Oppanna.com

ಗೋಧ್ರಾ ಹತ್ಯೆ ತೀರ್ಪು ಬಪ್ಪಗ ಗೋಹತ್ಯೆಯೂ ನೆಂಪಾತು!

ಬರದೋರು :   ಒಪ್ಪಣ್ಣ    on   25/02/2011    55 ಒಪ್ಪಂಗೊ

ಸುಮಾರು ಸಮೆಯ ಆತು ಈ ಶುದ್ದಿ ಮಾತಾಡೇಕು ಗ್ರೇಶುದು, ಸಮಗಟ್ಟು ಸಮಯ ಸಿಕ್ಕದ್ದೆ ಬಾಕಿ ಒಳ್ತು.
ಈ ಸರ್ತಿ ರಜ ಪುರುಸೊತ್ತು ಆತದಾ..
~
ಮೊನ್ನೆ ಎಂತಾತು ಹೇಳಿತ್ತುಕಂಡ್ರೆ, ಮೂರ್ಸಂದೆಗೆ ಗುಣಾಜೆಕುಂಞಿ ಸಿಕ್ಕಿದ°.
ಸೂರಂಬೈಲಿನ ದೊಡ್ಡಮಾರ್ಗದ ಹತ್ತರೆ ದೊಡ್ಡಬೇಗಿನ ಕರೆಲಿ ಕಡ್ಳೆ ತಿಂದುಗೊಂಡು ನಿಂದುಗೊಂಡಿತ್ತಿದ್ದ°.
ಬೆಂಗುಳೂರಿಂಗೆ ಹೋವುತ್ತ ಸುಗಮಕ್ಕೆ ಟಿಕೇಟು ಮಾಡಿದ್ದನಾಡ.
ಮಾರ್ಗದಕರೆ ಒರೆಂಗೆ ಮನೆಂದ ಬೆಳಿವೇನಿಲಿ ತಂದುಬಿಟ್ಟಿದವು ಆಗಳೇ, ಇನ್ನೊಂದು ರಜ ಹೊತ್ತಿಲಿ ಬಸ್ಸು ಬಕ್ಕು.
ಹಾಂಗಾಗಿ ಈಗ ಅಪುರೂಪಲ್ಲಿ ಪುರುಸೊತ್ತೇ!

ಕರ್ನಾಟಕಲ್ಲಿ ಇದ್ದರೆ ಅವಂಗೆ ಮೊಬೈಲು ಪೋನುಗೊ ಬತ್ತಾ ಇರ್ತು, ಪುರುಸೊತ್ತಿಲ್ಲದ್ದೆ. ಕೇರಳಲ್ಲಿಪ್ಪಗ ಬತ್ತಿಲ್ಲೆ ಹೇಳಿ ಇಲ್ಲೆ, ಬತ್ತು.
ಆದರೆ – ಶೋಬಕ್ಕಂದೋ ಮಣ್ಣ – ತೀರಾ ಅಂಬೆರ್ಪಿಂದು ಆದರೆ ಮಾಂತ್ರ ಪೋನು ತೆಗವದು. ಅಲ್ಲದ್ದರೆ ಬಚ್ಚಿ ನಿಂಬಂನ್ನಾರ ರಿಂಗು ಅಕ್ಕು.
ಅತವಾ – ಬಚ್ಚುವನ್ನಾರ ರಿಂಗಾದರೆ ಮಾಣಿ ಕೇರಳಲ್ಲಿದ್ದ° ಹೇಳಿ ನಂಬಿಕೆ ಬೈಲಿಲಿ ನೆಡೆತ್ತಾ ಇದ್ದು!
ಅದಿರಳಿ,
ಅಂತೇ ಕೂದಂಡು ಹೊತ್ತು ಕಳೆತ್ತದು ಹೇಳಿರೆ ಅವಂಗೆ ಇಷ್ಟ ಆಗದ್ದ ಜೆಂಬಾರ – ಹಾಂಗೆ ರಜ ಕಡ್ಳೆ ಆದರೂ ಕಾಲಿಮಾಡುವೊ° – ಹೇಳಿ ಹೆರಟಿತ್ತಿದ್ದ°.

ಹೊತ್ತಿದ್ದು ರೈಲು - ಕೆಂಡ ಆದ್ದು ಸಮಾಜ!

~
ಅದೇ ದಿನ ಮದ್ಯಾನಕ್ಕೆ ಪಾಲಾರಣ್ಣ ಅಪುರೂಪಲ್ಲಿ ಮನಗೆ ಬಂದಿತ್ತ – ಹೊಸಾ ಬೈಕ್ಕಿಲಿ.
ಬೆಶಿಲಿಂಗೆ ಒರಗಿ, ಹೊತ್ತೋಪಗಾಣ ಆಸರಿಂಗೆ ಕುಡುದು ಹೆರಡ್ಳಪ್ಪಗ ಅವನೊಟ್ಟಿಂಗೆ ಸಂಗಾತಕ್ಕೆ ಸೂರಂಬೈಲು ಒರೆಂಗೆ ಕೂದೊಂಡೆ.
ಬಪ್ಪಗ ರಜ ಛಾಯದಹೊಡಿಯುದೇ ತರೆಕ್ಕಾತು, ಮನೆಲಿ ಮುಗುದಿತ್ತಿದ್ದು.
ಹಾಂಗೆ ಮತ್ತೆ, ಬಂದೋರ ಕಳುಸಿಕೊಡ್ಳೆ ಒಟ್ಟಿಂಗೆ ಹೋವುತ್ತದು ಕ್ರಮವೇ ಅಲ್ಲದೋ?! 😉

ದಡಭಡನೆ ಪಾರೆಗುಡ್ಡೆಲಿ ಬೈಕ್ಕು ಬಿಟ್ಟೊಂಡು ಮಣ್ಣುಮಾರ್ಗಂದ ಕಪ್ಪುಮಾರ್ಗಕ್ಕೆ ಎತ್ತಿತ್ತು.
ಒಪ್ಪಣ್ಣ ಬೈಕ್ಕಿಂದ ಇಳುದು ಪಾಲಾರಣ್ಣಂಗೆ ಟಾಟ ಮಾಡುವಗ – ಗುಣಾಜೆಕುಂಞಿಯ ಕಂಡತ್ತು, ಇಬ್ರಿಂಗೂ.
ಅಪುರೂಪಲ್ಲಿ ಸಿಕ್ಕುದಲ್ಲದೋ – ಮಾತಾಡುವೊ ಹೇಳಿಗೊಂಡು ಪಾಲಾರಣ್ಣಂದೇ ಬೈಕ್ಕು ನಿಲ್ಲುಸಿದ.
– ಹಾಂಗೆ ಮೂರೂ ಜೆನ ಮಾತಾಡಿಗೊಂಡು ನಿಂದೆಯೊ°.
~
ಗುಣಾಜೆಕುಂಞಿಯ ಪರಿಚಯ ಬೈಲಿಂಗೆ ಇದ್ದಲ್ಲದೋ?
ಅವ ಕೊಶಿಲಿ ಇದ್ದರೆ ಕರ್ಣ; ಕೋಪಲ್ಲಿದ್ದರೆ ಅಭಿಮನ್ಯು – ಹೇಳಿ ಒಂದೊಂದರಿ ಬುಲ್ಲೇಟುಮಾವ ಬೀರಂತಡ್ಕಲ್ಲಿ ನೆಗೆಮಾಡ್ಳಿದ್ದು.
ಮೊನ್ನೆ ಕೊಶಿಲೇ ಇತ್ತಿದ್ದ°. ಆ ಲೆಕ್ಕಲ್ಲಿ ಒಂದೊಂದು ಮುಷ್ಠಿ ಕಡ್ಳೆಯ ಕೈ ಎತ್ತಿ ದಾನ ಮಾಡಿದ°, ಇಬ್ರಿಂಗೂ.
ಅದಿರಳಿ,
ಆದಿನ ಕೊಶಿಲಿ ಇದ್ದದಪ್ಪು – ಎಂತ ಮಾತಾಡಿರೂ, ಏನು-ಒಳ್ಳೆದು ಮಾತಾಡುಸಿರೂ ಗುಣಾಜೆಕುಂಞಿಗೆ ಒಂದು ಕೊಶಿಯ ವಿಶಯ ಮಾಂತ್ರ ತಲೆಲಿ!
ಅದೆಂತರ?
~
ಸುಮಾರೊರಿಶ ಹಿಂದೆ, ಅಡಕ್ಕಗೆ ಇನ್ನೂರು ಕ್ರಯ ಇದ್ದಿದ್ದ ಕಾಲಲ್ಲಿ ಗುಜರಾತಿಲಿ ಒಂದು ಗಲಾಟೆ ಆಗಿತ್ತು!
ನೆಂಪಿದ್ದೋ? ಗೋಧ್ರಾ ಹೇಳ್ತಲ್ಲಿ ಒಂದು ರೈಲಿನ ಹೊತ್ತುಸಿದ್ದು.
ಆ ಪ್ರಯುಕ್ತ, ಅಂದಿಂದ ಕೋರ್ಟಿಲಿ ನೆಡಕ್ಕೊಂಡು ಇದ್ದಿದ್ದ ನಂಬ್ರದ ತೀರ್ಪು ಮೊನ್ನೆ ಬಂತಾಡ.
ರೈಲು ಹೊತ್ತುಸಿದ ವಿದ್ರೋಹಿಗೊಕ್ಕೆ ಶಿಕ್ಷೆಕೊಟ್ಟು ತೀರ್ಪು ಹೆರಡುಸಿದ್ದರ್ಲಿ ಹತ್ತುಮೂವತ್ತು ಜೆನ ಅಪರಾಧಿಗೊ ಒಳ ಕೂಪ ಹಾಂಗೆ ಆಯಿದಡ.
ತೀರ್ಪು ಬಂದದು ಕೊಶಿಯ ವಿಚಾರವೇ. ತಪ್ಪು ಮಾಡಿದೋರಿಂಗೆ ಶಿಕ್ಷೆ ಅಪ್ಪ ನಮುನೆಯ ತೀರ್ಪುದೇ ಕೊಶಿ.
ನಿಜವಾಗಿ ನೋಡಿರೆ, ಗುಣಾಜೆಕುಂಞಿಯ ಯೋಚನೆಯ ಹಾಂಗೆ ತೀರ್ಮಾನ ಬಂದದೇ ಅವನ ದೊಡ್ಡ ಕೊಶಿಗೆ ಕಾರಣ!
~
ಸರ್ಪಮಲೆ ಮಾವ° ಅಂದೊಂದರಿ ಜೋರುಮಾಡಿದ ಮತ್ತೆ ಅಂತೂ ಬೈಲಿಲಿ ಆರಾರು ಮಾತಾಡುವಗ ರಾಜಕೀಯ ವಿಷಯ ಬಂದರೆ ಎನ್ನದು ಕೆಮಿಯೇ ಅಲ್ಲ ಹೇಳಿಗೊಂಡು ಒಪ್ಪಣ್ಣ ಕರೆಲಿ ನಿಂಬದು! 😉
ನಮ್ಮಂದ ಆಗದ್ದರ ನಾವು ಮಾಡ್ಳೆ ಹೋಪಲಿಲ್ಲೆ – ಅದಕ್ಕೆ ಹೇಳಿಯೇ ಗುಣಾಜೆಕುಂಞಿಯ ಹಾಂಗೆ ಸಮರ್ಥರು ಇದ್ದವು, ನಾವೆಂತಕೆ!
ಅಲ್ಲದೋ?
ಆದರೆ ಪಾಲಾರಣ್ಣಂಗೆ ಮಾತಾಡುದಕ್ಕೆ ಎಂತದೂ ಹೆದರಿಕೆ ಇಲ್ಲೆ, ಗುಣಾಜೆಕುಂಞಿಯ ಹತ್ತರೆ ಬಾಯಿಗೆಬಾಯಿ ಮಾತಾಡ್ತ, ರಾಜಕೀಯ ಬಂದಪ್ಪಗ!!
ಅವಂಗೂ ಇದರ ಬಗ್ಗೆ ರಜಾ ಅರಡಿಗು. ಗುಣಾಜೆಕುಂಞಿಯಷ್ಟು ಜಾಸ್ತಿ ಅಲ್ಲ, ಕಮ್ಮಿಯೇ!
ಉದಾಹರಣಗೆ, ಈ ಗಲಾಟೆ ಆದ ವಿಷಯ, ಅದರ ಹಿನ್ನೆಲೆ – ಮುನ್ನೆಲೆ, ವಾಯಿದೆ, ವಿಚಾರಣೆ – ಪ್ರತಿಯೊಂದುದೇ ಗುಣಾಜೆಕುಂಞಿಗೆ ಅರಡಿಗು. ಪಾಲಾರಣ್ಣಂಗೆ ಬರೇ ಹಿನ್ನೆಲೆ- ತೀರ್ಪು ಮಾಂತ್ರ ಅರಡಿಗು ಅಷ್ಟೆ. 😉 🙁
~
ಬೇರೆ ವಿಶಯ ನುಗ್ಗುಲುದೇ ಸಾಧ್ಯ ಇಲ್ಲೆ – ಹೇಳ್ತ ವೆವಸ್ತೆಲಿ ಪಾಲಾರಣ್ಣಂದೇ ಅನಿವಾರ್ಯವಾಗಿ ಅದೇ ವಿಶಯ ಮಾತಾಡಿದ°.
ಅವಿಬ್ರುದೇ ಅಲ್ಯಾಣ ರಾಜಕೀಯ, ನ್ಯಾಯಾಂಗ ವೆವಸ್ತೆಯ ಬಗ್ಗೆ ಮಾತಾಡ್ಳೆ ಸುರುಮಾಡಿದವು.
ಕಡ್ಳೆ ತಿಂಬಗಳೂ ಒಂದು ದೊಡ್ಡ ಆವಳಿಗೆ ಬಂತು!
ಮಸಾಲೆಕಡ್ಳೆ ರಜಾ ಕಸಂಟಿದ್ದ ಹಾಂಗೆ ಅನುಸುಲೆ ಸುರು ಆತು ಒಪ್ಪಣ್ಣಂಗೆ
~
ರಾಜಕೀಯ ಹೇಳಿರೆ – ಬರೇ ರಾಜಕೀಯ ಅಲ್ಲ, ರಜ ಮಾನವೀಯತೆಯ ಮಾತುಕತೆಯುದೇ ಬಂದುಗೊಂಡಿತ್ತು ಅವರ ನೆಡುವಿಲಿ.
ಯೇವದೇ ಆಗಿರಳಿ, ವಿಶಯದ ಬಗ್ಗೆ ನಿಷ್ಪಕ್ಷಪಾತವಾಗಿ ಯೋಚನೆ ಮಾಡ್ತ ವಿಚಾರವಾದ ಪಾಲಾರಣ್ಣಂಗಿದ್ದು.
– ಅವ° ಹೇಳಿರೆ ಮತ್ತೆ ಅದು ಯೋಚನೆ ಮಾಡೇಕಾದ ವಿಶಯವೇ.
ಅವ° ಹೇಳಿದ್ದರಲ್ಲಿ ಇರ್ತ, ರಾಜಕೀಯ ವಿಶಯಂಗಳ ಬಿಟ್ಟು, ಒಳುದ ವಿಶಯಂಗಳ ರಜ ರಜ ಕೇಳಿಗೊಂಡಿದೆ.
ನೆಂಪಾದಷ್ಟು ಈಗ ಹೇಳ್ತೆ.
~
ಹಿನ್ನೆಲೆ:
ಪೆಬ್ರವರಿ ಇಪ್ಪತ್ತೇಳು, 2002ರ ಉದೆಕಾಲಕ್ಕೆ ಸಾಬರ್ಮತಿ ಎಕ್ಸುಪ್ರೆಸ್ಸು ಗೋಧ್ರಾ ಹೇಳ್ತ ಊರಿಲೆ ಆಗಿ ಬಂದುಗೊಂಡಿತ್ತು.
ಆ ರೈಲಿಲಿ, ಅಯೋಧ್ಯೆಂದ ತಿರುಗಿ ಮನಗೆ ಹೆರಟ ರಾಮಸೇವಕರು ಇತ್ತಿದ್ದವಡ.
ಅವು – ಅಯೋಧ್ಯೆಲಿ ಆಯೋಜನೆ ಮಾಡಿದ ವಿಶ್ವಹಿಂದು ಪರಿಷತ್ತಿನ ಒಂದು ಸಮಾವೇಶಕ್ಕೆ ಹೋಗಿ ಬತ್ತವು.

ಆ ರೈಲಿಲಿ ಕರಸೇವಕರು ಇಪ್ಪದರ ನಿಗಂಟುಮಾಡಿಗೊಂಡ ಕೆಲವು ಧರ್ಮಾಂಧ ವಿದ್ರೋಹಿ ಮಾಪಳೆಗೊ ಕೇನು ತುಂಬ ಪೆಟ್ರೋಲು ತೆಗದುಮಡಗಿ ತೆಯಾರು ಮಡಗಿತ್ತಿದ್ದವಡ.
ರೈಲು ಬಂದು ಬಂದು ಗೋಧ್ರಾ ಊರಿಂಗೆ ಎತ್ತುವಗ ಅದಾ, ಅವರ ಧರ್ಮಾನುಸಾರ ಮಾಡ್ಳೆಡಿಗಾದ ಅತ್ಯಂತ ನಾಗರೀಕ ಕೆಲಸ ಮಾಡಿಬಿಟ್ಟವು!

ರೈಲಿನ ಬೋಗಿಗೆ ಹೆರಾಂದ ಬಾಗಿಲು ಹಾಕಿದವು,
ಬೀಗ ಜಡುದವು,
ಕಿಟುಕಿಲೆ ಆಗಿ ಬಸಲ್ಲನೆ ಪೆಟ್ರೋಲು ಎರದು,
ಕಿಚ್ಚು ಕೊಟ್ಟು ಓಡಿದವು. 🙁
~

ನೋಡ್ತಾ ನೋಡ್ತಾ ಇದ್ದ ಹಾಂಗೆ, ಒಳವೇ ಇದ್ದ ಎಷ್ಟೋ ಅಣ್ಣಂದ್ರು – ಅಕ್ಕಂದ್ರು- ಅಮ್ಮಂದ್ರು ಕಿಚ್ಚಿನ ಭಾಗ ಆಗಿ ಹೋದವು.
ಚೈನು ಎಳದು ರೈಲು ನಿಲ್ಲುಸುಲೆ ಹೆರಟರೂ ಗುಣ ಆಯಿದಿಲ್ಲೆಡ, ಎಂತಕೆ ಹೇಳಿರೆ ಚೈನು ಮದಲೇ ತುಂಡುಮಾಡಿತ್ತಿದ್ದವು.
ರೈಲು ಹೋವುತ್ತಾ ಇತ್ತು, ಗಾಳಿಗೆ ಕಿಚ್ಚು ಬೇಗ ದೊಡ್ಡ ಆತು.
ಅತ್ಲಾಗಿತ್ಲಾಗಿಯಾಣ ಬೋಗಿಗೊಕ್ಕುದೇ ಹಿಡ್ಕೊಂಡತ್ತು.
ಬೋಗಿಗೆ ಬಾಗಿಲು! ಕಿಟುಕಿಂದ ಹಾರ್ಲೆ ಜಾಗೆ ಇಲ್ಲೆ. ಅಂಬೆರ್ಪು ಬಾಗಿಲಿಂದ ಕುತ್ತಕಂಡೆ ಹಾರ್ಲೆ ರೈಲು ಜೋರು ಹೋವುತ್ತಾ ಇದ್ದು!
ಎಂತರ ಮಾಡುದು?
ಮಾಡುದೆಂತ – ರಾಮಸ್ಮರಣೆ ಮಾಂತ್ರ! 🙁
ರಾಮಂಗಾಗಿಯೇ ಅಯೋಧ್ಯಗೆ ಹೋದ ರಾಮಸೇವಕರು ರಾಮನ ಪಾದಕ್ಕೇ ಹೋದವು.
ಬಾಕಿ ಒಳುದ ಎಡಿಗಾದಷ್ಟು ಜೆನ ಜೀವ ಒಳಿಶಿಗೊಂಡು ರಾವಣ ಸಂಹಾರಕ್ಕೆ ತಯಾರಾದವು.

ಪಾಲಾರಣ್ಣ ಇದರ ಹೇಳುವಗ ಗುಣಾಜೆಕುಂಞಿಗೆ ಒಳ್ಳೆತ ಪಿಸುರು ಬಂದು ಅಭಿಮನ್ಯು ನಮುನೆ ಕಂಡುಗೊಂಡಿತ್ತು!
ಕಡ್ಳೆ ಅದಾಗಲೇ ಕೊಟ್ಟಾದ ಕಾರಣ ಪುನಾ ತೆಕ್ಕೊಂಡಿದನಿಲ್ಲೆ, ಅಷ್ಟೆ.
~

ಪೆಟ್ರೋಲು ಎರದರೆ ಒಂದು ಬೋಗಿ ಹೊತ್ತುಗು, ನಿಜ.
ಆದರೆ ಇಡೀ ಸಮುದಾಯವನ್ನೇ, ಇಡೀ ಸಮುದಾಯದ ನಂಬಿಕೆಯನ್ನೇ, ಸಮುದಾಯದ ಹೋರಾಟವನ್ನೇ ಹೊತ್ತುಸಲೆ ಎಡಿಗೋ?
ಎಬೆ, ಸಾಧ್ಯವೇ ಇಲ್ಲೆ!
ಹಾಂಗೇ ಆತುದೇ.
ಇಡೀ ಊರಿಂಗೆ ಊರೇ ಒರಕ್ಕಿಂದ ಎದ್ದತ್ತು.
ಪೆಟ್ರೋಲು ತಂದವ°, ಪೆಟ್ರೋಲು ಎರದವ°, ಬಾಗಿಲು ಹಾಕಿದವ°,ಬೀಗ ಹಾಕಿದವ°, ಕಿಚ್ಚು ಕೊಟ್ಟವ° – ಎಲ್ಲರನ್ನುದೇ ಹುಡ್ಕಲೆ ಸುರು ಮಾಡಿದವು. ರಜ ಗಲಾಟೆ ಆತು, ಪೆಟ್ಟುಗುಟ್ಟು ಆತು.
ಒಂದರಿಂಗೆ ಸಮಾಜ ಮಡೀ ಆತು.
ಮುಳಿಯಬಾವ ಬೌಶ್ಶ ಊರಿಂಗೆ ಬಂದಾಗಿತ್ತೋ ಸಂಶಯ, ಆ ಸಮೆಯಲ್ಲಿ!
ಅಷ್ಟಪ್ಪಗ ಶಾಂತಿ ಶಾಂತಿ ಹೇಳಿಗೊಂಡು ಸುಮಾರು ಜೆನ ಬಂದವು, ಹಿಂದುಗೊ ಅಶಾಂತಿ ಮಾಡುದರ ಬಗ್ಗೆ ಲೋಕ ಇಡೀ ಶುದ್ದಿ ಮಾಡಿದವಡ! ಅದು ಬೇರೆ!!
ಆ ಬಗ್ಗೆ ಪಾಲಾರಣ್ಣ ತುಂಬ ಹೇಳಿದ°, ಅದರ ಬಗ್ಗೆ ಬರದರೆ ಅದುವೇ ಒಂದು ರಾಜಕೀಯ ಶುದ್ದಿ ಅಕ್ಕು.
ನೀರ್ಕಜೆ ಅಪ್ಪಚ್ಚಿಯೋ, ಪೆರ್ಲದಣ್ಣನೋ, ಗುಣಾಜೆಕುಂಞಿಯೋ ಮಣ್ಣ ಆ ಶುದ್ದಿ ಹೇಳುಗು ನಿದಾನಕ್ಕೆ.
~

ಸುಮಾರು ಒಂಬತ್ತೊರಿಶ ನೆಡದ ದೀರ್ಘ ವಿಚಾರಣೆಲಿ ಮೊನ್ನೆ ಸತ್ಯ ಹೆರಬಿದ್ದತ್ತಾಡ!
ಮೂವತ್ತೊಂದು ಜೆನ ಸೇರಿ ಕಿಚ್ಚುಕೊಟ್ಟದಪ್ಪು, ಪೆಟ್ರೋಲು ಎರದ್ದಪ್ಪು, ಬಾಗಿಲು ಹಾಕಿದ್ದಪ್ಪು, ಬೀಗ ಹಾಕಿದ್ದಪ್ಪು – ಹೇಳಿ.
ಈ ಸತ್ಯ ಕೋರ್ಟಿಂಗೆ ಮೊನ್ನೆ ಗೊಂತಾದ್ದು, ಆದರೆ ಗುಣಾಜೆಕುಂಞಿಗೆ ಒಂಬತ್ತೊರಿಶ ಮೊದಲೇ ಗೊಂತಾಗಿತ್ತು.
ಅವಂಗೆ ಗೊಂತಾದ ಶುದ್ದಿಯೇ ಈಗ ಕೋರ್ಟಿಂಗೆ ಗೊಂತಾದ ಕಾರಣ ಅವಂಗೆ ಅಷ್ಟೊಂದು ಕೊಶಿ!!
~
ಮಾತಾಡಿಗೊಂಡು ಇದ್ದ ಹಾಂಗೇ ಹೋರ್ನು ಬಡ್ಕೊಂಡು ಬುರುಬುರುನೆ ಬಂದೇಬಿಟ್ಟತ್ತು ಬೆಂಗುಳೂರು ಬಸ್ಸು!
ಅಟ್ಟಿನಳಗೆಯಷ್ಟಕೆ ಎರಡು ಬೇಗಿನ ಎತ್ತಿ ಬಸ್ಸಿನೊಳಂಗೆ ಹಾಕಿಕ್ಕಿ, ಬೆಂಗುಳೂರಿನ ಹೊಡೆಂಗೆ ದಿಬ್ಬಾಣ ಹೆರಟ°!
ಒಪ್ಪಣ್ಣನನ್ನೂ ಒಂದರಿ ಬೆಂಗುಳೂರಿಂಗೆ ಬಪ್ಪಲೆ ಹೇಳುಲೆ ಮರದ್ದನಿಲ್ಲೆ!
ಈಗ ಆಗ, ಇನ್ನೊಂದರಿ ಬೆಂಗುಳೂರಿಂಗೆ ಹೋಯೆಕ್ಕು, ಪುರುಸೋತಿಲಿ – ಮಳೆಗಾಲ. ಅದಿರಳಿ
~

ಬೌಶ್ಷ ಬಸ್ಸಿಲಿ ಸಮಗಟ್ಟು ಒರಕ್ಕೇ ಬಂದಿರ ಅವಂಗೆ, ಅಲ್ಲದೋ?
ಸುಗಮಲ್ಲಿ ಅಲ್ಲದ್ದರೂ ಒರಕ್ಕು ಬಪ್ಪದು ಕಮ್ಮಿ ಅಡ, ಅದರ ಮೇಗೆ ಒಂಬತ್ತೊರಿಶ ಒರಕ್ಕು ಕೆಟ್ಟು ಕಾದ್ದಕ್ಕೆ ಉತ್ತರಬಂದ ಕೊಶಿ!
ಮರದಿನ ಬೆಂಗುಳೂರಿಂಗೆ ಎತ್ತಿದ ಕೂಡ್ಳೇ, ದ್ರಾಕ್ಷೆಗೊಂಚಲಿನ ದೊಡ್ಡ ಕಟ್ಟ ತಂದು ಎಲ್ಲೋರಿಂಗೂ ಕೊಶಿ ಹಂಚಿಗೊಂಡಿದನಡ, ಎಡಪ್ಪಾಡಿಬಾವ ಹೇಳಿದ°.
ಅಷ್ಟು ಮಾಡದ್ದರೆ ಅವಂಗೆ ಸಮದಾನವುದೇ ಆವುತಿತಿಲ್ಲೆ, ಅದು ಬೇರೆ.
~
ಗೋಧ್ರಾ ಹತ್ಯೆದು ಮಾಂತ್ರ ತೀರ್ಪು ಬಂದದು, ಅದರಿಂದ ಮತ್ತೆ ಆದ ಗಲಾಟೆಯ ಬಗ್ಗೆ ಎಂತದೂ ತೀರ್ಮಾನ ಬಯಿಂದಿಲ್ಲೆ.
ಬಂದ ಮತ್ತೆ ದೊಡ್ಡ ಗಲಾಟೆ ಅಪ್ಪಲಿದ್ದು – ಹೇಳಿ ಪಾಲಾರಣ್ಣ ನೆಂಪು ಹೇಳಿದ°.
ಅಷ್ಟಪ್ಪದ್ದೇ, ಬರಕ್ಕನೆ ಬೈಕ್ಕು ಎಳಗುಸಿ ಇನ್ನೊಂದರಿ ಕಾಂಬ° ಹೇಳಿಗೊಂಡು ಅವನ ಊರಿನ ಹೊಡೆಂಗೆ ಹೆರಟ°.
ಆನಂದನ ಅಂಗುಡಿಂದ ಛಾಯದೊಡಿ ಕಟ್ಟ ತೆಕ್ಕೊಂಡು ಬೈಲಿಂಗೆ ಇಳುದೆ.
~
ಕಸಂಟಿದ್ದು ಕಡ್ಳೆಯೋ, ಅಲ್ಲ ಹೆರಾಣ ಮಸಾಲೆಯೋ ಹೇಳಿ ಕನುಪ್ಯೂಸು ಬಪ್ಪಲೆ ಸುರು ಆತು ಒಪ್ಪಣ್ಣಂಗೆ!
ರಾಜಕೀಯ ನವಗರಡಿಯ. ಆದರೆ ಚಿಂತನೆಗೊ ಅರ್ತ ಅಕ್ಕು.
ನೆಡಕ್ಕೊಂಡು ಹೋಪಗಳೂ ಇದೇ ಆಲೋಚನೆ!
ಯಬ, ಬೋಗಿಯೊಳದಿಕ್ಕೆ ಇದ್ದ ಹೆಮ್ಮಕ್ಕೊ, ಅವರ ಒಟ್ಟಿಂಗೆ ಆಟಾಡುವ ಅವರ ಮಕ್ಕೊ..
ಎಲ್ಲೋರುದೇ ಇದ್ದ ಹಾಂಗೇ.. ಬಾಗಿಲು ಹಾಕಿ, ಬೀಗ ಜಡುದು,
ಹೆರಂದ ತಂಪು ಪೆಟ್ರೋಲು ಎರದು, ಬೆಶಿ ಕಿಚ್ಚುಕೊಟ್ಟು..
ಯಬ!
ಎಂತ ಕ್ರೂರತೆ!

ವಿಶೇಷ – ಹೇಳಿತ್ತುಕಂಡ್ರೆ, “ಇದರ ಆರೂ ಮಾಡಿದ್ದಲ್ಲ” ಹೇಳಿ ಲಲ್ಲು ಹೇಳಿದ್ದಡ..!
ಆರಾರು ಮಾಡದ್ದೆ ಹಾಂಗೆ ಅಪ್ಪಲಿದ್ದೋ?  – ಆದರೂ ಆರೋ ಮಾಡಿದ್ದು ಹೇಳಿ ತೀರ್ಮಾನ ಅಪ್ಪಲೆ ಒಂಬತ್ತೊರಿಶ ಬೇಕಾತದ!
ಅದರ್ಲಿಯೂ ಬರೇ ಮೂವತ್ತು ಜೆನಕ್ಕೆ ಮಾಂತ್ರ ಶಿಕ್ಷೆ ಅಡ, ಒಳುದೋರಿಂಗೆ “ರುಜುವಾತಿಲ್ಲೆ” ಹೇಳಿ ಬಿದ್ದು ಹೋತಡ.

ಸರಿಯಾದ ತೀರ್ಮಾನ ಕೊಡ್ಳೆ ನಮ್ಮ ಕೋರ್ಟಿಂದ ಆಯಿದಿಲ್ಲೆ, ಮೇಗೆ ಇಪ್ಪ ಭಗವಂತನ ಕೋರ್ಟು ಇತ್ಯರ್ಥ ಮಾಡುಗು!
ಆದರೆ ಅದು ಯೇವಕಾಲಕ್ಕೋ ಏನೋ!
~
ಹೇಳಿದಾಂಗೆ,
ಕೋರ್ಟು ಹಾಂಗೆ ಹೇಳಿದ್ದು ಗುಣಾಜೆಕುಂಞಿಗೆ ಗೊಂತಾದ ಮರದಿನ ಪೇಪರಿನೋರಿಂಗೂ ಗೊಂತಾಯಿದು ಆ ಶುದ್ದಿ.
ಗೋಧ್ರಾ ಹತ್ಯೆ ತೀರ್ಮಾನ ಬಂದದರ ಎಲ್ಲಾ ಪೇಪರಿನೋರು ದೊಡ್ಡಕ್ಷರಲ್ಲಿ ಬರದಿತ್ತಿದ್ದವು.
ತರವಾಡುಮನೆಲಿ ಹೊಸ್ದಿಂಗತ ಓದುವಗ ಪಾಲಾರಣ್ಣ ಹೇಳಿದ್ದು ಕಣ್ಣಿಂಗೆ ಕಟ್ಟಿದ ಹಾಂಗೆ ಆಗಿ ಹೋತು! 🙁
~
ಗೋಧ್ರಾ ಹತ್ಯೆ ತಪ್ಪು ಹೇಳಿ ಕೋರ್ಟು ಹೇಳಿತ್ತು.
ಅಮಾಯಕ ಜೆನಂಗಳ ಬೋಗಿ ಒಳದಿಕ್ಕೆ ಸಿಕ್ಕುಸಿ, ಹೆರಂದ ಕಿಚ್ಚುಹಾಕಿ ಅಲ್ಲೇ ನಾಶ ಮಾಡಿದ್ದು!
ಇದು ತಪ್ಪಡ..
ಭಾಗಿ ಆದೋರ ಬಗ್ಗೆ, ರುಜುವಾತು ಇಪ್ಪೋರ ಬಗ್ಗೆ, ಪಿತೂರಿಯ ಬಗ್ಗೆ – ಎಲ್ಲವೂ ತೀರ್ಮಾನ ಆತು ಮೊನ್ನೆ.

ದನ ಇಕ್ಕುಳಲ್ಲಿ - ಸಮಾಜ ಇಕ್ಕಟ್ಟಿಲಿ

ಅಂಬಗ ಗೋಹತ್ಯೆ?
ಅಮಾಯಕ ದನಂಗಳ ಕಟ್ಟಿಹಾಕಿ ಹತ್ಯೆ ಮಾಡ್ತಲ್ಲದೋ?
ಅದರ ತೀರ್ಮಾನ ಅಪ್ಪದು ಯೇವತ್ತು?
ಎಷ್ಟು ಜೆನ ಭಾಗಿ ಆಗಿರ್ತವು?
ಆರದ್ದೆಲ್ಲ ರುಜುವಾತಿಕ್ಕು? ಶ್ರೀರಾಮನೇ ಬಲ್ಲ!
~

ಧರ್ಮ ಸರಿ ಇಲ್ಲದ್ದರೂ, ಧರ್ಮದ ಅನುಯಾಯಿಗೊ ಸರಿ ಇಲ್ಲದ್ದರೂ – ಪ್ರಯೋಜನ ಒಂದೇ!
ಮಸಾಲೆ ಕಸಂಟಿರೂ, ಕಡ್ಳೆ ಕಸಂಟಿರೂ – ಗುಣ ಒಂದೇ – ಹೇಳ್ತ ಹಾಂಗೆ.
ಆಧುನಿಕ ಸಮಾಜಲ್ಲಿ ಹೊಂದಿಗೊಂಡು ಹೋವುತ್ತ ಮನಸ್ಸಿಪ್ಪ ಸುಂದರ ಧರ್ಮ ಇಂದ್ರಾಣ ದಿನಲ್ಲಿ ಅಗತ್ಯ ಇದ್ದು.
ಅದೆಡಿಯದ್ರೆ, ಐದು ಸರ್ತಿ ನೆಮಾಜು ಮಾಡಿ ನೆಲನಕ್ಕಿರೂ ಒಂದೇ, ಮೆಕ್ಕಕ್ಕೆ ಹೋದರೂ ಒಂದೇ!
ಉಪದ್ರ ಉಪದ್ರವೇ!

ಒಂದೊಪ್ಪ: ಗೋಧ್ರ ಹತ್ಯೆ ತೀರ್ಮಾನ ರಾಮನ ಪರವಾಗಿ ಕೋರ್ಟುಕೊಟ್ಟತ್ತು. ಗೋಹತ್ಯೆಯ ತೀರ್ಮಾನ ಕೋರ್ಟಿನ ಪರವಾಗಿ ರಾಮನೇ ಕೊಡ್ಳಿ. ಅಲ್ಲದೋ?

ಸೂ:

  • ಗೋದ್ರ ಘಟನೆಲಿ ಎಂತೆಂತ ಆತು ಹೇಳ್ತರ ಸಮಗ್ರ ವಿವರಣೆ: (ಇಲ್ಲಿದ್ದು)
  • ಪಟ ಇಂಟರುನೆಟ್ಟಿಂದ

55 thoughts on “ಗೋಧ್ರಾ ಹತ್ಯೆ ತೀರ್ಪು ಬಪ್ಪಗ ಗೋಹತ್ಯೆಯೂ ನೆಂಪಾತು!

  1. shuddi odi bejaraaathu.
    vaarakkondu shuddi sikkuttu oppannange.kambale sikkippaga
    naadtana shuddi enthara heli kelire ummappa heludu.
    anthu olle vishya barettanne.
    ondoppa sooperodi koshi aathu.

  2. ಧರ್ಮ ಕ್ಕೆ ಯಾವಾಗಲೂ ಸೋಲಿಲ್ಲೆ ಹೇಳುದು ಸತ್ಯ

  3. ಏನ್ನ ಫುಲ್ ಓಟು ನರೆ೦ದ್ರ ಮೋದಿಗೆ.. ಅವನ ಹಾ೦ಗಿಪ್ಪೊರು ಇಪ್ಪ ಕಾರಣ ಇನ್ನೂ ಹಿ೦ದುಗೊ ರಜ ಧೈರ್ಯಲ್ಲಿ ಇಪ್ಪಲಾವುತ್ಥು. ಇಲ್ಲದ್ದರೆ ಇಶ್ತೊತ್ಥಿ೦ಗೆ ನಮ್ಮ ಮಾರಾಟ ಮಾಡಿ ಆವುಥಿತ್ಥು.

    1. ಏ ಭೂಪ ಭಾವಾ,
      ಒಳ್ಳೆದು,ಇನ್ನು ಅರ್ಧ ಓಟು ಹಾಕಿಕ್ಕೆಡಾ..

    2. ಭೂಪಣ್ಣಾ..
      ಬೈಲಿಂಗೆ ಸ್ವಾಗತ!

      ಒಳ್ಳೊಳ್ಳೆ ಚಿಂತನೆಗೊ ನಿಂಗಳ ಒಪ್ಪಲ್ಲಿ ಕಾಣ್ತು.
      ಇದರನ್ನೇ ವಿಸ್ತರುಸಿ ಬೈಲಿಲಿ ಶುದ್ದಿ ಹೇಳುಲಾಗದೋ? 🙂

    1. ಯೇವಗ ಹೇಳಿ ಹೇಳಿದ್ದವೋ? ಇನ್ನು ಇವರ ಸಾ೦ಕುಲೆ ಕೆಲವು ಕೋಟಿ ಖರ್ಚಕ್ಕು,ಅಲ್ಲದೋ?

  4. ಒಪ್ಪಣ್ಣ ಹೇಳಿದ್ದು ಬಾರಿ ಲಾಯಿಕ ಆಯಿದು.

    “ಧರ್ಮ ಸರಿ ಇಲ್ಲದ್ದರೂ…. ಅನುಯಾಯಿಗ ಸರಿ ಇಲ್ಲದ್ದರೂ…., ಮಸಾಲೆ ಕಸಂಟಿರೋ….ಕಡ್ಲೆ ಕಸಂಟಿರೂ….” . ಇಂದು ಧರ್ಮ ಹೇಳಿದರೆ ಒಂದು ಜಾತಿ ಗುಂಪಿನ ಹಾಂಗೆ ಆಯಿದು…… ಸಮಾಜಲ್ಲಿ ಶಾಂತಿ ನೆಲೆಸೆಕ್ಕಾರೆ ಗುರುಗೋ ಹೇಳುತ್ತಾ ಹಾಂಗೆ ಗೋಮಾತೆಯ ಧ್ವಜ ಹಿಡುಕ್ಕೊಂಡು ಒಂದೇ ಮನಸ್ಸಿಪ್ಪವೆಲ್ಲ “ಗೋಧರ್ಮ” ಅಥವಾ “ಪ್ರಕೃತಿ ಧರ್ಮ” ಹೇಳುತ್ತ ಧರ್ಮದಡಿಲಿ ಬದುಕ್ಕೆಕ್ಕಷ್ಟೇ. “ಗೋಹತ್ಯೆಯ ತೀರ್ಮಾನ ಕೋರ್ಟಿನ ಪರವಾಗಿ ರಾಮನೇ ಕೊಡಲಿ” . ಇದಕ್ಕೆ ಬೇಕಾಗಿ ನಾವೆಲ್ಲಾ ರಾಮನ (ನಮ್ಮ ಗುರುಗಳ) ಪ್ರಾರ್ಥನೆ ಮಾಡುವ.

    1. ಜಯಶ್ರೀ ಅಕ್ಕಾ..

      ಒಳ್ಳೆ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.
      ಗೋಧರ್ಮವೇ ಪರಮಧರ್ಮ, ಪರಮನೆಂಟು ಹೇಳಿದ ನಿಂಗಳ ಒಪ್ಪಕ್ಕೆ ಅಭಿವಂದನೆಗೊ.. 🙂

      ಹರೇರಾಮ

  5. ಒಪ್ಪಣ್ಣಾ, ಒಂದು ಶುದ್ದಿಯ ಬಗ್ಗೆ ಪೂರ್ಣ ವಿವರ ತುಂಬಾ ಚೆಂದಲ್ಲಿ ಕೊಟ್ಟು, ಅದರಿಂದ ಇನ್ನೊಂದು ಶುದ್ದಿಗೂ ತಂತು ಸೇರ್ಸಿ ನಯವಾಗಿ, ಮನಸ್ಸಿಂಗೆ ಮುಟ್ಟುತ್ತ ಹಾಂಗೆ ಹೇಳೆಕ್ಕಾದ್ದರ ಹೇಳುಲೆ ನೀನೇ ಆಯೆಕ್ಕಷ್ಟೆ ನೋಡು!!!!!

    ಗುಜರಾತಿನ ಗೋಧ್ರಾ!!! ರೈಲು ಸಾಬರಮತಿ!!!

    ಅಹಿಂಸಾ ತತ್ವವ ಲೋಕಕ್ಕೇ ಸಾರಿದ ಗಾಂಧಿಅಜ್ಜನ ಊರಿಲಿ, ಅಜ್ಜನ ಆಶ್ರಮದ ಹೆಸರಿನ ರೈಲಿಲಿ, ಗೋವಿನ ಹೆಸರಿನ ಜಾಗೆಲಿ, ಅಮಾಯಕ ಜನಂಗಳ ಹೀಂಗೆ ಅಮಾನುಷ ರೀತಿಲಿ ಸುಡೆಕ್ಕಾದರೆ ಎಂಥಾ ವಿಪರ್ಯಾಸ ಅಲ್ಲದಾ?

    ಮನುಷ್ಯಜಾತಿಲಿ ಹುಟ್ಟಿ ಬಂದ, ಕಾಂಬಲೆ ಮಾತ್ರ ತಲೆ ಇಪ್ಪ, ಮನುಷ್ಯರಾದೋರು ಮಾಡುದರಿಂದ ವ್ಯತಿರಿಕ್ತ ಕೆಲಸ ಮಾಡುವ ಹೀಂಗಿಪ್ಪ ರಕ್ತಬೀಜಾಸುರಂಗಳಿಂದ ನಾವು ಬೇರೆ ಎಂತರ ನಿರೀಕ್ಷೆ ಮಾಡ್ಲೆ ಎಡಿಗು? ನೀನು ರಾವಣರು ಹೇಳಿದ್ದು ಸರಿಯೇ!! ಈ ರಕ್ಕಸ ಜಾತಿಯ ನಾಶಕ್ಕೆ ದೇವರಿಂಗೆ ಯಾವ ಅವತಾರ ಎತ್ತಿ ಬರೆಕ್ಕು ಹೇಳಿ ಅಂದಾಜು ಆವುತ್ತಿಲ್ಲೆಯೋ ಏನೋ ಅಲ್ಲದಾ?
    ಎನ್ತಾರು ವರ ಪಡಕ್ಕೊಂಡಿಕ್ಕು ಮದಲಾಣ ರಕ್ಕಸರ ಹಾಂಗೆ ಇಂಥೋರಿಂದಲೇ ನಾಶ ಹೇಳಿ!!! ಪಾಪದ ಕೊಡ ತುಂಬುವಾಗ ಒಂದರಿ ಭೂಮಿ ಭಾರ ಇಳಿಗು. ಅಲ್ಲಿಯವರೆಗೆ ಅವರ ಉಪದ್ರಂಗಳ ನಾವು ಸಹಿಸೆಕ್ಕು ಅಷ್ಟೇ!!!!

    ಗೋಧ್ರಾ ಹತ್ಯೆ ಆಗಲಿ ಗೋವಿನ ಹತ್ಯೆ ಆಗಲಿ ಎರಡೂ ಒಂದೇ ಹೇಳಿ ನೀನು ನಿರೂಪಿಸಿದ್ದು ಚೆಂದ ಆಯಿದು ಒಪ್ಪಣ್ಣ. ಸಾಬರಮತಿ ರೈಲು ತನ್ನಷ್ಟಕ್ಕೇ ತನ್ನ ಕರ್ತವ್ಯಲ್ಲಿ ಹೋಯಿಕೊಂಡಿತ್ತನ್ನೆ. ಗೋಧ್ರಾ ಹೇಳಿದರೆ ಗೋವಿನ ಧಾರೆ ಅಡ್ಡ, ಬೇಕಾದಷ್ಟು ಗೋವುಗೊ ಇಪ್ಪ ಜಾಗೆ ಹೇಳ್ತ ಹೆಸರಡ್ಡ ಮಾಷ್ಟ್ರುಮಾವ° ಹೇಳಿದವು!! ಅಲ್ಲಿಗೆ ಎತ್ತುವಾಗ ರೈಲಿನ ಬಾಗಿಲು ಹಾಕಿ ಕಿಚ್ಚು ಕೊಟ್ಟವಲ್ಲದಾ? ಹೀಂಗೇ ಅಲ್ಲದಾ ಗೋವನ್ನೂ ಮಾಡುದು?
    ಅದರ ಪಾಡಿಂಗೆ ಅದು ಮೇದುಗೊಂಡು ಅದರ ಕರ್ತವ್ಯ ಹೇಳಿ ನವಗೆ ಹಾಲು ಕೊಟ್ಟು ನಮ್ಮ ಸಾಂಕುತ್ತಾ ಇರ್ತು, ಅದರ ಹಿಡುದು ತೆಕ್ಕೊಂಡು ಹೋಗಿ ಹತ್ಯೆ ಮಾಡ್ತವನ್ನೇ!! ಗೋಹತ್ಯೆಲಿ ಭಾಗವಹಿಸಿದವರದ್ದು, ಇದಕ್ಕಿಪ್ಪ ರುಜುವಾತು ಎಲ್ಲಾ ಮೇಲಾಣ ರಾಮನ ಕೋರ್ಟಿಲಿ ಸಾಬೀತು ಅಕ್ಕು. ಅಲ್ಲಿ ಶಿಕ್ಷೆ ಅಕ್ಕು. (ಆದರೆ ಪೇಪರಿಲಿ ಬಾರ ಅಷ್ಟೇ!!!)

    [ಆಧುನಿಕ ಸಮಾಜಲ್ಲಿ ಹೊಂದಿಗೊಂಡು ಹೋವುತ್ತ ಮನಸ್ಸಿಪ್ಪ ಸುಂದರ ಧರ್ಮ ಇಂದ್ರಾಣ ದಿನಲ್ಲಿ ಅಗತ್ಯ ಇದ್ದು.]

    ಒಪ್ಪಣ್ಣ, ತುಂಬಾ ಒಳ್ಳೆಯ ಮಾತು!!! ಇದಾಯೆಕ್ಕಾದರೆ ದೇವರ ಅವತಾರ ಯಾವುದೋ ಒಂದು ರೂಪಲ್ಲಿ ಆಯೆಕ್ಕು ಅಥವಾ ಆದಿಕ್ಕು!!! ನಾವು ಕಾದು ನೋಡೆಕ್ಕಷ್ಟೇ!!!!
    ಒಂದೊಪ್ಪ ಲಾಯ್ಕಾಯಿದು. ರಾಮನೇ ತೀರ್ಮಾನ ಕೊಡಲಿ.

    1. ಅಕ್ಕಾ..
      { ಅಹಿಂಸಾ ತತ್ವವ ಲೋಕಕ್ಕೇ ಸಾರಿದ ಗಾಂಧಿಅಜ್ಜನ ಊರಿಲಿ, ಅಜ್ಜನ ಆಶ್ರಮದ ಹೆಸರಿನ ರೈಲಿಲಿ, ಗೋವಿನ ಹೆಸರಿನ ಜಾಗೆಲಿ }
      ವಾಹ್! ಎಂತಾ ಗಮನ! ಎಂತಾ ವಾಕ್ಯ.
      ತುಂಬ ಕೊಶಿ ಆತು ಒಪ್ಪಣ್ಣಂಗೆ!

      ಅವರ ಪಾಪದ ಕೊಡಪ್ಪಾನ ತುಂಬುವನ್ನರಿಂದ ಮದಲೇ ನಮ್ಮ ತಾಳ್ಮೆಯ ಕೊಡಪ್ಪಾನ ತುಂಬಿರೆ??? 🙁
      ರಾಮನ ತೀರ್ಮಾನ ಮೊದಲೇ ಬಂದರೆ ಎಲ್ಲೋರಿಂಗೂ ಸೌಖ್ಯ! ಅಲ್ಲದೋ? 🙂

  6. ಒಂದು ಘೋರ ವಿಶಯವ ಮನಸ್ಸಿಂಗೆ ನಾಟುತ್ತ ಹಾಂಗೆ ಬರದ್ದು ಲಾಯಿಕ ಆಯಿದು ಒಪ್ಪಣ್ಣ.
    [ಒಂದೊಂದು ಮುಷ್ಠಿ ಕಡ್ಳೆಯ ಕೈ ಎತ್ತಿ ದಾನ ಮಾಡಿದ°] ಈಗ ಅವ ದಾನಶೂರ ಕರ್ಣನೇ ಸೈ
    [ಕಡ್ಳೆ ಅದಾಗಲೇ ಕೊಟ್ಟಾದ ಕಾರಣ ಪುನಾ ತೆಕ್ಕೊಂಡಿದನಿಲ್ಲೆ]- ಇಲ್ಲಿ ಪುನಃ ಕರ್ಣ ಆದ. ಕೊಟ್ಟದರ ವಾಪಾಸು ತೆಕ್ಕೊಂಬಲೆ ಇಲ್ಲೆ ಹೇಳಿ
    ***
    ಗುಣಾಜೆ ಮಾಣಿಯೇ ಗುಣಾಜೆಕುಂಞಿ ಆದ್ದೋ ?
    ಕೇರಳಲ್ಲಿ “ಕುಂಞಿ” ಕರ್ನಾಟಕಲ್ಲಿ “ಮಾಣಿ” ಆದಿಕ್ಕು ಅಲ್ಲದಾ?
    “ಕುಂಞಿಮಾಣಿ” ಅಂತೂ ಖಂಡಿತಾ ಅಲ್ಲ.
    ***
    ಹೊಸ ಪದ ಪ್ರಯೋಗ. “ಬಾಯಿಗೆಬಾಯಿ ಮಾತಾಡ್ತ”
    ***
    [ಎನ್ನದು ಕೆಮಿಯೇ ಅಲ್ಲ ಹೇಳಿಗೊಂಡು ಒಪ್ಪಣ್ಣ ಕರೆಲಿ ನಿಂಬದು!
    ಕಡ್ಳೆ ತಿಂಬಗಳೂ ಒಂದು ದೊಡ್ಡ ಆವಳಿಗೆ ಬಂತು!
    ಮಸಾಲೆಕಡ್ಳೆ ರಜಾ ಕಸಂಟಿದ್ದ ಹಾಂಗೆ ಅನುಸುಲೆ ಸುರು ಆತು ಒಪ್ಪಣ್ಣಂಗೆ]
    ಮಾತುಗೊ ಒಂದಕ್ಕೊಂದು ಲಾಯಿಕಕೆ ಹೊಂದಿದ್ದು. ನವಗೆ ಅಸಕ್ತಿ ಇಲ್ಲದ್ದ ವಿಶಯ ಆದರೆ ಹಾಂಗೆ ಅಲ್ಲದ ಅಪ್ಪದು.
    ***
    [ಅಷ್ಟಪ್ಪಗ ಶಾಂತಿ ಶಾಂತಿ ಹೇಳಿಗೊಂಡು ಸುಮಾರು ಜೆನ ಬಂದವು]- ಅದು ಯಾವಾಗಲೂ ಹಾಂಗೇ ಅಲ್ಲದಾ?.
    ಅವು ಮಾಡಿದ್ದು ಎಂತ ಘೋರ ಕೃತ್ಯ ಹೇಳ್ತಕ್ಕಿಂತ ಅವಕ್ಕೆ ಎಂತ ಆತು ಹೇಳುವದೇ ಮುಖ್ಯ ಆವ್ತು ಬುದ್ಧಿ ಜೀವಿಗೊಕ್ಕೆ. ಅವರ ಚೀಲಂದ ಬುದ್ಧಿ ಹೆರ ಬಪ್ಪದು ಅಂಬಗ!!!
    ***
    ಕೊಶೀ ಆದ ಕೆಲವು ತಮಾಶೆಗೊ:
    [ಅಟ್ಟಿನಳಗೆಯಷ್ಟಕೆ ಎರಡು ಬೇಗ್]
    [ದ್ರಾಕ್ಷೆಗೊಂಚಲಿನ ದೊಡ್ಡ ಕಟ್ಟ ತಂದು ಎಲ್ಲೋರಿಂಗೂ ಕೊಶಿ ಹಂಚಿಗೊಂಡಿದನಡ,] ಪಾನೀ ಪೂರಿ ಏಕೆ ಹಂಚಿದ್ದಾ ಇಲ್ಲೆ ಹೇಳಿ ಗೊಂತಾತಿಲ್ಲೆ
    ***
    [ಅವರ ಧರ್ಮಾನುಸಾರ ಮಾಡ್ಳೆಡಿಗಾದ ಅತ್ಯಂತ ನಾಗರೀಕ ಕೆಲಸ ಮಾಡಿಬಿಟ್ಟವು!] -ವ್ಯಂಗ್ಯಲ್ಲಿ ಖಂಡನೆ ಮಾಡಿದ್ದು ಲಾಯಿಕ ಆಯಿದು.
    ***
    [ಮಾಡುದೆಂತ – ರಾಮಸ್ಮರಣೆ ಮಾಂತ್ರ! ] [ಬೋಗಿಯೊಳದಿಕ್ಕೆ ಇದ್ದ ಹೆಮ್ಮಕ್ಕೊ, ಅವರ ಒಟ್ಟಿಂಗೆ ಆಟಾಡುವ ಅವರ ಮಕ್ಕೊ..
    ಎಲ್ಲೋರುದೇ ಇದ್ದ ಹಾಂಗೇ.. ಬಾಗಿಲು ಹಾಕಿ, ಬೀಗ ಜಡುದು,ಹೆರಂದ ತಂಪು ಪೆಟ್ರೋಲು ಎರದು, ಬೆಶಿ ಕಿಚ್ಚುಕೊಟ್ಟು..ಯಬ! ಎಂತ ಕ್ರೂರತೆ!]
    ಅಲ್ಲಿ ಇತ್ತಿದ್ದವರ ಅವಸ್ಥೆ ಹೇಂಗಿದ್ದಿಕ್ಕು? ಜಾನ್ಸಿರೆ ಮೈ ಎಲ್ಲಾ ಉರಿತ್ತು.
    ***
    [ಸರಿಯಾದ ತೀರ್ಮಾನ ಕೊಡ್ಳೆ ನಮ್ಮ ಕೋರ್ಟಿಂದ ಆಯಿದಿಲ್ಲೆ, ಮೇಗೆ ಇಪ್ಪ ಭಗವಂತನ ಕೋರ್ಟು ಇತ್ಯರ್ಥ ಮಾಡುಗು] ದೇವರ ನಂಬುವ ನಾವು ಹೀಂಗೆ ಹೇಳಿ ಸಮಾಧಾನ ಮಾಡಿಗೊಳ್ತು. ದೇವರೇ ಇಲ್ಲೆ ಹೇಳಿ ಬಾಂಗು ಕೊಡ್ತವಕ್ಕೆ ಇದೆಲ್ಲಾ ಇದ್ದೋ?
    ***
    ಚಿಂತನೆಗೆ ಹಚ್ಚಿದ ಕೆಲವು ಸಾಲುಗೊ:
    [ಧರ್ಮ ಸರಿ ಇಲ್ಲದ್ದರೂ, ಧರ್ಮದ ಅನುಯಾಯಿಗೊ ಸರಿ ಇಲ್ಲದ್ದರೂ – ಪ್ರಯೋಜನ ಒಂದೇ!]
    [ಐದು ಸರ್ತಿ ನೆಮಾಜು ಮಾಡಿ ನೆಲನಕ್ಕಿರೂ ಒಂದೇ, ಮೆಕ್ಕಕ್ಕೆ ಹೋದರೂ ಒಂದೇ!]

    ಒಂದೊಪ್ಪ ಲಾಯಿಕ ಆಯಿದು

    ಎರಡು ಪಟಂಗೊ ಭೀಕರ

    1. ಶ್ರೀಶಣ್ಣೋ..
      ಸುಮಾರು ಸಮೆಯ ಕಳುದು ಬೈಲಿಲಿ ನಿನ್ನ ತಲೆ ಕಂಡತ್ತು, ಕೊಶಿ ಆತದಾ!

      ಯೇವದೇ ಶುದ್ದಿ ಆದರೂ ಗೆರೆಗಳ ನೆಡುಕೆ ಓದಿ, ಕೊಶಿ ಆದ್ಸರ ಬೈಲಿಂಗೆ ಹೇಳ್ತೆ ಅಲ್ಲದೋ?
      ಅದು ಕೊಶಿ ಅಪ್ಪದು!
      🙂
      ಬೈಲಿಂಗೆ ಬತ್ತಾ ಇರು! ಇಷ್ಟೂ ಅಪುರೂಪ ಆಯಿಕ್ಕೆಡ, ಆತೋ? 🙂

  7. ಗೋಹತ್ಯೆ ನಿಷೇಧ ಆಯೆಕ್ಕು ಹೇಳಿ ಸುಮಾರು ಜನ ಹೇಳುತ್ತವು ನಿಜ. ಆದರೆ ನಮ್ಮ ಸಮಾಜಲ್ಲಿ ಎಷ್ಟು ಜನಂಗೊ ನಿಜವಾಗಿ ಇದಕ್ಕೆ ಸಪೂರ್ಟು ಕೊಡುತ್ತವು? ಅಥವಾ ನಿಜವಾಗಿ ಸಪೋರ್ಟು ಕೊಡುವವೇ ಆಗಿದ್ದರೆ ದನಗೊಕ್ಕೆ ಪ್ರಾಯ ಆದಪ್ಪಗ ಅವುಗಳ ಮಾರುತ್ತದು ಎಂತಗೆ?
    ಲೇಖನ ತುಂಬಾ ಒಪ್ಪ ಆಯಿದು ಒಪ್ಪಣ್ಣ…
    ಒಪ್ಪಂಗಳೊಟ್ಟಿಂಗೆ…

    1. ಪ್ರಶ್ನೆ ಪಷ್ಟಾಯಿದು!
      ನಿಜವಾಗಿಯೂ, ಗೋಹತ್ಯೆಗೆ ಅರ್ಧ ಕಾರಣ ನಾವೇ! 🙁
      ಒಪ್ಪಿಗೊಳ್ಳಲೇ ಬೇಕಾದ ಬೇಜಾರದ ಶುದ್ದಿ. ಅಲ್ಲದೋ?

    1. ಪುಚ್ಚಪ್ಪಾಡಿ ಅಣ್ಣಾ..
      { ಹಳ್ಳಿಲಿ ಗೋಹತ್ಯೆ ಆಗ್ತಾ ಇದ್ದು }

      ಸರಿ, ಆದ್ರೆ ಪೇಟೆಲಿ ಅದಿಕ್ಕಿಂದ ಕಡೆ!
      ಎಲ್ಲದಕ್ಕೂ ಕಾರಣ ಹಳ್ಳಿಂದ ದನಗ್ಳ ಕೊಡೂದು.

      ಅದ್ರ ತಡೀಲೆ ಎಂತ ಮಾಡುದು? ಎನಿಗೆ ಗೊತ್ತಾವ್ತಿಲ್ಲೆ! 🙁

  8. ಕೋರ್ಟಿನ ಕಲಾಪಂಗಳ ಬಗ್ಗೆ ತಿಳುದೋರಿಂಗೆ ಅರ್ಥ ಅಕ್ಕು. ಅದರ ತೊಡಕುಗೊ. ಅಶ್ಟೊಂದು ಸುಲಾಭ ಇಲ್ಲೆ ತೀರ್ಪು. ಆ ಅಂಬಿಟುಕಾರು ಹೇಳ್ತ ಮನುಶ್ಯ ಮತ್ತೆ ಕೆಲವು ಸರ್ಕಾರಿ ಬ್ರಾಮ್ಮಣ್ರು ಸೇರಿ ಮಾಡಿದ ಕಾನೂನು ಇಷ್ಟೆಲ್ಲಾ ಮಾಡಿ ಹಾಕಿದ್ದು.

    ನಮ್ಮ ಹಣೆಬರ. ಅನುಭವಿಸೆಕ್ಕಶ್ಟೆ.

    1. ಅದ್ವೈತ ಕೀಟ..

      ವೈಶಿಷ್ಟ್ಯ, ವಿಚಿತ್ರ ಹೆಸರು 🙂
      ಆರಿದು? ಒಳ್ಳೆ ಒಪ್ಪ ಕೊಟ್ಟಿದಿ, ಆದರೆ ನಿಂಗಳ ಪರಿಚಯ ಬೈಲಿಂಗೆ ಹೇಳ್ತಿರೋ?

      1. ಅದೇ…. ಅಡ್ವಕೀಟು ಹೇಳ್ತವು… ಅದರ ಸಂಸ್ಕ್ರತ ರೂಪ….. ಹ್ಹೆ ಹ್ಹೆ ಹ್ಹೆ…….

        1. ಹ್ಹ..ಹ್ಹಾ..ನಾಮ ಲಾಯಿಕ ಆಯಿದ ಅಣ್ಣೋ.
          ಆನು ಒ೦ದು ವಾರ೦ದ ಯೋಚನೆ ಮಾಡಿದ್ದೇ ಬ೦ತು,ನಮ್ಮಲ್ಲಿ ಹೀ೦ಗೊ೦ದು ಹೆಸರು ಇದ್ದೋ ಹೇದು.ಡಾ.ಮಹೇಶ೦ಗೂ ಗೊ೦ತಿರ,ಈ ಸ೦ಸ್ಕೃತ ರೂಪ.

          1. ಇದು ಮಹೇಶಣ್ಣನ ಸಂಸ್ಕ್ರುತ ಅಲ್ಲ…. ನಮ್ಮದೇ ಸಂಸ್ಕ್ರುತ.

  9. [ರಾಮಂಗಾಗಿಯೇ ಅಯೋಧ್ಯಗೆ ಹೋದ ರಾಮಸೇವಕರು ರಾಮನ ಪಾದಕ್ಕೇ ಹೋದವು.
    ಬಾಕಿ ಒಳುದ ಎಡಿಗಾದಷ್ಟು ಜೆನ ಜೀವ ಒಳಿಶಿಗೊಂಡು ರಾವಣ ಸಂಹಾರಕ್ಕೆ ತಯಾರಾದವು].
    ಗೋಧ್ರಾ ನರ ಹತ್ಯೆ ಆದಿಕ್ಕು, ಗೋ ಹತ್ಯ್ರೆ ಅದಿಕ್ಕು, ಇಲ್ಲದ್ದರೆ ಪುರ್ಬುಗೊ ಮಾಡುವ ಮತಾಂತರ ಆದಿಕ್ಕು.
    ಎಲ್ಲವೂ ಹಿಂದೂ ಸಮಾಜದ ಮೇಲೆ ನಡೆವ ಅತ್ಯಾಚಾರಂಗೊ. ಇದೆಲ್ಲಾ ಕೇಳುವಾಗ ಆರಿಂಗಾರೂ ಮೈ ಉರಿಯದ್ದೆ ಇರ.
    ಇದರ ವಿರೋಧಿಸಿ ಅಪ್ಪಗ, ಬುದ್ಧಿ ಜೀವಿಗೊಕ್ಕೆ ಎಚ್ಚರ ಆವುತ್ತು. ಹಿಂದುಗಳ ವಿರುದ್ಧ ಧ್ವನಿ ತೆಗೆತ್ತವು. ಮಾನವ ಹಕ್ಕು ಉಲ್ಲಂಘನೆ ಹೇಳಿ ಇನ್ನೊಂದು ಸ್ವರ ದೊಡ್ಡಕ್ಕೆ ಹೆರಡುತ್ತು.
    ಹಿಂದುಗೊಕ್ಕೆ ಹಿಂದುಗಳೇ ವಿರೋಧಿಗೊ ಅಪ್ಪದು ಇಲ್ಲಿ.
    ೧೪೦ ಲೀಟರ್ ಪೆಟ್ರೋಲ್ ಸುರುದು, ಮುಗ್ಧ ಜೆನಂಗಳ ಜೀವಂತ ಸುಟ್ಟದು ಪೂರ್ವ ಯೋಜಿತ ಹೇಳೆಕ್ಕಾರೆ, ಇಷ್ಟು ವರ್ಶ ಬೇಕಾತು.
    ಅಪರಾಧ ಸಾಬೀತು ಅದ ಕಸಬ್, ಅಫ್ಜಲ್ ಗುರುವಿನ ನಮ್ಮ ತೆರಿಗೆ ಪೈಸೆಲಿ, ಕೋಟಿ ಕೋಟಿ ಸುರುದು ಸಾಂಕುತ್ತವು.
    ಶ್ರೀ ರಾಮನೇ ಇನ್ನೊಂದು ಸರ್ತಿ ಅವತಾರ ಎತ್ತಿ ಬರೆಕು

    1. ಶರ್ಮಪ್ಪಚ್ಚೀ..

      ತುಂಬ ಚೆಂದಕೆ ಬರದ್ದಿ ನಿಂಗೊ!
      ಶ್ರೀರಾಮನೇ ಅವತಾರ ಎತ್ತದ್ದರೆ ಖಂಡಿತವಾಗಿಯೂ ಸಾಧ್ಯ ಇಲ್ಲೆ.
      ಅಥವಾ, ರಾಷ್ಟ್ರದ ಎಲ್ಲ ಕಡೆಲಿಯೂ ಒಂದೊಂದು ಗೋಧ್ರಂಗೊ ಆಯೇಕು! ಅಲ್ಲದೋ?

      1. (ರಾಷ್ಟ್ರದ ಎಲ್ಲ ಕಡೆಲಿಯೂ ಒಂದೊಂದು ಗೋಧ್ರಂಗೊ ಆಯೇಕು)
        ಗೋಧ್ರ ಆಯೆಕ್ಕಾದ್ದು ಅಲ್ಲ ಒಪ್ಪಣ್ಣ… ಗೋಧ್ರದ ನಂತರದ ಗುಜರಾತ್ ಆಯೆಕ್ಕಾದ್ದು…

        1. ಹಾ.. ಆ ಮಾತಿ೦ಗೆ ಆನು ಒಪ್ಪಿದೆ ಶ್ಯಾಮಣ್ಣ..

  10. “ಹಿಟ್ಲರು ತನ್ನ ಜನರೇ ಇಪ್ಪ ರೈಲಿ೦ಗೆ ಕಿಚ್ಚು ಹಾಕಿಸಿ `ಅದಾ ಆಚವು ಮಾಡಿದ್ದದು’ ಹೇಳಿ ದ್ವೇಶ ಹುಟ್ಟುಸಿ ನರಮೇಧ ಮಾಡಿಸಿತ್ತಿದ್ದನಡ. ಇದುದೆ ಹಾ೦ಗೆಯೇ — ಹಿ೦ದುಗಳೇ ತನ್ನವರ ಹೊತ್ತುಸಿದ್ದದು ಮಾಪ್ಳೆಗಳ ಕೊಲ್ಲುಸಲೆ” ಹೇಳಿ ಇಲ್ಲಿ ವಿದೇಶಲ್ಲಿ ಪ್ರಚಾರ ಆಯಿದು. ಅವಕ್ಕೆ ಅವರ ಸ್ವಭಾವದ ಹಿನ್ನೆಲೆಲ್ಲೆ ಮಾತಾಡ್ಲೆ ಎಡಿಗಷ್ಟೆ. ನಮ್ಮ ಮೀಡಿಯಾ+ರಾಜಕಾರಣಿಗಳ ಕೊಡುಗೆಯೂ ಇದ್ದು ಇದಕ್ಕೆ.

    ರಾಜಕೀಯದ ಸುದ್ದಿ ನಾವು ಮಾತಾಡೆಕು. ರಾಜಕಾರಣ ನಮ್ಮ ಸಮಾಜಜೀವನದ ಒಂದು ಅ೦ಗ. ಅದರ ಒಳ್ಳೆದು ಮಾಡ್ಲೆ ಪರಿಶ್ರಮ ಪಡುವವರ ಸಮರ್ಥನೆಗೆ ನಾವು ನಿಲ್ಲೆಕು.

    1. { ಮ್ಮ ಮೀಡಿಯಾ+ರಾಜಕಾರಣಿಗಳ ಕೊಡುಗೆಯೂ ಇದ್ದು ಇದಕ್ಕೆ }
      ಡಾಮಹೇಶಣ್ಣಾ..
      ಮುಕ್ಕಾಲ್ವಾಶಿ ಇದರಿಂದಾಗಿಯೇ ಅಲ್ಲದೋ ಲಗಾಡಿ ಹೋದ್ದು?

      ಬುದ್ಧಿ(ಲ್ಲದ್ದ)ಜೀವಿಗಳ ಕೆಲವು ಮಾತುಗೊ ಕೇಳಿರೆ ಉರಿದರುಸುತ್ತಡ ಗುಣಾಜೆಕುಂಞಿಗೆ. 🙁

      1. (ಬುದ್ಧಿ(ಲ್ಲದ್ದ)ಜೀವಿಗಳ ಕೆಲವು ಮಾತುಗೊ ಕೇಳಿರೆ)
        ಒಪ್ಪಣ್ಣ… ಅವು ಬುದ್ಧಿ ಇಲ್ಲದ್ದ ಜೀವಿಗ ಅಲ್ಲ… ಅವಕ್ಕೆ “ದುರ್ಬುದ್ಧಿ ಜೀವಿ”ಗ ಹೇಳಿ ಹೆಸರು ಮಡುಗೆಕ್ಕಾದ್ದು ಸರಿ.

  11. ಭೀಕರ. ಓದುವಾಗಳೇ ಹೆದರಿಕೆ ಆವುತ್ತು. ಅಲ್ಲಿ ಇದ್ದವಕ್ಕೆ ಹೇಂಗಾದಿಕ್ಕು. ಈ ಕೆಲಸ ಮಾಡಿದವ್ವು ನಿಜವಾಗಿಯೂ ರಾಕ್ಷಸಂಗೊ. ಈಗ ಗೋಮಾತೆಯ ಹಿಂಸೆ ಮಾಡಿ ಕೊಲ್ಲುದೂ ಅವ್ವೇ. ಅಲ್ಪಬುದ್ಧಿಯ ಅಲ್ಪಸಂಖ್ಯಾತರು. ಮೊನ್ನೆ ಒಂದು ಪುರ್ಬು ತೋಟಕ್ಕೆ ಬಂದ ದನಂಗೊಕ್ಕೆ ವಿಷ ಹಾಕಿ ಕೊಂದಿದಡ. ಬೇಲಿಯೇ ಇಲ್ಲದ್ದ ತೋಟ ಅಡ ಅದು. ಹೇಂಗೇಂಗಿಪ್ಪ ಮನುಷ್ಯರೆಲ್ಲ ಇರ್ತವೂಳಿ.
    ಶುದ್ದಿಲಿಪ್ಪ ಪಟಂಗಳ ನೋಡುವಾಗ ತುಂಬಾ ಬೇಜಾರಾವುತ್ತು. 🙁

    1. { ಅಲ್ಪಬುದ್ಧಿಯ ಅಲ್ಪಸಂಖ್ಯಾತರು. } ಸರಿಯಾಗಿ ಹೇಳಿದಿ ನಿಂಗೊ.

      ದನವ ಕೊಂದ ಪುರ್ಬುವಿನ ಶುದ್ದಿ ಕೇಳಿ ಬೇಜಾರಾತು. ಅದಕ್ಕೆ ನಂದಿನಿ ಪೆಕೆಟಿನ ಒಳ ವಿಶವನ್ನೇ ಕಂಡತ್ತೋ ಏನೋ?! 🙁

  12. ಒಪ್ಪಣ್ಣಾ..ಒಳ್ಳೆ ಲೇಖನ.
    ಅ೦ತೂ ರಾಜಕೀಯಕ್ಕೆ ಗುಣಾಜೆ ಮಾಣಿ ಇಲ್ಲದ್ದರೆ ನೆಡೆಯ ,ಅಲ್ಲದೋ?
    {ಮಸಾಲೆ ಕಸಂಟಿರೂ, ಕಡ್ಳೆ ಕಸಂಟಿರೂ – ಗುಣ ಒಂದೇ –} ಭಾರೀ ಲಾಯ್ಕ ಆಯಿದು.ಇಡೀ ಲೇಖನದ ವಿಷಯವ ಒ೦ದೇ ಮಾತಿಲಿ ಹೇಳಿದ ಹಾ೦ಗಿದ್ದು.
    ಧರ್ಮದ ಹೆಸರು ಹೇಳಿ ಮನುಷ್ಯರು ಮನುಷ್ಯರ ಪ್ರಾಣ ತೆಗದು ಬದುಕ್ಕುತ್ತವನ್ನೇ,ಇವಕ್ಕೆ ಬುದ್ಧಿ ಇದ್ದೋ?ಅಷ್ಟಾದರೂ ನಮ್ಮ ನ್ಯಾಯ ವೆವಸ್ಥೆಲಿ ರುಜುವಾತು ಇಲ್ಲೆ ಹೇಳಿ ತಪ್ಪು ಮಾಡಿದವಕ್ಕೆ ಶಿಕ್ಷೆಯೂ ಇಲ್ಲದ್ದೆ ಬಚಾವಾವುತ್ತವನ್ನೇ.ವಿಪರ್ಯಾಸ ಅಲ್ಲದೋ.ಈಗ ನೋಡು,ಕಸಬ ಬ್ಯಾರಿಯ ಬೊ೦ಬಾಯಿ ಜೈಲಿಲಿ ಸಾ೦ಕುಲೆ ನೂರು ಕೋಟಿ೦ದ ಮೇಲೆ ಖರ್ಚಾತಡ,ಇನ್ನೆಷ್ಟು ಪೈಸೆ ಮುಗುಶುಲೆ ಬಾಕಿ ಇದ್ದೋ?
    ದನದ ಕೊರಳು ಕಸಾಯಿಯ ಇಕ್ಕುಳಿಲಿ ಕ೦ಡು ಒ೦ದರಿ ಕಣ್ಣುಕಸ್ತಲೆ ಬ೦ತು.ಗೋಹತ್ಯೆ ಮಾಡುತ್ತವಕ್ಕೆ ಶಿಕ್ಷೆ ದೇವರೇ ಕೊಡೆಕ್ಕಷ್ಟೆ.
    ಗುಣಾಜೆ ಮಾಣಿ ಇದರ ಓದಿ ಅಪ್ಪಗಳೂ ಒ೦ದರಿ ಅಭಿಮನ್ಯುವಿನ ಹಾ೦ಗಕ್ಕೋ?

      1. ಮುಳಿಯಭಾವಾ..
        ರಾಜಕೀಯ ಮತ್ತೆ ಗುಣಾಜೆಕುಂಞಿಯ ಶುದ್ದಿ ಒಂದೇ ಪಾವೆಲಿಯ ಎರಡು ಹೊಡೆ.
        ಒಂದರ ಬಿಟ್ಟು ಇನ್ನೊಂದಿದ್ದೋ? ಚೆ ಚೆ! 🙂

        ಒಂದರ ಸಾಂಕಲೆ ಅಷ್ಟು ಕರ್ಚಾದರೆ, ಅಂಬಗ ಈಗಾಣ ತೀರ್ಪಿನ ಇಪ್ಪತ್ತರ ಸಾಂಕುತ್ತದು ಹೇಂಗೋ? 🙁

        ಮಂಗ್ಳೂರುಮಾಣೀ..
        ಒಳ್ಳೆ ಒಪ್ಪ ನಿನ್ನದು!

    1. ಶ್ರೀಪತಿ ಅಣ್ಣಾ,
      ನಿಂಗೊ ಹೇಳಿದ್ದರ ಹೀಂಗೆ ಹೇಳುವನ? ಇವ್ವುಮಾಡಿದರೆ ಮಾತ್ರ ತಪ್ಪು, ಅವ್ವು ಮಾದಿರೆ ತಪ್ಪಲ್ಲ.
      ನಿಂಗೊ ಹೇಳಿದ ಧಾಟಿಲಿ ‘ಇವಕ್ಕೂ’ ತಪ್ಪು ಮಾಡುವ ಅವಕಾಶ ಇರೆಕು ಹೇಳಿ ಹೇಳುವ ಹಾಂಗೆ ಕಾಣ್ತು. ( ನಿಂಗೊ ಆ ಅರ್ಥಲ್ಲಿ ಹೇಳಿದ್ದು ಅಲ್ಲ ಆದರುದೇ)
      ತಪ್ಪು ಆರೆ ಮಾಡಿರೂ ತಪ್ಪೇ ಅಲ್ಲದೋ?
      ಹೇ..

  13. ರಾಜಕೀಯ ಮಾತಾಡುದು ಅಗತ್ಯ ಇದ್ದು.ರಾಜಕೀಯ ಹೇಳಿರೆ ಒಂದೇ ಪಕ್ಷ ಮಾತ್ರ ಹಿಡಿವದಲ್ಲ.ಎಲ್ಲಾ ವಿಷಯ ಚರ್ಚೆ ನಡೆಕ್ಕು.ರಾಜಕೀಯದವು ಓಟಿಂಗೆ ಬೇಕಾಗಿ ಮಾಡುದರ ಎಲ್ಲಾ ಹೆರ ತರೆಕ್ಕು.ಈಗ ಅಫ್ಜಲ್ ಗುರುವಿನ ಕ್ಷಮಾಪಣೆ ಅರ್ಜಿಯ ಗೃಹ ಖಾತೆಲೇ ಮಡುಗಿ ಪೂಜೆ ಮಾಡುತ್ತದು ಎಂತಗೆ?ಒಪ್ಪೆಡಿ ಹೇಳಿ ರಾಷ್ಟ್ರಪತಿಗೆ ಶಿಫಾರ್ಸು ಮಾಡ್ಲೆ ಎಂತ ಅಡ್ಡಿ ಇದ್ದು?
    [ಗುಜರಾತಿಲಿ ಆದ ಗಲಾಟೆ ಅಗತ್ಯ ಇತ್ತಿಲ್ಲೆ.ಆದರೂ ಆಗಿ ಹೋತು.ಅದರ ಸಮರ್ಥಿಸುವುದು ಕಷ್ಟ.ಅದೊಂದು ಬೇಜಾರದ ವಿಷಯ.] ಈಗ ಅಯೋಧ್ಯೆ ತೀರ್ಪನ್ನೇ ಎಲ್ಲರೂ ಮೌನವಾಗಿ ತೆಕ್ಕೊಂಡಿದವು.ಹೀಂಗಿಪ್ಪಾಗ ಅಫ್ಜಲ್ ಗುರುವಿನ ಗಲ್ಲಿಂಗೇರ್ಸಿರೆ ಆರಾದರೂ ಗಲಾಟೆ ಮಾಡುಗೊ?ಈ ಹೆದರಿಕೆ ಸುಮ್ಮನೆ ಹೇಳಿ ಕಾಣುತ್ತು.ಕೆಲವು ಸರ್ತಿ ಕಯ್ಕೆ ಮದ್ದನ್ನೇ ರೋಗಕ್ಕೆ ಕೊಡುತ್ತ ಹಾಂಗೆ ಕಟು ನಿರ್ಧಾರವ ಸರಕಾರ ತೆಕ್ಕೊಂಬಲೇ ಬೇಕು!

    1. ಅಫ್ಜಲ್ ಗುರು ಬ್ಯಾರಿ, ಹಾಂಗಾಗಿ ಅದರ ಏವತ್ತೂ ಗಲ್ಲಿಂಗೆ ಹಾಕುತ್ತವಿಲ್ಲೆ. ನಾಳೆ ಕಸಬ್ಬಿನ ಕೂಡಾ ಹಾಕುತ್ತವಿಲ್ಲೆ… ಎಲ್ಲಿಯಾದರೂ ಸಾದ್ವಿ ಪ್ರಜ್ನಾ ಸಿಂಗ್ ಆಗಿದ್ದಿದ್ದರೆ ಇಷ್ಟೊತ್ತಿಂಗೆ ಗಲ್ಲಿಗೆ ಹಾಕಿ ಆವ್ತಿತ್ತು… ನವಗೆ ನ್ಯಾಯ ಬೇಕಾ? ಗೋಧ್ರದ ನಂತರ ಗುಜರಾತಿಲಿ ಎಂತಾತು… ಅದೇ ಇಡಿ ದೇಶಲ್ಲಿ ಆಯೆಕ್ಕಕ್ಕೋ ಏನೋ.

      1. (ಗೋಧ್ರದ ನಂತರ ಗುಜರಾತಿಲಿ ಎಂತಾತು… ಅದೇ ಇಡಿ ದೇಶಲ್ಲಿ ಆಯೆಕ್ಕಕ್ಕೋ ಏನೋ) ಸರಿಯಾಗಿ ಆಲೋಚನೆ ಮಾಡಿಕ್ಕಿ, ಪರಿಣತ ಫಲ೦ಗಳ ಬಗ್ಗೆ ನಿಷ್ಪಕ್ಷವಾಗಿ ಚಿ೦ತಿಸಿಯೇ ಆಗಿರೆಕು ಹೀ೦ಗಿರ್ತ ಹೇಳಿಕೆಗಳ ಕೊಡುವದು ಶ್ಯಾಮಣ್ಣಾ.. ನಮ್ಮ ಸ೦ಸ್ಕಾರ ನವಗೆ ಯಾವುದೇ ಕಾರಣಕ್ಕೂ ಕೊಲೆ, ಸುಲಿಗೆ, ಮಾನಭ೦ಗ, ಕಿಚ್ಚಿಕ್ಕುವದರ ಕಲಿಸಿದ್ದಿಲ್ಲೆ. ಯಾವುದೇ ಕಾರಣಕ್ಕೂ ನಮ್ಮ ದೇಶವ ಪ್ರೀತಿಸುತ್ತ ನಾವೇ ನಮ್ಮ ಕಾರ್ಯಾ೦ಗ ಮತ್ತು ನ್ಯಾಯಾ೦ಗಕ್ಕೆ ಬೆಲೆ ಕೊಡದ್ದೆ, ಅರಾಜಕೀಯವಾಗಿ ದ೦ಗೆ, ದೊ೦ಬಿಗೆ ಹೆರಟರೆ ನಮ್ಮ ಮೆಟ್ಳೆ ನೋಡ್ತವಕ್ಕೆ ಬೇಕಾದ ಎಲ್ಲಾ ಸಹಾಯ೦ಗಳನ್ನೂ ನಾವೇ ಪರೋಕ್ಷವಾಗಿ ಮಾಡಿಕೊಟ್ಟ ಹಾ೦ಗೆ ಅಕ್ಕಷ್ಟೆ. ಹೀ೦ಗಿರ್ತ ವಿಷಯ೦ಗಳ ಪಬ್ಲಿಕ್ ಆಗಿ ಹೇಳುವಗ ಇದರ ಓದುತ್ತ ಯುವಕರ / ಸಮಾಜದ ಮೇಲೆ ಅದು ಹೇ೦ಗಿರ್ತ ಪರಿಣಾಮ ಬೀರುಗು ಹೇಳಿಯುದೆ ಆಲೋಚನೆ ಮಾಡಡದೋ.. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನವಗರಡಿಯದ್ದೆ ನಾವೇ ದೇಶದ್ರೋಹ ಮಾಡಿದ ಹಾ೦ಗೆ ಅಪ್ಪಲಾಗ ಅಲ್ಲದೊ?

        1. ನಿಂಗ ಹೇಳುದು ಸರಿ.. ಆದರೆ ಗುಜರಾತಿಲಿ ಆದ್ದು ಒಪ್ಪಣ್ಣನೇ ಬರದ್ದ..
          (ಬಾಕಿ ಒಳುದ ಎಡಿಗಾದಷ್ಟು ಜೆನ ಜೀವ ಒಳಿಶಿಗೊಂಡು ರಾವಣ ಸಂಹಾರಕ್ಕೆ ತಯಾರಾದವು.)
          ಆವಾಗ ಅಲ್ಲಿ ನಡದ್ದು ದಂಗೆ ದೊಂಬಿ ಆಗಿದ್ದಿದ್ದರೆ ಅದು ಅಲ್ಲಿ ಆಗಿಕೊಂಡೆ ಇರೆಕ್ಕಿತ್ತು..
          ಆದರೆ ಗುಜರಾತಿಲಿ ಮತ್ತೆ ಇಂದಿನವರೆಗೆ ಯಾವದೇ ಕೋಮು ಗಲಭೆ ಆಯಿದಿಲ್ಲೆ ಹೇಳುದೂ ಅಷ್ಟೆ ನಿಜ ಅಲ್ಲದಾ… ಮಾಂತ್ರ ಅಲ್ಲ ಗುಜರಾತಿನ ಅಭಿವೃದ್ಧಿ ಕೂಡಾ ಆವುತ್ತಾ ಇಪ್ಪದು ಅಮೇಲೆಯೇ ಅಲ್ಲದಾ?
          ನಿಂಗೊಗೆ ಒಂದು ವಿಷಯ ಹೇಳ್ತೆ… (keep it off the record) ಅಯೋಧ್ಯೆಲಿ ಕಟ್ಟಡ ಡೆಮೋಲಿಶ್ ಅಪ್ಪದಕ್ಕೆ ಮೊದಲು ಆನು ಎನ್ನ ಫ್ರೆಂದಿನ ಒಟ್ಟಿಂಗೆ ಆನು ಇತ್ತಿದ್ದ ಪತ್ರಿಕೆಯ (ಕನ್ನಡದ ಪ್ರಸಿದ್ದ ವಾರಪತ್ರಿಕೆ) ಪರವಾಗಿ ಅಲ್ಲಿಗೆ ಹೋಗಿತ್ತೆದ್ದೆಯ. ಅಲ್ಲಿ ಎಂಗ ವಿ** ***ರ್ ನ ಸಂದರ್ಶನ ಮಾಡಿತ್ತಿದ್ದೆಯ. ಅವಂಗೆ ಎಂಗಳ ಒಂದು ಪ್ರಶ್ನೆ ಹೀಂಗಿತ್ತು ” ಅಲ್ಲಿಪ್ಪ ಕಟ್ಟಡ ತೆಗವಲೆ ಬ್ಯಾರಿಗ ಬಿಡದ್ದರೆ ಎಂತ ಮಾಡ್ತಿ?”
          ಆವ ಎಂತ ಉತ್ತರ ಕೊಟ್ಟ ಹೇಳಿ ಆನು ಇಲ್ಲಿ ಹೇಳ್ತಿಲ್ಲೆ. (it was off the record)
          (ಆದರೆ ಒಂದು ವರ್ಷಂದ ಒಳ ಅವ ಎಂತ ಹೇಳಿತ್ತಿದ್ದನೋ ಅದೇ ಅಲ್ಲಿ ನಡದು ಹೋತು)
          ಎಂಗ ಕೇಳಿದೆಯ ”ಹಾಂಗೆಲ್ಲ ಮಾಡಿರೆ ದೇಶಲ್ಲಿ ರಕ್ತದ ಹೊಳೆಯೇ ಹರಿಗಲ್ಲದಾ?”
          ಅವನ ಉತ್ತರ ” ಕಾಲಕಾಲಕ್ಕೆ ಅಂತಾ ಹೊಳೆಗ ಹರಿಯಕ್ಕಾದ್ದು ಕಾಲದಧರ್ಮ, ಹಿಂದುತ್ವ, ಧರ್ಮ ಹೇಳುದು ಒಳಿಯೆಕ್ಕಾದರೆ ಕಾಲಕಾಲಕ್ಕೆ ಅಂತಾದ್ದು ನಡೆಯಲೇ ಬೇಕು”
          (off the record ಆದಕಾರಣ ಅದರ ಪ್ರಿಂಟು ಮಾಡಿತ್ತಿದ್ದಿಲ್ಲೆಯ)

          1. ಗೋಪಾಲಣ್ಣ – ಶಾಮಣ್ಣ – ಪೆರುವದಣ್ಣ:
            ಒಳ್ಳೆ ಚಿಂತನೆಗೊ, ಬರಳಿ – ಇನ್ನೂ ಇನ್ನೂ ಬರಳಿ.

            ಶುದ್ದಿಲಿ ಬಿಟ್ಟು ಹೋದ ಅನೇಕ ವಿಶಯಂಗಳ ನಿಂಗೊ ಸೇರುಸಿದ್ದಿ. ಕೊಶಿ ಆತು ಒಪ್ಪಣ್ಣಂಗೆ.

            ಕಾಲಕಾಲಕ್ಕೆ ಅಂತಾದ್ಧು ಅಪ್ಪಲೇ ಬೇಕು.
            ಯದಾ ಯದಾಹಿ ಧರ್ಮಸ್ಯ…. 🙂 ಅಲ್ಲದೋ?

  14. ಆತ್ಮೀಯ ಒಪ್ಪಣ್ಣ,
    ಗ್ರಾಮೀಣ ಸೊಗಡಿನ ಬರೆಹವನ್ನು ಪ್ರತಿವಾರ ಓದುಗರ ಮುಂದಿರಿಸುವ ನಿನ್ನ ಈ ಪ್ರಯತ್ನಕ್ಕೆ ಮೊದಲಾಗಿ ಅಭಿನಂದನೆಗಳು.
    ಅನೇಕ ವಿಷಯಗಳು ಹಲವು ಆಯಾಮಗಳಲ್ಲಿ ಚರ್ಚೆಗೊಳಪಟ್ಟಿದ್ದನ್ನು ನಾನು ಗಮನಿಸಿದ್ದೇನೆ.
    ಈ ಬಾರಿ ದೇಶದ ಗಮನವನ್ನು ಬಹುವಾಗಿ ಸೆಳೆದ ಗೋಧ್ರ ಹತ್ಯಾಕಾಂಡದಂತಹ ಸೂಕ್ಷ್ಮ ವಿಷಯವನ್ನು ಹರಟೆಯ ಹೂರಣಕ್ಕೆ ಬಳಸಿದ್ದು ವಿಶೇಷವೆನಿಸಿತು.
    ಸಾವಿರಾರು ಸಂಘಪರಿವಾರದ ಕಾರ್ಯಕರ್ತರು, ಗುಜರಾತ್ ನ ಜನ ಸಾಮಾನ್ಯರು ಮರೆಯಲಾಗದ ಆ ಘಟನೆಯಾ ಅಂತಿಮ ತೀರ್ಪು ಮಾರ್ಚ್ 1 ನೇ ದಿನಾಂಕದಂದು ಹೊರಬೀಳಲಿದೆ.
    ಸಮಾಜಘಾತುಕ ಶಕ್ತಿಗಳಿಗೆ ಶಿಕ್ಷೆಯಾಗಲಿ, ಸತ್ಯಕ್ಕೆ ಜಯವಾಗಲಿ.
    ಶುಭಂ.
    Rajesh Padmar

    ಗೋಧ್ರಾ ಹತ್ಯಾಕಾಂಡ : ಮಾರ್ಚ್ 1 ಕ್ಕೆ 31 ಅಪರಾಧಿಗಳಿಗೆ ಶಿಕ್ಷೆ ಪ್ರಕಟ
    http://samvada.org/2011/news-digest/godhra-final-judgement-march1

    1. ಪದ್ಮಾರಿನ ರಾಜೇಶಣ್ಣಂಗೆ ನಮಸ್ಕಾರ ಇದ್ದು.
      ನಮ್ಮದೇ ಊರಿಂದ ಹೋಗಿ, ದೂರದ ಬೆಂಗುಳೂರಿಲಿ ಹೊಸ ಎತ್ತರಲ್ಲಿ ಇದ್ದುಗೊಂಡು, ಸಮಾಜಕ್ಕಾಗಿ ಕೆಲಸ ಮಾಡ್ತಾ ಇಪ್ಪ ನಿಂಗಳ ನೋಡಿರೆ ಒಪ್ಪಣ್ಣನ ಬೈಲಿನೋರಿಂಗೆ ಅಭಿಮಾನ ಬತ್ತು.

      ನಿಂಗೊ ಸಮಾಜಕ್ಕಾಗಿ ಇನ್ನೂ ಹೆಚ್ಚು ಕೊಡ್ಳೆ ಅವಕಾಶ ಕೂಡಿ ಬರಳಿ ಹೇಳಿ ಬೈಲಿನ ಪರವಾಗಿ ಹಾರಯಿಕೆ.
      ಒಳ್ಳೆ ಒಪ್ಪಕ್ಕೆ ಅಭಿವಂದನೆಗೊ, ಶುದ್ದಿಸಂಕೊಲೆ ಕೊಟ್ಟದಕ್ಕೆ ಧನ್ಯವಾದಂಗೊ.
      🙂

  15. ಹತ್ತೊರಿಶ ಮದಲು ಕೊಚ್ಚಿಗೆ ಹೋಗಿಪ್ಪಗ ಹೀಂಗಿದ್ದತ್ತಿಲ್ಲೆ ! ಅಲ್ಲಲ್ಲಿ ಒಂದೊಂದದ್ರೂ ವೆಜಿಟೇರಿಯನ್ ಹೋಟೆಲು ಇದ್ದತ್ತು.
    ಈಗ ಫೂರಾ ಬೀಪು !
    ಹಾಲು ಕಸ್ತಲೆಪ್ಪಗ ಕೇಳಿರೆ, ದೊಡ್ಡ ಹೋಟೆಲುಗಳಲ್ಲಿಯೂ ನೀರು ನೀರೇ…

    ಓಂದು ವೈಟ್ರು ಕೇಳಿಯಫ್ಫಗ .. .ರಜ ಕುಶಾಲಿನ ಜೆನೆ , ಹೇಳಿತ್ತು..
    “” ಪಶುಕ್ಕಳೆ ತಿನ್ನುನ್ನ ನಾಟ್ಟಿಲ್..ಪಲಾ ಕೇಳ್ಕುನ್ನದ್ ? “” ಪೆರುವೆಷಂ ಇಸ್ಟಮ್ಪೋಲೆ … !

    ಹೇಳಿತ್ತು ! .
    ಆಲ್ಲೇ ಎರ್ನಾಕುಲಮ್ ಜಂಕ್ಶನ್ ಹತ್ತರೆ.. ” ಅರುವಿ ” ಹೇಳಿ ಒಂದು ಸಾವಯವ ಮತ್ತು ಪ್ರಾಕ್ರುತಿಕ ಆಹಾರದ ಹೋಟ್ಲು ಇದೇ ಜನ ತೋರ್ಸಿತ್ತು. ಲಾಯಿಕ ಇತ್ತು. ಪೂರ್ತಿ ಜನ ಮುರಿಕ್ಕಿಯನ್ಡು … ಎಲ್ಲಾ ಯುರೋಪಿನವು !

    ಇನ್ತಿಪ್ಪಗ…. ಹಾಂಗೇ ಈ ಭಾರದ ಗವರ್ನರುಗಳೊ . . . ಇಲ್ಲಿ ಗೋವಿನ ಬಗ್ಗೆ ಇನ್ನೊಂದು ಸ್ವಾತಂತ್ರ ಹೋರಾಟವೇ ಆಯೆಕಕ್ಕು

    1. ಈಗಳುದೆ ಇದ್ದು ಬಾಲಣ್ಣಾ.. ಹುಡ್ಕಿ ಹಿಡಿವಲೆ ಚೂರು ಕಷ್ಟ ಅಷ್ತೆ.. ಪಾಲಾರಿವಟ್ಟ೦ ಜ೦ಕ್ಷನಿ೦ದ ವೈಟ್ಟಿಲ ಹೋವ್ತ ಮಾರ್ಗದ ಕರೇಲಿ ಒ೦ದು ತಮಿಳ೦ಗಳ ಸಸ್ಯಾಹಾರಿ ಹೋಟ್ಲು ಇದ್ದು, ಎಡಪ್ಪಳ್ಳಿ ಎ೦ ಎ ಜೆ ಆಸ್ಪತ್ರೆ ದಾರಿಲಿ ಒ೦ದಿದ್ದು, ಎ೦ ಜಿ ರೋಡಿಲ್ಲಿ ಒ೦ದಿದ್ದು, ಹೀ೦ಗೆ ಕೆಲವು ಇದ್ದು, ಹುಡುಕ್ಕಿ ಹಿಡಿವಲೇ ಕಷ್ಟ.. ಕೇರಳಲ್ಲಿ ಒಟ್ಟಾರೆ ಹೇಳಿರೆ ವೆಜಿಟೇರಿಯನ್ ಹೋಟ್ಳುಗೊ ಕಮ್ಮಿಯೇ.. ಕರ್ಣಾಟಕ ಮತ್ತು ತಮಿಳ್ ನಾಡಿ೦ಗೆ ಹೋಲಿಸಿರೆ ಕೇರಳಲ್ಲಿ ತು೦ಬಾಕಮ್ಮಿ.. 🙁

  16. Gujarath Jenango aagale theerpu kottaydu.

    Avu innu avara janmalli hingippa heya kruthya maduva modalu ondari gujarath ne nenpu madigongu.

    Avakke pettu kottare buddi bappadu.

    Jai Shree Ram.

    1. { Avakke pettu kottare buddi bappadu. }
      ಹಾಂಗೇ ಆಯಿದು ನಂದಣ್ಣ ಅಲ್ಲಿ,
      ಕಜ್ಜುನಾಯಿ ಕಚ್ಚುಲೆ ಬಂತು, ಎರಡ್ಡು ಜೆಪ್ಪುವಗ ಹೆದರಿ ದೂರ ಓಡಿತ್ತು!
      ಅಲ್ಲದೋ? 😉

    1. ಅದೊಂದರ ಹಿಡಿವಲೆ ಸಮಗಟ್ಟು ರುಜುವಾತಿಲ್ಲೆ.
      ಅದಲ್ಲದ್ದೆ ಬಾಕಿ ಸುಮಾರ ಹಿಡುದು ನೇಲುಸುತ್ತವಡ, ಅಲ್ಲದೋ?
      ಸರೀ ಗೊಂತಾಯಿದಿಲ್ಲೆ, ಗುಣಾಜೆಕುಂಞಿಯ ಹತ್ತರೆ ಕೇಳೆಕ್ಕಟ್ಟೆ.. 🙂

  17. ಗುಣಾಜೆಕುಂಞಿಗೆ ಹೇಳಿ ಎಂತ, ಆರಿಂಗಾರು ಕೋಪ ಬಕ್ಕು, ಈ ಘಟನೆ ಬಗ್ಗೆ ಗ್ರೇಶುವಗ. ತೀರ್ಪು ಬಂದಪ್ಪಗ ಮತ್ತೊಂದರಿ ಒಪ್ಪಣ್ಣ ಘಟನೆಯ ನೆಂಪು ಮಾಡಿದ. ಘಟನೆಗೆ ಕಾರಣರಾದವರ ರಾವಣರು ಹೇಳಿದ್ದು ಲಾಯಕಾಯಿದು. ಒಟ್ಟಿಂಗೆ ಗೋಹತ್ಯೆಯೂ ನೆಂಪಾದ್ದದು ಸಹಜ. ದನಗಳ ಕೊಲ್ಲುತ್ತವಕ್ಕೆ, ಭಗವಂತನೇ ಶಿಕ್ಷೆ ಕೊಡೆಕಷ್ಟೇ, ಸರಿಯಾದ ಮಾತು ಒಪ್ಪಣ್ಣ. ಮತ್ತೆ ಈ ಸರಕಾರದವು /ಕೋರ್ಟಿನವು ಈ ಕಾರ್ಯ ಮಾಡ್ಳೆ ಇದ್ದೊ ? ಐದು ಸರ್ತಿ ನೆಮಾಜು ಮಾಡಿ ನೆಲನಕ್ಕಿರೂ ಒಂದೇ, ಮೆಕ್ಕಕ್ಕೆ ಹೋದರೂ ಒಂದೇ! ಈಗಾಣ ಕಾಲಲ್ಲಿ ಆಧುನಿಕ ಸಮಾಜಲ್ಲಿ ಹೊಂದಿಗೊಂಡು ಹೋವುತ್ತ ಮನಸ್ಸಿಪ್ಪ ಸುಂದರ ಧರ್ಮ ಬೇಕು. ಅಪ್ಪು ಒಪ್ಪಣ್ಣಾ.
    ಕರ್ಣನ ಹಾಂಗೆ ಗುಣಾಜೆಕುಂಞಿ ಕಡ್ಳೆ ಕೊಟ್ಟದು ಕೇಳಿ ನೆಗೆ ಬಂತು.

    1. ಬೊಳುಂಬುಮಾವಾ°..
      ಆರಿಂಗಾರುದೇ ಕೋಪ ಬಕ್ಕು, ಆದರೆ ಗುಣಾಜೆಕುಂಞಿಗೆ ರಜ ಜಾಸ್ತಿಯೇ ಬೇಕಾರೆ! 😉

      ಬೈಲಿಂಗೆ ನೆಂಪುಮಾಡ್ಳೆ ಕಾರಣ ಆದ ಗುಣಾಜೆಕುಂಞಿಗೆ ಅಭಿನಂದನೆ ಹೇಳುವೊ°, ಅಲ್ಲದೋ?
      ಸುಂದರ ಧರ್ಮ ಗೋಧ್ರಾಂದಾಗಿ ಬೆಳೆಯಲಿ 🙂

  18. ಏಪ್ಪಾ., ಬರದ್ದು ಹಾಸ್ಯ ಭರಿತ ಆದರು ಎಷ್ಟೊಂದು ವಿಷಯಂಗೋ

    ಗೋದ್ರಾ, ಗೋ ಹತ್ಯೆ ಎರಡೂ ಮೈ ಝುಂ ಆತು ಓದಿಯಪ್ಪಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×