Oppanna.com

ಗೋಸುಪ್ರಭಾತ (ಕವನ)

ಬರದೋರು :   ವಿಜಯತ್ತೆ    on   29/06/2020    0 ಒಪ್ಪಂಗೊ

ಗೋಸುಪ್ರಭಾತ (ಕವನ)
ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||ಎದ್ದೇಳು||
ಮುಕ್ಕೋಟಿ ದೇವರ್ಕಳನು ಹೊತ್ತು ನಿಂತಬ್ಬೆ|
ಮುಕ್ಕಣ್ಣಂಗೆ ನಂದಿಯನು ಹೆತ್ತುಕೊಟ್ಟಬ್ಬೆ||
ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
ಮುಂದಾಗಿ ಸಂಪದವ ಕರುಣಿಸೆಮಗೆ||
ಕ್ಷೀರಸಾಗರ ಮಥನದಲಿ ಒಲಿದು ಬಂದಬ್ಬೆ|
ಕ್ಷೀರಾದಿ ಮಧುರ ರಸ ಸದಾ ನೀಡುತಿಪ್ಪೆ||
ಜಗದ ಜನರ ಒಲಿದು ಸಲಹುವ ಜಗದಂಬೆ|
ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||
ನಿನ್ನ ಕಣ್ಣಲ್ಲಿಪ್ಪ  ಸೂರ್ಯ ರ್ಚಂದ್ರರಿಂಗೆ ನಮಿಪೆ|
ಕೊಂಬಿಲಿಪ್ಪ ಯಮಧರ್ಮರಿಂಗೆ ವಂದಿಸುವೆ||
ಹೊಕ್ಕುಳಿಲ್ಲಿಪ್ಪ ನರ ನಾರಾಯಣರಿಂಗೆ ಕೈಮುಗಿವೆ|
ಬಾಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||
ಗೋಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
ಗೋಮಯಲ್ಲಿಪ್ಪ ಮಹಾಲಕ್ಷ್ಮಿಯೇ ಮಣಿವೆ||
ಪಾದಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
ಬೆನ್ನಿಲ್ಲಿಪ್ಪ ಬ್ರಹ್ಮಾದಿ ಮೂರುತಿಗೆ ಮಣಿವೆ||
ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವೆ|
ಮೂರುಪ್ರದಕ್ಷಿಣೆ ಮಾಡಿದವನ ಮೂರ್ಜನ್ಮ ಪಾಪತೊಳೆವೆ||
ಏಳು ಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ತೊಳೆವೆ|
ಗೋ ಅರ್ಕಂದ ಸಕಲರೋಗ ನಿವಾರಣೆ ಮಾಡುವ ಮಾತೆ ಎದ್ದೇಳು||
    ~~~~~×~~~~
ಲೇ~ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×