Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

ಬರದೋರು :   ಬೊಳುಂಬು ಕೃಷ್ಣಭಾವ°    on   30/12/2013    3 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು
ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ |
ತತ್ರ ಕೋ ಮೋಹಃ ಕಶ್ಯೋಕ ಏಕತ್ವಮನುಪಶ್ಯತಃ ||೭||
ಸರ್ವಪ್ರಾಣಿಗಳಲ್ಲಿ ನೆಲೆಸಿಹುದೆನ್ನ ಆತ್ಮವೆ ಎನ್ನಲು
ಮೋಹವೆಲ್ಲಿದೆ? ಶೋಕವೆಲ್ಲಿದೆ? ಸರ್ವ ಸಮತೆಯ ಕಾಣಲು ||೭||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಜೀವಜಂತುಗಳಲ್ಲಿ ತನ್ನನ್ನೇ ಕಾಂಬವಂಗೆ ಮೋಹವೋ ಶೋಕವೋ ಇಲ್ಲದ್ದೆ ಎಲ್ಲವೂ ಸಮಾನವಾಗಿಪ್ಪದು ಅನುಭವಕ್ಕೆ ಬತ್ತು. ಮದಲೇ ಹೇಳಿದ ಹಾಂಗೆ ಇದು ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆಲಿ ಅಪ್ಪ ಅನುಭವ. ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಂಬಲೆ ಎಡಿವವ° ಯೋಗಿ ಹೇಳಿ ಭಗವದ್ಗೀತೆಯ ಆರನೆಯ ಅಧ್ಯಾಯದ ಇಪ್ಪತೊಂಬತ್ತನೆಯ ಶ್ಲೋಕಲ್ಲಿ ಭಗವಾನ್ ಹೇಳಿದ್ದ°.
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾsತ್ಮನಿ |
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ||
ಧ್ಯಾನಯೋಗಕ್ಕೆ ಮಾನಸಿಕವಾಗಿ ತಯಾರಾದವಂಗೆ ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಂಬಲೆ ಎಡಿತ್ತು. ತನ್ಮೂಲಕ ಪರಮಾತ್ಮನನ್ನೂ ಕಾಂಬಲೆ ಎಡಿತ್ತು. ಇದು ಸಾಧನೆಗೆ ಒಂದು ಸೋಪಾನ.
ಪರತತ್ತ್ವವಾದ ಪರಬ್ರಹ್ಮನ ಕಾಂಬಲೆ ತಪಸ್ಸು ಬೇಕಾವುತ್ತು. ಅದಕ್ಕೆ ಉಪಾಸನೆಯೇ ಮಾರ್ಗ. ತಪಸ್ಸಿಂದಲಾಗಿ ಮನಸ್ಸಿಂಗೆ ಏಕಾಗ್ರತೆಯೊದಗಿ ಸೃಜನಶೀಲ ಚೈತನ್ಯದ ಉದ್ದೀಪನ ಅಪ್ಪದರೊಟ್ಟಿಂಗೆ ಮನಸ್ಸೂದೆ ಸಂಸ್ಕಾರಗೊಳುತ್ತು. ಈ ರೀತಿಲಿ ಉಪಾಸನೆಯ ಮೂಲಕ ಪರತತ್ತ್ವದ ಅರಿವು ಬಂದಪ್ಪಗ ಮನಸ್ಸಿನ ಇಷ್ಟಾನಿಷ್ಟಂಗಳೋ, ಸುಖ-ದುಃಖಂಗಳೋ, ಆಕರ್ಷಣ-ವಿಕರ್ಷಣಂಗಳೋ ಅನುಭವಕ್ಕೆ ಬತ್ತಿಲ್ಲೆ, ಆಲೋಚನೆ ತಟಸ್ಥವಾಗಿರುತ್ತು. ಧ್ಯಾನಸ್ಥಿತಿಯ ಶಿಖರಾಗ್ರಲ್ಲಿ ಆನಂದ ಅನುಭವಕ್ಕೆ ಬತ್ತು. ಆದಿಯೋ ಅಂತ್ಯವೋ ಇಲ್ಲದ್ದ ಪರಮ ಚೇತನದ; ಪರಿಪೂರ್ಣತೆಯ ಅನುಭವ ಆವುತ್ತು.
ಗೀತ
ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ
ಕ್ಷಣದೊಂದು ಮಾಯೆಯಲಿ ಹತ್ತು ಹಲ ಬಣ್ಣಗಳ
ಸಿಂಪರಿಸಿ ಮೆರೆದವನು ನೀನಲ್ಲವೇ
ಹಲವಾರು ರೂಪಿನಲಿ ಧರಿಸಿ ಮಾರೊಡಲುಗಳ
ಅಳವಿರದೆ ಇತ್ತವನು ನೀನಲ್ಲವೇ
~~~

3 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

  1. ಗೀತದ ಚಿಂತನೆಯೂ ಒಪ್ಪ ಆಯಿದು.

    1. ಧನ್ಯವಾದಂಗೊ ತೆಕ್ಕುಂಜ ಮಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×