Oppanna.com

ಸಿತಾರ್ ಮಾಂತ್ರಿಕ ಪಂಡಿತ್|ರವಿಶಂಕರ್ ಇನ್ನಿಲ್ಲೆ

ಬರದೋರು :   ಶುದ್ದಿಕ್ಕಾರ°    on   12/12/2012    6 ಒಪ್ಪಂಗೊ

ಉತ್ತರಾದಿ ಸಂಗೀತದ ಮೇರು ಕಲಾವಿದ, ಸಿತಾರ್ ಮಾಂತ್ರಿಕ  ಪಂಡಿತ್|ರವಿಶಂಕರ್ ಇನ್ನಿಲ್ಲೆ.
ಅವರ ನಿಧನಂದಾಗಿ ಭಾರತೀಯ ಸಂಗೀತಕ್ಕೆ ತುಂಬಲಾರದ ನಷ್ಟ ಆಯಿದು.
ಭಾರತೀಯ ಶಾಸ್ತ್ರೀಯ ಸಂಗೀತವ ಲೋಕೋತ್ತರ ಮಾಡ್ಳೆ ಪಂಡಿತ್ ತುಂಬಾ ಸೇವೆ ಮಾಡಿತ್ತಿದ್ದವು.
ಇವು ಲೋಕ ಇಡೀ ಅಭಿಮಾನಿಗಳ ಹೊಂದಿತ್ತಿದ್ದವು.
ಅವರ ಆತ್ಮಕ್ಕೆ ಶಾಂತಿ ಕೊಡ್ಳಿ ಹೇದು ನಮ್ಮ ಪ್ರಾರ್ಥನೆ.

ಹೆಚ್ಚಿನ ಮಾಹಿತಿಗೆ
http://ravishankar.org/
http://en.wikipedia.org/wiki/Ravi_Shankar

6 thoughts on “ಸಿತಾರ್ ಮಾಂತ್ರಿಕ ಪಂಡಿತ್|ರವಿಶಂಕರ್ ಇನ್ನಿಲ್ಲೆ

  1. ಅವರ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

    1. ಸಂಗೀತ ಕುಲಪಿತಾಮಹ, ಲೋಕ ಕಂಡ ಸಿತಾರ್ ಮಾಂತ್ರಿಕ, ಸಿತಾರಿಂಗೆ ಪರ್ಯಾಯವೇ ಆಗಿಪ್ಪ ಲೋಕವಿಖ್ಯಾತ, ಗ್ರಾಮೀ ಅವಾರ್ಡ್, ಸಂಗೀತ ನಾಟಕ ಅಕಾಡಮೀ ಅವಾರ್ಡ್, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ಕಾಳಿದಾಸ ಸಮ್ಮಾನ್, ಇಂಡಿಯಾ ಗೌರವಾನ್ವಿತ ಪ್ರಜೆ, ಪಾರ್ಲಿಮೆಂಟ್ ಸದಸ್ಯ, ರಮೋನ್ Magsaysay ಅವಾರ್ಡ್, Honorary Doctor of Laws from the University of Melbourne, Australia, ಮೊದಲಾದ ಪುರಸ್ಕಾರಂಗಳ ಮಾಲೆ ಸಂಪಾಧಿಸಿದ ಶ್ರೇಷ್ಠ ಪುಣ್ಯಾತ್ಮ, ಆಲ್ಇಂಡಿಯಾ ರೇಡಿಯೋ ಸಂಗೀತ ನಿರ್ದೇಶಕ, ಭಾರತಾಂಬೆಯ ಹೆಮ್ಮೆಯ ಪುತ್ರರತ್ನ, ಜನ್ಮಸಾರ್ಥಕ್ಯ ಮಾಡಿದ ವಾರಣಾಸಿಯ ಬ್ರಾಹ್ಮಣ ಕುಟುಂಬದ ವಿಪ್ರೋತ್ತಮ ೯೨ ವರ್ಷದ ಪಂಡಿತ್ ರವಿಶಂಕರ್ ಅವು ಜನ್ಮದೌತ್ಯ ಮುಗಿಸಿ ಅಮೇರಿಕಾದ ಸಾಂಟಿಯಾಗೋಲ್ಲಿ ಅನಂತತೇಲಿ ಲೀನವಾಗಿ ಸಾಯೂಜ್ಯ ಪಡ ಕೊಂಡವು. ಹಿರಿಯ ಒಬ್ಬ ಸಂಗೀತಜ್ಜನ ಕೊಂಡಿ ಕಳಚ್ಚಿದ್ದು ಅಂತರಾಳಲ್ಲಿ ಒಂಟಿತಂತಿ ಮೀಂಟುತ್ತಾ ಇದ್ದು. ಆ ದಿವ್ಯ ಅನರ್ಘ್ಯ ಮಹಾ ಚೇತನಕ್ಕೆ ಅನಂತ ಸಹಸ್ರ ಪ್ರಾಣಾಮಂಗೊ. ಸರ್ವಶಕ್ತ ಜಗನ್ನಿಯಾಮಕ ಜಗದೀಶ್ವರ ಆ ಪಿತಾಮಹನ ಆತ್ಮಕ್ಕೆ ನಿತ್ಯ ಅನಂತ ಶಾಶ್ವತ ಶಾಂತಿ ಕೊಡಲಿ ಹೇಳಿ ಪ್ರಾರ್ಥಿಸಿಯೊಂಬೊ.

  2. 🙁
    ನಮನಗಳು. ಅವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ

    1. ಹಿ೦ದುಸ್ಥಾನಿ ಸ೦ಗೀತದ ಸುಮೇರು ಧರಾಶಾಯಿ ಆತು. ದೇವೇ೦ದ್ರ೦ಗೆ ದಿನಾ ದೇವರ್ಕಳ ಸ೦ಗೀತ ಬೋರಾಗಿ ಇವರ ಸಿತಾರ್ ವಾದನ ಕೇಳುವೋ ಹೇದು ಕರೆಶಿಗೊ೦ಡಿಕ್ಕು! ಒಳ್ಳೆ ಗೌರವಾದರ ಅಲ್ಲಿಯೂ ಅವಕ್ಕೆ ಸಿಕ್ಕಲಿ. ಅವರ ದಿವ್ಯಾತ್ಮಕ್ಕೆ ಚಿರಶಾ೦ತಿ ಸಿಕ್ಕಲಿ. ಪುನರ್ಜನ್ಮ ಏನಾದರೂ ಸಿಕ್ಕಿರೆ ಈ ಪುಣ್ಯಕರ್ಮಭೂಮಿಲೇ ಸಿಕ್ಕಲಿ.ಆ ದಿವ್ಯಾತ್ಮಕ್ಕೆ ಚರಮ ಶ್ರದ್ಧಾ೦ಜಲಿ. ನಮೋನ್ನಮಃ

  3. ಭಾರತಾ೦ಬೆಯ ಕೊರಳ ಸರಲ್ಲಿ ಒ೦ದು ರತ್ನ ಕಮ್ಮಿಯಾತು.
    ಶೃದ್ಧಾ೦ಜಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×