂಗೊ. ಪ್ರಸನ್ನಕ್ಕನ ಭಾವಚಿತ್ರವೊಂದರ ಬೈಲಿಂಗೆ ತೋರುಸಿದ್ದರೆ ಇನ್ನೂ ಲಾಯಕಾವುತ್ತಿತು.

    1. ಅವರ ಪರವಾಗಿ ಧನ್ಯವಾದ 🙂
      ಎನ್ನದೂ ಧನ್ಯವಾದ 🙂
      ಅವರ ಪಟ ಈ ಸರ್ತಿ ಸಿಕ್ಕಿತ್ತಿಲ್ಲೆ, ಇನ್ನಾಣ ಸರ್ತಿ ಅವರ ಶುದ್ದಿಯೊಟ್ಟಿಂಗೆ ಪಟವನ್ನೂ ಹಾಕುಲೆ ಪ್ರಯತ್ನ ಮಾಡ್ತೆ.

  8. ನಮ್ಮ ಕಡೆಂದಲುದೇ ಪ್ರಸನ್ನಕ್ಕಂಗೆ ಶುಭ ಹಾರೈಕಗೊ….. ಆದಷ್ಟು ಬೇಗ ಬಯಲಿಂಗೆ ಇಳಿರಿ ಹೇಳ್ತ ಕೋರಿಕೆಯೊಟ್ಟಿಂಗೆ

  9. ಒಳ್ಳೆ ಶುದ್ದಿ. ಆ ಅಕ್ಕನ ಪರಿಚಯಿಸಿದ್ದಕ್ಕೆ ಈ ಅಕ್ಕಂಗೆ ಧನ್ಯವಾದಂಗೊ, ಆ ಅಕ್ಕಂಗೆ ಅಭಿನಂದನೆಗೊ. ಗೃಹಿಣಿ ಪ್ರಸನ್ನಕ್ಕನ ಕತೆಗೊ ಬೈಲಿಂಗೆ ಸ್ವಾಗತ.

  10. ತುಂಬ ಸಂತೋಷ. ಪ್ರಸನ್ನಕ್ಕಂಗೆ ಬೈಲಿಂಗೆ ಇಳಿವಲೆ ಎಡಿಯದ್ದರೂ ಸಾರ ಇಲ್ಲೆ. ಅವರ ಕತೆ ನಾವು ಓದುವ ಹಾಂಗೆ ಆದರೆ ಸಾಕು.
    ಇಲ್ಲಿ ಅವರ ಪರಿಚಯಿಸಿದ್ದಕ್ಕೆ ಧನ್ಯವಾದ. ಅವರ ಕತೆಗಳ ಎದುರು ನೋಡ್ತೆಯ.°
    ಸುಮಾರು ಸಮಯದ ಮತ್ತೆ ಸುವರ್ಣಿನಿ ಅಕ್ಕನ ಬೈಲಿಲಿ ಕಂಡು ಕೊಶಿ ಆತು. ಹೀಂಗೆ ಬಂದುಗೊಂಡಿರಿ ಆತೋ.?

    1. ಖಂಡಿತಾ ಬತ್ತೆ ಕುಮಾರಣ್ಣ, ನಮ್ಮದೇ ಬೈಲು 🙂 ಅವಕ್ಕೆ ಬೈಲಿಂಗೆ ಬಪ್ಪಲೆ ಎಡಿಯದ್ದರೂ ಪುರ್ಸೊತ್ತಪ್ಪಗ ಬೈಲಿಂಗೆ ಶುದ್ದಿ ಬರೆತ್ತೆ ಹೇಳಿದ್ದವು 🙂

  11. ಸಂತೋಷ.ಅವರ ಕತೆ ಬರಲಿ.ಓದಲೆ ಕಾಯ್ತಾ ಇದ್ದೆ.

    1. ಅವರ ಪರವಾಗಿ ಧನ್ಯವಾದ, ನಾಳಂಗೆ ಅವರ ಒಮ್ದು ಕಥೆ ಬೈಲಿಲ್ಲಿ ಬತ್ತು. ಮತ್ತೂ ಪುರ್ಸೊತ್ತಪ್ಪಗ ಬೈಲಿಂಗೆ ಶುದ್ದಿ ಬರೆತ್ತೆ ಹೇಳಿ ಹೇಳಿದ್ದವು 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×