ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?
July 20, 2010 ರಂದು 6:42 pmಗೆ ನೀರ್ಕಜೆ ಅಪ್ಪಚ್ಚಿ ಬರೆದ್ದು, ಇದುವರೆಗೆ 15 ಒಪ್ಪಂಗೊ.ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ ಪರಿಸ್ಥಿತಿ ಇಲ್ಲೆ. ಈ ನಿಟ್ಟಿಲಿ ಎನಗೆ ಕೆಲವು ವಿಷಯಂಗಳ ಹೇಳೆಕ್ಕು ಹೇಳಿ ಅನ್ಸಿತ್ತು. ಕೃಷಿ ಪರಿಸ್ಥಿತಿ ಎಂತಕ್ಕೆ ಈಗ ಹಾಳಾಯಿದು ಹೇಳಿ ಎಲ್ಲರಿಂಗೂ ಗೊಂತಿದ್ದು. ಅದನ್ನೇ ಪುನಾ ಪುನಾ ಹೇಳಿ ನಿಂಗಳ ತಲೆ ತಿಂತಿಲ್ಲೆ. [...]


