ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಹಳೆಮನೆ ಅಣ್ಣವೇಣೂರಣ್ಣಬಂಡಾಡಿ ಅಜ್ಜಿಪುತ್ತೂರುಬಾವಅನುಶ್ರೀ ಬಂಡಾಡಿಅನು ಉಡುಪುಮೂಲೆಚೆನ್ನೈ ಭಾವ°ಗಣೇಶ ಮಾವ°ನೆಗೆಗಾರ°ಶ್ಯಾಮಣ್ಣಅಕ್ಷರದಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಸರ್ಪಮಲೆ ಮಾವ°ತೆಕ್ಕುಂಜ ಕುಮಾರ ಮಾವ°ಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವವೇಣಿಯಕ್ಕ°ಡಾಗುಟ್ರಕ್ಕ°ಚುಬ್ಬಣ್ಣಗೋಪಾಲಣ್ಣಮುಳಿಯ ಭಾವದೀಪಿಕಾಪವನಜಮಾವಶ್ರೀಅಕ್ಕ°ಜಯಶ್ರೀ ನೀರಮೂಲೆಪುಟ್ಟಬಾವ°ಅಜ್ಜಕಾನ ಭಾವಒಪ್ಪಕ್ಕಬಲ್ನಾಡುಮಾಣಿದೊಡ್ಡಮಾವ°ಸುಭಗವಸಂತರಾಜ್ ಹಳೆಮನೆಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಚೆನ್ನಬೆಟ್ಟಣ್ಣಸಂಪಾದಕ° (editor)ಪೆರ್ಲದಣ್ಣವಿದ್ವಾನಣ್ಣನೀರ್ಕಜೆ ಮಹೇಶಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಪೆಂಗಣ್ಣ°ಯೇನಂಕೂಡ್ಳು ಅಣ್ಣಡೈಮಂಡು ಭಾವಚೂರಿಬೈಲು ದೀಪಕ್ಕಶಾಂತತ್ತೆಬೊಳುಂಬು ಮಾವ°ಡಾಮಹೇಶಣ್ಣಬಟ್ಟಮಾವ°ಕಾವಿನಮೂಲೆ ಮಾಣಿಅಕ್ಷರ°ಅಡ್ಕತ್ತಿಮಾರುಮಾವ°ಕೇಜಿಮಾವ°ಕಳಾಯಿ ಗೀತತ್ತೆ


ಆಹಾರ ಹಾಳು ಮಾಡೆಡಿ

February 18, 2012 ರ 6:16 pmಗೆ ನಮ್ಮ ಗೋಪಾಲಣ್ಣ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಆಹಾರ ಮಂತ್ರಾಲಯ ಮದುವೆ ಮುಂತಾದ ಸಮಾರಂಭಲ್ಲಿ ಪೋಲು ಮಾಡುವ ಆಹಾರ ವಸ್ತುಗಳ ಗಮನಿಸಿ,ಅಂತಾ ನಷ್ಟವ ತಡೆವ ಬಗ್ಗೆ ಆಲೋಚಿಸುತ್ತಾ ಇದ್ದು-ಇದು ಇಂದ್ರಾಣ ಸುದ್ದಿ.
ಕಾನೂನು ಮಾಡಿ ಆಹಾರ ವಸ್ತುಗಳ ನಷ್ಟವ ತಡೆವದು ಹೇಂಗೋ ಗೊಂತಿಲ್ಲೆ.
ನಮ್ಮವು ಅನುಪತ್ಯಂಗಳಲ್ಲಿ ಆಹಾರ ಹಾಳು ಮಾಡುದು ಕಾಂಬಾಗ ಬೇಜಾರ ಆವುತ್ತು.ಬೇಡ ಹೇಳಿದರೂ ಬಡುಸುದು,ಮಕ್ಕೊಗೂ ಎರಡು ಕೈಲು ಅಶನ ಹಾಕುದು,ಸಾರಿನ ಕೊದಿಲಿನ ತೋಡಿ ಹಾಕುದು ಎಲ್ಲಾ ನಡತ್ತು.ದೊಡ್ಡವೂ ಕೂಡಾ ರುಚಿ ನೋಡಲೆ ಹೇಳಿ ಎಲ್ಲಾ ಬಗೆ ಆಂತೊಂಬದು,ಅರ್ಧರ್ಧ ತಿಂದು,ಕಲಸಿ ಇಡುಕ್ಕುದು ಎಲ್ಲಾ ಜೆಂಬ್ರಲ್ಲೂ ಅವಿಚ್ಛಿನ್ನವಾಗಿ ನಡೆತ್ತು.ಅಗತ್ಯ ಇಲ್ಲದ್ದರೂ ನಾಕು ಬಗೆ ತಾಳು,ಚಟ್ನಿ,ಅವಿಲು,ಮೆಣಸುಕಾಯಿ-ಹೀಂಗೆ ಮಾಡಿಸುದು,ಎರಡೊ ಮೂರೊ ಸಿಹಿ ಮಾಡಿಸುದು,ಅದರ ಎಲ್ಲರಿಂಗೂ ವೋತಾಪ್ರ ಬಡಿಸಿಕೊಂಡು ಹೋಪದು -ಈ ತುಟ್ಟಿಯ ಕಾಲಲ್ಲಿ ಅದು ದೊಡ್ಡ ತಪ್ಪು.ಸಂಪ್ರದಾಯ ,ಮರ್ಯಾದೆ,ಅಂತಸ್ತು ಹೇಳುವ ಒಂದು ಭ್ರಮೆಲಿ ಸಿಕ್ಕಿ ನಾವು ಇದರ ಕಂಡೂ ಕಾಣದ್ದ ಹಾಂಗೆ ನಟಿಸುತ್ತಾ ಇದ್ದು! ಸಾಂಪ್ರದಾಯಿಕ ಪಂಕ್ತಿ ಭೋಜನ ಒಳ್ಳೆದೇ,ನವಗೆ ತೃಪ್ತಿ ಅಪ್ಪದು ಹಾಂಗೆ ಉಂಡರೆ ಮಾತ್ರ-ಎಲ್ಲಾ ಸರಿ.ಆದರೆ ದುಂದು ವೆಚ್ಚವ ,ಚೆಲ್ಲಿ ಹಾಳು ಮಾಡುದರ ತಪ್ಪಿಸಲೆ ನಾವು ಕ್ರಮ ತೆಕ್ಕೊಳದ್ದೆ ಆಗ.ಎರಡೆ ಬಗೆ ತಾಳು,ಅವಿಲು ಸಾಲದೊ?ಒಂದೇ ಸಿಹಿ,ಖಾರ ಸಾಲದೊ?ಆರಿಂಗೆ ಬೇಕೊ ಕೇಳಿಯೇ ಬಡಿಸುದು ಮಾಡಲೆ ಆಗದೊ? ನವಗೆ ಯಾವದು ಬೇಡದೊ ಅದು ಬಪ್ಪಾಗ ಕೈ ಅಡ್ಡ ಹಿಡಿಯೆಕು.ಬಡಿಸುವವು ಉಂಬವರಲ್ಲಿ ಆರು ಕೈ ಅಡ್ದ ಹಿಡಿತ್ತವೊ ಅವಕ್ಕೆ ಬಡಿಸಲೆ ಆಗ.
ಮಾಡಿಸುವವೂ,ಬಡಿಸುವವೂ,ಉಂಬವೂ ಈ ವಿಷಯವ ಗಮನಿಸಿ,ಹೊಂದಾಣಿಕೆ ಮಾಡಿಕೊಂಬದು ಅಗತ್ಯ.ಆರಿಂಗೆ ಎಲ್ಲಾ ಬಗೆ ಬೇಡದೊ,ಆರೋಗ್ಯದ ಕಾರಣಂದ ತಿಂಬಲೆ ಆಗದೊ ಅಂತವಕ್ಕೆ ಬಫೆ ವ್ಯವಸ್ಥೆಯೇ ಒಳ್ಳೆದು.
ಆಹಾರ ದೇವರ ಕೊಡುಗೆ,ಅನ್ನಂ ನ ನಿಂದ್ಯಾತ್ ಹೇಳಿ ಆರ್ಯೋಕ್ತಿ.ಅನ್ನ ಹಾಳು ಮಾಡುದು ಅನ್ನದ ನಿಂದೆಯೇ.ಅದರ ತಡೆವದು ಸಂಪ್ರದಾಯಕ್ಕೆ ವಿರೋಧ ಅಲ್ಲ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗೋಪಾಲಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

  1. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VN:F [1.9.3_1094]
    Rating: +1 (from 1 vote)

    ಸರಿಯಾದ ಮಾತು ಮಾವಾ°…
    ಒಪ್ಪಿದೆ.

    [ಉತ್ತರುಸಿ]

  2. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: +1 (from 1 vote)

    ಎಲ್ಲೋರು ನೆಂಪಿಲಿ ಮಡಿಕ್ಕೊಳ್ಳೆಕ್ಕಾದ ಸಂದೇಶ.

    [ಉತ್ತರುಸಿ]

  3. ಚುಬ್ಬಣ್ಣ
    ಚುಬ್ಬಣ್ಣ
    VN:F [1.9.3_1094]
    Rating: +5 (from 5 votes)

    ಸತ್ಯವಾದ ಮಾತು ಮಾವಾ..
    ಇ೦ದ್ರಾಣ ಆಡ೦ಬರದ ಜಗತ್ತಿಲ್ಲಿ, ನಾವು ಕ೦ಡರೂ ಕಾಣದ್ದಾ೦ಗೆ ಮಾಡ್ತ ವಿಚಾರವ ಸರಿಯಾಗಿ ಚಿ೦ತನೆ ಮಾಡಿದ್ದಿ ಮಾವಾ.
    ಆಹಾರ ಮಿತವಾಗಿ ತೊಕ್ಕೊ೦ಡರೆ ಹಿತ..!!
    ನಿ೦ಗೊ ಹೇಳಿದಾ೦ಗೆ, ಇ೦ದು ಜ೦ಬ್ರಗಳಲ್ಲಿ ಒತ್ತಾಯ ಮಾಡಿ ಬಳುಸಿ ಹಾಳು ಮಾಡುದೇ ಹೆಚ್ಚು..!!

    ಒ೦ದು ಮುಷ್ಟಿ ಅಕ್ಕಿ ನಾವಗೆ ಸಿಕ್ಕೆಕಾರೆ, ಅದರ ಹಿ೦ದೆ ಪರಿಶ್ರಮ ಪಟ್ಟವು ಬೇಕಾಷ್ಟು ಜೆನ ಇದ್ದವು..

    ಅಕ್ಕೆಯ ಬೆಳೆದ ರೈತ,ಅವ೦ಗೆ ಬೆನ್ನು ಕೊಟ್ಟ ಎತ್ತು,
    ಅಕ್ಕೆಯ ಮಾರು ಕಟ್ಟೆಗೆ ತ೦ದ ಕೂಲೆ,
    ಅಕ್ಕೆಯ ಅ೦ಗಡಿ೦ದ ಮನೆಗೆ ದುಡುದು ತಪ್ಪ ಅಪ್ಪ..!
    ಅಕ್ಕೆಯ ಬೇಶಿ ತಿನ್ನುಸುವ ಅಬ್ಬೆ..!!

    ಹೀ೦ಗಿಪ್ಪ ಒ೦ದು ಸ೦ಕೋಲೆ ಇಪ್ಪಗ, ಅಶನ ಸುಮ್ಮನಾರು ಹಾಳು ಮಾಡುಲೆ ಮನಸ್ಸಾದರೂ ಹೇ೦ಗೆ ಬತ್ತೊ..! :(

    ಸುಮಾರು 40-50 ಗಳ ಹಿ೦ದ್ದೆ ಎನ್ನ ಅಜ್ಜ೦ದ್ರ ಕಾಲಲ್ಲಿ ಒ೦ದು ಹೊತ್ತು ಊಟಕ್ಕು ಕಷ್ಟ ಅಡಾ..!
    ಮೊದಲಿ೦ಗೆ ಹೀ೦ಗಿಪ್ಪ ಬಗೆ ಬಗೆಯ ಆಡ೦ಬರದೂಟ ಇತ್ತಿದ್ದಿಲ್ಲೆ ಅಡ, ಇದು ಇತ್ತೀಚಿಗೆ ಸುರುವಾದ್ದು ಹೇಳುತ್ತವು ಎನ್ನ ಅಪ್ಪ.. ಇ೦ದು ದೇವಸ್ತಾನ೦ಗಳಲ್ಲಿ ಇಪ್ಪ ಸಾಧಾರಣ ಊಟವೇ??,ಇ೦ದ್ರಾಣ ಅ೦ದ್ರಾಣ ಮೃಷ್ಟಾನ್ನ ಭೋಜನ ಅಡ?

    “ಅನ್ನದ ಬೆಲೆ ತಿಳಿಯೆಕಾದರೆ, ಅದರ ಕಳಕೊ೦ಡವರ ನೋಡಿತಿಳಿಯೆಕು.!” – ಹೇಳಿ ಎನ್ನ ಅಪ್ಪ ಹೇಳ್ತವು..

    |ಹರೇ ರಾಮ|

    [ಉತ್ತರುಸಿ]

    ಮಂಗ್ಳೂರ ಮಾಣಿ ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಇನ್ನು ಒತ್ತಾಯಲ್ಲಿ ಹೋಳಿಗೆ ಬಳುಸಿಕ್ಕಲೆ ಗೊಂತಿಲ್ಲೆ… ;)

    [ಉತ್ತರುಸಿ]

  4. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.3_1094]
    Rating: +1 (from 1 vote)

    ತುಂಬಾ ಒಳ್ಳೆ ಚಿಂತನೆ… “ಆಹಾರ ಹಾಳು ಮಾಡುದೂ,ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು” ಎರಡುದೆ ನಾವು ಇನ್ನೊಬ್ಬರ ಆಹಾರವ ಕಸಿದುಗೊಂಡ ಹಾಂಗೆ…

    [ಉತ್ತರುಸಿ]

  5. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +2 (from 2 votes)

    ಒಳ್ಳೆ ವಿಚಾರ ಗೋಪಾಲ.
    ಎಲ್ಲರೂ ಈ ಬಗ್ಗೆ ಅಲೋಚನೆ ಮಾಡಿ ಕರ್ಯಗತ ಮಾಡೆಕಾದ್ದೇ.
    ಮಕ್ಕೊಗೆ ಮನೆಲಿ ಇದರ ಪಾಠ ಮಾಡೆಕ್ಕು. ಸಣ್ಣ ಇಪ್ಪಂದಳೇ, ಊಟ ಬಿಟ್ಟು ಹೋಪಲಾಗ ಹೇಳ್ತರ ಮನದಟ್ಟು ಮಾಡಿ ಅದರ ಜೀವನಲ್ಲಿ ರೂಢಿಮಾಡಿಸಿ ಬಿಡೆಕು.
    ಹಾಂಗೆ ನೋಡಿರೆ ಹವ್ಯಕರ ಜೆಂಬಾರಂಗಳಲ್ಲಿ (ಬೇರೆ ಬ್ರಾಹ್ಮರ ಊಟಕ್ಕೆ ಹೋಲಿಸಿರೆ) ಮಾಡುವ ಭಕ್ಷ್ಯಂಗೊ ಕಮ್ಮಿಯೇ ಹೇಳ್ಲಕ್ಕು.
    ಆದರೂ ಬಾಳೆ ಎಲೆಲಿ ಬಿಟ್ಟು ಹೋದ್ದವ ಕಾಂಬಗ ಬೇಜಾರು ಆವ್ತು.
    ಒಂದು ಕಾಳು ಒಳಿಶಿರೆ ಎರಡು ಕಾಳು ಬೆಳದ್ದಕ್ಕೆ ಸಮ ಹೇಳ್ತರ ಎಲ್ಲರೂ ಅರ್ಥೈಸಿಗೊಳೆಕ್ಕು.

    [ಉತ್ತರುಸಿ]

    ಎಸ್.ಕೆ.ಗೋಪಾಲಕೃಷ್ಣ ಭಟ್ಟ ಉತ್ತರ ಕೊಟ್ಟದು:
    ಗೋಪಾಲಣ್ಣ

    VA:F [1.9.3_1094]
    Rating: +1 (from 1 vote)

    ಸರಿ.ನಾಲ್ಕೈದು ಸ್ವೀಟು ಮಾಡಿಸುವ ಬ್ರಾಹ್ಮರೂ ಇದ್ದವು.ಅವಕ್ಕೆ ಹೋಲಿಸಿರೆ ನಾವು ಸರಳ ಜೀವಿಗೊ.ಸಹೃದಯ ವಿಮರ್ಶೆಗೆ ಧನ್ಯವಾದ ಎಲ್ಲರಿಂಗೂ.

    [ಉತ್ತರುಸಿ]

  6. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +1 (from 1 vote)

    ಮರ್ಜಿಗೆ ಬೇಕಾಗಿ ಕೆಲವರ ಹಲವು ಕರ್ಚಿಗೊಕ್ಕೆ ಕಡಿವಾಣ ಸ್ವಯಂ ಚಿಂತಿಸಿ ಮಾಡೆಕ್ಕಾದ್ದು ಅಗತ್ಯ ಇದ್ದು. ಬೈಲಿಲಿ ಈ ವಿಶಯ ಬೆಳಕು ಚೆಲ್ಲಿದ್ದು ಒಳ್ಳೆದಾಯಿತು. ಇದರ ಹಾಂಗೇ ಹಬ್ಬಹರಿದಿನ ಬಂತೆಂದರೆ ಪೇಟೆಗಳಲ್ಲಿ ನಡವ ಕುಂಬಳಕ್ಕಾಯಿ, ತೆಂಗಿನಕ್ಕಾಯಿ, ಸಿಹಿತಿಂಡಿ, ಪಟಾಕಿ, ಫಲಪುಷ್ಪಂಗಳ ಬಳಕೆಲಿಯೂ ಜನಂಗೊ ಸರಕಾರ ಸಮಾಜ ಚಿಂತುಸೆಕ್ಕಾಗಿದ್ದು. ಕೃಷಿ ಬವಣೆ, ಬಡತನ, ಖಜಾನೆ ಕಾಲಿ ಇತ್ಯಾದಿ ಬೃಹತ್ ಸಮಸ್ಯೆ ನಮ್ಮ ಕಣ್ಮುಂದೆ ಇಪ್ಪಗ ಸಮಾಜ ಬಾಂಧವರು ಕಾಳಜಿ ವಹಿಸಿ ಕಾರ್ಯಪ್ರವೃತ್ತರಾಯೇಕು. ಅಂತೇ ಮಾಡುವ ಇಂತೀ ಕರ್ಚುಗಳ ಹಿತಮಿತಿಗೆ ತಂದರೆ ದೇಶದ ಸಂಪತ್ತು ಉಳ್ಸಿ ಮುಂದಂಗೆ ವಿನಿಯೋಗಿಸೆಕ್ಕಾಗಿದ್ದು. ಬೈಲಿನ ಓದುಗರಾದ ನಮ್ಮೆಲ್ಲರಿಂಗೂ ಈ ಕರ್ತವ್ಯ ಪ್ರಜ್ಞೆ ಸದಾ ನೆಂಪಿರಳಿ ಹೇಳಿ ಆಶಿಸುವದು – ‘ಚೆನ್ನೈವಾಣಿ’

    [ಉತ್ತರುಸಿ]

  7. ಕೆ.ಜಿ.ಭಟ್
    ಕೇಜಿಮಾವ°
    VA:F [1.9.3_1094]
    Rating: +1 (from 1 vote)

    ಇಂದು ಹೆಚ್ಹು ಬಗೆ ಮಾಡಿರೆ ತಿಂಬ ಯೋಗ್ಯತೆ ಇಪ್ಪವೂ ಕಮ್ಮಿಯೆ.ಎಲ್ಲೊರೂ ಪಥ್ಯ ಮಾಡೆಕ್ಕಾದವೇ.ಒಂದೋ ತೂಕ ಜಾಸ್ತಿ ಅಪ್ಪಲಾಗ ಅಲ್ಲ ಬಿಪಿಯೋ ಡಯಬಿಟಿಸೋ ಇದ್ದ ಕಾರಣ ಡಾಕ್ಟ್ರ° ಹೇಳಿದ್ದ ಹೇಳಿಯೋ.ತಿಂಬ ಯೋಗ್ಯತೆ ಇಪ್ಪವು ಮಕ್ಕಳೇ ಸರಿ.ಆವು ಇಂದು ಜೆಂಬ್ರಂಗೊಕ್ಕೆ ಬತ್ತವಿಲ್ಲೆ,ಅಲ್ಲದೋ?

    [ಉತ್ತರುಸಿ]

  8. ಶೇಡಿಗುಮ್ಮೆ ಪುಳ್ಳಿ
    ಶೇಡಿಗುಮ್ಮೆ ಪುಳ್ಳಿ
    VN:F [1.9.3_1094]
    Rating: 0 (from 0 votes)

    ಈ ವಿಶಯಕ್ಕೆ ನಮ್ಮದೂ ಒಂದು ಓಟು ಇದ್ದು….
    ನೇರ್ಪಕೆ ಉಂಬಲೆಡಿಯದ್ದರುದೇ ಕಂಡದು ಪೂರಾ ಬೇಕೂದು ಬಾಳೆಲಿ ಹಾಕುಸಿಗೊಂಡು ಅಂತೇ ಬಿಟ್ಟಿಕ್ಕಿ ಏಳುವವು ಎಷ್ಟೋ ಜೆನ ಇದ್ದವು…. ಹು!

    [ಉತ್ತರುಸಿ]

  9. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಹಂತಿಲಿ ಉಂಬಲೆ ಕೂದು, ಉಂಡ ಬಾಳೆಲೆಲಿ ಒಂದೆರಡು ಬೇವಿನ ಸೊಪ್ಪುದೆ, ಮೆಣಸಿನ ತುಂಡುಗಳ ಮಾಂತ್ರ ಬಿಟ್ಟು ಮೇಲೇಳುವಗ ಅಪ್ಪ ಕೊಶಿಯೇ ಬೇರೆ ಎಂತ ಹೇಳ್ತಿ ? ಜೆಂಬಾರಕ್ಕೆ ಮಾಡಿದ ಎಲ್ಲದರದ್ದು ರಜಾ ರುಚಿ ನೋಡಿ ಅಪ್ಪಗ ಹೊಟ್ಟೆ ತುಂಬುತ್ತು ಹೇಳ್ತವೇ ಈಗ ಎಲ್ಲೋರು. ಎಲ್ಲೋರೂ ವಿಚಾರ ಮಾಡೆಕಾದ ಒಂದು ಒಳ್ಳೆ ವಿಷಯದ ಬಗ್ಗೆ ಗೋಪಾಲಣ್ಣ ಬರದ್ದದು ಲಾಯಕಾಯಿದು.

    [ಉತ್ತರುಸಿ]

  10. ಸಿಂಧೂ
    VA:F [1.9.3_1094]
    Rating: 0 (from 0 votes)

    ಸತ್ಯ… ಬಳುಸುವೋರು ಹೆಚ್ಚಾಗಿ ಫಂಕ್ಷನ್ ಮಾಡುವೋರಲ್ಲದ್ದ ಕಾರಣ ಬೇಡ ಹೇಳೀರೂ ಬಳುಸುದಾ ಏನಾ…

    [ಉತ್ತರುಸಿ]

  11. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: +1 (from 1 vote)

    ಒಳ್ಳೆ ಚಿಂತನಾರ್ಹ ವಿಷಯ ಮಾವ. ಜೆಂಬ್ರಂಗಳಲ್ಲಿ ಅಂತೆ ಆಹಾರ ಹಾಳು ಮಾಡುವ ಬದಲು ಎಷ್ಟು ಬೇಕೋ ಅಷ್ಟೇ ಬಳುಸಿ, ಒಳುದ್ದದರ ಹತ್ರಲ್ಲಿಪ್ಪ ಅನಾಥಾಶ್ರಮಕ್ಕೊ, ಅಥವಾ ಆರಾರು ಪಾಪದೋರಿಂಗೊ ಮಣ್ಣ ಕೊಟ್ರೆ ನಮ್ಮ ಲೆಕ್ಕಲ್ಲಿ ಅವುದೇ ಪಾಯಸ ಉಂಡಾಂಗಾವುತ್ತು ಅಲ್ಲದಾ?

    [ಉತ್ತರುಸಿ]

    ಮಂಗ್ಳೂರ ಮಾಣಿ ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಇದಾ ಹೀಂಗೆಲ್ಲ ಹೇಳಿ ತಪ್ಪುಸಿಯೊಂಬಲೆ ಎಡಿಯ ಅತೋ.. ;)
    ನಾವು ಬಳುಸುದು ಬಳುಸುದೇ … ;)

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಮತ್ತೆ ಮನೆ ಎಜಮಾನ ಕಮ್ಮಿ ಬಳ್ಸಿ.. ಕಮ್ಮಿ ಬಳ್ಸಿ…, ಒಳುದ್ದರ ಅನಾಥಾಶ್ರಮಕ್ಕೆ ಕೊಡ್ಳೆ ಬೇಕು ಹೇಳ್ವ ಸ್ಟೈಲ್, ಪೈಪೋಟಿ ಸುರುವಕ್ಕಪ್ಪೋ!!!

    [ಉತ್ತರುಸಿ]

    ಮಂಗ್ಳೂರ ಮಾಣಿ ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.3_1094]
    Rating: 0 (from 0 votes)

    ಅಪ್ಪನ್ನೇ…

    [ಉತ್ತರುಸಿ]

    jayashree.neeramoole ಉತ್ತರ ಕೊಟ್ಟದು:
    ಜಯಶ್ರೀ ನೀರಮೂಲೆ

    VA:F [1.9.3_1094]
    Rating: 0 (from 0 votes)

    ಒಪ್ಪಣ್ಣ ಹೇಳಿಕೊಟ್ಟ ‘ಸಣ್ಣ ನೂರು’ ವಿಧಾನ ಎಲ್ಲ ಬಳಸಿಗೊಂಡು ನಾವೇ ಜೆಮ್ಬ್ರ ಸುಧಾರುಸುವ ಹಾಂಗೆ ಆದರೆ ಈ ಸಮಸ್ಯೆಗ ಎಲ್ಲ ತಕ್ಕ ಮಟ್ಟಿ೦ಗೆ ಪರಿಹಾರ ಅಕ್ಕೋ ಹೇಳಿ…

    [ಉತ್ತರುಸಿ]

  12. ರಘು ಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: 0 (from 0 votes)

    ಯೋಚನೆ ಮಾಡಿ ನಮ್ಮ ನಿತ್ಯಜೀವನಲ್ಲಿ ಅಳವಡಿಸೆಕ್ಕಾದ ವಿಷಯ.ಆಹಾರ ಹಾಳು ಮಾಡುಲೆ ಆಗ,ಒಳುದ್ದದರ ಇಡ್ಕದ್ದೆ ಹಶು ಹೊಟ್ಟೆಗೆ ಎತ್ತುಸುವ ಪ್ರಯತ್ನವನ್ನೂ ಮಾಡೇಕು.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME