Oppanna.com

ನವರಾತ್ರಿಯ ಪರ್ವಲ್ಲಿ ಶಪಥ ಪರ್ವ!!!

ಬರದೋರು :   ಒಪ್ಪಣ್ಣ    on   07/10/2016    5 ಒಪ್ಪಂಗೊ

ನವರಾತ್ರಿ ಲಿ ದುರ್ಗಾದೇವಿ ನವನವೋನ್ಮೇಶ ಶಾಲಿನಿ ಆಗಿ ಬಪ್ಪದು – ಹೇಳಿ ನವಗೆ ಗೊಂತಿಪ್ಪದೇ.
ದುರ್ಗೆ ಒಂಭತ್ತು ಅವತಾರಲ್ಲಿ ಬಂದು ಭಕ್ತರ ಅನುಗ್ರಹಿಸುದು ಗೊಂತಿಪ್ಪದೇ.
ರಾಕ್ಶಸರ ಸಂಹಾರ ಮಾಡಿದ ಕೊಶಿ ಒಂದು ಹೊಡೆಲಿ ಆದರೆ, ಧರ್ಮ ಸಂಸ್ಥಾಪನೆ ಮಾಡಿದ ಕೊಶಿ ಇನ್ನೊಂದು ಹೊಡೆ.
~
ಈಗ ಇದೇ ಗೌಜಿ ಇನ್ನೊಂದರಿ ಮೂಡಿ ಬಯಿಂದು.
ನವರಾತ್ರಿಯ ಪರ್ವಕಾಲದ ಸಂದರ್ಭಲ್ಲೇ ಹೊಸನಗರಲ್ಲಿ ಶಪಥಪರ್ವ ಕಾರ್ಯಕ್ರಮ ನೆಡವದು ನಿಜವಾಗಿಯೂ ಕಾಕತಾಳೀಯ.
~
ಶಪಥ ಪರ್ವ:
ಜಾತ್ಯತೀತ ಸರಕಾರ ಈಗೀಗ ತುಂಬ ತೊಂದರೆ ಕೊಡ್ತಾ ಇದ್ದು. ಹಿಂದೂ ಸಮಾಜದ ಸಂತರಿಂಗೆ ಅಪ್ಪ ಸಮಸ್ಯೆಗೊ ಹೇಳಿ ಪ್ರಯೋಜನಿಲ್ಲೆ.
ಎಲ್ಲ ಸಂಘ-ಸಂಘಟನೆಗೊಕ್ಕೆ ತೊಂದರೆ ಕೊಟ್ಟದು ಸಾಲದ್ದೆ, ಮಠಂಗೊಕ್ಕೂ ಸಮಸ್ಯೆ ಕೊಡ್ತಾ ಇದ್ದವು.
ಎಲ್ಲ ಮಠಂಗಳಿಂದ ಹೆಚ್ಚಿಗೆ ಉಪದ್ರ ಕೊಟ್ಟದು – ನಮ್ಮ ಮಠಕ್ಕೇ ಹೇಳಿ ಕಾಣ್ತು.
ಒಂದಲ್ಲ, ಎರಡಲ್ಲ.
~
ಜಾತ್ಯತೀತ ಸರಕಾರ ಬಂದ ಲಾಗಾಯ್ತು ಪೀಠಕ್ಕೆ, ಪೀಠಾಧಿಪತಿಗೊಕ್ಕೆ ಉಪದ್ರ ಸುರು ಆಗಿತ್ತು. ಈಗ ಅದು ಕೊನೆಯ ಹಂತಕ್ಕೆ ಬಂದು – ಶ್ರೀ ಮಠಕ್ಕೇ ಆಡಳಿತಾಧಿಕಾರಿ ಯೋಜನೆ ಮಾಡುವಲ್ಲಿ ವರೆಗೆ ಎತ್ತಿತ್ತು.
ಇದರ ನಾವೆಲ್ಲರೂ ಒಕ್ಕೊರಲಿಂದ ಖಂಡನೆ ಮಾಡೆಕ್ಕಾಯಿದು.
ಅದಕ್ಕೋಸ್ಕರ ಇಪ್ಪ ಸಾಗರ ಸಹಸ್ರ ಸಂಯೋಗವೇ – ಶಪಥ ಪರ್ವ.
ಇಡಿಯ ಸಮಾಜವೇ ಮುಂದೆ ಬಂದು – ನಾವು ಶ್ರೀಮಠದ ಒಟ್ಟಿಂಗೆ ಇದ್ದು – ಹೇಳಿ ಶಪಥ ಮಾಡುವ ಕಾರ್ಯಕ್ರಮ ಅದು.
ಅದಕ್ಕೋಸ್ಕರ ನಾವೆಲ್ಲರೂ ಒಟ್ಟಪ್ಪೊ°.
ಒಟ್ಟು ಸೇರಿ ಎಲ್ಲೋರುದೇ ಶಪಥ ಮಾಡುವೊ°.
ಶ್ರೀಪೀಠ, ಸಮಾಜದ ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿದ್ದು – ಹೇಳುವ ಸಂದೇಶವ ಸರಕಾರಕ್ಕೆ ಎತ್ತುಸುವೊ°.
~
ನಮ್ಮದು ಹವ್ಯಕ ಸಮಾಜ.
ನಮ್ಮ ಸಂಸ್ಕಾರ, ಸಮಾಜ – ಎಲ್ಲವೂ ನಮ್ಮ ಗುರುಪೀಠಕ್ಕೆ ಹೊಂದಿಗೊಂಡೇ ಇಪ್ಪದು.
ಅದುವೇ ಒಳಿಯೆಕ್ಕಾದ ದೊಡ್ಡ ಅಗತ್ಯ ಇಂದು ಇದ್ದು. ಹಾಂಗಾಗಿ ಅದರ ನಾವೆಲ್ಲರೂ ಶ್ರಮವಹಿಸಿ ಒಳಿಶುವೊ°.
~
ಹೊಸನಗರಲ್ಲಿ ನಾವೆಲ್ಲರೂ ಶಪಥ ತೆಕ್ಕೊಂಬೊ°.
~

ಒಂದೊಪ್ಪ: ಶಪಥ ಪರ್ವವು ರಾಕ್ಷಸರಿಂಗೆ ದಶ-ಹರವಾಗಲಿ, ಬೈಲಿಂಗೆ ನವರಾತ್ರಿ ಆಗಲಿ.

 replica parajumpers jackets

5 thoughts on “ನವರಾತ್ರಿಯ ಪರ್ವಲ್ಲಿ ಶಪಥ ಪರ್ವ!!!

  1. ಮನ್ನೆ ಶ್ರೀ ಮಠಲ್ಲಿ ಶಪಥ ಪರ್ವಲ್ಲಿ ಭಾಗವಹಿಸಿದ್ದು ಅದು ಯಶಸ್ವಿ ಆದ್ದದು ತುಂಬ ಅಭಿಮಾನದ ಸಂಗತಿ. ಶೀಲಕ್ಕ ಹೇಳಿದ ಹಾಂಗೆ, ಹೀಂಗಿಪ್ಪ ಶಪಥ ಪರ್ವ ಇದುವೇ ಸುರು, ಇದುವೇ ಕೊನೆಯಾಗಲಿ. ದುಷ್ಟ ಶಕ್ತಿಗೊ ಆರನ್ನೂ ಬಾಧಿಸದ್ದೆ ಇರಳಿ.
    ಮನ್ನೆ ಮೆರವಣಿಗೆಲಿ, ಒಪ್ಪಣ್ಣ, ದೊಡ್ಡ ಭಾವಂದ್ರು, ಸುಭಗ ಭಾವಯ್ಯ, ಶ್ರೀ ಅಕ್ಕನ ಕಾಂಬಲೆ ಸಿಕ್ಕಿತ್ತು. ಇನ್ನೂ ನಮ್ಮ ಬೈಲಿನವು ತುಂಬಾ ಆತ್ಮೀಯರು ಬಂದಿಕ್ಕು. ಸಹಸ್ರಾರು ಜನರ ಎಡಕ್ಕಿಲ್ಲಿ ಕಂಡತ್ತಿಲ್ಲೆ ಆಯಿಕ್ಕು.

  2. `ಶಪಥ ಪರ್ವ’ .ಬಹಳ ಯಶಸ್ವೀ ಆತಲ್ದೊ ? ಹಿಂಗಿದ್ದದು ಇದುವೇ ಮೊದಲು ಇದುವೇ ಕೊನೆಯೂ ಆಗಿ ನಮ್ಮ ಮಠದ ಭಗವಾಧ್ವಜ ಹಿಮಾಲಯದೆತ್ತರಕ್ಕೆ ಏರಲಿ ಹೇಳಿ ಪ್ರಾರ್ಥಿಸಿಯೊಂಬೋ.

  3. ಈ ತಾಣವ ಓದುವವೆಲ್ಲ ಒಂದು ಲೈನ್ ಅಭಿಪ್ರಾಯ ಬರೆದರೆ ಬರವವಕ್ಕೂ ಉತ್ತೇಜನ ಸಿಕ್ಕುಗು ಮತ್ತೆ ಎಲ್ಲೋರು ಇದರ ನೋಡುತ್ತವು ಹೇಳಿ ಗೊಂತಕ್ಕು.

  4. ಹರೇರಾಮ, ಶಪಥ ಪರ್ವ ನಿರ್ವಿಘ್ನಂದ ಆತೂಳಿ ಸಂತೋಷಾತು. ಇದರ ಫಲ ಸರಕಾರಕ್ಕೆ ಮುಟ್ಟಿ; ಶ್ರೀರಾಮ ಕುಟ್ಟಿ ಏಳುಸಿ ಶ್ರೀಗುರು ಪೀಠ ಪರಂಪರೆ, ಪ್ರಾಕ್ ಪದ್ಧತಿ ಹಾಂಗೇ ಒಳುದು ಬರಲಿ ಹೇಳಿ ನಮ್ಮ ಭಕ್ತಕೋಟಿ ಸೆರಗೊಡ್ಡಿ ಬೇಡಿಗೊಂಬೊಂ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×