ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಬೊಳುಂಬು ಮಾವ°ವೇಣೂರಣ್ಣಸರ್ಪಮಲೆ ಮಾವ°ಹಳೆಮನೆ ಅಣ್ಣಒಪ್ಪಕ್ಕಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ನೀರ್ಕಜೆ ಮಹೇಶಶ್ಯಾಮಣ್ಣಶೇಡಿಗುಮ್ಮೆ ಪುಳ್ಳಿಚೆನ್ನೈ ಭಾವ°ಅನು ಉಡುಪುಮೂಲೆಅಕ್ಷರದಣ್ಣಗಣೇಶ ಮಾವ°ಚುಬ್ಬಣ್ಣಡೈಮಂಡು ಭಾವಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಕೇಜಿಮಾವ°


ಬೈಲಿನ ಮೋರೆಪುಟ:

ವಿದ್ವಾನಣ್ಣ ಅವರ ಬಗ್ಗೆ:

ವಿದ್ವಾನಣ್ಣ

ಒಪ್ಪ ಹೆಸರು: ವಿದ್ವಾನಣ್ಣ

ಇಪ್ಪ ಹೆಸರು: Jagadisha Sharma

ಮಿಂಚಂಚೆ ವಿಳಾಸ: jagadishasharma AT gmail.com

ವೆಗ್ತಿ ಪರಿಚಯ:

ಮೂಲತಃ ಸಾಗರ ಹೋಬಳಿಂದ ಬಂದ ಇವು, ಹವ್ಯಕದಷ್ಟೇ ಸಲೀಸಾಗಿ ಸಂಸ್ಕೃತಲ್ಲಿಯೂ ಮಾತಾಡುಗು!

ಸಂಸ್ಕೃತ, ಸಾಹಿತ್ಯ, ಕಾವ್ಯಂಗಳ ಗೋಕರ್ಣಲ್ಲೇ ಕಲ್ತು, ಮುಂದಕ್ಕೆ ಜ್ಯೋತಿಷ್ಯವ ತೆಂಕ್ಲಾಗಿ (ಕೇರಳಲ್ಲಿ) ಕಲ್ತದಡ. ಹಾಂಗಾಗಿ ರಜರಜ ಮಲೆಯಾಳವೂ ಅರಡಿಗೋ ಏನೋ! ಉಮ್ಮ!!

ನಮ್ಮ ಕ್ರಮ, ಕಟ್ಟುಪಾಡು, ಆಚಾರ, ವಿಚಾರಂಗಳ ಬಗ್ಗೆ ಸಮರ್ಥವಾಗಿ ಮಾತಾಡುವ ಶೈಲಿ-ಸಾಮರ್ಥ್ಯ ಇಪ್ಪ ವಿದ್ವಾನಣ್ಣಂಗೆ, ಮಹತ್ತರ ಜೆವಾಬ್ದಾರಿಗಳ ನಮ್ಮ ಗುರುಗೊ ಕೊಟ್ಟಿದವು.

ನಮ್ಮ ಗುರುಗಳದ್ದೇ ಆದ ವೆಬ್-ಸೈಟು ಇದ್ದಲ್ಲದೋ? ಹರೇರಾಮ.ಇನ್ (http://hareraama.in) ಹೇಳ್ತದು, ಅದರ್ಲಿ ಮುಖ್ಯ ಸಂಪಾದಕರಾಗಿಪ್ಪ ಜೆವಾಬ್ದಾರಿ ಅಡ!

ಮಠಂದಲೇ ಬತ್ತ ಧಾರ್ಮಿಕ ಮಾಸಿಕವಾದ ಧರ್ಮಭಾರತಿಯ ಸಂಪಾದಕರಾಗಿಯೂ ಬಹಳಷ್ಟು ಕಾರ್ಯ ಅವರಿಂದ ಆವುತ್ತಾ ಇದ್ದಡ.

ಅದಲ್ಲದ್ದೇ ಮಠಲ್ಲಿ ಸಾಹಿತ್ಯಿಕವಾದ ಅಗತ್ಯತೆ ಎಲ್ಲೆಲ್ಲಿ ಬತ್ತೋ – ಅಲ್ಲಿಗೆ ಪ್ರಥಮವಾಗಿ ಗುರುಗೊಕ್ಕೆ ಕಾಂಬದು ಈ ವಿದ್ವಾನಣ್ಣನನ್ನೇ ಅಡ, ಎಡಪ್ಪಾಡಿಬಾವ ಹೇಳಿದ್ದು..!

ಮೊನ್ನೆ ನಮ್ಮ ಬೈಲಿಂಗೆ ಬಂದಿತ್ತಿದ್ದವು, ಮಾಷ್ಟ್ರುಮಾವನಲ್ಲಿಗೆ.

ಬೆಂಗುಳೂರಿಂದ ಮುನ್ನಾಣದಿನವೇ ಹೆರಟು, ಆ ದಿನ ಉದೆಕಾಲಕ್ಕೇ ಬೇಗ ಬಂದು ಎತ್ತಿಗೊಂಡಿದವು.

ಅವರ ಜೆಪತಪ ಸಂಧ್ಯಾವಂದನೆ ಆಗಿ ಕೂದಂಡಿಪ್ಪಗ – ಮೆಲ್ಲಂಗೆ ಹತ್ತರಾಣ ಕುರ್ಶಿಲಿ ಹೋಗಿ ಕೂದಂಡೆ, ನಮಸ್ಕಾರ – ಹೇಳಿದೆ.

ಕೈಲಿ ಎಂತದೋ ಪುಸ್ತಕ ಹಿಡ್ಕೊಂಡು ಓದಿಗೊಂಡಿತ್ತವು ಪಕ್ಕನೆ ಮೋರೆ ನೋಡಿ ಚೆಂದಕೆ ಒಂದು ಬಾಬೆನೆಗೆಮಾಡಿದವು; ಪುರುಸೋತಿಲಿ ಇದ್ದ ಕಾರಣ ರಜ ಮಾತಾಡ್ಳುದೇ ಸಿಕ್ಕಿದವು!

ಮಾತಾಡಿಗೊಂಡು ಹೋಪಗ ಮೆಲ್ಲಂಗೆ ಕೇಳಿತ್ತು ನಾವು: ವಿದ್ವಾನಣ್ಣ, ಬೈಲಿಂಗೆ ಶುದ್ದಿ ಹೇಳ್ತಿರೋ? – ಹೇಳಿ.

ಎನಗೆ ಕುಂಬ್ಳೆಸೀಮೆಯ ಭಾಶೆ ಅಷ್ಟಾಗಿ ಬತ್ತಿಲ್ಲೆ, ರಜರಜ ಸಾಗರ ಹೊಡೆಯ ಭಾಶೆಯೂ ಸೇರಿಹೋವುತ್ತು! – ಹೇಳಿದವು, ಶುದ್ಧಕುಂಬ್ಳೆಭಾಷೆಲಿ!!

ಸಾರ ಇಲ್ಲೆ, ಎಲ್ಲಾ ಭಾಶೆಯೂ ಇಲ್ಲಿ ಬಂದಿರಳಿ ಹೇಳ್ತದು ಬೈಲಿನ ಹಾರಯಿಕೆ – ಹೇಳಿ ಒಪ್ಪುಸಿತ್ತು ಅವರ.

ಅಂತೂ ಒಪ್ಪಿದವು, ತುಂಬಾ ಕೊಶಿ ಆತು ನವಗೆ. :-)

ವಿದ್ವಾನಣ್ಣ ಬೈಲಿಂಗೆ ಬಂದು ಶುದ್ದಿ ಹೇಳ್ತರೆ ಅದು ಬೈಲಿನ ವಿದ್ವತ್ತನ್ನೇ ಜಾಸ್ತಿ ಮಾಡ್ತು ಹೇಳ್ತದು ಸಮಷ್ಟಿಯ ಅಭಿಪ್ರಾಯ.

ಈಗಾಗಲೇ ಸಂಸ್ಕೃತದ ವಿದ್ವಾಂಸರು ಇಪ್ಪ ಬೈಲಿಂಗೆ ವಿದ್ವಾನಣ್ಣ ಬಂದರೆ ಕಿರೀಟಕ್ಕೆ ಹವಳ ಮಡಗಿದ ಹಾಂಗೆ!

ನಮ್ಮವೇ ಆದ, ನಮ್ಮ ಬೈಲಿನವೇ ಆದ ವಿದ್ವಾನಣ್ಣನ ಶುದ್ದಿಗಳ ಓದಿ ಅರ್ತ ಮಾಡಿಗೊಂಬ°.

ಅರ್ತ ಆದರೆ ಶುದ್ದಿಗೊಕ್ಕೆ ಒಪ್ಪ ಕೊಟ್ಟು ಇನ್ನಾಣ ಶುದ್ದಿ ಬರವಲೆ ಪ್ರೋತ್ಸಾಹ ಮಾಡುವೊ°.

ಅವರ ಮನೆಮಾತಿನ ನಾವು ಕಲ್ತು, ನಮ್ಮ ಮನೆಮಾತಿನ ಶೆಬ್ದಂಗಳ ಅವಕ್ಕೆ ತಿಳುಸುವೊ°..

ವೆಬ್‌ಸೈಟು
http://manadadani.blogspot.com

(edit)

ವಿದ್ವಾನಣ್ಣ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ವಿದ್ಯಾನಿಧಿಂದ ಪ್ರತಿಭಾನ್ವೇಷಣೆಕರ್ಣವೇಧನದ ಸಂದರ್ಭಸಮಸ್ಯೆ:31 ಚಿತ್ರಕ್ಕೆ ಪದ್ಯ (4)ಆಮಂತ್ರಣ ಪುಟ 1ಸರ್ವ ಸುಂದರ, ನವನವೀನ ಪುತ್ತೂರು ಕ್ಷೇತ್ರ!

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME