Oppanna.com

ಕೇಚಣ್ಣನ ಶುದ್ದಿಗೊ

ಬರದೋರು :   ಬಾಲಣ್ಣ    on   25/05/2013    7 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಕೇಚಣ್ಣನ  ಶುದ್ದಿಗೊ  

 ಮತ್ತೆಂತ ಭಾವಯ್ಯ
ಎಲ್ಲಿದ್ದೆ ನೀನೀಗ
ಮನೆಲೆಲ್ಲ  ಸೌಖ್ಯವೇ ಹೇಳಿ ಕಾಣುತ್ತು  |
ಬರೆಕ್ಕು ನಿಂಗಳ ಮನಗೆ
ಹೇಳಿ ಗ್ರೇಶಿಂಡಿದ್ದೆ
ಮಾಣೀಗೆ ಮದುವೇಡ ಶುದ್ದಿ ಕೇಟತ್ತು | ೧ |

 ಆಚಕರೆ ಕೇಚಣ್ಣ
ಹೀಂಗೆ ಹೇಳಿಂಡಿಕ್ಕು
ಎದುರು ಸಿಕ್ಕಿರೆ ಮಾತು ಕೇಳಿ ಬೊಡಿಗು |
ಎಲ್ಲ ಊರಿನ ಶುದ್ದಿ
ಅವನ ಬಾಯಿಲಿ ಇಕ್ಕು
ಅಲ್ಲಿಂದ ಇಲ್ಲಿಂದ ಹೆರ್ಕಿ ಕೊಡುಗು |೨|

 ಮೀಸೆ ಮಾವನ ಮಗಳ
ಮದುವೆ ಕಳುದತ್ತನ್ನೆ
ಮೋಸ ಇಲ್ಲೆ ಮಿನಿಯ , ಗಟ್ಟಿ ಕುಳವಾರು |
ಜಾಲು ತುಂಬಾ ಅಡಕ್ಕೆ,
ಕರಿಮೆಣಸು ಇದ್ಡಾಡ
ಹೇಳಿ ಮುಗಿಯದ್ದಷ್ಟು ಕಾರುಬಾರು |೩|

 ಮೂಲೆಮನೆ ಅಪ್ಪಚ್ಚಿ
ಮನ್ನೆ ಕಾಂಬಲೆ ಸಿಕ್ಕಿ
ಶುದ್ದಿ  ಹೇಳಿದ್ದವದ ! ಗುಟ್ಟಿಲಿರಲಿ |
ಅವರ ನೆರೆಕರೆ ಕೂಸು
ಏವದರ ಒಟ್ಟಿಂಗೊ
ಹೋತಾಡ  ವಿಷಯ ನಮ್ಮೊಳವೆ  ಇರಲಿ | ೪|

 ಕುಞ್ಞಣ್ಣ ಶೆಟ್ಟಿಯಾ
ಮಗಳು ವಾಸಂತಿಯಾ
ಈಚಣ್ಣನಾ ಮಗಂಗೆ ತಪ್ಪದಾಡ |
ನಮ್ಮ ಜಾತಿಗೆ ದತ್ತು
ತೆಕ್ಕೊಂಡು ಬಪ್ಪದದ
ಧಾರೆ ಎರವದು ಕೂಡ ನಮ್ಮೋರಾಡ |೫|

 ಬಟ್ಟ  ಮಾವನ ಮಗಂಗೆ
ಮದುವೆ ಆಯಿದೆ ಇಲ್ಲೆ
ವರುಷ ಮೂವತ್ತೈದು ದಾಂಟಿತ್ತಡ |
ಕೂಸಿಪ್ಪ ಮನೆಯೋರು
ಬಟ್ಟಕ್ಕಳಾ ಮನಗೆ
ಕೂಸು ಕೊಡ್ತಿಲ್ಲೇಳಿ ಹೇಳ್ತವಾಡ |೬|

 ಮಾಳ್ಯಮನೆ ಶಂಭಜ್ಜ
ಅವರಮಗ  ಕಿಟ್ಟಂಗೆ
ಕೂಸು ನೋಡಿದವಾಡ  ಹಾಸನಂದ |
ಮಧು ಮಾಂಸ ತಿನ್ನದ್ದ
ಜಾತಿ ಆದರೆ ಸಾಕು
ಕಿಟ್ಟಣ್ಣ  ಹೋಗಿ ನೋಡಿಕ್ಕಿ ಬೈಂದ |೭|

 ಜೋಯಿಸರ ಮಗಳದಾ
ಒಪ್ಪಕ್ಕ  ಗೊಂತಿದ್ದ
ಬೀಯಿ  ಯ ಕಲ್ತಾತು ಕೆಲಸಲ್ಲಿದ್ದು |
ಕಾಲೇಜು ಕಲಿವಾಗ
‘ಬ್ಯಾರಿ ಚೆಕ್ಕ’ನ ಗುರ್ತ
ಮದುವೆ ಆಯಿದು ಹೇಳಿ ಶುದ್ದಿ ಇದ್ದು |೮|

 ಮೂಡಮನೆ ಮಾಪಣ್ಣ
ಅವನ ಹೆಂಡತಿ ಮೊನ್ನೆ
ಓಡಿ ಹೋಯಿದು ,ಬಸ್ಸು   ಡ್ರೈವರಾಡ |
ಎರಡು ಮಕ್ಕಳ  ಅಬ್ಬೆ
ಸೊಕ್ಕು ತಲಗಡರಿತ್ತೋ  ?
ಊರಿಲೆಲ್ಲೋರು ಮಾತಾಡ್ತವಾಡ |೯|

 ಅದ! ಲವ್ವು ಮೇರೇಜು
ವರುಷ ಕಳುದತ್ತೈದು
ಎರಡು ಮಕ್ಕೊ!ಇಬ್ರು ಕೆಲಸಲ್ಲಿದ್ದು |
ಈಗ   ಡೈವೋರ್ಸಾಡ !
ಕಾಲ ಎಲ್ಲಿಗೆ ಬಂತು
ಮುಂದಕ್ಕೆ ಎಂತೆಂತೊ ಕಾಂಬಲಿದ್ದು |೧೦|

 ಅಮ್ಮಕ್ಕತ್ತಿಗೆ ಮಗಳು
ಬೊಂಬೈಲಿಪ್ಪದಾಡ
ರಜೆ ಮಾಡಿ ಮೊನ್ನೆ ಊರಿಂಗೆ ಬೈಂದು  |
ಅತ್ತಗೂ ಸೊಸೆಗುದೇ
ಎಣ್ಣೆ ಸೀಗೆ  ಕಾಯಿ
ಇನ್ನು ಹೋವ್ತಿಲ್ಲೇಡ ಲಗ್ಗೇಜು ತೈಂದು |೧೧|

 ನಮ್ಮೋರು ಮಾಂತ್ರವೇ
ಅಲ್ಲಡೋ ಒಪ್ಪಣ್ಣ
ಪೇಪರಿಲಿ ಎಷ್ಟುದೆ  ಶುದ್ದಿ ಬೈಂದು |
ಟೀವಿ ಧಾರಾವಾಹಿ
ಈಗಾಣ ಸಿನೆಮಂದ
ತಲೆ ಕೆಡ್ತೊ  ಹೇಳಿ ಅನುಮಾನ ಇದ್ದು |೧೨|

 ಈಗಾಣ ಮಕ್ಕೋಗೆ
ಧರ್ಮ ದೇವರ ನೆಂಪೋ
ಮರದತ್ತೋ ಹೆರಿಯೋರ ಒಳ್ಳೆ ಮಾತು |
ಅಂದ್ರಾಣ ಕಾಲಲ್ಲು
ಹಿಂಗೆಲ್ಲ ಇದ್ದತ್ತೊ
ಕಾಲವೇ ಏನೆಲ್ಲಾ ನೋಡೆಕಾವ್ತೋ! |೧೩|

~~~**~~~

7 thoughts on “ಕೇಚಣ್ಣನ ಶುದ್ದಿಗೊ

  1. ಕೇಚಣ್ಣನ ಶುದ್ದಿಗಳೂ ರೈಸಿದ್ದು, ಬಾಲಣ್ಣನ ಪದ್ಯಂಗಳೂ ರೈಸಿದ್ದು. ಕೇಚಣ್ಣನ ಶುದ್ದಿಗೊ ಇನ್ನೂ ಮುಂದುವರಿಯಲಿ.

  2. ವರ್ತಮಾನದ ವರ್ತಮಾನಂಗಳ ಕೇಚಣ್ಣನ ಬಾಯಿಂದ ಕೇಳಿ ಕೊಶಿಯಾತು ಬಾಲಣ್ಣ.

  3. “ಶ್ಯಾನುಭೋಗರ ಮಗಳು” ನೆನಪ್ಪಾತು ಬಾಲಣ್ಣ.ಕೇಚಣ್ಣ ಅಲ್ಲಿ೦ದ ಇಲ್ಲಿ೦ದ ಹೆರ್ಕಿ ಕೊಡುವ ಊರಿನ ಶುದ್ದಿಗಳಲ್ಲಿ ಎಷ್ಟೊ೦ದು ಕಟು ಸತ್ಯ೦ಗೊ ತು೦ಬಿದ್ದು ಹೇಳಿ ಕ೦ಡತ್ತು.
    ಈ ಸಾಲುಗಳ ಓದಿಯಪ್ಪಗ ನಮ್ಮ ಸಮಾಜ ಎಲ್ಲಿಯೋ ಒ೦ದು ತಪ್ಪು ಮಾಡ್ತಾ ಇದ್ದೋ ಹೇಳ್ತ ಭಾವನೆ ಬ೦ತು.
    “ನಮ್ಮ ಜಾತಿಗೆ ದತ್ತು
    ತೆಕ್ಕೊಂಡು ಬಪ್ಪದದ
    ಧಾರೆ ಎರವದು ಕೂಡ ನಮ್ಮೋರಾಡ”

    ಅಪ್ಪು , ಧಾರೆ ಎರವದರ ನಾವು ನೋಡುತ್ತು,ಆದರೆ ಸಭೆಲಿ ಕೂದು ಧಾರೆ ಎರವರದರ ನೋಡುವ ಆ ಕೂಸಿನ ಅಬ್ಬೆ ಅಪ್ಪನ ಮನಸ್ಸಿಲಿ ಎಷ್ಟು ಬೇನೆ ಒಳಿಗೋ?
    ಕಡೆಯಾಣ ಎರಡು ಚರಣ೦ಗಳಲ್ಲಿ ಮೂಡಿದ ಸ೦ಶಯ೦ಗೊ ನಿಜವೇ..

  4. ಹಾಸ್ಯ ಧಾಟಿಲಿ ಸತ್ಯದ ಕುಟುಕು! ಲಾಯ್ಕ ಆಯಿದು.

  5. ಬಾಲಣ್ಣ, ‘ ಕೇಚಣ್ಣನ ಶುದ್ದಿಗೊ’ ಭಾರೀ ಲಾಯ್ಕಾಯಿದು. ನಮ್ಮೆದುರು ಇಪ್ಪ ಸಮಾಜವ ಪ್ರತಿನಿಧಿಸುತ್ತಾ ಇಪ್ಪ ಕೇಚಣ್ಣ ಹೇಳುವ ಶುದ್ದಿಗೊ ಈಗ ಊರಿಲಿ ನಡೆತ್ತಾ ಇಪ್ಪದೇ. ಕಟು ವಾಸ್ತವವ ನವಿರಾದ ಹಾಸ್ಯಲ್ಲಿ ಹೇಳಿದ್ದು ಕವಿತ್ವದ ಗಟ್ಟಿತನವ ತೋರುಸುತ್ತು. ಯಾವ ಆಡಂಬರವೂ ಇಲ್ಲದ್ದೆ ಸರಳವಾಗಿ ಹೇಳೆಕ್ಕಾದ್ದರ ಹೇಳ್ತೀರನ್ನೆ- ಅದಕ್ಕೆ- ನಿಂಗೊಗೆ ಇಲ್ಲಿಂದಲೇ ಅಡ್ಡಬೀಳ್ತೆ.

  6. ಪದ್ಯಂಗ ಲಾಯಿಕ ಇದ್ದು ತಮಾಷೆ ಆಗಿ ಕಾಣುತ್ತರುದೆ ಅದರ ಹಿಂದಣ ವಾಸ್ತವ ಮನಸ್ಸು ತಟ್ಟುತ್ತು

  7. ಹ ಹ ಹಾ…. ಬಾಲಣ್ಣ.., ಒಳ್ಳೆ ರೈಸಿದ್ದು. ಕೊಶಿ ಆತಿದಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×