Oppanna.com

ಜಾಗೆ `ಮಾರಿ’ ಪೈಸೆ ಮಾಡಿ; ಆದರೆ ಜಾಗೆ `ಕೊಟ್ಟು’ ಬಡವಾಗೆಡಿ..

ಬರದೋರು :   ಒಪ್ಪಣ್ಣ    on   17/02/2012    33 ಒಪ್ಪಂಗೊ

ಬೈಲಿಲೇ ಸಿಕ್ಕುತ್ತ ತರಾವರಿ ಹಣ್ಣುಗೊ ಯೇವದಿದ್ದು ಹೇದು ನಾವು ಕಳುದವಾರ ಮಾತಾಡಿದ್ದು.
ಮದಲಿಂಗಾದರೆ ನಾನನಮುನೆ ಕಾಟು(ಕಾಡು) ಹಣ್ಣುಗೊ-ಕಾಯಿಗೊ-ಹುಳಿಗೊ ಎಲ್ಲವೂ ಇದ್ದತ್ತು;
ಬೋಳುಗುಡ್ಡೆಗಳಲ್ಲಿ ಬಿಂಗಿಮಕ್ಕೊಗೆ ತಿಂಬಲೆ ಸಿಕ್ಕಿಂಡಿದ್ದತ್ತು; ಎಲ್ಲೋದರ ರುಚಿಯೂ ನೋಡ್ಳೆ ಎಡಿಗಾಗಿಂಡಿದ್ದತ್ತು.
ಈಗ ಕಾಲಿಜಾಗೆಯೇ ಇಲ್ಲೆ ಬಿಡಿ! ಇಪ್ಪ ಜಾಗೆಗೂ ಎಲ್ಲ ಬೇಲಿಬಲುಗಿ “ಇದು ಎನ್ನದು” ಹೇದು ಗುರ್ತ ಮಾಡಿದ್ದು ಸಮಾಜ.
ಎಷ್ಟೋ ಕಾಲುದಾರಿಗೊ ಮುಚ್ಚಿದ್ದು, ಎಷ್ಟೋ ಮಾರ್ಗಂಗೊ ಮೋರೆಪೀಂಟುಸಿದ್ದು, ಎಷ್ಟೋ ದಿಕ್ಕೆ ಕಟ್ಟಪುಣಿಗೊ ಕಾಣೆ ಆಯಿದು!
ನಮ್ಮ ಅಜ್ಜಂದ್ರು ಪುನಾ ಹುಟ್ಟಿಬಂದರೆ ಅವಕ್ಕೆ ಊರೇ ಗುರ್ತ ಸಿಕ್ಕ!
ಅಪ್ಪೋ!!
~
ಮನ್ನೆ ಆಚಮನೆ ದೊಡ್ಡಣ್ಣನ ಮಗಳಿಂಗೆ ಬಾರ್ಸಿದ್ದು ನಿಂಗೊಗೆ ಗೊಂತಿದ್ದನ್ನೇ? ಅಲ್ಲಿಗೆ ಅಪುರೂಪದ ಬೊಂಬಾಯಿಬಾವ° ಬಂದದೂ ನಿಂಗೊಗೆ ಅರಡಿಗು. ಉಂಡಿಕ್ಕಿ ಸಂಸಾರಸಮೇತ ಅವು ಮಾಷ್ಟ್ರುಮಾವನಲ್ಲಿಗೆ ಬಂದಿತ್ತವು, ಅಲ್ಲದೋ? ಅಲ್ಲಿಗೆ ಕಳುದವಾರ ಶುದ್ದಿ ನಿಂದಿತ್ತಿದ್ದು.
ಅಲ್ಲಿಗೆತ್ತಿ ಅಪ್ಪದ್ದೇ, ಏನೊಳ್ಳೆದು, ಹಳೆಪರಿಚಯ ಹೊಸತ್ತಾಗಿ, ಹೆಮ್ಮಕ್ಕಳ ಮಾತುಕತೆ ಶುರು ಆಗಿ, ಮಕ್ಕಳ ಬೊಬ್ಬೆ ಶುರು ಆದ್ದದು ಮಾತಾಡಿದ್ದಿಲ್ಲೆ.
ಬೊಂಬಾಯಿ ಬಾವನೂ, ಮಾಷ್ಟ್ರುಮಾವನೂ, ಆಚಮನೆ ದೊಡ್ಡಪ್ಪನೂ ಕೂದುಗೊಂಡು ಲೋಕಾಭಿರಾಮ ಮಾತಾಡಿದವು – ಹೇಳ್ತದರ ನಿಂಗೊ ಅಂದಾಜಿಮಾಡಿಪ್ಪಿ.
ಅಲ್ಲಿ ಮಾತಾಡುವಗ ಎಂತ ಶುದ್ದಿ ಬಂತು?  ಅಂಬಗ ಮಾತಿಂಗೆ ಬಂದದೇ ಈ ವಾರದ ಶುದ್ದಿ; ಆಗದೋ! 🙂
~
ಬೊಂಬಾಯಿ ಬಾವನ ಬಗ್ಗೆ ಕಳುದ ವಾರ ಮಾತಾಡುವಗ ಒಪ್ಪಣ್ಣಂಗೆ ಒಂದು ಶುದ್ದಿ ಹೇಳುಲೆ ಬಿಟ್ಟೋಯಿದು.
ಅವು ಬೊಂಬಾಯಿಲಿ ದುಡುದು ಮಾಡಿದ ದೊಡಾ ಪೈಸೆಲಿ ನಮ್ಮ ಬೈಲಕರೆಲಿ ಒಂದು ದೊಡಾ ಜಾಗೆ ಮಾಡಿದ್ಸವು – ಹೇಳ್ತದು.
ಪೇಟೆಂದ ನಮ್ಮ ಬೈಲಿಂಗೆ ಬತ್ತ ದಾರಿಲೇ – ಕುಂಞತ್ತೆಮನೆಯ ಹತ್ತರೆ ಆಗಿ, ದೊಡ್ಡ ಮಾರ್ಗದ ಕರೇಲೆ – ಎರಡೆಕ್ರೆ ಜಾಗೆ ಅಂದೇ ಬರೆಶಿ ಮಡಗಿದ್ದವು.
ಅವರ ಪಿತ್ರಾರ್ಜಿತ ಆಸ್ತಿ ಓ ಅಲ್ಲಿ – ಪಟ್ಟಾಜೆ ಹೊಡೆಲಿ ಇದ್ದರೂ, ಇದೊಂದು ಅವರದ್ದೇ ಆಸಕ್ತಿಲಿ ಸ್ವಾರ್ಜಿತ ಮಾಡಿಗೊಂಡದು.
ಮುಂದೆ ಒಂದಿನ ರಿಠೇರ್ಡು ಅಪ್ಪ ಕಾಲಕ್ಕಾತು ಹೇಳಿಗೊಂಡೋ ಏನೋ – ಏನೇ ಆದರೂ ನಮ್ಮ ಊರಿಲೇ ನೆಲೆಯೂರುವ ಅಂದಾಜು! ಒಳ್ಳೆದೇ.
~
ಮೊನ್ನೆ ಮಾತಾಡುವಗ ‘ಕಾಸ್ರೋಡಿಲಿ ಸಣ್ಣ ಜಾಗೆ ಕೊಡುದು ಏನಾರು ಇದ್ದರೆ ತೆಗೇಕು’ – ಹೇಳಿದವು ಮಾಷ್ಟ್ರುಮಾವನ ಹತ್ತರೆ.
ಅಂದು ಮಾಡಿದ ಓ ಆ ಪೇಟೆಕರೆ ಜಾಗೆ ಇಲ್ಲೆಯೋ, ಅದರ ಕೊಡ್ತ ಅಂದಾಜಿಯೋ – ಆಚಮನೆ ದೊಡ್ಡಪ್ಪ° ಕೇಳಿದವು.
‘ಅಲ್ಲ, ಅದರ ಕೊಡ್ಳಿಲ್ಲೆ, ಇದೊಂದು ಇದ್ದರೆ ಮಾಡಿಗೊಂಬೊ°, ಮುಂದಕ್ಕೆ ಒಳ್ಳೆ ಕ್ರಯ ಬಂದಪ್ಪಗ ಕೊಡ್ಳೆ ಒಂದು ಇರಳಿ – ಹೇದು. ಮುಂದೆ ಜಾಗೆ ಮಾರುವ ಒಯಿವಾಟು ಸುರುಮಾಡುವ ಅಂದಾಜು.
ಈಗ ಒಂದು ಕ್ರಯಕ್ಕೆ ತೆಗದ ಜಾಗೆಯ ಮಾರಿ, ಅದರಿಂದ ಒಳ್ಳೆ ಕ್ರಯದ ಜಾಗೆ ಮಾಡುದು; ಹೀಂಗೇ ಕೈಯಾನ ಕೈ ಮಾಡಿ ಅಪ್ಪಗ ಅದುವೇ ಒಂದು ಒಯಿವಾಟು ಆವುತ್ತು’ – ಹೇಳ್ತದು ಬೊಂಬಾಯಿ ಬಾವನ ಅಭಿಪ್ರಾಯ.
ಕುಣಿಯ ಕಟ್ಟಂದ ಒಂದು ಸೊಪ್ಪು ತಪ್ಪಲೆ ಒಳ ಹೋಗಿದ್ದ ಮಾಷ್ಟ್ರುಮಾವ° ಬಂದಕೂಡ್ಳೇ ಹೇಳಿದವು ’ಜಾಗೆ ಮಾರೆಕ್ಕು, ಆದರೆ ಜಾಗೆ ಕೊಡ್ಳಾಗ’ ಹೇದು.

ಕೊಟ್ಟ ಜಾಗೆ ನಮ್ಮದಲ್ಲ!

~
ಜಾಗೆಮಾರುದು – ಜಾಗೆ ಕೊಡುದು; ಎರಡುದೇ ಒಂದೇ ಹೇದು ಗ್ರೇಶುದು ಬೇಡ – ಹೇಳಿಗೊಂಡು ಮಾಷ್ಟ್ರುಮಾವನೇ ಅದರ ವಿವರಣೆ ಸುರುಮಾಡಿದವು.
~
ಜಾಗೆ ಕೊಡುದು:
ನಮ್ಮ ಹುಟ್ಟು-ಬೆಳವಣಿಗೆ ಆದ ಒಂದು ನಿರ್ದಿಷ್ಟ ಜಾಗೆ ಇದ್ದು ಹೇಳಿ ಆದರೆ, ನಮ್ಮ ಹೆರಿಯೋರು ಉದಿಸಿ, ಬಾಳಿ, ಬೆಳಗಿದ ಜಾಗೆ ಇದ್ದು ಹೇದು ಆದರೆ, ನಮ್ಮ ಪಿತ್ರಾರ್ಜಿತವಾದ ಆಸ್ತಿ ಇದ್ದು ಹೇದು ಆದರೆ ಅದು ನಮ್ಮ ಜೀವನದ ಮೂಲಭೂತವಾದ ಜಾಗೆ.
ನಮ್ಮ ಬಾಲ್ಯ, ನಮ್ಮ ಸಂಸ್ಕಾರ, ನಮ್ಮ ಆಚಾರ-ವಿಚಾರಂಗೊ, ಇದೆಲ್ಲವೂ ಆ ಜಾಗೆಲೇ ನೆಡದಿರ್ತು.
ದನ, ಹಟ್ಟಿ, ಜಾಲು, ತೋಟ, ಕೈತೋಟ, ನೆಟ್ಟಿತೋಟ, ಬಾವಿ, ಕೆರೆ, ದಾಸನ ಹೂಗು, ತೋಡು – ಇದೆಲ್ಲವೂ ಆ ಪರಿಸರದ್ದೇ ನಮ್ಮ ತಲೆಲಿ ಅಚ್ಚಾಗಿ ನಿಂದಿರ್ತು.  ಆ ಚಿತ್ರಂಗೊ ಸಾವನ್ನಾರ ನಮ್ಮ ಮನಸ್ಸಿಂದ ಹೋವುತ್ತಿಲ್ಲೆ.
ಪ್ರಾಥಮಿಕವಾಗಿಪ್ಪ, ಹೆರಿಯೋರಿಂದ ಬಂದ ಈ ಜಾಗೆಯ ನಾವು ನಮ್ಮ ಕಿರಿಯರಿಂಗೆ ಎತ್ತುಸೆಕ್ಕು.
ಈಗಾಣ ಕಾಲಲ್ಲಿ ಜಾಗೆಗೊಕ್ಕೆ ವಿಪರೀತ ಕ್ರಯ!
ಹೆಚ್ಚು ಕ್ರಯ ಸಿಕ್ಕುತ್ತು ಹೇಳಿಗೊಂಡು ಈ ಮೂಲಭೂತ ಅಸ್ತಿತ್ವದ ಜಾಗೆಯನ್ನೇ ಒಂದುದಿನ ಯೇವದಾರು ಕೊಚ್ಚಿಯ ಜೆನಕ್ಕೋ, ಶಾಂತಿಪ್ರಿಯ ಧರ್ಮದ ಟೊಪ್ಪಿಗೋ ಮಣ್ಣ ಕೊಟ್ಟತ್ತು ಹೇಳಿ ಆದರೆ ಎಂತಕ್ಕು?
ನಾವು ಬಾಲ್ಯಲ್ಲಿ ನೋಡಿ ಬೆಳದ ಯೇವ ಚಿತ್ರಣವೂ ಮುಂದೆ ಕಾಣ್ತಿಲ್ಲೆ,
ನಮ್ಮ ಹೆರಿಯೋರು ನೆಡಕ್ಕೊಂಡು ಬಂದ ದೇವರೊಳ, ಬೂತಸ್ಥಾನ, ಬ್ರಮ್ಮರಕ್ಕಸ ಗುಡಿ, ನಾಗನ ಕಟ್ಟೆ – ಯೇವದೂ ಮತ್ತೆ ಕಾಂಬಲೆ ಸಿಕ್ಕುತ್ತಿಲ್ಲೆ,
ಕುಟುಂಬದ ಎಲ್ಲೋರುದೇ ಒಟ್ಟು ಸೇರಿ ಆಚರಣೆ ಮಾಡಿದ ದೀಪಾವಳಿ, ಕೆಡ್ವಾಸ – ಹೀಂಗಿರ್ತ ಹಬ್ಬಂಗಳ ಪುನಾ ಆ ಜಾಗೆಲಿ ಆಚರುಸಲೆ ಎಡಿತ್ತಿಲ್ಲೆ.
ಎಲ್ಲದಕ್ಕಿಂತ ಹೆಚ್ಚಾಗಿ, ನಮ್ಮ ಸಂಸ್ಕಾರದ ನಮ್ಮ ಅಸ್ತಿತ್ವದ ಭಾಗ ಆಗಿಪ್ಪ ನಮ್ಮ ಮನೆ ಹೆಸರು ನಮ್ಮ ಕೈಲಿ ಇರ್ತಿಲ್ಲೆ!
ಉದಾಹರಣೆಗೆ:
ಪೊಸವಣಿಕೆ ಭಾವನ ಕೈಲಿ ಪೊಸವಣಿಕೆ ಇಲ್ಲೆ, ಹಳೆಮನೆ ಅಪ್ಪಚ್ಚಿಯ ಕುಟುಂಬಲ್ಲಿ ಹಳೆಮನೆ ಇಲ್ಲೆ, ದೊಡ್ಡಮಾಣಿ ಭಾವನ ಕೈಲಿ ದೊಡ್ಡಮಾಣಿ ಇಲ್ಲೆ, ಮೋಂತಿಮಾರು ಮಾವನ ಕೈಲಿ ಮೋಂತಿಮಾರು ಇಲ್ಲೆ!
ಅಸ್ರಪ್ ಪೊಸವಣಿಕೆ! ಯೂಸುಪ್ ಹಳೆಮನೆ! ಇಬ್ರಾಯಿ ದೊಡ್ಡಮಾಣಿ!! – ಹು!! ಇದರೆಲ್ಲ ಗ್ರೇಶಲೂ ಎಡಿತ್ತಿಲ್ಲೆ!!
(ಅಂದೊಂದರಿ ಮಾಣಿಪ್ಪಾಡಿಯ ಕತೆ ಮಾತಾಡಿದ್ದು ನಾವು, ನೆಂಪಿದ್ದೋ?)
ಸಮಾಜ ನಮ್ಮ ಗುರುತುಸುದೇ ನಮ್ಮ ಜಾಗೆಯ ಮೂಲಕ.
ಇಂತಾ ದಿಕ್ಕೆ ಇಪ್ಪ, ಇಂತವನ ಮಗ°, ಇಂತವ° – ಹೇದು. ಹಾಂಗಿಪ್ಪಗ ನಾವು ನಮ್ಮ ಜಾಗೆಯನ್ನೇ ಕೊಟ್ಟು, ಕಳಕ್ಕೊಂಬಲಾಗ – ಹೇಳ್ತದು ಈ “ಜಾಗೆ ಕೊಡುವ” ವಿಚಾರದ ಅಂತಃಸತ್ವ.
ಕಣ್ಣೆದುರಿನ ಉದಾಹರಣೆಯೂ ಬೈಲಿಲೇ ಇಪ್ಪಗ, ಆಚಮನೆ ದೊಡ್ಡಪ್ಪನೂ ಸೇರಿಗೊಂಡು ವಿವರುಸಿದವು.
ಒಂದು ಮನೆಲಿ ಅಣ್ಣ-ತಮ್ಮ ಇಬ್ರು! – ಬೊಂಬಾಯಿಬಾವಂಗೆ ಹೇಂಗೂ ಗುರ್ತ ಇಲ್ಲೇದು ಹೆಸರು ಹೇಳಿದ್ದವಿಲ್ಲೆ ಆಚಮನೆ ದೊಡ್ಡಪ್ಪ°!
ಪಿತ್ರಾರ್ಜಿತ ದೊಡಾ ಆಸ್ತಿಯ ಪಾಲು ಮಾಡುಸಿಗೊಂಡ ತಮ್ಮ, ಅಂಬೆರ್ಪಿಲಿ ಆ ಜಾಗೆಯ ಒಂದು ಮಮ್ಮದೆಗೆ ಮಾರಿಕ್ಕಿ, ಸಿಕ್ಕಿದ ಪೈಶೆಲಿ ಪೇಟೆಕರೆಲಿ ಹತ್ತು ಸೆಂಟ್ಸು ಕಾಲಿಜಾಗೆಯೂ, ಅದರ್ಲಿ ಒಂದು ಮನೆಯೂ ಕಟ್ಟಿಗೊಂಡ°.
ಪೈಶೆ ಮುಗಿವನ್ನಾರ ಪೇಪರು ತರುಸಿದ°. –ಹಾ°, ಒಪ್ಪಣ್ಣಂಗೆ ಅಂದಾಜಿ ಆತು, ಆರ ಶುದ್ದಿ ಇದು – ಹೇಳ್ತದು.
ಪೈಶೆ ಮುಗುದ ಮತ್ತೆ?  ಮತ್ತೆ – ಕಾಲಿ! ಈಗ ಯೇವದೋ ಒಂದು ಅಂಗುಡಿಗೆ ಲೆಕ್ಕ ಬರವಲೆ ಹೋಪದಡ.
ಅವರ ಬಗ್ಗೆ ಇನ್ನೂ ತುಂಬ ವಿವರ ಒಪ್ಪಣ್ಣಂಗೆ ಅರಡಿಗು; ಇನ್ನೊಂದರಿ ವಿವರವಾಗಿ ಹೇಳುವೊ°, ಇಂದು ಬೇಡ.
ಇವಂಗೆ ಕೊಟ್ಟ ಆ ಮೂರುಕಾಸಿನ ಬೆಲೆಗೆ ಆ ಮಮ್ಮದೆ ಪುನಾ ಜಾಗೆ ಕೊಡುಗೊ?
ಇವೆಲ್ಲ ಜಾಗೆ ಕೊಟ್ಟು ಕೆಟ್ಟವು.
ಇನ್ನು ಪುನಾ ಮದಲಾಣ ಹಾಂಗೆ, ಅವರ ಹೆರಿಯೋರ ರಾಜ್ಯವ ಕಟ್ಳೆ ಎಡಿಗೋ?! – ಕೇಳಿದವು ಮಾಷ್ಟ್ರುಮಾವ°.
~
ಜಾಗೆಮಾರುದು:
ಜಾಗೆ ಕೊಡುದು ಹೇದರೆ ಎಂತ –ಹೇದು ಗೊಂತಾತಲ್ಲದೋ? ಇದು ಇನ್ನೊಂದು – ಜಾಗೆ ಮಾಡುದು.
ನಮ್ಮ ಮೂಲಭೂತ ಜಾಗೆಯ ಒಳಿಶಿಗೊಂಡು, ಅಲ್ಲೇ ಜೀವನ ಮಾಡಿಗೊಂಡು, ಬೇರೆ ಹೊಸ ಜಾಗೆ ತೆಗವದು – ಮಾರುದು – ತೆಗವದು – ಮಾರುದು!
ಇದೊಂದು ಜೀವನೋಪಾಯದ ದಾರಿ ಆಯಿಪ್ಪಲೂ ಸಾಕು, ಅದೇ ಅವನ ಒಯಿವಾಟು ಆಯಿಪ್ಪಲೂ ಸಾಕು.
ಎಷ್ಟೇ ಹೊಸ ಜಾಗೆ ತೆಗೆಯಲಿ, ಕ್ರಯ ಬಂದ ಮತ್ತೆ ಮಾರಲಿ – ಆದರೆ ಆ ಮೂಲಜಾಗೆಯ ಹಾಂಗೇ ಒಳಿಶಿಗೊಳೆಕ್ಕು – ಹೇಳ್ತ ಉದ್ದೇಶ ಇದರ ಮಾಡ್ತವಂಗೆ ಇರ್ತು.
ಉದಾಹರಣೆಗೆ, ಜೋಗಿಬೈಲು ಮಾವಂಗೆ ದೊಡ್ಡಾ ಒಯಿವಾಟು ಪುತ್ತೂರಿಲಿ.
ಪೇಟೆಕರೆಲಿ ಒಂದು, ಬಷ್ಟೇಂಡಿನ ಹಿಂದೆ ಇನ್ನೊಂದು, ರಾಮಜ್ಜನ ಕೋಲೇಜಿನ ದಾರಿಲೆ ಮತ್ತೊಂದು – ಹಾಂಗೆ ಒಟ್ಟು ಮೂರು ಜಾಗೆ ಇದ್ದಡ ಈಗ ಅವರ ಕೈಲಿ.
ತೆಗದು ಆರು ತಿಂಗಳಾತು, ಕ್ರಯ ಏರಿಗೊಂಡಿದ್ದು – ಒಳ್ಳೆ ಪಾರ್ಟಿ ಬಂದ ಕೂಡ್ಳೆ ಕೊಡುದೇ – ಹೇಳ್ತವು ಅವು.
ಆಗಲಿ, ಎಷ್ಟೇ ಕೊಡ್ಳಿ ಬಿಡ್ಳಿ, ಅವರ ಜೋಗಿಬೈಲು ಜಾಗೆಯ ಒಳಿಶಿಗೊಂಡು, ಅಲ್ಲಿ ಕೃಷಿ-ಹಟ್ಟಿ-ದನ-ಸಂಸಾರ ಎಲ್ಲವನ್ನೂ ಬೆಳೆಶಿಗೊಂಡು ಬತ್ತಾ ಇದ್ದವಲ್ಲದೋ! – ಹಾಂಗೆ ಇರೆಕ್ಕು – ಹೇಳಿದವು ಮಾಷ್ಟ್ರುಮಾವ°.
ಇದು ಜಾಗೆ ಮಾರುದು. ಒಯಿವಾಟಿಂಗೆ ಬೇಕಾಗಿ.
~
ನಮ್ಮ ಊರಿಲಿ ಆರಾರೊಬ್ಬ° ಒಂದು ಕಾರ್ಯ ಸುರುಮಾಡಿರಾತು, ಅದು ಒಳ್ಳೆದೋ – ಕೆಟ್ಟದೋ ವಿವೇಚನೆ ಮಾಡದ್ದೇ ಕೆಲವು ಜೆನ ಅನುಸರುಸುಗಡ. ಒಳ್ಳೆದಾದರೆ ಅನುಸರುಸಲಿ, ಆದರೆ ವಿವೇಚನೆ ಮಾಡೆಡದೋ!
ಉದಾಹರಣೆಗೆ, ಅಜ್ಜಕಾನಬಾವ° ಅಂದು ಹೇಳಿದ ಲೊಟ್ಟೆ ಕತೆ ನೆಂಪಾವುತ್ತು:
ದೊಡ್ಡಬಾವ° ಒಂದರಿ ಮಾವುಂಗಲ್ಲು ಮೂರುಮಾರ್ಗ ಸೇರ್ತ ಜಾಗೆಲಿ ನಿಂದಲ್ಲೇ ಮೂರುಸುತ್ತ ಬಂದವವಡ. – ಹತ್ತರೆ ನಿಂದುಗೊಂಡು ನೋಡಿದ ಬೆಳಿಟೊಪ್ಪಿ ಜೆನವುದೇ ಸುತ್ತ ಬಂತು.
ಬೆಳಿಟೊಪ್ಪಿಯ ಪಳ್ಳಿಯ ಐವತ್ತು ಟೊಪ್ಪಿಗೊ- ಅವರ ಗುರು ಸುತ್ತ ಬಪ್ಪದು ನೋಡಿ ಅವುದೇ ತಿರುಗಲೆ ಸುರುಮಾಡಿದವು,
ಈಗ ಆ ಊರಿನ ಪಳ್ಳಿಯೋರೆಲ್ಲ ದಿನಕ್ಕೊಂದರಿ ಬಂದು ಅಲ್ಲಿ ಸುತ್ತು ಹಾಕಿ ಹೋವುತ್ತದು ವಾಡಿಕೆ ಅಡ!
ಹಾಂಗಾಗಿಯೇ ಅದಕ್ಕೆ ಈಗ “ಮಾವುಂಗಲ್ಲು ಸರ್ಕಲ್ಲು(ವೃತ್ತ)” ಹೇಳ್ತದಡ.
ದೊಡ್ಡಬಾವ° ಸುತ್ತು ಬಂದದೆಂತಕೆ? – ಯೇವದೋ ಶಾಲೆ ಬೋರ್ಡು ನೋಡ್ಳೆ ಆಯಿಕ್ಕು!!
ಇದು ಆ ಟೊಪ್ಪಿಜೆನಕ್ಕೆ ಗೊಂತಿದ್ದೋ, ಅದು ವಿವೇಚನೆ ಇಲ್ಲದ್ದೆ ತಿರುಗಿತ್ತು, ಈಗ ಸರ್ಕಲ್ಲು ಒರೆಂಗೆ ಎತ್ತಿತ್ತು!
ಇನ್ನು ಆ ಲೆಕ್ಕಲ್ಲಿ ದೊಡ್ಡಭಾವಂದು ‘ತಿರುಗುತ್ತ ಮೂರ್ತಿ’ ಒಂದು ಸ್ಥಾಪನೆ ಆವುತ್ತೋ ಏನೋ – ಉಮ್ಮ!
(ಹು, ಈ ಲೊಟ್ಟೆಕತೆ ನಂಬಿಕ್ಕೆಡಿ. ಅಭಾವನ ರೈಲು ಕೇಳಿರಾಗ!)

ಅದೇನೇ ಇರಳಿ, ಒಬ್ಬ ಮಾಡಿದ್ದರ ಅಂಧಾನುಕರಣೆ ನಮ್ಮ ಊರಿಲಿ ಇದ್ದು – ಹೇಳ್ತದು ಇದರ ತಾತ್ಪರ್ಯ.
ಹೆಚ್ಚಿನ ಜಾಗೆ ಕೊಟ್ಟು ಹೋಪದೂ ಇದೇ ಕಾರಣಕ್ಕಾಗಿಯೇ ಹೇಳ್ತದು ಅವರ ಅಭಿಪ್ರಾಯ.
ಒಬ್ಬ° ಕೊಟ್ಟ° – ಇನ್ನೊಬ್ಬ° ಕೊಟ್ಟ° – ಸುತ್ತುಮುತ್ತ ಎಲ್ಲೋರುದೇ ಕೊಟ್ಟವು!
ಮತ್ತೆ ಒಳುದ ಒಬ್ಬಂಗೆ ಉಸುಲು ಕಟ್ಟುತ್ತ ಪರಿಸ್ಥಿತಿ. ಮನಸ್ಸಿಲ್ಲದ್ದರೂ ಅನಿವಾರ್ಯವಾಗಿ ಕೊಟ್ಟ°.
ಇದೇ ಕಾರಣಕಾಗಿ ಕಾಸ್ರೋಡಿನ ಕೆಲವು ಪರಿಸರಂಗಳಲ್ಲಿ ಈಗ ಹಿಂದುಗಳ ಸಂಕೆಯೇ ಕಮ್ಮಿ.
ಕೆಲವು ದಿಕ್ಕೆ ಊರಿಂಗೆ ಊರೇ ನಮ್ಮ ಕೈಲಿಲ್ಲೆ ಈಗ. ಪೂರಾ ಪಚ್ಚೆಕೊಡಿ. ಛೇ!
(ಬಂಡಾಡಿಅಜ್ಜಿ ತಂಬುಳಿಮಾಡ್ತ ಪಚ್ಚೆಕೊಡಿ ಅಲ್ಲ!)
~
ಇದೂ ಒಂದು ನಮುನೆಲಿ ಅತಿಕ್ರಮಣವೇ ಅಲ್ಲದೋ – ನಮ್ಮ ಸಂಸ್ಕಾರದ ಮೇಲೆ ಆವುತ್ತಾ ಇಪ್ಪ ಧಾಳಿ ಅಲ್ಲದೋ – ಅನುಸುದು ಒಂದೊಂದರಿ ಮಾಷ್ಟ್ರುಮಾವಂಗೆ.
ಸರ್ಪಮಲೆಮಾವ° ಓ ಮೊನ್ನೆ ಒಂದು ಕಾದಂಬರಿ ಓದಿದ ಶುದ್ದಿ ಹೇಳಿತ್ತಿದ್ದವು.
ತಿಂಮೋಜ ಹೇಳ್ತ ಜೆನ ಪೋರ್ಚುಗೀಸರ ಸೈನ್ಯದ ಒಟ್ಟಿಂಗೆ ಸೇರಿ – ಆದಿಲ್ ಶಾನ ದರ್ಬಾರು ನಿಲ್ಲುಸಲೆ ಹೆರಟತ್ತಡ.
ಆದ್ಸೆಂತರ? ಅಕ್ಕಿತಿಂತೋನು ಹೋದರೆ ಉಮಿ ತಿಂತೋನು ಬಕ್ಕು –  ಪೋರ್ಚುಗೀಸರು ಇಡೀ ಸಮಾಜವನ್ನೇ ಸಮಾ ಗೀಸಿದವಡ!
ಅದರ ಬಗ್ಗೆ ವಿವರವಾಗಿ ಸರ್ಪಮಲೆಮಾವನೇ ಹೇಳುಗೋ ಏನೋ. ಉಮ್ಮ! 😉
~
ಇಂದು ಸಿಕ್ಕುವ ದೊಡ್ಡ ಪೈಶೆಗೆ ಜಾಗೆ ಕೊಟ್ಟರೆ, ನಾವು ಆ ಪೈಶೆಲಿ ಬೇರೆಮನೆ ಮಾಡಿ ಆರಾಮಲ್ಲಿ ಬದುಕ್ಕುಗು.
ಆದರೆ ಭೂಮಿಲಿ ಮಣ್ಣಾದ ನಮ್ಮ ಅಜ್ಜಂದ್ರು, ಅಜ್ಜಿಯಕ್ಕೊ, ನಮ್ಮ ದನಗೊ, ನಮ್ಮ ಅಡಕ್ಕೆತೋಟ – ಎಲ್ಲ ಎಲ್ಲಿಗೆ ಹೋಯೆಕ್ಕು?
ನಾವು ಕೊಟ್ಟದನ್ನೇ ತೆಕ್ಕೊಳ್ತ ಭೂತ-ಬಂಡಾರಂಗೊ ಎಲ್ಲಿಗೆ ಹೋಪದು?
ನಮ್ಮ ಜಾಗೆಯ ರಕ್ಷಣಗೆ ಇದ್ದಿದ್ದ ಬ್ರಮ್ಮರಕ್ಕಸಂಗೆ ಎಂತ ಗೆತಿ?
ನಾವು ಜಾಗೆ ಕೊಡುವಗ ಒಳ್ಳೆಜೆನ ನೋಡಿಯೇ ಕೊಡ್ತು ಮಡಿಕ್ಕೊಂಬ, ನವಗೆ ಇಪ್ಪ ಭಾವನೆ ಆ ಜೆನಕ್ಕೆ ಇರ್ತಿಲ್ಲೆ.
ನಮ್ಮತ್ರಂದ ತೆಕ್ಕೊಂಡ ನಾಕುಪಾಲು ಪೈಶೆಗೆ ಆ ಜೆನ ಇನ್ನೊಂದಕ್ಕೆ ಮಾರ್ತು, ನಮ್ಮ ಕಣ್ಣೆದುರೇ.
ಅಷ್ಟಪ್ಪಗ – ಒಳ್ಳೆ ಹೋಗಿ ಮಂಡೆಲಿ ಆವುತ್ತತ್ತೆ!
~
ಇತಿಹಾಸಲ್ಲಿ ಮೊಗಲರಿಂದ, ಕ್ರಿಶ್ಚನಿನೋರಿಂದ ಎಷ್ಟೋ ದಿಕ್ಕೆ, ಎಷ್ಟೋ ವಿಧಲ್ಲಿ ಆಕ್ರಮಣ ಆಯಿದು ನಮ್ಮ ಸಮಾಜದ ಮೇಲೆ.
ಈಗ – ಇಬ್ರಿಂದಲೂ ಒಟ್ಟಾಗಿ – ಆವುತ್ತಾ ಇಪ್ಪ ಆಕ್ರಮಣವೇ ಇದು.
ಇದರ ನಾವು ತಡೇಕಾರೆ ನಾವೆಲ್ಲರೂ ಒಟ್ಟಾಗಿ ನಿಂದು “ಜಾಗೆ ಕೊಡೆ” ಹೇದು ಗಟ್ಟಿಯಾಗಿ ಹೇಳೇಕಡ.
ಮಾಷ್ಟ್ರುಮಾವ° ಹೇಳಿದವು.
~
ಅಂತೇ ಹೀಂಗೇ ಮಾತಾಡುವಗ ಈ ಸಂಗತಿ ಕೆಮಿಗೆ ಬಿದ್ದದು ತಲೆಲಿ ಕೊರವಲೆ ಸುರು ಆತು.
ಬೊಂಬಾಯಿಬಾವಂಗೆ ಈ ಶುದ್ದಿ ಎಲ್ಲ ಮಾಷ್ಟ್ರುಮಾವ° ಹೇಳೇಕಾಗಿ ಇಲ್ಲೆ, ಅವಕ್ಕೇ ಅರಡಿಗು. ಆದರೂ – ಹಳ್ಳಿಲಿ ಹಾಂಗೇ ಅಲ್ಲದೋ, ಒಂದರ ಮಾತಾಡ್ಳೆ ಸುರುಮಾಡುವಗ ಎಲ್ಲವೂ ಬಕ್ಕು!
ಬೊಂಬಾಯಿಬಾವ ಜಾಗೆ ಮಾರುಗು, ಆದರೆ ಜಾಗೆ ಕೊಡ್ತವಿಲ್ಲೆ ನಿಘಂಟು. ನಿಂಗೊ?
~
ಒಂದೊಪ್ಪ: ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು.

33 thoughts on “ಜಾಗೆ `ಮಾರಿ’ ಪೈಸೆ ಮಾಡಿ; ಆದರೆ ಜಾಗೆ `ಕೊಟ್ಟು’ ಬಡವಾಗೆಡಿ..

  1. ಒಪ್ಪಣ್ಣ , ಒಳ್ಳೆಯ ವಿಷಯ. ನಿಂಗ ಇದರ ಒಂದು podcast ಮಾಡಿರೆ ಒಳ್ಳೆದಿತ್ತು . ಓದುದರ ಬದಲು ಕೇಳುಲೆ ಸುಲಭ. ಧನ್ಯವಾದ 🙂

  2. ಒಪ್ಪ ಮಾಹಿತಿ ಇಪ್ಪ, ಒಪ್ಪ ಶುಧ್ಧಿ ಒಪ್ಪಣ್ಣ,
    ~ಸುಮನಕ್ಕ…

  3. ಅನಿವಾರ್ಯವಾಗಿ ಪೇಟೆಲ್ಲಿದ್ದರೂ ಕಷ್ಟಪಟ್ಟು ಹಳ್ಳಿಲ್ಲಿ ಜಾಗೆ ನೋಡಿಗೊಳ್ಳುತ್ತಾ ಇಪ್ಪ ಕುಮಾರ ಮಾವನ ಹಾಂಗೂ ಹಳ್ಳಿಯ ಜಾಗೆ ನೋಡಿಗೊಮ್ಬಲೆ ಬೇಕಾಗಿ ಪೇಟೆ ಕೆಲಸವನ್ನೇ ಬಿಟ್ಟ ರವಿ ಭಾವ ಇವರೆಲ್ಲ ನೋಡುವಗ ‘ವಂದೇ ಮಾತರಂ’ ಹೇಳಿ ಸೆಲ್ಯೂಟ್ ಹೊಡೆಕು ಹೇಳಿ ಆವುತ್ತು…

    https://oppanna.com/shuddi/ravi-sajankabettu-petenda-hallige

  4. ಪೇಟೆ ವಾಸ್ತವ್ಯ ಜೀವನೋಪಾಯಕ್ಕೆ ಅನಿವಾರ್ಯ ಅಷ್ಟೆ. ಅಲ್ಲಿವರೆಗೆ ಇದ್ದು ಮತ್ತೆ ಸಾಕು ಮಾಡಿ ಹಳ್ಳಿಗೆ ಹಿಂದಿರುಗುವ ಯೋಚನೆ ಮಾಡ್ಲಕ್ಕು.
    ಎಂಗೊ ಪೇಟೆ ಬಿಟ್ಟು ಹಳ್ಳಿಗೆ ಹೋಗಿ ಇಪ್ಪಲೆ ಒಂದು ಕಾಲು ಮಡಿಗಿ ಆಯಿದು. ಮಡಗಿದ ಕಾಲು ಹಿಂದೆ ಬಾರ.

  5. ವಸ್ತು ನಿಷ್ಟವಾಗಿ ಯೋಚನೆ ಮಾಡಿದರೆ ಸಮಾಜಲ್ಲಿ ವಿದ್ಯಾವಂತರು ಹೆಚ್ಹಾದ್ದದು, ಅದಕ್ಕೆ ತಕ್ಕದ ವೈದ್ಯಕೀಯ ಬೆಳವಣಿಗೆ ಇದರಿಂದಾಗಿ ಅರಿವಾದ ಮಿತ ಸಂತಾನದ ಯೋಗ್ಯತೆ, ವಿದ್ಯಾರ್ಹತಗೆ ಸರಿಯದ ಕೆಲಸ ಅವರವರ ಊರಿಲಿ ಇಲ್ಲದೆ ಇಪ್ಪದು ಪುರುಷ ಪ್ರಧಾನ ಸಮಾಜ ( ಕೊಟ್ಟ ಹೆಣ್ಣು ಕುಲಂದ ಹೆರ ಹೇಳುವ ಮನೋಭಾವನೆ,) ಇದರಿಂದಾಗಿ ಅಪ್ಪನ ಮನೆಯ ಆಸ್ಥಿಯ ಬಯಸದ್ದ ಸ್ವಾಭಿಮಾನಿ ಮಗಳಕ್ಕ ಇದೆಲ್ಲವೂ ಕಾರಣ೦ಗೊ ಕಾಣ್ತು.
    ಇತರ ಸಮಾಜದವಕ್ಕೆ ಇಂದ್ರಾಣ ಕಾಲ್ಲಲ್ಲಿಯುದೆ ಕೃಷಿ ಮಾಡುಸುಲೆ ಎಡಿವ ಅರ್ಹತೆ , ಅವರಲ್ಲಿ ಇಪ್ಪ ವಿಧ್ಯಭಾಸದ ಕೊರತೆ, ಮಿತ ಸಂತಾನದ ಅರಿವು ಇನ್ನುದೆ ಬಾರದ್ದದು , ವಸ್ತು ನಿಷ್ಟವಾಗಿ ಹೋಲುಸಿದರೆ ಗೊ೦ತಾವುತ್ತು.

    * ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು

    ಒಂದರ ಗಳಿಸಿಗೊ೦ಬಲೆ ಇನ್ನೊ೦ದರ ಕಳಕ್ಕೊಳ್ತು . ಒಂದರ ಕಳಕ್ಕೊ೦ಬಗ ಇನ್ನೊ೦ದರ ಗಳಿಸಿಗೊಳ್ತು. ಇದು ಎಲ್ಲಾ ವಸ್ಥು –ವಿಶಯ೦ಗಳಲ್ಲಿ ಅಡಗಿಪ್ಪ ಸಾರ್ವಕಾಲಿಕ ಸತ್ಯ.

  6. ೧೯೭೦ರ ಅಂದಾಜಿಂಗೆ ಬಂದ ಕುಟುಂಬ ಯೋಜನೆ-ನಾವಿಬ್ಬರು ನಮಗಿಬ್ಬರು-ಹೇಳುವದರ progressive ಅನಿಸಿಕೊಂಡ ನಾವು ಹವ್ಯಕರು ಸಮಾಜಲ್ಲಿ ಪ್ರಥಮತಃ ಅಳವಡಿಸಿಕೊಂಡು ಅದರ ಫಲವಾಗಿ ಇಂದು ಕುಟುಂಬದ ಜನಸಂಖ್ಯೆ ಬರೇ ಎರಡು ಮಕ್ಕೊಗೆ ಸೀಮಿತವಾಗಿ ಊರಿಲ್ಲಿ ನಿಂಬಲೆ ಆರೂ ಇಲ್ಲದ್ದ ಹಾಂಗೆ ಆದ್ದದು ಹೇಳಿ ಎನ್ನ ಅನಿಸಿಕೆ,ಬಯಲಿನವು ವಿಮರ್ಶೆಗೆ ತೆಕ್ಕೊಳಿ..

    1. ” ವಿದ್ಯಾರ್ಹತಗೆ ಸರಿಯದ ಕೆಲಸ ಅವರವರ ಊರಿಲಿ ಇಲ್ಲದೆ ಇಪ್ಪದು ” ಹೇಳ್ತದು ಹೆಚ್ಚು ಸರಿ ಹೇಳಿ ಎನ್ನ ಅಭಿಪ್ರಾಯ.

  7. ಜಾಗೆ ಕೊಡೆಕಾರೆ ಭಾವನೆಯನ್ನೂ ಕೊಡೆಕ್ಕಾವುತ್ತು.
    ಅಪ್ಪು..

  8. ಹಿಂದೆ ಇದ್ದೆ ಹೇಳಿರೆ ಬರೇ ಸಪೋರ್ಟ್ ಮಾಡುಲಲ್ಲ.. ನಿಂಗಳ ದಾರಿಲೇ ಬತ್ತಾ ಇದ್ದೆ 🙂

    1. ಶುದ್ದಿ ಕೇಳಿ ತುಂಬಾ ಖುಷಿ ಆವುತ್ತಾ ಇದ್ದು… ಅತ್ಯಂತ ಒಳಿತಾಗಲಿ ಹೇಳಿ ಹೃದಯಾಂತರಾಳದ ಶುಭ ಹಾರೈಕೆಗ…
      ಹೊಸ ಜೀವನಕ್ಕೆ ಹೊಂದಿಗೊಮ್ಬನ್ನಾರ ಎಂತಾರೂ ತಪ್ಪು ಮಾಡಿದನೋ ಹೇಳುವ ಸಣ್ಣ ಅಳುಕು ಇರುತ್ತು ಮನಸ್ಸಿಲ್ಲಿ… ಒಂದರಿ ಹೊಂದಿಗೊಂಡ ಮೇಲೆ ‘ಆ ಹಿಂಸೆ,ಕ್ರೌರ್ಯ,ಅವ್ಯವಸ್ಥೆ ಬಗ್ಗೆ ನಿತ್ಯ ಪೇಪರಿಲ್ಲಿ, ಟಿ.ವಿ. ಲ್ಲಿ ನೋಡುವಾಗ ಆನೆಷ್ಟು ಒಳ್ಳೆ ನಿರ್ಧಾರ ತೆಕ್ಕೊಂಡೆ ಹೇಳಿ ನಮ್ಮ ಮೇಲೆ ನಮಗೆ ಹೆಮ್ಮೆ ಎನಿಸುತ್ತು…

  9. ಬೆಂಗಳೂರಿಲ್ಲಿ ಸಾಫ್ಟ್ ವೇರ್ ಕೆಲಸಲ್ಲಿ ಇದ್ದಿದ್ದ ಆನು ಕೆಲಸ ಬಿಟ್ಟು ಮದುವೆಯಾಗಿ ಮಂಗಳೂರಿಂಗೆ ಬಂದೆ. ಕಾರಣಾಂತರಗಳಿಂದ ಮಂಗಳೂರಿಲ್ಲಿ ನೆಲೆಸಿದ್ದರೂ ಊರಿನ ಜೊತೆ ತುಂಬಾ ಸಂಪರ್ಕ ಮಡಿಕ್ಕೊಂಡಿದೆ… ಬೆಂಗಳೂರು ಜೀವನ,ಮಂಗಳೂರು ಜೀವನ,ಊರಿನ ಜೀವನ ಎಲ್ಲ ನೋಡಿ ಅನುಭವ ಇದ್ದ ಕಾರಣ ಅತ್ಯಂತ ಪ್ರೀತಿಲ್ಲಿ ತಂಗೆಕ್ಕೊಗೆ ಬುದ್ದಿವಾದ ಹೇಳಿದ್ದದೆ ವಿನ: ಬೇರೆ ಯಾವುದೇ ಉದ್ದೇಶ ಇಲ್ಲೇ… ಎನ್ನ ಹಾಂಗಿದ್ದ ಹಲವು ಉದಾಹರಣೆಗ ಇಕ್ಕು… ಗೊಂತಿಪ್ಪವು ದಯವಿಟ್ಟು ಹೇಳಿ… ಕೂಸುಗೊಕ್ಕೆ ಧೈರ್ಯ ಬರಲಿ…

    1. ಭೇಷ್ ಅಕ್ಕ… ನಿಂಗಳ ಹಿಂದೆ ಆನುದೆ ಇದ್ದೆ ಆತೋ! 🙂

  10. ಹುಡುಕ್ಕಿದರೂ ಉತ್ತರ ಸಿಕ್ಕದ್ದ ಹಾಂಗಿಪ್ಪ ನಮ್ಮ ಸಮಾಜದ ಸಮಸ್ಯೆಯ ಒಪ್ಪಣ್ಣ ಎತ್ತಿ ಹಾಕಿದ್ದ,ಸಕಾಲಿಕ,ಕಳಕಳಿಯ ವಿಷಯ.ಇಷ್ಟೆಲ್ಲಾ ಮಾತಾಡುತ್ತ ಈ ಅಕ್ಕ ಭಾವಂದಿರು ಆರಾದರೂ ತಮ್ಮ ಮಗಳ, ಕಲಿತ,ಕಳಿವಲೆ ತಕ್ಕ ಆಸ್ತಿ ಇಪ್ಪ ಊರಿಲ್ಲಿ ನೆಲೆಸಿದ ಒಬ್ಬ ಮಾಣಿಗೆ ಕೊಟ್ಟು ಮದುವೆ ಮಾಡಿದ ಉದಾಹರಣೆ ತೋರಿಸಿದರೆ ಬಯಲಿಂಗೆ ಇನ್ನೂ ಖುಷಿ ಅಕ್ಕು.’ಮನಸ್ಸಿದ್ದು,ಆದರೆ ಎಂತ ಮಾಡುವದು ಭಾವ,ಮಗಳು ಒಪ್ಪಕಾನ್ನೆ..’ಕಾರಣ ಗೊಂತಾತೊ..

  11. ಇಲ್ಲಿ ಇನ್ನೊಂದು ಸಮಸ್ಯೆಯ ಆರುದೆ ಉಲ್ಲೇಖಸಿದ್ದವಿಲ್ಲೆ. ಈಗ ಪರಿಸ್ಥಿತಿ ಹೇಂಗೆ ಆಯಿದು ಹೇಳಿರೆ ಬೆಂಗೂರಿಲಿ ಜಾಬಿಲಿಪ್ಪ ಕೃಷಿಕನ ಮಗನೇ ಜಾಗೆ ತೆಗೆಯೆಕ್ಕು ಹೇಳಿರೆ ಸಾಧ್ಯ ಇಲ್ಲೆ. ಎಲ್ಲ ಬಿಟ್ಟು ಪಿತ್ರಾರ್ಜಿತ ಆಸ್ತಿಯನ್ನೇ ಮಗಂಗೆ ಬರೆಯೆಕ್ಕು ಹೇಳಿದರೆ ಕಾನೂನು ಅಡ್ಡ ಬತ್ತು. ಬೇನಾಮಿ ಹೆಸರಿಲಿ ಮಾಡುಲಾವುತ್ತು ಅದು ಬೇರೆ ವಿಚಾರ. ಇದೆಲ್ಲಾ ಸಮಸ್ಯೆಗೊ ದೇವರಾಜ ಅರಸರ ಭೂಸುಧಾರಣಾ ಕಾಯ್ದೆ ಸೆಕ್ಶನ್ ೭೯ ಎ ಮತ್ತು ಬಿ ಇಂದಾಗಿ. ಇದರ ಪ್ರಕಾರ ವಾರ್ಷಿಕ ಎರಡು ಲಕ್ಷಕ್ಕಿಂತ ಹೆಚ್ಚು ಕೃಷಿಯೇತರ ಆದಾಯ ಇಪ್ಪ ಕುಟುಂಬ ಕೃಷಿ ಭೂಮಿ ಹೊಂದುವ ಹಾಂಗಿಲ್ಲೆ. ಪಿತ್ರಾರ್ಜಿತ ಆದರುದೆ ಅಸಾಧ್ಯ. ಇದಕ್ಕೆಂತ ಮಾಡುದು? ನಮ್ಮ ಹವ್ಯಕರಲ್ಲಿಪ್ಪ ಆರಾರು ಒಳ್ಳೆ ಅನುಭವ ಇಪ್ಪ ಅಡ್ವೊಕೇಟು ಇದರ ಬಗ್ಗೆ ಮಾಹಿತಿ ಕೊಟ್ಟರೆ ಒಳ್ಳೆದಿತ್ತು.

  12. ಒಪ್ಪಣ್ಣೋ…,
    ತುಂಬಾ ಪ್ರಾಮುಖ್ಯವಾದ,ನಾವೆಲ್ಲರೂ ಎಚ್ಚೆತ್ತುಗೊಳ್ಳೆಕ್ಕಾದ, ನಮ್ಮ ಕಣ್ಣೆದುರೇ ನಮ್ಮ ಜಾಗೆಗಳ ಪೈಸೆಯ ಆಮಿಷ ಒಡ್ಡಿ ಇನ್ನೊಬ್ಬ ಆಕ್ರಮಿಸುದರ ತಡೆಯಲೇ ಬೇಕಾದ ಒಂದು ಆಂದೋಲನವೇ ಅಗತ್ಯ ಇಪ್ಪ ವಿಚಾರ. ನಮ್ಮ ಬೈಲಿಲಿ ಇಪ್ಪ ಎಲ್ಲೊರೂ ಮನಸ್ಸಿಲಿ ಗಟ್ಟಿಯಾಗಿ ನಿರ್ಧಾರ ಮಾಡೆಕ್ಕಪ್ಪ ವಿಚಾರ.

    [ಪ್ರಾಥಮಿಕವಾಗಿಪ್ಪ, ಹೆರಿಯೋರಿಂದ ಬಂದ ಈ ಜಾಗೆಯ ನಾವು ನಮ್ಮ ಕಿರಿಯರಿಂಗೆ ಎತ್ತುಸೆಕ್ಕು.]

    ಖಂಡಿತಾ ಅಪ್ಪು. ಹೇಂಗೆ ನಮ್ಮ ಸಂಸ್ಕಾರ- ಸಂಸ್ಕೃತಿಯ ನಾವು ನಮ್ಮ ನಂತ್ರಾಣವಕ್ಕೆ ಹೇಳಿಕೊಟ್ಟು ಹಿರಿಯರಿಂದ ಬಂದದು ಅವಸಾನ ಆಗದ್ದ ಹಾಂಗೆ ನೋಡ್ತೋ, ಹಾಂಗೇ ಜಾಗೆಯೂ ಕೂಡಾ ನಾವು ಅನುಭವಿಸಿ ನಮ್ಮ ಮುಂದಾಣ ಪೀಳಿಗೆಗೆ ಹಸ್ತಾಂತರ ಮಾಡ್ಲೆ ಇಪ್ಪದು. ಅದು ಹಿರಿಯರ ಸೊತ್ತು. ನವಗೆ ಅದರ ಮಾರುವ ಹಕ್ಕಿಲ್ಲೆ. ಅದು ನಮ್ಮ ಮಕ್ಕಳ ಸೊತ್ತು. ಎಷ್ಟೋ ಜನಕ್ಕೆ ಹಿರಿಯರ ಆಸ್ತಿ ಪಾಲಪ್ಪಗ ಹಿರಿಯರು ಓಡಾಡಿದ, ಕಷ್ಟಪಟ್ಟು ಬೆಗರು ಹರಿಶಿ ದುಡುದ ಜಾಗೆ ಸಿಕ್ಕುತ್ತಿಲ್ಲೆ. ಅದರ ಲೆಕ್ಕದ ಪಾಲು ಸಿಕ್ಕುತ್ತಷ್ಟೇ! ಹಾಂಗೆ ಸಿಕ್ಕಿದವರ ಮನಸ್ಸಿಲೂ ಇರ್ತಿಲ್ಲೆಯಾ ಹಿರಿಯರ ಬೆಗರ ಹನಿ ಬಿದ್ದ ಒಂದು ತುಂಡು ಭೂಮಿ ಅವರ ಆಶೀರ್ವಾದ ರೂಪಲ್ಲಿ ತನಗಿದ್ದರೆ ಹೇಳಿ!! ಭೂಮಿ ಎಲ್ಲ ನಮ್ಮ ಯೋಗಲ್ಲಿ ಸಿಕ್ಕುವಂಥಾದ್ದು! ಅಲ್ಲದಾ?
    ಹಳೆತಲೆಮಾರಿನವರ ಪುಣ್ಯ ಕಾವಲಾಗಿ ಇಪ್ಪ, ಅವರ ಆಶೀರ್ವಾದಲ್ಲಿ ಸಂಪದ್ಭರಿತವಾಗಿಪ್ಪ ನಮ್ಮ ಜಾಗೆಯ ಈಗಾಣ ಕಾಲದ ಪೈಸೆಯ ಆಶೆಗೋ, ಬೇರೆ ಸ್ವಂತ ಕಾರಣಕ್ಕಾಗಿಯೋ ಮಾರಿದರೆ ಅದು ನಾವು ನಮ್ಮ ಹಿರಿಯೋರಿಂಗೆ ಮಾಡುವ ಅವಮಾನ. ಎಷ್ಟೋ ಜನಂಗೋಕ್ಕೆ ಅವರ ಪಿತ್ರಾರ್ಜಿತ ಜಾಗೆಯ ಮಾರಿದ ಮೇಲೆ ಹಲವಾರು ತೊಂದರೆಗಳ ಅನುಭವಿಸಿ ಕೊರಗುತ್ತಾ ಇದ್ದವು. ಆದರೆ ಕಾಲ ಮೀರಿ ಹೋದರೆ ಎಂತದೂ ಮಾಡ್ಲೆ ಎಡಿಯ. ತೊಂದರೆಗೊ ನಮ್ಮ ಹಿರಿಯರಿಂಗೆ ಬಂದಿರದಾ? ಅವು ಆ ಸಮಯಲ್ಲಿ ಧೈರ್ಯ ಕೆಟ್ಟಿದವಾ? ಜಾಗೆ ನಮ್ಮಂದ ನಮ್ಮ ನಂತರದವಕ್ಕೆ ಹರುದು ಹೋಯೆಕ್ಕು ಹೇಳಿಯೇ ಎಷ್ಟೋ ಕಷ್ಟಂಗಳ ಬಂದಿಕ್ಕು. ಅವ್ವು “ಕರ್ಮಣ್ಯೇ ವಾಧಿಕಾರಸ್ತೇ…” ಹೇಳಿ ಜೀವನ ಮಾಡಿದ ಕಾರಣ ನಾವು ಇಂದು ಫಲ ಉಣ್ಣುತ್ತಾ ಇದ್ದು. ನಾವು ಮಾಡಿದ್ದದರ ನಮ್ಮ ಮಕ್ಕೋ, ಪುಳ್ಯಕ್ಕೋ ಉಣ್ಣುತ್ತವು. ಇದು ಶಾಶ್ವತ ಸತ್ಯ!

    [ಇದೂ ಒಂದು ನಮುನೆಲಿ ಅತಿಕ್ರಮಣವೇ ಅಲ್ಲದೋ – ನಮ್ಮ ಸಂಸ್ಕಾರದ ಮೇಲೆ ಆವುತ್ತಾ ಇಪ್ಪ ಧಾಳಿ ಅಲ್ಲದೋ – ಅನುಸುದು ಒಂದೊಂದರಿ ಮಾಷ್ಟ್ರುಮಾವಂಗೆ.]

    ಸಮಾಜಲ್ಲಿ ಈಗ ಆವುತ್ತಾ ಇಪ್ಪದರ ನೋಡಿದರೆ ಮಾಷ್ಟ್ರುಮಾವ° ಹೇಳಿದ್ದದೇ ಸರಿ ಕಾಣುತ್ತು. ಇದು ಒಂದು ರೀತಿಯ ಅತಿಕ್ರಮಣವೇ!! ನಮ್ಮ ಸುತ್ತ ಮುತ್ತ ಇದ್ದ ದೊಡ್ಡಜ್ಜ°, ಸಣ್ಣಜ್ಜ°, ಮಾವಂದ್ರ, ಭಾವಂದ್ರ ಜಾಗೆ ಎಲ್ಲ ಬೇರೆಯೋರ ಪಾಲಾತು. ನಮ್ಮ ಅಸ್ತಿತ್ವಕ್ಕೆ ಮೂಲ ಕಾರಣ ಆದ ನಮ್ಮ ಜಾಗೆ, ಜಾಗೆಯ ಹೆಸರಿನ ಮೂಲಕ ಗುರುತಿಸಿಗೊಂಬ ನಾವು ಎಲ್ಲವೂ ನಮ್ಮ ಕೈ ಬಿಟ್ಟು ಹೋದಪ್ಪಗ, ನಮ್ಮ ಕೈ ಹಿಡಿವಲೆ ಹಿರಿಯರ ಪುಣ್ಯವೂ ಬಾರ, ಯಾವ ದೈವ ದೇವರುಗಳ ಆಶೀರ್ವಾದವೂ ಒಲುದು ಬಾರ. ನಂತರದ ಎಲ್ಲಾ ಬೆಳವಣಿಗೆಗೆ, ಅವಸಾನಕ್ಕೆ ನಾವು ಮಾಂತ್ರ ಕಾರಣ ಆವುತ್ತು ಅಲ್ಲದಾ?
    ನಮ್ಮ ಜಾಗೆ ನವಗೇ! ನಮ್ಮ ಆಸ್ತಿ ನಮ್ಮದೇ! ಯೇವ ಮಮ್ಮದೆಗೂ, ಆದಾಮಿಂಗೂ ಇಪ್ಪದಲ್ಲ. ಒಂದೊಪ್ಪಲ್ಲಿ ನೀನು ಹೇಳಿದ ಹಾಂಗೆ ಜಾಗೆಯ ಒಟ್ಟಿಂಗೆ ಭಾವನೆಯನ್ನೂ ಕೊಡೆಕ್ಕಾವುತ್ತು. ಕೊಟ್ಟ ಜಾಗೆ ಮತ್ತೆಂದಿಂಗೂ ನಮ್ಮದಲ್ಲ. ನಮ್ಮ ಹಿರಿಯೋರ ಕನಸುಗೋ, ನಮ್ಮ ನೆನಪುಗೋ, ಆ ಮಣ್ಣಿನ ಒಡನಾಟ ಎಲ್ಲವೂ ಹೊಸ ಒಡೆತನದ ಬೇಲಿಯೊಳ ಆವುತ್ತು. ಅವ್ವು ಅದರ ದುರುಪಯೋಗ ಮಾಡುವಾಗ ಕಣ್ಣನೀರು ಹಾಕೆಕ್ಕಷ್ಟೇ ವಿನಾ ನವಗೆ ಬೇರೆಂತೂ ಮಾಡ್ಲೆ ಎಡಿಯ. ಪ್ರತಿಯೊಬ್ಬಂಗೂ ಸಮಸ್ಯೆಗ ಬಕ್ಕು. ಅದರ ನಿಭಾಯಿಸಿ ಮುಂದೆ ಹೋಯೆಕ್ಕಷ್ಟೇ ಅಲ್ಲದಾ? ಇಲ್ಲದ್ದರೆ ಹುಣ್ಣಾತು ಹೇಳಿ ಕೈ ಕಡುದ ಹಾಂಗೆ ಅಕ್ಕು. ಜೋಗಿಬೈಲು ಮಾವನ ಹಾಂಗೆ ಪಿತ್ರಾರ್ಜಿತ ಜಾಗೆಯ ಒಳಿಶಿಗೊಂಡು ಬೇರೆ ಜಾಗೆ ಮಾಡಿ, ಮಾರಿದರೆ ನಾವೂ ಬೆಳವಲಕ್ಕು. ನಮ್ಮೂರೂ – ನಮ್ಮೋರೂ ಬೆಳಗು ಅಲ್ಲದಾ?

    ಒಳಿಶಿ, ಬೆಳೆಶಿ ನಮ್ಮ ಪಿತ್ರಾರ್ಜಿತ ಆಸ್ತಿ – ಆಗಲಿ ನಮ್ಮ ಮಕ್ಕಳ ಬದುಕು ಸ್ವಸ್ತಿ

  13. ಕೂಸುಗಳೇ ಧೈರ್ಯವಾಗಿ ಮುಂದೆ ಬನ್ನಿ… ದೇಶದ ಭವಿಷ್ಯಲ್ಲಿ ನಮ್ಮ ಭವಿಷ್ಯವೂ ಇದ್ದು… ಈಗ ಕಾಲ ಮೊದಲಾಣ ಹಾಂಗೆ ಇಲ್ಲೇ… ಪೇಟೆಲ್ಲಿ ಒಂದು ತರ ಕಷ್ಟ ಬಪ್ಪದಾದರೆ ಹಳ್ಳಿಲ್ಲಿ ಇನ್ನೊಂದು ತರ… ಸರಿಯಾಗಿ ಆಲೋಚನೆ ಮಾಡಿರೆ ಹಳ್ಳಿಲ್ಲಿ ಒಂದು ಪಟ್ಟು ಸುಖ ಹೆಚ್ಚಿಗೆಯೇ…

    ನಿನ್ನೆ tv9 ಲಿ ತೋರುಸಿದ ಹಾಲಿನ ದಂಧೆಯ ನೋಡಿದ್ದಿಲ್ಲಿರ? ಹೀಂಗೆ ಪ್ರತಿಯೊಂದರಲ್ಲಿಯೂ ನಮ್ಮ ಮೋಸ ಮಾಡುತ್ತಾ ಇದ್ದವು… ಕ್ಷಣ ಕ್ಷಣ ವೂ ಆತಂಕ… ಇದರಿಂದ ಎಲ್ಲ ಹಳ್ಳಿಲ್ಲಿ ಒಂದು ಚೂರು ಕಷ್ಟ ಬಂದರೂ ನೆಮ್ಮದಿ ಇದ್ದು… ಮತ್ತೆ ಕೆಲಸಕ್ಕೆ ಜೆನ ಎಲ್ಲೇ ಹೇಳುವ ಸಮಸ್ಯೆ ನಾವು ವಾಪಸಾದ ಕೆಲವೇ ಸಮಯಲ್ಲಿ ಪರಿಹಾರ ಆವುತ್ತು… ಎಂತಕೆ ಹೇಳಿರೆ ನಮ್ಮಲ್ಲಿ ಕೆಲಸ ಮಾಡಿಗೊಂಡು ಇದ್ದ ಜೆನಂಗೋ ನಮ್ಮ ಹಿಂದಂದ ಪೇಟೆಗೆ ಬಂದವು.ಈಗ ನಾವು ಹಿಂದೆ ಬಂತು ಹೇಳಿ ಆದರೆ ಅವು ಖಂಡಿತ ಹಿಂದೆ ಬತ್ತವು…

    ಮೊನ್ನೆ city center ಲಿ ಶಾಪಿಂಗ್ ಹೊಗಿತ್ತಿದ್ದೆಯ… ಕೆಲವು ಸಾಮಾನುಗಳ purchase ಮಾಡಿಗೊಂಡು ಬಪ್ಪಲೆ mal ನೊಳ ೨ ಘಂಟೆ… ಇದೆಲ್ಲ ನಮಗೆ ಗೊಂತೆ ಆವುತ್ತಿಲ್ಲೇ… ಅಷ್ಟೆ ಸಮಯವ ತೋಟಲ್ಲಿ ಸುತ್ತುಲೇ ಕಳದರೆ ಪಾರ್ಕ್ ಲಿ ಸುತ್ತಿದಾ ಆನಂದ ಸಿಕ್ಕುತ್ತಿತ್ತು ಹೇಳಿ ಅನ್ನಿಸಿತ್ತು…

    1. ಪೇಟೆಲ್ಲಿ…
      ೧.ಶಾಲೆಗೆ ಕಳುಸಿದ ಮಕ್ಕ ವಾಪಾಸ್ ಬಪ್ಪನ್ನಾರ ಆತಂಕ…
      ೨.traffic ಸಮಸ್ಯೆಲ್ಲಿ ಮನೆಂದ ಹೆರ ಹೋದವ ವಾಪಾಸ್ ಬಂದ ಮೇಲೆ ನಿಟ್ಟುಸಿರು ಬಿಡುಲೆ ಎಡಿತ್ತಷ್ಟೇ…
      ೩.ತಿಂಬ ಆಹಾರ, ಕುಡಿವ ನೀರು, ಸೇವಿಸುವ ಗಾಳಿ ಎಲ್ಲವೂ ವಿಷ…
      ೪.ತರಕಾರಿ, ಹಣ್ಣುಗೊಕ್ಕೆ ಹಾಳಾಗದ್ದ ಹಾಂಗೆ ಚುಚ್ಚುವ oxytocin ಹಾರ್ಮೋನ್ ಆರೋಗ್ಯಕ್ಕೆ ಎಷ್ಟು ಅಪಾಯ ಹೇಳಿ ಎಲ್ಲೋರಿಂಗೂ ಗೊಂತಿಕ್ಕು…
      ೫.ದೇಶಲ್ಲಿ ಯಾವಾಗ ಎಂತಕ್ಕು ಹೇಳುಲೇ ಎಡಿಯ… ಒಂದು ಸಮಯ ಯುದ್ದ ಶುರು ಆತು ಹೇಳಿರೆ ಪೇಟೆಯ ಕಷ್ಟ ಕೇಳೆಡ… ಹಳ್ಳಿಲ್ಲಿ ಆದರೆ ತೋಟಂದ ಬಾಳೆಕಾಯಿ ತಂದು ಆದರೂ ಉಪಯೋಗಿಸಲಕ್ಕು.

      ಪಟ್ಟಿ ಮಾಡುತ್ತಾ ಹೋದರೆ ಅತಂಕಂಗ ಒಂದೆರಡಲ್ಲ…. ಇದೆಲ್ಲದಕ್ಕಿಂತ ಸುಲಭವಾಗಿ ಕೆಲಸಕ್ಕೆ ಜೆನ ಇಲ್ಲೇ ಹೇಳುವ ಸಮಸ್ಯೆಯ ಪರಿಹರಿಸುಲೇ ಎಡಿಗು….

  14. ————————————————————————–
    ಇತಿಹಾಸಲ್ಲಿ ಮೊಗಲರಿಂದ, ಕ್ರಿಶ್ಚನಿನೋರಿಂದ ಎಷ್ಟೋ ದಿಕ್ಕೆ, ಎಷ್ಟೋ ವಿಧಲ್ಲಿ ಆಕ್ರಮಣ ಆಯಿದು ನಮ್ಮ ಸಮಾಜದ ಮೇಲೆ.
    ಈಗ – ಇಬ್ರಿಂದಲೂ ಒಟ್ಟಾಗಿ – ಆವುತ್ತಾ ಇಪ್ಪ ಆಕ್ರಮಣವೇ ಇದು.
    ಇದರ ನಾವು ತಡೇಕಾರೆ ನಾವೆಲ್ಲರೂ ಒಟ್ಟಾಗಿ ನಿಂದು “ಜಾಗೆ ಕೊಡೆ” ಹೇದು ಗಟ್ಟಿಯಾಗಿ ಹೇಳೇಕಡ.
    ——————————————————————————-

    Ee maatu karya roopakke barekare namma samajada koosugale jansekashte..Oorile koodu krishi noduttavana maduve appale reday aadare, petege hogi settle appale nodtha javvanigaralli 50% jana hinde bakku…Namma samajada unnati athava avanati ippadu hemmakkala kaili.

  15. ಹರೀಶಣ್ಣ ಹೇಳಿದ ಹಾಂಗೆ ರಾಮ ಭಜನೆ ಮಾಡಿ ಆದರೂ ಅಕ್ಕು, ಅಥವಾ ಬುದ್ದಿವಾದ ಹೇಳುವ ಮೂಲಕವೂ ಅಕ್ಕು, ಅಥವಾ ಪೇಟೆಲ್ಲಿಪ್ಪವು ಹಳ್ಳಿಗೆ ಬಂದು ಆದರೂ ಅಕ್ಕು ಅಥವಾ ಇನ್ಯಾವುದೇ ಒಳ್ಳೆ ತರಲ್ಲಿ ಅಕ್ಕು ನಮ್ಮ ಕಣ್ಣೆದುರು ಜಾಗೆ ಕೊಡುವುದರ ನಾವು ತಡೆಯಲೆಬೇಕು… ಇದರಿಂದ ‘ಭೂ ಸಂಪತ್ತು,ಗೋ ಸಂಪತ್ತುಗಳ’ ನಮ್ಮ ಕೈಲಿ ರಕ್ಷಣೆ ಮಾಡಿ ಆ ಮೂಲಕ ದೇಶದ ಸಂಪತ್ತಿನ ಕಾಪಾಡಿ ನಿಜವಾಗಿಯೂ ದೇಶದ ಆರ್ಥಿಕತೆಗೆ ನೆರವಾದ ಹಾಂಗೆ ಆವುತ್ತು… ಎಂತಕೆ ಹೇಳಿರೆ ಬೇರೆ ಯಾವುದೇ ಉದ್ಯೋಗ ಮಾಡುವವ ಆದರೂ ‘ದೇಶದ ಆರ್ಥಿಕತೆ’ ಹೇಳುವ ಹೆಸರಿಲ್ಲಿ ನಡವ ನೋಟಿನ ವ್ಯಾಪಾರದ ಮೋಸದ ಜಾಲಲ್ಲಿ ಭಾಗಿ ಆದ ಹಾಂಗೆ ಆವುತ್ತು ಅಷ್ಟೇ…

  16. ತುಂಬಾ ಮಂದಿ- ತೋಟ ನೋಡುಲೆ ಜನ ಇಲ್ಲೆ,ಕೆಲಸದವು ಸಿಕ್ಕುತ್ತವಿಲ್ಲೆ,ಬಪ್ಪವಕ್ಕೆ ಪೈಸೆ ಕೊಟ್ಟು ಪೂರೈಸುತ್ತಿಲ್ಲೆ,ದೂರ ಕೆಲಸಲ್ಲಿ ಇಪ್ಪ ಮಕ್ಕೊಗೆ ಬಪ್ಪಲೆ ಪುರುಸೊತ್ತಿಲ್ಲೆ ,ಪ್ರಾಯ ಆತು,ಜಾಗೆ ಅರೂಪ ಮಾಡಿ,ಹಡ್ಲು ಹಾಕಲೆ ಮನಸ್ಸು ಬತ್ತಿಲ್ಲೆ-ಹೀಂಗೆ ಎಲ್ಲಾ ಆಗಿ ಈ ರೀತಿ ಮಾಡುತ್ತವು.ಇದು ಮುಖ್ಯವಾಗಿ ಒಂದು ಆರ್ಥಿಕ ಸಾಮಾಜಿಕ ಬದಲಾವಣೆ.ಅನಿವಾರ್ಯವಾದ ವಿಷಯ…ಜಾಗೆ ಕೊಡೇಡಿ ಹೇಳಿದರೆ ಆ ಮನೆಯವರ ಸಮಸ್ಯೆ ಪರಿಹಾರ ಅಕ್ಕೊ?ಇದು ಆರೂ ಸಂತೋಷಂದ ಮಾಡುವ ಕೆಲಸ ಅಲ್ಲ.ಆದರೂ ಒಂದು ಬಗೆ ನಿವೃತ್ತಿ ,ಸಂಪತ್ತು ಇಪ್ಪವು ಆರಾದರೂ ನಮ್ಮವಕ್ಕೆ,ಬಂಧುಗೊಕ್ಕೆ ಜಾಗೆ ನೋಡಿಕೊಂಬಲೆ ಹೇಳಿ,ಊರು ಬಿಡುದಾದರೆ ಆವುತ್ತಿತ್ತು.

  17. ನಾವು ಹುಟ್ಟಿ ಬೆಳದ ಜಾಗೆಗೆ ಮತ್ತೆ ನವಗೆ ಇಪ್ಪ ಬಾಂಧವ್ಯ ತುಂಬಾ ಎತ್ತರದ್ದು.
    ಎಲ್ಲಿ ಹೋದರೂ ನೆಂಪು ಬಪ್ಪದು ಅದೇ ಜಾಗೆ, ಅದೇ ತೋಟ, ಅದೇ ಗುಡ್ಡೆ,ಅದೇ ತೋಡು, ಅದೇ ಗೆದ್ದೆ. ಅಲ್ಲಿ ಆಡಿದ ಆಟಂಗೊ, ಕಳುದ ದಿನಂಗಳ ಮರವೆಲೆ ಎಡಿಯ. ಹಾಂಗಿಪ್ಪಗ ಆ ಜಾಗೆ ಬೇರಯವಕ್ಕೆ ಹೋದರೆ ನಮ್ಮತನವನ್ನೇ ಕಳಕ್ಕೊಂಡ ಅನುಭವ ಆಗದ್ದೆ ಇರ.
    ಅದಕ್ಕೇ ಹಿರಿಯರು ಬೈತ್ತರೂ “ಎಂತ ನಿನ್ನ ಹೊಕ್ಕುಳು ಅಲ್ಲಿ ಹುಗುದು ಹಾಕಿದ್ದಾ” ಕೇಳುಗು.
    ಹೆತ್ತ ಅಬ್ಬೆಗೂ ಮಕ್ಕೊಗೂ ಕರುಳ ಸಂಬಂಧ ಇದ್ದ ಹಾಂಗೆ ಅಲ್ಲದಾ ನವಗೂ ನಮ್ಮ ಹೊರುವ ಭೂಮಿಗೂ ಇಪ್ಪದು?.
    ಮಾರುವದಕ್ಕೂ ಕೊಡುವದಕ್ಕೂ ಇಪ್ಪ ವೆತ್ಯಾಸವ ವಿಮರ್ಶಿಸಿ ಬರದ್ದು ಲಾಯಿಕ ಆಯಿದು.
    ಮಕ್ಕೊ ದೂರ ಊರಿಲ್ಲಿ ಹೋಗಿ ಕೂದು, ಹಳ್ಳಿ ಹೇಳಿರೆ ವೃದ್ಧಾಶ್ರಮ ಆವ್ತಾ ಇಪ್ಪದು ಕೂಡಾ ಅಷ್ಟೇ ಸತ್ಯ. ಎಲ್ಲರೂ ಆಲೋಚಿಸೆಕ್ಕಾದ ಗಂಭೀರ ವಿಷಯ.

  18. ಅಪ್ಪು ಜಾಗೆ ಕೊಡುವ ಮೊದಲು ಸರಿಯಾಗಿ ಆಲೋಚನೆ ಮಾಡೆಕ್ಕು…

    ಬೂತಸ್ಥಾನ,ನಾಗನ ವನ ಎಲ್ಲ ಇಪ್ಪ ಜಾಗೆಯ ಅನ್ಯಮತೀಯರಿಂಗೆ ಕೊಟ್ಟರೆ ಅವು ಅದರ ಒಳಿಶಿಗೊಲ್ಲುತ್ತವಿಲ್ಲೇ… ಇದರಿಂದಾಗಿ ತೊಂದರೆ ಅನುಭವಿಸುವ ಅದೆಷ್ಟೋ ಕುಟುಮ್ಬಂಗಳ ನಾವು ಕಾಣುತ್ತು… ಸಾಕಷ್ಟು ಕಷ್ಟ,ನೋವುಗಳ ಅನುಭವಿಸಿಕ್ಕಿ ಜೋಯಿಷರ ಹತ್ತರೆ ಕೇಳಿಯಪ್ಪಗ “ತರವಾಡು ಮನೆಲಿ ಎಲ್ಲ ಸರಿಯಾಗಿ ನಡಕ್ಕೊಂಡು ಬತ್ತಾ ಇಲ್ಲೇ… ಹಾಂಗಾಗಿ ದೋಷ ಕಾಮ್ಬದು…” ಹೇಳುದಕ್ಕೆ ನಾವು ಹಲವು ಉದಾಹರಣೆಗಳ ಕಾಣುತ್ತು…

  19. ಇ೦ದ್ರಾಣ ದಿನಲ್ಲಿ ಅಪ್ಪ ಒ೦ದು ಅರಗುಸಲೆಡಿಯದ್ದ ವಿಚಾರ ಒಪ್ಪಣ್ಣಾ.ನಮ್ಮ ಮನೆ, ನಮ್ಮ ಜಾಗೆ, ಆ ಗುಡ್ಡೆ.. ತೋಟ.. ಎಲ್ಲಾ ಮಾರಿಕ್ಕಿ ಪೇಟೆ ಹತ್ತುದು ಎಷ್ಟು ಸರಿ ಹೇಳ್ತ ವಿಚಾರವ ಸರಿಯಾಗಿ ವರ್ಣನೆ ಮಾಡಿದ್ದೆ..

    ಎನ್ನ ಪ್ರಕಾರ ಜಾಗೆಯ ಹಾ೦ಗೆ ಬಿಟ್ಟರೂ ತೊ೦ದರೆ ಇಲ್ಲೆ, ದುರಾಸೆಗೆ ಬಾಕಿದವಕ್ಕೆ ಮಾರುದು ತಪ್ಪು..!!!
    ಇ೦ದು ಅಡಕ್ಕೆ ತೋಟ, ಬೀಜ ಗುಡ್ಡೆ ಎಲ್ಲವನ್ನು ರಬ್ಬರು ತೋಟ ಮಾಡಿರೆ ನಾವು ಹುಟ್ಟಿ ಬೆಳೆದು ಆಡಿದ ಒ೦ದು ಬಾಲ್ಯ ನಮ್ಮ ಮಕ್ಕೊಗೆ ಎ೦ದಿ೦ಗೂ ಸಿಕ್ಕಾ.. ಎಲ್ಲಿ ನೋಡಿರೂ ರಬ್ಬರು – ಪಚ್ಚೆ – ಶಾ೦ತಿ?? ಇವಿಷ್ಟೇ ಕಾ೦ಗು.. 🙁

    ಇಪ್ಪದರ ಎ೦ದಿ೦ಗೂ ಮಾರ್ಲಾಗ, ಎಡಿಗಾದರೆ ದೊಡ್ಡ ಮಾಡಿರೆ ಅಡ್ಡಿ ಇಲ್ಲೆ.. 😉

    ಮತ್ತೆ ಈ ಬೇ೦ಗ್ಳೂರು ಹತ್ತುತವು, ಒ೦ದು ಅಲ್ಲ ಒ೦ದು ದಿನ ಊರಿ೦ಗೆ ಬರೆಕೇ, ಅದು ಜೆ೦ಬರ ಇಕ್ಕು, ತರವಾಡು ಆದಿಕ್ಕು , ಜಾತ್ರೆಗಾದಿಕ್ಕು, ಅತವ ಪೇಟೆ ಬಿಟ್ಟು ಹಳ್ಳಿಗಾದಿಕ್ಕು..

    ಮತ್ತೆ ಮು೦ದೆ ಒ೦ದು ದಿನ ಹಳ್ಳಿಗೆ ಬಪ್ಪಗ ನಮ್ಮದು ನಮ್ಮೋವು ಹೇಳಿ ಆರು ಸಿಕ್ಕದ್ರೆ?? 🙁
    ಹಳ್ಳಿ ಜೀವನ, ಅದರ ಸೊಬಗು ಎಲ್ಲಾ ಪೇಟೆಲಿ ಎ೦ದಿಗೂ ಸಿಕ್ಕಾ..

    ಎನ್ನ ಪ್ರಕಾರ ಇ೦ದ್ರಾಣ ಜವ್ವನಿಗರು (ಆನುದೆ) ರಜಾ ಸಮಯ ಪೇಟೆಲಿ ಇದ್ದೊ೦ಡು ಕೆಲಸ ಮಾಡಿ ಮತ್ತೆ ಊರಿ೦ಗೆ ತೆರಳುದು ಉತ್ತವ. ನಮ್ಮ ಅಬ್ಬೆ-ಅಪ್ಪ ಹಿರಿಯರು ನಡಶಿ೦ಡು ಬ೦ದಾ೦ಗೆ ನಾವುದೆ,

    ನಮ್ಮ ಭೂಮಿ
    ನಮ್ಮ ದೈವ
    ನಮ್ಮ ದೇವರು
    ನಮ್ಮ ಜೆನ

    ಎಲ್ಲವನ್ನು ಹಿ೦ದೆ ನಡಶಿಡು ಬ೦ದಾಗೆ ಬಾರದ್ರೆ ಮು೦ದೆ ಒ೦ದು 25-30 ವರುಶ ಕಳುದರೆ ನಮ್ಮ ಮು೦ದಾಣ ಪೀಳಿಗೆ ಇದು ಎ೦ತದೂ ಅರಡ್ಯದಾ೦ಗೆ ಪೇಟೆಮನೆಯ ನಾಲ್ಕು ಗೋಡೆಯ ಮದ್ಯೆಬೆಳಗು.. 🙁 ಹೇಳಿ ಎನ್ನ ಅಭಿಪ್ರಾಯ.

    ಬರದ್ದು ಲಾಯಕೆ ಆಯಿದು ಒಪ್ಪಣ್ಣ. 🙂

  20. Oppanna laika aidu. Enagu bailakareli elliyadaru sanna jage iddare madekku heli aidu. Aaringadaru gontiddare heli. 3 ya 4 acre jage saku.

  21. ಲೇಖನ ಲಾಯಕ ಆಯಿದು ಒಪ್ಪಣ್ಣಾ.. ಯಾವದೇ ಕಾರಣಕ್ಕೂ ಜಾಗೆ ಕೊದ್ತಿಲ್ಲೆ ಹೇದ ನಮ್ಮ ಕೇಪಿ ನೆ೦ಪಾತು.

  22. ಜಾಗೆ ಕೊಡುವುದಕ್ಕೂ, ಮಾರುವುದಕ್ಕೂ ವ್ಯತ್ಯಾಸ ತೋರುಸಿದ ಒಪ್ಪಣ್ಣನ ಲೇಖನ ಮನಸ್ಸು ಕಲಂಕುತ್ತ ಹಾಂಗಿದ್ದು. ಶಾಂತಿಪ್ರಿಯ ಧರ್ಮದವು ಪದ ಪ್ರಯೋಗ ಲಾಯಕಾತು. ಕಾರಣ ಏವದೇ ಇರಳಿ, ಕೊಟ್ಟ ಜಾಗೆ ನವಗೆ ಹಿಂದೆ ಖಂಡಿತಾ ಸಿಕ್ಕ. ಕಳೆದು ಹೋದ್ದರ ಬಗ್ಗೆ ಚಿಂತೆ ಮಾಂತ್ರ ಮಾಡೆಕಷ್ಟೆ. ನಮ್ಮ ಜಾಗೆ ಒಟ್ಟಿಂಗೆ ನಮ್ಮ ಭಾವನೆಗಳ ಸಂಬಂಧ ಇಪ್ಪದು ಖಂಡಿತ. ಅಂಧಾನುಕರಣೆ ಉದಾಹರಣೆಗೆ ಕೊಟ್ಟ ದೊಡ್ಡಬಾವನ ಕಥೆ ಕೇಳಿ ಬೇಜಾರಿನ ಎಡೆಲಿಯುದೆ ನೆಗೆ ಬಂತು. ಪ್ರಸ್ತುತ ಕಾಲದ ಸೂಕ್ಷ್ಮ ಸಮಸ್ಯೆ ಒಂದರ ಎತ್ತಿ ತೋರುಸಿ ಜಾಗ್ರತೆ ಹೇಳಿದ ಒಪ್ಪಣ್ಣಂಗೆ ಧನ್ಯವಾದಂಗೊ.

  23. ಶುದ್ದಿ ಬಾರೀ ಲಾಯಿಕ ಆಯಿದು ಒಪ್ಪಣ್ಣೋ….ಇಲ್ಲೆ ಹತ್ತರೆ ಮೊದಲು ನಮ್ಮೋರ ೧೦ ಮನೆ ಇತ್ತು ಈಗ ಅವು ಎಲ್ಲೊರೂ ಶಾಂತಿ ಪ್ರಿಯ ಮತ ದೋವಕ್ಕೆ ಕೊಟ್ಟು ಊರಿಲಿಲೇ ಶಾಂತಿ ಇಲ್ಲದ್ದ ಹಾಂಗೆ ಆಇದು..ವರುಶವೂ ತ್ರಿಕಾಲ ಪೂಜೆ ಆಯಿಕ್ಕೊಂಡು ಇತ್ತ ಮನೆಲಿ ಇಂದು ದಿನಾ ಗೋಹತ್ಯೆ ಆವುತ್ತಾ ಇದ್ದು….ಈ ವಿಶಯಂಗಳ ಬಗ್ಗೆ ನಮ್ಮ ಜವ್ವನಿಗರು ತುಂಬಾ ಆಲೋಚನೆ ಮಾಡೆಕ್ಕಾದ ಕಾಲ ಬೈಂದು….ಮಗಂಗೆ ಬೆಂಗಳೂರಿಲಿ ಕೆಲಸ ಸಿಕ್ಕಿದ ಕೂಡಲೇ ಅಮ್ಮ,ಅಪ್ಪ ಆಸ್ತ್ತಿ ಮಾರಿಕ್ಕಿ ಪೇಟಗೆ ಹೋಪದು ಎಸ್ತ್ತು ಸರಿ..???

  24. ಒಪ್ಪ ಚೆ೦ದ ಆಯ್ದು. ಇ೦ದ್ರಣ ಪೇಪರಿಲಿ ಗುಜರಾಥ್ ನ ಸುದ್ದಿ ಇತ್ತು. ಅಲ್ಲಿ ಹೊಸ ಆ೦ದೋಲನ ಸುರು ಅಯ್ಡಡ. ನಮ್ಮವು ಮಾಪ್ಲ್ಗಗವಕ್ಕೆ ಜಾಗೆ ಮಾರುದು ಗೊ೦ತಾದರೆ ಅದರ ನಿಲ್ಸುವ ವರೆಗೆ ಮಾರುವವನ ಮನೆ ಮು೦ದೆ ರಾಮ ಭಜನೆಡ! ನಮ್ಮಲ್ಲು ಹೀ೦ಗೆ ಸುರು ಮಾಡೆಕ್ಕಸ್ತಯಾಳಿ!

  25. ಒಪ್ಪಣ್ಣನ ಒಪ್ಪ ಶುದ್ದಿಗೆ – ನಮ್ಮದೂ ಒಂದೊಪ್ಪ.

  26. ಶುದ್ದಿ ಯೇವತ್ರಾಣ ಹಾಂಗೇ ಪಷ್ಟಾಯ್ದು ಒಪ್ಪಣ್ಣ.
    [ಅಸ್ರಪ್ ಪೊಸವಣಿಕೆ! ಯೂಸುಪ್ ಹಳೆಮನೆ! ಇಬ್ರಾಯಿ ದೊಡ್ಡಮಾಣಿ!! – ಹು!! ಇದರೆಲ್ಲ ಗ್ರೇಶಲೂ ಎಡಿತ್ತಿಲ್ಲೆ!!] – ಖಂಡಿತ. ಹೀಂಗೆ ಬರದ್ದರ ಓದುವಾಗಳೇ ಮೈ ಉರಿತ್ತು. ಇನ್ನು ಇಪ್ಪ ಜಾಗೆಗಳ ಎಲ್ಲ ಅವು ನಿಜವಾಗಿಯೂ ಆಕ್ರಮಿಸಿರೆ! ಅಲ್ಲಲ್ಲಿ ಮಿನಿಪಾಕಿಸ್ತಾನಂಗ ಏಳುಗು.
    ಭಾವನೆಯ ಕೊಟ್ಟು ಮನಃಶ್ಶಾಂತಿ ಕಳಕ್ಕೊಂಬದು ಬೇಡ ಹೇಳುದು ಉತ್ತಮ ನಿರೂಪಣೆಲಿ ಮೂಡಿಬಯಿಂದು.

  27. ಭಾರೀ ಒಳ್ಳೆ ಕಳಕಳಿಯ ಚಿಂತನೆ ಭಾವಯ್ಯ. ಉತ್ತಮ ನಿರೂಪಣೆಯೂ. ಜಾಗೆ ಸಂಪತ್ತು ಭಾವನೆ ಸಂಪತ್ತು ಬಲವಾದ ನಂಬಿಕೆ ಸಮಾಜಲ್ಲಿ ನೆಲೆಯೂರೆಕು ಹೇಳ್ವ ತತ್ವ ಮನತಟ್ಟಿತ್ತು ಹೇಳಿತ್ತು – ‘ಚೆನ್ನೈ ವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×