Oppanna.com

ಐಸ್ಸ.. ಐಸ್ಸ.. ಐಯೇಎಸ್ಸ..!!?

ಬರದೋರು :   ಒಪ್ಪಣ್ಣ    on   27/01/2012    19 ಒಪ್ಪಂಗೊ

ಮೊನ್ನೆ ಅಮೈ ಉಪ್ನಾನ ಇತ್ತೂ ಹೇಳಿತ್ತಿದ್ದೆ ಅಲ್ಲದೋ, ಆಚಮನೆ ದೊಡ್ಡಣ್ಣನ ಒಟ್ಟಿಂಗೆ ನಾವುದೇ ಹೋಗಿದ್ದತ್ತು.
ಅಲ್ಲಿ ಪಾಡಿಮಾವ ಸಿಕ್ಕಿದವು; ಹತ್ತರಾಣೋರು ಸಿಕ್ಕಿರೆ, ಉಂಬಗಳೂ ಹತ್ತರೆಯೇ ಕೂಪದು ಒಪ್ಪಣ್ಣನ ಕ್ರಮ.
ಪಾಡಿಮಾವಂಗೆ ಅಮೈ ಕುಲಪುರೋಹಿತರು ಮಾಂತ್ರ ಅಲ್ಲ, ನೆಂಟ್ರೇ; ಹಾಂಗೆ ಅಮೈ ಮಾಂತ್ರ ಅಲ್ಲ – ವಿಟ್ಳ ಸೀಮೆಲಿ ಧಾರಾಳ ನೆಂಟ್ರಿದ್ದವು.
ಕಳಾಯಿ, ಮೈರ, ಎರುಂಬು, ಕರುಂಬು – ಹೇಳಿಗೊಂಡು ಪಟ್ಟಿಮಾಡ್ಳೆ ಹೆರಟ್ರೆ ಎಷ್ಟೂ ಸಿಕ್ಕುಗು ಅವಕ್ಕೆ.
ಅದಿರಳಿ,

ಸಂಪ್ರದಾಯ – ಹಳತ್ತರ ಮೆಚ್ಚಿ, ಅದರ ಪ್ರಕಾರ ನಡವೋರೇ ಆದರೂ, ರಜ ’ಆಧುನಿಕ’ರು ಈ ಪಾಡಿಮಾವ°.
ನಮ್ಮ ಸಮಾಜ ಮುಂದರಿಯೇಕಾರೆ, ಪ್ರಗತಿ ಹೊಂದೇಕಾರೆ ಎಂತಾಯೇಕು – ಹೇಳ್ತದು ಅವರ ಮನಸ್ಸಿಲಿ ಯೇವತ್ತೂ ತಿರುಗೆಂಡಿಕ್ಕು. ಮೊನ್ನೆ ಉಂಬಗಳೂ ಇದರ ಬಗ್ಗೆಯೇ ಮಾತಾಡಿದವು.
ಅಂಬಗಂಬಗ ಆ ಶುದ್ದಿ ಹೇಳಿರೂ, ಮೊನ್ನೆ ಮಾತಾಡುವಗ ಎಡೆಲಿ ಒಂದು ಶುದ್ದಿ ಹೇಳಿತ್ತಿದ್ದವು.
ಒಪ್ಪಣ್ಣಂಗೆ ತುಂಬ ಇಷ್ಟ ಆತು. ನಿಂಗೊಗೂ ಕೊಶಿಅಕ್ಕು ಹೇದು ಕಂಡತ್ತು; ತೂಷ್ಣಿಲಿ ಬೈಲಿಂಗೆ ಹೇಳಿಕುತ್ತೆ! ಆಗದೋ..
~

ನೆಡುಬೈಲು ತಿರುಮಲೇಶ್ವರ ಭಟ್ – ಬೆಂಗುಳೂರೋ, ಡೆಲ್ಲಿಯೋ – ಉಮ್ಮ, ಎಲ್ಲೋ ದೊಡ್ಡ ಜಾಗೆಲಿ ದೊಡ್ಡ ಕೆಲಸಲ್ಲಿ ಇದ್ದವು. ಯನ್.ಟೀ.ಭಟ್ ಹೇಳಿಯೇ ಹೆಚ್ಚು ಪ್ರಸಿದ್ಧರಾದೋರು ಅಡ.
ಈಗ ಅವು ಡೆಲ್ಲಿಯೇ ಇರಳಿ, ಎಲ್ಲಿಯೇ ಇರಳಿ – ಮೂಲ ನಮ್ಮದೇ ಊರಿಲಿ; ವಿಟ್ಳ ಸೀಮೆಯ ನೆಡುಬೈಲು!
ನಿಂಗೊಗೆ ಪರಿಚಯ ಇದ್ದೋ ಇಲ್ಲೆಯೊ, ಉಮ್ಮ – ಆದರೆ ಭಾರತಕ್ಕೆ ಒಳ್ಳೆತ ಪರಿಚಯದ ವೆಗ್ತಿ ಅಡ.
ಬೈಲಿನೋರಿಂಗೆ ಎಲ್ಲೋರಿಂಗೂ ಪರಿಚಯ ಇರೆಕ್ಕಾದ ವೆಗ್ತಿ.

ಭಾರತ ಸರಕಾರದ ವಿಜ್ಞಾನ ಸಂಸ್ಥೆಗೊ ಇಲ್ಲೆಯೋ – ಪ್ರಸ್ತುತ ಅದರ ಮುಖ್ಯ ಗುರಿಕ್ಕಾರರಾಗಿ ಕೆಲಸ ಮಾಡಿಗೊಂಡಿದ್ದವಡ!
ಅವು ಒಂದು ಹೂಂಕುಟ್ಟದ್ದರೆ ರೋಕೆಟ್ಟು ಹಾರ – ಅವು ಒಂದರಿ ತಲೆಆಡುಸದ್ದರೆ ವಿಮಾನ ಇಳಿಯ; ಭಾರತ ಸರ್ಕಾರದ ಬಹುಮುಖ್ಯನಿರ್ಧಾರಂಗಳ ತೆಕ್ಕೊಂಡಿಕ್ಕಲೆ ಇವರ ನಿರ್ದೇಶನ ಬೇಕೇಬೇಕು!
ತುಂಬ ಹೆರಿಯೋರು; ಭಾರತಕ್ಕೆ ತುಂಬ ಬೇಕಾದೋರು ಅಡ.
~

ಪಾಡಿಮಾವನ ಕಿರಿಯಬ್ಬೆಯ ಮೈದುನನ ಮಗ ಮೈರದಜ್ಜ ಇಲ್ಲೆಯೋ – ಅವರ ಸೋದರಬಾವನೇ ಈ ಎಂಟೀಭಟ್ರು.
(ಕಳಾಯಿಗೀತತ್ತೆಯ ಅಪ್ಪ – ಮೈರದಜ್ಜನ ನಿಂಗೊಗೆ ಪುನಾ ಗುರ್ತ ಹೇಳೇಕು ಹೇದು ಇಲ್ಲೆನ್ನೆ?)
ಮೂವತ್ತೊರಿಶ ಹಿಂದೆ ಕಲಿವಿಕೆ ಮುಗುಶಿ, ದೊಡ್ಡ ಜೆವಾಬ್ದಾರಿಯ ಸರ್ಕಾರೀ ಕೆಲಸ ಸಿಕ್ಕಿತ್ತಡ; ಅವರ ಜೆಬಾಬ್ದಾರಿಂದಾಗಿ ಸರ್ಕಾರದ ಆಪೀಸುಗಳಲ್ಲಿ ಒಳ್ಳೆತ ಬೆಲೆಯೂ ಇದ್ದಾಡ.
ದೇಶದ ಯೇವದೇ ಭಾಗ, ಯೇವದೇ ಡಿಪಾರ್ಟುಮೆಂಟು ಅವರ ಹೆಸರಿಂಗೆ ಬೆಲೆ ಕೊಡ್ತಾಡ. ಅವರ ಸ್ಥಾನ ಅಂತಾದ್ದಾಡ.
ಒಂದು ಉದಾಹರಣೆಯೊಟ್ಟಿಂಗೆ ವಿವರುಸಿದವು..
~

‘ಅವರ ನೆಡುಬೈಲು ಜಾಗೆದೊಂದು ಗಲಾಟೆ ಆಗಿದ್ದತ್ತು ಒಪ್ಪಣ್ಣ, ವಿಶಯ ಗಮ್ಮತ್ತಿದ್ದು – ಕೇಳು’ ಹೇದು ಸುರುಮಾಡಿದವು. ಕೇಳೆಡ ಹೇದರೇ ನಾವು ಕೆಮಿಕೊಟ್ಟು ಕೇಳ್ತು, ಇನ್ನು ಕೇಳು ಹೇಳಿರೆ ಸುಮ್ಮನಿರ್ತೋ? 😉
ಅಲ್ಲಿ ಕೇಳ್ತು, ಇಲ್ಲಿ ಹೇಳ್ತು..

ಈಗ ಅವು ಕೆಲಸದ ನಿಮಿತ್ತ ದೂರಲ್ಲಿದ್ದರೂ, ಅವರ ಅಬ್ಬೆ ನೆಡುಬೈಲಿಲೇ ಇಪ್ಪದಡ, ಹೆರಿಯೋರ ಜಾಗೆಯ ನೆಡೆಶಿಗೊಂಡು ಬತ್ತ ಲೆಕ್ಕಲ್ಲಿ.
ಅಂದಿಂದ ನಡುಬೈಲಿನ ಕೃಷಿಯ ಈ ನೆಡುಬೈಲು ಅಜ್ಜಿಯೇ ಚೆಂದಕೆ ನಡೆಶಿಗೊಂಡು ಬತ್ತಾ ಇದ್ದವಡ; ಪ್ರಾಯ ಆದರೂ.
ಅವರ ಹೆರಿಯೋರಿಂದ ಬಂದ ಜಾಗೆಗಳಲ್ಲಿ – ಒಂದು ಜಾಗೆ ನೆಡುಬೈಲಿಲಿ ಇದ್ದರೆ, ಅವರದ್ದೇ ಇನ್ನೊಂದು ದರ್ಖಾಸು ಕರಿ ಮಾರ್ಗದ ಬುಡಲ್ಲಿ ಇದ್ದಾಡ.

~

ಈಗಾಣ ಸರ್ಕಾರ ಅಲ್ಪಸಂಖ್ಯಾತರ ಮೆಚ್ಚುಸುದು ಜಾಸ್ತಿ ಅಪ್ಪೋ, ಹಾಂಗೆ ಬೈಲಕರೆಲಿ ಮಾರ್ಗದಕರೆಲಿ ಇಪ್ಪ ಕಾಲಿ ಜಾಗೆಯ ಪೂರ ಶಾಂತತ್ತೆಯ ಮಯಿಸೂರುಪಾಕಿನಷ್ಟಕೆ ತುಂಡುಸಿ – ಅಲ್ಪಸಂಖ್ಯಾತರಿಂಗೆ ಕೊಡ್ಳೆ ಹೆರಟತ್ತಡ ಸರ್ಕಾರ.
ಆ ಊರಿನ ತಾಶೀಲ್ದಾರಂಗೆ ಇವರ ದರ್ಕಾಸು ಕಾಲಿಜಾಗೆಯ ಮೇಲೆಯೂ ಕಣ್ಣುಬಿದ್ದತ್ತಡ.
ಊರಿಲೇ ಇಪ್ಪ ಈ ಅಜ್ಜಿಹೇಳಿದವಡ, ‘ಬೇಡ, ಅದರ ಕೊಡೆಡಿ, ಅದು ಸರ್ಕಾರಿ ಜಾಗೆ ಅಲ್ಲ – ಎಂಗಳ ಸ್ವಂತ ಜಾಗೆ’ – ಹೇದು!
ಉಹೂಂ!, ಅದು ಕೇಳೆಕ್ಕೆ! ಇವರ ಜಾಗೆಯನ್ನೂ ಸೇರಿ, ಎಲ್ಲವನ್ನೂ ತುಂಡುಸಿ ತುಂಡುಸಿ ಅಲ್ಪಸಂಖ್ಯಾತರಿಂಗೆ ಕೊಟ್ಟೇಬಿಟ್ಟತ್ತಡ.

ಜಾಗೆ ಸಿಕ್ಕಿದ್ದೇ ತಡ, ಶಾಂತಿಪ್ರಿಯ ಅಲ್ಪಸಂಖ್ಯಾತರು ಕಲ್ಲಕೋಟೆ ಕಟ್ಟುಸಿ ಬಂದವಸ್ತು ಮಾಡಿಗೊಂಡವಡ.
ಕೆಲವು ಜೆನ ಶೀಟಿನ ಮಾಡು, ಮನೆಯೂ ಕಟ್ಟಿ ಆತು.
ಅಜ್ಜಿ ಮಾಡುದಾರೂ ಎಂತ!
ದೂರಲ್ಲಿಪ್ಪ ಅವರ ಮಗಂಗೆ ಪೋನು ಮಾಡಿ ಹೇಳಿದವಡ, ’ಇದಾ ಮಗಾ, ನಮ್ಮ ಹೆರಿಯೋರ ಜಾಗೆ – ಈಗ ಎಲ್ಲ ಆರಾರಿಂಗೆ ಹಂಚಿದವತ್ಲಾಗಿ. ಎಂತಾರು ಮಾಡು’ ಹೇದು.

~

ಹ್ಹು! ತಾಶೀಲ್ದಾರ°!! ತಾಶೀಲ್ದಾರು ಹೇದರೆ ಚಿಲ್ಲರೆಯೋ?
ಗ್ರಾಮಕ್ಕೊಬ್ಬ° ಉಗ್ರಾಣಿ, ಅವನಿಂದ ಮೇಗೆ ವಿಲೇಜು ಓಪೀಸರ, ಅವರಿಂದ ಮೇಗೆ ರೆವೆನ್ಯೂ ಇನ್ಸುಪೆಕ್ಟ್ರ° – ಅವರಿಂದಲೂ ಮೇಗೆ ಇಪ್ಪದಲ್ಲದೋ ತಾಶೀಲ್ದಾರ°.
ಇಡೀ ಒಂದು ತಾಲೂಕಿಂಗೇ ಓಪೀಸರ° ಆ ಜೆನ.
ತಾಶೀಲ್ದಾರನ ಸೈನು ಇದ್ದು ಹೇದರೆ, ಅದರಿಂದ ಕೆಳಾಣೋರು ಪೂರಾ ಆ ಕೆಲಸವ ಮಾಡ್ಳೇಬೇಕಷ್ಟೆ?
ಗ್ರಾಮದ ಉಗ್ರಾಣಿಯೇ ನಾವು ಹೇಳಿದ್ದರ ಕೇಳ್ತಿಲ್ಲೆ, ಇನ್ನು ತಾಶೀಲ್ದಾರ ಕೇಳುಲಿದ್ದೋ – ಹೇಳಿದವು ಪಾಡಿಮಾವ°.
ಆಯಿಕ್ಕು, ನವಗೆ ಉಗ್ರಾಣಿಯನ್ನೂ ಮಾತಾಡುಸಿ ಅರಡಿಯ, ತಾಶೀಲ್ದಾರನನ್ನೂ ಮಾತಾಡುಸಿ ಅರಡಿಯ.
ಪಾಡಿಮಾವಂಗಾದರೆ ಆಪೀಸುಗಳ ಒಳ ಹೊಕ್ಕೆರಟು ಅರಡಿಗು.
ನವಗೆ ತರವಾಡುಮನೆ ಉಗ್ರಾಣ ನೆಂಪಾತು, ಅಷ್ಟೆ!

~

ನಾವಾಗಿದ್ದರೆ ಎಂತ ಮಾಡೇಕಾತು?
‘ಇದು ಎಂಗಳ ಜಾಗೆ’ ಹೇಳ್ತದರ  – ಸರ್ಕಾರವ ಒಪ್ಪುಸಿ – ಕೋರ್ಟಿಂಗೆ ಹೋಗಿ – ನಂಬ್ರಮಾಡಿ – ಗೆದ್ದು – ಅಲ್ಲಿ ಕೂದೋರಿಂಗೆ ಪೈಶೆಕೊಟ್ಟು – ಜಾಗೆ ಬಿಡುಸೆಂಡು..!
– ಅಷ್ಟಪ್ಪಗ ಆ ಅಲ್ಪಸಂಖ್ಯಾತರ ಹೋರಾಟಂಗೊ, ಪ್ರತಿಭಟನೆಗೊ – ಹೋ! ಅದಪ್ಪಲಿಲ್ಲೆ.
ಅದರ ಮೇಗೆ ಸರ್ಕಾರದ ಎಲ್ಲಾ ಅಧಿಕಾರಿಗೊ ನಮ್ಮ ವಿರುದ್ಧ! ಅಪ್ಪಲೋಪಲಿಪ್ಪದೋ ಇದು!
ಎರಡೆಕ್ರೆ ಜಾಗೆ ಒಳಿಶಲೆ ಇಪ್ಪತ್ತೆಕ್ರೆ ಜಾಗೆಯ ಅಸಲಕ್ಕು. ಹೋದ ಜಾಗೆ ಹೋತು ಹೇದು ಕೈ ಕಟ್ಟಿ-ಬಾಯಿಮುಚ್ಚಿ ಕೂರೇಕಾತು – ಹೇಳಿದವು.

ಆದರೆ, ಇಲ್ಲಿ ಹಾಂಗಾಯಿದಿಲ್ಲೆಡ!!!

~

ಅಬ್ಬೆಯ ಪೋನು ಬಂದಪ್ಪದ್ದೇ, ಕೆಲಸಲ್ಲಿದ್ದ ಡೆಳ್ಳಿ ಆಪೀಸಿಂದಲೇ ಎಂಟೀಭಟ್ರು ಕೊಡೆಯಾಲದ ಡೀಸಿ (ಕಲೆಕ್ಟ್ರ°)ಗೆ ಪೋನು ಬಡುದವಡ.

ಬರೇ ಕಾರಲ್ಲ, ಕಾರುಬಾರಿನ "ಗೂಂಟ" ಇಪ್ಪ ಕಾರು!

ಡೀಸಿ ಹೇದರೆ ಆರು?
ತಾಶೀಲ್ದಾರ° ಹೇದರೆ ತಾಲೂಕಿಂಗೆ ಓಪೀಸರ, ಡೀಸಿ ಹೇದರೆ ಜಿಲ್ಲೆಗೇ ಓಪೀಸರ°!!
ಜಿಲ್ಲೆಗೊಬ್ಬನೇ ಆಣುಮಗ – ಆ ಡೀಸಿಗೆ ಪೋನು ಮಾಡಿದವಡ.

ಹೀಂಗೀಂಗೆ – ಆನು ಇಂತೋನು ಮಾತಾಡುದು – ಹೇಳಿ ಅಪ್ಪದ್ದೇ, ಕೂದ ಕುರ್ಶಿಂದ ಎದ್ದು – ಮಾತಾಡ್ಳೆ ಸುರುಮಾಡಿತ್ತಡ ಡೀಸಿ.
“ಅಲ್ಲ .. ಎಂಗಳ ನಡುಬೈಲು ಜಾಗೆಯ ತಾಶೀಲ್ದಾರ° ಆರಾರಿಂಗೋ ಹಂಚಿದ್ದಡ, ಎನ್ನ ಅಬ್ಬೆ ಹೇಳಿದವು. ಎಂತರ ಅದು..?  ಒಂದರಿ ನೋಡಿ ಅಪ್ಪೋ – ಹೇಳಿಕ್ಕುತ್ತಿರೋ?” – ಹೇದು ಒಳ್ಳೆ ಬಾಶೆಲೇ ಕೇಳಿ ಪೋನು ಮಡಗಿದವಡ.
ಅಕ್ಕಕ್ಕು, ನೋಡಿ ಹೇಳ್ತೆ ಸಾರ್ – ಹೇಳಿಕ್ಕಿ ಬೆಗರು ಉದ್ದಿಂಡತ್ತಡ ಡೀಸಿ.
~

ಆ ಡೀಸಿ ಇವರ ಪೋನು ಮಡಗಿ ಅಪ್ಪದ್ದೇ – ಏಸಿಗೆ ಒಂದು ಪೋನು ಬಡುದತ್ತಡ.
ಬೆಗರಿಂಡಿತ್ತು ಹೇದು ತಂಪಿನ ಏಸಿಗೆ ಪೋನು ಮಾಡಿದ್ದಲ್ಲ, ಇಲ್ಲಿ ಏಸಿ ಹೇಳಿರೆ ಇನ್ನೊಂದು ಜೆನ.
ಡೀಸಿಗೆ ಒಂದು ಜಿಲ್ಲೆ ಜೆವಾಬುದಾರಿ ಆದರೆ, ಏಸಿಗೆ ಅದರಿಂದ ಕೆಳ – ಎರಡು-ಮೂರು ತಾಲೂಕಿನ ಜೆವಾಬ್ದಾರಿ.
ಏಸಿಂದ ಕೆಳವೇ ತಾಶೀಲ್ದಾರ° ಇದಾ, ಒಂದು ತಾಲೂಕಿನ ಓಪೀಸರ°.
ಅದೇ ಬೆಗರು ತಾಶೀಲ್ದಾರಂಗೂ ಎತ್ತಿತ್ತು.
ಅಲ್ಲಿಂದ ರೆವೆನ್ಯೂ ಇನ್ಸುಪೆಕ್ಟ್ರಂಗೆ, ಅಲ್ಲಿಂದ ವಿಲೇಜು ಓಪೀಸರಂಗೆ, ಅಲ್ಲಿಂದ ಉಗ್ರಾಣಿಗೆ!
ಎಲ್ಲೋರುದೇ ಬೆಗರರುಶಿಗೊಂಡವು.
ಹು!! ಮತ್ತೆಂತಾತು? ಮತ್ತೆ ಆದ್ದೇ ಗಮ್ಮತ್ತಿನ ಕತೆ.
~

ಡೀಸಿ, ಏಸಿ, ತಾಶೀಲ್ದಾರ°, ರೆವೆನ್ಯೂ ಇನುಸ್ಪೆಕ್ಟ್ರ°, ವಿಲೇಜು ಸೆಕ್ರೆಟ್ರಿ, ಉಗ್ರಾಣಿ, ಪೋಲೀಸು ಎಸ್ಸೈ, ಸರ್ಕಲು ಇನುಸ್ಪೆಕ್ಟ್ರ°, ಒಂದು ವೇನು ರಿಸರು ಪೋಲೀಸು, ನಾಕು ಬುಲ್ಡೋಜರು, ಬೆಣ್ಚಿಗೆ ಹತ್ತನ್ನೆರಡು ಗೇಸುಲೈಟು, ಎಲ್ಲ ಹೆರಟವು, ಸಾಲುಸಾಲಾಗಿ.
ಹೊಸತ್ತಾಗಿ ಬಿದ್ದ ಕಾಂಪೌಂಡುಗಳ ಪೂರ ಬಲುಗಿ, ಬಾಚಿ, ಇಡ್ಕಿ – ಇಡೀ ಜಾಗಗೆ ಹೊಸತ್ತಾದ ಒಂದೇ ದೊಡ್ಡ ಕೋಟೆ ಕಟ್ಟಿ, ಇರುಳಿಂದಿರುಳೇ ಕೆಲಸ ಮುಗುಶಿ – ಒಪಾಸು ಆ ಅಬ್ಬೆಯ ಕೈಗೆ ವಹಿಸಿ ’ತಪ್ಪಾತು, ಹೊಟ್ಟಗಾಕಿಯೊಳಿ’ ಹೇಳಿಕ್ಕಿ ಪದ್ರಾಡು ಹಾಕಿದವಡ.
ಆಪೀಸಿಂಗೆ ಎತ್ತಿಅಪ್ಪದ್ದೇ ’ಎಂತಾಯಿದಿಲ್ಲೆ, ಸರೀ ಆತು’ ಹೇಳಿ ಪೋನು ಮಾಡಿಕ್ಕೋ ಏನೋ, ಆ ಡೀಸಿ.
~
ಅಂತೂ ನಿನ್ನ ಬಾಶೆಲಿ ಹೇಳ್ತರೆ ಜೆರಳೆಗಳ ಪೂರ ಓಡುಸಿ ಆತು ಒಪ್ಪಣ್ಣಾ, ಹೇದವು ಪಾಡಿಮಾವ.
ಅಂದೊಂದರಿ ಊರಿಲಿಡೀ ಜೆರಳೆಗ ತುಂಬಿದ ಶುದ್ದಿಯ ನಾವು ಮಾತಾಡಿದ್ದು ಅವಕ್ಕೆ ನೆಂಪಾದ್ದು ಸಾಕು!
ಅಂತೂ – ಹೆರಿಯೋರ ಜಾಗೆ ಒಳಿಶೇಕು ಹೇದು ಅಬ್ಬೆಗೆ ಕಂಡದರ ಮಗ ಕೂದಲ್ಲೇ ಮಾಡಿ ಕೊಟ್ಟನಲ್ಲದೋ – ಆ ಅಬ್ಬೆಯ ಜೀವಮಾನದ ಅತ್ಯಂತ ಕುಶಿಯ ಕ್ಷಣ ಆಯಿಕ್ಕು ಅದು. ಸಾರ್ಥಕ ಮಗ!
~

ಅಂಬಗ ಇಷ್ಟು ಪವರು ಬಪ್ಪಲೆ ಈ ಎಂಟೀಮಾವನ ಚರಿತ್ರೆ ಎಂತರ? – ಕೇಳಿದೆ ಮಾವನ ಹತ್ತರೆ.
ಅದೊಂದು ಪರೀಕ್ಷೆ ಬರದಿತ್ತವು, ಅದರ್ಲಿ ಪಾಸಾದ ಕಾರಣ, ಒಳ್ಳೆಕೆಲಸ ಸಿಕ್ಕಿ ಈಗ ಅಲ್ಲಿ ಇಪ್ಪದು – ಹೇಳಿ ವಿವರ ಕೊಟ್ಟವು.
ಯೇವ ಪರೀಕ್ಷೆ, ಎಂತರ ಪಾಸಾದ್ದು, ಎಂತ ಕೆಲಸ ಸಿಕ್ಕಿದ್ದು – ವಿವರವಾಗಿ ಹೇಳಿದವು.

~

ಬಾಲ್ಯಂದಲೇ ಭಾರೀ ಉಶಾರಿ, ಚುರ್ಕು – ಅಪ್ಪಮ್ಮನ ಈ ಮುದ್ದಿನ ಮಗ.
ಮುಂದೆ ರಾಮಜ್ಜನ ಕೋಲೇಜಿಂಗೆ ಹೋಪಗಳೂ ಉಶಾರಿಉಶಾರಿಯೇ ಇದ್ದಿದ್ದವು.
ಸಣ್ಣ ಇಪ್ಪಗಳೇ ರೇಡ್ಯ ಕೇಳುಗು. ಈಗಾಣೋರ ಹಾಂಗೆ ಸಿನೆಮ ಪದ್ಯ ಅಲ್ಲ; ಬಂಡಾಡಿಅಜ್ಜಿಯ ಹಾಂಗೆ ಅಡಿಗೆ ಕಾರ್ಯಕ್ರಮ ಅಲ್ಲ – ಬೀಬೀಸಿ ಕೇಳುಗು, ಬೀಬೀಸಿ!
ಮನೆಲೇ ಕೂದೊಂಡು ಲೋಕದ ಇಡೀಕ ಮುಖ್ಯ ಘಟನೆಗಳ ಇಂಗ್ಳೀಶಿಲಿ ಪ್ರಸಾರ ಆವುತ್ತ ಆ ಬೀಬೀಸಿಲಿ ಕೇಳಿಕೇಳಿ ತಿಳ್ಕೊಂಡಿತ್ತವು.
ಈಗ ಒಂದರಿ ಟೀವಿ ಹಾಕಿರೆ ಪೂರ್ತ ಲೋಕವೇ ಕಾಣ್ತು; ಇಂಟರ್ನೆಟ್ಟು ಕುಟ್ಟಿರೆ ಎಂತ ಬೇಕಾರೂ ಸಿಕ್ಕುತ್ತು; ಅಂಬಗ ಹಾಂಗಲ್ಲನ್ನೇ, ಹತ್ತುನಲುವತ್ತೊರಿಶ ಮದಲು?

ಅಂಬಗಾಣ ರಾಷ್ಟ್ರೀಯ ವಿದ್ಯಮಾನಂಗೊ, ಅಂತರಾಷ್ಟ್ರೀಯ ನಡಾವಳಿಗೊ, ಸೌರವ್ಯೂಹದ ಆಗುಹೋಗುಗೊ, ಜಪಾನು – ಕೊರಿಯ – ರಷ್ಯಾ – ಅಮೇರಿಕಲ್ಲಿ ಎಂತೆಂತ ಆವುತ್ತಾ ಇದ್ದು, ರಾಷ್ಟ್ರ-ರಾಷ್ಟ್ರಂಗಳ ಸಮ್ಮಂದ ಹೇಂಗಿದ್ದು- ಹೇಳ್ತರಿಂದ ಹಿಡುದು..
ನಮ್ಮ ಭಾರತದ ಒಳಾಣ ಸಂಗತಿಗೊ, ರಾಜ್ಯದ ಆಗುಹೋಗುಗೊ, ಒಳಾಡಳಿತ, ಸಾಮಾಜಿಕ ಜೀವನ – ಎಲ್ಲವನ್ನೂ ಅರ್ತುಗೊಂಡಿತ್ತವು.
ರೇಡ್ಯಕೇಳಿದೋರು ಅಲ್ಲಿಯೇ ಬಾಕಿ ಆದವಾ – ಇಲ್ಲೆ; ಒಳ್ಳೆ ಮಾರ್ಕಿಲಿ ಡಿಗ್ರಿಯೂ ಮಾಡಿಗೊಂಡವು.
ಡಿಗ್ರಿ ಮುಗುದ ಮತ್ತೆ ಕೆಲಸ ಹುಡ್ಕಿಂಡು ಇಪ್ಪಗಳೇ – ಅದೊಂದು ಯೂಪೀಎಸ್ಸೀ ಪರೀಕ್ಷೆ ಬರದವಡ, ಬರದು ಐ.ಎ.ಎಸ್ ಪಾಸಾದವಡ.
ಮತ್ತೆ ಅವರ ಪ್ರಗತಿ, ದೇಶಸೇವೆ ಎಲ್ಲಿಯೂ ನಿಂದಿದಿಲ್ಲೆ; ಆರಿಂದಲೂ ನಿಲ್ಲುಸಲೆ ಎಡಿಗಾಯಿದಿಲ್ಲೆ – ಹೇಳಿದವು ಪಾಡಿಮಾವ.
~

ಭಾರತೀಯ ಲೋಕಸೇವಾ ಆಯೋಗ – ಯೂ.ಪೀ.ಎಸ್.ಸೀ – ಹೇಳ್ತ ಸಂಸ್ಥೆ ಒರಿಶಕ್ಕೊಂದರಿ ಮಾಡುವ ಪರೀಕ್ಷೆಯ ಬಗ್ಗೆ ವಿವರಣೆ ಕೊಟ್ಟುಗೊಂಡು ಹೋದವು.
ನಮ್ಮ ದೇಶದ ಆಡಳಿತಾತ್ಮಕ, ನಿರ್ದೇಶನಾತ್ಮಕ ಜೆವಾಬ್ದಾರಿಗೊ ಇದ್ದಲ್ಲದೋ – ಅಂತಾ ಜಾಗೆಗೊಕ್ಕೆ ಕೆಲಸ ಮಾಡ್ಳೆ ಹೇಳಿಯೇ ಈ ಪರೀಕ್ಷೆ ಅಡ. ಅದರ್ಲಿ ಪಾಸಾದರೆ ಡೀಸಿ, ಪೋಲೀಸು ನಿರ್ದೇಶಕ, ಸರ್ಕಾರದ ಕಾರ್ಯದರ್ಶಿ – ಹೀಂಗಿರ್ತ ಕೆಲಸಂಗಳನ್ನೇ ಮಾಡ್ಳಿಪ್ಪದಡ – ಹೇಳಿದವು.

ಇಂಟರ್ವ್ಯೂಲಿ ಮೌಖಿಕ ಪ್ರಶ್ನೆ ಕೇಳುದು, ಪಂಡಿತರು.
ಯುರೋಪಿನ ಆಂತರಿಕ ಸಂಬಂಧಂಗಳೂ, ಅಲ್ಯಾಣ “ಯೂರೋ” ಪದ್ಧತಿಯನ್ನೂ – ಎಂಟೀಭಟ್ರಿಂಗೆ ಇಂಟರ್ವ್ಯೂಲಿ ಕೇಳಿತ್ತಿದ್ದವಡ.
ಅದಾಗಿ ಮೂವತ್ತೊರಿಶ ಕಳುದು ಯುರೋಪಿಲಿ ಯೂರೋ ಪದ್ಧತಿ ಬಂದದು, ಈಗ ಎಲ್ಲೋರಿಂಗೂ ಆ ಯೂರೋ ಗೊಂತಿದ್ದು, ಆದರೆ ಅಂದು? ಬೀಬೀಸಿ ಕೇಳಿದೋನಿಂಗೆ ಮಾಂತ್ರ ಗೊಂತಿಕ್ಕಷ್ಟೇ!
ಆ ಪಂಡಿತರಿಂಗೆ ಕೇಳಿ ಕೇಳಿ ಅಕೇರಿಗೆ ‘ಇನ್ನು ಗೊಂತಿಲ್ಲೆ’ ಹೇಳ್ತಲ್ಲಿ ಒರೆಂಗೂ ಕೇಳಿಕ್ಕಿ – ಕುಶಿ ಆಗಿ ಪಾಸು ಮಾಡಿದವಡ.
ನಮ್ಮ ಸಮಾಜದ, ನಮ್ಮ ಬೈಲಿನ ಬಹುದೊಡ್ಡ ಆಸ್ತಿ ಅವು – ಹೇಳಿದವು.

ಈ ಪರೀಕ್ಷೆಯೂ, ರಜ ಕಷ್ಟ ಇದ್ದು.
ಮೂರು ಮೂರು ಸರ್ತಿ ಪರೀಕ್ಷೆ ಬರೇಕು. ಒಂದರಿ ಪ್ರಿಲಿಮ್ಸು, ಇನ್ನೊಂದರಿ ಮೈನ್ಸು, ಮತ್ತೊಂದರಿ ಇಂಟರ್ವ್ಯೂ – ಹೇದು.
ಸುರುವಾಣದ್ದರ್ಲಿ ಪಾಸಾದರೆ ಎರಡ್ಣೇದು, ಅದರ್ಲಿಯೂ ಸಮಗಟ್ಟಾದರೆ ಇಂಟರ್ವ್ಯೂ.

~

ಪೇಪರುಗಳಲ್ಲಿ ನೋಡಿರೆ ನಮ್ಮ ಶಾಸಕ, ಮುಖ್ಯಮಂತ್ರಿ, ಎಂಪಿ, ಪ್ರಧಾನಿ – ಇವ್ವೇ ಕೆಲಸ ಮಾಡುದು ಹೇಳಿ ಕಾಣ್ತು.
ಅವು ಬರೇ – ಕಾರ್ಯಕ್ರಮದ ಉದ್ಘಾಟನೆಗೆ ಮಾಂತ್ರ ಬಪ್ಪ ಉತ್ಸವ ಮೂರ್ತಿಗೊ. ನಿಜವಾಗಿ ಕೆಲಸ ಮಾಡುದು ಡೀಸಿ, ಏಸಿ, ತಾಶೀಲ್ದಾರನ ಹಾಂಗಿಪ್ಪ ಅಧಿಕಾರಿಗೊ.

ಒಂದು ಜಿಲ್ಲೆಲಿ ಅಲ್ಯಾಣ ಎಂಪಿಗೆ ಇಪ್ಪದರಿಂದ ಹೆಚ್ಚು ಪವರು ಅಲ್ಲಿಯಾಣ ಡೀಸಿಗೆ(ಕಲೆಕ್ಟ್ರಂಗೆ) ಇದ್ದು – ಹೇಳಿದವು.
ಒಂದು ಲಕ್ಷ ಕೈ ಮಾಡೇಕಾದ ಕೆಲಸ ಒಂದು ಐ.ಎ.ಎಸ್ ಆಧಿಕಾರಿಯ ಕೈ ಮಾಡುಗು.
ಒಂದು ಎಂಪಿ ಹಸಬಡುದು ಮಾಡೇಕಾದ ಕೆಲಸ ಒಂದು ಡೀಸಿ ಒಂದೇ ಗಳಿಗೆಲಿ ಮಾಡುಗು.
ಈ ಉತ್ಸವ ಮೂರ್ತಿಗೊ ಐದು ಒರಿಶಕ್ಕೊಂದರಿ ಬದಲಕ್ಕು – ಅಕ್ಕಿ ತಿಂತೋನು ಹೋದರೆ ಉಮಿ ತಿಂತೋನು ಬಕ್ಕು –
ಆದರೆ, ಇವು ಸರ್ಕಾರಿ ಅಧಿಕಾರಿಗೊ, ಒಂದರಿ ಕೂದರೆ ಅರುವತ್ತೊರಿಶ ಒರೆಂಗೆ ಇಳಿವಲಿಲ್ಲೆ- ಹೇಳಿದವು.

~

ನಮ್ಮ ಮಕ್ಕಳೂ ಆ ಪರೀಕ್ಷೆ ಬರೇಕು, ಐ.ಎ.ಎಸ್, ಐ.ಪೀ.ಎಸ್, ಪಾಸಾಯೇಕು.
ಬಾರತದ ಆಡಳಿತಲ್ಲಿ ಒಳ್ಳೊಳ್ಳೆ ಜಾಗೆಲಿ ನಿಂದು ದುಡಿಯೇಕು. ದೇಶಸೇವೆಲಿ ತೊಡಗುಸಿಗೊಳೇಕು.
ಕಲ್ತಪ್ಪದ್ದೇ ಇಂಪೋಸಿಸ್ಸು, ವಿಪ್ರೋ ಹೇಳಿಗೊಂಡು ಕಂಪ್ಲೀಟ್ರು ಕುಟ್ಟುದಲ್ಲ, ರಜ ಸಮಯ ಓದಿ ಹೀಂಗಿರ್ಸ ಕೆಲಸ ಸಿಕುತ್ತೋ ನೋಡಿ ಹಿಡ್ಕೊಳೇಕು – ಹೇಳಿದವು.

~
ಹಳತ್ತರ ಒಳಿಶೇಕಾದ ವಿಶಯದ ಬಗ್ಗೆ ಬೈಲಿನೋರೆಲ್ಲೋರುದೇ ಅರ್ತುಗೊಂಡಿದವು.
ಹಳೆ ವಿಶಯಂಗಳ ಮತ್ತೆ ಮತ್ತೆ ಹೊಸತ್ತುಮಾಡಿ ನೋಡ್ತದು ಎಲ್ಲೋರಿಂಗೂ ಕೊಶಿಯೇ; ರಂಗಮಾವನ ಹಾಂಗೇ!
ಹಳತ್ತರ ಒಟ್ಟಿಂಗೇ ಇದ್ದರೆ ಸಾಲ, ಹೊಸತ್ತು ಬಂದ ಹಾಂಗೇ ನಾವುದೇ ಹೊಸತ್ತಾಯೇಕು.
ನಮ್ಮೋರು ಮದಲಿಂಗೇ ಮುಂದುವರುದೋರು; ಈಗಳೂ ಅದೇ ರೀತಿ ಮುಂದುವರುದಿರೇಕು ಹೇಳಿ ಆದರೆ, ಕಾಲದೊಟ್ಟಿಂಗೆ ಮೀಸಲೆ ಅರಡಿಯೇಕು – ಹೇಳ್ತದು ಪಾಡಿಮಾವನ ಅಭಿಪ್ರಾಯ..
~

ಕಾಲಕ್ರಮೇಣದ ಕರಿರಾಜಕಾರಣಂದಾಗಿ ಈಗೀಗ ನಮ್ಮೋರಿಂಗೆ ಕೆಲಸ ಸಿಕ್ಕುತ್ತದೇ ಕಮ್ಮಿ ಆಯಿದು.
ಎಲ್ಲಾ ಅನಕ್ಷರಸ್ಥರು, ಜಾತಿಪ್ರಿಯರು, ಅಪಾತ್ರರು ತುಂಬಿ ಹೋವುತ್ತಾ ಇದ್ದವಡ.
ಹಾಂಗಾಗಿ, ಜಾತಿ, ಧರ್ಮ, ರಾಜಕೀಯಂದ ಹೊರತಾದ ಏಕೈಕ ಪರೀಕ್ಷೆ – ತಲೆ ಇದ್ದೋನಿಂಗೆ ಮಾಂತ್ರ ಸಿಕ್ಕುತ್ತದು
ಪಾಸಾಗಿ ಇಡೀ ದೇಶವನ್ನೇ ನಿಯಂತ್ರಣ ಮಾಡ್ಳೆಡಿಗು. ಇದರ್ಲಿ ಏನಾರು ಸಾಧನೆ ಮಾಡಿ ತೋರುಸೇಕು – ಹೇದು ಪಾಡಿಮಾವನ ಅಭಿಪ್ರಾಯ.

~

ನಮ್ಮ ಬೈಲಿನ “ಕೊಳಚ್ಚಿಪ್ಪು ಭಾವ” ಸ್ವತಃ ಈ ಪರೀಕ್ಷೆಯ ಬರವದು ನೆಂಪಾತು ಒಪ್ಪಣ್ಣಂಗೆ.
ಅಭ್ಯಾಸ ಅಪ್ಪಲೆ ಹೇದು ಒಂದೆರಡು ಒರಿಶ ಕಲ್ತುಗೊಂಡು ಬರದ°.
ಕಳುದೊರಿಶ ಅಂತೂ, ಸುರುವಾಣ ಪರೀಕ್ಷೆ ಪಾಸಾಗಿ, ಎರಡ್ಣೇ ಪರೀಕ್ಷೆಯೂ ಪಾಸಾಗಿ – ಮೂರ್ನೇ ಇಂಟ್ರುವ್ಯೂ ಹತ್ತರೆ ಹತ್ತರೆ ಒರೆಂಗೆ ಬಂದಿತ್ತಿದ್ದ.
ಈ ಸರ್ತಿ ಅದನ್ನೂ ಪಾಸಾಗಲಿ – ನಮ್ಮ ಸಮಾಜಕ್ಕೆ ಒಬ್ಬ ಐ.ಎ.ಎಸ್ ಅಧಿಕಾರಿ ಹೆಚ್ಚಾಗಲಿ – ಹೇದು ಅನುಸಿ ಹೋತು.

ಈಗಾಗಲೇ ದೇಶಸೇವೆ ಮಾಡಿಗೊಂಡಿಪ್ಪ ಹಲವಾರು ಅಧಿಕಾರಿಗಳ ಪಟ್ಟಿ ಹೇಳಿದವು ಪಾಡಿಮಾವ.
ಎಡನ್ನೀರು ಗೋಪಾಲಣ್ಣ, ಆರ್‍‍ಟೀವೋ ಶಾಮಣ್ಣ, ವಿ.ವಿ ಮಾವ – ಇನ್ನೂ ಹಲವಾರು ಜೆನಂಗೊ.
ಆ ಒಬ್ಬೊಬ್ಬನೂ ಹವ್ಯಕ ಅಬ್ಬೆಯ ಸಾರ್ಥಕ ಮಕ್ಕೊ.
ಅವೆಲ್ಲರನ್ನೂ ಒಂದರಿ ಒಟ್ಟಿಂಗೆ ಒಂದೇ ವೇದಿಕೆಲಿ ಸೇರುಸುವನೋ – ನಮ್ಮ ನೆರೆಕರೆಲಿ?
ಆ ಮೂಲಕ, ಇನ್ನಾಣ ಮಕ್ಕೊಗೆ ಆಸಕ್ತಿ ಹುಟ್ಟುಸಿ ಈ ಪರೀಕ್ಷೆ ಬರೆಶುವನೋ – ಹೇದು ಕೇಳಿದವು ಪಾಡಿಮಾವ.
ನಿಂಗೊ ಎಂತ ಹೇಳ್ತಿ?

ಒಂದೊಪ್ಪ: ಸರ್ಕಾರ ಕೆಲಸ ನಮ್ಮದಾದರೆ ಸರ್ಕಾರವೇ ನಮ್ಮದಾವುತ್ತು.

ಸೂ:

  • ನಿಂಗೊ / ನಿಂಗಳ ಮಕ್ಕೊ U.P.S.C ಪರೀಕ್ಷೆ ಬರವಲೆ ಆಸಕ್ತರಾದರೆ, ಮಾಹಿತಿ- ಮಾರ್ಗದರ್ಶನಕ್ಕೆ ನಮ್ಮ ಬೈಲಿನ ಕೊಳಚ್ಚಿಪ್ಪು ಭಾವನ ಸಂಪರ್ಕ ಮಾಡ್ಳಕ್ಕು. ಬೈಲಿಂದ ಅವಕ್ಕೆ ವಿಶೇಷ ಪ್ರೋತ್ಸಾಹ, ಸಹಕಾರ ಇದ್ದು.
  • ಕೆಲವು ಸಣ್ಣಶಬ್ದಂಗೊ:
    • DC – District Commissioner (District Collector)
    • AC – Assistant Commissioner
    • VA / VO – Village Assistant / Village Officer

ನಮ್ಮ ಬೈಲಿನ ಇಬ್ರು ಐ.ಎ.ಎಸ್ ಆಪೀಸರುಗಳ ಜಾತಕಪುಟ ಇಲ್ಲಿದ್ದು:

19 thoughts on “ಐಸ್ಸ.. ಐಸ್ಸ.. ಐಯೇಎಸ್ಸ..!!?

  1. ಮಡೆಯಾಲ ತಿಮ್ಮಪ್ಪಣ್ಣನ ಮರದತ್ತೋ ಒಪ್ಪಣ್ಣೋ?ನಮ್ಮ ರಾಜ್ಯದ ಪೋಲ್ಸರ ಗುರಿಕ್ಕಾರ° ಆಗಿ ಈಗ ರಿಟೈರ್ಡ್ ಆದವು.(ಟಿ.ಮಡೆಯಾಲ್).ಅವು ಐಪಿಎಸ್ ಆಪೀಸರ್.

  2. ಐ ಎ ಎಸ್ ನ ಪವರ್ ಎಷ್ಟಿದ್ದು ಹೇಳಿ ನೆಡುಬೈಲಿನ ವೃತ್ತಾಂತಲ್ಲಿ ಗೊಂತಾತು. ಒಳ್ಳೆ ಮಾಹಿತಿ ಕೊಟ್ಟತ್ತು ಲೇಖನ. ಎನ್.ಟಿ ಭಟ್ಟ್ರ ಹಾಂಗಿಪ್ಪವರ ಆದರ್ಶ ವ್ಯಕ್ತಿಗಳಾಗಿ ತೆಕ್ಕೊಂಡು ಈಗಾಣ ಮಕ್ಕೊ ಮುಂದುವರುದರೆ ಯಶಸ್ಸು ಖಂಡಿತ ಸಿಕ್ಕುಗು. ಕೊಳಚ್ಚಿಪ್ಪು ಭಾವನ ಪ್ರಯತ್ನಕ್ಕೆ ಫಲ ಸಿಕ್ಕಲಿ, ಶುಭವಾಗಲಿ.

  3. ಬಹಳ ಉತ್ತಮ ಮಾಹಿತಿ ಇಪ್ಪ ಭಾರೀ ಲಾಯಿಕದ ಶುದ್ಧಿ ಒಪ್ಪಣ್ಣ.
    ಲಾಯಿಕಾಯಿದು ಯಾವಾಗಲಿನಂತೆ.
    ~ಸುಮನಕ್ಕ…

  4. ಒಪ್ಪಣ್ಣೋ..

    ನಿನ್ನ ಮನಸ್ಸಿನ ಬಹು ದೊಡ್ಡ ಆಶಯದ ಒಂದು ಶುದ್ದಿ! ತುಂಬಾ ಕೊಶಿ ಆತು. ತುಂಬಾ ಲಾಯ್ಕಕ್ಕೆ ವಿವರಣೆ ಕೊಟ್ಟು ಬರದ್ದೆ.

    [ನಮ್ಮೋರು ಮದಲಿಂಗೇ ಮುಂದುವರುದೋರು; ಈಗಳೂ ಅದೇ ರೀತಿ ಮುಂದುವರುದಿರೇಕು ]

    ಖಂಡಿತಾ! ನಮ್ಮೋರು ಯಾವ ಕಾಲಕ್ಕೂ ಮುಂದೆಯೇ ಇರೆಕ್ಕು. ನಮ್ಮಂದ ಆ ಸಾಧನೆ ಮಾಡ್ಲೆ ಎಡಿಗು. ಈಗ ಇಪ್ಪ ನಮ್ಮೋರ ಒಂದೇ ಗತಿಯ ದಾರಿ ಬದಲೆಕ್ಕು. ನಮ್ಮ ಸಂಸ್ಕಾರಂಗಳ ಭದ್ರ ಅಡಿಪಾಯಲ್ಲಿ ಎಲ್ಲಾ ಕ್ಷೇತ್ರಲ್ಲಿಯೂ ಬೆಳಗಿ ಬರೆಕ್ಕು. ಆಡಳಿತಾತ್ಮಕ ವಿಚಾರಲ್ಲಿ ನಮ್ಮವ್ವೇ ಮುಂದೆ ಇರೆಕ್ಕು. ಅಂತೇ ನಾಲ್ಕು ಜನ ಇಪ್ಪಲ್ಲಿ ನಮ್ಮೋರು ಹಾಂಗೆ ಆಚಾರ ಮಾಡಿದ್ದವು ಇದು ಸರಿಯಾ? ತಪ್ಪಾ? ಇತ್ಯಾದಿಗಳ ತೂಕ ಮಾಡುವ ಬದಲು ಹೀಂಗಿಪ್ಪ ಮಾಹಿತಿ ಇಪ್ಪ ವಿಷಯಂಗಳ ಬರದು, ನಮ್ಮ ಮಕ್ಕೋ ಎಲ್ಲಿ ಅಭಿವೃದ್ಧಿ ಆಯೆಕ್ಕು ಆ ವಿಷಯಕ್ಕೆ ಗಮನ ಹರಿಸುವ ಹಾಂಗೆ ಮಾಡಿ ಎಲ್ಲರನ್ನೂ ಚಿಂತನೆಗೆ ಹಾಕೆಕ್ಕು ಅಲ್ಲದಾ? ಜನಂಗಳ ಮನಸ್ಸು ಒಳ್ಳೆಯ ವಿಚಾರದ ಕಡೆಂಗೆ ತಿರುಗಿಸಿದರೆ ನಾವೇ ಒಳ್ಳೆದಪ್ಪದು ಅಲ್ಲದಾ?

    ನಮ್ಮ ನಡೂಕೆಯೂ ಎಡನ್ನೀರು ಗೋಪಾಲಣ್ಣ, ಆರ್‍‍ಟೀವೋ ಶಾಮಣ್ಣ, ವಿ.ವಿ ಮಾವ ನ ಹಾಂಗೆ ಇಪ್ಪ ಪ್ರತಿಭೆಗ ಹೆರ ಬರಲಿ..
    ಎಲ್ಲಾ ಅವಕಾಶ ಇಪ್ಪ ಮಕ್ಕೊಗೆ ಈ ಪರೀಕ್ಷೆ ಬರದು ಸಾಧಿಸುವ ಸಂದರ್ಭಂಗ ಒಲುದು ಬರಲಿ..
    ನೀನು ಹೇಳಿದ ಹಾಂಗೆ ಒಬ್ಬೊಬ್ಬನೂ ಹವ್ಯಕ ಅಬ್ಬೆಯ ಸಾರ್ಥಕ ಮಕ್ಕೋ ಆಗಲಿ..
    ನಿನ್ನ ಒಂದೊಪ್ಪದ ಹಾರೈಕೆ ಫಲಿಸಲಿ..

  5. ಶುದ್ದಿ ಪಷ್ಟಾಯಿದು ಒಪ್ಪಣ್ಣ. ಎನ್.ಟೀ ಮಾವ, ಮತ್ತೆ ಅಷ್ಟು ಸಾಧನೆ ಮಾಡಿದ ಬೇರೆ ಹಿಯೋರೆಲ್ಲ ನಮ್ಮೋರು ಹೇಳಿ ಕೆಳಿಯಪ್ಪಗ ಹೆಮ್ಮೆ ಅನ್ಸುತ್ತಾ ಇದ್ದು.
    [ ಅವು ಒಂದು ಹೂಂಕುಟ್ಟದ್ದರೆ ರೋಕೆಟ್ಟು ಹಾರ – ಅವು ಒಂದರಿ ತಲೆಆಡುಸದ್ದರೆ ವಿಮಾನ ಇಳಿಯ ] – ಈ ಒಂದು ಗೆರೆಲಿ ಅವರ ಪವರು ಎಂಥಾದ್ದು ಹೇಳಿ ಸ್ಪಷ್ಟ ಗೊಂತಾವುತ್ತು.
    ಬ್ರಾಹ್ಮಣ ಮಕ್ಕ ಕಲಿವದರ್ಲಿ ಉಶಾರಿ ಹೇಳಿ ಲೆಕ್ಕ. ಅದು ರಕ್ತಗತವಾಗಿ ಬಂದಿರ್ತು ಹೆಚ್ಚಿನವಕ್ಕೆ. ಆ ಬುದ್ಧಿವಂತಿಕೆಯ ಹೀಂಗೆ ಸರಿಯಾದ ರೀತಿಲಿ ಉಪಯೋಗುಸಿಗೊಂಡು, ನಾವುದೇ ಆಡಳಿತ ಯಂತ್ರದ ಒಂದು ಭಾಗ ಆಗಿ ಸೇರಿಗೊಂಡ್ರೆ ನಮ್ಮ ಸಮಾಜಕ್ಕೆ ಎಷ್ಟು ಒಳ್ಳೆದಕ್ಕಲ್ದ. ಅಲ್ಪಸಂಖ್ಯಾತರು ಹೇಳಿಗೊಂಡು ಸರ್ಕಾರದ ಸೌಲಭ್ಯಂಗಳ ಎಲ್ಲ ಬೇಕಾಬಿಟ್ಟಿ ಉಪಯೋಗ ಮಾಡಿಗೊಂಬವಕ್ಕೆ ಕಡಿವಾಣ ಹಾಕುಲಕ್ಕು. ನವಗೂ ಸ್ಕಾಲರ್ ಶಿಪ್, ರಿಸರ್ವೇಶನ್ ಗ ಎಲ್ಲ ಸಿಕ್ಕುವಾಂಗೆ ಮಾಡ್ಳಕ್ಕು. ನಮ್ಮಲ್ಲಿಪ್ಪ ಬಡ ಪ್ರತಿಭೆಗೊಕ್ಕೆ ಒಳ್ಳೆ ಅವಕಾಶ ಮಾಡಿಕೊಡ್ಳಕ್ಕು.
    ಹೇಳಿದ ಹಾಂಗೆ ಐಯೇಯೆಸ್ಸು ಬರವಲೆ ಮೂವತ್ತು ಒರಿಷದ ಒಳ ಆಯೆಕ್ಕು ಅಲ್ದಾ? ಆನಂತೂ ಇನ್ನು ಪ್ರತಿ ವರ್ಷ ಪ್ರಯತ್ನ ಮಾಡೆಕ್ಕು ಹೇಳಿ ನಿರ್ಧಾರ ಮಾಡಿದ್ದೆ. ಧನ್ಯವಾದಂಗೊ ಒಪ್ಪಣ್ಣ.

  6. ಅಲ್ಪ್ಪ ಮಾಹಿತಿ ಸಿಕ್ಕಿತ್ತಯ್ಯಾ ಒಪ್ಪಣ್ಣನ ಈ ಶುದ್ದಿಂದಾಗಿ.
    ಎನ್ ಟೀ ಭಟ್ಟರ ಬಗ್ಗೆ ನಾವು ಕೇಳಿದ್ದು ಕಮ್ಮಿ. ಬೌಶ್ಶ ಅವು ಈ ಹೊಡೆಲಿ ಎಲ್ಲಿಯೂ ಸರ್ವೀಸಿಲ್ಲಿ ಇಲ್ಲದ್ದ ಕಾರಣ ಆಯಿಕ್ಕು.

    ಅದಪ್ಪೂ, ಓ ಮನ್ನೆ ಮಾಷ್ಟ್ರುಮಾವನ ಸಣ್ಣಮಗ ಸಿಕ್ಕಿ ಅದೂ ಇದೂ ಮಾತಾಡುವಗ ಈ ಶುದ್ದಿಯೂ ಬಂತು. ಅಂಬಗ ಅವ° ಹೇದ – ರಾಜಸ್ಥಾನಲ್ಲಿ ‘ಮೀನಾ’ ಹೇಳ್ತ ಒಂದು ಜಾತಿಯವು ಇದ್ದವು; ಆ ಜಾತಿಯ ಸುಮಾರು ಜೆನಂಗೊ ಈಮೊದಲೇ ಐಯೇಯೆಸ್ಸು ಪಾಸು ಮಾಡಿ ದೊಡ್ಡದೊಡ್ಡ ಓಪೀಸರುಗೊ ಆಯಿದವು. ಮಾಂತ್ರ ಅಲ್ಲ; ಈಗ ಪರೀಕ್ಷೆ ಬರೆತ್ತೋರ ಪಾಸು ಮಾಡ್ತ ಕಮಿಟಿಲಿಯೂ ಪೂರ ಅವ್ವೇ ಇಪ್ಪದು. ಹಾಂಗಾಗಿ ಆ ಜಾತಿಯವಕ್ಕೆ ಐಯೇಯೆಸ್ಸು ಪಾಸಪ್ಪಲೆ ಎಳುಪ್ಪ ಇದ್ದು.. ಹೇದು

    ಇದು ಸಂಗತಿ ಅಪ್ಪೋ ಒಪ್ಪಣ್ಣ..??

  7. ಆನು ಮೊನ್ನೆ ಮೊನ್ನೆ ಒಂದು ಒಪ್ಪ ಕೊಟ್ಟಿತ್ತಿದ್ದೆ …. ನಮ್ಮ ಮಕ್ಕ ಈ ಐ ಎ ಎಸ್ ಮಾಡೆಕ್ಕು, ಎಂತಕೆ ಹೇಳಿರೆ ದೇಶದ ಆಡಳಿತ ನಿಜವಾಗಿ ಮಾಡುದು ಅವ್ವೇ, ರಾಜಕೀಯ ನಾಯಕರು ಅಲ್ಲ ಹೇಳಿ…. ಈಗ ಒಪ್ಪಣ್ಣ ಅದನ್ನೇ ಬರದ ಆದಾ…

  8. ಬರದ್ದು ಲಾಯ್ಕ ಆಯ್ದು ಒಪ್ಪಣ್ಣ..
    ಮಕ್ಕೊಗೆ ಆಸಕ್ತಿ ಇಪ್ಪ ವಿಷಯಲ್ಲಿ ಮುಂದೆ ಹೊಪಲೆ ಒಳ್ಳೆ ಮಾರ್ಗ ತೋರ್ಸಿ …ಹಂಗೆ ಹೇಳಿ ಆಸಕ್ತಿ ಕೆಟ್ಟ ವಿಷಯಲ್ಲಿ ಇದ್ದರೆ ಬುದ್ಧಿ ಹೇಳಿ ..
    ಹಂಗೆ ಆಯ್ದು ಮಾವನ ವಿಷಯಲ್ಲೂ ..ಶಾಲೆಗೇ ಫಸ್ಟ್ ಬಂದ ಮಾಣಿ ಮುಂದೆ ರಾಮಜ್ಜನ ಕೋಲೇಜಿಲಿ B .A . ಮಾಡ್ತೆ ಹೇಳಿ ಹೆರಟ…ಎಲ್ಲಾ ಮಾಸ್ಟ್ರಕ್ಕೋ ಹೇಳಿದವು ಸೈನ್ಸ್ ತೆಕ್ಕೋ ಹೇಳಿ..ಕೇಳದ್ದೆ ಆನು ಇದನ್ನೇ ಮಾಡ್ತೆ ಹೇರಟವ I.A.S. ಮಾಡಿದ ಮುಂದೆ …
    ಗಮ್ಮತ್ತಿನ ಕತೆ ಹೇಳಿರೆ ಫೋನ್ ಬಂದ ಇರುಳೆ ಲಾಟನು ಹಿಡುದು JCB ತಂದು ಕೆಲಸ ಆಗಿತ್ತು ಅಗಳಿನ ಮೊದಲನ ಹಾಂಗೆ ಮಾಡಿ ಮಡುಗಿ…ಮರದಿನ ವಾಪಾಸ್ ತಿರುಗ್ಸಿ ಫೋನ್ ಎಂತ ಆಯ್ದಿಲ್ಲೆ …ಎಲ್ಲಾ ಮೊದಲಾಣ ಹಾಂಗೆ ಇದ್ದು ಹೇಳಿ 🙂
    ಅಜ್ಜಿ ಒಬ್ಬನೇ ಊರಿಲಿ ಇಪ್ಪದು…ಅಜ್ಜಿ ಭಾರೀ ಲಾಯ್ಕ ಹಲಸಿನ ಕಾಯಿ ಬೆಲೆ ಹೋಳಿಗೆ ಮಾಡುಗು ..ಮೊದಲಿಂದಲೇ .. 🙂

    I.A.S. ಆಗಲಿ ಬೇರೆ ಏನೇ ಆಗಲಿ …ಯಾವುದೇ ಒಂದು ನಾಯಕತ್ವ ತೆಕ್ಕೊಳ್ಳೆಕ್ಕಾರೆ ಅವನ ಸಾಮರ್ಥ್ಯ ಖಂಡಿತ ಅಳತೆ ಮಾಡೆಕ್ಕವ್ತು .ಇವನ ಕೈಲಿ ಆಡಳಿತ ಕೊಟ್ರೆ ಸರಿ ನೋಡಿಗೊಂಬ ಸಾಮರ್ಥ್ಯ ಇದ್ದ ಹೇಳಿ ಸಂದರ್ಶನ ಮಾಡ್ತವು..
    100 ಜನಕ್ಕೆ ಒಂದು cinema ತೋರ್ಸಿರೆ ಒಬ್ಬೊಬಂಗೆ ಒಂದೊಂದು ಪಾತ್ರ ಇಷ್ಟ ಅಕ್ಕು..ಒಬ್ಬಂಗೆ ರೌಡಿಯೇ ಲಾಯ್ಕ ಕಾಂಗು ಮತ್ತೊಬಂಗೆ ಅವ ಲಾಯ್ಕ ಪೆಟ್ಟು ಮಾಡಿದ್ದ ಹೇಳಿ ಕಾಂಗು …ಇದೆಲ್ಲ grasping level ಲಿ ಇಪ್ಪ ವ್ಯತ್ಯಾಸಂಗೋ…
    ಹಾಂಗೆ ಯಾವುದೇ ಒಂದು ಉದಾಹರಣೆ ಕೊಟ್ರೂ ಒಬ್ಬೊಬ್ಬನ ಅರ್ಥ ಮಾಡಿಗೊಂಬ ಕ್ರಮ ವ್ಯತ್ಯಾಸ ಇಕ್ಕು ..ಅಲ್ಲಿಯೇ ಒಬ್ಬಂದ ಒಬ್ಬಂಗೆ ಎಂತ ವ್ಯತ್ಯಾಸ ಹೇಳುದು ಗೊಂತಪ್ಪದು…ಅದು ಮಕ್ಕೋ ಬೆಳದು ಬಪ್ಪ, ಮಕ್ಕೋ ಆಯ್ಕೆ ಮಾಡಿಗೊಂಬ ಹವ್ಯಾಸ, ವಿಷಯದ, ಪರಿಸರದ ಮೇಲೆ ಅವಲಂಬಿಸಿರ್ತು..
    I.A.S ಮಾವನ B.B.C. ಕೇಳುವ ಅಭ್ಯಾಸಂದ ಅವಕ್ಕೆ ತುಂಬಾ ಉಪಕಾರ ಆಯ್ದು..
    ಹಾಂಗೆ ಮಕ್ಕಳ ಬೆಳೆಶುತ್ತ ಬರೇ ಪುಚ್ಚೆ ,ಎಲಿ ಹಿಡಿವದರ ನೋಡುದರ ಒಟ್ಟಿ೦ಗೆ ಗಟ್ಟಿ ವಿಮರ್ಶಾತ್ಮಕ ಕಥೆಗಳನ್ನೂ , ಘಟನೆಗಳನ್ನೂ ಕೊಡಿ ..
    ನಾವು ನಮ್ಮತನ ಒಳಿಶಿಗೊ೦ಡು, ಬಾಕಿ ಒಟ್ಟು ಜನಸಂಖ್ಯೆಂದ ನಮ್ಮ ನಾವು ಗುರುತಿಸಿಗೊಳೆಕ್ಕು…ನವಗಾಗಿ ತೆಗದು ಮಡುಗಿದ್ದು(Reservation) ಹೇಳಿ ಎಂತ ಇಲ್ಲೆ.. Reservation ಅಗತ್ಯವೇ ಇಲ್ಲದ್ದೆ ನಮ್ಮೋರು ಎಲ್ಲೋರೂ ಮುಂದೆ ಬರಲಿ …ಆಡಳಿತ ಅಧಿಕಾರಿಗೋ ಆಗಲಿ …ಬುದ್ಧಿವಂತರಾಗಲಿ ..

  9. ಒಪ್ಪಣ್ಣಾ,
    ನಮ್ಮವು ಎಂತಕೆ ಪಬ್ಲಿಕ್ ಸರ್ವಿಸ್ ಕಮಿಶನ್ ಪರೀಕ್ಷೆಗೊಕ್ಕೆ ಕೂರೆಕ್ಕು, ಮೇಲೆ ಬರೆಕು ಹೇಳ್ತ ಆಶಯವ ಚೆಂದಕೆ ನಿರೂಪಣೆ ಮಾಡಿದ್ದೆ.
    ಸಂಬಳ ಹೆಚ್ಚು ಸಿಕ್ಕುವ ಕೆಲಸಕ್ಕೆ, ಸುಲಾಬಲ್ಲಿ ಡಿಗ್ರಿ ಮಾಡಿ ಹೋಪಲೆ ಎಡಿತ್ತು ಹೇಳಿ ಎಲ್ಲರೂ ಅದನ್ನೇ ಅಶ್ರಯುಸುತ್ತವು.
    ದೇಶದ ಆಡಳಿತ ನೆಡೆಸುತ್ತೆ ಹೇಳ್ತ ಉತ್ಸವ ಮೂರ್ತಿಗಳ ಹಿಂದೆ, ತಲೆ ಓಡುಸಿ ಕೆಲಸ ಮಾಡುವ ಹೀಂಗಿಪ್ಪ ಒಂದು ಸಮೂಹವೇ ಇದ್ದು. ನಮ್ಮವು ಅದರಲ್ಲಿ ಒಂದು ಪಾಲು ತೆಕ್ಕೊಂಬಲೆ ಎಡಿಗಾರೆ ಎಷ್ಟು ಒಳ್ಳೆದು.
    ಅಮೈ ಉಪ್ನಾನಲ್ಲಿ ಸಿಕ್ಕಿಪ್ಪಗ ನೀನು ಹೇಳಿದೆ “ಕಾಸ್ರೋಡು ಕಲೆಕ್ಟ್ರನ ಜಾಗೆಲಿ ನಮ್ಮವು ಆರಾರೂ ಇತ್ತಿದ್ರೆ, ಕುಂಬ್ಳೆ ದೇವಸ್ಥಾನ ಹೈವೇಗೆ ಹೋಯೆಕ್ಕು ಹೇಳ್ತ ನಿರ್ಧಾರಕ್ಕೆ ಬತ್ತಿತವಿಲ್ಲೆ” ಹೇಳಿ.
    ನಮ್ಮವು ಇನ್ನಾದರೂ ಈ ದಿಕ್ಕಿಲ್ಲಿ ಪ್ರಯತ್ನ ಮಾಡಲಿ ಹೇಳುವ ಸದಾಶಯದೊಟ್ಟಿಂಗೆ ಒಂದು ಒಪ್ಪ

  10. ಸೂಪರಪ್ಪೋ ಸೂಪರ್ ಆಯಿದು ಒಪ್ಪಣ್ಣ. ಇದರ ಓದಿದವಂಗೆ ಈಗಲೇ UPSC ಗೆ ಕೂದು, ಎಂಟಿ ಭಟ್ರ ಹಾಂಗೆ ದೊಡ್ಡ ಜನ ಆಯೆಕ್ಕು ಹೇಳಿಯೇ ಕಾಂಗು. ಈ ಸೋಫ್ಟ್ ವೇರ್ ಹೇದು ನಮ್ಮವೆಲ್ಲ ಊರು ಬಿಟ್ಟು ಹೋಪ ಈ ಕಾಲಘಟ್ಟಕ್ಕೆ ಸರಿಯಾದ ಬರವಣಿಗೆ. ಅದೂ ಮನದಟ್ಟುವ ಹಾಂಗೆ ಭಾರೀ ಲಾಯಿಕ್ಕಕ್ಕೆ ಬರದ್ದೆ. ಈಗ ಹೈಸ್ಕೂಲ್, ಪಿ.ಯು.ಸಿ. ಕಲಿತ್ತ ನಮ್ಮ ಮಕ್ಕೊಗೆ ಈ ಲೇಖನವ ಓದುತ್ತ ಹಾಂಗೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಕೈಲಿದ್ದು. ನಮ್ಮ ಮಕ್ಕೊ ಮನಸ್ಸು ಮಾಡಿದರೆ, ಜೈಸುಗು. ಶುಭವಾಗಲಿ.

  11. ತುಂಬಾ ಉಪಯುಕ್ತ ಮಾಹಿತಿ….. ಃ)

  12. ಉತ್ತಮ ಮಾರ್ಗ ದರ್ಶಕ ಲೇಖನ..”.ಹಿರಿಯೋರ ಜಾಗೆಯ ಒಳುಶೆಕ್ಕು ” ಹೇಳುವ ಅಬ್ಬೆಯ ಆಶಯವ ಡೆಲ್ಲಿಂದಲೇ ಈಡೇರಿಸಿದ ಸಾರ್ಥಕ ಮಗ…..ದಕ್ಷ ಆಡಳಿತಾಧಿಕಾರಿ….ಇವರ ಬಗ್ಗೆ ತಿಳಿಶಿದ oppann nge ಧನ್ಯವಾದ..

  13. ಒಳ್ಳೆ ಶುದ್ದಿ.
    ಇತ್ತೀಚೆಗೆ ಮಂಗ್ಳೂರಿನ ಮೇಯರ್ ಆಗಿತ್ತದ್ದ ಕೆ. ಶಂಕರ ಭಟ್ಟ್ರ ಮಗ IAS ಪರೀಕ್ಷೆ ಪಾಸು ಮಾಡಿದ ಶುದ್ದಿ ಓದಿತ್ತಿದ್ದೆ. ಇನ್ನೂ ಹೆಚ್ಚಿನ ಸಂಕ್ಯೆಲಿ ನಮ್ಮ ಮಕ್ಕ ಈ ನಿಟ್ಟಿಲಿ ಯೋಚಿಸುವಾಂಗೆ ಆದರೆ ಈ ಲೇಖನ ಬರದ ಉದ್ದೇಶಕ್ಕೆ ಸಾರ್ಥಕತೆ ಸಿಕ್ಕಿದ ಹಾಂಗೆ ಅಲ್ಲದೋ ಒಪ್ಪಣ್ಣ. ಹಾಂಗೆ ಆಗಲಿ ಹೇಳ್ತ ಆಶಯದೊಟ್ಟಿಂಗೆ ಒಂದೊಪ್ಪ.

  14. ತುಂಬಾ ಒಳ್ಳೆ ಲೇಖನ… ಎಲ್ಲ ಮಕ್ಕಳೂ ಸಾರ್ಥಕತೆಯ ಪಡದರೆ ಆ ಹವ್ಯಕಬ್ಬೆಗೆ ಇನ್ನೆಷ್ಟು ಖುಷಿ ಅಕ್ಕೋ… ಕನಸು ಕಾಣುತ್ತಾ ಇದ್ದೆ…

    ಬರೇ ಓದಿ ಮಾರ್ಕ್ ತೆಗದು ಫಸ್ಟ್ ಬಪ್ಪದು, ಡಾಕ್ಟ್ರು, ಇಂಜಿನಿಯರ್ ಅಪ್ಪದು ಈ ಸರಣಿಂದ ಹೆರ ಬಂದು… ಹೀಂಗಿದ್ದದರ ಬಗ್ಗೆ ನಾವು ಜಾಸ್ತಿ ಯೋಚಿಸೆಕ್ಕು… “… ಏನಾದರೂ ಸರಿಯೇ ಮೊದಲು ಮಾನವನಾಗು…” ಹೇಳಿ ಪುನಃ ಪುನಃ ಉಚ್ಚರಿಸಿ ನಮ್ಮ ಮನಸ್ಸಿಲಿ ಪರ್ಮನೆಂಟ್ ಆಗಿ ಸ್ಟೋರ್ ಮಾಡೆಕ್ಕು… ಅಷ್ಟಪ್ಪಗ ಆಯಾಯ ಕ್ಷೇತ್ರಲ್ಲಿ ಆಸಕ್ತಿ ಇಪ್ಪ ಮಕ್ಕೋ ಅದೇ ಕ್ಷೇತ್ರಲ್ಲಿ ಮುಂದೆ ಬಪ್ಪಲೆ ಸಾಧ್ಯ ಆವುತ್ತು… “ನಮ್ಮ ಹವ್ಯಕರು ಯಾವುದರಲ್ಲಿ ಆದರೂ ಹೆರಟರೆ ಮತ್ತೆ ಮುಂದೆಯೇ… ಅದರಲ್ಲಿ ಸಂಶಯ ಇಲ್ಲೇ…”. ಎಲ್ಲ ಕ್ಷೇತ್ರಲ್ಲಿಯೂ ಹವ್ಯಕರೇ ಮುಂದೆ ಹೇಳಿದರೆ ಮತ್ತೆ ದೇಶ ನಮ್ಮ ಕೈಲಿ ಹೇಳುದರಲ್ಲಿ ಸಂಶಯ ಇಲ್ಲೇ…

  15. ಒಪ್ಪಣ್ಣನ ಒಪ್ಪ ಶುದ್ದಿಗೆ ನಮ್ಮದೊಂದೊಪ್ಪ

  16. ಐ.ಎ.ಎಸ್. ಪರೀಕ್ಷೆ ಪಾಸಪ್ಪದು ನಮ್ಮವಕ್ಕೆ ಕಷ್ಟ ಅಲ್ಲ.ಅಂತಹ ಪ್ರತಿಭೆ ನಮ್ಮಲ್ಲಿ ಇದ್ದು.ಆದರೆ ನಮ್ಮಲ್ಲಿ ಅದಕ್ಕೆ ಬೇಕಾದ ಪ್ರಯತ್ನ ಮಾಡುದು ಸಾಕಾವುತ್ತಿಲ್ಲೆ.ಐ .ಎ.ಎಸ್. ನ ಯಾರು ಬೇಕಾದರೂ [ಡಾಕ್ಟರು,ಎಂಜಿನಿಯರ್ ಸಹ]ಪದವೀಧರರು ಬರವಲಕ್ಕು.ಕನ್ನಡಲ್ಲೂ ಬರವಲೆ ಅಕ್ಕು.
    ಈ ವಿಷಯ ಆನು ತುಂಬಾ ವರ್ಷಂದ ಬರೆವಲೆ ಯೋಚನೆ ಮಾಡಿಕೊಂಡಿತ್ತಿದ್ದೆ.ಅದನ್ನೇ ಇಲ್ಲಿ ಓದಿ ಸಂತೋಷ ಆತು.
    ಸ್ಟಾಫ್ ಸೆಲೆಕ್ಷನ್ ಕಮಿಶನ್ ಪರೀಕ್ಷೆಗೊಕ್ಕೂ ನಮ್ಮವು ಹೆಚ್ಚು ಹೆಚ್ಚು ಬರೆಯೆಕ್ಕು.

  17. ಇದು ಒಪ್ಪಣ್ಣನ ವಾರದ ಒಂದು ಶುದ್ದಿ ಅಲ್ಲ. ಇದು ಬೈಲಿನ ಬಿಬಿಸಿ. ಉಪಯುಕ್ತ ಮಹತ್ವ ಶುದ್ದಿ. ಶುದ್ದಿ ಓದಿಕ್ಕಿ ಪ್ರತಿಯೊಬ್ಬಂಗೂ ಒಂದು ಕ್ಷಣ ತಾನೆಲ್ಲಿದ್ದೆ ಹೇಳಿ ಯೋಚಿಸಿಹೋಕು. [ಹವ್ಯಕ ಅಬ್ಬೆಯ ಸಾರ್ಥಕ ಮಕ್ಕೊ] – ಒಪ್ಪಣನ ‘ಬೈಲು’ ಅದೆಷ್ಟು ಭಾವನಾತ್ಮಕ ಬಾಂಧವ್ಯ. [ಸರ್ಕಾರ ಕೆಲಸ ನಮ್ಮದಾದರೆ ಸರ್ಕಾರವೇ ನಮ್ಮದಾವುತ್ತು] – ಪ್ರತಿಯೊಬ್ಬ ಪ್ರಜಗೂ ಇದುವೇ ಪ್ರತಿಜ್ಞಾವಾಕ್ಯ ಆಗಿರಲಿ ಹೇಳಿ ಒಪ್ಪ -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×