Oppanna.com

ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ

ಬರದೋರು :   ದೊಡ್ಡಭಾವ°    on   06/09/2011    10 ಒಪ್ಪಂಗೊ

ಚುಕ್ಕಿನಡ್ಕ ಗೋಪಾಲ ಭಟ್

ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ‘ಹೆಡ್‌ಮಾಷ್ಟ್ರು’ ಆಗಿಪ್ಪ ಸಿ.ಎಚ್.ಗೋಪಾಲ ಭಟ್ ಚುಕ್ಕಿನಡ್ಕ ಇವಕ್ಕೆ ಈ ವರ್ಷದ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ ಘೋಷಣೆ ಆತು ಹೇಳುದು ನವಗೆಲ್ಲ ಸಂತೋಷದ ವಿಷಯ.

ಕಳುದ ೩೦ ವರ್ಷಂಗಳಿಂದ ಅದೇ ಶಾಲೆಲಿ ಅಧ್ಯಾಪನ ಮಾಡಿದ ಇವ್ವು, ೨೦೦೭ರಲ್ಲಿ ಶಾಲೆಯ ‘ಹೆಡ್‌ಮಾಷ್ಟ್ರು’ ಆದವು. ವಿಟ್ಲ-ಪಡ್ನೂರು ಗ್ರಾಮದ ಚನಿಲಲ್ಲಿ ೧೯೫೭ರಲ್ಲಿ ತಿಮ್ಮಣ್ಣ ಭಟ್-ಸರಸ್ವತಿ ದಂಪತಿಗಳ ಮಗ° ಆಗಿ ಹುಟ್ಟಿದ ಗೋಪಾಲಣ್ಣ ಸಾಹಿತ್ಯ ಕ್ಷೇತ್ರಲ್ಲಿ ತುಂಬ ಸಾಧನೆ ಮಾಡಿದ್ದವು. ಕಾಸರಗೋಡಿನ ಹೊತ್ತೋಪಾಣ ಪೇಪರಿಲ್ಲಿ ಭಗವದ್ಗೀತೆಯ ಬಗ್ಗೆ ಇವು ಬರದ ಅಂಕಣ ತುಂಬ ಜನಮೆಚ್ಚುಗೆ ಪಡದಿದ್ದತ್ತು. ಕಾಲೇಜು ಶಿಕ್ಷಣ ಮುಗಿಶಿಕ್ಕಿ ಅಳಿಕೆ ಸತ್ಯಸಾಯಿ ಶಿಕ್ಷಣ ಸಂಸ್ಥೆಲಿ ರೆಜಾ ಸಮಯ ಇವು ಸೇವೆ ಸಲ್ಲಿಸಿತ್ತಿದ್ದವು.

ಸುಮಂಗಲ ಇವರ ಧರ್ಮಪತ್ನಿ. ಮಕ್ಕೊ ಅಜಯ್ ಕುಮಾರ್, ಅರುಣ್ ಕುಮಾರ್, ಅಭಯ್ ಕುಮಾರ್ ನೀರ್ಚಾಲು ಶಾಲೆಯ ಹಳೆ ವಿದ್ಯಾರ್ಥಿಗೊ.

ಗೋಪಾಲಣ್ಣಂಗೆ ಒಪ್ಪಣ್ಣನ ಬೈಲಿನ ಶುಭಾಶಯಂಗೊ…

10 thoughts on “ಚುಕ್ಕಿನಡ್ಕ ಗೋಪಾಲಣ್ಣಂಗೆ ಕೇರಳ ರಾಜ್ಯ ಶಿಕ್ಷಕ ಪ್ರಶಸ್ತಿ

  1. ದೊಡ್ಡಬಾವಾ,
    ಚುಕ್ಕಿನಡ್ಕ ಮಾವಂಗೆ ಪ್ರಶಸ್ತಿ ಸಿಕ್ಕಿದ್ದು ಕಂಡು ಕೊಶಿ ಆತು.
    ಅಭಿನಂದನೆಗೊ.

    ಈಗಾಣ ’ಅಂಬೇಡ್ಕರ್’ ಯುಗಲ್ಲಿ ನಮ್ಮೋರ ಗುರುತಿಸಿ ಪ್ರಶಸ್ತಿ ಕೊಡ್ತವನನ್ನುದೇ ಅಭಿನಂದಿಸೇಕೋ – ಹೇಳಿಗೊಂಡು.
    ಅಲ್ಲದೋ ದೊಡ್ಡಬಾವ?

  2. ಚುಕ್ಕಿನಡ್ಕ ಗೋಪಾಲಣ್ಣಂಗೆ ಅಭಿನಂದನೆಗೊ.

  3. ‘ಹೆಡ್‌ಮಾಷ್ಟ್ರು’ – ಗೋಪಾಲಣ್ಣಂಗೆ ಅಭಿನಂದನೆಗೊ.

  4. ನಮ್ಮವಕ್ಕೆ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೊಶ. ಅವಕ್ಕೆ ಶುಭಾಶಯನಂಗೊ.

  5. ಈ ವಾರಿ ನಮ್ಮವಕ್ಕೆ ಸಿಕ್ಕಿದ್ದು ನೋಡಿ ಖುಶೀ ಆತು. ಹೆಮ್ಮೆಯೂ ಆವ್ತು.
    ಅವರ ಸಾಧನೆ ಇನ್ನೂ ಕೀರ್ತಿಗಳಿಸಲಿ ಹೇಳಿ ಶುಭಕೋರುತ್ತಾ ಶುದ್ದಿಗೆ ಧನ್ಯವಾದ .

  6. ಅಭಿನಂದನೆಗೊ ಚುಕ್ಕಿನಡ್ಕ ಮಾಷ್ಟ್ರಣ್ಣಂಗೆ.
    ಪರಿಚಯಿಸಿದ ದೊಡ್ಡ ಭಾವಂಗೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×