ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಸೋಣೆ ತಿಂಗಳಿನ ಜೋರು ಮಳೆ.
ಕುಂಡಡ್ಕಲ್ಲಿ ಮೊನ್ನೆ ಆದ್ದು ಹರಿಸೇವೆ-ದೇವಕಾರ್ಯ. ಹಳೇ ಹಳೇ ಕ್ರಮದ ಮನೆಂಗಳಲ್ಲಿ ಮಾಂತ್ರ ಇಕ್ಕಷ್ಟೆ ಆ ಆಚರಣೆ.
ಆಚಕರೆಯ ತರವಾಡುಮನೆಲೂ ಇದ್ದು. ಒರಿಶಕ್ಕೊಂದರಿ ಹೇಳಿಕೆ ಬತ್ತು. ಉಂಡಿಕ್ಕಿ ಬತ್ತ ಕ್ರಮವೂ ಇದ್ದು.
ಅದೆಂತದು, ಎಂತ್ಸಕ್ಕೆ ಮಾಡ್ತದು, ಹೇಂಗೆ ಮಾಡ್ತದು ಹೇಳಿ ತಿಳ್ಕೊಂಬ ಆಸಗ್ತಿ ಇದ್ದರೂ ಸಮೆಯ ಸಿಕ್ಕಿತ್ತಿದ್ದಿಲ್ಲೆ.
ಬರೇ ದುರ್ಗಾಪೂಜೆ, ಗೆಣವತಿಹೋಮ, ಶಿವಪೂಜೆ ಆದರೆ ಸಮ, ನೋಡಿನೋಡಿ ಗೊಂತಿದ್ದು, ಆದರೆ ಹರಿಸೇವೆ – ದೇವಕಾರ್ಯ ಹೇಳ್ತದು ರಜಾ ಅಪುರೂಪದ ಸಂಗತಿ, ಅಲ್ಲದೋ? ಏ°?
ಅದಿರಳಿ,
~
ಹಾಂಗೆ ಕುಂಡಡ್ಕಕ್ಕೆ ಹೋಪ ಲೆಕ್ಕಲ್ಲಿ ಹೆರಟೆಯೊ°.
ಹೆರಟೆಯೊ° – ಆರೆಲ್ಲ?,
ಮಾಷ್ಟ್ರುಮಾವ° – ಹೋಗಲೇ ಬೇಕಿದ, ಮದುಮ್ಮಾಯ° ಮಗ° ಅಮೇರಿಕಲ್ಲಿಪ್ಪಗ ಆರೂ ಹೋಗದ್ದರೆ ಹೇಂಗಕ್ಕು ಹೇಳಿಗೊಂಡು!
ಅವಲ್ಲದ್ದೆ, ಅವರ ಸಂಗಾತಕ್ಕೆ ಆಚಮನೆ ದೊಡ್ಡಣ್ಣ – ಒಟ್ಟಿಂಗೆ ಒಪ್ಪಣ್ಣಂದೇ.
ಬತ್ತೆ ಹೇಳಿದ ಅಜ್ಜಕಾನಬಾವ° ಕೈಕೊಟ್ಟ ಈ ಸರ್ತಿ; ಅಂಗಿ ಹಾಕಿ ಹೆರಡ್ಳಪ್ಪಗ ಅವರಲ್ಲಿಗೆ ಬಾಬು ಬಂತಡ, ಮದ್ದು ಬಿಡ್ಳೆ.
~
ಮಾಷ್ಟ್ರುಮಾವ° ಮುನ್ನಾಣದಿನವೇ ಮೂಡಬಿದ್ರೆಮಾವನತ್ರೆ ಮಾತಾಡಿ ಎಲ್ಲ ವೆವಸ್ತೆ ಮಾಡಿಗೊಂಡಿತ್ತಿದ್ದವು.
ನಾವು ಇಲ್ಲಿಂದ ಬಸ್ಸಿಲಿ ಹೋಗಿ ವಿಟ್ಳಲ್ಲಿ ಇಳಿತ್ತದು. ಅದೇ ಹೊತ್ತಿಂಗೆ ಮೂಡಬಿದ್ರೆ ಮಾವ ಕಾರಿಲಿ ಬಂದು ವಿಟ್ಳಲ್ಲಿ ನಿಂಬದು.
ಹ್ಮ್, ಮೂಡಬಿದ್ರೆ ಮಾವನವವರ ಮೂಲಮನೆಯೇ ಕುಂಡಡ್ಕ ಅಡ, ಮಾಷ್ಟ್ರುಮಾವ° ಹೇಳಿದವು. ಮತ್ತೆ ಅವಕ್ಕೆ ಕಾರುದೇ ಅರಡಿಗು.
ಈ ಪ್ರಾಯಲ್ಲಿದೇ ಅವು ಕಾರು ತಿರುಗುಸೆಂಡು ಹೋರ್ನು ಹಾಕುತ್ಸು ಕಂಡ್ರೆ ಅಳಿಯನಿಂದಲೂ ಲಾಯಿಕ ಬಿಡ್ತವು ಹೇಳಿ ಎಲ್ಲೋರುದೇ ಹೇಳುಗಡ!
ಅದಿರಳಿ. ವಿಟ್ಳಂದ ಮತ್ತೆ ಅವರ ಒಟ್ಟಿಂಗೆ ಹೋಪದು – ದಾರಿಗುರ್ತಕ್ಕೂ ಒಳ್ಳೆದು, ಮಳಗೂ ಒಳ್ಳೆದು – ಹೇಳ್ತ ಲೆಕ್ಕಲ್ಲಿ.
~
ಉದೆಕಾಲದ ಕೃಷ್ಣಬಸ್ಸಿಂಗೆ ಹೆರಟಾತು.
ಮಾಷ್ಟ್ರುಮಾವನೇ ಟಿಕೇಟುಮಾಡಿದವು. ಉದೆಕಾಲದ ಹೊತ್ತಾದ ಕಾರಣ ಬಸ್ಸು ಕಾಲಿ ಇತ್ತು. ಮಾಷ್ಟ್ರುಮಾವಂದೆ ದೊಡ್ಡಣ್ಣಂದೇ ಒಟ್ಟಿಂಗೆ ಒಂದು ಸೀಟಿಲಿ ಕೂದವು. ನಾವೂ ಚಳಿಗಾಳಿಬೀಳದ್ದ ಸೀಟುನೋಡಿ ಕೂದುಗೊಂಡತ್ತು, ಬೆಶ್ಚಂಗೆ!.
ಮಾರ್ಗ ಪೂರ ಚೆಂಡಿ, ಎಲ್ಲಿನೋಡಿರೂ ಕೊಡೆ
-ಶಂಬಜ್ಜನ ಕಾಲದ ಊದ್ದ ಕೊಡೆ ಅಲ್ಲ, ಮೂರು-ನಾಕು ಮಡಿಕ್ಕೆ ಮಾಡಿ ವೇನಿಟಿಬೇಗಿನ ಒಳ ಹಿಡಿತ್ತ ನಮುನೆಯ ಸುಚ್ಚಿನ ಕೊಡೆ.
ನಾವು ಬೆಶ್ಚಂಗೆ ಸೀಟಿಲಿ ಕೂದರೆಂತಾತು, ಆಚ ಷ್ಟೋಪಿಲಿ ಒಬ್ಬ ಚೆಂಡಿಯವ° ಬಂದು ಹತ್ತಿದ, ಬ್ರೇಕಿನ ಬೀಸಕ್ಕೆ ಅವನ ಚೆಂಡಿಕೊಡೆ ಈಚವನ ಮೈ ಮೇಗೆ! ಬೆಶ್ಚಂಗೆ ಪೂರ ನೀರಾತು!
ಹತ್ತಿದವಂಗೆ ಕೊಡೆ ಹಿಡ್ಕೊಳದ್ದೆ ನಿವುರ್ತಿ ಇಲ್ಲೆ, ಬಿಡುಸಿ ಹಿಡ್ಕೊಂಬಲೆ ಎಡಿಯ, ಅದಕ್ಕೆ ಮಡುಸಿಯೇ ಹಿಡ್ಕೊಂಬದು!!
ಅದರ ನೀರ ಹನಿ ಪೂರ ರಟ್ಟಿಗೊಂಡು – ಕೆಳ ಮಡಗಿರೆ ಮಣ್ಣು ಹಿಡಿಗು, ಕುರೆ ಕಿರಿಂಚಿ!
ತಿರುಗಾಸಿನ ಬ್ರೇಕು ಹಾಕುವಗ ಟಾರ್ಪಲಿನ ನೀರು ಕರೆಲಿ ಕೂದ ಬೆಳಿವಸ್ತ್ರದ ಒಬ್ಬ° ಮಾವನ ಮೇಗೆ.
ಉದಿಉದಿಅಪ್ಪಗಳೇ ಓದಲೆ ಹೇಳಿ ತೆಕ್ಕೊಂಡ ಪೇಪರು ಚೆಂಡಿ!! – ಒಸ್ತ್ರವೂ, ಅಂಗಿಯೂ, ಒಣಕ್ಕು ಚೆಂಡಿಹರ್ಕೂ – ಅದರೊಟ್ಟಿಂಗೆ ಎಲ್ಲವುದೇ! ಮತ್ತೆಂತರ ಓದುದು, ಮಡುಸಿ ಮಡಿಕ್ಕೊಂಬದೇ, ಚಳಿಗೆ ಕೈ ಕಟ್ಟಿ!!
ಕೃಷ್ಣಬಸ್ಸಿಲಿ ಈ ಊರಿನ ಜೀವನವೇ ಇದ್ದೋ – ಹೇಳಿ ಕಾಣ್ತು ಒಂದೊಂದರಿ!…
ಅಂತೂ-ಇಂತೂ ವಿಟ್ಳ ಎತ್ತಿತ್ತು.
ಎಂಗೊ ಇಳುದೆಯೊ°.
~
ಹೆಚ್ಚೊತ್ತು ಕಾಯೆಕ್ಕಾಯಿದಿಲ್ಲೆ – ಮಾವನ ಕಾರು ಮಾರ್ಗದ ಆಚ ಕೊಡಿಲಿ ಕಂಡತ್ತು!
ಎಂಗಳ ಕಂಡು ಕೊಶಿಲಿ ಕಾರು ಎರಡು ಹೋರ್ನು ಹಾಕಿತ್ತು!
ಶ್ಟೇರಿಂಗು ಬುಡಲ್ಲಿದ್ದ ಮಾವಂಗೂ, ಜೋರು ಹೋಪಗ ಹೇಳುಲೆ ಹತ್ತರೆ ಕೂದ ಅತ್ತಗೂ ಎಂಗಳ ಕಂಡು ಕೊಶಿ ಆತು.
ಏನು- ಒಳ್ಳೆದು ಮಾತಾಡಿಗೊಂಡೇ ಕಾರಿನ ಬಾಗಿಲು ತೆಗದವು.
ಹಿಂದಾಣ ಸೀಟಿಲಿ ಕೂದೆಯೊ – ಮಾಷ್ಟ್ರುಮಾವಂದೇ ಆಚಮನೆ ದೊಡ್ಡಣ್ಣಂದೇ ಆಚೀಚೊಡೆ ಕಿಟಿಕಿ ಕರೆಲಿ, ನಾವು ಮಧ್ಯಲ್ಲಿ – ಪುನಾ ಬೆಶ್ಚಂಗೆ!! ![]()
ಉಪಚಾರ ಮಾತಾಡಿಗೊಂಡೇ ಕುಂಡಡ್ಕಕ್ಕೆ ಹೋಪಲೆ ಸಾಲೆತ್ತೂರು ಮಾರ್ಗಲ್ಲಿ ಹೆರಟೆಯೊ° ಮಾರ್ಗಲ್ಲಿ ಅಡ್ಡಡ್ಡ ನೆಡೆತ್ತ ಕೊಡೆಗೊಕ್ಕೆ ಹೋರ್ನು ಹಾಕಿಯೊಂಡು!..
~
ಮಳೆಗೆ ಕನ್ನಾಟಿ ಕಿಟುಕಿ ಹಾಯ್ಕೊಂಡೆಯೊ°.
ಹೆರಾಣ ಮಳೆನೀರು ಎಂಗಳ ಪಂಚಾತಿಗೆಗೆ ಏನೂ ತೊಂದರೆ ಕೊಟ್ಟಿದಿಲ್ಲೆ.
ಎಷ್ಟೊತ್ತಿಂಗೆ ಹೆರಟಿ – ಕಾಪಿಗೆಂತ, ಅಮೇರಿಕಲ್ಲಿ ಮಳೆ ಇದ್ದೋ – ಎಲ್ಲ ಮಾತಾಡಿ ಆತು!
ಮಾತಾಡಿ ಮಾತಾಡಿ ಸಾಲೆತ್ತೂರಿಂಗೆ ಎತ್ತಿಯೇ ಬಿಟ್ಟತ್ತು.
~
ಸಾಲೆತ್ತೂರಿಂದ ಕುಂಡಡ್ಕಕ್ಕೆ ಜಾಸ್ತಿ ದೂರ ಏನಿಲ್ಲೆ. ನೀರ್ಚಾಲಿಂದ ಸೂರಂಬೈಲಿಂಗೆ ಹೋದಷ್ಟು ಅಕ್ಕೋ ಏನೋ!
ಅಷ್ಟೂ ಆಗ.
ಜಾಸ್ತಿ ಆದ ಹಾಂಗೆ ಕಾಣ್ತು ನವಗೆ – ಎಂತಗೆ ಹೇಳಿತ್ತುಕಂಡ್ರೆ, ಅಲ್ಯಾಣ ಮಾರ್ಗ ಹಾಂಗಿದ್ದು.
ಹ್ಮ್, ಈ ಮಳೆಗಾಲದ ನೀರು ಸರ್ವಸ್ವವೂ ಅಲ್ಯಾಣ ಮಾರ್ಗದ ಗುಂಡಿಗಳಲ್ಲಿ ಇದ್ದೋ ತೋರ್ತು ಒಂದೊಂದರಿ.
ಅಡಿಗೆಉದಯಣ್ಣ ಬೆಶಿಎಣ್ಣಗೆ ಸುಟ್ಟವು ಬಿಟ್ಟನಮುನೆ ಅಲ್ಲಲ್ಲಿ ಗುಂಡಿಗೊ, ಅದರ್ಲಿ ಕೆಂಪು ಕೆಂಪು ನೀರು.
ಗುಂಡಿ ಅಲ್ಲ, ಕೆಲವು ದಿಕ್ಕೆ ಪಳ್ಳ, ತೋಡು – ಎಲ್ಲವೂ ಇದ್ದು. ಪಡ್ರೆಮಾವನ ಇಂಗುಗುಂಡಿಯ ನಮುನಗೆ!
ಆ ಪಳ್ಳಲ್ಲಿ ಗೋಣಂಗ ಇದ್ದರೂ ಗೊಂತಾಗ ಹೇಳಿ ಶರ್ಮಪ್ಪಚ್ಚಿ ಒಂದೊಂದರಿ ನೆಗೆ ಮಾಡುಗು.
ಮಾತಾಡಿಗೊಂಡು ಹೋದೆಯೊ°. ಎಂತರ ಮಾತಾಡಿದ್ದು?
ಡ್ರೈವರಂಗೆ ಮಾತಾಡ್ಲೆ ಗೊಂತಿಲ್ಲೆ – ಪಳ್ಳಂಗಳ ಎಡೆಲಿ ಜೀಪು ಹೋಪಗ ಮಾತಾಡಿರೆ ಆಗ!
ಮಾಷ್ಟ್ರುಮಾವಂದು, ಮೂಡಬಿದ್ರೆ ಮಾವಂದು ಎಂತದೋ ಮಾತುಕತೆ ಅದಾಗಲೇ ಸುರು ಆಗಿತ್ತು – ಇಬ್ರುದೇ ಮಾಷ್ಟ್ರ ಆಗಿ ರಿಠೇರ್ಡು. ಎಲೋಷಿಯಸ್ಸು ಕೋಲೇಜು, ಮೂಡಬಿದ್ರೆ ಶಾಲೆ, ಸಂಪಾಜೆ ಶಾಲೆ, ಕೆಯ್ಯೂರು ಶಾಲೆ – ಎಂತೆಲ್ಲ ಮಾತಾಡಿಗೊಂಡಿತ್ತಿದ್ದವು!
ಅತ್ತೆ ಯೇವತ್ತಿನಂತೆ, ಮೌನ!
ಇನ್ನು ಬಾಕಿ ಆರು – ಆಚಮನೆ ದೊಡ್ಡಣ್ಣಂದೇ, ಒಪ್ಪಣ್ಣಂದೇ!
ಒಂದು ಕ್ಷಣ ಮೋರೆನೋಡಿಕ್ಕಿ ವಿವರುಸುಲೆ ಸುರು ಮಾಡಿದ°..
ದೇವಕಾರ್ಯ ಹೇಳಿರೆ ಎಂತರ, ಹರಿಸೇವೆ ಹೇಳಿರೆ ಎಂತರ, ಅದರ ಹೇಂಗೆ ಮಾಡುದು, ಮಂತ್ರ, ಅರ್ಥ ವಿವರಣೆ ಸಹಿತವಾಗಿ ಎಳೆ ಎಳೆಯಾಗಿ ವಿವರುಸಿಗೊಂಡು ಹೋದ°.
ಒಟ್ಟಿಂಗೆ ಮಾಷ್ಟ್ರುಮಾವಂದೇ ಹಿಂದೆ ತಿರುಗಿ ಕೆಲವೆಲ್ಲ ವಿಶಯಂಗೊ ಹೇಳಿದ್ದವು, ಅಡಕ್ಕೆ ಹೋಳುಮಾಡುದರ ಎಡಕ್ಕಿಲಿ!
~
ನವಗೆ ದೇವರು-ಪಿತೃಗೊ – ಇಬ್ರುದೇ ಪೂಜ್ಯರು.
ಪಿತೃಕಾರ್ಯ ಮಾಡ್ತದು ಗೊಂತಿದ್ದಲ್ಲದೋ – ಬಟ್ಟಮಾವನ ದಿನಿಗೇಳಿ, ಪರಾಧೀನಕ್ಕೆ ಕೂರುಸಿ, ಅವರ ಮೇಗೆ ಪಿತೃಗೊಕ್ಕೆ ಆವಾಹನೆ, ಪೂಜೆ, ಸಮರ್ಪಣೆ ಮಾಡಿ, ಅವಕ್ಕೆ ಸಂತೃಪ್ತಿ ಅಪ್ಪ ಹಾಂಗೆ ಮಾಡುದೇ ಪಿತೃಕಾರ್ಯ.
ಅದೇ ನಮುನೆ ದೇವರಿಂಗೂ ಆಚರಣೆ ಮಾಡುದು.
ಒಂದು ಗೆಣವತಿ, ದುರ್ಗೆ ಮಂಡ್ಳ ಹಾಕಿ ಪೂಜೆ ಮಾಡುದು. ಪೂಜೆ ಯೇವತ್ತಿನ ಹಾಂಗೆಯೇ.
ಧ್ಯಾನ, ಆವಾಹನೆ, ಅರ್ಚನೆ, ಪುಷ್ಪಾಂಜಲಿ, ಎಲ್ಲವೂ ಇದ್ದು. ಆದರೆ ನೈವೇದ್ಯಕ್ಕಪ್ಪಗ ರಜಾ ವಿತ್ಯಾಸ ಇದ್ದು.
ಎಂತರ ಹೇಳಿತ್ತು ಕಂಡ್ರೆ, ಎಲ್ಲಾ ನೈವೇದ್ಯ ತಂದು ದೇವರ ಎದುರು ಮಡಗುದು.ನೈವೇದ್ಯ ಮಾಡುದು.
ಆದರೆ ಕೂಡ್ಳೇ ಉದ್ವಾಸನ ಮಾಡ್ಳಿಲ್ಲೆ, ರಜಾ ಎಡೆಬಿಡ್ಳೆ ಇದ್ದು ಇಲ್ಲಿ.
ಇಷ್ಟಾದ ಕೂಡ್ಳೇ ಬ್ರಾಹ್ಮಣರ ಮಣೆಮಡಗಿ ಕೂರುಸುದು, ಜಾಗೆ ಇದ್ದರೆ ದೇವರೊಳ. ಅಲ್ಲದ್ರೆ ಎಲ್ಲಿ ಜಾಗೆ ಇದ್ದೋ ಅಲ್ಲಿ.
ಅವಕ್ಕೆ ಪೂಜೆ ಮಾಡಿ ಅವರ ಮೈ ಮೇಗೆ ಇಷ್ಟ ದೇವರ,ಕುಲದೇವರ ಆವಾಹನೆ ಮಾಡುದು.
ನಮಸ್ಕಾರವ ಸಮರ್ಪಿಸುದು.
ಮಾಡಿದ ಪಾಕಂಗಳ ಎಲ್ಲ ಬಳುಸುದು, ಒಂದೊಂದೇ.
ಹಸ್ತೋದಕ ಮಾಡುದು. ಮನೆ ಎಜಮಾನನೇ ಖುದ್ದು ಬಂದು ಇದಂ ವೋ ಅನ್ನಂ – ಹೇಳಿ ಅಶನ ಮುಟ್ಟುಸಿ ಸ್ವೀಕರುಸುಲೆ ಹೇಳುದು.
ಬ್ರಾಹ್ಮಣರು ಉಂಬಲೆ ಸುರು ಮಾಡ್ತವು..
ಉಂಬದು – ಹೊಟ್ಟೆ ತುಂಬ – ಸಂತೃಪ್ತಿ ಅಪ್ಪಷ್ಟು.
ಸಂತೃಪ್ತಿ – ಉಂಬವಕ್ಕೂ, ಬಳುಸುವವಕ್ಕೂ..!
ಹ್ಮ್, ಆ ಮಣೆಲಿ ಕೂದಂಡು ಅಂಬಗ ಉಂಬದು ದೇವರಿಂಗೇ ಸಂತೋಷ ಆವುತ್ತು ಹೇಳುದು ನಮ್ಮ ಪರಿಕಲ್ಪನೆ.
ಹಾಂಗಾಗಿ ಯಜಮಾನಂದೇ ಅವರ ಸಂತೃಪ್ತಿಯನ್ನೇ ಬಯಸುತ್ತ°.
ಮಾಡಿದ ಎಲ್ಲಾ ಶಾಕಪಾಕಂಗಳ ಬಳುಸಿ ತೃಪ್ತಿಪಡುಸಿ ಆದ ಮೇಗೆಯೇ ದೇವರ ಮಂಡ್ಳದ ಎದುರು ಬಪ್ಪದು.
~ಮತ್ತೆ ಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ, ಹೊಡಾಡುದು – ಎಲ್ಲವುದೇ.
ದೇವರಿಂಗೆ ಹೂಗು ಹಾಕಿ ಎಲ್ಲ ಆಗಿ ಹೊಡಾಡಿದ ಮತ್ತೆ ಬ್ರಹ್ಮಾರ್ಪಣಕ್ಕಪ್ಪಗ, ಪುನಾ ಬ್ರಾಹ್ಮಣರ ಹತ್ತರೆ ಬಂದು, ಯಜಮಾನ ‘ಸಂತೃಪ್ತಿಯ ಆಶೀರ್ವಾದ’ ತೆಕ್ಕೊಂಬದು. ಅವರ ಮೇಗಂಗೆ ಆವಾಹನೆ ಮಾಡಿದ ದೇವರ ಅಂಶವ ಉದ್ವಾಸನೆ ಮಾಡುದು.
ಮತ್ತೆ ಪೂಜಗೆ ಬ್ರಹ್ಮಾರ್ಪಣ ಬಿಟ್ಟು, ನೈವೇದ್ಯ ಪ್ರಸಾದ ಸ್ವೀಕಾರ ಮಾಡುದು.
ಇದು ದೇವಕಾರ್ಯ.
ಎಲ್ಲಾ ಪೂಜೆ ಪುನಸ್ಕಾರಂಗಳೂ ದೇವಕಾರ್ಯವೇ ಆದರೂ, ಈ ನೈವೇದ್ಯ -ಹಸ್ತೋದಕ – ಆಪೋಶನ-ಉದ್ವಾಸನೆಯ ಎಡೆಗಳಿಂದಾಗಿ ಈ ದೇವಕಾರ್ಯವ ಎಡೆಮಡಗಿ ದೇವಕಾರ್ಯ ಹೇಳಿಯೂ ಹೇಳ್ತವಡ ಬಟ್ಟಕ್ಕೊ!
ಆಚಮನೆ ದೊಡ್ಡಣ್ಣ ಎಷ್ಟು ತಿಳ್ಕೊಂಡಿದ°..! ಕೊಶೀ ಅಪ್ಪದು ಅವನತ್ರೆ ಮಾತಾಡ್ಳೆ.
~
ದೇವಕಾರ್ಯಕ್ಕೆ ಗೆಣವತಿ, ದುರ್ಗಾಪೂಜೆ ಮಾಡ್ತಲ್ಲದೋ – ಇದರ ಎಡಕ್ಕಿಲೇ ಒಂದು ವಿಷ್ಣುವಿನ ಅಷ್ಟದಳ ಮಂಡ್ಳ ಬರದು, ಅದರ ಹತ್ತರೆ ಮುಡಿಪ್ಪು ಮಡಗಿ ಪೂಜೆ ಮಾಡಿರೆ ಅದಕ್ಕೆ ಹರಿಸೇವೆ ಹೇಳುತ್ತದು.
ನೈವೇದ್ಯಕ್ಕಪ್ಪಗ ಗೆಣಮೆಣಸು-ಬೆಲ್ಲ-ಹಾಕಿ ಮಾಡಿದ ಪಾನಕವೂ, ಹಸರಬೇಳೆ, ಬಾಳೆಹಣ್ಣು, ಗೆಣಮೆಣಸು, ಬೆಲ್ಲ ಹಾಕಿದ ಪನಿವಾರವನ್ನುದೇ ನೈವೇದ್ಯ ಮಾಡ್ತದು ಕ್ರಮ.
ವೆಂಕಟ್ರಮಣನ ಧನನಿಧಿಯಾದ ‘ಮುಡಿಪ್ಪು‘ ಇದ್ದಲ್ಲದೋ – ಅದಕ್ಕೆ ಒಂದು ರಜ ಸೇರುಸಿ, ಮನೆಯ ಲಕ್ಷ್ಮಿ ಯೇವತ್ತೂ ಅಕ್ಷಯವಾಗಿರಳಿ ಹೇಳ್ತ ಪ್ರಾರ್ಥನೆಯ ಒಟ್ಟಿಂಗೆ ವಿಷ್ಣು ಸ್ಮರಣೆ ಮಾಡ್ತ ಅಪುರೂಪದ ಕಾರ್ಯವೇ ಈ ಹರಿಸೇವೆ.
ದೇವಕಾರ್ಯದ ಒಟ್ಟಿಂಗೆ ಮಾಡಿರೇ ಅದರ ಹರಿಸೇವೆ ಹೇಳುದಡ. ಅಲ್ಲದ್ರೆ ಬರೇ ಮುಡಿಪ್ಪು ಪೂಜೆ ಹೇಳ್ತ ಮರಿಯಾದಿ ಅಡ.
~
ಹೆಚ್ಚಿನ ದಿಕೆಯೂ ಈ ಹರಿಸೇವೆ – ದೇವಕಾರ್ಯ ಎರಡನ್ನೂ ಒಂದೇ ದಿನ ಮಾಡ್ತವಡ.
ಕೆಲವು ದಿಕೆ ಮಾಂತ್ರ ಒಂದು ದಿನ ಹಿಂದೆಮುಂದೆ ಆಗಿಯೂ ಮಾಡ್ತ ಮರಿಯಾದಿ ಇದ್ದಡ.
ಶುಕ್ರವಾರ ದೇವಕಾರ್ಯ ಮಾಡಿ, ಶೆನಿವಾರ ಹರಿಸೇವೆ ಆತಡ ಓ ಮೊನ್ನೆ ಅರ್ತ್ಯಡ್ಕಲ್ಲಿ!
~
ಇಷ್ಟು ಹೇಳುವಗ ಕುಂಡಡ್ಕ ಮನೆ ಎತ್ತಿ, ಅವರ ಜಾಲಿಲಿ ಜೀಪು ತಿರುಗಿ ನಿಂದದು ಗೊಂತೇ ಆಯಿದಿಲ್ಲೆ.
ಜೀಪು ನಿಂದ ಕೂಡ್ಳೇ ಮಾತಾಡ್ತ ಶುದ್ದಿಯೂ ನಿಂದತ್ತು, ಮಾತಾಡದ್ದೆ ಇಳುದತ್ತು.
ಏನು-ಏನು ಕೇಳಿದವು ಕುಂಡಡ್ಕ ಮಾವ, ಬಾವ, ಪುಟ್ಟುಕೂಸು – ಎಲ್ಲೊರುದೇ.
~
ಪೂಜೆ ಸುರು ಆದ್ದಷ್ಟೆ.
ಇಂದು ಪೂರ್ತಿ ಕ್ರಮಂಗೊ ನೋಡಿಗೊಳೆಕ್ಕು ಹೇಳ್ತ ಉದ್ದೇಶಲ್ಲಿ ದೇವರೊಳ ಕಾಂಬ ಹಾಂಗೆ ಕೂದೊಂಡೆ.
ದೊಡ್ಡಣ್ಣ ಹೇಳಿದ ಎಲ್ಲಾ ಕ್ರಮಂಗಳ ಗಮನುಸಿಗೊಂಡಾತು.
ನೈವೇದ್ಯದ ಉದ್ವಾಸನೆ, ಬ್ರಹ್ಮಾರ್ಪಣ, ನೈವೇದ್ಯ ಪ್ರಸಾದ ಸ್ವೀಕಾರ ಎಲ್ಲ ಮುಗಾತು.
ಭರ್ಜರಿ ಊಟವೂ ಆತು!
ಊಟ ಆಗಿ ತಿರುಗ ಜೀಪಿಲಿ ಸಾಲೆತ್ತೂರಿಂಗೆ ಬಂದೆಯೊ°. ಮೂಡಬಿದ್ರೆ ಮಾವ° ಎಂಗಳ ಪುನಾ ವಿಟ್ಳಕ್ಕೆ ಬಿಟ್ಟವು.
ಅವು ಅತ್ಲಾಗಿ, ಎಂಗೊ ಇತ್ಲಾಗಿ – ಹೊತ್ತೊಪ್ಪಾಗಾಣ ಕೃಷ್ಣ ಬಸ್ಸಿಲಿ!
ಬಸ್ಸಿಲಿ ಕೂದುಗೊಂಡಿಪ್ಪಗ ಹೀಂಗೆಲ್ಲ ಅನುಸಿ ಹೋತು:
~
ಇನ್ನೊಬ್ಬನ ಹೊಟ್ಟೆ ತುಂಬುಸುದರ್ಲೇ ತೃಪ್ತಿ ಕಾಂಬ ನಮ್ಮ ಸಂಸ್ಕೃತಿ ಎಷ್ಟು ಶ್ರೀಮಂತ ಅಲ್ಲದೋ?
ಇನ್ನೊಬ್ಬನ ಮೈ ಮೇಗೆ ದೇವರ ಅಂಶ ಬರುಸಿ, ಅವನ ಹೊಟ್ಟೆ ತುಂಬುಸಿ, ಅವ ಸಂತೃಪ್ತಿ ಅಪ್ಪಗ ಮಾಡಿದ ಕಾರ್ಯ ಸಫಲ ಆತು ಹೇಳಿ ತಿಳ್ಕೊಂಬದು – ನಮ್ಮ ಪರಸ್ಪರತೆಯ ತೋರುಸುತ್ತು. ಅಲ್ಲದೋ?
ಆ ಲೆಕ್ಕಲ್ಲಿ ಊರಿನ ಒಂದಷ್ಟು ಜನಂಗೊಕ್ಕೆ ಊಟವನ್ನುದೇ ಕೊಡ್ತು ನಾವು. ಅದುದೇ ಒಂದು ಪುಣ್ಯದ ಕೆಲಸವೇ.
ಒಟ್ಟೊಟ್ಟಿಂಗೆ ನಮ್ಮ-ನೆಂಟ್ರುಗಳ ನಡುಕೆ ಇಪ್ಪ ಬಾಂಧವ್ಯ ಹೆಚ್ಚಪ್ಪಲೆ ಕಾರಣವೂ ಆವುತ್ತು.
ಹರಿಸೇವೆ, ದೇವಕಾರ್ಯ – ಹೀಂಗಿರ್ತ ವಿಶೇಷ ಆಚರಣೆಗೊ ನಮ್ಮ ಊರಿಲಿ ಮಾಂತ್ರ ಕಾಂಗಷ್ಟೇ.
ಅದುದೇ ಈಗೀಗ ಹಳೇ ತರವಾಡು ಮನೆಗಳಲ್ಲಿ ಮಾಂತ್ರ ಕಾಂಗಷ್ಟೇ.
ಪೇಟೆಲಿಪ್ಪವಕ್ಕೆ ಅವರವರ ಹೊಟ್ಟೆಗೆ ಸರಿಯಾಗಿ ತಿಂದುಗೊಂಡು ಹೋಪಲೇ ಪುರುಸೊತ್ತು ಇರ್ತಿಲ್ಲೆಡ ಭಾವ.
ಇನ್ನು ದೇವಕಾರ್ಯ, ಹರಿಸೇವೆ ಎಲ್ಲ ಮಾಡುಗೊ?
ಒಂದು ದಿನ ಪುರುಸೊತ್ತೋ ಮಣ್ಣ ಇದ್ದರೆ ಎಲ್ಲಿಗಾರು ತಿರುಗಲೆ ಹೋವುತ್ತವಡ. ಅದರಿಂದ ನವಗೆ ಮಾಂತ್ರ ಕುಶಿ ಸಿಕ್ಕುಗಷ್ಟೆ. ನಮ್ಮ ಹಿರಿಯೋರ ಹಾಂಗೆ ಇನ್ನೊಬ್ಬನ ತೃಪ್ತಿಪಡುಸುದರಲ್ಲಿ ನಾವು ಕುಶಿ ಕಾಂಬದು ಏವತ್ತು?
ಕಾಲ ಕಳುದ ಹಾಂಗೆ ನಾವು ಸ್ವಾರ್ಥಿಗೊ ಆವುತ್ತಾ ಇದ್ದು.
ನಾವು ನಮ್ಮಷ್ಟಕ್ಕೇ ಬದುಕ್ಕಿರೆ ಒಳುದವುದೇ ಅವರಷ್ಟಕೇ ಇರ್ತವು. ಅಲ್ಲದೋ?
ಪೇಟೆಲಿ ಹೇಂಗೂ ಇಲ್ಲೆನ್ನೆ, ನಮ್ಮ ಊರಿಲೂ ಕಮ್ಮಿ ಆಗಿಯೊಂಡಿದ್ದು ಈ ನಮುನೆ ಆಚರಣೆಗೊ.
ಹೆರದೇಶಂದ ಏವ ಏವದೋ ಸಂಸ್ಕೃತಿಗಳ ನಾವು ತೆಕ್ಕೊಂಡು ಬತ್ತು, ಲಾಯ್ಕಿದ್ದು ಲಾಯ್ಕಿದ್ದು ಹೇಳಿಗೊಂಡು!
ಅದರ ಎಡಕ್ಕಿಲಿ ನಮ್ಮ ಸಂಸ್ಕೃತಿಯ ಮರದರೆ ಹೇಂಗೆ?
ನಿಜವಾಗಿ ನೋಡಿರೆ ಹೆರಾಣವು ನಮ್ಮ ನೋಡಿ ಕಲ್ತುಗೊಳೆಕು. ಅಷ್ಟು ಒಳ್ಳೆಯ, ಶ್ರೀಮಂತ ಸಂಸ್ಕಾರ ನಮ್ಮದು.
ಹಾಂಗಿಪ್ಪ ನಮ್ಮ ಹಿರಿಯೋರ ಆಚರಣೆಗಳ ಯೇವತ್ತಿಂಗೂ ಕಾಂಬ ಹಾಂಗೆ ಒಳಿಶುವೊ°.
ನಮ್ಮಂದ ಮತ್ತಾಣೋರುದೇ ನೋಡಿ ಕಲ್ತುಗೊಂಬ ಹಾಂಗೆ ಮಾಡುವೊ°.
ಹರಿ, ಗುರು, ದೇವರು ನವಗೆ ಒಳ್ಳೆದು ಮಾಡ್ಳಿ.
ಒಂದೊಪ್ಪ: ಜನಸೇವೆಯೇ ಜನಾರ್ದನ ಸೇವೆ – ಇದುವೇ ದೇವಕಾರ್ಯದ ಹಾರಯಿಕೆ..!
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಒಪ್ಪಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಒಪ್ಪಣ್ಣ ಭಾವಾ.. ಮಾಹಿತಿಯುಕ್ತ ಲೇಖನ. ನಮ್ಮ ಹೆರಿಯೋರು ಪಾಲಿಸಿಗೊಂಡು ಬಂದ ಆಚರಣೆಗಳ,ಅವರ ಸಂಸ್ಕಾರಂಗಳ ಒಪ್ಪಕ್ಕೆ ವಿವರಿಸಿದ್ದೆ.
ಯೂರೋಪಿಲಿ ಹೆಚ್ಚಿನ ಪುರ್ಬುಗೋ ಚರ್ಚಿಂಗೆ ಹೊಪೋದು ಜೀವನಲ್ಲಿ ಎರಡು ಸರ್ತಿಯಡ,ಒಂದರಿ ಪುರ್ಬು ಅಪ್ಪಲೆ( ಬಾಪ್ತಿಸಂ) ,ಮತ್ತೊಂದರಿ ಮದುವೆಗೆ. ಮೂರನೇ ಸರ್ತಿ ಅವ ಪರಲೋಕ ಸೇರಿ ಅಪ್ಪಗ ಸಂಬಂಧಿಕರು (ಪುರುಸೊತ್ತು ಇದ್ದರೆ) ಶೋಕ ಸಭೆಗೆ ಹೋಪೊದಡ. ಆದರೆ,ಪ್ರತಿ ಶುಕ್ರವಾರ ಹೊತ್ತೋಪ್ಪಗ ತಿರುಗುಲೆ ಹೋದರೆ ತಿರುಗಿ ಮನೆ ಸೇರೋದು ಆದಿತ್ಯವಾರ ಇರುಳೆ. ಅಲ್ಯಾಣ ಸಾಂಸಾರಿಕ ಜೀವನ, ಅವಕ್ಕೆ ಬಿಡಿ, ನವಗೂ ಬೇಜಾರು ತರುಸುತ್ತು.
ಇನ್ನು ನಮ್ಮಲ್ಲಿಪ್ಪ ಪುರ್ಬುಗಳ ಮುಖ್ಯಸ್ಥಂಗೊಕ್ಕೆ ಸದ್ಬಳಕೆ ಶಬ್ದದ ಅರ್ಥವೂ ಗೊಂತಿಲ್ಲೆ !! ಬಹುಷಃ ಅವು ಸತ್ತು +ಬಳಕೆ ಹೇಳಿ ಸಂಧಿ ವಿಂಗಡಣೆ ಕಲ್ತದಾಯಿಕ್ಕು!!
ನಾವು ಭಾರತೀಯರೂ ಅವರ ದಿಕ್ಕಿಲಿ ಪಶ್ಚಿಮಕ್ಕೆ ನಡೆದರೆ ನಮ್ಮ ಸಂಸ್ಕೃತಿ,ಸಂಸ್ಕಾರಂಗಳೂ ಸೂರ್ಯನ ಹಾಂಗೆ ಮುಳುಗಿ ಜೀವನಲ್ಲಿ ಕತ್ತಲೆ ತುಂಬುಗು.ಮತ್ತೆ ಉದಿಯಪ್ಪದು ಯಾವಾಗಳೋ?
ನಾವು ನಡೆಯೆಕ್ಕಾದ ದಿಕ್ಕಿನ ತೋರುಸುತ್ತಾ ಇಪ್ಪ ನಿನಗೆ ಧನ್ಯವಾದ.
ಅಪ್ಪೂ,ಅಜ್ಜಕಾನ ಭಾವನ ತೋಟಲ್ಲಿ ಅಷ್ಟೂ ಕೊಳೆ ರೋಗವೋ?ಹನಿಕಡಿಯದ್ದ ಮಳೆ ಎಡೆಲಿ ಮದ್ದು ಬಿಡುವಷ್ಟು?ಬಾಬುವಿಂಗೆ ಹೇಳೆಕ್ಕು,ಮರ ಹತ್ತೊಗ ಜಾಗೃತೆ,ಹಾಮಸು ಅಲ್ಪ ಇದ್ದು,ಜಾರುಗು ಹೇಳಿ!!
[ಉತ್ತರುಸಿ]
ಹೊತ್ತುವೇಳೆ: 27 August,2010ರ 11:36 AM ಗೆ. (ಒಪ್ಪಸಂಕೊಲೆ)
ಏ ಭಾವ!! ಒಪ್ಪಣ್ಣನ ಲೇಖನದ ಒಟ್ಟಿನ್ಗೆ , ನಿಂಗಳ ಮಾಹಿತಿಯೂ ಅದಕ್ಕೆ ಪೂರಕವಾಗಿ ಇದ್ದು! ನಮ್ಮ ಸಂಸ್ಕೃತಿಯ ಒಳಿಶುವ ಒಂದು ಕಳಕಳಿ ಕಾಣ್ತು!!
[ಉತ್ತರುಸಿ]
ಲೇಖನ ಭಾರೀ ಲಾಯ್ಕಾಯ್ದು ಒಪ್ಪಣ್ಣ!!
“ಹರಿಸೇವೆ” ವಿಷಯ ತುಂಬಾ ಜನಕ್ಕೆ ಗೊಂತೆ ಇಲ್ಲೇ!! ಎನಗುದೆ ಗೊಂತಿತ್ತಿಲ್ಲೇ !!
ತುಂಬಾ ತುಂಬಾ ಧನ್ಯವಾದ !!!
[ಉತ್ತರುಸಿ]
ಲೇಖನ ಲಾಯಿಕ್ಕಾಯಿದು ಒಪ್ಪಣ್ಣ.. ಸಣ್ಣದಿಪ್ಪಗ ಕುಂಡಡ್ಕಕ್ಕೆ ಹೋದ್ದು ನೆಂಪಾತು..ಪೂಜೆಗಳ ನಿಜವಾದ ಅರ್ಥ ಗೊಂತಿಪ್ಪದು ಕೆಲವೇ ಜನಕ್ಕೆ ಹೇಳಿ ಆಯಿದು ಈಗಾಣ ಕಾಲಲ್ಲಿ.. ನಮ್ಮ ಸಂಸ್ಕೃತಿಲಿ ಯಾವಾಗಳೂ “ಕೊಟ್ಟದ್ದು ತನಗೆ,ಬಚ್ಚಿಟ್ಟದ್ದು ಪರರಿಗೆ” ಹೇಳ್ತ ಗಾದೆಗೆ ಅನುಗುಣವಾಗಿ ಜೀವನ ಮಾಡ್ತದು ಹೇಳಿದ್ದವು..ದಾನ ಧರ್ಮ ಮಾಡಿ ಸಿಕ್ಕಿದ ಪುಣ್ಯ ನವಗೆ ಯಾವಾಗಳೂ ಸಿಕ್ಕುತ್ತು ಹೇಳ್ತದು ಖಂಡಿತವೇ…
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:09 PM ಗೆ. (ಒಪ್ಪಸಂಕೊಲೆ)
ಅಪ್ಪು ಡಾಗುಟ್ರಕ್ಕಾ..
ನಿಂಗಳ ಒಪ್ಪ ಕಂಡು ಕೊಶೀ ಆತು.
ಕುಂಡಡ್ಕಲ್ಲಿ, ಮಾವೆಲಿ ಎಲ್ಲ ನಿಂಗಳೂ ಕಂಡಿದಿರೋ ಈ ದೇವಕಾರ್ಯವ?
[ಉತ್ತರುಸಿ]
ಒಳ್ಳೆ ಲೇಖನ . ಆದರೆ ಒಂದು ಸಣ್ಣ ಸಂಶಯ !
“ಹಸ್ತೋದಕ ಮಾಡುದು.ಮನೆ ಎಜಮಾನನೇ ಖುದ್ದು ಬಂದು ಇದಂ ವೋ ಅನ್ನಂ ಹೇಳಿ ಅಶನ ಮುಟ್ಟುಸಿ ಸ್ವೀಕರುಸುಲೆ ಹೇಳುದು.” ಎಲ್ಲ ಕಾರ್ಯಕ್ರಮಂಗಳಲ್ಲಿಯೂ ಮನೆ ಎಜಮಾನನೇ ಹಸ್ತೋದಕ ಕೊಡುದಲ್ಲದ ?
[ಉತ್ತರುಸಿ]
ella kade mane yajamaana alla.aa karyakramada kartru aaro avan.ennu ee lekhanada bagye estu baradaru saala.enna haange uutakappaga athava modale hoodaru hera kudu harate kochhuvavakke kramango henge gontappadu?matte swanta karyakramakkappaga battamava heluvaaga mele kela noduvadu. dakshine kotre ella mugudattu heli tilkombavakke estu chendake karya krama eddu adara owchitya entadu heli helida oppannange jai.oppangalottinge
[ಉತ್ತರುಸಿ]
ಹರಿ ಸೇವೆಯ ಪರಿಚಯದ ಪರಿ ವಿವರವಾಗಿ ಲಾಯಕಿತ್ತು. ಸಣ್ನ ಇಪ್ಪಗ ರುಚಿ ರುಚಿಯಾಗಿ ಪನಿವಾರ ತಿಂದು, ಪಾನಕ ಕುಡುದು ಮೂಗಿಲ್ಲಿ ಕೆಮಿಲಿ ಬೆಶಿ ಬೆಶಿ ಆದ್ದು ನೆಂಪಾತು. ಅದಿರಳಿ. ಒಪ್ಪಣ್ಣ ಹೇಳಿದ ಹಾಂಗೆ ನಮ್ಮ ಸಂಸ್ಕೃತಿ ಆಚರಣೆಗಳ ಪಾಲಿಸಿ ಉಳುಸೆಕಾದ್ದು ನಮ್ಮೆಲ್ಲರ ಕರ್ತವ್ಯವೂ ಕೂಡ. ಲೇಖನದ ಎಡೆಲಿ ಬಂದ ಪ್ರಯಾಣದ ವರ್ಣನೆ ಚೆಂದ ಆಯಿದು. ಬೆಶಿ ಎಣ್ಣಗೆ ಸುಟ್ಟವು ಬಿಟ್ಟ ನಮುನೆಯ ಹೊಂಡ, ಅದ್ಭುತ ಕಲ್ಪನೆ !
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:10 PM ಗೆ. (ಒಪ್ಪಸಂಕೊಲೆ)
ಪಾನಕ ಕುಡಿವಗ ಕೆಮಿಲಿ ಬೆಶಿ ಬೆಶಿ – ಅಪ್ಪಪ್ಪು, ಈಗ ನೆಂಪಾತು.
ಮೊನ್ನೆ ಎನಗೂ ಹಾಂಗೇ ಆಗಿತ್ತು ಮಾವ.
[ಉತ್ತರುಸಿ]
ಈ ಲೇಖನ ಓದಿ ಎನಗೆ ಅನಿಸಿದ್ದು ,
ಪರದೇಶಿ ಜೆನದ ಅನುಕರಣೆ ಹ್ಯಾರಿಯ ಸೇವೆ
ತರವಾಡು ಮನೆಗಳಲಿ ಮಾಂತ್ರ ಹರಿಸೇವೆ
ಕಾವ ಸಂಸ್ಕೃತಿ ಧರ್ಮ ಬೈಲಿಂಗೆ ಗೊಂತು
ದೇವಕಾರ್ಯದ ಮರ್ಮ ಬೆಳಕಿಂಗೆ ಬಂತು
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:11 PM ಗೆ. (ಒಪ್ಪಸಂಕೊಲೆ)
ಮುಳಿಯಬಾವಾ..
ಪದ್ಯ ಬಾರೀ ಲಾಯಿಕಿದ್ದು.
ನಮ್ಮೋರ ಧೋರಣೆಯ ನಾಕು ಗೆರೆಲಿ ಚೆಂದಕೆ ಬರದ್ದಿ.
[ಉತ್ತರುಸಿ]
ಎನ್ನದೊಂಡು ಡೌಟಿದ್ದು. ಯೆಜಮಾನ ಇಲ್ಲದ್ದೆ ಬಟ್ಟಮಾವನೇ ಕೂದೊಂಡು ಮಾಡುವ ಪೂಜೆಯ ಫಲ ಆರಿಂಗೆ ಸಲ್ಲುತ್ತು?? ಕೆಲವು ಕಡೆ ಒಂದೇ ದಿನ ಎರಡು ಮೂರು ಪೂಜೆಗೊ ಇರ್ತಿದ.. ಜೋತಿಷ್ಯಕ್ಕೊ ಹೇಳಿರ್ತವು ಆ ಪೂಜೆ ಈ ಪೂಜೆ ಎಲ್ಲ ಮಾಡೆಕ್ಕು ಹೇಳಿ. ಈಗ ಒಂದು ಗಣಹೋಮ ಶಿವಪೂಜೆ ಇದ್ದು ಹೇಳಿ ಮಡಿಕ್ಕೊಂಬ. ಬಟ್ಟಕ್ಕ ಏನೋ ಬೇಕಾದಷ್ಟು ಬಕ್ಕು. ಆದರೆ ಯೆಜಮಾನ ಒಬ್ಬನೇ ಅಷ್ಟೆನ್ನೆ! ಬಟ್ಟಕ್ಕೊ ಆ ಹೊಡೆಲಿ ಒಂದು ಹೋಮ ಈ ಹೊಡೆಲೊಂದು ಪೂಜೆ ಸುರು ಮಾಡಿರೆ ಯೆಜಮಾನ ಅಲ್ಲಿದೆ ಇಲ್ಲಿದೆ ಹೋಯೆಕ್ಕಿದ.. ಕೂಪದು ಏಳುದು.. ಇಂತಿಪ್ಪಗ ಮನಸ್ಸು ಕೊಟ್ಟು ಪೂಜೆ ಮಾಡುಲೆ ಆವುತ್ತಿಲ್ಲೆನ್ನೆ?
ಎನ್ನ ಪ್ರಶ್ನೆ ಎಂತರ ಹೇಳ್ರೆ ಪೂಜಾ ಫಲ ಬಟ್ಟ ಮಾವನ ಮಂತ್ರಂದ ಬಪ್ಪದೋ ಅಲ್ಲ ಯೆಜಮಾನನ ಭಕ್ತಿ ಹೇಳ್ತ ಅಗ್ನಿಗೆ ಬಟ್ಟಮಾವ ತುಪ್ಪ ಎರವದೋ? ಎನಗೆ ಈ ಬಗ್ಗೆ ಗೊಂತಿಲ್ಲೆ. ಗೊಂತಿದ್ದವು ಹೇಳೆಕ್ಕಿದ..
ಇನ್ನು ಈಗಣ ಪೂಜೆಗಳಲ್ಲಿ ಯೆಜಮಾನಂಗೆ ಭಕ್ತಿಗಿಂತಲೂ ಹೆಚ್ಚು ತಲೆಲಿಪ್ಪದು ಊಟದ ವೆವಸ್ತೆ ಸರಿ ಆಯಿದೋ ಇಲ್ಲಿಯೋ, ಆಳು ಬಯಿಂದೋ ಇಲ್ಲೆಯೋ ಇತ್ಯಾದಿಯೇ ಜಾಸ್ತಿ. ಮದಲೆಲ್ಲ ಸುದರಿಕೆಗೆ ನೆರೆಕರೆವು ಇಕ್ಕು. ಈಗ ಪೂಜೆ ಹೆಚ್ಚಾಗಿ ಅಪ್ಪದು ಪೇಟೆಲೇ. ನೆರೆಕರೆವು ಆರು ಹೇಳಿಯೇ ಗೊಂತಿಲ್ಲೆ. ಇನ್ನು ಸುದರಿಕೆಗೆ ಬಪ್ಪದು ಎಲ್ಲಿಂದ! ಮತ್ತೆ ಹಳ್ಳಿಗಳಲ್ಲಿ ಯೆಜಮಾನನ ಅಪ್ಪ ಅಮ್ಮ ಮಾತ್ರ ಇಪ್ಪದನ್ನೆ.. ಅವಕ್ಕೆಂತರ ಪೂಜೆ ಪುನಸ್ಕಾರ ಎಲ್ಲ ಹೇಳ್ತ ಹಾಂಗೆ ಆಯಿದು.
ಹೀಂಗಿಪ್ಪ ಅನ್ಯಮನಸ್ಕ ಯೆಜಮಾನ ಪೂಜೆ ಮಾಡ್ಸಿರೆ ಎಷ್ಟು ಬಿಟ್ಟರೆಷ್ಟು ಹೇಳಿ ಎನಗೆ ಅನ್ಸುದು.. ಹಾಳು ಮಂಡೆ ಇದ.. ಬೇಕಾದ್ದರ ಬೇಡಾದ್ದರ ಎಲ್ಲ ಯೋಚ್ಸುದು.. ತಪ್ಪಿದ್ದರೆ ಕ್ಷಮಿಸಿ..
[ಉತ್ತರುಸಿ]
ಹೊತ್ತುವೇಳೆ: 27 August,2010ರ 6:01 PM ಗೆ. (ಒಪ್ಪಸಂಕೊಲೆ)
ಭಾವಾ,ಒಳ್ಳೆ ಪ್ರಶ್ನೆ.
ಪೂಜೆ ,ಹೋಮ ಭಟ್ಟಮಾವ ಮಾಡೋದಾದರೂ ಸಂಕಲ್ಪ ಮಾಡುವೊದು ಕರ್ತೃವಿನ ಅಡ್ರೆಸ್ ( ಹೆಸರು,ನಕ್ಷತ್ರ,ಗೋತ್ರ ಇತ್ಯಾದಿ..ಇತ್ಯಾದಿ..) ಆದ ಕಾರಣ ಫಲ ಪೋಸ್ಟು ಅಪ್ಪೋದು ಕರ್ತೃವಿಂಗೆ ಆಗಿಕ್ಕು.
ಮತ್ತೆ ಪೂಜೆ ಹೇಳಿದರೆ ಆತ್ಮನಿವೇದನೆ ಅಲ್ಲದೋ? ನೈವೇದ್ಯವ ದೇವರಿಂಗೆ ಅರ್ಪಣೆ ಮಾಡುವ ರೀತಿಲಿ ಫಲ ಸಿಕ್ಕೊದಾಗಿಕ್ಕು,ವಿಕೆಟಿ೦ಗೆ ನೋಟ ಮಡುಗಿ ಆಟಗಾರನ ಕ್ಲೀನ್ ಬೌಲ್ಡ್ ಮಾಡಿದ ಹಾಂಗೆ!!! ನೋಬಾಲ್ ಹಾಕೊದರಿಂದ ತಳಿಯದ್ದೆ ಕೂಪೊದೆ ಲೇಸು ಹೇಳಿ ಸರ್ವಜ್ಣನೆ ಹೇಳಿದ್ದ° !! ಇದ್ದದರ ಇದ್ದ ಹಾಂಗೆ ಹೇಳಿದ್ದೆ,ಎದ್ದು ಬರೆಡಿ…
[ಉತ್ತರುಸಿ]
ಹೊತ್ತುವೇಳೆ: 28 August,2010ರ 9:14 AM ಗೆ. (ಒಪ್ಪಸಂಕೊಲೆ)
ಫಲಂಗೊ ಪೋಸ್ಟಿಲ್ಲಿ ಬಪ್ಪಗ ಮನೆ (ಮನ) ಬಾಗಿಲು ತೆರೆದಿರೆಕಲ್ಲದ
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:11 PM ಗೆ. (ಒಪ್ಪಸಂಕೊಲೆ)
ಅದರ ಪೋಷ್ಟಾಪೀಸಿನ ಬಗ್ಗೆ ಗೊಂತಿಪ್ಪೋರತ್ರೆ ಕೇಳೆಕ್ಕಟ್ಟೆ!!
[ಉತ್ತರುಸಿ]
laikaidu oppanno.
odi kushi aathu. gods gift allada oppanno.adakku ondu thakatthu beku.
astondu male iddaru kundadkakke maastru mavanottinge hoide heli kushi
aathu.ninna daiva bhakthiya mechhekku aatha.
kanya maasada pitru pakshalli astage heli ondu pitru kaarya iddu.
adude kelavu managalalli appadu adara baggeyu bare aatha.
hari seve deva kaarya ella kelavu tharavaadu managalalli maanthra ippadu.
hari guru devara aasheervada nammelloringu sadaa irali elloringu olledaagali.
[ಉತ್ತರುಸಿ]
ಒಪ್ಪಣ್ಣನ ಒಪ್ಪೊಪ್ಪ ಸುದ್ದಿಗೊಂದೊಪ್ಪ.
ತಿಥಿ ಮಾಡ್ತಾ ಹಾಂಗೆ, ಇದೆಂತರ ದೇವ ಕಾರ್ಯ ಹೇಳಿ ಜಾನ್ಸಿಂಡು ಇತ್ತಿದ್ದೆ. ವಿವರ ಕೊಟ್ಟದು ಒಳ್ಳೆದಾಯಿದು. ಎಂಗಳ ತರವಾಡು ಮನೆಲಿ ಈ ಎರಡು ಪೂಜೆಗೊ ಎಲ್ಲರೂ ಸೇರಿ ವರ್ಷಕ್ಕೊಂದರಿ ಆವುತ್ತು.
ಹರಿ ಸೇವೆಗೆ “ಪಾನಕ ಪೂಜೆ” ಕೊಡಾ ಹೇಳ್ತವು. ಇದಕ್ಕೆ ನೈವೇದ್ಯಕ್ಕೆ ಇಪ್ಪ ಪನಿವಾರವ ಗೆಂಡು ಮಕ್ಕಳೇ ತಯಾರು ಮಾಡುವದು ಇನ್ನೊಂದು ವಿಶೇಷ.
ಮುಡಿಪ್ಪಿಂಗೆ ಕಾಣಿಕೆ ಹಾಕುವಾಗ ಚಿಲ್ಲರೆ ಮಾತ್ರ ಹಾಕುವದು ಮತ್ತೆ ಅದರೊಟ್ಟಿಂಗೆ ಗೆಣ ಮೆಣಸಿನ ಕಾಳನ್ನೂ ಸೇರಿಸಿ ಹಾಕುವ ಕ್ರಮ. (ಗೆಣ ಮೆಣಸು ಕಾಳು ಎಂತಕೆ ಸೇರ್ಸುವದು ಹೇಳಿ ಎನಗೆ ಗೊಂತಿಲ್ಲೆ. ಗೊಂತಿಪ್ಪವು ಇದ್ದರೆ ತಿಳುಸಿ. ನೋಟು ಹಾಕಿರೆ ಹಾಳು ಅಕ್ಕು ಹೇಳಿ ಚಿಲ್ಲರೆ ಹಾಕುತ್ಸ ಕ್ರಮ ಆದಿಕ್ಕು)
["ನಿಜವಾಗಿ ನೋಡಿರೆ ಹೆರಾಣವು ನಮ್ಮ ನೋಡಿ ಕಲ್ತುಗೊಳೆಕು"] ಸತ್ಯ ಒಪ್ಪಣ್ಣ. ಹಾಂಗೆಂತಾರೂ ಅವು ಕಲ್ತರೆ ಅದಕ್ಕೆ ಪೇಟ್ಂಟ್ ಮಾಡಿ ಬಿಡುಗು. ಅಷ್ಟಪ್ಪಗ ನವಗೆ ಅದರ ಮಹತ್ವ ಗೊಂತಕ್ಕು.
ನಮ ಸಂಸ್ಕೃತಿಯ ನಾವೇ ಒಳುಶೆಕ್ಕಷ್ಟೆ. ಹೀಂಗಿಪ್ಪ ಕಾರ್ಯಕ್ರಮಂಗೊ ಸಮಾಜಲ್ಲಿ ಮುಂದುವರಿಯಲಿ, ನಮ್ಮ ಮುಂದಿನ ಪೀಳಿಗೆಯವಕ್ಕೂ ಇದರ ಮಹತ್ವ ಗೊಂತಾಗಲಿ ಹೇಳುವದೇ ಎನ್ನ ಆಶಯ.
[ಆ ಪಳ್ಳಲ್ಲಿ ಗೋಣಂಗ ಇದ್ದರೂ ಗೊಂತಾಗ ಹೇಳಿ ಶರ್ಮಪ್ಪಚ್ಚಿ ಒಂದೊಂದರಿ ನೆಗೆ ಮಾಡುಗು.] ಅಪ್ಪು ಒಪ್ಪಣ್ಣ. ಅದು ರೆಜ ಮೊದಲು ಹೇಳಿದ ಮಾತುಗೊ. ಈಗ ಆದರೆ ಗೋಣಂಗಳ ಬದಲು “ಆನೆಗೊ” ಹೇಳ್ತಿತ್ತೆ.
[ನೀರ್ಚಾಲಿಂದ ಸೂರಂಬೈಲಿಂಗೆ ಹೋದಷ್ಟು ಅಕ್ಕೋ ಏನೋ!ಅಷ್ಟೂ ಆಗ.ಜಾಸ್ತಿ ಆದ ಹಾಂಗೆ ಕಾಣ್ತು ನವಗೆ – ಎಂತಗೆ ಹೇಳಿತ್ತುಕಂಡ್ರೆ, ಅಲ್ಯಾಣ ಮಾರ್ಗ ಹಾಂಗಿದ್ದು.]
ಈಗ ಬದಿಯಡ್ಕ ಕುಂಬಳೆ ದಾರಿ ತುಂಬಾ ಹಾಳಾಯಿದು ಆತ. ಮಕ್ಕೊಗೆ ತೋರ್ಸಲೆ, ಆನೆ ಪಳ್ಳ, ಇಂಗು ಗುಂಡಿ ಎಲ್ಲ ಇದ್ದು. ಪಾಠ ಮಾಡುವ ಮಾಷ್ಟ್ರಕ್ಕೊ ಮಕ್ಕಳ ಒಂದು ರೌಂಡ್ ಬಸ್ಸಿಲ್ಲಿ ಕರಕ್ಕೊಂಡು ಹೋದರೆ ಆತು.
[ಉತ್ತರುಸಿ]
ಹೊತ್ತುವೇಳೆ: 28 August,2010ರ 10:04 AM ಗೆ. (ಒಪ್ಪಸಂಕೊಲೆ)
ಪಾನಕ ಪೂಜೆ ಹೇಳಿದರೆ ವೆಂಕಟರಮಣನ ಪೂಜೆ. ವೆಂಕಟರಮಣ ದೇವರಿಂಗೆ ಕಾಳುಮೆಣಸು ಅತ್ಯಂತ ಪ್ರೀತಿಯ ವಸ್ತು ಹೇಳಿ ಹೇಳ್ತವು. ಹಾಂಗಾದ ಕಾರಣ ಕಾಣಿಕೆ ಮಾಡುವಗ ಕಾಳುಮೆಣಸು ಒಟ್ಟಿಂಗೆ ಹಾಕುದು ಹೇಳಿ ಎನ್ನ ಅಭಿಪ್ರಾಯ.
[ಉತ್ತರುಸಿ]
ಹೊತ್ತುವೇಳೆ: 28 August,2010ರ 2:45 PM ಗೆ. (ಒಪ್ಪಸಂಕೊಲೆ)
ಓ.. ಕ್ಷೀರಸಾಗರಲ್ಲಿ ಮನುಗಿ ಶೀತ ಅಪ್ಪೊದಕ್ಕೆ ಪರಿಹಾರ,ಲೋಕಪಾಲನೆಯ ಎಡೆಕ್ಕಿಲಿ ಪುರುಸೊತ್ತು ಆಗಿಅಪ್ಪಗ ದವಡೆ ಎಡಕ್ಕಿಂಗೆ ಒಂದು ಕಾಳು ಮೆಣಸು!!! ಇದೋ ವೆಂಕಟ ಇನ್ ಸಂಕಟ ಹೇಳಿರೆ ??
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:12 PM ಗೆ. (ಒಪ್ಪಸಂಕೊಲೆ)
{ ಮಕ್ಕೊಗೆ ತೋರ್ಸಲೆ, ಆನೆ ಪಳ್ಳ, ಇಂಗು ಗುಂಡಿ ಎಲ್ಲ ಇದ್ದು. ಪಾಠ ಮಾಡುವ ಮಾಷ್ಟ್ರಕ್ಕೊ ಮಕ್ಕಳ ಒಂದು ರೌಂಡ್ ಬಸ್ಸಿಲ್ಲಿ ಕರಕ್ಕೊಂಡು ಹೋದರೆ ಆತು.}
- ದೊಡ್ಡಬಾವಂಗೆ ಆರು ಹೇಳುದು.
ಪಾಪ, ಆ ಮಕ್ಕಳ ಗೆದ್ದೆ ಹುಣಿಲಿ ನೆಡೆಶಿಗೊಂಡು ಬಂಙಬಪ್ಪದು ಕಾಂಬಗ ಬೇಜಾರಾವುತ್ತು.
[ಉತ್ತರುಸಿ]
ಒಪ್ಪಣ್ಣ..ಹರಿಸೇವೆ ದೇವ ಕಾರ್ಯದ ಬಗ್ಗೆ ಒಳ್ಳೆ ತಿಳುವಳಿಕೆ ಕೊಡುವ ಕೆಲಸ ಮಾಡಿದ್ದೆ. ಲಾಯಿಕ ಆಯಿದು. ಅದಕ್ಕೆ ಪೂರಕವಾಗಿ ನಿಂಗಳ ಪಯಣದ ಅನುಭವ ಕೂಡಾ.
ಒಂದರಿ ಹೀಂಗಾತು ಒಪ್ಪಣ್ಣ. ಒಂದು ಮನೆಲಿ ಸತ್ಯ ನಾರಾಯಣ ಪೂಜೆ. ನಾವೆಲ್ಲ ಹೋತು ಸಮಯಕ್ಕಪ್ಪಗ. ಅಲ್ಲಿ ಹೋದರೆ ಚೆಙಾಯಿಗಳದ್ದೇ ಒಂದು ಗುಂಪು. ಹೆರ ಕೂದೊಂಡು ಹರಟೆ ಹೊಡವಲೆ ಸುರು ಮಾಡಿದವು. ಕಾಲೇಜಿನ ಪೋಕ್ರಿತನ, ಲೆಕ್ಚರರ್ ಗಳ ತಮಾಶೆ ಮಾಡುವದು, ಇನ್ನೂ ಏನೇನೋ.. ಎಲ್ಲ ಮಾತಾಡಿಗೊಂಡು ಗೌಜಿಯೋ ಗೌಜಿ. ಒಳಾಂದ ಭಟ್ಟ ಮಾವ ಕಥಾಶ್ರವಣಕ್ಕೆ ಆತು ಹೇಳಿದ್ದವಡ. ಇವರ ಬೊಬ್ಬೆಲಿ ಎಂಗೊಗೆ ಕೇಳೆಕ್ಕನ್ನೆ. ಹೆರಾಣದ್ದು ಬೇರೆಯೇ ಕಥಾಶ್ರವಣ ನಡಕ್ಕೊಂಡು ಇತ್ತಿದ್ದು. ಭಟ್ಟ ಮಾವ ಒಂದು ಸರ್ತಿ ಕಣ್ಣು ಬಿಟ್ಟು ನೋಡಿದವು. ಉಹುಂ.. ಆರೂದೇ ಬೊಬ್ಬೆ ಹೊಡವದು ನಿಲ್ಸುತ್ತ ಹಾಂಗೆ ಕಾಣ್ತಿಲ್ಲೆ. ಪುನಃ ಒಂದು ಸರ್ತಿ ಹಾಂಗೇ ನೋಡಿದವು. ಪಟ್ಟಾಂಗ ರೈಸಿಂಡು ತಾರಕ್ಕಕ್ಕೆ ಏರುತ್ತ ಇದ್ದು. ತಡವಲೆ ಎಡಿಯದ್ದೆ ಭಟ್ಟ ಮಾವ ಜೋರು ಮಾಡಿಯೇ ಬಿಟ್ಟವು. ಅಷ್ಟಪ್ಪಗ ಒಂದರಿ ಎಲ್ಲರೂ ತಣ್ಣಂಗೆ ಆದವು. ಮನಾಸಿಲ್ಲಿ ಭಟ್ಟ ಮಾವನ ಬೈದವೋ ಗೊಂತಿಲ್ಲೆ.
ರೆಜಾ ಅಲೋಚನೆ ಮಾಡುವ ವಿಶಯ. ಇಂದು ಎಷ್ಟು ಜೆನಂಗೊ ಪೂಜೆಗೆ ಹೋದರೆ ಅದರ ಕ್ರಮಂಗಳ ಆಗಲಿ ಮಹತ್ವ ಆಗಲೀ ತಿಳಿವಲೆ ಪ್ರಯತ್ನ ಮಾಡುತ್ತವು? ಮಾತಾಡ್ಲೆ ಅಪರೂಪಕ್ಕೆ ಸಿಕ್ಕಿದವರೊಟ್ಟಿಂಗೆ ಪಟ್ಟಾಂಗ ಹೊಡವದೇ ಮುಖ್ಯ ಆವುತ್ತಲ್ಲದ. ಸತ್ಯ ನಾರಾಯಣ ಪೂಜೆಯ ಪ್ರಸಾದ ರುಚಿ ಹಿಡಿಯದ್ದವು ಆರೂ ಇಲ್ಲೆ. ಕಮ್ಮಿಲಿ ಎರಡು ಉಂಡೆ ಆದರೂ ತಿನ್ನೆಕ್ಕು ಹೇಳುವ ಎಷ್ಟು ಮಕ್ಕೊಗೆ ಸತ್ಯ ನಾರಯಣ ಪೂಜೆಯ ಕಥೆ ಗೊಂತಿದ್ದು?
ಕೊಶಿ ಆದ ಕೆಲವು ಸಾಲುಗೊ:
“ಇನ್ನೊಬ್ಬನ ಹೊಟ್ಟೆ ತುಂಬುಸುದರ್ಲೇ ತೃಪ್ತಿ ಕಾಂಬ ನಮ್ಮ ಸಂಸ್ಕೃತಿ ಎಷ್ಟು ಶ್ರೀಮಂತ ಅಲ್ಲದೋ?”. ಖಂಡಿತಾ ಅಪ್ಪು. ಮನೆಗೆ ಅತಿಥಿಗೊಕ್ಕೆ ಬಂದ ಕೂಡ್ಲೆ ಕೈ ಕಾಲು ತೊಳವಲೆ ನೀರು ಕೊಟ್ಟು ಬೆಲ್ಲ ನೀರು ಆಸರಿಂಗೆ ಕೊಡುವ ಕ್ರಮಂದಲೇ “ಅತಿಥಿ ದೇವೋಭವ” ಹೇಳುವ ನಮ್ಮ ಸಂಸ್ಕೃತಿ ಸುರು ಆವುತ್ತು.
“ಅಷ್ಟು ಒಳ್ಳೆಯ, ಶ್ರೀಮಂತ ಸಂಸ್ಕಾರ ನಮ್ಮದು”.-ಖಂಡಿತಾ ಅಪ್ಪು. ಒಳುಶಿ ಬೆಳಶೆಕ್ಕಾದ್ದು ನಮ್ಮ ಕರ್ತವ್ಯ ಮತ್ತೆ ಜವಾಬ್ದಾರಿ.
“ಕೃಷ್ಣಬಸ್ಸಿಲಿ ಈ ಊರಿನ ಜೀವನವೇ ಇದ್ದೋ – ಹೇಳಿ ಕಾಣ್ತು ಒಂದೊಂದರಿ!…”
[ಉತ್ತರುಸಿ]
ಒಂದರಿ ಊರಿಂಗೆ ಮಳೆಗಾಲಲ್ಲಿ ಹೋಗಿ ಬಂದ ಅನುಭವ ಆತು.. ಲೇಖನ ಭಾರೀ ಲಾಯಿಕ ಇದ್ದು…
[ಉತ್ತರುಸಿ]
ಹೊತ್ತುವೇಳೆ: 2 September,2010ರ 2:13 PM ಗೆ. (ಒಪ್ಪಸಂಕೊಲೆ)
ಶಾಲ್ಮಲಿ ಅಕ್ಕಂಗೆ ನಮಸ್ಕಾರ ಇದ್ದು.
ಶುದ್ದಿಗೆ ಕೊಟ್ಟ ಒಪ್ಪ ಕಂಡು ಕೊಶೀ ಆತು.
ಬೈಲಿಂಗೆ ಬತ್ತಾ ಇರಿ. ನಿತ್ಯವೂ ಊರಿಂಗೆ ಬಂದ ಹಾಂಗೆ ಆವುತ್ತು!
ಒಳ್ಳೆದಾಗಲಿ!
[ಉತ್ತರುಸಿ]
ಹರಿಸೇವೆ, ದೇವಕಾರ್ಯದ ಬಗ್ಗೆ ಬರದ ಲೇಖನ ಭಾರೀ ಒಳ್ಳೆದಾಯಿದು. ನಮ್ಮ ಸಂಸ್ಕೃತಿಯ ಪರಿಚಯ ಮಾಡುವ ಹೀಂಗಿಪ್ಪ ಇನ್ನಷ್ಟು ಲೇಖನಂಗೊ ಬತ್ತಾ ಇರಳಿ…
[ಉತ್ತರುಸಿ]
{ಸಾಲೆತ್ತೂರಿಂದ ಕುಂಡಡ್ಕಕ್ಕೆ ಜಾಸ್ತಿ ದೂರ ಏನಿಲ್ಲೆ. ನೀರ್ಚಾಲಿಂದ ಸೂರಂಬೈಲಿಂಗೆ ಹೋದಷ್ಟು ಅಕ್ಕೋ ಏನೋ!
ಅಷ್ಟೂ ಆಗ.
ಜಾಸ್ತಿ ಆದ ಹಾಂಗೆ ಕಾಣ್ತು ನವಗೆ – ಎಂತಗೆ ಹೇಳಿತ್ತುಕಂಡ್ರೆ, ಅಲ್ಯಾಣ ಮಾರ್ಗ ಹಾಂಗಿದ್ದು.}
ಎಂಗಳ ಕರ್ನಾಟಕ ಲಾಯ್ಕಿಲ್ಲೆ, ಕೇರಳವೇ ಲಾಯ್ಕ ಹೇಳಿ ಇದರ ಅರ್ಥವೋ? ನಿಂಗೊಳ ಸುಮ್ಮನೆ ಬಿಡೆ… ಶೊಭಕ್ಕ ಮತ್ತೆ ಮಂತ್ರಿ ಆಗಲ್ಲಿ, ಗುಣಾಜೆ ಮಾಣಿಯತ್ತರೆ ಹೇಳಿ ಇಲ್ಯಾಣ ಮಾರ್ಗವ ಎಲ್ಲ ಹೇಂಗೆ ಮಾಡ್ಸುತ್ತೆ ನೋಡಿ.
[ಉತ್ತರುಸಿ]
ಒಳ್ಳೆ ಮಾಹಿತಿಯುಕ್ತ ಲೇಖನ ಒಪ್ಪಣ್ಣಾ,,ನಮ್ಮ ಸಮಾಜಲ್ಲಿ ವೈದಿಕ ಕಾರ್ಯಲ್ಲಿ ಇಪ್ಪ ಸಂಶಯಂಗ ಹೀಂಗೆ ಒಂದೊಂದೇ ದೂರ ಆಯೆಕ್ಕು…ಬ್ರಾಹ್ಮಣೋಸ್ಯ ಮುಖಮಾಸೀತ್ ಹೇಳುವ ವೇದ ವಾಕ್ಯ ಸತ್ಯವಾಗಲಿ..
[ಉತ್ತರುಸಿ]
ಒಪ್ಪಣ್ಣ ಎಂದಿನಂತೆ ಈ ವಾರಾವು ನಿನ್ನ ಬರಹ ಲಾಯ್ಕ ಇದ್ದು, ಓದಿ ಕೊಶಿ ಆತು.
ಹರಿ ಸೇವೆಯ ಪ್ರಸಾದ ತಿಂಬಲೆ ರುಚಿ.
ದೇವಕಾರ್ಯವ ವಿವರವಾಗಿ ತಿಳಿದ ನಂತರ ಎನ್ನ ಮನಸ್ಸು ಆತು ಶುಚಿ
[ಉತ್ತರುಸಿ]
ಒಪ್ಪಣ್ಣ, ಮೊದಲಾಣ ಒಪ್ಪಣ್ಣ ಆದೆ ಈ ಶುದ್ದಿಲಿ ಅಲ್ಲದಾ? ಎಲ್ಲೋರಿಂಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಂಗಳ ತಮಾಷೆ, ಕುಶಾಲಿನೊಟ್ಟಿನ್ಗೆ ಚೆಂದಲ್ಲಿ ವಿವರ್ಸಿದ್ದೆ.
ನಮ್ಮ ಹಿರಿಯೋರು ಹರಿಸೇವೆ, ದೇವಕಾರ್ಯ ಮಾಡಿಗೊಂಡು ಬಂದದು ಮುಂದಾಣ ಪೀಳಿಗೆಯೋರಿಂಗೆ ಎಲ್ಲಾ ದಿಕ್ಕೆಯೂ ದೇವರ ಕಾಂಬಲೆ ಹೇಳಿಯೇ ಆದಿಕ್ಕಲ್ಲದಾ?
ದೇವರು ಪ್ರಕೃತಿಲಿ ಇರ್ತ°, ಪ್ರಕೃತಿಲಿ ಇಪ್ಪ ಎಲ್ಲಾ ವಸ್ತುಗಳಲ್ಲಿ ಇರ್ತ°, ಇನ್ನೊಬ್ಬನ ಮನುಷ್ಯನ ಒಳ ಇರ್ತ° ಹೇಳುವ ತತ್ವವ ನವಗೆ ಹೇಳಿ ಕೊಟ್ಟದಾದಿಕ್ಕು.
ಹರಿಸೇವೆ ಮಾಡುವಾಗ ಮುಡಿಪ್ಪಿಂಗೆ ಗೆಣಮೆಣಸುದೆ, ನಾಣ್ಯವುದೇ ಹಾಕುತ್ತದಲ್ಲದೋ?
ಅದರಲ್ಲಿ ನಾಣ್ಯ ಹಾಕಿದ್ದದು ವೆಂಕಟರಮಣನ್ಗೆ ಸಂದಾಯ ಅಪ್ಪಗ ಸುಮಾರು ವರ್ಷ ಆವುತ್ತಲ್ಲದಾ ಹಾಂಗೆ ನಾಣ್ಯ ಹಾಳಾಗದ್ದ ಹಾಂಗೆ ಆತು ಹೇಳಿ ಗೆಣಮೆಣಸು ಹಾಕುದಡ್ದ.
ಗೆಣ ಮೆಣಸು ಹೇಳಿದರೆ ಒಂದು ಆಪತ್ಕಾಲಕ್ಕೆ ಧನ ಕೊಡುವಂಥದ್ದು. ಸಂಗ್ರಹ ಮಾಡಿ ಮಡಿಗಿದರೆ ಎಷ್ಟು ವರ್ಷ ಕಳುದರೂ ಹಾಳಾಗದ್ದೆ, ನವಗೆ ಯಾವಾಗ ಮಾರಿದರೂ ಅಷ್ಟೇ ಮೌಲ್ಯ ಕೊಡುವಂಥಾದ್ದು.., ಹಾಂಗೆ ಅದನ್ನೂ ಸಂಗ್ರಹಿಸಿ ಮಡಿಗಿಗೊಳ್ಳಿ ಹೇಳುವ ಸೂಚನೆ ಅದು ಹೇಳಿ ಎಂಗಳ ಅಮ್ಮ ಯಾವತ್ತೂ ಹೇಳುಗು.
ಹೀಂಗಿಪ್ಪ ನಮ್ಮ ಅಚಾರಂಗಳಿಂದ ಅಲ್ಲದಾ ನಮ್ಮೊಳ ನಾವೆಲ್ಲಾ ಒಂದೇ ಹೇಳುವ ಭಾವನೆ ಬೆಳಕ್ಕೊಂದು ಬಂದದು.
ಇಲ್ಲದಿದ್ದರೆ ನಮ್ಮ ಮನೆ, ಕುಟುಂಬ ಹೇಳಿ ಮನೆಯೂ, ಮನಸ್ಸೂ ಸಣ್ಣವೇ ಆಗಿರ್ತಿತ್ತು. ಅಲ್ಲದಾ ಒಪ್ಪಣ್ಣಾ?
[ಉತ್ತರುಸಿ]
{ ಬತ್ತೆ ಹೇಳಿದ ಅಜ್ಜಕಾನಬಾವ° ಕೈಕೊಟ್ಟ ಈ ಸರ್ತಿ; ಅಂಗಿ ಹಾಕಿ ಹೆರಡ್ಳಪ್ಪಗ ಅವರಲ್ಲಿಗೆ ಬಾಬು ಬಂತಡ, ಮದ್ದು ಬಿಡ್ಳೆ. }
ಅಪ್ಪು ಬಾವಾ ಎಂತ್ಸು ಮಾಡುದು… ಈ ಸರ್ತಿ ಬಾಬು ಮದ್ದು ಬಿಡುದರ ಪಟ ತೆಗುದು ಮಡಗಿದ್ದೆ, ಪಟದ ಪುಟಕ್ಕೆ ಅಕ್ಕು ಹೇಳಿ..
ನಮ್ಮ ಆಚರಣೆಗೊ ಒಳಿಯೆಕ್ಕು ಹೇಳಿರೆ, ನಾವೆಲ್ಲ ಅದರಲ್ಲಿ ಬಾಗಿಯಾಯೆಕ್ಕು..
ಜನಾರ್ಧನ ಸೇವೆ ಮಾಡಿಯೋಂಡು ಆಯುರ್, ಆರೋಗ್ಯ ಪಡೆಯುವೋ ಆಗದೋ..
[ಉತ್ತರುಸಿ]
ಕುಂಡಡ್ಕಲ್ಲಿ ಹರಿಸೇವೆ-ದೇವಕಾರ್ಯ ಇದ್ದದು ಲಾಯ್ಕಾತದ. ನವಗೆಲ್ಲ ಆ ಬಗ್ಗೆ ಸವಿವರ ಶುದ್ದಿ ಸಿಕ್ಕಿತ್ತು.
ಹರಿಸೇವೆ-ದೇವಕಾರ್ಯದ ಬಗ್ಗೆ ಇಷ್ಟೆಲ್ಲ ಮಾಹಿತಿ ಇದರ ಓದಿಯಪ್ಪಗಳೇ ಗೊಂತಾದ್ದು.
ನಮ್ಮ ಸಂಸೃತಿ, ಆಚರಣೆಗೊ ನಶಿಸಿ ಹೋವುತ್ತಾ ಇಪ್ಪದು ತುಂಬಾ ಬೇಜಾರಿನ ಸಂಗತಿ. ಅದರ ಒಳಿಶಿ ಬೆಳೆಶುವ ಸತ್ಕಾರ್ಯಕ್ಕೆ ಈ ಬೈಲೇ ಮುನ್ನುಡಿ ಬರೆಯಲಿ. ಒಪ್ಪಣ್ಣನೊಟ್ಟಿಂಗೆ ನಾವುದೇ ಕೈಜೋಡ್ಸುವ.
[ಉತ್ತರುಸಿ]
Indina dinagalli namma makko namma samskrithiyannella maretha ippadu bahala duradrustd7a vichara. Hireyau, gurugo abhipraya illave ille. Joint familya ariveye illada avakke avara bandh7ugo arude beda. Avara limited friends heledde vedavakya
.Kelavondu manage hodare makko mataduva manassu taime beda, kanista hello heluva saujannyaude ellade aaidu. Ellorude aunti uncle helude bittare bere sambanda ellava elle heluvantha samskrthi aaidu. Dayavittu ningala manele heenge agada hange nodikolli heluva vignnapane. Naau, nammau,namma bashe achara vivharada bagge gaurava ulisi belesuva dodda jawabdari hiriyara heluva naau madadekku.
[ಉತ್ತರುಸಿ]