Oppanna.com

14-ಸೆಪ್ಟೆಂಬರ್-2013: ಒಪ್ಪಣ್ಣನ ಬೈಲಿನ ಶ್ರೀ ಗುರುಭೇಟಿ – ಸಚಿತ್ರ ವರದಿ

ಬರದೋರು :   ಬೊಳುಂಬು ಮಾವ°    on   14/09/2013    26 ಒಪ್ಪಂಗೊ

ಬೊಳುಂಬು ಮಾವ°

ಸೆಪ್ಟೆಂಬರ್ ೧೪ಕ್ಕೆ ಒಪ್ಪಣ್ಣ ಬಳಗದವೆಲ್ಲ ಮಾಣಿ ಮಠಲ್ಲಿ ಶ್ರೀ ಗುರುಗಳೊಟ್ಟಿಂಗೆ ಆತ್ಮೀಯವಾಗಿ ಭೇಟಿ ಅಪ್ಪದು ಹೇಳಿ ನಿಶ್ಚೈಸಿದ್ದು, ಆ ದಿನಕ್ಕೆ ಎಲ್ಲೋರು ಕಾದು ಕೂದೊಂಡಿದ್ದಿದ್ದು ನಿಂಗೊಗೆಲ್ಲ ಗೊಂತಿದ್ದು.
ಉದಿಯಪ್ಪಗಳೆ ಶರ್ಮಪ್ಪಚ್ಚಿ ದಂಪತಿಗೊ  ಬೈಲ ಪ್ರತಿಷ್ಠಾನದ ವತಿಂದ ಪಾದಪೂಜೆಯ ನೆರವೇರಿಸಿದವು.
ಬೈಲ ನೆಂಟ್ರುಗೊ ಎಲ್ಲಾ ಒಬ್ಬೊಬ್ಬನೇ ಬಂದು ಸೇರಿದವು.
ಒಪ್ಪಣ್ಣನ ಬೈಲಿನವು ಎಲ್ಲೋರುದೆ ಮೂರು ಗಂಟೆಗೆ ಹಾಜರು.
ಗುರುಗಳ ಭೇಟಿ ನಾಲ್ಕು ಗಂಟೆಗೆ ಹೇಳಿ ಕೆಲವು ಜೆನ ಅವರವರ ಆಫೀಸು ಕೆಲಸವ ಮುಗುಶಿಕ್ಕಿಯೇ ಬಂದವು.
ಹೊಸನಗರ ಹೊಡೇಣವರ ಭಿಕ್ಷೆ ಇದ್ದರಿಂದಾಗಿ, ಗುರಿಕ್ಕಾರಕ್ಕಳೊಟ್ಟಿಂಗೆ ಸಮಾಲೋಚನೆ, ಮಂತ್ರಾಕ್ಷತೆ ಎಲ್ಲ ಕಳುದಪ್ಪಗ ಗಂಟೆ ಐದೂವರೆ ಆತು.
ಮಾಣಿ ಮಠಲ್ಲಿ ಉಪ್ಪರಿಗೆಲಿ ಶ್ರೀ ಗುರುಗಳ ಭೇಟಿ ಹೇಳಿ ತೀರ್ಮಾನ ಆಗಿತ್ತು.
ಅಲ್ಲಿಗೆ ಹೋಗಿ ಅಪ್ಪಗ ಕೆಲವು ಜೆನ ಈಗಾಗ್ಲೇ ಸೇರಿ ಆಗಿತ್ತು. ಒಬ್ಬೊಬ್ಬನೇ ಬಂದು ಸೇರಿ ಅಪ್ಪಗ ಭರ್ತಿ ನಲುವತ್ತು ಜೆನ.
ಗುರುಗೊ ಬಪ್ಪಲೆ ರಜಾ ಹೊತ್ತು ಇದ್ದು, ನಾವೀಗ ಅತ್ಲಾಗಿತ್ಲಾಗಿ ಪರಿಚಯ ಮಾಡ್ಯೊಂಬೊ ಹೇಳಿ ಪರಿಚಯ ಸುರುಮಾಡಿಗೊಂಡವು.
ಮಾಷ್ಟ್ರು ಮಾವ, ಶರ್ಮಪ್ಪಚ್ಚಿ ದಂಪತಿಗೊ, ಒಪ್ಪಣ್ಣ, ಚುಬ್ಬಣ್ಣ, ಸುಭಗ, ಅಜ್ಜಕಾನ ಭಾವ, ಶ್ರೀ‌ಅಕ್ಕ, ಡೈಮಂಡು ಭಾವ, ನೆಗೆಚಿತ್ರ ಶಾಮಣ್ಣ, ಗೋಪಾಲಣ್ಣ ದಂಪತಿಗೊ, ಪವನಜ ಮಾವ, ಹಳೆಮನೆ ಅಣ್ಣ ತಮ್ಮಂದ್ರು, ಕುಂಟಾಂಗಿಲ ಭಾವ, ಆಚಕರೆ ಮಾಣಿ, ವಿದ್ಯಕ್ಕ, ಬೊಳುಂಬು ಭಾವ, ಬೆಟ್ಟುಕಜೆ ಮಾಣಿ, ವಿಟ್ಳ ಕಿಟ್ಟಣ್ಣ, ಕುಂಟಾಂಗಿಲ ಭಾವ, ಮಂಗ್ಳೂರ ಮಾಣಿ, ಕುಕ್ಕಿಲ ದಂಪತಿಗೊ, ವಿಜಯತ್ತೆ, ಶೇಪು ಭಾವ, ದೀಪಿಅಕ್ಕ, ಬೈಲಿನ ರುಚಿರುಚಿ ಅಡುಗೆ ಪ್ರವೀಣೆ ವೇಣಿ ಅಕ್ಕ – ಎಲ್ಲೋರು ಅಲ್ಲಿ ಸೇರಿದ್ದವು.
ಕಳುದ ವರ್ಷ ಬೆಂಗಳೂರಿನ ಚಾತುರ್ಮಸ್ಯದ ಸಮೆಲಿ ಕೆಲವು ಜೆನಂಗಳ ಕಾಂಬಲೆ ಸಿಕ್ಕಿತ್ತು.
ಬೈಲಿಲ್ಲಿ ಫೊಟೋಲ್ಲಿ ಕಾಂಬ ಮೋರೆಯ ಇಲ್ಲಿ ಮುಖತಾ ಕಂಡು ಪರಿಚಯ ಆಗಿ ಅಪ್ಪಗ ಎಲ್ಲೋರಿಂಗು ಕೊಶಿ ಆತು.
ಎಲ್ಲಾ ಪಟ್ಟಾಂಗವೇ ಪಟ್ಟಾಂಗ!
ಪರಿಚಯ ಆಗೆಂಡಿಪ್ಪಗ ಗುರುಗೊ ಬಂದೇ ಬಿಟ್ಟವು.
ಮಾಷ್ಟ್ರು ಮಾವ ಶ್ರೀ ಗುರುಗಳಿಂಗೆ ತುಳಸೀ ಮಾಲೆ ಹಾಕಿದವು.
ಶರ್ಮಪ್ಪಚ್ಚಿ, ಒಪ್ಪಣ್ಣ ಸುಭಗಣ್ಣ ಎಲ್ಲ ಒಟ್ಟು ಸೇರಿ ಫಲ ವಸ್ತುಗಳ ಸಮರ್ಪಿಸಿದವು.
ಮತ್ತೆ, ಗುರಿಕ್ಕಾರ್ರು ಒಪ್ಪಣ್ಣನ ಹಾಂಗೆ ನಿಂದೊಂಡು, ನಮ್ಮ ಬೈಲಿನ ಬಗ್ಗೆ, ಒಪ್ಪಣ್ಣ ಪ್ರತಿಷ್ಠಾನದ ಬಗ್ಗೆ ಚುಟುಕಾಗಿ ಪೀಟಿಕೆ ಮಡಗಿದವು. ಇಪ್ಪತ್ತೇಳು ನಕ್ಷತ್ರದ ಹಾಂಗೆ ಇಪ್ಪತ್ತೇಳು ವೈವಿಧ್ಯಮಯ ಚಟುವಟಿಕೆಗಳ ಪ್ರತಿಷ್ಠಾನ ನೆಡೆಶುತ್ತಾ ಇದ್ದು, ಇದು ಶ್ರೀ ಮಠದ ವಿವಿಧ ಯೋಜನೆಗೆ ಪೂರಕವಾಗಿ ಇದ್ದು. ಇದೀಗ ಒಪ್ಪಣ್ಣ ಬಳಗದವೆಲ್ಲ ಒಟ್ಟಿಂಗೆ ಎರಡ್ನೇ ಸರ್ತಿ ಶ್ರೀ ಗುರುಗಳ ಭೇಟಿ ಆವ್ತಾ ಇದ್ದವು. ಬೈಲು ಶುರುವಾದ ಹೊತ್ತಿಂದ ಅದರ ಮೆಚ್ಚಿ, ಶುದ್ದಿಗವಕ್ಕೆ ಒಪ್ಪ ಕೊಟ್ಟೊಂಡು, ಆಶೀರ್ವದಿಸುತ್ತ ಇದ್ದವು ಶ್ರೀ ಗುರುಗೊ. ಅದರ ಬೆಳವಣಿಗೆಗೆ ಗುರುಗಳ ಆಶೀರ್ವಾದ, ಅವರ ಪ್ರೋತ್ಸಾಹ ಏವತ್ತುದೆ ಇದ್ದು ಹೇಳಿ ಹೇಳಿದ ಒಪ್ಪಣ್ಣ.
ಬೈಲಿಲ್ಲಿ ಬಪ್ಪ ಸಾರಡಿ ತೋಡು, ಕಾಂಬು ಅಜ್ಜಿ, ಬಂಡಾಡಿ ಅಜ್ಜಿ ಎಲ್ಲೋರನ್ನುದೆ ಗುರುಗೊ ನೆಂಪು ಮಾಡ್ಯೊಂಡವು.
ಪುರುಸೊತ್ತು ಸಿಕ್ಕಿಯಪ್ಪಗ ಓದಲೆ ಅನುಕೂಲ ಆವ್ತ ಹಾಂಗೆ, ಬೈಲಿಲ್ಲಿ ಬಂದ ಕೆಲವು ಶುದ್ದಿಗಳ ಶ್ರೀಅಕ್ಕ ಪ್ರಿಂಟು ತೆಗದು ಪುಸ್ತಕದ ರೂಪಲ್ಲಿ ಮಾಡಿ ಗುರುಗವಕ್ಕೆ ಸಮರ್ಪಿಸಿದವು.
ಹವ್ಯಕ ಭಾಷೆ ಹೇಳಿರೆ ಸಮೃದ್ಧ ಭಾಷೆ. ಅದರಲ್ಲಿಪ್ಪ ಧ್ವನಿ, ಮಾಧುರ್ಯ, ಸಂಸ್ಕೃತ ಬಿಟ್ಟರೆ ಬೇರೆ ಏವ ಭಾಷೆಲಿಯೂ ಇಲ್ಲೆ ಹೇಳಿ ಗುರುಗೊ ಹೇಳಿದವು.
ಎಲ್ಲೋರಿಂಗು ಆಸಕ್ತಿ ಹುಟ್ಟುಸುವ ಹಾಂಗೆ ವೆಬ್ ಸೈಟಿಲ್ಲಿ ಹೊಸತನಲ್ಲಿ ಶ್ರೀ ಮಠದ ಪರಿಚಯ ಮಾಡೆಕು, ಇದಕ್ಕೆ ಒಪ್ಪಣ್ಣ ಬಳಗದ ಸಹಕಾರ ಬೇಕು ಹೇಳಿ ಗುರುಗೊ ಹೇಳಿದವು.
ಶ್ರೀ ಮಠಂದ ನೆಡೆತ್ತಾ ಇಪ್ಪ ರಾಮಕಥೆಯ ಬಗ್ಗೆ ಎಲ್ಲೋರುದೆ ಮೆಚ್ಚುಗೆ ತೋರುಸುತ್ತಾ ಇದ್ದವು, ಇದರಿಂದ ಸಮಾಜಕ್ಕೇ ಒಳ್ಳೆತ ಬೆಲೆ – ಹೆಮ್ಮೆ ಬಯಿಂದು ಹೇಳಿ ಎಲ್ಲೋರುದೆ ಹೇಳಿದವು.
ದೀಪಿಕಕ್ಕ, ರಾಮಕಥೆಲಿ, ಹಾಡುಗಳ ಹಾಡ್ತ ಬಗ್ಗೆ ಗುರುಗೊ ನೆಗೆ ಮಾಡ್ಯೊಂಡು, ಮೆಚ್ಚುಗೆಯ ಮಾತಾಡಿದವು.
ರಾಮಕಥೆಲಿ ಪ್ರಮುಖ ಜವಾಬ್ದಾರಿಯ ತೆಕ್ಕೊಳ್ತಾ ಇಪ್ಪ ಶ್ರೀಯುತ ಗಜಾನನ ಶರ್ಮಾ ಅವು, ಬೈಲಿನ ಮಿಲನಲ್ಲಿ ಭಾಗವಹಿಸಿದ್ದು, ಬೈಲಿನ ಬಗ್ಗೆ ತಿಳ್ಕೊಂಡದು ಎಲ್ಲೋರಿಂಗೂ ಕೊಶಿ ಆಗಿತ್ತು.
ಶ್ರೀ ಅಕ್ಕ ತಯಾರು ಮಾಡಿದ ಹನುಮಂತನ ಚಿತ್ರದ ಒಂದು ದೊಡ್ಡ ಗ್ಲಾಸ್ ಪೈಂಟಿಂಗಿನ ಶ್ರೀ ಮಠಕ್ಕೆ ಸಮರ್ಪಿಸಿದವು.
ಕಡೆಂಗೆ ದೀಪಿಕಕ್ಕ ಮಧುರ ಕಂಠಲ್ಲಿ, ಬೈಲಿನ ಆಶಯ ಗೀತೆಯ ಚೆಂದಕೆ ಹಾಡಿತ್ತು.
ಬೈಲಿನವೆಲ್ಲ ಗುರುಗಳ ಒಟ್ಟಿಂಗೆ ನಿಂದೊಂಡು, ಒಂದು ಗ್ರೂಪ್ ಫೊಟೋ ತೆಗವಲುದೆ ಅನುವು ಮಾಡಿ ಕೊಟ್ಟದು ಕೊಶೀ ಆತು.
ವಿಜಯ ಚಾತುರ್ಮಾಸ್ಯಲ್ಲಿ ಒಪ್ಪಣ್ಣ ಬೈಲಿನವೆಲ್ಲೋರು ಒಟ್ಟುಸೇರಿ ಶ್ರೀ ಗುರುಗಳ ಆಶೀರ್ವಾದಂಗಳ ತೆಕ್ಕೊಂಡು ಅವರೊಟ್ಟಿಂಗೆ ಕಳುದ ಒಂದೂವರೆ ಗಂಟೆ ಅಲ್ಲಿ ಸೇರಿದವರ ಮನಸ್ಸಿಲ್ಲಿ ಏವತ್ತೂ ಒಳಿಗು.
ಹರೇರಾಮ
ಹಳೆಮನೆ ತಮ್ಮ, ಚುಬ್ಬಣ್ಣ ತೆಗದ ಕೆಲವು ಪಟಂಗೊ ಇಲ್ಲಿದ್ದು:

26 thoughts on “14-ಸೆಪ್ಟೆಂಬರ್-2013: ಒಪ್ಪಣ್ಣನ ಬೈಲಿನ ಶ್ರೀ ಗುರುಭೇಟಿ – ಸಚಿತ್ರ ವರದಿ

  1. ಆನುದೇ ಬರೆಕ್ಕೂ ಹೇದು ಹೆರಟದು. ಆದರೆ ಅಟ್ಟ ಹತ್ತುಲಪ್ಪಾಗ ಪುಚ್ಚೆ ಅಡ್ಡ ಬಂತು. ಚೆಲಾ… ಎಂತ ಮಾಡುದು ಹೇದು ಆಚಕರೆ ಮಾಣಿಯ ಕಳುಗಿದೆ.

  2. ಹರೇರಾಮ, ಶ್ರೀ ಸಂಸ್ಥಾನ ದವರ ಬಯಲಿಲ್ಲಿ ಕಂಡದು ಶ್ರೀರಾಮದೇವರ ಕಂಡಹಾಂಗೇ ಆತು ತುಂಬಾ ತುಂಬಾ ಕುಶಿ ಆತು ಮೊನ್ನೆ ಶ್ರೀ ಗುರುಗ ಳ ದಿವ್ಯ ಹಸ್ತಂದ ನಮ್ಮ ಒಪ್ಪಣ್ಣ ಬಯಲಿಂಗೆ ರಾ ಮ ಟಂಕೆ ಸಹಿತ ಮಂ ತ್ರಾಕ್ಷತೆ ಏನ್ನ ಸೆರಗಿಂಗೆ ಬಿದ್ದದು ಎನಗೆ ಒದಗಿದ ಸಾರ್ಥಕ್ಯ ಕ್ಷಣ.

  3. ಹರೇರಾಮ, ಶ್ರೀ ಸಂಸ್ಥಾನ ದವರ ಬಯಲಿಲ್ಲಿ ಕಂಡದು ಶ್ರೀರಾಮದೇವರ ಕಂಡಹಾಂಗೇ ಆತು ತುಂಬಾ ತುಂಬಾ ಕುಶಿ ಆತು

  4. ಆ ದಿನ ಬಂದರೂ ಅನಿವಾರ್ಯ ಕಾರಣಂದ ನಿಂಬಲೆ ಎಡಿಗಾಯಿದಿಲ್ಲೆ. ಸಇತ್ರ ಶುದ್ದಿ ಓದಿ ತುಂಬಾ ಸಂತೋಷ ಆತು. ಅದರಲ್ಲೂ ಶ್ರೀ ಸಂಸ್ಥಾನದ ಒಂದೊಪ್ಪ ನೋಡಿ ರೋಮಾಂಅನ ಆತು.ಸಂತೋಷವ ಯಾವ ರೀತಿ ಹೇಳೆಕ್ಕು ಹೇಳಿ ಗೊಂತಾವುತ್ತಿಲ್ಲೆ.

  5. ಗೋಪಾಲಣ್ಣನ ಮಾತು ತಡವಾಗಿ ಪುನರುಚ್ಹರಿಸುತ್ತಾ ಇದ್ದೆ…ಶ್ರೀ ಗುರುಗೊ ಬ೦ದೇ ಬಿಟ್ಟವು!!

  6. ಬಲ್ನಾಡು ಮಾಣಿ ಬೈಲಿಂದ ಕಾಣೆ ಆಯ್ದ ಹೇಳಿ ಶ್ರೀ ಅಕ್ಕ ಪರಂಚುದಕ್ಕೂ, ಸಂದರ್ಭಕ್ಕೆ ಸರಿಯಾಗಿ ಆನು ಕೈ ಕೊಡುದಕ್ಕೂ ಸರಿ ಆಯ್ದಿದ.. ಬರೆಕ್ಕು ಹೇಳ್ತ ಆಶೆ ಮೂಗಿನ ಕೊಡಿಲಿದ್ದರೂ, ಗುಣಾಜೆ ಮಾಣಿಯ ಸಟ್ಟುಮುಡಿ ಕಳಿಶಿ ಕುಂಬ್ಳೆ ಸೀಮೆಂದ ಪುತ್ತೂರು ಸೀಮೆ ಎತ್ತುವಾಗ ತುಂಬಾ ತಡವಾತು, ಸಭೆಗೆ ಹಾಜರಪ್ಪ ಭಾಗ್ಯ ಸಿಕ್ಕಿದ್ದಿಲ್ಲೆ. ವರದಿ ಓದಿಯಪ್ಪಗ ಭಾಗವಹಿಸಿದಷ್ಟೇ ಕೊಶಿ ಆತು. ಶ್ರೀಗಳ ಒಪ್ಪ ನೋಡಿಯಪ್ಪಗಂತೂ ನಿಜಕ್ಕೂ ಭಾಗವಹಿಸಿದಷ್ಟೇ ನೆಮ್ಮದಿ ಆತು.. ಬೊಳುಂಬು ಮಾವ, ತುಂಬಾ ಧನ್ಯವಾದಂಗೋ!

    1. ಗುರುಗಳಿಂಗೆ ಸಾಷ್ಟಾಂಗ ನಮಸ್ಕಾರಂಗ… ಗುರುಗಳು ಇಲ್ಲಿ ಪ್ರತ್ಯಕ್ಷ ಆದ್ದು ಇನ್ನೂ ಕೊಷಿ ಆವುತ್ತ ಇದ್ದು… ಧನ್ಯರಾದೆಯ°..

    2. ಸ೦ಸ್ಥಾನ… ಒಪ್ಪಣ್ಣ ನೆರೆಕರೆಯವರ ಗುರುಭೇಟಿ ಸ೦ಧರ್ಭ ಎನಗೂ ಅವಕಾಶ ಸಿಕ್ಕಿದ್ದು ,ಬೈಲಿನ ಅಣ್ಣ೦ದಿರು, ಅಕ್ಕ೦ದಿರ ನೋಡ್ಳೆ ಸಿಕ್ಕಿದ್ದು, ಬೈಲಿ೦ಗೆ ಸೇರುವ ಆಸೆ ಈಡೇರಿದ್ದು, ಎಲ್ಲ ಗುರುಅನುಗ್ರಹ…ಧನ್ಯಳಾದೆ,,ಹರೇರಾಮ..

    3. ಗುರುಗವಕ್ಕೆ ಸಾಷ್ಟಾಂಗ ಪ್ರಣಾಮಂಗೊ. ಸ್ವತಃ ಬೈಲಿಂಗೆ ಬಂದು ಒಪ್ಪ ಕೊಟ್ಟು ಆಶೀರ್ವದಿಸಿದ್ದು ಕಂಡು ತುಂಬಾ ಕೊಶಿ ಆತು. ಎಂಗೊ ಬೈಲಿನವು ಎಲ್ಲೋರುದೆ ಧನ್ಯರಾದೆಯೊ.

    4. ಶ್ರೀ ಸಂಸ್ಥಾನ ಗುರುಗೊಕ್ಕೆ ಸಾಂಷ್ಟಾಂಗ ವಂದನೆಗೊ,
      ನಂದನ, ವಿಜಯ ಚಾತುರ್ಮಾಸ್ಯಂಗಳಲ್ಲಿ ಗುರುಭೇಟಿ ಒದಗಿ ಬಂದದು ಬೈಲಿನ ಅನಂತ ಪುಣ್ಯ.
      ಪೀಠದ ಮಾರ್ಗದರ್ಶನಲ್ಲಿ ಈ ಬೈಲು ಸಾಗುತ್ತು ಹೇಳುಲೆ ಹೆಮ್ಮೆ ಇದ್ದು ಗುರುಗಳೇ.
      ಮುಂದೆಯೂ ಆಶೀರ್ವದಿಸಿ.ಎಂಗೊ ಮಾರ್ಗದರ್ಶನ ತೆಕ್ಕೊಂಬಲೆ ಕಾಯ್ತಾ ಇರ್ತೆಯೊ°..
      ಬಪ್ಪ ಚಾತುರ್ಮಾಸ್ಯಕ್ಕೆ ಕಾಯ್ತಾ ಇದ್ದೆಯೊ°..
      ಹರೇರಾಮ
      ಹರೇರಾಮ
      ಹರೇರಾಮ..

  7. ಬೊಳುಂಬು ಮಾವಾ!
    ತುಂಬ ಸಂತೋಷ ಆತು ವರದಿ ನೋಡಿ. ಬೈಲಿಂಗೆ ನವೋತ್ಸಾಹ ಸಿಕ್ಕಿದ ಹಾಂಗಾತಲ್ಲದೋ?
    {ಇಪ್ಪತ್ತೇಳು ವೈವಿಧ್ಯಮಯ ಚಟುವಟಿಕೆಗಳ ಪ್ರತಿಷ್ಠಾನ ನೆಡೆಶುತ್ತಾ ಇದ್ದು} ಇದರ ಬಗ್ಗೆಯೂ ಮಾಹಿತಿ ಕೊಡ್ಳೆಡಿಗಾ?
    ಬೊಳುಂಬು ಮಾವಂಗೆ ಹಳೆಮನೆ ಅಣ್ಣಂಗೆ, ಚುಬ್ಬಣ್ಣಂಗೆ ಧನ್ಯವಾದ.

  8. ಅನಿವಾರ್ಯ ಕಾರಣ೦ದ ಬಪ್ಪಲೆ ಎಡಿಗಾಗದ್ದರೂ ಸಚಿತ್ರ ವರದಿ ನೋಡಿ ಮನಸ್ಸು ತು೦ಬಿತ್ತು .
    ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಈ ಮಿಲನ ಹೊಸ ಚೈತನ್ಯ ತು೦ಬಲಿ ಹೇಳಿ ಹಾರೈಕೆಗೊ.
    ಶುದ್ದಿ ಹನ೦ಚಿದ ಬೊಳು೦ಬು ಮಾವ೦ಗೆ,ಪಟ ತೆಗದ ಹಳೆಮನೆ ತಮ್ಮ ,ಚುಬ್ಬಣ್ಣ೦ಗೆ ಧನ್ಯವಾದ.

  9. ಅವಿಸ್ಮರಣೀಯ…ಒಪ್ಪಣ್ಣನ ಬೈಲಿ೦ದಾಗಿ ಜೀವನಲ್ಲಿ… ಪ್ರಥಮ ಬಾರಿ ಗುರುಗಳ ಭೇಟಿ….
    ಎನಗಾದ ಸ೦ತೋಷಕ್ಕೆ ಮಿತಿಯಿಲ್ಲೆ.ಮು೦ದೊ೦ದರಿ ಬರೆತ್ತೆ .
    ಬೈಲಿಲಿ ಪಟಲ್ಲಿ ಕಾ೦ಬ ಒಪ್ಪಣ್ಣ ಒಪ್ಪಕ್ಕ೦ದ್ರ ಮುಖತಾ ಕ೦ಡು ತು೦ಬ ಖುಷಿ ಆತು.
    ಅಲ್ಲಿ ಇಲ್ಲದ್ದೋರನ್ನೂ ಪರಿಚಯ ಮಾಡ್ಸಿದ್ದು ಒಪ್ಪಣ್ಣನ ವಿಷೇಶ.
    ಚೆ೦ದದ ಪಟ ತೆಗದ ಹಳೆಮನೆ ಅಣ್ಣ೦ದ್ರಿ೦ಗೂ, ಚುಬ್ಬಣ್ಣ೦ಗೂ, ಈ ವರದಿ ಒಪ್ಪಿಸಿದ ಬೊಳು೦ಬು ಮಾವ೦ಗೂ ಒ೦ದು ಒಪ್ಪ.
    ಒಪ್ಪಣ್ಣ ಸಮೇತ ಇಡೀ ಬೈಲಿ೦ಗೆ ಧನ್ಯವಾದ೦ಗೊ.
    ಹರೇ ರಾಮ…

  10. ಅವಿಸ್ಮರೀಣಿಯ…ಒಪ್ಪಣ್ಣನ ಬೈಲಿ೦ದಾಗಿ ಜೀವನಲ್ಲಿ… ಪ್ರಥಮ ಬಾರಿ ಗುರುಗಳ ಭೇಟಿ….
    ಎನಗಾದ ಸ೦ತೋಷಕ್ಕೆ ಮಿತಿಯಿಲ್ಲೆ.ಮು೦ದೊ೦ದರಿ ಬರೆತ್ತೆ .
    ಬೈಲಿಲಿ ಪಟಲ್ಲಿ ಕಾ೦ಬ ಒಪ್ಪಣ್ಣ ಒಪ್ಪಕ್ಕ೦ದ್ರ ಮುಖತಾ ಕ೦ಡು ತು೦ಬ ಖುಷಿ ಆತು.
    ಅಲ್ಲಿ ಇಲ್ಲದ್ದೋರನ್ನೂ ಪರಿಚಯ ಮಾಡ್ಸಿದ್ದು ಒಪ್ಪಣ್ಣನ ವಿಷೇಶ.
    ಚೆ೦ದದ ಪಟ ತೆಗದ ಹಳೆಮನೆ ಅಣ್ಣ೦ದ್ರಿ೦ಗೂ, ಈ ವರದಿ ಒಪ್ಪಿಸಿದ ಬೊಳು೦ಬು ಮಾವ೦ಗೂ ಒ೦ದು ಒಪ್ಪ.
    ಒಪ್ಪಣ್ಣ ಸಮೇತ ಇಡೀ ಬೈಲಿ೦ಗೆ ಧನ್ಯವಾದ೦ಗೊ.
    ಹರೇ ರಾಮ…

  11. ಎಷ್ಟು ಖುಶಿ ಹೇಳುದರ ಮಾತಿಲ್ಲಿ ಹೇಳ್ಲೆಡಿಯ!
    ಬೈಲಿನ ಮೇಲಿಪ್ಪ ಗುರುಗಳ ಅಭಿಮಾನ – ನೆರೆಕರೆಯ ಮೇಲೆ ಗುರುಗೊಕ್ಕಿಪ್ಪ ಪ್ರೀತಿ ಕಂಡು ಬಾಯೇ ಕಟ್ಟಿತ್ತು.
    ಇಡೀ ಜಗತ್ತಿಂಗೆ ಮಠ ಸಿಕ್ಕೆಕು ಹೇಳಿ ಇದೀಗ portal ಸಿಧ್ಧ ಆವ್ತಾ ಇದ್ದು… ಅದು ಯಾವ ಕ್ಷೇತ್ರವೇ ಆಗಲಿ, ಗುರುಗಳ ವೇಗಕ್ಕೆ ನಮ್ಮದೇನೂ ಸಾಲ ಹೇಳಿ ಪ್ರತಿಯೊಬ್ಬಂಗೂ ಕಂಡಿಕ್ಕು ಅಲ್ಲಿ…
    ಅಷ್ಟು ಪ್ರೀತಿ ಆತ್ಮೀಯತೆಲಿ ಗುರುಗೊ ಮಾತಾಡ್ಸುವಾಗ, ಸಮಯ ಹೋದ್ದೇ ಗೊಂತಾಯಿದಿಲ್ಲೆ. 🙂

  12. ಅವಿಸ್ಮರಣೀಯ ದಿನ… ನಮ್ಮ ಗುರುಗಳ ಒಟ್ಟಿಂಗೆ ಇಸ್ಟು ಹತ್ತರಂದ ಕಂಡು ಮಾತಾಡಿದ್ದು ಸುರು… ಎಲ್ಲರ ಹತ್ತರುದೆ ಅಸ್ಟು ಪ್ರೀತಿಲಿ ಸಮಯ ಕೊಟ್ಟು ಮಾತಾಡ್ಸಿದ್ದು… ಮತ್ತೆ ನಮ್ಮ ಈ ಬಯಿಲಿನವರ ಮುಖತ ಕಂಡು ಎಲ್ಲರ ಪರಿಚಯ ಆದ್ದು ಭಾರಿ ಖುಶಿ ಆತು..ಃ)

  13. ವರದಿ ಲಾಯ್ಕ ಬೈಂದು.ಬಿಡುವಿಲ್ಲದ್ದ ಕಾರ್ಯಕ್ರಮದೆಡಕ್ಕಿಲಿ ಗುರುಗೊ ಇಷ್ಟು ಹೊತ್ತಿನ ನಮಗೆ ವಿನಿಯೋಗಿಸಿದ್ದು ಅವಕ್ಕೆ ಬೈಲಿನ ಮೇಲೆ ಇಪ್ಪ ಅಭಿಮಾನಂದ . ತುಂಬಾ ಸಂತೋಷ ಆತು.

  14. ಮಠಕ್ಕೆ ಬಂದರೂ ಆ ಹೊತ್ತಿಂಗೆ ಅಲ್ಲಿ ಇಪ್ಪಲೆ ಎಡಿಗಾಯಿದಿಲ್ಲೆ.ಅದಕ್ಕಾಗಿ ವಿಷಾದ ಇದ್ದು.ಶರ್ಮಪ್ಪಚ್ಚಿಯ ಕಂಡು ಮಾತಾಡಿದೆ.ವಿಜಯಕ್ಕನೂ ಸಿಕ್ಕಿದವು.ನುಡಿಚಿತ್ರ ನೋಡಿ ಕೊಶಿಯಾತು.ವಿವರ ಒದಗಿಸಿದ ಬೊಳುಂಬು ಭಾವಂಗೆ ಧನ್ಯವಾದ.ಹರೇ ರಾಮ.

  15. ಕಾರಣಾಂತರಂದ ಎಂಗೊಗೆ ಬಪ್ಪಲೆ ಎಡಿಗಾಯಿದಿಲೆ. ಈ ವರದಿ ಯಾವಾಗ ಬತ್ತು ಹೇಳಿ ಎದುರು ನೋಡಿಗೊಂಡಿತ್ತಿದ್ದೆ. ವಿವರವಾಗಿ ವರದಿ ಬರದು ಫೋಟೊಸಹಿತ ಕೊಟ್ಟದಕ್ಕೆ ಬೊಳುಂಬು ಭಾವಂಗೆ ಧನ್ಯವಾದ.
    ಹರೆರಾಮ.

  16. ಕಾರಣಾಂತರಂದ ನವಗೆ ಈ ಸರ್ತಿ ಬಂದುಗೊಂಬಲೆ ಎಡಿಗಾಯ್ದಿಲ್ಲೆ. ಫಟಂಗೊ ಭಾರೀ ಲಾಯಕ ಬೈಂದು. ವರ್ತಮಾನ ಓದಿ ಕೊಶಿಪಟ್ಟತ್ತು. ಹರೇ ರಾಮ

    1. ಭಾವಯ್ಯ, ಬೈಲಿಂಗೆ ನಿಂಗೊ ಕೊಡ್ತಾ ಇಪ್ಪ ಸಂಪೂರ್ಣ ಸಹಕಾರದ ಬಗ್ಗೆ, ಅಡುಗೆ ಸತ್ಯಣ್ಣನ ಬಗ್ಗೆ ಈ
      ಭೇಟಿ ಕಾರ್ಯಕ್ರಮದ ಎಡೆಲಿ ತುಂಬಾ ಮಾತುಕತೆ ನೆಡೆತ್ತಾ ಇತ್ತು ಹೇಳುವದು ಕೊಶಿಯ ಸಂಗತಿ.

  17. ಅವಿಸ್ಮರಣೀಯ ಕ್ಷಣಂಗೊ. ಧನ್ಯರಾದೆವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×