ಒಪ್ಪ ಹೆಸರು: ಪುಟ್ಟಬಾವ°
ಇಪ್ಪ ಹೆಸರು: ಗಣೇಶ ಭಟ್ ಹಾಲುಮಜಲು
ಮಿಂಚಂಚೆ ವಿಳಾಸ: ganeshabhatk AT gmail.com
ಈ ಪುಟ್ಟಭಾವನ ಪರಿಚಯ ಮಾಡುದು ಹೇಳಿರೆ ಹೋಳಿಗೆ-ಕಾಯಾಲು ತಿಂದಷ್ಟು ಕೊಶಿ ಒಪ್ಪಣ್ಣಂಗೆ!
ದೈಹಿಕವಾಗಿ ಇಪ್ಪದು ಬೆಂಗುಳೂರಿಲಿ ಆದರೂ ಮಾನಸಿಕವಾಗಿ ಇಪ್ಪದು ನಮ್ಮ ಊರಿಲಿಯೇ. ಒಂದು ನಮೂನೆ ನಮ್ಮ ನೀರ್ಕಜೆ ಅಪ್ಪಚ್ಚಿಯ ಹಾಂಗೆ, ಊರೇ ಚೆಂದ ಹೇಳಿಗೊಂಡು ನಂಬುತ್ತ ಜೆನ.
ನಮ್ಮ ಹಳೇ ಕ್ರಮಂಗೊ, ಸಂಪ್ರದಾಯಂಗೊ, ಜೆನಂಗೊ, ಕಲೆಗೊ – ಇದರ ಬಗ್ಗೆ ವಿಶೇಷ ಆಸಗ್ತಿ ಇಪ್ಪ ಜೆನ ಇವು.
ಇಂಜಿನಿಯರು ಕಲ್ತು ಬೆಂಗುಳೂರಿಲಿ ಟಾಟಾದವರ ಎಂತದೋ ಕಂಪೆನಿಲಿ ಕೆಲಸ, ವಾರ ಇಡೀಕ ಹಗಲೊತ್ತು. ಹೊತ್ತೋಪಗ ಬಂದು ಮನೆಲಿ ಕೂದಂಡು ಕೊಳಲು ಉರುಗುಗು, ಚೆಂದಕೆ – ಹೊಟ್ಟೆ ಹಶುಅಪ್ಪನ್ನಾರ.
ಹಶು ಅಪ್ಪಗ ಎಂತಾರು ಬೇಶಿ ತಿಂಗು, ಅಡಿಗೆಲಿ ಒಂದು ಕೈ ಮೇಲೆ ಇದಾ!!
ಒಳ್ಳೆ ಚಿಂತನೆಗೊ ಇದ್ದು ಇವಕ್ಕೆ. ಒಬ್ಬನೇ ಕೂದಂಡು ಕೆಲವು ಯೋಚನೆಗೊ ಮಾಡ್ತವು – ಭಾರೀ ಒಳ್ಳೆ ಆಲೋಚನೆಗೊ. ನಮ್ಮ ಸಮಾಜವ ತಿದ್ದುತ್ತ ನಮುನ ಚಿಂತನೆಗೊ.
ನಮ್ಮೊಳ ಇಪ್ಪ ಹಾಳುಮಜಲಿನ ಹಾಲುಮಜಲು ಮಾಡ್ತದು ಹೇಂಗೆ – ಹೇಳಿ ಯೋಚನೆ ಮಾಡ್ತ ಮನಸ್ಸು.
ಮನೋಶಾಸ್ತ್ರದ ಬಗ್ಗೆ ವಿಶೇಷ ಆಸಗ್ತಿ. ಪುರುಸೊತ್ತಿಪ್ಪಗ ಮನಃಶಾಸ್ತ್ರದ ಬಗ್ಗೆ ತಿಳಿಗು, ಬೆಳಗು. ಗುರ್ತದೋರು ಎಲ್ಲಿ ಸಿಕ್ಕಿರೂ ಮಾತಾಡುಸುಗು, ಅದು ತುಂಬಾ ಕೊಶಿ ಅಪ್ಪದಿದಾ..
ಓ ಮೊನ್ನೆ ಬೇಂಕಿನ ಪ್ರಸಾದನ ಬಿಡ್ಳೆ ಪುತ್ತೂರು ಬಷ್ಟೇಂಡಿಂಗೆ ಹೋಗಿತ್ತಿದ್ದೆಯೊ° – ಆನುದೇ ಗಣೇಶಮಾವಂದೆ.
ಅಷ್ಟಪ್ಪಗ ದೂರಲ್ಲಿ ಒಂದು ಪೋನುತುಂಡಿನ ಕೆಮಿಗೆ ಮಡಿಕ್ಕೊಂಡು ಮಾತಾಡಿಗೊಂಡಿತ್ತಿದ್ದವು ಇವು! ಸೀತ ಬಂದು ಎಂಗಳತ್ತರಂಗೆ ಮಾತಾಡುಸಿದ್ದಲ್ಲದೋ – ಒಪ್ಪಣ್ಣಂಗೆ ಹಾಲುಕುಡುದ ಹಾಂಗಾತು.
ಚೆಂದಕೆ ನೆಗೆನೆಗೆಮಾಡಿ ಮಾತಾಡುಸುವಗ ಪಕ್ಕನೆ ಕೇಳಿಹೋತು – ಬೈಲಿಂಗೆ ಬಂದು ಶುದ್ದಿಯೋ ಮಣ್ಣ ಹೇಳ್ತಿರೋ – ಹೇಳಿಗೊಂಡು. ಸಂತೋಷಲ್ಲಿ “ಅಕ್ಕಕ್ಕು” – ಹೇಳಿದವು, ಬೆಳೀಹಲ್ಲಿನ ತೋರುಸಿಗೊಂಡು.
ಎಂಗೊಗೆಲ್ಲ ಕೊಶಿ ಆತು, ಹತ್ತರೆ ಇದ್ದ ಉದಯಣ್ಣಂಗುದೇ!
ಹ್ಮ್, ಇವರ ಚಿಂತನೆಗೊ ಬೈಲಿಲಿ ಕತೆ ಆಗಿ ಹರುದು ಬಕ್ಕು. ಅದು ಕೇವಲ ಕತೆ ಅಲ್ಲ, ನಮ್ಮ ಸಮಾಜದ ವ್ಯಥೆಯೂ ಆಗಿಕ್ಕು.
ಅವರ ಮನಸ್ಸಿಂಗೆ ಕಂಡ ಅನಿಸಿಕೆಗಳೂ ಆಗಿಕ್ಕು.. ಹಾಳುಮಜಲಿಪ್ಪದರ ಹಾಲುಮಜಲು ಮಾಡ್ಳೆ ಹೇಳ್ತ ಶುದ್ದಿ ಆಗಿಕ್ಕು..
ನಾವೆಲ್ಲರೂ ಓದುವೊ, ಅಕ್ಕಾದರೆ ಸಂತೋಷಲ್ಲಿ ಸ್ವೀಕರುಸುವೊ°. ಶುದ್ದಿಗೊಕ್ಕೆ ಮನಸಾರೆ ಒಪ್ಪ ಕೊಟ್ಟು ಅವರನ್ನೂ ಬೆಳೆಸುವೊ°,
ಆಗದೋ?
ಏ°?
Register:ರಿಜಿಸ್ತ್ರಿ
Facebook:ಮೋರೆಪುಟ