Oppanna.com

ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ)

ಬರದೋರು :   ಚೆನ್ನೈ ಬಾವ°    on   30/10/2020    0 ಒಪ್ಪಂಗೊ

ಚೆನ್ನೈ ಬಾವ°

ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ)

ತೊಳಶಿಕಟ್ಟೆ ಹತ್ತರೆ ಬಲೀಂದ್ರನ ಸ್ಥಾಪನೆ ಮಾಡಿ ಎದುರೆ ಕೂದುಗೊಂಡು

ಆಚಮ್ಯ.,

ಆಚಮನ ಮಾಡಿ, ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀಬಲೀಶ್ವರಾಯ ನಮಃ | ಹೇಳಿಗೊಂಬದು.

ಗಿಂಡಿಗೆ ತುಳಸಿಹೂಗಂಧಾಕ್ಷತೆಯನ್ನು ಹಾಕೆಕು –

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಎಡದಕೈಲಿ ಅಕ್ಷತೆ ಮಡಿಕ್ಕೊಂಡು ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಲೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವುದು.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

 ………… ನಾಮ ಸಂವತ್ಸರೇ  …….. ಅಯನೇ  …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ  ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀಬಲೀಂದ್ರಪ್ರೀತ್ಯರ್ಥಂ ಶ್ರೀಬಲೀಂದ್ರಪೂಜಾಂ ಕರಿಷ್ಯೇ || (ಕೈಲಿಪ್ಪ  ಅಕ್ಷತೆಯ ಬಲೀಂದ್ರಂಗೆ ಹಾಕುವದು)

ಗಣಪತಿ ಸ್ಮರಣೆ : –

ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀ ಮಹಾಗಣಪತಿಸ್ಮರಣಂ ಕರಿಷ್ಯೇ |

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||

ಕೈಮುಕ್ಕೊಂಬದು –

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಶ್ರೀ ವಿಘ್ನೇಶ್ವರಾಯ ನಮಃ , ಅವಿಘ್ನಮಸ್ತು ||

ಶ್ರೀಬಲೀಂದ್ರಪೂಜೆ-

ಶ್ರೀ ಬಲೀಂದ್ರಪೂಜಾಂ ಕರಿಷ್ಯೇ (ಬಲೀಂದ್ರಂಗೆ ಹೂಗು ಹಾಕುವುದು)

ಕೈಯಲ್ಲಿ ಹೂಗಂಧಾಕ್ಷತೆಯನ್ನು ತೆಗೆದುಕೊಂಡು ಬಲೀಂದ್ರಂಗೆಅರ್ಚನೆಮಾಡೆಕು –   

ಓಂ ಸುರಾಂತಕಾಯ ವಿದ್ಮಹೇ ವಿಷ್ಣುಭಕ್ತಾಯ ಧೀಮಹಿ | ತನ್ನೋ ಬಲಿಃ ಪ್ರಚೋದಯಾತ್ ||

ನಿಶಾಚರೋ ದೈತ್ಯಪತಿಸ್ತ್ಪಪೋಧನೋ ಮಾನೀ
ಧನಾಢ್ಯೋ ಬಹುಧೈರ್ಯವಾನ್ ಬಲೀ |
ಶುಕ್ರಸ್ಯ ಶಿಷ್ಯೋ ಬಹುಯಕ್ಷಕರ್ತಾ
ದಾನೀ ಸದಾ ರಕ್ಷತು ದಾನವೇಂದ್ರಃ ||

ವಿಷ್ಣುಭಕ್ತಬಲಿರಾಜಾಯ ನಮಃ ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗಾಕೆಕು)

ಓಂ ಬಲಿರಾಜಾಯ ನಮಃ | ಓಂ ದಾನವಾಯ ನಮಃ | ಓಂ ಶಿವಾರ್ಚನರತಾಯ ನಮಃ | ಓಂ ಶುಕ್ರಶಿಷ್ಯಾಯ ನಮಃ | ಓಂ ಇಂದ್ರಶತ್ರವೇ ನಮಃ | ಓಂ ಪ್ರತಾಪಿನೇ ನಮಃ | ಓಂ ಸತ್ಯಸಂಧಾಯ ನಮಃ | ಓಂ ದೈತ್ಯಕುಲೋದ್ಧಾರಕಾಯ ನಮಃ | ಓಂ ಶಕ್ತಿಸಾಧಕಾಯ ನಮಃ | ಓಂ ಅಷ್ಟ್ಯೈಶ್ವರ್ಯಾಯ ನಮಃ | ಓಂ ಇಷ್ಟಪ್ರದಾಯ ನಮಃ | ಓಂ ವಿಷ್ಣುಭಕ್ತಾಯ ನಮಃ |

ದ್ವಾದಶನಾಮಪೂಜಾಂ ಸಮರ್ಪಯಾಮಿ ||

ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ|
ಇಂದ್ರಶತ್ರೋsಮರಾರಾತೇ ವಿಷ್ಣುಸಾನ್ನಿಧ್ಯದೋ ಭವ || 

ಶ್ರೀ ಬಲಿರಾಜಾಯ ನಮಃ ||

ಮತ್ತೆ ಕ್ರಮವಾಗಿ ನಾಲ್ಕು ಸರ್ತಿ ನೀರು ಬಿಟ್ಟು ಮತ್ತೆ ಹೂ ಗಂಧ ಅಕ್ಷತೆ, ಧೂಪ , ದೀಪ ನೇವೇದ್ಯಾದಿ ಸಮರ್ಪಣೆ ಮಾಡುವದು –

ಓಂ ಶ್ರೀ ಬಲಿರಾಜಾಯ ನಮಃ

ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ,

…. ನಿವೇದಯಾಮಿ (ನೇವೇದ್ಯಕ್ಕಿಪ್ಪದರ ನೇವೇದ್ಯ ಮಾಡಿ) , ತಾಂಬೂಲಂ ಸಮರ್ಪಯಾಮಿ (ತಾಂಬೂಲ ನೇವೇದ್ಯ ಮಾಡೆಕು), ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡೆಕು), ಮಂತ್ರಪುಷ್ಪಂ ಸಮರ್ಪಯಾಮಿ  , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಮೂರು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡೆಕು) |  

  ಶ್ರೀಬಲಿರಾಜಾಯ ನಮಃ ,ಸರ್ವೋಪಚಾರಪೂಜಾಃ ಸಮರ್ಪಯಾಮಿ |

ಶ್ರೀ ಬಲಿರಾಜಾಯ ನಮಃ , ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಒಂದು ಹೂಗು ಹಾಕಿ ಒಂದು ಸಕ್ಕಣ ನೀರು)

ಮತ್ತೆ ಕೈಲಿ ಹೂಗು ಗಂಧ ಅಕ್ಷತೆ ತೆಕ್ಕೊಂಡು ಗಿಂಡಿ/ಕವುಳಿಗೆ ಬಗ್ಗುಸಿ ನೀರುಬಿಡುವುದು –

ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||

ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||

ನೀರು ಹಾಕಿ ಬಲೀಂದ್ರಂಗೆ ಹಾಕುವದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.


ವಿಸರ್ಜನೆ  (ವಿಸರ್ಜನೆ ಮಾಡುವ ದಿನ ಮಾತ್ರ ವಿಸರ್ಜನೆ , ಬಾಕಿದಿನ ವಿಸರ್ಜನೆ ಮಾಡ್ಳೆ ಇಲ್ಲೆ , ದ್ವಿರಾಚಮ್ಯ ಮಾಡಿಕ್ಕಿ ಎದ್ದರಾತು)

ಅರ್ಚನೆಮಾಡಿದಲ್ಲಿಂದ ಒಂದು ಹೂಗು ತೆಗೆದು ಮೂಸಿ ಕೆಳ ಕರೆಲಿ ಹಾಕುವುದು –

ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಮತ್ಕೃತಾಮ್|
ಇಷ್ಟಕಾಮ್ಯಾರ್ಥಸಿದ್ಧ್ಯರ್ಥಂ ಪುನರಾಗಮನಾಯ ಚ ||

ದ್ವಿರಾಚಮ್ಯ |  – ಎರಡು ಸರ್ತಿ ಆಚಮನ ಮಾಡುವದು.

ಹರಿಃ ಓಂ | ಶುಭಮ್||

  • ಚೆನ್ನೈಬಾವ°
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×