ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಕಳೆದ ಐದು ವರ್ಷಂದ ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮೊನ್ನೆ ಬೆಂಗಳೂರಿಲಿ ಪರಿಸಮಾಪ್ತಿ ಆತು.
ಇದರ ಬಗ್ಗೆ ಪತ್ರಿಕೆಗಳ ವರದಿ ತುಂಬಾ ಬಯಿಂದು.ವಿವರ ಅದರಲ್ಲಿ ನೋಡುಲಕ್ಕು.
ಭಗವದ್ಗೀತೆಯ ಬಗ್ಗೆ ಸಣ್ಣ ಉಪನ್ಯಾಸಂಗಳ ಆ ಸ್ವಾಮೀಜಿ ತುಂಬಾ ಲಾಯ್ಕಲ್ಲಿ ಜನಸಾಮಾನ್ಯರಿಂಗೆ ಅರ್ಥ ಅಪ್ಪ ಹಾಂಗೆ ಕೊಟ್ಟಿದವು.ಸಮಾಜದ ಎಲ್ಲಾ ಸಮುದಾಯಂಗಳ ಸಂಘಸಂಸ್ಥೆಗಳ ಸಹಕಾರಂದ ದೊಡ್ಡ ಗೀತಾ ತತ್ತ್ವ ಪ್ರಚಾರ ಕಾರ್ಯಕ್ರಮಂಗಳ ಮಾಡಿದ್ದವು.ಗೀತಾ ಪ್ರೆಸ್ ನ ಕನ್ನಡ ಭಗವದ್ಗೀತೆಯ ಸುಲಭ ಬೆಲೆಯ ಆವೃತ್ತಿಯ ನೂರಾರು ಹಂಚಿದ್ದವು.ಕುಳಾಯಿ ಮತ್ತೆ ಕಣ್ಯಾರ[ಕುಂಬಳೆ]ಲಿ ಆದ ಅವರ ಕಾರ್ಯಕ್ರಮಂಗಳ ಆನು ನೋಡಿದ್ದೆ.ತುಂಬಾ ಲಾಯ್ಕ ಇತ್ತು.ಅವರ ಬದ್ಧತೆ ಪ್ರಶಂಸಾರ್ಹ.
ಸಮಾಜಲ್ಲಿ ಗುಪ್ತಗಾಮಿನಿಯಾಗಿ ಈ ಅಭಿಯಾನದ ಪ್ರಭಾವ ಇಲ್ಲದ್ದೆ ಇರ.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗೋಪಾಲಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಹರೇ ರಾಮ. ಒಳ್ಳೆ ಶುದ್ದಿ.
[ಉತ್ತರುಸಿ]
ಒಳ್ಳೆ ಶುದ್ದಿ ಮಾವಾ..
ಆನುದೇ ಪೇಪರಿಲ್ಲಿ ಓದಿದ್ದೆ..
ಅವ್ವು ಮಾಡಿದ ಉಪನ್ಯಾಸಂಗೊ ಎಲ್ಲಿಯಾರೂ ಸಿಕ್ಕುಗೋ?
[ಉತ್ತರುಸಿ]
ಹೊತ್ತುವೇಳೆ: 10 January,2012ರ 3:31 PM ಗೆ. (ಒಪ್ಪಸಂಕೊಲೆ)
“ಜ್ಜ್ನಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ”
ಸ್ವರ್ಣವಲ್ಲೀ ಗುರುಗೊ ಕಳೆದ ಒಂದು ದಶಕಂದ ಶಿರಸಿಯ ಯೊಗ ಮಂದಿರಲ್ಲಿ ಶ್ರೀಮದ್ ಭಗವದ್ಗೀತಾ ಸಪ್ತಾಹ ನೆಡಶುತ್ತಾ ಬಯಿಂದವು. ೨೦೦೪ರಲ್ಲಿ ಅಭಿಯಾನ ನೆಡಶುವ ಸುಯೋಗ ಎಂಗೊಗೆ ಕೈಗಾಲ್ಲಿಯೂ ಬಯಿಂದು. ಈ ಅಭಿಯಾನಲ್ಲಿ ಗೀತೆಯ ಐವತ್ತು ಲಕ್ಷ ಪ್ರತಿ ಜನರ ಕೈ ಸೇರಿದ್ದಡ. ಅದಲ್ಲದ್ದೆ ಇಲೆಕ್ತ್ರಾನಿಕ್ ಮೀಡಿಯದ ಮೂಲಕವೂ ಹಲವರ ತಲುಪಿಕ್ಕು. ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ) ಅವರ ಪ್ರವಚನ ಮಾಲೆ ನಿತ್ಯ ಸಂಯುಕ್ತ ಕರ್ನಾಟಕ, ಹುಬ್ಬಲ್ಲಿ ಆವೃತ್ತಿಲಿ ಬತ್ತು.
ಅವರ ‘ಶ್ರೀಮದ್ಭಗವದ್ಗೀತಾ ಅಧ್ಯಾತ್ಮ ವಿದ್ಯೆ’ , ‘ಶ್ರೀಮದ್ಭಗವದ್ಗೀತಾ ಭಕ್ತಿಯೋಗ’ & ‘ಶ್ರೀಮದ್ಭಗವದ್ಗೀತಾ ಕರ್ಮಯೋಗ’ ಹೇಳುವ ಮೂರು ಪ್ರವಚನ ಸಂಪುಟ ಪ್ರಿಂಟು ಆಯಿದು.
ಸಂಪರ್ಕಕ್ಕೆಃ
ಶ್ರೀ ಭಗವತ್ಪಾದ ಪ್ರಕಾಶನ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
ಅಂಚೆಃ ಮಠದೇವಳ-೫೮೧ ೩೩೬
08384-279359, 279311, 279477
[ಉತ್ತರುಸಿ]
ಹೊತ್ತುವೇಳೆ: 10 January,2012ರ 3:38 PM ಗೆ. (ಒಪ್ಪಸಂಕೊಲೆ)
ಅವರ ಉಪನ್ಯಾಸಂಗಳ ಸಮಗ್ರ ಪ್ರತಿ “ಗೀತಾಂತರಂಗ-ಸಂಪುಟ-೧” ಸ್ವರ್ಣವಲ್ಲೀ ಮಠಲ್ಲಿ ಸಿಕ್ಕುತ್ತು. ಬೆಲೆ-೫೦೦ ರೂಪಾಯಿ (೬೯೦ ಪುಟ). ಇದು ಮೊದಲನೆ ಆರು ಅಧ್ಯಾಯಂಗಳ ವ್ಯಾಖ್ಯಾನದ್ದು, ಇನ್ನೂ ಎರಡು ಸಂಪುಟಲ್ಲಿ ಪ್ರಕಟ ಆವುತ್ತಡ (ಮಾಹಿತಿ–ದಶಂಬರದ-೧೧ ಸ್ವರ್ಣವಲ್ಲೀ ಪ್ರಭಾ ಸಂಚಿಕೆಂದ)
[ಉತ್ತರುಸಿ]
ಹೊತ್ತುವೇಳೆ: 10 January,2012ರ 4:05 PM ಗೆ. (ಒಪ್ಪಸಂಕೊಲೆ)
ಕುಮಾರಣ್ಣಾ.. ತುಂಬಾ ಧನ್ಯವಾದಂಗೊ..
[ಉತ್ತರುಸಿ]
ಹೊತ್ತುವೇಳೆ: 10 January,2012ರ 7:42 PM ಗೆ. (ಒಪ್ಪಸಂಕೊಲೆ)
ಗೀತೆ ಹೇಳಿರೆ ಉರುದು ಬೀಳುವ ಜೆನಂಗೊ ಇಪ್ಪ ಈ ಕಾಲಲ್ಲಿ ಸ್ವರ್ಣವಲ್ಲೀ ಶ್ರೀ ಗಳ ಅಭಿಯಾನ ಅಭಿನಂದನಾರ್ಹ.
@ ಕುಮಾರಣ್ಣ, ಒಳ್ಳೆ ಮಾಹಿತಿಗೊ.
[ಉತ್ತರುಸಿ]
ಕಳುದ ತಿಂಗಳು ಆದ ಅಭಿಯಾನಲ್ಲಿ ಭಾಗವಹಿಸುವ ಭಾಗ್ಯಎನಗೂ ಸಿಕ್ಕಿತ್ತು.
ಹರೆರಾಮ.
[ಉತ್ತರುಸಿ]
ಗೀತೆಯ ಬಿಟ್ಟು ನಮ್ಮ ಜೀವನವೇ ಇಲ್ಲೇ… ‘ಭಗವದ್ಗೀತಾ ಅಭಿಯಾನ’ ನಡೆಸಿದ ಸ್ವರ್ಣವಲ್ಲಿ ಶ್ರೀಗಳಿಂಗೆ ಶಿರಸಾ ನಮನಗಳು…
[ಉತ್ತರುಸಿ]
ನಮ್ಮ ದೇಶಲ್ಲಿ ಹಗಲು ಬಣಚ್ಚು ಹಾಕಿ ದಾರಿ ತೋರ್ಸೆಕ್ಕಾದ ಗೆತಿ ಆತು ಹೇಳ್ತದಕ್ಕೆ ಇದೊ೦ದು ಉದಾಹರಣೆ.
ಕಳುದ ವರುಷ ಮುಗುದ ದಿನ, ಗುರುಗಳ ಉಪನ್ಯಾಸವ ಕೇಳ್ತ ಯೋಗ ಎನಗೂ ಸಿಕ್ಕಿದ್ದು.
[ಉತ್ತರುಸಿ]