Oppanna.com

ಸಾಯಂ ಪ್ರಾತಃ ಔಪಾಸನಮ್ ತಥಾ ವೈಶ್ವದೇವಹೋಮಃ (ಸಂಕ್ಷಿಪ್ತವಾಗಿ)

ಬರದೋರು :   ಚೆನ್ನೈ ಬಾವ°    on   28/10/2020    0 ಒಪ್ಪಂಗೊ

ಚೆನ್ನೈ ಬಾವ°

ಬ್ರಹ್ಮಚಾರಿಗೆ ಅಗ್ನಿಕಾರ್ಯ, ಗೃಹಸ್ಥಂಗೆ ಔಪಾಸನಹೋಮ, ವೈಶ್ವದೇವಹೋಮ ವಿಹಿತ. ಉಪಾಸ್ಯತೇ ಪ್ರತಿದಿನಂ ಇತಿ ಔಪಾಸನ , ನಿತ್ಯ ಅಗ್ನಿಯ ಉಪಾಸನೆ ಮಾಡುವದೆ ಔಪಾಸನ. ಎರಡೊತ್ತು ಔಪಾಸನ ಹೋಮ ಮಾಡೆಕು ಹೇಳ್ತದು ಶಾಸ್ತ್ರ. ಕಾಲಾಯತಸ್ಮೈ ನಮಃ ಹೇದೊಂಡು ಒಂದೊತ್ತಾದರೂ. ಹಾಂಗೆ ಮಾಡುವಾಗ ಎರಡೊತ್ತಾಣದ್ದೂ ಒಂದೊತ್ತಿಲ್ಲಿ ಮಾಡ್ತದು ಈಗಾಣ ಕಾಲಕ್ಕೆ.

ನಮ್ಮ ನಿತ್ಯ ಜೀವನಲ್ಲಿ ಒಲೆ ಸೌದಿ ಕಡವಕಲ್ಲು , ಒನಕೆ , ಹಿಡಿಸೂಡಿ, ಪಾತ್ರೆ ಇತ್ಯಾದಿ ಉಪಯೋಗಮಾಡುವಾಗ ಅನಿವಾರ್ಯವಾಗಿ ಹತ್ಯೆ/ ಹಿಂಸೆಮಾಡಿದ ದೋಷ ಆವ್ತು.  ಈ ಹತ್ಯಾದೋಷಪ್ರಾಯಶ್ಚಿತ್ತಕಾಗಿ ವೈಶ್ವದೇವಹೋಮ ಮಾಡುವದು. (ಪಂಚಸೂನಾ ಗೃಹಸ್ಥಸ್ಯ ಚುಲ್ಲೀ ಪೇಷಣ್ಯಪಸ್ಕರಃ | ಕಂದನೀ ಚೋದಕುಂಭಶ್ಚ ಬಧ್ಯತೇ ಯಾಸ್ತು ವಾಹಯನ್ (ಮನುಸ್ಮೃತಿ) . ಪ್ರತಿದಿನವು ಊಟಂದ ಮದಲು ನಾವು ಮಾಡಿದ ಅಡಿಗೆಯ ಒಂದು ಭಾಗವ ಅಗ್ನಿಗೆ ಅರ್ಪುಸುದು ವೈಶ್ವದೇವ.

ಇಲ್ಲಿ ಬಹುಸಂಕ್ಷಿಪ್ತವಾಗಿ ಸಾಯಂಪ್ರಾತರೌಪಾಸನ ಮತ್ತೆ ವೈಶ್ವದೇವ ಎರಡರನ್ನೂ ಒಟ್ಟಿಂಗೆ ಮಾಡ್ತ ಕ್ರಮವ ಅನುಕೂಲಕ್ಕೆ ಬೇಕಾಗಿ ಬರದ್ದದು. ಗೃಹಸ್ಥರು ಕುಲಪುರೋಹಿತರ ಮಾರ್ಗದರ್ಶನದಂತೆ ನಡಕ್ಕೊಳ್ಳೆಕು.  ಮಂತ್ರ ಬತ್ತವು ಮಂತ್ರಪೂರ್ವಕವಾಗಿಯೇ ಮಾಡೆಕು. ಬಾರದ್ದೋರು ಬಪ್ಪನ್ನಾರಿಕಂಗೆ ಇಟಾಲಿಕ್ಸಿಲ್ಲಿ ಇಪ್ಪದರ ಮನಸ್ಸಿಲ್ಲಿ ಗ್ರೇಶಿಗೊಂಡು ತಂತ್ರಲ್ಲಿ ಮುಂದುವರ್ಸಲಕ್ಕು.

ಸಾಯಂ ಪ್ರಾತಃ ಔಪಾಸನಮ್  ತಥಾ ವೈಶ್ವದೇವಹೋಮಃ

(ಸಂಕ್ಷಿಪ್ತವಾಗಿ)

ಸಾಯಂ ಪ್ರಾತಃ ಔಪಾಸನಮ್   – (ಸಂಕ್ಷಿಪ್ತವಾಗಿ)

ಆಚಮ್ಯ

ಆಚಮನ ಮಾಡಿ ಶ್ರೀಗುರುದೇವತಾದಿಗಳ ಮನಸ್ಸಿಲ್ಯೇ ನಮಸ್ಕರಿಸಿಗೊಂಬದು

ಗಿಂಡಿಗೆ ತುಳಸಿಹೂಗಂಧಾಕ್ಷತೆಯ ಹಾಕೆಕು –

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಎದುರೆ ಅಗ್ನಿ ತಯಾರುಮಾಡಿ, ಔಪಾಸನ ಸಮಿತ್ತಿನ ಹೋಮಕ್ಕೆ ಹಾಕುದು –

ಓಂ ಭೂರ್ಭುವಸ್ಸುವರೋಂ ಔಪಾಸನಾಗ್ನಿಂ ಪ್ರತಿಷ್ಠಾಪಯಾಮಿ || ಔಪಾಸನ ಇಲ್ಲದ್ದವಾದರೆ ಲೌಕಿಕಾಗ್ನಿಂ ಪತಿಷ್ಠಾಪಯಾಮಿ ಹೇಳಿಕ್ಕಿ ಎರಡಕ್ಕಿಕಾಳು ಹೋಮಕ್ಕೆ ಹಾಕಿರಾತು.

ಸಂಕಲ್ಪ –

ಎಡದಕೈಲಿ ಅಕ್ಷತೆ ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಗೆ ಮಡಿಕ್ಕೊಂಡು  ಮುಂದಾಣ ಸಂಕಲ್ಪ ಮಾಡುವದು.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||

 ………… ನಾಮ ಸಂವತ್ಸರೇ  …….. ಅಯನೇ  …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ  ಶುಭತಿಥೌ ಮಮ ಉಪಾತ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರಪ್ರೀತ್ಯರ್ಥಂ ಸಾಯಂಪ್ರಾತರೌಪಾಸನಾಹುತೀಃ ತಂಡುಲೈರ್ಹೋಷ್ಯೇ  (ಕೈಲಿಪ್ಪ ಅಕ್ಷತೆಯ ಹೋಮಕ್ಕೆ ಹಾಕುವದು).

ಕೈಮುಕ್ಕೊಂಬದು-

ಓಂ ಸ್ವಾಹಾ – ಹೇಳ್ಯೊಂಡು ಒಂದು ಶಾಕೋಲು/ಸಮಿತ್ತು ಹೋಮಕ್ಕೆ ಹಾಕಿಕ್ಕಿ

ಕೈಮುಕ್ಕೊಂಬದು-

ಓಂ ಜುಷಸ್ವನಃ ಸಮಿಧಮಗ್ನೇ ಅದ್ಯಶೋಚಾ ಬೃಹದ್ಯಜತಂ ಧೂಮ ಮೃಣ್ವನ್ | ಉಪಸ್ಪೃಶ ದಿವ್ಯಗ್ಂ ಸಾ ನಸ್ತೂಪೈಃ ಸಗ್ಂ ರಶ್ಮಿಭಿಸ್ತತನಃ ಸೂರ್ಯಸ್ಯ || (ಕೈಮುಕ್ಕೊಂಡು ಹೇಳಿಕ್ಕಿ,)

ನೀರು ಹಾರ್ಸೆಕು –

ಅದಿತೇsನುಮನ್ಯಸ್ವ (ಹೋಮದ (ತನ್ನ) ಬಲದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ಅನುಮತೇsನುಮನ್ಯಸ್ವ (ಹೋಮದ ಪಶ್ಚಿಮಲ್ಲಿ – ತನ್ನ ಎದುರೆ ಬಲತ್ತಿಂದ ಎಡತ್ತಿಂಗೆ)
ಸರಸ್ವತೇsನುಮನ್ಯಸ್ವ ( ಹೋಮದ (ತನ್ನ) ಎಡದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ದೇವ ಸವಿತಃ ಪ್ರಸುವ ( ಹೋಮದ ಎದುರೆ ಪೂರ್ವಭಾಗಲ್ಲಿ ಎಡತ್ತಿಂದ ಬಲತ್ತಿಂಗೆ)

ಹೋಮದ ಪೂರ್ವಭಾಗಂದ ತೊಡಗಿ ಎಂಟು ಹೊಡೆಂಗೆ ಗಂಧಾಕ್ಷತೆಪುಷ್ಪಂಗಳ ಹಾಕಿ ಅಲಂಕರುಸುದು-

ಓಂ ಅಗ್ನಯೇ ನಮಃ || (ಪೂರ್ವಲ್ಲಿ)
ಓಂ ಜಾತವೇದಸೇ ನಮಃ || (ಆಗ್ನೇಯಲ್ಲಿ)
ಓಂ ಸಹೋಜಸೇ ನಮಃ || (ದಕ್ಷಿಣಲ್ಲಿ)
ಓಂ ಅಜಿರಾಪ್ರಭವೇ ನಮಃ || (ನೈಋತ್ಯಲ್ಲಿ)
ಓಂ ವೈಶ್ವಾನರಾಯ ನಮಃ || (ಪಶ್ಚಿಮಲ್ಲಿ)
ಓಂ ನರ್ಯಾಪಸೇ ನಮಃ || (ವಾಯವ್ಯಲ್ಲಿ)
ಓಂ ಪಂಕ್ತಿರಾಧಸೇ ನಮಃ || (ಉತ್ತರಲ್ಲಿ)
ಓಂ ವಿಸರ್ಪಿಣೇ ನಮಃ || (ಈಶಾನ್ಯಲ್ಲಿ)
ಯಜ್ಞೇಶ್ವರಾಯ ನಮಃ | ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ ||

ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ
ಸುವರ್ಣವರ್ಣಮನಲಂ ಸಮಿದ್ಧಂ ವಿಶ್ವತೋಮುಖಂ ||

ಕೈಮುಕ್ಕೊಂಬದು –

ಹೋಮದ್ರವ್ಯ ತತ್ಕಾಲಕ್ಕೆ ಅಕ್ಕಿಕಾಳು ತೆಕ್ಕೊಂಡು ಹೋಮುಸುದು-

ಓಂ ಅಗ್ನಯೇ ಸ್ವಾಹಾ | ಅಗ್ನಯ ಇದಂ ನ ಮಮ
ಓಂ ಪ್ರಜಾಪತಯೇ ಸ್ವಾಹಾ | ಪ್ರಜಾಪತಯ ಇದಂ ನ ಮಮ
ಓಂ ಸೂರ್ಯಾಯ ಸ್ವಾಹಾ | ಸೂರ್ಯಾಯ ಇದಂ ನ ಮಮ |
ಓಂ ಪ್ರಜಾಪತಯೇ ಸ್ವಾಹಾ | ಪ್ರಜಾಪತಯ ಇದಂ ನ ಮಮ |

ಓಂ ಭೂಃ ಸ್ವಾಹಾ , ಅಗ್ನಯ ಇದಂ ನ ಮಮ |
ಓಂ ಭುವಃ ಸ್ವಾಹಾ , ವಾಯವ ಇದಂ ನ ಮಮ |
ಓಗ್ಂ ಸುವಃ ಸ್ವಾಹಾ, ಸೂರ್ಯಾಯ ಇದಂ ನ ಮಮ |
ಓಂ ಭೂರ್ಭುವಃ ಸುವಃ ಸ್ವಾಹಾ , ಪ್ರಜಾಪತಯ ಇದಂ ನ ಮಮ ||

ಎರಡು ಅಕ್ಕಿಕಾಳು ಕೈಲಿ ತೆಕ್ಕೊಂಡು ನೀರುಬಿಟ್ಟು ಹೋಮಕ್ಕೆ ಹಾಕುವದು –

ಅನೇನ ಸಾಯಂಪ್ರಾತರೌಪಾಸನಹೋಮಕರ್ಮಣಾ ಶ್ರೀಪರಮೇಶ್ವರ ಪ್ರೀಯತಾಮ್ |

ಅಥ ವೈಶ್ವದೇವಹೋಮಃ  –  (ಸಂಕ್ಷಿಪ್ತವಾಗಿ)

ಆಚಮ್ಯ,

ಎರಡು ಅಕ್ಕಿಕಾಳು ತೆಕ್ಕೊಂಡು ಸಂಕಲ್ಪ ಮಾಡಿಗೊಂಬದು –

ಮಮ ಉಪಾತ್ತ ಪಂಚಸೂನಾದೋಷಪರಿಹಾರಾರ್ಥಂ ಶ್ರೀ ಪರಮೇಶ್ವರಪ್ರೀತ್ಯರ್ಥಂ ವೈಶ್ವದೇವಹೋಮಂ ಕರಿಷ್ಯೇ  |
ಹೋಮಕ್ಕೆ ಕೈಲಿಪ್ಪ ಅಕ್ಕಿಯ ನೀರು ಬಿಟ್ಟು ಹಾಕುವದು.

ಚೆರು (ಅನ್ನ) ಕೈಲಿ ತೆಕ್ಕೊಂಡು ಹೋಮುಸುವದು –

ಓಂ ಅಗ್ನಯೇ ಸ್ವಾಹಾ – ಅಗ್ನಯ ಇದಂ ನ ಮಮ
ಓಂ ಸೋಮಾಯ ಸ್ವಾಹಾ – ಸೋಮಾಯ ಇದಂ ನ ಮಮ
ಓಂ ಧ್ರುವಾಯ ಸ್ವಾಹಾ – ಧ್ರುವಾಯ ಇದಂ ನ ಮಮ
ಓಂ ಧ್ರುವಾಯ ಭೂಮಾಯ ಸ್ವಾಹಾ – ಧ್ರುವಾಯ ಭೂಮಾಯ ಇದಂ ನ ಮಮ
ಓಂ ಧ್ರುವಕ್ಷಿತಯೇ ಸ್ವಾಹಾ – ಧ್ರುವಕ್ಷಿತಯ ಇದಂ ನ ಮಮ
ಓಂ ಅಚ್ಯುತಕ್ಷಿತಯೇ ಸ್ವಾಹಾ – ಅಚ್ಯುತಕ್ಷಿತಯ ಇದಂ ನ ಮಮ
ಓಂ ಈಶಾನಾಯ ಸ್ವಾಹಾ – ಈಶಾನಾಯ ಇದಂ ನ ಮಮ
ಓಂ ಜಯಂತಾಯ ಸ್ವಾಹಾ – ಜಯಂತಾಯ ಇದಂ ನ ಮಮ
ಓಂ ಧರ್ಮಾಯ ಸ್ವಾಹಾ – ಧರ್ಮಾಯ ಇದಂ ನ ಮಮ
ಓಂ ಧರ್ಮರುಚಯೇ ಸ್ವಾಹಾ – ಧರ್ಮರುಚಯ ಇದಂ ನ ಮಮ
ಓಂ ಧನ್ವಂತರಯೇ ಸ್ವಾಹಾ – ಧನ್ವಂತರಯ ಇದಂ ನ ಮಮ
ಓಂ ವಿದ್ಯಾಯೈ ಸ್ವಾಹಾ – ವಿದ್ಯಾಯಾ ಇದಂ ನ ಮಮ
ಓಂ ಅಂಬಿಕಾಯೈ ಸ್ವಾಹಾ – ಅಂಬಿಕಾಯಾ ಇದಂ ನ ಮಮ
ಓಂ ಹರಯೇ ಸ್ವಾಹ – ಹರಯ ಇದಂ ನ ಮಮ
ಓಂ ಗಣೇಭ್ಯಃ ಸ್ವಾಹಾ – ಗಣೇಭ್ಯಃ ಇದಂ ನ ಮಮ
ಓಂ ಗಣಪತಿಭ್ಯಃ ಸ್ವಾಹಾ – ಗಣಪತಿಭ್ಯಃ ಇದಂ ನ ಮಮ
ಓಂ ವರ್ಷಭ್ಯಃ ಸ್ವಾಹಾ – ವರ್ಷಭ್ಯಃ ಇದಂ ನ ಮಮ
ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ – ವಿಶ್ವೇಭ್ಯೋ ದೇವೇಭ್ಯಃ ಇದಂ ನ ಮಮ
ಓಂ ಸಾಧ್ಯೆಭ್ಯೋ ದೇವೇಭ್ಯಃ ಸ್ವಾಹಾ – ಸಾಧ್ಯೇಬ್ಯೋ ದೇವೇಭ್ಯಃ ಇದಂ ನ ಮಮ
ಓಂ ಸರ್ವೇಭ್ಯೋ ದೇವೇಭ್ಯಃ ಸ್ವಾಹಾ – ಸರ್ವೇಭ್ಯೇ ದೇವೇಭ್ಯಃ ಇದಂ ನ ಮಮ
ಓಂ ಸರ್ವಾಭ್ಯೋ ದೇವಾತಾಭ್ಯಃ ಸ್ವಾಹಾ – ಸರ್ವಾಭ್ಯೋ ದೇವತಾಭ್ಯಃ ಇದಂ ನ ಮಮ

ಓಂ ಭೂಃ ಸ್ವಾಹಾ – ಅಗ್ನಯ ಇದಂ ನ ಮಮ
ಓಂ ಭುವಃ ಸ್ವಾಹಾ – ವಾಯವ ಇದಂ ನ ಮಮ
ಓಂ ಸುವಃ ಸ್ವಾಹಾ – ಸೂರ್ಯಾಯ ಇದಂ ನ ಮಮ
ಓಂ ಭೂರ್ಭುವಸ್ಸುವಃ ಸ್ವಾಹಾ – ಪ್ರಜಾಪತಯ ಇದಂ ನ ಮಮ

ಓಂ ಅಗ್ನಯೇ ಸ್ವಿಷ್ಟಕೃತೇ ಸ್ವಾಹಾ – ಅಗ್ನಯ ಸ್ವಿಷ್ಟಕೃತ ಇದಂ ನ ಮಮ

ಒಂದು ಸಮಿತ್ತು/ಶಾಕೋಲು ಹೋಮಕ್ಕೆ ಹಾಕಿ ಕೈ ಮುಕ್ಕೊಂಬದು –

ಓಂ ಜುಷಸ್ವನಃ ಸಮಿಧಮಗ್ನೇ ಅದ್ಯಶೋಚಾ ಬೃಹದ್ಯಜತಂ ಧೂಮ ಮೃಣ್ವನ್ | ಉಪಸ್ಪೃಶ ದಿವ್ಯಗ್ಂ ಸಾ ನಸ್ತೂಪೈಃ ಸಗ್ಂ ರಶ್ಮಿಭಿಸ್ತತನಃ ಸೂರ್ಯಸ್ಯ || (ಕೈಮುಕ್ಕೊಂಡು ಹೇಳಿಕ್ಕಿ,)

ಆಗಾಣಾಂಗೆ ನೀರು ಹಾರ್ಸುದು –

ಅದಿತೇsನ್ವ ಮಗ್ಗ್ ಸ್ಥಾಃ (ಹೋಮದ (ತನ್ನ) ಬಲದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ಅನುಮತೇsನ್ವ ಮಗ್ಗ್ ಸ್ಥಾಃ  (ಹೋಮದ ಪಶ್ಚಿಮಲ್ಲಿ – ತನ್ನ ಎದುರೆ ಬಲತ್ತಿಂದ ಎಡತ್ತಿಂಗೆ)
ಸರಸ್ವತೇsನ್ವ ಮಗ್ಗ್ ಸ್ಥಾಃ ( ಹೋಮದ (ತನ್ನ) ಎಡದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ದೇವ ಸವಿತಃ ಪ್ರಾಸಾವೀಃ ( ಹೋಮದ ಎದುರೆ ಪೂರ್ವಭಾಗಲ್ಲಿ ಎಡತ್ತಿಂದ ಬಲತ್ತಿಂಗೆ)

ಎದ್ದು ನಿಂದು ಕೈ ಮುಕ್ಕೊಂಬದು –

ಓಂ ಯತ್ತೇ ಅಗ್ನೇ ತೇಜಸ್ತೇನಾಹಂ ತೇಜಸ್ವೀ ಭೂಯಾಸಂ
ಯತ್ತೇ ಅಗ್ನೇ ವರ್ಚಸ್ತೇನಾಹಂ ವರ್ಚಸ್ವೀ ಭೂಯಾಸಂ
ಯತ್ತೇ ಅಗ್ನೇ ಹರಸ್ತೇನಾಹಗ್ಂ ಹರಸ್ವೀ ಭೂಯಾಸಂ

ಹೋಮಕ್ಕೆ ಕೈ ತೋರ್ಸಿ ಎದಗೆ ಮುಟ್ಟಿಸಿಗೊಂಬದು –

ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು
ಮಯಿ ಮೇಧಾಂ ಮಯಿ ಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು
ಮಯಿ ಮೇಧಾಂ ಮಯಿ ಪ್ರಜಾಂ ಮಯಿ ಸೂರ್ಯೋ ಭ್ರಾಜೋ ದಧಾತು ||

ಕೂದುಗೊಂಡು ಹೋಮದ ಮೂಡೊಡೆಂದ ರಜ ಹುತ ಭಸ್ಮವ ತೆಕ್ಕೊಂಡು –

ಓಜೋಸಿ  (ಲಲಾಟೆಗೆ ಬೊಟ್ಟು ಹಚ್ಚಿಗೊಂಬದು)
ಸಹೋಸಿ (ಕಂಠಕ್ಕೆ)
ಬಲಮಸಿ (ದಕ್ಷಿಣಬಾಹುಮೂಲಗೆ)
ಭ್ರಾಜೋಸಿ (ಕಂಠಹಿಂದೊಡೆಂಗೆ)
ದೇವಾನಾಂ ಧಾಮ ನಾಮಾಸಿ (ಹೊಕ್ಳಿಂಗೆ)
ವಿಶ್ವಮಸಿ ವಿಶ್ವಾಯುಃ (ಎದಗೆ)
ಸರ್ವಮಸಿ ಸರ್ವಾಯುಃ (ತಲಗೆ)
ಅಭಿಭೂರೋಂ (ಜೊಟ್ಟಿಂಗೆ)
ಕೈ ಮುಕ್ಕೊಂಬದು –

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹುತಾಶನ
ಯದ್ದುತಂ ತು ಮಯಾ ದೇವ ಪರಿಪೂರ್ಣಂ ತದಸ್ತು ತೇ ||

ಅಜ್ಞಾನಾದ್ವಾ ಪ್ರಮಾದಾದ್ವಾ ವೈಕಲ್ಯಾತ್ಸಾಧನಸ್ಯ ವಾ
ಯನ್ಯೂನಮತಿರಿಕ್ತಂ ಚ ತತ್ಸರ್ವಂ ಕ್ಷಂತುಮರ್ಹಸಿ ||

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ ||

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಹುತಾಶನ ||

ಗೋತ್ರಪ್ರವರ ಹೇಳಿ ಅಭಿವಾದನೆ ಮಾಡಿಗೊಂಬದು –

ಶ್ರೀಮದ್ಯಜುಶ್ಶಾಖಾ ಬೋಧಾಯನ ಸೂತ್ರಾನ್ವಿತ ………… ……………….. ಗೋತ್ರೋತ್ಪನ್ನಃ ………… ಶರ್ಮಾsಹಮಸ್ಮಿ , ಭೋ ಅಭಿವಾದಯೇ ||

ಬ್ರಹ್ಮಾರ್ಪಣ –

ಅನೇನ ವೈಶ್ವದೇವಹೋಮಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಂ | ಓಂ ತತ್ಸತ್ || (ಅಕ್ಕಿಕಾಳು ನೀರು ಬಿಟ್ಟು ತಟ್ಟಗೆ ಬಿಡುವದು)

ಕೈ ಮುಕ್ಕೊಂಡು ಹೇಳುವದು – ಓಂ ಅಚ್ಯುತಾಯ ನಮಃ ಓಂ ಅನಂತಾಯ ನಮಃ ಓಂ ಗೋವಿಂದಾಯ ನಮಃ

ಉದ್ವಾಸನೆ –

ಒಂದು ಸಮಿತ್ತು ತೆಗದು ಹೋಮಾಗ್ನಿಯ ಅದರ್ಲಿ ಆರೋಪಿಸಿಗೊಂಡು ಔಪಾಸನದೊಟ್ಟಿಂಗೆ ಸೇರ್ಸಿ ತೆಗದು ಮಡಿಕ್ಕೊಂಬದು. ಮರದಿನ ಅದೇ ಸಮಿತ್ತಿನ ಹೋಮಾಗ್ನಿಗೆ ಹಾಕಿ ಔಪಾಸನಹೋಮ ಮಾಡುವದು.

ಔಪಾಸನ ಇಲ್ಲದ್ದವು –
ಯಜ್ಞೇಶ್ವರಂ ಯಥಾಸ್ಥಾನಮ್ ಉದ್ವಾಸಯಾಮಿ
 ಹೇಳಿಕ್ಕಿ ಎರಡು ಅಕ್ಕಿಕಾಳು ಹೋಮಕ್ಕೆ ಹಾಕಿ ಉದ್ವಾಸನೆ ಮಾಡುವದು.

ದ್ವಿರಾಚಮ್ಯ  (ಎರಡು ಸರ್ತಿ ಆಚಮನ ಮಾಡಿಕ್ಕಿ ಏಳುವದು.

ಹರಿಃ ಓಮ್ ||

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×