Oppanna
Oppanna.com

ನೀರ್ಕಜೆ ಮಹೇಶ

ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ? ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ. ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ! ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ ಸೇರಿದ್ದವಡ ಮದಲಿಂಗೇ! ಅಂದೇ ಬೆಂಗುಳೂರಿಲಿ ಕೆಲಸ ಮಾಡ್ತರೂ, ಎಲ್ಲೋರ ಹಾಂಗೆ ಸೊಂತದ್ದು ಹೇಳಿಗೊಂಡು ಜಾಗೆ – ಮನೆ ಇನ್ನೂ ಮಾಡಿದ್ದವಿಲ್ಲೆ. ಮಾಡ್ತವೂ ಇಲ್ಲೆಡ – ಎಂತಕೇಳಿರೆ, ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ! ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ- ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ! ಕೊಶೀ ಆತು ಒಪ್ಪಣ್ಣಂಗೆ ಅದರ ಕೇಳಿ! ಈಗ ಆಪೀಸಿಲಿ ಕೂದಂಡು ಕೆಲಸ ಮಾಡುವಗ ಹಳ್ಳಿ ಜೀವನವೇ ನೆಂಪಪ್ಪದು. ಆಪೀಸಿನ ಮೆಟ್ಳು ಹತ್ತುವಗ ಉಪ್ಪರಿಗೆ ಮೇಲಾಣ ಪತ್ತಾಯಕ್ಕೆ ಹತ್ತಿದ ಹಾಂಗೆ ಆವುತ್ತು! ಆಣು ಬಂದು ಕಾಪಿ ಕೊಡುವಗ ಅಕ್ಕಚ್ಚು ಕೊಟ್ಟಹಾಂಗೆ ಆವುತ್ತು. ಕಂಪ್ಯೂಟರು ಕುಟ್ಟುವಗ ಬತ್ತ ಮೆರುದ ಹಾಂಗೆ ಆವುತ್ತು. ಬೋಸು (Boss) ದಿನಿಗೆಳಿರೆ ಗೋಣ ಕೆಲದ ಹಾಂಗೆ ಆವುತ್ತು! ಒಟ್ಟಿಲಿ ಈ ಪೇಟೆ ಜೀವನ ಬೇಡ್ಳೇ-ಬೇಡ ಹೇಳಿ ಅನುಸುತ್ತು!! ಅವರ ಯೆಜಮಾಂತಿ – ನೀರ್ಕಜೆ ಚಿಕ್ಕಮ್ಮಂದೇ ಅದೇ ಮನಸ್ಸಿನವು ಅಡ. ಗಣಿತ ಕಲ್ತು ಕೋಲೇಜು ಮುಗುಶಿದ್ದವು, ಈ ಪೇಟೆ ಹರಟೆಲಿ ಗಣಿತದ ಸಮಸ್ಯೆ ಬಿಡುಸುಲೇ ಎಡೆತ್ತಿಲ್ಲೆ – ಹೇಳಿ ಚಿಕ್ಕಮ್ಮಂಗೆ ಬೇಜಾರು! ಎಲ್ಲೊರು ಪೇಟೆ ಪೇಟೆ ಹೇಳಿ ಹಾರುವಗ, ಹಳ್ಳಿಜೀವನವೇ ಒಳ್ಳೆದು ಹೇಳಿ ‘ಮರಳಿ ಮಣ್ಣಿಂಗೆ’ ಹೋವುತ್ತ ಈ ಮನಸ್ಸುಗಳ ತುಂಬ ಕೊಶಿ ಆವುತ್ತು. ಅಲ್ಲದೋ?! ಬರಳಿ – ಬೇಗ ನಮ್ಮ ನೆರೆಕರೆಗೆ ಬರಳಿ! ಅದೇನೇ ಇರಳಿ, ಅವರ ರಂಗಪ್ರವೇಶ ಆದ್ದದೇ ಒಪ್ಪಣ್ಣನ ‘ಇಂಗ್ರೋಜಿಯ’ ಶುದ್ದಿಗೆ ಒಪ್ಪಕೊಟ್ಟೊಂಡು, ಒಂದು ತಾತ್ವಿಕ ಪೋಯಿಂಟಿನ ಹಿಡ್ಕೊಂಡು! ಚಿಂತನೆ ಅವರ ನೆತ್ತರಿನ ಗುಣ. ಚಿಂತನಾ ಲೇಖನ ಬರವದು ಅವರ ಹವ್ಯಾಸಂಗಳಲ್ಲಿ ಒಂದು. ಮೊನ್ನೆ ಊರಿಂಗೆ ಬಂದಿಪ್ಪವು ಸಿಕ್ಕಿದವು, ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಕೇಳಿದೆ. ಈಗ ರಜಾ ಅಂಬೆರ್ಪು.. ನಿದಾನಕ್ಕೆ ಹೇಳ್ತೆ. ಹೊಸ ಕೆಮರ ತೆಗದ್ದೆ, ಪಟತೆಗವಲಿದ್ದು – ಹೇಳಿಕ್ಕಿ ಮೆಲ್ಲಂಗೆ ಬೇಗು ಹಿಡ್ಕೊಂಡವು. ‘ಇದಾ, ಈ ಪಟಂಗಳ ನೋಡುಸು ನೀನು, ಎಲ್ಲೊರಿಂಗುದೇ’ ಹೇಳಿದವು. ಪಟ ಕೊಟ್ಟು ಕಳುಸಿದ್ದವು. ಕೊಶಿ ಆದರೆ ಪಟಂಗೊಕ್ಕೆಒಪ್ಪ ಕೊಡಿ. ಶುದ್ದಿ ಬೇಗಲ್ಲೇ ಬರೆತ್ತವಡ, ಕಾದೊಂಡಿಪ್ಪ.. ಆತೋ?

ಕಲ್ಬುರ್ಗಿಯ ಕಂಪು

ನೀರ್ಕಜೆ ಮಹೇಶ 06/01/2011

ಕಳೆದ ದಶಂಬ್ರ ತಿಂಗಳಿಲಿ ಹತ್ತು ದಿನ ನಡದ ಕಲ್ಬುರ್ಗಿಯ ಕಂಪು ಕಾರ್ಯಕ್ರಮ ತುಂಬಾ ಸಮಯೋಚಿತ ಹೇಳಿ ಅನ್ಸಿತ್ತು ಎನಗೆ. ಎಂದಿನಂತೆ ನಮ್ಮ ಮಾಧ್ಯಮದವಕ್ಕೆ ಇಂಥಾ ಒಳ್ಳೆ ಕಾರ್ಯಕ್ರಮ ಕಣ್ಣಿಂಗೆ ಕಾಣುತ್ತೇ ಇಲ್ಲೆ. ಒಂದು ಕಾಲಲ್ಲಿ ಬಿಜೆಪಿ ಜನರಲ್ ಸೆಕ್ರೆಟರಿ ಆಗಿದ್ದ ಗೋವಿಂದಾಚಾರ್ಯ

ಇನ್ನೂ ಓದುತ್ತೀರ

ಹಾಲುಮಜಲು ಒಪ್ಪಣ್ಣಂದಿರು ಮನೆಗೆ ಬಂದದು ಹಾಲು ಕುಡುದ ಹಾಂಗೆ ಆತು!

ನೀರ್ಕಜೆ ಮಹೇಶ 05/01/2011

ಎಲ್ಲ ಒಪ್ಪಣ್ಣನ ಬೈಲಿನ ಮಹಿಮೆ. ಬೈಲಿನ ಮೂಲಕ ಪರಿಚಯ ಆದ ಹಾಲುಮಜಲು ರಾಜಾರಾಮಣ್ಣ ಮತ್ತೆ ಪುಟ್ಟುಭಾವ

ಇನ್ನೂ ಓದುತ್ತೀರ

ನೀರಿಂಗ್ಸುವ ಬಗ್ಗೆ ಇನ್ನೊಂದೆರಡು ಮಾತುಗೊ

ನೀರ್ಕಜೆ ಮಹೇಶ 20/08/2010

ನಮ್ಮ ಹೆಮ್ಮೆಯ ಒಪ್ಪಣ್ಣ ಬೈಲಿಲಿ ನೀರುಂಗ್ಸುವ ಬಗ್ಗೆ ಲೇಖನ ಬರದ್ದು ಭಾರಿ ಲಾಯಿಕ ಆಯಿದು. ಈ

ಇನ್ನೂ ಓದುತ್ತೀರ

ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?

ನೀರ್ಕಜೆ ಮಹೇಶ 20/07/2010

ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು

ಇನ್ನೂ ಓದುತ್ತೀರ

ನಮ್ಮ ಬೈಲಿನ ಬಗ್ಗೆ ಒಂದೆರಡು ದ್ವಿಪದಿಗೊ!

ನೀರ್ಕಜೆ ಮಹೇಶ 15/07/2010

ಈ ದ್ವಿಪದಿ ಹೇಳುದು ಎನಗೆ ಭಾರಿ ಲಾಯಿಕ ಅಪ್ಪದು. ೧೦೦ ಶಬ್ದಲ್ಲಿ ಹೇಳುದರ ಸಣ್ಣಕ್ಕೆ ಎರಡು

ಇನ್ನೂ ಓದುತ್ತೀರ

ಲಾಲುಬಾಗಿಲಿ ತೆಗದ ಪಟಂಗೊ!

ನೀರ್ಕಜೆ ಮಹೇಶ 05/07/2010

ಪಟ ತೆಗೆಯದ್ದೆ ಸುಮಾರು ದಿನ ಆತು, ಕೆಮರದೆ ಸಾಣೆ ಹಿಡಿಷದ್ದೆ ಬಡ್ಡು ಅಪ್ಪಲಾಗ UGG Stiefeletten günstig 

ಇನ್ನೂ ಓದುತ್ತೀರ

ಮುಚ್ಚಿಲು ಮರದ ಪರಿಚಯ ಇದ್ದೋ??

ನೀರ್ಕಜೆ ಮಹೇಶ 05/07/2010

ಲಾಗಾಯ್ತಿಂದ ಬೈಲಿಲಿಪ್ಪವಕ್ಕೆ (ಒಪ್ಪಣ್ಣನ ಗಣಕ ಬೈಲು ಅಲ್ಲ!) ಈ ಮರದ ಪರಿಚಯ ಇಕ್ಕು. ಆದರೆ ನಮ್ಮ

ಇನ್ನೂ ಓದುತ್ತೀರ

ನೀರ್ಕಜೆ ಅಪ್ಪಚ್ಚಿ ಪಟ ತೆಗವಲೆ ಸುರು ಮಾಡಿದವು!

ನೀರ್ಕಜೆ ಮಹೇಶ 13/02/2010

ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ? ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×