’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!
March 4, 2010 ರ 9:00 amಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 3 ಒಪ್ಪಂಗೊ.ನಮಸ್ಕಾರ!
ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ!
ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು ಹೇಳ್ತ ಆಶಯ ನಮ್ಮದು.
ಅದಾ, ಓ ಮೊನ್ನೆ ಒಂದರಿ ವಿಜಯಕರ್ನಾಟಕ ಪೇಪರಿನವು – ಸಾಯಿಕುಮಾರ್ ಸಂಸ್ಕೃತ ಡೈಲಾಗುಗಳ ಬಿಡ್ತು – ಹೇಳ್ತ ಅರ್ತ ಬಪ್ಪ ಒಂದು ಗೆರೆ ಬರದಿತ್ತಿದ್ದವಡ ಅಲ್ದಾ, ಆ ದಿನ ನಮ್ಮ ಕೇಮಹೇಶಣ್ಣಂಗೆ ಬೆಶಿ ಆಗಿ, ಕೂಡ್ಳೇ ಅದರ ಸಂಪಾದಕ ಮೂರೂರು ಭಟ್ರಿಂಗೆ ಮಿಂಚಂಚೆ ಬರದವಡ, ಖಾರಕ್ಕೆ.
ಈ ಸರ್ತಿಯಾಣ ಜನಗಳ ಮನಲ್ಲಿ ಆ ಬಗ್ಗೆ ಒಂದು ಉಲ್ಲೇಖ ಬಂದೇ ಬಯಿಂದು.
ಎಷ್ಟು ಜೆನ ಸಂಸ್ಕೃತಕ್ಕೆ ಹಾನಿ ಆದರೆ ಸ್ಪಂದುಸುತ್ತವು?!
ನಾವು ಬಾಯಿಮುಚ್ಚಿ ಕೂದರೆ ಎದುರಾಣೋರು ಎಂತ ಬೇಕಾರೂ ಹೇಳುಲೆ ಸುರು ಮಾಡ್ತವು. ಅದಕ್ಕೆ ಕೂಡ್ಳೇ ಪ್ರತಿಕ್ರಿಯೆ ಕೊಟ್ರೆ ಕ್ರಮೇಣ ನಿಲ್ಲುತ್ತು.
ಕೇಮಹೇಶಣ್ಣ ಅದನ್ನೇ ಮಾಡಿದ್ದು! ಉಶಾರಿ ಮಾಣಿ!
ಅವನ ಕಂಡು ಕಲಿವ°. ಆಗದೋ?
ಇದಾ, ಎಂಗೊಗೆಲ್ಲ ಇದರ ಕಂಡು ಕೊಶೀ ಆಯಿದು. ನಿಂಗೊಗೆ?
(ಇದಾ, ಪೇಪರು ಇದರ ಒಟ್ಟಿಂಗೆ ಅಂಟುಸಿದ್ದು. ಈ ಸಂಕೊಲೆಲಿ ಸಿಕ್ಕುತ್ತು!)
ನಿಂಗೊಗೂ ಕೊಶಿ ಆದರೆ ಕೇಮಹೇಶಣ್ಣನ ಕೆಲಸಕ್ಕೆ ಒಪ್ಪಕೊಡಿ! ಆತೋ?

March 4th, 2010 @ 1:44 PM
ಮಹೇಶಣ್ಣಂಗೆ ಅಭಿನಂದನೆಗೊ. ನೀನು ಸರಿಯಾಗಿಯೇ ಹೇಳಿದ್ದೆ. ಈ ಲೇಖನ ಮನ್ನೆಯೇ ಓದಿದ್ದೆ. ವಿಶ್ವೇಶ್ವರ ಭಟ್ರಿಂಗೆ ಬಂದ ಪತ್ರ ನಿನ್ನದು ಹೇಳಿ ಈಗ ಗೊಂತಾತು. ಪೇಪರಿನವಕೆ ಬೆಶಿ ಮುಟ್ಟಿತ್ತು ಅಂಬಗ. ಎನ್ನದೂ ಸಪೋರ್ಟು ನಿನಗಿದ್ದು.
[ಉತ್ತರುಸಿ]
March 4th, 2010 @ 11:44 PM
ಮಹೇಶಣ್ಣಂಗೆ ಎನ್ನ ಬೆಂಬಲವೂ ಇದ್ದು..
[ಉತ್ತರುಸಿ]
March 8th, 2010 @ 11:25 AM
ನಿಂಗೊಗೆ ಖುಷಿಯಾದ್ದದು ನೋಡಿ ಮತ್ತುದೆ ಸಂತೋಷ ಆತೆನಗೆ!
ಧನ್ಯೋಸ್ಮಿ!!
[ಉತ್ತರುಸಿ]