Oppanna.com

   ೨೦೧೮ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ

ಬರದೋರು :   ಶರ್ಮಪ್ಪಚ್ಚಿ    on   27/07/2018    4 ಒಪ್ಪಂಗೊ

          ೨೦೧೮ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ 

ಕುಂಬಳೆ ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾಮಂಡಲ ಸಹಯೋಗಲ್ಲಿ ಪ್ರತಿವರ್ಷ ಅಖಿಲಭಾರತ ಮಟ್ಟಲ್ಲಿ ನಡದುಬಪ್ಪ ಕೊಡಗಿನಗೌರಮ್ಮಕಥಾಸ್ಪರ್ಧೆ ಇವಾರಿಯೂ ಸಾಗಿಬಂದು ಅದರ ಫಲಿತಾಂಶ ನಮ್ಮ ಬಯಲಿಂಗೆ ಹಾಕ್ತಾ ಇದ್ದೆ.

ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ 2018
ಅಕ್ಷತಾ ರವಿರಾಜ್ ಪೆರ್ಲ

ಪ್ರಥಮ- ಶ್ರೀಮತಿ ಅಕ್ಷತಾ ರವಿರಾಜ್ ಪೆರ್ಲ,  ಇವರ ’’ಕಾಸಿನಸರ” ಕಥೆಗೆ ಈ ಪ್ರಶಸ್ತಿ ಸಿಕ್ಕಿದ್ದು.( ಪ್ರಶಸ್ತಿ ಹೇಳುದು ಪ್ರಥಮ ಬಹುಮಾನವ, ಎರಡ್ನೇ ಮೂರನೇ ಬಹುಮಾನಂಗೊ ಪ್ರಶಸ್ತಿ ಅಲ್ಲ. ಇವಕ್ಕೆ ಇನ್ನು ಮುಂದೆ ಈ ವೇದಿಕೆಲಿ ಭಾಗವಹಿಸಲೆ ಅವಕಾಶ ಇದ್ದು.) ಪೆರ್ಲದ ಕಯ್ಯಂಕೂಡೆಲು ಶ್ರೀಯುತ ಗಣರಾಜ ಭಟ್ಟರ ಹೆಂಡತಿಯಾದ ಇವು ’ಅಕ್ಷರ’ ಹೇಳುವ ಕಾವ್ಯ ನಾಮಂದ ಗುರುತಿಸಿಗೊಂಡು ಬರೆವದಲ್ಲದ್ದೆ ವಿವಿದೆಡೆ ಸಾಹಿತ್ಯಗೋಷ್ಟಿಯ ಅತಿಥಿಯಾಗಿಯೂ ಭಾಗವಹಿಸಿದ ಅಕ್ಷತಂಗೆ ಎರಡು ವರ್ಷ ಹಿಂದೆ ಇದೇ ವೇದಿಕೆಲಿ ದ್ವಿತೀಯ ಬಹುಮಾನ ಸಿಕ್ಕಿದ್ದು.ತುಳು ಸಾಹಿತ್ಯ ಪ್ರಶಸ್ತಿಯೂ ಬಂದ ಅಕ್ಷತಾ ಇತ್ತೀಚೆಗೆ ಮಂಗಳೂರು ಆಕಾಶವಾಣಿಯ ನಿರ್ಮಾಣ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿಪ್ಪ ಇವರ ’ಕಂದೀಲು’ ಸಣ್ಣಕತಾ ಸಂಕಲನ ಬಿಡುಗಡೆಗೊಂಡಿದು.

 

 

ದ್ವಿತೀಯ-ಶ್ರೀಮತಿ ಅನ್ನಪೂರ್ಣ ಬೆಜಪ್ಪೆಯವರ ’ಒಲವಿನ ಬಂಧ’ ಕತೆ ಎರಡ್ನೇ ಬಹುಮಾನ ಗೆದ್ದಿದು. replica watches UK

ಅನ್ನಪೂರ್ಣ ಬೆಜಪ್ಪೆ

ಪ್ರಸಿದ್ಧ ಜ್ಯೋತಿಷಿ ಕಿದೂರು ಬೆಜಪ್ಪೆ ಶ್ರೀಯುತ ಚಂದ್ರಶೇಖರವರ ಪತ್ನಿಯಾಗಿ ಗೃಹಿಣಿಯಾದ ಅನ್ನಪೂರ್ಣ ಎರಡು ವರ್ಷಂದ ಸಾಹಿತ್ಯ ಕ್ಷೇತ್ರಲ್ಲಿ ಕಾಲೂರಿ ಹಲವಾರು ಕವನ, ಲೇಖನ, ಮಿನಿಕತೆಗಳ ಪತ್ರಿಕೆಗಳಲ್ಲೂ ಸಾಮಾಜಿಕ ಜಾಲತಾಣಲ್ಲಿಯೂ ನಮ್ಮ ಒಪ್ಪಣ್ಣ ಬಯಲಿಲ್ಲಿಯೂ ಬರದು ಓದುಗರಿಂಗೆ ಪರಿಚಯಾದ  ಹೊಸ ಲೇಖಕಿ.

 

 

 

ಮನೋರಮಾ ಬಿ.ಎನ್

ತೃತೀಯ-ಶ್ರೀಮತಿ ಮನೋರಮ ಬಿ.ಎನ್. ಬರದ ’ಶಾರದೆಶಾಪ’ ಕತಗೆ ಮೂರ್ನೇ ಬಹುಮಾನ ಬಯಿಂದು.

ಲೇಖಕಿಯೂ ವೃತ್ತಿಲಿ ಕಲಾಸಂಶೋಧಕಿಯೂ ನೂಪುರಭ್ರಮರಿ ಪತ್ರಿಕೆ ಸಂಪಾದಕಿಯೂ ಆದ ಇವು ಸಾಹಿತ್ಯಕ್ಷೇತ್ರಲ್ಲಿ ಪುಸ್ತಕವನ್ನೂ ಬರದ್ದವು.

 

ತೀರ್ಪುಗಾರರಾಗಿ ಸಹಕರಿಸಿದೊವುಃ- ಪ್ರಸಿದ್ಧ ಸಾಹಿತಿ ನಿವೃತ್ತ ಅಧ್ಯಾಪಕರೂ ಆದ ನವಗೆ ಪರಿಚಯದ ಶ್ರೀಯುತ ಬಾಲಮಧುರಕಾನನ, ಹಾಂಗೇ ಕಲ್ಲಕಟ್ಟ ಶಾಲೆಯ ಹೆಡ್ ಮಾಸ್ಟ್ರು ಶ್ರೀ ಶ್ಯಾಮಪ್ರಸಾದ ಕುಳಮರ್ವ, ಇನ್ನೊಬ್ಬರು ಕನ್ನಡಸಾಹಿತ್ಯಪರಿಷತ್ತು ಕಾಸರಗೋಡು ಜಿಲ್ಲೆಯ ಅಧ್ಯಕ್ಷರಾದ ಎಸ್.ವಿ.ಭಟ್.ಕಾಸರಗೋಡು.

ವಿಜೇತರಿಂಗೆ ಅಭಿನಂದನೆ ಹೇಳ್ತಾ ತೀರ್ಪುಗಾರರಿಂಗೆ ಧನ್ಯವಾದ ಹೇಳ್ತಾ …

ಕತಾಸ್ಪರ್ಧೆಯ ಸಂಚಾಲಕಿ , ವಿಜಯಾಸುಬ್ರಹ್ಮಣ್ಯ,ಕುಂಬಳೆ.

—-೦—-

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “   ೨೦೧೮ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ

  1. ವಿಜೇತರಿಂಗೆ ಅಭಿನಂದನೆಗೊ.ಕತೆಗಳ ಈ ಬೈಲಿಲಿ ಹಾಕಿ.ಓದೆಕು.

    1. ಕತೆಗಳ ಪ್ರತಿವರ್ಷ ಹಾಕುವಾಂಗೆ ಇವಾರಿಯೂ ಹಾಕುವೊಂ.ಗೋಪಾಲ.

  2. ಸ್ಪರ್ಧೆಲಿ ಭಾಗವಹಿಸಿದವಕ್ಕೆ,ಬಹುಮಾನ ವಿಜೇತರಿಂಗೆ ಅಭಿನಂದನೆಗೊ.

  3. ಕೊಡಗಿನ ಗೌರಮ್ಮ ಪ್ರಶಸ್ತಿ ಹಾಂಗೂ ಬಹುಮಾನ ಸಿಕ್ಕಿದ ಲೇಖಕಿಯರಿಂಗೆ ಧನ್ಯವಾದಂಗೊ.
    ಸಂಚಾಲಕಿ- ವಿಜಯತ್ತಿಗೆಯ ಪರಿಶ್ರಮಕ್ಕೆ ನಮೋ ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×