Oppanna.com

ಪ್ರದೇಶದ ಉತ್ತರಕುಮಾರರ ಅರಾಜಕತೆಗೆ ಯೋಗಿಯೇ ಉತ್ತರ !!

ಬರದೋರು :   ಒಪ್ಪಣ್ಣ    on   24/03/2017    2 ಒಪ್ಪಂಗೊ

ಲೋಕಲ್ಲಿ ಅಧರ್ಮ ಹೆಚ್ಚಪ್ಪಗ ತಾನಾಗಿ ಅವತಾರ ಎತ್ತಿ ಬತ್ತೆ – ಹೇದು ಪರಮಾತ್ಮನೇ ಹೇಳಿದ್ದನಾಡ.
ಹಾಂಗೇ ಆತುದೇ.
ಎಲ್ಲಿ?
ಕಳುದ ವಾರ ಕರ್ನಾಟಕಲ್ಲಿ ಬಜೆಟ್ಟು ಆದ್ಸು ಒಂದು ಕತೆ ಆದರೆ, ಈ ವಾರ ಉತ್ತರ ಪ್ರದೇಶದ್ದು ಇನ್ನೊಂದು ಕತೆ.
ಕರ್ನಾಟಕದ್ದು ಬೇಜಾರದ ಸಂಗತಿ ಆದರೆ, ಉತ್ತರ ಪ್ರದೇಶದ್ದು ಕೊಶಿಯ ಸಂಗತಿ – ಹೇದು ಗುಣಾಜೆ ಮಾಣಿ ವ್ಯಾಖ್ಯಾನ ಮಾಡಿದ°.
~
ಕಳುದ ಕೆಲವು ತಿಂಗಳಿಂದಲೇ ಉತ್ತರ ಪ್ರದೇಶದ ಚುನಾವಣೆ ಚುನಾವಣೆ ಹೇದು ಪ್ರಸಾರ ಇದ್ಸು ನಿಂಗೊಗೆ ಗೊಂತಿಕ್ಕು.
ಅಂತೂ ಇಂತೂ ಮೊನ್ನೆ ಆ ಕಾರ್ಯ ಮುಗಾತು; ಅದಾದ ಮತ್ತೆ ಮತ ಎಣಿಕೆ ಆತು; ಅದಾದ ಮತ್ತೆ ಫಲಿತಾಂಶವೂ ಬಂತು.
ಎಲ್ಲದರಲ್ಲಿಯೂ ಇಡೀ ವಿಶ್ವದ ಗಮನ ಪಡಕ್ಕೊಂಡದು ಉತ್ತರ ಪ್ರದೇಶವೇ.
ಇಷ್ಟನ್ನಾರ ಜಾತಿ ರಾಜಕೀಯ, ಧರ್ಮ ರಾಜಕೀಯ ಮಾಡಿದ ಅಲ್ಯಾಣ ಜನತೆ ಈ ಸರ್ತಿ ಬದಲಾವಣೆ ಬೇಕು, ಅಭಿವೃದ್ಧಿ ಬೇಕು – ಹೇದು ವೋಟು ಹಾಕಿದವಾಡ. ಹಾಂಗೆ ಹಾಕಿದ್ಸರಲ್ಲಿ ಬಂದದು ಮೋದಿ ಅಜ್ಜನ ಪಾರ್ಟಿ.
ಗೆದ್ದರೆ ಮುಖ್ಯಮಂತ್ರಿ ಆರು ಹೇದು ಗೆಲ್ಲುವನ್ನಾರವೂ ಹೇಳಿದ್ದವಿಲ್ಲೆ. ಹಾಂಗಾಗಿ ಮುಖ್ಯಮಂತ್ರಿಯ ಹೆಸರೇ ಇಲ್ಲದ್ದೆ ಗೆದ್ದದು.
ಗೆದ್ದ ಮತ್ತೆಯೇ ಗೊಂತು – ಅಲ್ಯಾಣ ಮುಖ್ಯಮಂತ್ರಿ ಆರು ಅಪ್ಪದೂ ಹೇದು.
ಅದೂ ಗೆದ್ದ ಕೂಡ್ಳೇ ಗೊಂತಾಯಿದಿಲ್ಲೆ; ಗೆದ್ದು ಒಂದು ವಾರ ಕಳುದ ಮತ್ತೆಯೇ ಗೊಂತಾದ್ಸು.
~
ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಆಗಿ ಆಯ್ಕೆ ಆದ್ಸು ಒಂದು ಸಂತ. ನಾಥ ಪಥದ ಯೋಗಿ.
ಹೆಸರು ಯೋಗಿ ಆದಿತ್ಯನಾಥ್ – ಹೇಳಿ.
ಗೋರಖಪುರದ ಗೋರಕ್ಷಾಪೀಠದ ಮಹಂತ ಆ ಯೋಗಿ.
ಇಪ್ಪತ್ತಾರ್ನೇ ಒರಿಶಲ್ಲೇ ಲೋಕಸಭಾ ಸದಸ್ಯ ಆದವಾಡ.
ಅಂದಿಂದ ಇಂದಿನ ಒರೆಗೂ ನಿರಂತರ ಲೋಕಸಭೆಲಿ ಪ್ರಾತಿನಿಧಿತ್ವ ಇದ್ದಾಡ.
ಸಮಾಜ ಸೇವೆಲಿ ಅಷ್ಟು ಅನುಭವ ಇಪ್ಪ ಆ ಸಂತ ಇಂದು ಇಡೀ ರಾಜ್ಯದ ಮುಖ್ಯ ಮಂತ್ರಿ.
~
ಬಂದ ಮರದಿನಂದಲೇ ತೊಡಗಿ, ಇಂದಿನವರೆಗೆ ಕೆಲವು ಮುಖ್ಯಪಟ್ಟ ಆದೇಶ ಹೆರಡುಸಿತ್ತಾಡ.
ಒಂದು – ರಾಜ್ಯದ ಅಕ್ರಮ ಕಸಾಯಿಖಾನೆಗಳ ಎಲ್ಲ ಮುಚ್ಚುಲೆ ಆದೇಶ.
ಎರಡು – ಮಂತ್ರಿಗಳ ಕಾರಿನ ಲೈಟುಗಳ ತೆಗವಲೆ ಆದೇಶ.
ಮೂರು – ಎಲ್ಲಾ ಮಂತ್ರಿ, ಮಾಗಧರ ಆಸ್ತಿ ವಿವರವ ಕೊಡೆಕ್ಕು,
ನಾಲ್ಕು – ಶಾಲೆ ಕೋಲೇಜುಗಳ ಕರೆಲಿ ಹೊತ್ತು ಕಳೆತ್ತಾ ಕೂಪ ಬೆಗುಡು ಜವ್ವನಿಗರ ದಾರಿಗೆ ತಪ್ಪಲೆ ಒಂದು ಸೈನ್ಯ –
ಹೀಂಗಿಪ್ಪ ಹಲವು ಕಾಯಿದೆಗೊ, ಕಾನೂನುಗೊ.
ಒಟ್ಟಿಲಿ, ಬಂದ ಲಾಗಾಯ್ತು ಕೆಟ್ಟವಕ್ಕೆ ನೆಲೆ ಇಲ್ಲೆ – ಹೇಳ್ತ ಹಾಂಗಾತು. ಇಂತಾ ಧೃಢ ಧೈರ್ಯದ ತೀರ್ಮಾನ ತೆಕ್ಕೊಳೆಕ್ಕಾರೆ ನಿಸ್ವಾರ್ಥ ರಾಜಕಾರಣಿಯೇ ಆಯೆಕ್ಕಷ್ಟೆ.
ನಾಥಪಂಥ ಬೆಳದ್ದದೇ ಲೋಕಲ್ಲಿ ಧರ್ಮಸ್ಥಾಪನೆಗೆ! ಈ ಆದಿತ್ಯನಾಥ ಲೋಕನಾಥನೇ ಅಪ್ಪದರಲ್ಲಿ ಸಂಶಯ ಇಲ್ಲೆ.
~
ಅದೆಲ್ಲದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರವೇ – ಅಯೋಧ್ಯಾ ಗಲಾಟೆ.
ಹಲವು ತಲೆಮಾರುಗಳಷ್ಟು ಹಳೆ ವಿಚಾರವ ಈಗ ಪುಣಾ ಜೀವಕೊಟ್ಟು, ಒಂದರಿಂಗೇ ಮುಗುಶುವ ಬಗ್ಗೆ ಪ್ರಯತ್ನಂಗೊ ನೆಡೆತ್ತಾ ಇದ್ದು. ಈ ಕಾಲಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಒಬ್ಬ° ರಾಮಭಕ್ತನೇ ಬಂದ್ಸು ತುಂಬಾ ಒಳ್ಳೆ ಸಂಗತಿ.
ರಾಮ ಜನ್ಮ ಭೂಮಿಲಿ ರಾಮ ಮಂದಿರವ ಬೇಗ ಕಾಂಬಲೆ ಈ ರಾಮ ಭಕ್ತನಿಂದ ಸಾಧ್ಯ ಆಗಲಿ – ಹೇಳ್ತದು ಎಲ್ಲೋರ ಆಶಯ.
~
ಉತ್ತರ ಪ್ರದೇಶಲ್ಲಿ ಮೊನ್ನೆ ಒರೆಗೆ ಇದ್ದ ಉತ್ತರ ಕುಮಾರನ ರಾಜ್ಯಾಡಳಿತ ಮುಗುದು, ಈಗ ಯೋಗ್ಯ ಆಡಳಿತ ಬಯಿಂದು.
ಇದು ಯೋಗ್ಯ ಸರಕಾರಲ್ಲಿ ಯೋಗ್ಯ ಅಭಿವೃದ್ಧಿಯ ಕೊಡಲಿ – ಹೇಳುದು ನಮ್ಮೆಲ್ಲರ ಆಶಯ.
~
ಒಂದೊಪ್ಪ: ರಾಮನ ಮಂದಿರ ಕಟ್ಳೆ ಬೇಕಾದ ಸೇವಕರ ರಾಮನೇ ಹುಡ್ಕಿ ತಕ್ಕು.

2 thoughts on “ಪ್ರದೇಶದ ಉತ್ತರಕುಮಾರರ ಅರಾಜಕತೆಗೆ ಯೋಗಿಯೇ ಉತ್ತರ !!

  1. ಯೋಗಿ ಎಂತ ಮಾಡುತ್ತಾ ಹೇಳಿ ಇಡೀ ದೇಶವೇ ನೋಡುತ್ತಾ ಇದ್ದು. ಆದಷ್ಟೂ ವಿವಾದಕ್ಕೆ ಎಡೆ ಕೊಡದ್ದೆ ರಾಜ್ಯಭಾರ ಮಾಡಲಿ

  2. ಲಾಯಕ್ ಆಯಿದು. ವಿವರ ಇನ್ನುದೇ ಬೇಕಿತ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×