Oppanna.com

ಚಿ.ಶಶಿಕಿರಣ೦ಗೆ ಸಹಾಯಹಸ್ತ

ಬರದೋರು :      on   08/08/2012    19 ಒಪ್ಪಂಗೊ

ನಮ್ಮ ಸಮಾಜದ ಚಿ.ಶಶಿಕಿರಣ ಹೇಳ್ತ ಯುವಕ° ಮೂತ್ರಪಿ೦ಡದ ವಿಫಲತೆಯ ಕಾರಣ ಅನಾರೋಗ್ಯಲ್ಲಿ ಇದ್ದ°.

ಶಶಿಕಿರಣ , ದಿ.ಸೀತಾರಾಮ ಭಟ್ಟರ ಏಕೈಕ ಪುತ್ರ.
ಇಪ್ಪತ್ತೇಳು  ವರುಶ ಪ್ರಾಯ.ಬಿ.ಕಾಮ್.ಮುಗುಶಿ ಚಾರ್ಟೆಡ್ ಎಕೌ೦ಟೆ೦ಟ್ ಅರ್ಹತಾ ಪರೀಕ್ಷೆಗೊಕ್ಕೆ ತಯಾರಪ್ಪಗ ಈ ಕಷ್ಟ ಎದುರಾಯಿದು.
ಆರು ತಿ೦ಗಳು ಮದಲು  ಶಶಿಕಿರಣನ ಅಪ್ಪ ಶ್ರೀ ಸೀತಾರಾಮ ಭಟ್ ವಿಧಿವಶರಾದವು. ಅವು ಅಡಿಗೆಯ ವೃತ್ತಿ ಮಾಡಿಗೊ೦ಡು ಇಡೀ ಸ೦ಸಾರದ ಜವಾಬ್ದಾರಿಯ ಹೊತ್ತು ಕಷ್ಟ ಪಟ್ಟವು.

ಆರ್ಥಿಕವಾಗಿ ತು೦ಬಾ ಕಷ್ಟಲ್ಲಿಪ್ಪ ಶಶಿಕಿರಣ೦ಗೆ ದೇಶ ವಿದೇಶ೦ದ ಹಣಕಾಸು ನೆರವು ಸಿಕ್ಕಿ; ಮೊನ್ನೆ ಆಗಸ್ಟ್ 6 ನೆ ತಾರೀಕು ಮೂತ್ರಪಿ೦ಡದ ಬದಲಾವಣೆಯ ಶಸ್ತ್ರಚಿಕಿತ್ಸೆ ಚೆನ್ನೈಯ ಅಪೋಲೊ ಆಸ್ಪತ್ರೆಲಿ ಯಶಸ್ವಿ ಆಯಿದು.
ಆದರೆ ಅವನ ಚಿಕಿತ್ಸೆಗೆ ಮತ್ತೆ ಮು೦ದಾಣ ಚಿಕಿತ್ಸೆಗೊಕ್ಕೆ ಈಗ  ಇಪ್ಪ ಪೈಸೆ ಸಾಕಾಗ.

ಒಪ್ಪಣ್ಣನ ಬೈಲಿನ ಎಲ್ಲಾ  ನೆ೦ಟರ ಹತ್ತರೆ, ನಮ್ಮ ಸಮಾಜದ ಈ ಯುವ° ಭವಿಷ್ಯಲ್ಲಿ ಮತ್ತೆ ನೆಮ್ಮದಿಯ ಕಾ೦ಬ ಹಾ೦ಗೆ ಅಪ್ಪಲೆ ಬೇಕಾಗಿ ಯಥಾನುಶಕ್ತಿ ಧನಸಹಾಯ ಮಾಡೆಕ್ಕು ಹೇಳಿ ಈ ಮೂಲಕ ಕೇಳಿಗೊಳ್ಳುತ್ತೆ.

ಸಹಾಯ ಮಾಡುಲೆ ವಿವರ೦ಗೊ ಹೀ೦ಗಿದ್ದು :
Name: Shashikirana C,
Age: 27,
Education: B.Com
Address:
S/O Late. Seetharam Bhat
Kaje House, Manikkara Post, Bellare Village
Sullya Taluk, Dakshina Kannada
Karnataka, India

ಕಿರಣನ ಬಾಳಿಲಿ ಹೊಸ ಕಿರಣ ಬೆಳಗಲಿ

Phone: +91 08257-314050
Mob: +91 9740085764

Bank account:

NAME : SHASHIKIRANA C
A/C NUMBER : 102601011000646
BANK NAME : VIJAYA BANK
IFSC CODE : VIJB0001026
ADDRESS :
BELLARE, SULLIA TALUK.

ಅಥವಾ ಒಪ್ಪಣ್ಣನ ನೆರೆಕರೆ ಪ್ರತಿಷ್ಟಾನ (ರಿ) ದ ನಿಧಿಗೆ ಕಳುಸಿರೆ ಶಶಿಕಿರಣ೦ಗೆ ತಲ್ಪುಸುಲಕ್ಕು:

Name: OPPANNA NEREKARE PRATISHTHAANA
Acc No:
32272527608
Bank: State Bank of India
IFSC Code: SBIN0002249
Branch: PANAMBUR (Mangalore)

ಚಿ.ಶಶಿಕಿರಣ ಶೀಘ್ರ ಗುಣಮುಖನಾಗಿ, ಆರೋಗ್ಯಭಾಗ್ಯ ಸಿಕ್ಕಿ ಭವಿಷ್ಯ ಜೀವನಲ್ಲಿ ಸುಖ, ಶಾ೦ತಿ, ನೆಮ್ಮದಿ ಸಿಕ್ಕುವ ಹಾ೦ಗೆ ಗುರು, ದೇವರು  ಅನುಗ್ರಹಿಸಲಿ ಹೇಳಿ ಬೈಲಿನ ಎಲ್ಲೋರ ಹಾರೈಕೆ.
(ಒಪ್ಪಣ್ಣನ ನೆರೆಕರೆಯ ಪ್ರತಿಷ್ಠಾನ (ರಿ) , 2011 ರ ಫೆಬ್ರವರಿಲಿ   ಶಶಿಕಿರಣ೦ಗೆ  ಸುಮಾರು  15000 /- ರೂಪಾಯಿಯಷ್ಟು ಧನಸಹಾಯ ಮಾಡಿತ್ತಿದ್ದು.
ಈಗ  30000 /- ರೂಪಾಯಿಯ  ಆರೋಗ್ಯನಿಧಿ೦ದ ಸಹಾಯಧನವಾಗಿ ಕೊಡುತ್ತಾ ಇದ್ದು.)

19 thoughts on “ಚಿ.ಶಶಿಕಿರಣ೦ಗೆ ಸಹಾಯಹಸ್ತ

  1. ಶಶಿಕಿರಣನ ಮೂತ್ರಪಿ೦ಡದ ಶಸ್ತ್ರಚಿಕಿತ್ಸೆ ಯಶಸ್ವಿ ಆಯಿದು.ಸದ್ಯ ಚೆನ್ನೈಲಿ ಬಾಡಿಗೆ ಕೋಣೆ ಮಾಡಿಗೊ೦ಡು ಇದ್ದ°.ಮೂತ್ರಪಿ೦ಡ ಸರಿಯಾಗಿ ಸ್ಪ೦ದಿಸುತ್ತಾ ಇದ್ದು.ಡಯಾಲಿಸಿಸ್ ಹತ್ತು ದಿನ೦ದ ನಿಲ್ಲುಸಿದ್ದವು.
    ಕೈಜೋಡುಸಿ ಸಹಾಯ ಮಾಡಿದ,ಶುಭ ಹಾರೈಸಿದ ಎಲ್ಲಾ ಹಿತೈಷಿ ಬ೦ಧುಗೊಕ್ಕೆ ನಮಸ್ಕಾರ೦ಗೊ.

  2. ಹನಿಗೂಡಿ ಹಳ್ಳ ತೆನೆ ಕೂಡಿ ಬಳ್ಳ– ಕೈಲಾದ ಸಹಾಯ ಮಾಡಿ. ಶಶಿಕಿರಣ ಬೇಗ ಗುಣಮುಖನಾಗಲಿ. ಒಪ್ಪಣ್ಣ -ಧನ್ಯವಾದ

  3. Dr. M S ACHARYA MEMORIAL TRUST HYDERABAD AND Dr.RAMESH bHAT has donated some amount to his a/c on 13-08-2012
    thanks on behalf of SHAHIKIRANA TO Them

  4. ಶಶಿಕಿರಣ ಬೇಗ ಗುಣ ಆಗಿ ಬರಲಿ ಹೇಳಿ ಹಾರೈಕೆಗೊ.

  5. ಎನ್ನ ಕೈಲಾದ ಕಿಂಚಿತ್ ಸಹಾಯ ಮಾಡಿದ್ದೆ. ಎಲ್ಲೋರು ಕೈ ಜೋಡಿಸಿರೆ ನಮ್ಮ ಒಬ್ಬ ಮಾಣಿಗೆ ಸಹಾಯ ಅಕ್ಕು. ಹನಿಗೂಡಿರೆ ಹಳ್ಳ ಹೇಳುವ ಮಾತಿನ ನೆನಪಿಲಿ ಮಡುಗಿರೆ ಸಮಾಜಕ್ಕೆ ಒಳ್ಳೆದಲ್ಲದ? ಚಿ| ಶಶಿಕಿರಣ ಆದಷ್ಟು ಬೇಗ ಗುಣಮುಖನಾಗಿ ವಿದ್ಯಾಭ್ಯಾಸ ಮುಂದುವರಿಸುವ ಹಾಂಗೆ ಆಗಲಿ.

  6. Khandithabaagyu aa devru aaa maanige aarogya kodugu ellara haaraike aasheervaadanda.aaadare sahaaya maaduva nepalli aarude aa maaniya baalilli aata aadadde irli heli bedutte.amma maga maatra ippa mane.edigaadre sahaya maadekku.khanditha aanu paise kalsutte.

  7. ಶಶಿಕಿರಣಂಗೆ ಬೇಗನೆ ಗುಣ ಆಗಲಿ.

  8. ಶಶಿಕಿರಣಂಗೆ ಬೇಗನೆ ಗುಣ ಆಗಲಿ.

  9. ಶಶಿಕಿರಣಂಗೆ ಬೇಗ ಉತ್ತಮ ಆರೋಗ್ಯ ವಾಪಸ್ ಬರಲಿ ಹೇಳಿ ಹಾರೈಸುವೆ.

    ಮತ್ತೆ ಒಂದು ವಿನಂತಿ, ತಪ್ಪು ತಿಳಿದುಕೊಳ್ಳೆಡಿ. ಹೀಂಗಿಪ್ಪ ಸಂದರ್ಭಂಗಳಲ್ಲಿ ಉಪಯೋಗವಾಗಲಿ ಹೇಳಿಯೇ ಆನು ಈ ಹಿಂದೆ ಒಂದು ಬ್ಲಾಗ್ ಲೇಖನ ಬರೆದಿತ್ತಿದ್ದೆ. ಅದರಲ್ಲಿ ’ಕೆಲವು ಸಲಹೆಗಳು’ ಹೇಳುವ ವಿಭಾಗದ ೨ನೇ ಮತ್ತೆ ೩ನೇ ಅಂಶಂಗಳ ದಯವಿಟ್ಟು ಓದಿ ಪರಿಗಣಿಸಿ ಹೇಳಿ ಎನ್ನ ಕೋರಿಕೆ. ನಿಂಗೊ ಈಗಾಗಲೇ ಸಾಕಷ್ಟು ಮಾಹಿತಿ ಕೊಟ್ಟಿದಿ, ಬಹಳ ಒಳ್ಳೆದು. ಆದರೆ ಅದರೊಟ್ಟಿಂಗೆ ಆನು ಬರೆದ ಅಂಶಂಗಳನ್ನುದೇ ಪರಿಗಣಿಸಿದರೆ ಇಡೀ ವಿಷಯವ ಹೆಚ್ಚು ಪಾರದರ್ಶಕವೂ ಅರ್ಥಪೂರ್ಣವೂ ಮಾಡುಲೆ ಎಡಿಗು ಹೇಳಿ ಎನ್ನ ವಿಶ್ವಾಸ.

    ಅಂತರ್ಜಾಲದಲ್ಲಿ ಬರುವ ‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ’ ವಿನಂತಿಗಳು ಎಷ್ಟು ಸತ್ಯ?
    http://krishnashastry.blogspot.in/2011/09/online-help-requests-and-contributions.html

    ಇತಿ,
    ಕೃಷ್ಣ ಶಾಸ್ತ್ರಿ

    1. ಶಾಸ್ತ್ರಿ ಮಾವನ ಎಚ್ಚರಿಕೆ ಮಾತುಗೊ ನಿಜಕ್ಕೂ ಶ್ಲಾಘನೀಯ. ಬ್ಲೋಗಿಲ್ಲಿ ಲಾಯ್ಕ ಮಾಹಿತಿ (ಎಚ್ಚರಿಕೆ) ಬರದ್ದಿ ಹೇಳಿ ಧನ್ಯವಾದ.

    2. ಕೃಷ್ಣ ಶಾಸ್ತ್ರಿಗಳ ಮಾತುಗೊ ಮಹತ್ವದ್ದು.
      ಬೈಲಿನ ಸುಮಾರು ಜೆನರ ನೆರೆಕರೆ ಆದ ಕಾರಣ ಶಶಿಕಿರಣನ ಕುಟು೦ಬದ ಹಿನ್ನೆಲೆಯ ಪರಿಚಯ ಇದ್ದು.
      ಆನು ಶಶಿಕಿರಣನ ಮನೆಯವರ ಹತ್ತರೆ ವಿವರ ಮಾತಾಡಿ ಈಗಾಣ ವಿಷಯ ತಿಳುದೆ.
      ಕಳುದ ವರುಷ೦ದಲೇ ಅವ° ಡಯಾಲಿಸಿಸ್ ಲಿ ಇದ್ದದು.ಈಗ ಅಪಘಾತಕ್ಕೀಡಾದ ಒಬ್ಬರ ಕಿಡ್ನ್ಯಿ ದಾನವಾಗಿ ಸಿಕ್ಕಿದ ಕಾರಣ ಅಪೋಲೋ ಆಸ್ಪತ್ರೆ,ಚೆನ್ನೈಲಿ ಆಪರೇಶನ್ ನೆಡದತ್ತು.ಒಟ್ಟು ಆಸ್ಪತ್ರೆ ಖರ್ಚು – ಸುಮಾರು ೬ ಲಕ್ಷ .ಈಗ ಐ.ಸಿ.ಯು.ವಿಲಿ ಇದ್ದ°.ಅಲ್ಲಿ೦ದ ವಾರ್ಡಿ೦ಗೆ ಬಪ್ಪದು ತಡ ಆದರೆ ಖರ್ಚು ಹೆಚ್ಚುವ ಸ೦ಭವ ಇದ್ದು ಹೇಳ್ತ ಆತ೦ಕಲ್ಲಿ ಇದ್ದವು.
      ಇದುವರೆಗೆ ಬ೦ಧುಮಿತ್ರ,ಹಿತಚಿ೦ತಕರು ಕೈಜೋಡುಸಿ ಈ ೬ ಲಕ್ಷವ ಒಟ್ಟುಮಾಡಿದ್ದವು.ಮುಖ್ಯಮ೦ತ್ರಿಗಳ ನಿಧಿ೦ದಲೂ ಸಹಾಯ ಸಿಕ್ಕಿದ್ದು. ಆಸ್ಪತ್ರೆ೦ದ ಬಿಡುಗಟ್ಟು ಅಪ್ಪಲೆ ( ಬಿಲ್ಲು ಹೆಚ್ಚಾದರೆ)+ ಮು೦ದಾಣ ಮದ್ದುಗಳ ಖರ್ಚುಗೊಕ್ಕೆ ಸಹಾಯದ ನಿರೀಕ್ಷೆಲಿ ಇದ್ದವು.
      ಶಶಿಕಿರಣನ ದೊಡ್ಡಪ್ಪನ ಮಗ (ಅಣ್ಣ) ಶ್ರೀ ಸತ್ಯಶ೦ಕರ ( mobile-9480248845) ಈ ಪ್ರಯತ್ನಲ್ಲಿದ್ದವು.

  10. ಸಹಾಯಕ್ಕೆ ಅಳತೆಗೋಲಿಲ್ಲ… ಸಣ್ಣ ಸಹಾಯ ದೊಡ್ಡ ಸಹಾಯ ಎಂಬ ಮಾತಿಲ್ಲ. ಎಲ್ಲರೂ ನಮ್ಮ ಕೈಲಾದಷ್ಟು ಸಹಾಯ ಮಾಡುವ. ಸಹಾಯ ಮಾಡುವ ಮನಸ್ಸು .. ಶುಭ ಹಾರೈಕೆಯಿಂದ ಖಂಡಿತ ಒಳ್ಳೆಯದಾಗ್ತು .ಶಶಿಕಿರಣ ಆದಷ್ಟು ಬೇಗ ಗುಣಮುಖರಾಗಲಿ

    1. ಸರಿಯಾದ ಮಾತು. ಎಲ್ಲ ಒಳ್ಳೆದಾಗಲಿ

  11. ಶಶಿಕಿರಣ ಬೇಗ ಗುಣ ಆಗಿ ಬರಲಿ ಹೇಳಿ ಹಾರೈಕೆಗೊ.
    ಎಲ್ಲರೂ ಕೈ ಜೋಡಿಸಿ ಸಹಾಯಕ್ಕೆ ಸೇರೆಕ್ಕಾದ್ದು ಈಗಾಣ ಅಗತ್ಯ.
    ಹವ್ಯಕ ಬಂಧುಗೊ ಇದಕ್ಕೆ ಒಳ್ಳೆ ರೀತಿಲಿ ಸ್ಪಂದಿಸಲಿ ಹೇಳ್ತ ಆಶಯ.

  12. ಶಶಿಕಿರಣ೦ಗೆ ಒಳಿತಾಗಲಿ ಹೇಳಿ ಪ್ರಾರ್ಥನೆ…

  13. ಧನ್ಯವಾದ ಗುರಿಕ್ಕಾರ್ರಿನ್ಗೆ.

    ನಮ್ಮಿಂದ ಎಡಿಗಪ್ಪ ಸಕಾಯ ಮಾಡುವೋ. ಎಲ್ಲೋರು ಕೈಜೋಡುಸುವೋ. ಭಗವದ್ಕೃಪೆಂದ ಶಶಿಕಿರಣ ಅರೋಗ್ಯವಂತನಾಗಿ ಹೆಮ್ಮೆಂದ ಬಾಳುವಂತಾಗಲಿ ಶೀಘ್ರಲ್ಲಿ.

  14. ಶಶಿಕಿರಣ ಬೇಗ ಗುಣಮುಖನಾಗಲಿ ಹೇಳಿ ಪ್ರಾರ್ಥಿಸುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×