ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

`ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ, 4.2 out of 5 based on 10 ratings

ಬೆಶಿ ಬೆಶಿ ಒಪ್ಪಂಗೊ..

  • shyamaraj.d.k: Lekhana layaka ayidu Oppanna.
  • ಗಣೇಶ ಮಾವ°: ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು...
  • ಗುತ್ತಿನ ಸದಾಶಿವ°: ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು –...
  • ಶ್ರೀಕೃಷ್ಣ ಶರ್ಮ.: ಚುಬ್ಬಣ್ಣ ತೆಗದ ಪಟಂಗೊ ಚೆಂದ ಚೆಂದ ಇದ್ದು. ಇನ್ನೂ ಹೀಂಗಿಪ್ಪದು ಬರಲಿ
  • ಡಾ.ಸೌಮ್ಯ ಪ್ರಶಾಂತ: ಎನಗುದೇ ದಿವ್ಯ ಹೇಳಿದ್ದು ಸರಿ ಕಾಣ್ತು..ದೇವರಕೋಣೆ ಸಣ್ಣದಿಪ್ಪದು ಆದಿಕ್ಕು ಶುಭ ಅತ್ತೆಯ...
  • Akshara: gooood one…. :)
  • Akshara: tumbaa laayka iddu..
  • ಶ್ರೀಕೃಷ್ಣ ಶರ್ಮ.ಹಳೆಮನೆ: ನಮ್ಮ ಜೀವಮಾನ ಇಡೀ ಎಂತಾದರೂ ಕಲಿವಲೆ ಇದ್ದೇ ಇರ್ತು. ಗುರುಗಳ ಮಾರ್ಗದರ್ಶನ ಯಾವಾಗಲೂ...
  • ದಿವ್ಯಾ: ದೇವರ ಕೋಣೆ ದೊಡ್ಡ ಇದ್ದು ಹೇಳಿ ಆರಾದರೂ ದೇವರ ಕೋಣೆಯ ಒಳಗೆ ನಾಯಿಯ ಹೋಪಲೆ ಬಿಡ್ತವ ಒಪ್ಪಣ್ಣ...
  • ದಿವ್ಯಾ: ಒಪ್ಪಣ್ಣ….. ಈ ಲೇಖನ ಓದಿ ಅಪ್ಪಗ ಎನಗೆ ಒಂದು ಸಂಶಯ ಬಂತು .. ಎಂತ ಹೇಳಿದರೆ ಒಬ್ಬನ ಮನೆಯ ದೇವರ...
  • ಶ್ರೀಶ. ಹೊಸಬೆಟ್ಟು: ಒಪ್ಪಣ್ಣ, ನೀನು ಶುಭತ್ತೆಯ ಹೀಂಗೆಲ್ಲ ಹೇಳಿರೆ ಹೇಂಗೆ? ಪಾಪ ಮನೆ ಕಟ್ಟುವಾಗ ಮಗಂಗೊಂದು...
  • ಶ್ರೀಶ. ಹೊಸಬೆಟ್ಟು: [ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.] ನಾರಾಯಣಂಗೆ ಮತ್ತೆ...
  • ಶ್ರೀದೇವಿ ವಿಶ್ವನಾಥ್: ಒಪ್ಪಣ್ಣ, ಶುದ್ದಿ ಲಾಯ್ಕಾಯಿದು.ಈಗಾಣ ಜೆನಂಗೊಕ್ಕೆ, ಸಣ್ಣ ಕುಟುಂಬ, ಸಣ್ಣ ದೇವರ ಕೋಣೆ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪಟಂಗೊ ಲಾಯಿಕ ಬಯಿಂದು. ಇದಕ್ಕೆ contrast ಪಟಂಗೊ ಬೇಕಾರೆ ನಮ್ಮ ರೋಡ್ ಗಳದ್ದು...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಚೆನ್ನಬೆಟ್ಟನ ಮದುವೆಗೆ ಹೋಗಿತ್ತಿದ್ದೆ. ಈಗ ಸಟ್ಟುಮುಡಿಗೆ ಕೂಡಾ ಹೋದ ಹಾಂಗೆ ಆತು....
  • ಕೆದೂರುಡಾಕ್ಟ್ರು: {ಸಿನೆಮ ನೋಡ್ಲೆ ಬ೦ದ ಕಾರು!} ಆ ಕಾರು ನಮ್ಮಲಿಯಾಣ ಸಿನೆಮ ತಿಯೇಟರಿನಶ್ಟು ದೊಡ್ಡವೇ ಇದ್ದನ್ನೆ!
  • ಅಜ್ಜಕಾನ ಭಾವ: {ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ} ಅದಾ.....
  • ಅಜ್ಜಕಾನ ಭಾವ: ಮಾವ ನಿಂಗೊಳ ಚುಟುಕು ಸಾಂಧರ್ಬಿಕವಾಗಿ ಲಾಯ್ಕಲ್ಲಿ ಬೈಂದು.. ನಿಂಗೊ ಹೇಳಿದ “ಒಂದು...
  • ಪುಟ್ಟಭಾವ ಹಾಲುಮಜಲು: [ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ.] ಬೇರೆಯವ್ವು ಅನುಭವಂದ ಹೇಳಿದ್ದರ...
  • ಪುಟ್ಟಭಾವ ಹಾಲುಮಜಲು: [ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ] ಹೇಳುಲೇ ಎಡಿಯ!! ಬೋಂಡ ಆದಿಕ್ಕು!!
  • ಪುಟ್ಟಭಾವ ಹಾಲುಮಜಲು: ತಲೆಕ್ಕೊಂಬು ಮಾಡಿರೆ ಬೇಗ ತಲೆಗೆ ಹೋಗಿ ಬೇಗ ಹೇಳಿಕೊಡುಗು!!!!
  • ಚುಬ್ಬಣ್ಣ...: “…..ಐರಾವತಲ್ಲಿ ದೇವೇಂದ್ರನ ಹಾಂಗೆ ಹೆರಟಿದೆ” ಬಾವ… :P ಎನಗೆ ಒ೦ದು...
  • ಪುಟ್ಟಭಾವ ಹಾಲುಮಜಲು: ಭಾವಾ!! ಮದಿಮ್ಮಾಯನ ಸ್ವಾಗತ ಮಾಡಿದ್ದೂ ಭಾರೀ ಲಾಯ್ಕಯ್ದು!! ಅದು ಸರಿ !! ಉದಿಯಪ್ಪಗಳೇ...
  • raghumuliya: ಒಪ್ಪಣ್ಣಾ, ಒಳ್ಳೆಯ ಲೇಖನ. ತರವಾಡು ಮನೆಗಳ ದೇವರ ಕೋಣೆ ಮನೆಯ ಮಧ್ಯಲ್ಲಿದ್ದು, ಅದರ ಸುತ್ತಲೂ...
  • Jayalakshmi Pailoor: Theertha ellinda kudiyakku? Enage artha ayiddille. Chandana, kumkuma,...
  • ಗೋಪಾಲ ಮಾವ: ಬೆಂಗಳೂರಿಂದ ಮಂಗಳೂರಿಂಗೆ ಐರಾವತಲ್ಲಿ ಇಳಿದು ಬಂದ ಅನುಭವ, ಸಟ್ಟುಮುಡಿಯ ವಿವರಣೆ ಶೈಲಿ...
  • ಅಜ್ಜಕಾನ ಭಾವ: {ಅಂತೂ ಹೋದ ಎನಗೆ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು. ಓದಿದ ನಿಂಗೊಗೆ ?? } ಬಂದ್...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    `ಹಿಮಾಲಯನ್ ಬ್ಲಂಡರ್’ – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

    March 1, 2010 ರ 10:00 amಗೆ ನಮ್ಮ ಕೊಳಚ್ಚಿಪ್ಪು ಬಾವ ಬರದ್ದು, ಇದುವರೆಗೆ 6 ಒಪ್ಪಂಗೊ.

    ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು.

    ’99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ ನಮ್ಮಲ್ಲಿ ಸುಮಾರು ಜೆನಕ್ಕೆ ದೇಶದ ಬಗ್ಗೆ, ನಮ್ಮ ಸೈನ್ಯದ ಬಗ್ಗೆ ಗೊತ್ತೆ ಆವುತ್ತಿತ್ತಿಲ್ಲೆ.
    ಆ ಯುದ್ಧ ಆಗಿ ಏಷ್ಟೋ ಸಮಯ ಆದ ಮೇಲೆ ಆನು ಪುಸ್ತಕ ಹುಡುಕ್ಕೆಕ್ಕಾರೆ ಅನಿರೀಕ್ಶಿತ ಆಗಿ ಸಿಕ್ಕಿದ ಪುಸ್ತಕ “ಹಿಮಾಲಯನ್ ಬ್ಲಂಡರ್“.
    ಮೂಲ ಇಂಗ್ಲೀಷಿಲಿ ಬರದ ಜೆನ ಮೇಜರ್. ಜಾನ್ ಪರಶುರಾಮ್ ದಳವಿ.
    1962ರ ಯುದ್ಧಲ್ಲಿ ಭಾರತದ ಬಗ್ಗೆ ಬರೆದ ಪುಸ್ತಕ ‘ಏಕೆ ಭಾರತ ಆ ಯುದ್ಧಲ್ಲಿ ಸೊತತ್ತು ,ಹಾಂಗೆ ಸೊಲಲೇ ಯಾರು ಕಾರಣ’ ಹೇಳ್ತ ಪ್ರಶ್ನೆಗೆ ಉತ್ತರ ಪುಸ್ತಕಲ್ಲಿ ಸಿಕ್ಕುತ್ತು.

    1959 ರಲ್ಲಿ ಲದಾಖ್ (ಜಮ್ಮು ಕಾಶ್ಮೀರ ರಾಜ್ಯದ ಜಿಲ್ಲೆ ) ಲಿ ಗಡಿಂದ 40 ಕಿಲೋ ಮೀಟರ್ ಒಳ ಬಂದು ನಮ್ಮ ದೇಶದ 21 ಜೆನ ಸೈನಿಕರ ಕೊಂದವು ಚೈನಾದವು.
    ಅದರ ಬಗ್ಗೆ ಆಗ ಇದ್ದ ಸೇನೆಯ ಗುರಿಕ್ಕಾರ ಜನರಲ್ ತಿಮ್ಮಯ್ಯ ಆಗಾಣ ರಕ್ಷಣ ಮಂತ್ರಿ ಕೃಷ್ಣ ಮೆನನ್ ನ ಹತ್ರೆ, “ಈ ಚೈನಾದವು ನಮ್ಮ ದೊಡ್ಡ ಶತ್ರು. ಅದರ ಬಗ್ಗೆ ನಾವು ರಜ್ಜ ಗಮನಕೊಡೆಕ್ಕು!” ಹೇಳಿಯಪ್ಪಗ, ಆಗಾಣ ಪ್ರದಾನಿ ನೆಹರು , “ಜನರಲ್ ತಿಮ್ಮಯ್ಯಂಗೆ ಎಂತದೂ ಅರಡಿತಿಲ್ಲೆ. ಚೈನಾ ನಮಗೆ ದೊಡ್ಡಣ್ಣ ಇದ್ದಂಗೆ. ಅದು ನವಗೆ ಮೋಸ ಮಾಡುಗಾ?” ಹೇಳಿ ಉತ್ತರ ಕೊಡ್ತ.
    ಇದರಿಂದ ಬೇಜಾರಾಗಿ ಜನರಲ್ ತಿಮ್ಮಯ್ಯ ರಾಜಿನಾಮೆ ಕೊಟ್ಟು ಹೆರಬತ್ತವು. ಮುಂದೆ ಅದೇ ಜನರಲ್ ತಿಮ್ಮಯ್ಯ ವಿಶ್ವ ಸಂಸ್ಥೆಲಿ ದೊಡ್ಡ ಹುದ್ದೆಗೆ ಹೋವುತ್ತವು.

    ಭಾರತ ಸರಕಾರ ಮಿಲಿಟ್ರಿ ಆಯುಧ ಮಾಡುವ ಕಾರ್ಖಾನೆಲಿ ಕುಕ್ಕರು ಸೌಟು ಮಾಡುಸುಲೆ ಶುರು ಮಾಡಿತ್ತು.
    ಆದರೆ ಚೈನಾ ಭಾರತದ ಗಡಿಯಹತ್ರೆ ಹೊಸ ಮಾರ್ಗ ಹೊಸ ಕಟ್ಟಡ ಕಟ್ಟುಲೆ ಶುರುಮಾಡಿತ್ತು.
    ಯುದ್ಧ ಶುರು ಆಯೆಕ್ಕಾರೆ ಸುಮಾರು ಸಾವಿರ ಚೈನಾ ಸೈನಿಕರಿಂಗೆ ಹಿಂದಿ ಬತ್ತಿತ್ತು. ನಮ್ಮಲ್ಲಿ ಒಬ್ಬಂಗೂ ಚೈನಾದ ಭಾಷೆ ಬತ್ತಿತ್ತಿಲ್ಲೆ.

    ಇದೆಲ್ಲಾ ಆಯೆಕ್ಕಾರೆ ಸೆಪ್ಟೆಂಬರ 8, 1962ಕ್ಕೆ ಚೈನಾ ಯುದ್ದ ಶುರು ಮಾಡಿತ್ತು.
    ಗಡಿಲಿ ಒಂದೆರಡು ಕಡೆ ಬೆಡಿ ಹೊಟ್ಟಲೆ ಶುರು ಆತು. ಆ ಸಮಯಲ್ಲಿ ಭಾರತದ ಸೇನೆಯ ಗುರಿಕ್ಕಾರ ಬಿ.ಎಮ್.ಕೌಲ್ ನ ಹತ್ತರೆ ಈ ಸುದ್ದಿ ಹೋವುತ್ತು.
    ಆ ಮನುಷ್ಯ ‘ಆನು ರಜೆ ಹಾಕಿ ಎನ್ನ ಹೆಂಡತಿ ಮಕ್ಕಳೊಟ್ಟಿಂಗೆ ಗಮ್ಮತು ಮಾಡಿಯೊಂಡು ಇದ್ದೆ. ಈಗ ಎನಗೆ ಉಪದ್ರ ಕೊಡೆಡಿ’ ಹೇಳ್ತ.
    ನೆಹರು ಹತ್ರ ಹೇಳಿರೆ “ಚೈನಾದವು ಮೊದಲು ನಮ್ಮ ಮೇಲೆ ಗುಂಡು ಹಾರ್ಸುವ ವರೆಗು ನಾವು ಹಾರ್ಸುಲೆ ಆಗ” – ಹೇಳುವ ಆದೇಶ ಕೊಡ್ತ.
    ಅದರೊಟ್ಟಿಂಗೆ ‘ನಾವು ನಮ್ಮ ಗಡಿ ಬಿಟ್ಟು ಹಿಂದೆ ಬಪ್ಪಲೆ ಎಡಿಯ’ ಹೇಳಿಯೂ ಹೇಳ್ತ.

    ಮಿಲಿಟ್ರಿಯವೆಲ್ಲ ಗಡಿ ಬಿಟ್ಟು ಕೆಳ ಬಪ್ಪ ಆ ಪರ್ವತದ ಕೊಡಿಲಿ ಕೂತು ಯುದ್ಧ ಮಾಡುದು ಬೇಡ ಹೇಳಿರು ಕೇಳಿದಿಲ್ಲೆ.
    ಆ ಪರ್ವತಗಳ ಹತ್ತುಲೆ ನವಗೆ ೩ ದಿನ ಬೇಕು ಇನ್ನು ಅಲ್ಲಿ ಸಿಕ್ಕಿ ಹಾಕಿಯೊಂಡರೆ ಕೆಳಬಪ್ಪಲೆ ಎಡಿಯ, ನಾವು ಹಿಂದೆ ಬಂದು ಒಂದು ಒಳ್ಳೆ ಜಾಗೆಲಿ ನಿಂತು ಅವರ ಸೋಲ್ಸುವ ಹೇಳ್ರು ಕೇಳದ್ದೆ ಕೂರ್ತ ಚಾಚಾ ನೆಹರು. ಅಲ್ಲಿ ಮರಗಟ್ಟುವ ಚಳಿಲಿ ಹಳೇ ಗನ್ನಿನ ಹಿಡುಕ್ಕೊಂದು ಒಂದು ಮುಷ್ಟಿ ಕಾಡತೂಸು ಕಿಸೆಲಿ ಇಟ್ಟುಕ್ಕೊಂಡು ಸರಿಯಾಗಿ ತಿಂಬಲೆ ಆಹಾರ ಇಲ್ಲದ್ದೇ ಭಾರತದ ಸೈನಿಕರು ಚೈನಾದ ಸೈನಿಕರಿಂದ 80 ಫೀಟಿನ ದೂರಲ್ಲಿ ಎರಡು ದಿನ ಕೂರ್ತವು.
    ಅವರ ಎದುರು ಕೂತ ಚೈನಾದ ಸೈನಿಕನ ಕೈಲಿ ಇಪ್ಪ ಗನ್ನಿಂದ ನಿಮಿಶಕ್ಕೆ 40 ಗುಂಡು ಹೊಟ್ಟುಗು, ಚಳಿ ಕಾಸುಲೆ ಬೇಕಾದಷ್ಟು ಕಟ್ಟಿಗೆ, ತಿಂಬಲೆ ಅಹಾರ, ಕುಡಿವಲೇ ನೀರು, ಬೆಚ್ಚಂಗೆ ಹೊದವಲೆ ವಸ್ತ್ರ ಎಲ್ಲ ಇತ್ತು. ನಮ್ಮವರತ್ರ ಎಂತದುದೆ ಇತ್ತಿಲ್ಲೆ.!
    ಎರಡು ದಿನ ಚಳಿಲಿ ಮರಗಟ್ಟಲಿ ಹೇಳಿ ಕಾದು ಕೂತು ಚೈನಾದವು ನಮ್ಮ ಮೇಲೆ ಆಕ್ರಮಣ ಮಾಡಿಯಪ್ಪಗ ನಮ್ಮ ಸೈನಿಕರಿಂಗೆ ಬೆಡಿ ಹೊಟ್ಟುಸುಲೆದೆ ತ್ರಾಣ ಇಲ್ಲದ್ದೆ ನುಶಿಗಳಾಂಗೆ ಸತ್ತು ಬೀಳ್ತವು.
    ಆ ದಿನ ಸತ್ತ ಒಬ್ಬ ಮೇಜರಿನ ಹೊಟ್ಟೆಲಿ 144 ಗುಂಡು ಸಿಕ್ಕಿತ್ತಡ. ನಾಲ್ಕು ದಿನಲ್ಲಿ 16 ಕಿಲೋ ಮೀಟರ್ ಒಳ ಬಂದಾಗಿತ್ತು ಚೈನಾದ ಸೇನೆ.

    ಹಿಮಾಲಯನ್ ಬ್ಲಂಡರ್ - ಮೂಲಪುಸ್ತಕದ ಮುಖಪುಟ

    ಹಿಮಾಲಯನ್ ಬ್ಲಂಡರ್ - ಮೂಲಪುಸ್ತಕದ ಮುಖಪುಟ

    ಚೈನಾ ಯಾವಾಗ ಇನ್ನು ಯುದ್ಧ ಮಾಡುತ್ತು ಹೇಳಿ ಗೊಂತಾತೋ ಆಗ ಹೆಚ್ಚುವರಿ ಸೈನಿಕರ ಕಳ್ಸಿದವು.
    ಆದರೆ ಕಳ್ಸಿದ್ದು ರಾಜಸ್ತಾನಲ್ಲಿ ಪಂಜಾಬಲ್ಲಿ ಇದ್ದ ಸೈನಿಕರ. ಅವರಲ್ಲಿ ಮುಕ್ಕಾಲರಷ್ಟು ಜೆನ ಹಿಮವ ನೋಡಿದ್ದು ತವಾಂಗ್ ಊರಿಲಿ.
    (ಅರುಣಾಚಲ ಪ್ರದೇಶಲ್ಲಿ ಇಪ್ಪ ಸಣ್ಣ ಊರು, ಭಾರತಂದ ಚೈನಾಕ್ಕೆ ಇಪ್ಪ ಒಂದು ದಾರಿಲಿ ಬತ್ತು).
    ಮರಳುಗಾಡಿಲಿ ಉಪಯೋಗ ಮಾಡುವ ಬಟ್ಟೆಯ ಷೂ ಹಾಕಿಯೊಂಡು, ಹಿಮಲ್ಲಿ ಹೋರಾಡುಲೆ ಹೇಳಿದ್ದರ ಕಣ್ಣು ಮುಚ್ಚಿಯೊಂಡು ಮಾಡಿದವು.
    ಬಟ್ಟೆಯ ಷೂ ಹಿಮಲ್ಲಿ ಕಂಡಾಬಟ್ಟೆ ಜಾರ್ತಡ – ನಡವಲೆ ಆವುತ್ತಿಲ್ಲೆಡ.
    ಅವೆಲ್ಲಾದ್ರು ಹಾಂಗೆ ಮಾಡದ್ರೆ ಅಸ್ಸಾಂ ಮತ್ತೆ ಬೇರೆ ರಾಜ್ಯಂಗೋ ಇಂದು ಚೈನಾಲ್ಲಿ ಇರ್ತ ಇತ್ತು.
    ಹಿಮಲ್ಲಿ ಇನ್ನೊಂದು ತೊಂದರೆ ಹೇಳಿರೆ ಕಣ್ಣಿಂಗೆ ಬಡಿವ ಸೂರ್ಯನ ಬೆಣಚ್ಚು. ಹಿಮಂದ ಪ್ರತಿಫಲನ ಅಪ್ಪ ಸೂರ್ಯನ ಬೆಣಚ್ಚು ಕಣ್ಣಿಂಗೆ ಬಡುದು ಸುಮಾರು ಜನ ಸೈನಿಕರು ಕಣ್ಣು ಕಾಣದ್ದೆ ಚೈನಾದ ಸೈನಿಕರ ಕೈಗೆ ಸಿಕ್ಕಿ ಬಿದ್ದಿತ್ತಿದವಡ.

    ಹೀಂಗೆ ಸೋಲೆಕ್ಕಾರೆ ಭಾರತ ದೇಶವೇ ಚೈನಾದ ಎದುರು ನಿಂದತ್ತು.
    ಸರಕಾರ ಎಷ್ಟೇ ತಪ್ಪು ಮಾಡಿರೂ ಅದರ ಬಗ್ಗೆ ಯೋಚನೆ ಮಾಡದ್ದೆ ನಮ್ಮ ಸೈನಿಕರಿಂಗೆ ಹೇಳಿ ದೇಣಿಗೆ ಒಟ್ತು ಮಾಡುಲೆ ಶುರು ಮಾಡಿದವು.
    ಇಷ್ಟೆಲ್ಲಾ ಆಯೆಕ್ಕಾರೆ 19 ನವಂಬರ 1962ಕ್ಕೆ ಚೈನಾ ಯುದ್ಧ ವಿರಾಮ ಘೋಷಣೆ ಮಾಡಿತ್ತು.
    ಆ ಯುದ್ಧಲ್ಲಿ ಭಾರತದ 1383 ಜೆನ ಸೈನಿಕರು ಅವರ ಪ್ರಾಣ ಕಳಕ್ಕೊಂಡವು 1696 ನಾಪತ್ತೆ ಆದವು..
    ಈ ಸೋಲಿನ ಮತ್ತೆ ಭಾರತ ಸರಕಾರ ಓರಕ್ಕಿಂದ ಎದ್ದು ಸೇನೆಗೆ ಪೈಸೆ ಕೊಟ್ಟು ಅದಕ್ಕೆ ಬೇಕಾದ ಎಲ್ಲಾ ಆಯುಧಗಳ ತೆಕ್ಕೊಂಬಲೆ ವ್ಯವಸ್ಥೆಮಾಡಿತ್ತು.
    ಆದರೆ ಸರಕಾರವ ಒರಕ್ಕಿಂದ ಏಳ್ಸೆಕ್ಕಾರೆ ಇಷ್ತು ಜೆನ ಸೈನಿಕರು ಸಾಯೆಕ್ಕಾತನ್ನೆ ಹೇಳುದೇ ಬೆಜಾರದ ಸಂಗತಿ.

    ನೆಹರು ದೇಶಕ್ಕಾಗಿ ಸುಮಾರು ಒಳ್ಳೆ ಕೆಲಸ ಮಾಡಿದ್ದರೂ , ಈ ಯುದ್ಧದ ವಿಷಯಲ್ಲಿ ಮಾಡಿದ ತಪ್ಪು ಎಲ್ಲ ಒಳೆ ಕೆಲಸವ ಮರವಾಂಗೆ ಮಾಡುತ್ತು.
    ಪುಸ್ತಕದ ಬಗ್ಗೆ ಬರವದಾದರೆ, ಯುದ್ಧದ ಪ್ರತಿ ಹಂತವ ಸವಿಸ್ತಾರ ಅಗಿ ವಿವರಣೆ ಮಾಡುತ್ತಾ ಹೋವುತ್ತ ಮೇಜರ್ ದಳವಿ.
    ಎಲ್ಲದರಿಂದ ಬೇಜಾರಪ್ಪದು ಮೇಜರ್ ದಳವಿ ಚೈನಾದ ಸೇನೆಯ ಕೈಲಿ ಯುದ್ಧ ಖೈದಿಆಗಿ ಬಿಡುಗಡೆ ಆಗಿ ಬಪ್ಪಗ ಆ ಜೆನವ ಚೈನಾ ದ ಗೂಡಚಾರ ಹೇಳುವಾಂಗೆ ಸಂಶಯಲ್ಲಿ ನೋಡುವ ಸಂಗತಿ.
    1969 ರಲ್ಲಿ ಈ ಪುಸ್ತಕ ಬಿಡುಗಡೆ ಆದ ಕೂಡಲೇ ಅದರ ಸರಕಾರ ನಿಷೇದ ಮಾಡ್ತು.
    ಸುಮಾರು 20 ವರ್ಷ ಆದ ಈ ಪುಸ್ತಕದ ನಿಷೇಧವ ರದ್ದು ಮಾಡ್ತವು.

    ಈ ಪುಸ್ತಕವ ಕನ್ನಡಕ್ಕೆ ರವಿ ಬೆಳಗೆರೆ – ತುಂಬಾ ಮೊದಲು ಲಾಯ್ಕು ಬರಕ್ಕೊಂಡು ಇಪ್ಪಾಗ – ಅನುವಾದ ಮಾಡಿದ್ದ!
    ಸಿಕ್ಕಿದರೆ ಆ ಪುಸ್ತಕವ ತೆಕ್ಕೊಂಡು ಓದಿ, ಇಲ್ಲದ್ರೆ ಬೈಲಿನ ಆರತ್ರಾರು ಕೇಳಿ, ಇಪ್ಪಲೂ ಸಾಕು.

    ಅಖೇರಿಗೆ: ನಮ್ಮ ಭಾಷೆಲಿ (ಕನ್ನಡಲ್ಲಿದೇ ) ಸುಮಾರು ಶಬ್ದಂಗೊ ಇದ್ದ್ದು ಅದರ ನಾವು ಈಗ ಬಳಕೆ ಮಾಡ್ತದೆ ಇಲ್ಲೆ.
    ಹೀಂಗೆ ಮಾಡಿದ್ರೆ ನಮ್ಮ ಭಾಷೆಯ ನಾವು ನಿಧಾನಕ್ಕೆ ಕೊಂದ ಹಾಂಗೆ ಅಲ್ಲದ. .?
    ನಿಂಗೊಗೆ “ಒಲಿಪ್ಪೆ” ಹೇಳಿರೆ ಎಂತ ಹೇಳಿ ಗೊಂತಿದ್ದ?
    ಗೊಂತಿದ್ದರೆ ಹೇಳಿ.

    `ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ, 4.2 out of 5 based on 10 ratings
    VN:F [1.9.3_1094]
    ರೇಟೆಷ್ಟು :
    Rating: 4.2/5 (10 votes cast)

    `ಹಿಮಾಲಯನ್ ಬ್ಲಂಡರ್’ – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ - ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

    1. ಮುರಳಿ

      )
      VA:F [1.9.3_1094]
      Rating: 0 (from 0 votes)

      ಬರದ್ದು ಭಾರೀ ಲಾಯ್ಕಾಯಿದು ಭಾವಾ .

      [ಉತ್ತರುಸಿ]

    2. ಆದಿ

      )
      VA:F [1.9.3_1094]
      Rating: 0 (from 0 votes)

      ನಮಸ್ಕಾರ ಒಪ್ಪಣ್ಣ,, ನಿನ್ನ ಮಾತು ನಿಜ, ಯುದ್ದ ಬಾರದ್ದೆ ನಮ್ಮ ಜನಕ್ಕೆ ಎಚ್ಚರಿಗೆ ಆವುತ್ತಿಲ್ಲೆ.. ನೀ ಹೇಳಿದ ಪುಸ್ತಕವ ಆನುದೆ ಓದಿದ್ದೆ.. ಕನ್ನಡ ಅನುವಾದ ಓದಿದ ನೆನಪ್ಪು.. ಹಾಂಗೆ ಕಾರ್ಗಿಲ್ ಬಗ್ಗೆ ಬರದ ಒಂದು ಪುಸ್ತಕವುದೆ ಇದ್ದು. ಕಾರ್ಗಿಲ್ ಕಂಪನ ಹೇಳಿ ಅದರ ಕನ್ನಡ ಅನುವಾದದ ಹೆಸರು.. ನಿಜಕ್ಕು ಓದೆಕ್ಕಾದ್ದು. ಆನು ಆ ಪುಸ್ತಕವ ತೆಗದು ಮಡುಗಿತ್ತಿದ್ದೆ, ಆರೋ ಪುಣ್ಯಾತ್ಮ ಓದ್ಲೆ ಹೇಳೆ ಕೊಂಡೋದವ ಪತ್ತೆಯೆ ಇಲ್ಲೆ!
      ಓಲಿಪ್ಪೆ ಹೇಳಿರೆ ಎಂತ ಹೇಳಿ ಎನಗೆ ಗೊಂತಿಲ್ಲೆ ಆತ,, ಸತ್ಯ ಹೇಳ್ತೆ.. :)

      [ಉತ್ತರುಸಿ]

    3. ದಿವ್ಯ

      )
      VA:F [1.9.3_1094]
      Rating: +1 (from 1 vote)

      ಸನತ್ತಣ್ಣ ಬರದ್ದು ಲಾಯಿಕಾಯಿದು.. keep writting.. :)

      [ಉತ್ತರುಸಿ]

    4. ಕೊಳಚ್ಚಿಪ್ಪು ಬಾವ
      ಕೊಳಚ್ಚಿಪ್ಪು ಬಾವ

      )
      VN:F [1.9.3_1094]
      Rating: 0 (from 0 votes)

      ದಿವ್ಯ ,ಮುರಳಿ : :) , I will try to keep writing.

      ಆದಿ , ಬರದ್ದು ಆನು ನಮಸ್ಕಾರ ಒಪ್ಪಣ್ಣಂಗೋ? ಇನ್ನು ಪುಸ್ತಕ ಕೊಡುವಾಗ ಒಂದು ಪುಸ್ತಕಲ್ಲಿ ಬರದು ಮಡಿಕ್ಕೋ ಆತ. ಲೆಕ್ಕ ಬರದಿಟ್ಟುಕೊಂಡಾಂಗೆ. ಮರತ್ತು ಹೋಗ ಆರು ಪುಸ್ತಕ ತೆಕೊಂಡು ಹೋದ್ದು ಹೇಳಿ.

      [ಉತ್ತರುಸಿ]

    5. ಅಜ್ಜಕಾನ ರಾಮ

      )
      VA:F [1.9.3_1094]
      Rating: 0 (from 0 votes)

      ಲಾಯ್ಕ ಬರದ್ದೆ ಆತೋ.. ಹೀಂಗೆ ಇನ್ನು ಹತ್ತು ಹಲವು ಬರಲಿ..

      [ಉತ್ತರುಸಿ]

    6. chandrashekhar yethadka

      )
      VA:F [1.9.3_1094]
      Rating: 0 (from 0 votes)

      layakkayidu….vijaya moleyara,avu …havyaka bhasheli..bareda khategala kuritu research madtavada..hangagi…aasaktaru avara samparkisi…bhashe iddavu..havyaka bhashe olishondiddavu!…gamanisi..miniya..

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: