Oppanna.com

ಮಳೆಗಾಲಲ್ಲಿ ಒ೦ದು ದಿನ

ಬರದೋರು :   ಸಂಪಾದಕ°    on   13/07/2013    9 ಒಪ್ಪಂಗೊ



ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ
ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕಿ ಶ್ರೀಮತಿ ಅದಿತಿ ಶ್ರೀಹರ್ಷ,ಸಾದ೦ಗಯ ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನತು೦ಬಿದ ಅಭಿನ೦ದನೆಗೊ.
***********************************

ಅದಿತಿ ಅಕ್ಕ
ಅದಿತಿ ಅಕ್ಕ

ಸಾರಥಿಯು ತಾನಾದ° ಮಣಿರಥ

ವೇರಿ ಕ೦ಸನು ದಿಬ್ಬಣಲಿ ನಡು

ದಾರಿಲೇ ಕೇಳಿತ್ತು ದೇವಕಿಯಷ್ಟಮ ಕುಮಾರ|

ಘೋರ ಸಾವಿನ ತತ್ತ° ಕೋಪದಿ

ಹಾರಿ ಕಡಿಲೋಪಗಳೆ ಸಮಯವ

ಕೋರಿ ವಸುದೇವಾಖ್ಯ ಕೊಡುಲೊಪ್ಪುತ್ತ° ಶಿಶುಗಳನೂ||

 

ಹೆದರಿ ಕಸ್ತಲೆ ಕೋಣೆಗಟ್ಟಿದ°

ಮದಲು ಹುಟ್ಟಿದ ಸಪ್ತ ಶಿಶುಗಳ

ತದುಕಿ ಹಿಡುದಪ್ಪಳಿಸಿ ಗೋಡಗೆ ಕೊಂದ° ದುರುಳರಸ|

ಕದಡಿ ಹೋತದ ಮನದ ಶಾಂತಿಯು

ಚದುರಿ ಹಾರಿತ್ತಿರುಳ ನೆಮ್ಮದಿ

ಕದಲಿ ಹೋದಷ್ಟಮದ ಗರ್ಭವು ಮೂಡಿ ದೇವಕಿಲಿ||

 

ಕಂದ ಹುಟ್ಟಿದ° ಮಳೆಯ ರಾತ್ರಿಲಿ

ಬಂದತೊಂದಶರೀರ ವಾಣಿಯು

ನಂದ ಕಂದನ ಜಾಗೆ ಬದಲಿಸಿ ಕೃಷ್ಣ° ಹೋಯೆಕ್ಕು|

ತಂದೆ ಮಡುಗಿದ° ಮಗನ ಕುರುವೆಲಿ

ಮುಂದೆ ಯಮುನೆಯು ದಾರಿ ಕೊಟ್ಟತು

ಹಿಂದೆ ಹೆಡೆಕೊಡೆ ಬಿಡುಸಿ ತಡದನೊ ಶೇಷ ಮಳೆಹನಿಯ||

 

ಬೆಳಕು ಮೂಡಿದ ಮತ್ತೆ ರಾಜನು

ಸೆಳದ ಕೂಸಿನ ಜೀವ ತೆಗವಲೆ

ಹಳಿದು ಕಂಸನ ಹಾರಿ ಹೋತದು ಭೂಮಿ ಮೇಗಂದ |

ಬಿಳುಚಿ ರಾಜನ ಮೋರೆ ಬೆಗರಿತು

ಕಳಚಿ ಹೋತದ ಧೈರ್ಯ ಮನಸಿಲಿ

ಸುಳುಹು ಸಿಕ್ಕಿತ್ತಾಘಳಿಗೆಲಿಯೆ ತನ್ನ ಸಾವಿಂದು||

9 thoughts on “ಮಳೆಗಾಲಲ್ಲಿ ಒ೦ದು ದಿನ

  1. ಕತೆಯ ಪದ್ಯ ರೂಪಲ್ಲಿಳಿಶಿದ್ದು ಲಾಯಿಕಾಯಿದು ಅದಿತಿಯಕ್ಕ.

  2. ಮಳೆಗಾಲದ ಆ ಒ೦ದು ದಿನ ನೆಡದ ಘಟನೆ ಈಗ ಪುರಾಣದ ಭಾಗ ಆತು.ಮು೦ದೆ ಭಾರತದೇಶದ ಮನೆ-ಮನ೦ಗಳಲ್ಲಿ ಶಾಶ್ವತ ಆಗಿ ನಿ೦ದತ್ತು.
    ಅನಿರೀಕ್ಷಿತ ಕಲ್ಪನೆ ಅದಿತಿ ಅಕ್ಕ.ಅಭಿನ೦ದನೆಗೊ.

  3. ಒಪ್ಪ ಕೊಟ್ಟ ಎಲ್ಲೋರಿಂಗು ಧನ್ಯವಾದ. 🙂

  4. ಕವನದ ಯೋಚನಾ ಶೈಲಿ ವಿಭಿನ್ನವಾಗಿ ಮೂಡಿದ್ದು ಲಾಯ್ಕಾಯಿದು… ಅಭಿನಂದನೆಗ ಅಕ್ಕಾ..

  5. ಹಿಂದೊಂದು ದಿನ ಮಳೆಗಾಲಲ್ಲಿ ಹೀಂಗಾಗಿತ್ತು ಹೇಳುದರ ಭಾಮಿನಿ ಕತೆಯಾಗಿ ಹೇಳಿದ್ದು ತುಂಬಾ ಚೊಕ್ಕ ಆಯಿದು. ಶ್ರೀಕೃಷ್ಣಜನ್ಮಾಷ್ಟಮಿ ಹೇಳುವಾಗ ‘ ಧೋ ‘ರನೆ ಸೊಯ್ಪುವ ಮಳೆ ನೆಂಪಾಗಿಯೇ ಆವುತ್ತು. ಅಂಥಾ ನಿಕಟವಾದ ಸಂಬಂಧ ಮಳೆಗುದೆ ಆ ಸಂದರ್ಭಕ್ಕುದೆ ಇತ್ತಲ್ಲದಾ. ಹೊಸ ರೀತಿಯ ಕಲ್ಪನೆಲಿ ಕವನ ಕಟ್ಟಿದ್ದಕ್ಕೆ ನಿಂಗಳ ಅಭಿನಂದಿಸುತ್ತೆ ಅದಿತಿ.

  6. ವಿಷಯವ ಬೇರೆಯೇ ರೀತಿಲಿ ಚಿ೦ತಿಸಿ ಆಯ್ಕೆ ಮಾಡಿದ್ದು ವಿಶೇಷ ಆಯಿದು..

  7. ಲಾಯ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×