Oppanna.com

ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ

ಬರದೋರು :   ಶುದ್ದಿಕ್ಕಾರ°    on   08/06/2013    9 ಒಪ್ಪಂಗೊ

ಚೌಕ್ಕಾರಿನ ಶಂಕರನಾರಾಯಣ ಭಟ್, ವೀಣಾ ದಂಪತಿಯ ಸುಪುತ್ರ, ಕುಂಜಾರು ವೇಣುಗೋಪಾಲ (16 ವ) ಬೈಲಿಂಗೆ ಚಿರಪರಿಚಿತ ವ್ಯಕ್ತಿತ್ವ.
ಎರಡು ತಿಂಗಳಿನ ಹಿಂದೆಷ್ಟೇ ಅವನ ಕ್ಯಾನ್ಸರ್ ಹೋರಾಟಕ್ಕೆ ಸಹಾಯ ಮಾಡಿ -ಹೇಳಿ ಬೈಲಿಲಿ ನಾವು ಕೇಳಿಗೊಂಡಿದು. ನೂರಾರು ಜನ ಕೈಜೋಡುಸಿ ಸಹಸ್ರಾರು ರುಪಾಯಿ ಮೊತ್ತವ ಸೇರ್ಸಿದ್ದು.
ಆರೋಗ್ಯಕ್ಕೆ ಬೇಕಾದ ಕೆಲವು ಥೆರಪಿ / ಟ್ರೀಟ್-ಮೆಂಟ್ ಗೊ ನಡೆತ್ತಾ ಇದ್ದು – ಹೇಳ್ತ ವರ್ತಮಾನಂಗೊ, ಶುಭಶುದ್ದಿಗೊ ಬಂದುಗೊಂಡಿತ್ತು.
ಆದರೆ, ದೇವರಿಂಗೆ ಎಂತ ಅನುಸಿತ್ತೋ ಏನೋ. ಇಂದು ಸೆಡ್ಳಿನ ಹಾಂಗೆ ಬಂದದು ಒಂದು ಬೇಜಾರದ ಶುದ್ದಿ.

ವೇಣು ನಾದದ ಮುಗ್ಧತೆ
ವೇಣು ನಾದದ ಮುಗ್ಧತೆ

ಅನಿರೀಕ್ಷಿತ ಆರೋಗ್ಯ ವೈಪರೀತ್ಯಂದಾಗಿ ಇಂದು ಮಧ್ಯಾಹ್ನ ವೇಣುಗೋಪಾಲ ದೇವರ ಪಾದ ಸೇರಿದನಾಡ.
ಮಗನ ಅಗಲಿಕೆಯ ಬೇನೆಯ ತಡಕ್ಕೊಂಬ ಶಕ್ತಿ ಅಪ್ಪಮ್ಮಂಗೆ ಆ ದೇವರು ಕೊಡ್ಳಿ.
ವೇಣುಗೋಪಾಲನ ಆರೋಗ್ಯ ಸುಧಾರಣೆಗೆ ಬೈಲಿನ ಎಲ್ಲೋರುದೇ ಸೇರಿದ ಕೃತಜ್ಞತಾಭಾವ ಆ ಮನೆಯೋರಿಂಗೆ ಇದ್ದು.
ನಮ್ಮ ಕೈಲಾದ್ದರ ನಾವು ಮಾಡಿದ್ದು, ದೇವರ ಆಟಲ್ಲಿ ನಮ್ಮದೆಂತ ಇದ್ದು!

ಸೂ:

9 thoughts on “ಕುಂಜಾರು ಮಾಣಿ ವೇಣುಗೋಪಾಲಂಗೆ ಶ್ರದ್ಧಾಂಜಲಿ

  1. ಶೃದ್ಧಾ೦ಜಲಿ. ವೇಣುವಿನ ಆತ್ಮ ದೇವರ ಪಾದ ಸೇರಲಿ.
    ಎಲ್ಲಾ ವಿಧಿನಿಯಮ.

  2. ಮಾಣಿಯ ಆತ್ಮಕ್ಕೆ ಶಾಂತಿ ಸಿಕ್ಕಲಿ, ಮನೆಯವಕ್ಕೆ ಈ ಧುಃಖವ ಸಹಿಸುವ ಶಕ್ತಿಯ ದೇವರು ಕೊಡಲಿ.

  3. ಶುದ್ದಿ ಕೇಳಿ ತುಂಬ ಬೇಜಾರು ಆತು. ಮಾಣಿಯ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.

  4. harerama.
    dhukhava sahisuva shakthi aa shrirama karunisali.maneyoringe.
    harerama.

  5. ಈ ಚಿಗುರಳುದ ಸಂಕಟವ , ಬೇನೆಯ ಆ ಅಬ್ಬೆ-ಅಪ್ಪಂಗೆ ಸಹಿಸುವ ಶಕ್ತಿಯ ಪರಮಾತ್ಮ ಕೊಡಲಿ ಮಾಣಿಗೆ ಸಾಯುಜ್ಯ ಸಿಕ್ಕಲಿ ಹೇಳಿ ದೇವರಲ್ಲಿ ನಮ್ಮೆಲ್ಲರ ಪ್ರಾರ್ಥನೆ

  6. ಬಹಳ ಬೇಜಾರದ ಸಂಗತಿ.ಅವನ ಆತ್ಮಕ್ಕೆ ಶಾಂತಿ ಸಿಕ್ಕಲಿ.

  7. ಹರೇ ರಾಮ, ವೇಣುವ ಆತ್ಮಕ್ಕೆ ಶಾ೦ತಿ ಸಿಕ್ಕಲಿ.

  8. ನೈನ೦ ಛಿ೦ದ೦ತಿ ಶಸ್ತ್ರಾಣಿ, ನೈನ೦ ದಹತಿ ಪಾವಕಃ
    ನ ಚೈನ೦ ಕ್ಲೇದಯ೦ತ್ಯಾಪೋ, ನ ಶೋಷಯತಿ ಮಾರುತಃ!

    ಪುಣ್ಯವ೦ತ ಮಾಣಿ ಈ ಲೋಕದ ಕಷ್ಟ೦ಗಳ ೧೬ ವರುಷ ಮಾ೦ತ್ರ ಸಹಿಸಿ ದೇವರ ಹತ್ರೆ ಹೋದ. ಆದರೂ….. 🙁

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×