Oppanna.com

ಸೈನಿಕರ ಗೋರಿಯ ಮೇಗೆ ರಾಜಕೀಯ ಸೌಧ ನಿರ್ಮಾಣ?! :-(

ಬರದೋರು :   ಒಪ್ಪಣ್ಣ    on   04/11/2016    4 ಒಪ್ಪಂಗೊ

ಸೈನಿಕರು ಹೇದರೆ, ತನ್ನ ಜೀವಮಾನ ಇಡೀ ದೇಶರಕ್ಷಣೆಲಿ ಕಳವ ಅಮೂಲ್ಯ ವೆಗ್ತಿಗೊ.
ಅವು ಗಡಿಗಳಲ್ಲಿ ಹಶು-ಛಳಿಗೆ ನಿಂದಿಪ್ಪ ಕಾರಣ ನಾವು ಆರಾಮಲ್ಲಿ ಬೈಲಿಲಿ ಒರಗಲೆಡಿತ್ತು, ಅಪ್ಪೋ.
ಅವರ ಕರ್ತವ್ಯ ಸಮೆಯಲ್ಲಿ ಹೇಂಗಾರೂ ಸುಖ ಇಲ್ಲೆ, ಅವರ ನಿವೃತ್ತಿ ಅನಂತರ ಆದರೂ ಕೊಶಿ ಇರಳಿ – ಹೇಳ್ತ ಲೆಕ್ಕಲ್ಲಿ ಯಥೇಷ್ಟ ಪಿಂಚಣಿ ಇತ್ಯಾದಿ ಸೌಕರ್ಯಂಗಳ ಸರಕಾರ ಕೊಡ್ತು.
~
ಸುಮಾರು ಸಮೆಯಂದ ಕೇಳ್ತಾ ಇದ್ದು – ಸೈನಿಕರ ಪಿಂಚಣಿಯ ಬಗ್ಗೆ.
ಒಂದು ಶ್ರೇಣಿ – ಒಂದು ವೇತನ (ಓರೊಪ್) – ಹೇಳುವ ಒಂದು ಕಲ್ಪನೆ ಮದಲಿಂದಲೇ ಇದ್ದತ್ತು. ಒಂದು ಕಾಲಘಟ್ಟಲ್ಲಿ ನಿವೃತ್ತರಾದ ಒಂದೇ ಹಂತದ ಎಲ್ಲ ಅಧಿಕಾರಿಗೊಕ್ಕೂ ಒಂದೇ ಶ್ರೇಣಿಯ ವೇತನ – ಹೇಳ್ತದು ಇದರ ಸಾರಾಂಶ. ಸಾವಿರದ ಒಂಭೈನೂರ ಎಪ್ಪತ್ತರಲ್ಲಿ ಇಂದಿರಾಗಾಂಧಿ ಇದರ ರದ್ದು ಮಾಡಿತ್ತು. ಅದಕ್ಕೆ ಬೇಕಾದ ಹಾಂಗಿಪ್ಪ ಲೆಕ್ಕಾಚಾರವ ಹಾಕಿತ್ತು.
ಆರದ್ದೂ ಸುದ್ದಿ ಇಲ್ಲೆ, ಗೌಜಿ ಗಲಾಟೆ ಇತ್ತಿಲ್ಲೆ.
~
ಮುಂದೆ – ಅದರ ಸರಕಾರ ಉರುಳಿದ ಮತ್ತೆ ಕ್ರಮೇಣ – ಅಂದಿದ್ದ ಆ ಓರೊಪ್ ಪುನಾ ಬೇಕು – ಹೇಳುವ ಕೋರಿಕೆ ಕೇಳುಲೆ ಸುರು ಆತು. ಅಷ್ಟಪ್ಪಗ ಹಲವು ಸರಕಾರಂಗೊ ಇದ್ದತ್ತು, ಅವು ಮೂಸಿಯೂ ನೋಡಿದ್ದವಿಲ್ಲೆ ಈ ಬೇಡಿಕೆಯ.
ಅಂಬಗಳೂ, ಆರದ್ದೂ ಸುದ್ದಿ ಇಲ್ಲೆ. ಯೇವ ಬುದ್ಧಿ ಜೀವಿಗಳೂ ಬಯಿಂದವಿಲ್ಲೆ.
~
ಮೊನ್ನೆ ಮೊನ್ನೆ, ಸೋಣೆ ಗಾಂಧಿಯ ಸರಕಾರ ಇದ್ದತ್ತು. ಅಷ್ಟಪ್ಪನ್ನಾರವೂ ಆರುದೇ ಈ ಓರೊಪ್ ಗೆ ತಲೆ ಹಾಕಿದ್ದವಿಲ್ಲೆ, ಅದರ ಅನ್ವಯಿಸುಲೆ ಆಸಕ್ತಿ ಮುತುವರ್ಜಿ ತೆಕ್ಕೊಂಡಿದವಿಲ್ಲೆ.
ಅಂಬಗಳೂ, ಯೇವ ಓರಾಟಗಾರನೂ ಅವರವರ ಏಸಿ ಕೋಣೆಂದ ಎದ್ದಿದಯಿಲ್ಲೆ.
~
ಎರಡು ಒರಿಶ ಹಿಂದೆ ಮೋದಿ ಅಜ್ಜ ಬಂತಲ್ಲದೋ – ಬಂದಪ್ಪದ್ದೇ, ಸೈನಿಕರಿಂಗೆ ಅನ್ಯಾಯ ಆವುತ್ತಾ ಇಪ್ಪದರ ಸರಿ ಮಾಡೇಕು ಹೇದು ಈ ಓರೊಪ್ ನ ಆದೇಶ ಮಾಡಿತ್ತಾಡ.
ಎಷ್ಟೋ ಲಕ್ಷ ಸೈನಿಕರಿಂಗೆ ಎಷ್ಟೋ ಸಾವಿರಕೋಟಿ ಮೊತ್ತ ಕೊಡೆಕ್ಕಾಗಿ ಬತ್ತು.
ಆದರೂ – ಅದು ಆಯೆಕ್ಕಾದ ಕಾರ್ಯ ಇದಾ, ಅಪ್ಪಲೇ ಬೇಕು – ಹೇದು ಆದೇಶ ಮಾಡಿತ್ತಾಡ.
~
ಸರಿ, ಓರೊಪ್ ಅನ್ವಯ ಆತು.
ನಿವೃತ್ತ ಸೈನಿಕರಿಂಗೆ ನೆಮ್ಮದಿಯ ನೆಗೆ ಮೂಡಿತ್ತು.
ನಲುವತ್ತು ಒರಿಶಂದ ಬಾಕಿ ಒಳುದ ಒಂದು ಕಾರ್ಯ ಕೈಗೂಡಿತ್ತು.
ಇಷ್ಟನ್ನಾರ ಯೇವ ಸರಕಾರಕ್ಕೂ ಈ ಬಗ್ಗೆ ಕಾಳಜಿ ಇಲ್ಲದ್ದದು, ಇಂದು ಮೋದಿ ಅಜ್ಜನ ಆಡಳ್ತೆಲಿ ಸೇರಿಬಂತು.
~
ಮೊನ್ನೆ ಮೊನ್ನೆ ಕಾಶ್ಮೀರಲ್ಲಿ ಗಡಿಂದ ಆಚ ಹೊಡೆಲಿ ಇಪ್ಪ ಉಗ್ರಗಾಮಿಗಳ ಹೊಡದು ಬಂದವಪ್ಪೋ ನಮ್ಮ ಸೈನಿಕರು – ಅದಕ್ಕೆ ಭಾರತ ರಾಜಕೀಯದ ರಾಹು, ಕೇತುಗೊ ಅಪಶಕುನ ಮಾತಾಡಿತ್ತಿದ್ದವು. ಸೈನಿಕರ ಆತ್ಮಾಭಿಮಾನವನ್ನೇ ಗಾಳಿಗೆ ಹಿಡಿತ್ತ ಮಾತುಗೊ ಅದು.
ಅವರ ಯೋಗ್ಯತಿಗೆಯೇ ಅಷ್ಟೆ – ಹೇದು ಜೆನಂಗೊ ಬಿಟ್ಟಿತ್ತಿದ್ದವು.
~
ಸರಿ, ಇಂದು?
ನಿನ್ನೆಲ್ಲ ಮೊನ್ನೆ, ಒಂದು ಪ್ರತಿಭಟನೆಲಿ, ನಿವೃತ್ತ ಸೈನಿಕ – ಪ್ರಸಕ್ತ ಕೋಂಗ್ರೇಸು ಪಂಚಾತು ಮೆಂಬರು – ಸ್ವಹತ್ಯೆ ಮಾಡಿಗೊಂಡತ್ತಾಡ. ಕಾರಣ – ಅದರ ಎಕೌಂಟಿಲಿ ಓರೊಪ್ ಲೆಕ್ಕಾಚಾರಲ್ಲಿ ವಿತ್ಯಾಸ ಆಯಿದು- ಹೇಳ್ತದು.
ಓರೊಪ್ ಪಿಂಚಣಿ ಬತ್ತಾ ಇದ್ದು, ಆದರೆ ಅದರ ಲೆಕ್ಕಾಚಾರಲ್ಲಿ ವಿತ್ಯಾಸ ಆಯಿದು – ಹೇಳ್ತ ಕಾರಣಕ್ಕೆ ಜೀವ ತೆಕ್ಕೊಳೆಕ್ಕೋ?!
ಕೂದು ಮಾತಾಡಿದ್ದರೆ ಸರಿ ಆವುತ್ತಿತ್ತು.
ಇರಳಿ.
~
ಈಗ ಎಂತಾಯಿದು ಹೇದರೆ – ಮೊನ್ನೆ ಮೊನ್ನೆ ಸೈನಿಕರ ಆತ್ಮಾಭಿಮಾನವನ್ನೇ ಗಾಳಿಗೆ ಹಿಡುದ ರಾಹು-ಕೇತುಗೊ ಈ ಸೈನಿಕನ ಬಗ್ಗೆ ಭಾರೀ ಭಾರೀ ಕಾಳಜಿ ತೋರ್ಸುತ್ತಾ ಇದ್ದವು.
ಅವರ ಮನೆಗೆ ಹೋಪದೇನೋ, ಅವಕ್ಕೆ ಒಂದು ಕೋಟಿ ಪರಿಹಾರಧನ ಕೊಡ್ಸು ಏನೋ, ಎರೆಷ್ಟು ಅಪ್ಪದೇನೋ – ಹೋ ಹೋ ಹೋ!
ಹಾಂಗಾರೆ, ಇಷ್ಟು ಸಮೆಯ ಎಲ್ಲಿತ್ತು ಆ ಸೈನಿಕ ಪ್ರೀತಿ?

ರಾಹು – ಗೆ ಇಟೆಲಿಯೂ, ಕೇತು – ಗೆ ಪಾತಕಿಸ್ತಾನವೂ ಇಷ್ಟದ ದೇಶ. ಅಷ್ಟ್ರಲ್ಲಿ ಅವಕ್ಕೆ ಭಾರತದ ಸೈನಿಕರ ಬಗ್ಗೆ ಕಾಳಜಿ, ಅಭಿಮಾನ ಬಂದದಾದರೂ ಹೇಂಗೆ!
ಎಲ್ಲವೂ ರಾಜಕೀಯವೇ.
~
ಒಟ್ಟಾರೆ, ಸೈನಿಕ ಒಬ್ಬರ ಗೋರಿ ಇವಕ್ಕೆ ರಾಜಕೀಯ ಸೌಧ ಕಟ್ಳೆ ಕಾರಣ ಆದ್ಸು ಭಾರೀ ಬೇಜಾರದ ಸಂಗತಿ.
~
ಒಂದೊಪ್ಪ: ವೃತ್ತಿ ಜೀವನ ಕಷ್ಟ ಆದಷ್ಟೂ ನಿವೃತ್ತ ಜೀವನ ನೆಮ್ಮದಿಲಿ ಇರಳಿ.

4 thoughts on “ಸೈನಿಕರ ಗೋರಿಯ ಮೇಗೆ ರಾಜಕೀಯ ಸೌಧ ನಿರ್ಮಾಣ?! :-(

  1. ಮನೆ ಹೊತ್ತುವಗ ಆನೊಂದು ಬೀಡಿ ಹೊತ್ತುಸಿಗೊತ್ತೆ ಹೇಳುವವು ಈ ರಾಹು ಕೇತು ರೂಪದ ರಾಜಕಾರಣಿಗೋ

    ಸಾಲಾಗಿ ನಿಲ್ಸಿ ಸಾರ್ವಜನಿಕರು ಕಲ್ಲು ಇಡ್ಕೆಕ್ಕು ಗಲ್ಫ್ ದೇಶಂಗಳ ಹಾಂಗೆ

  2. ದಿನ ಪತ್ರಿಕೆಯ ಕೈಲಿ ಹಿಡಿವಾಗಳೇ `ವ್ಯಾಕ್ ‘ ಹೇಳುವ ಹಾಂಗಾವ್ತತಪ್ಪೋ …? ರಾಜಕೀಯ ನಾಟಕ ಪಾತ್ರಧಾರಿಗಳ ಹಗಲುವೇಷನ್ಗಳ ಕಳಚಿ ಮರುಭೂಮಿಲಿ ಸಾಲಾಗಿ ನಿಲ್ಸಿ ತಲೆಯ ಮಟಾಷ್ ಮಾಡಿ ಇಡ್ಕಿರೂ ಪಾಪ ತಟ್ಟ ಹೇಳಿ ಅನ್ಸುತ್ತಾ ಇದ್ದು.

  3. ಒಳ್ಳೆ ಶುದ್ದಿ, ಸೈನಿಕರ ಬವಣೆ, ಅವರ ನಂಬಿಗೊಂಡಿಪ್ಪ, ಅವರ ಮನೆಯವರ…!, ಗ್ರೇಶುವಾಗ ಬೇಜಾರಾವುತ್ತು,

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×