Oppanna.com

ಡಿ.ಕೆ.ಗೌತಮಂಗೆ “ಸೌರಭ ಪ್ರತಿಭಾ ಪುರಸ್ಕಾರ” ಪ್ರಶಸ್ತಿ

ಬರದೋರು :   ಶರ್ಮಪ್ಪಚ್ಚಿ    on   21/12/2015    3 ಒಪ್ಪಂಗೊ

ಡಿ.ಕೆ.ಗೌತಮಂಗೆ “ಸೌರಭ ಪ್ರತಿಭಾ ಪುರಸ್ಕಾರ”   ಪ್ರಶಸ್ತಿD.K. Gouthama

ಇವನ ಯಕ್ಷಗಾನ ಮತ್ತೆ ಬಹುಮುಖ ಪ್ರತಿಭೆಯ ಗುರುತಿಸಿ, ದಕ್ಷಿಣಕನ್ನಡ ಜಿಲ್ಲೆಯ ಸುಮ ಸೌರಭ ಪತ್ರಿಕೆಯವು  “ಸೌರಭ ಪ್ರತಿಭಾ ಪುರಸ್ಕಾರ-2014”  ರ ಕೊಟ್ಟು ಗೌರವಿಸಿದವು.

ತಾರೀಕು 13/12/15  ರಂದು, ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾಮಂಟಪಲ್ಲಿ ನಡದ ಸಮಾರಂಭಲ್ಲಿ, ಈ ಸನ್ಮಾನವ ಮಾಡಿದವು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ಶ್ರೀ ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಅಸ್ರಣ್ಣ, ಖ್ಯಾತ ಸಾಹಿತಿ ಹಾಂಗೂ ಕವಿ ಡಾ| ಜಿ.ಡಿ. ಜೋಶಿ ಮುಂಬೈ, ಪತ್ರಿಕೆಯ ವ್ಯವಸ್ಥಾಪಕ  ಎಂ.ಜೆ ರಾವ್, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಭುವನಾಭಿರಾಮ ಉಡುಪ, ಪ್ರೊ| ಪಿ.ಸಿ.ಎಂ ಕುಂಞ್ಞಿ ಇವು ಕಾರ್ಯಕ್ರಮಲ್ಲಿ ಉಪಸ್ಥಿತರಿತ್ತಿದ್ದವು

ಈ ಮೊದಲು ಇವಂಗೆ ಜ್ಞಾನ ಮಂದಿರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವು ನೀಡುವ “ವಚನ ಮಂದಾರ ರಾಜ್ಯ ಪುರಸ್ಕಾರ” ಪ್ರಶಸ್ತಿ, ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹ ಸಾಧನೆಗಾಗಿ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು   “ರಾಜ್ಯೋತ್ಸವ ಸಾಧಕ ಪುರಸ್ಕಾರ”  ಕೂಡಾ ಸಿಕ್ಕಿದ್ದು ಹೇಳುವದು ಇಲ್ಲಿ ಗಮನಾರ್ಹ.

ಸುರತ್ಕಲ್ NITK ಲಿ ಇಪ್ಪ ಶ್ರೀ ದೇಂತಾಜೆ  ಕೃಷ್ಣ ಭಟ್ ರಾಜೇಶ್ವರಿ ದಂಪತಿಯ ಸುಪುತ್ರ ಗೌತಮ NITK ಆಂಗ್ಲಮಾಧ್ಯಮ ಶಾಲೆಯ ಎಂಟನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಮಾತ್ರ ಅಲ್ಲದ್ದೆ, ಹತ್ತು ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.

ಇವನ ಈ ಯಾನ ಇನ್ನೂ ಹೀಂಗೇ ಮುಂದುವರಿಯಲಿ, ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಸುವೊ°

~~~***~~~

ಡಿ.ಕೆ. ಗೌತಮ-ಪುರಸ್ಕಾರ ಡಿ.ಕೆ. ಗೌತಮ-ಪ್ರಶಸ್ತಿ ಫಲಕ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಡಿ.ಕೆ.ಗೌತಮಂಗೆ “ಸೌರಭ ಪ್ರತಿಭಾ ಪುರಸ್ಕಾರ” ಪ್ರಶಸ್ತಿ

  1. ಗೌತಮ೦ಗೆ ಶುಭಹಾರೈಕೆಗೊ.ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಕೆಗೊ

  2. ಅಭಿನಂದನೆಗೊ. ಇನ್ನಷ್ಟು ಕೀರ್ತಿಭಾಜನರಾಗಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×