ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಶುದ್ದಿ ಹೇಳಿದ್ದು:
ಚೆನ್ನಬೆಟ್ಟತ್ತಿಗೆ
ಬೈಲಿನ ಎಲ್ಲೋರುದೇ ಸೇರಿ ಶುದ್ದಿಯ ಹೇಳ್ತದು ನಮ್ಮದು ಒಂದು ವಿಶೇಷ.
ಬೈಲಿನೋರ ಮನೆಯೋರುದೇ ಶುದ್ದಿ ಹೇಳ್ತದು ಮತ್ತೂ ವಿಶೇಷ.
ಈ ಶುದ್ದಿ ಸ್ವರ್ಗಂದಲೇ ಬಂದ ಅಶರೀರವಾಣಿ ಏನಲ್ಲ, ಬದಲಾಗಿ ನಮ್ಮ ಬೈಲಿನ ಚೆನ್ನಬೆಟ್ಟಣ್ಣನ ಯೆಜಮಾಂತಿ “ಚೆನ್ನಬೆಟ್ಟತ್ತಿಗೆ” ಪ್ರೀತಿಲಿ ಕಳುಸಿಕೊಟ್ಟ ಶುದ್ದಿ.
ಭಗತ್ ಸಿಂಗಿನ ಬಗ್ಗೆ ವಿಶೇಷ ಅಭಿಮಾನ ಅವಕ್ಕೆ. ಹಾಂಗಾಗಿ ಅವನ ಹುಟ್ಟುಹಬ್ಬದ ದಿನ ಬೈಲಿಂಗೋಸ್ಕರ ಬರದ ಶುದ್ದಿ, ನಮ್ಮೆಲ್ಲರಿಂಗಾಗಿ.ಬನ್ನಿ, ಬೈಲಿನ ಹೊಸ ಜೆನಂಗಳ ಶುದ್ದಿಯ ಓದಿ, ಒಪ್ಪ ಕೊಡುವೊ°, ಶುದ್ದಿ ಹೇಳಿ ಹೇಳಿ, ಕ್ರಮೇಣ ಬೈಲಿಂಗೇ ಬಪ್ಪಲೆ ಪ್ರೋತ್ಸಾಹ ಮಾಡುವೊ°.
ಎಂತ ಹೇಳ್ತಿ?
~
ಗುರಿಕ್ಕಾರ°
ಇಂದ್ರಾಣ ದಿನದ ವಿಶೇಷ ಹೇಳಿದರೆ, ಭಾರತದ ಆಪ್ರತಿಮ ದೇಶಭಕ್ತ, ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ -ನ ಹುಟ್ಟುಹಬ್ಬ.
ತನ್ನ ಚಿರ ಯವ್ವನಲ್ಲಿ ತನ್ನ ಎಲ್ಲಾ ವೈಯಕ್ತಿಕ ಸುಖ-ಸಂತೋಷಂಗಳ ಕರೆಂಗೆ ಮಡುಗಿ, ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸ್ವಂತ ಜಿವನವನ್ನೇ ಮುಡಿಪಾಗಿ ಇಟ್ಟವ ಜನ್ಮದಿನ ಇಂದು.
27-10-1907 ರಂದು ಸರ್ದಾರ್ ಕೃಷ್ಣ ಸಿಂಗ್ ಮತ್ತೆ ವಿದ್ಯಾವತಿ ದಂಪತಿಗಳ ಪುಣ್ಯಗರ್ಭಲ್ಲಿ ಹುಟ್ಟಿದ.
ಇವ ಸಣ್ಣ ಇಪ್ಪಗಳೇ, ಅಂದರೆ 1919 ರಲ್ಲಿ ಜಲಿಯನ್ ವಲಾಬಾಗ್ ಗಟನೆಂದ ಮನನೊಂದು, ನಂತರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಗೊಂಡ.
ಕಮ್ಯುನಿಸಮ್, ಮಾರ್ಕ್ಸಿಸಮ್, ಮತ್ತೆ ಆರ್ಯಸಮಾಜದ ತತ್ವಂಗಳಿಂದ ಪ್ರಭಾವಿತ ಆದ ಅವ ಹಿಂದುಸ್ತಾನ್ ಸೋಷಿಯಲಿಷ್ಟ್ ರಿಪಬ್ಲಿಕನ್ ಎಸೋಷಿಯೇಶನ್ ನ ಸ್ತಾಪಿಸಿದ.
ಆದರೆ, 23-11-1931 ರಂದು, ಲಾಲಾ ಲಜಪತ್ ರಾಯರ ಕೊಂದ ಪೋಲೀಸನ ಹತ್ಯೆಮಾಡಿದ್ದಕ್ಕೆ ಭಗತ್ ಸಿಂಗನ ಗಲ್ಲಿಂಗೆ ಏರುಸುತ್ತವು..
ಇವ ಬದುಕ್ಕಿದ್ದು ಕೇವಲ 23 ವರ್ಷ!
ಆದರೆ ಇವನ ಸಾಧನೆ? ಅದು ಅಪ್ರತಿಮ!!
ಇಂಥವಂಗೆ ಭಾರತಮಾತೆ ಜನ್ಮ ಕೊಟ್ಟಿದು ಹೇಳಿ ನಾವು ಹೆಮ್ಮೆ ಪಟ್ಟೊಳೆಕ್ಕು.
ಇನ್ನೊಂದು ಸಂಗತಿ ಹೇಳಿದರೆ, ನಾವು ಗಾಂಧಿಜಯಂತಿ, ನೆಹರು ದಿನಾಚಣೆ ಎಲ್ಲ ಭಾರೀ ವಿಜೃಂಭಣೆಂದ ಆಚರಿಸುತ್ತು..
ಆದರೆ ಭಗತ್ ಸಿಂಗ್ ಜನ್ಮದಿನ?
ನೆಂಪಿದ್ದಾ ಎಲ್ಲರಿಂಗೂ..??
ಯೋಚನೆಮಾಡೆಕ್ಕಾದ ವಿಶಯ..
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನಬೆಟ್ಟಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಗುಣಾಜೆ ಮಾಣಿಗು ಮರತ್ತು ಹೋಯಿದು ಕಾಣ್ತು.. ಇಲ್ಲದ್ರೆ ಅವನ ಮೆಸ್ಸೇಜು ಬತ್ತಿತ್ತು..
ನೆಂಪು ಮಾಡುಲೆ..
[ಉತ್ತರುಸಿ]
ಹೊತ್ತುವೇಳೆ: 28 September,2010ರ 10:29 AM ಗೆ. (ಒಪ್ಪಸಂಕೊಲೆ)
ಹಾಂಗಿಪ್ಪ ಮೆಸೇಜುಗಳ ಕಳುಸದ್ದ ಹಾಂಗೆ ಬ್ಲೋಕ್ ಮಾಡಿದ್ದವಡ.
[ಉತ್ತರುಸಿ]
ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ ವಿಚಾರ ಮಾತಾಡೂವಗ ಎಲ್ಲೋರಿಂಗೂ ನೆಂಪಪ್ಪದು ಗಾಂಧಿ, ನೆಹರು ಮಾಂತ್ರ. ಇವರಿಂದ ನೂರು ಪಟ್ಟು ಹೆಚ್ಚು ಶ್ರಮ ತ್ಯಾಗ ಮಾಡಿದವ್ವು ಸಾವಿರ ಸಾವಿರ ಸಂಖ್ಯೆಲಿ ಇದ್ದವು. ಅವರ ನೆಂಪು ಆರಿಂಗೂ ಇಲ್ಲೆ, ಅಥವ… ಅವರ ನೆಂಪು ಆರಿಂಗೂ ಅಪ್ಪಲೇ ಆಗ ಹೇಳುವ ಒಂದು ಸ್ವಾರ್ಥದ ಕಾರಣ ಇಪ್ಪಲೂ ಸಾಕು !! ಅದೇನೇ ಇರಲಿ…. ಭಗತ್ ಸಿಂಗ್ ಮತ್ತೆ ಅವನ ಹಾಂಗಿದ್ದ [ಅಜ್ಞಾತರಾಗಿ ಉಳುದ] ಎಷ್ಟೋ ಜೆನ ದೇಶಭಕ್ತರಿಂಗೆ ನಮನ..ಕೋಟಿ ನಮನ………
ಅವರ ಮನಸ್ಸಿಲ್ಲಿ ಇದ್ದ ಆ ದೇಶಭಕ್ತಿ..ತ್ಯಾಗ ಮನೋಭಾವದ ಒಂದು ಸಣ್ಣ ಪಾಲು ನಮ್ಮೆಲ್ಲೋರಲ್ಲಿಯೂ ಇರಲಿ….ಬೆಳೆಯಲಿ. ಅಂದು ಸಿಕ್ಕಿದ ಸ್ವಾತಂತ್ರ್ಯವ ನಾವು ಮತ್ತೆ ಕಳಕ್ಕೊಂಬ ಪರಿಸ್ಥಿತಿ ಬಪ್ಪದು ಬೇಡ ಹೇಳಿ ಪ್ರಾರ್ಥನೆ ಮಾಡುವ.
[ಉತ್ತರುಸಿ]
ಚೆನ್ನಬೆಟ್ಟತ್ತಿಗೇ..
ಒಳ್ಳೆ ದಿನ, ಒಳ್ಳೆ ಜೆನರ ಶುದ್ದಿ, ಒಳ್ಳೆ ರೀತಿಲಿ ಹೇಳಿ ಬೈಲಿಂಗೆ ಕೊಶಿ ಕೊಟ್ಟಿ.
ನಿಂಗೊಗೆ ಅಭಿವಂದನೆಗೊ.
ಸುವರ್ಣಿನಿ ಅಕ್ಕ ಹೇಳಿದ ಹಾಂಗೆ, ಅಂತೇ ಇಲ್ಲದ್ದರೂ ಆ ಎರಡು ಹೆಸರು ಹೇಳುದು, ಹೀಂಗಿರ್ತ ಹೋರಾಟಗಾರಂಗೊ ಕಾಂಬಲೇ ಇಲ್ಲೆ. ಅದಕ್ಕೆ ಬೈಲಿಲಿ ಅವರ ಶುದ್ದಿ ರಜ ರಜ ಬತ್ತಾ ಇರಳಿ.
ಒಳ್ಳೆ ಕಾರ್ಯ ಮಾಡಿದಿ, ಒಳ್ಳೆದಾಗಲಿ.
[ಉತ್ತರುಸಿ]
ಸ್ವಾತಂತ್ರ್ಯಕ್ಕೆ ನಿಜವಾಗಿ ಹೋರಾಡಿದವಕ್ಕೆ ಪ್ರಚಾರ ಬೇಕಾಗಿತ್ತಿದ್ದಿಲ್ಲೆ. ಬಾಕಿ ಇಪ್ಪವಕ್ಕೆ ಅದುವೇ ಮುಖ್ಯವಾಗಿತ್ತಿದ್ದು. ಹಾಂಗಾಗಿ ಇಂದು ನೆಹರೂ ಗಾಂಧಿ ಬಿಟ್ಟರೆ ಬೇರೆ ಆರ ಹೆಸರೂ ಗೊಂತಿಲ್ಲೆ. ಪಾಠಂಗಳಲ್ಲಿಯೂ ಅದರ ಬಗ್ಗೆ ತಿಳುವಳಿಕೆ ಕೊಟ್ಟಿದವಿಲ್ಲೆ. ಅದು ಕೇಸರೀಕರಣ ಹೇಳಿ ವ್ಯಾಖ್ಯಾನ ಮಾಡುವದು ಮಾತ್ರ ಗೊಂತು.
ಸ್ವಾತಂತ್ರ್ಯಕಾಗಿ ಹೋರಾಡಿ ಹುತಾತ್ಮರಾದವರ ನಾವೆಲ್ಲರೂ ಸ್ಮರಿಸುವೊ.
ಚೆನ್ನಬೆಟ್ಟತ್ತಿಗೆ ಚಿಕ್ಕದಾಗಿ ಚೊಕ್ಕದಾಗಿ ಬರದ್ದಕ್ಕೆ ಅಭಿನಂದನೆಗೊ.
ಇನ್ನೂದೆ ಲೇಖನಂಗೊ ಬತ್ತಾ ಇರಳಿ
[ಉತ್ತರುಸಿ]
ಹೊತ್ತುವೇಳೆ: 8 October,2010ರ 5:49 AM ಗೆ. (ಒಪ್ಪಸಂಕೊಲೆ)
ಇತ್ತೀಜಗೆ ಒಂದು ಸರ್ವೆಲಿ ಭಗತ್ ಸಿಂಗ್ ಜನಪ್ರಿಯತೆಲಿ ಗಾಂದಿ ಅಜ್ಜಂದ ತುಂಬಾ ಮೇಲೆ ಇದ್ದದರ ಪ್ರತಾಪ್ ಸಿಂಹ ವಿಜಯಕರ್ನಾಟಕಲ್ಲಿ ಗಾಂಧಿಜಯಂತಿಯಂದು ಬರದಿತ್ತಿದ್ದ°
[ಉತ್ತರುಸಿ]
ಭಾರತ ಮಾತಾ ಕೀ ಜೈ.ಇಷ್ಟು ಒಳ್ಳೆಯ ವಿಷಯಂಗಳ ; ನಾವೂ ನಮ್ಮ ಮಕ್ಕೊಗೆ ಹೇಳಿ ಕೊಡೆಕ್ಕಾದಷ್ಟು ವಿಶೇಷತನ ಹೊಂದಿದ ಈ ಪುಣ್ಯ ಭೂಮಿಲಿ ಹುಟ್ಟಿದ ನಾವೆಲ್ಲೋರೂ ಧನ್ಯರು !! ಮಗದೊಮ್ಮೆ ಭಾರತ ಮಾತೆಗೆ ಶಿರಸಾ ನಮಸ್ಕರಿಸಿಗೊಳ್ಥೆ. ಹಾಂಗೇ ಚೆನ್ನಬೆಟ್ಟ ಅತ್ತಿಗೆಗೆ ಒಂದು ಒಳ್ಳೆ ವಿಷಯವ ಬಯ್ಲಿಲಿನ್ಗೆ ತಂದದಕ್ಕೆ ಅಭಿನಂದಿಸುತ್ತೆ.
[ಉತ್ತರುಸಿ]
ಅವ್ವೆಲ್ಲಾ ಸ್ವಾತ೦ತ್ರಕ್ಕೆ ಬೇಕಾಗಿ ಮಾ೦ತ್ರ ಹೋರಾಡಿದವು.ನ೦ತ್ರ ಎನಗೆ ಅದಿಕಾರ ಸಿಕ್ಕೆಕು ಹೇಳುವ ಆಲೋಚನೆ ಕೂಡ ತಲೇಲಿ ಹಾಕಿಯೊ೦ಡಿದವಿಲ್ಲೆ.ನೆಹರುಗೆ ಅವರ ಸ೦ಸಾರವೆ ಪರ೦ಪರೆ೦ದ ಆಳೆಕು ಹೇಳುವ ದುರಾಸೆ ಇತ್ತು;ಚರಿತ್ರೆ ನೋಡಿರೆ ಗೊ೦ತಕ್ಕು.ಗಾ೦ದಿಗೆ ಆ ನಮುನೆ ಅಲ್ಲದ್ರು ಕೀರ್ತಿಯ ದುರಾಸೆ ಹಾ೦ಗಾಗಿ ಹಿ೦ಗಿದ್ದ ಎಷ್ಟೆಷ್ಟ್ಟೊ ಮಹನೀಯರ ಹೆಸರೇ ಬಾರದ್ದ ಹಾ೦ಗೆ ನೋಡಿಯೊ್೦ಡಿದವು.ವಿರ ಸಾವರ್ಕರಿನ ಹಾ೦ಗಿಪ್ಪವರ ಸ್ವಾತ೦ತ್ರ ಬ೦ದ ಮೇಲೂ ಅಪ ಮಾನ ಮಾಡಿದ್ದವು.ಇ೦ದು ಶಾಲೆಲಿ ಕೋ೦ಗ್ರೆಸ್ಸಿನವು ಹೇಳಿದ್ದದರನ್ನೇ ಕಲುಸುವದರಿ೦ದ ಮಕ್ಕೊ ಅದೆ ಸತ್ಯ ಹೆಳಿ ನ೦ಬಿಯೊ೦ಡಿದವು.ಅ೦ತು ಒಳ್ಳೆ ವಿಷಯ ಆಯ್ಕೆ ಮಾಡಿದ ಚೆನ್ನ ಬೆಟ್ನತ್ತಿಗ್ಗೆ ಜೈ.ಒಪ್ಪ೦ಗಳೊಟ್ಟಿ೦ಗೆ.
[ಉತ್ತರುಸಿ]
ಚೆನ್ನಬೆಟ್ಟಕ್ಕಂಗೆ ಸ್ವಾಗತ ಮತ್ತೆ ಧನ್ಯವಾದ. (ಕಾರ್ಯಕ್ರಮ ಚುಟುಕಾಗಿ ಚೊಕ್ಕಲ್ಲಿ !!)
ಬದುಕ್ಕಿರೆ ಭಗತ್ ಸಿಂಘನ ಹಾಂಗೆ,ವಿವೇಕಾನಂದರ ಹಾಂಗೆ ಬದುಕ್ಕೆಕ್ಕು.ಎಷ್ಟು ದಿನ ಬದುಕ್ಕಿದ್ದು ಹೇಳ್ತದು ಮುಖ್ಯ ಅಲ್ಲ,ಹೇಂಗೆ ಬದುಕ್ಕಿದ್ದು ಹೇಳ್ತದು ಮುಖ್ಯ. ತನ್ನ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಈ ವೀರ,ಸಿಂಹನೆ ಸರಿ.ಅವನ ದೇಶಭಕ್ತಿ ನವಗೆ ಮಾರ್ಗದರ್ಶಕ ಆಗಲಿ ಹೇಳಿ ಹಾರೈಕೆ .
ಶಿವರಾಮ ಕಾರಂತರು ಒಂದು ಮಾತು ಹೇಳಿದ್ದವಡ,ಮನುಷ್ಯ ಸತ್ತ ಮೇಲೂ ಹತ್ತಾರು ವರುಷ ಅವನ ಹೆಸರು ಸಮಾಜಲ್ಲಿ ಸ್ಥಾಯಿಯಾಗಿ ಒಳುದರೆ ಅದೇ ಪುನರ್ಜನ್ಮ ಹೇಳಿ, ಎಷ್ಟು ಸತ್ಯ ಅಲ್ಲದೋ?.
ಇಂದು ಬೆಂಗಳೂರಿಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಹೇಳ್ತ ಬೀದಿ ನಾಟಕ ನಡೆತ್ತಾ ಇದ್ದು.ದೊಡ್ಡ ದೊಡ್ಡ ಪಾತ್ರಧಾರಿಗೊ ಸುಮಾರು ಲೊಟ್ಟೆ ಬಿಡುಗು.ಹೋರಾಟವೇ ಉದ್ಯೋಗ ಹೇಳಿ ಗ್ರೇಶುವ ಈ ಜೆನಂಗೊಕ್ಕೆ ಸ್ವಾತಂತ್ರ್ಯದ,ಪ್ರಜಾಪ್ರಭುತ್ವದ ನಿಜ ಅರ್ಥ ಗೊಂತಿಲ್ಲೇ ಹೇಳ್ತದು ವಿಷಾದನೀಯ.
[ಉತ್ತರುಸಿ]
ಲೈಕಾಯಿದು ಅತ್ತಿಗೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಮತ್ತು ಅಜದ್ ಅವರೆಲ್ಲ ಈಗೀಗ ನಾವು ಮರೆತ್ತ ಇದ್ದೋ ಹೇಳಿ ಗ್ರೇಷಿಯೊಂಡಿತ್ತಿದ್ದೆ.. ಹಾಂಗಲ್ಲ ಹೇಳಿ prove ಆತು…
[ಉತ್ತರುಸಿ]
ಚೆನ್ನಬೆಟ್ಟತ್ತಿಗೆಗೆ ಒಪ್ಪಣ್ಣನ ಬೈಲಿಂಗೆ ಸ್ವಾಗತ. ಲೇಖನ ಚುಟುಕಾಗಿದ್ದರೂ, ಲಾಯಕಾಯಿದು. ಭಗತ್ ಸಿಂಗನ ಹಾಂಗ್ರುತ್ತ ತುಂಬಾ ಜೆನಂಗಳ ಅಗತ್ಯ ಈಗಾಣ ಕಾಲಲ್ಲಿ ಇದ್ದು. ಅಂದು ಬ್ರಿಟಿಶರಿಂದ ಸ್ವಾತಂತ್ರ್ಯ ಸಿಕ್ಕಲೆ ಹೋರಾಡಿದ ಅವ. ಇಂದು ನಮ್ಮ ರಾಜಕೀಯದವರ ಸ್ವಾರ್ಥ, ವಂಚನೆ, ದುರಾಢಳಿತ, ಹಿಂದುಗಳ ಅವಗಣನೆಯ ವಿರುದ್ದ ಕಾರ್ಯಾಚರಣೆ ನಡೆಸೆಕು.
[ಉತ್ತರುಸಿ]
ಎಲ್ಲರಿಂಗೂ ಧನ್ಯವಾದಂಗೋ.
ಚೆನ್ನಬೆಟ್ಟತ್ತಿಗೆ
[ಉತ್ತರುಸಿ]
ಹೊತ್ತುವೇಳೆ: 9 October,2010ರ 6:32 PM ಗೆ. (ಒಪ್ಪಸಂಕೊಲೆ)
ನಿಂಗೊಗೆ ಒಂದು ವಿಷಯ ಗೊಂತಿದ್ದೋ?. ಮೊನ್ನೆ ಒಂದೂರ ಶಾಲೆಲಿ ಮಂಗಲ್ ಪಾಂಡೆ ಯ ಪಟ ಹಾಕುಲೆ ಭಾರೀ ವಾಗ್ವಾದ ಆಯಿದು. ಅವ ಆರು? ಶಾರುಕ್ ನ ಹಾಂಗೆಯೇ ಫಿಲ್ಮ್ ಏಕ್ಟ್ರೋ ಹೇಳಿ ಕೇಳಿದ ಘಟನೆ ನಡದ್ದು. ಕೇಳಿದ್ದು ಮಕ್ಕೊ ಅಲ್ಲ ಶಾಲೆಯ ನಡೆಸುವವರಲ್ಲಿ ಒಬ್ಬ.ಕೂಗೆಕ್ಕಾ? ನೆಗೆ ಮಾಡೆಕ್ಕಾ? ಗೊಂತಿಲ್ಲೆ.
[ಉತ್ತರುಸಿ]
ಇಂದು ನಮ್ಮ ರಾಜಕೀಯದವರ ಸ್ವಾರ್ಥ, ವಂಚನೆ, ದುರಾಢಳಿತ, ಹಿಂದುಗಳ ಅವಗಣನೆಯ ವಿರುದ್ದ ಕಾರ್ಯಾಚರಣೆ ನಡೆಸೆಕು.
ನಾವೂ ನಮ್ಮ ಮಕ್ಕೊಗೆ ಹೇಳಿ ಕೊಡೆಕ್ಕಾದಷ್ಟು ವಿಶೇಷತನ ಹೊಂದಿದ ಈ ಪುಣ್ಯ ಭೂಮಿಲಿ ಹುಟ್ಟಿದ ನಾವೆಲ್ಲೋರೂ ಧನ್ಯರು
9964851582 kaverisuddi@gmail.com
[ಉತ್ತರುಸಿ]