Oppanna.com

ಸಮಾಜದ ಕ್ಷೇಮ ಕಾವ ಪುರೋಹಿತರಿಂಗೆ ಕ್ಷೇಮನಿಧಿ..!

ಬರದೋರು :   ಒಪ್ಪಣ್ಣ    on   13/05/2016    3 ಒಪ್ಪಂಗೊ

ಬೈಲಿನ ಬಟ್ಟಮಾವ ಒಂದರಿ ಮಗುಮಾವನಲ್ಲಿ ಉದೆಗಾಲಕ್ಕೆ ಬೇಗ ಗೆಣವತಿಹೋಮ ಮುಗುಶಿ ಒಪಾಸು ಬೈಲಕರೆಂಗೆ ಹೆರಟವು.
ಯೇವತ್ರಾಣಂತೆ ನೆಡಕ್ಕೋಂಡೇ ಹೆರಟದು.
ಬೇಗ ಎದ್ದು, ಬೇಗ ಹೋಮ ಮುಗುಶಿ, ಅಲ್ಲಿಂದ ಬೇಗ ಹೆರಟು ಬೇಗ ಬೇಗವೇ ನೆಡಕ್ಕೊಂಡು ಹೋದ ಕಾರಣವೋ ಏನೋ – ನೆಡವಗ ರಜ ಅಂಬೆರ್ಪು ಆತು ಕಾಣ್ತು;
ತರವಾಡುಮನೆ ಎದುರೆ ಸಾರಡಿ ತೋಡು ದಾಂಟುವಾಗ – ನೆಲಕ್ಕೆ ಊರಿದ ಕಾಲು ಹೊಂಡಕ್ಕೆ ಇಳುದತ್ತು!
ಪಕ್ಕನೆ ಆಯತಪ್ಪಿ -ಅತ್ಲಾಗಿ ಬಿದ್ದದೂ ಅಲ್ಲ, ಇತ್ಲಾಗಿ ಕಾಲು ಊರಿದ್ದೂ ಅಲ್ಲ – ಹಾಂಗಾತು ಬಟ್ಟಮಾವಂಗೆ.
ದೇಹ ಮಾಲಿತ್ತು, ಆಧರುಸಿಗೊಂಬಲೆ ಎಡಿಯದ್ದೆ ಪಕ್ಕನೆ ಬಜಕ್ಕನೆ ಬಿದ್ದ ಹಾಂಗಾತು, ಪಾಪ.
ಇಡೀ ಅವರ ದೇಹದ ಭಾರ + ಮಗುಮಾವನಲ್ಲಿ ಸಿಕ್ಕಿದ ಸ್ವಸ್ತಿಕದ ಅಕ್ಕಿ ಕಾಯಿಯ ಭಾರ ಎಲ್ಲವೂ ಒಟ್ಟಾಗಿ ಅವರ ಒಂದು ಕಾಲಿಂಗೆ ಒಂದರಿಯೇ ಬಿದ್ದ ಹಾಂಗಾಗಿ, ಕಾಲು ತಿರ್ಪಿದ ಹಾಂಗಾಗಿ, ಕೂಚಪ್ಪ ಆದವು.

“ನಾರಾಯಣಾ…” – ಹೇಯಿದವು ಬಿದ್ದಪ್ಪದ್ದೇ.
ಆ ಸ್ವರ ಕೇಳುವಗಳೇ, ಆ ಧಾಟಿಯ ನಾರಾಯಣ ನಾಮ ಸ್ಮರಣೆ ಕೇಳುವಗಳೇ, ಬಿದ್ದ ಶಬ್ದ ಕೇಳುವಗಳೇ – ಅಲ್ಲೇ ಕೆಳಾಣತಟ್ಟು ತೋಟಲ್ಲಿ ಉದೆಕಾಲದ ಕೂಂಬಾಳೆ ಹೆರ್ಕಿಗೊಂಡಿದ್ದ ರಂಗಮಾವಂಗೆ ಕೇಳಿತ್ತು.
ಬಟ್ಟಮಾವಂಗೆ ಹಾಂಗೊಂದು ಕ್ರಮ ಇದ್ದು – ಪಕ್ಕನೆ ತಾಗಿರೆ ನಾರಾಯಣ ನಾಮಸ್ಮರಣೆ; ನಾರಾಯಣ ಹೇದರೂ ರಂಗನೇ ಅಲ್ದೋ – ರಂಗಮಾವ ಎತ್ತಿದವು.

ರಂಗಮಾವಂಗೆ ಗೊಂತಾತು – ಕೂಡ್ಳೇ ಹೋದವು ತೋಡಕರೆಂಗೆ, ಸ್ವರ ಕೇಳ್ತಲ್ಲಿಗೆ.
ನೋಡಿರೆ ಬಟ್ಟಮಾವ ಬಿದ್ದಿದವು. ಬಿದ್ದ ಗುಂಡಿಂದ ಹೇಂಗಾರು ಮಾಡಿ ಎದ್ದಿತ್ತಿದ್ದವು, ಜಾರಿಗೊಂಡು ದಾರಿ ಕರೆಂಗೆ ಬಯಿಂದವು.
ಮೋರೆಲಿ ಅಸಾಧ್ಯ ಬೇನೆ ಕಾಣ್ತು; ಬಾಯಿಲಿ ನಾರಾಯಣ ನಾಮಸ್ಮರಣೆ ಕೇಳ್ತು, ಕಟ್ಟಿ ಹಿಡ್ಕೊಂಡ ಅಕ್ಕಿ ಕಾಯಿ ಎಲ್ಲ ಚೆಲ್ಲಿದ್ದು, ನೆಡವ ದಾರಿ ಕರೆಯ ಹುಲ್ಲಿನ ಮೇಗೆ ಕಾಲುನೀಡಿ ಕೂಯಿದವು.
ಕೂಡ್ಳೇ ಪೆರ್ಡಾನ ಜೀಪು ಬರುಸಿ ಕೊಡೆಯಾಲಕ್ಕೆ ಮಾಡುಸಿದವು, ರಂಗಮಾವ°.
~

ಅಲ್ಲಿ ಕೂದ ಬಟ್ಟಮಾವ° ಮತ್ತೆ ಎರಡು ತಿಂಗಳು ಕೂದುಗೊಂಡೇ ಇರ್ತವು ಹೇದು ಗ್ರೇಶಿಯೇ ಇತ್ತಿದ್ದವಿಲ್ಲೆ.
ಅಪ್ಪು, ಅವರ ಕಾಲಿಲಿ – ಕೋಲು ಕಾಲಿಂಗೆ ಪಾದ ಸೇರ್ತಲ್ಲಿ ಸ್ವಸ್ತಿಕದಷ್ಟು ದೊಡ್ಡಕೆ ಬೇಂಡೇಜು ಇದ್ದತ್ತು.
ನರಂಬಿಂಗೆ ಪೆಟ್ಟಾದ್ಸು – ಹೇಳುಗು ಬಟ್ಟಮಾವ ಕೇಳಿದವರ ಹತ್ರೆ.
ಲಿಗಮೆಂಟು ಡೇಮೇಜು – ಹೇದು ಡಾಗುಟ್ರು ಹೇಳುಗು.
ಶುಕ್ರಾರ್ಕ ಸಂಧಿ ದೋಷ – ಹೇದು ಜೋಯಿಶಪ್ಪಚ್ಚಿ ಹೇಳುಗು,
ದೂಜಸೋಜ° ಹಳೆಅಗಳು ಮುಚ್ಚದ್ದು ಕಾರಣ – ಹೇದು ರಂಗಮಾವ ಹೇಳುಗು.

ಒಟ್ಟಿಲಿ ಬಟ್ಟಮಾವಂಗೆ ನೆಡವಲೆ ಗೊಂತಿಲ್ಲೆ, ನೆಡವಲಾಗ ಹೇಯಿದ್ದವಾಡ ಕೊಡೆಯಾಲದ ಗೋಪಿನಾತ ಡಾಗುಟ್ರು.
ಪ್ರತಿ ಎರಡು ವಾರಕ್ಕೊಂದರಿ ಜೀಪು ಮಾಡಿಗೊಂಡು ಕೊಡೆಯಾಲಕ್ಕೆ ಹೋವುಸ್ಸು, ಡಾಗುಟ್ರು ಒಂದರಿ ಬೇಂಡೇಜು ಬಿಡುಸಿ – ಕೂಡಿತ್ತೋ ನೋಡಿ – ಒಪಾಸು ಕಟ್ಟುದು.
(ಬೋಚಬಾವ ಕಶಿಕಟ್ಟಿದ್ದು ಕೂಡಿತ್ತೋ ನೋಡ್ಳೆ ಬಿಡುಸಿದ ನಮುನೆ ಅಲ್ಲ ಆತೋ – ಓಯಿ. ಅದಿರಳಿ.)

ಅಂತೂ ಇಂತೂ – ಎರಡು ತಿಂಗಳಿನ ಪೂರ್ತಿ ವಿಶ್ರಾಂತಿ ಅಪ್ಪಾಗ ಬೇನೆ ಗುಣ ಆತು.
ನೆಡವಲೆ ಎಡಿವ ಹಾಂಗಾತು.
ಹದಾಕೆ ದಂಟು ಕುಟ್ಟಿಗೊಂಡು ಜಾಲಿಲಿ ನೆಡದವು, ಮತ್ತೆ ಓ ಅಲ್ಲಿ ಮಾರ್ಗಲ್ಲಿ ನೆಡದವು.
ದಿನಾಗುಳೂ ಒಂದರ್ದ ಮೈಲು ನೆಡವ ಹಾಂಗಾತು.
~
ಈಗ ಶಿಷ್ಯವರ್ಗದೋರು ಮನೆಗೆ ಬಂದು ವಾಹನ ತಪ್ಪದು.
ಬಟ್ಟಮಾವ ಹತ್ತಿ ಕೂಪದು.
ಜೆಂಬ್ರ ಕಳುಶಿ ಒಪಾಸು ತಂದು ಬಿಡುದು,
ಇವು ಮನೆಗೆ ಬಪ್ಪದು – ಹೀಂಗಾತು ಕತೆ!

ಈಗಳೂ ಒಂದೊಂದರಿ ಅಂದು ನೆಡವ ದಾರಿ ಬಿದ್ದ ಸಂಗತಿ ನೆಂಪಾದರೆ ಅವಕ್ಕೆ ಹೆದರಿ ಹೋವುತ್ತು.
‘ಆ ದಿನ ರಂಗ° ಬಂದ ಕಾರಣ ಆತು, ಅವ ಕೂಡ್ಳೆ ಕೂಡ್ಳೆ ದಾಕುದಾರನ ಹತ್ರೆ ತೋರ್ಸಿದ ಕಾರಣ ಆತು’ – ಹೇದು ಹೆಮ್ಮೆಲಿ ಹೇಳ್ತವು.
ಆ ದಿನದ ಮದ್ದಿನ ಕರ್ಚನ್ನೂ ರಂಗಮಾವನೇ ನೋಡಿಗೊಂಡ ಬಗ್ಗೆ ತುಂಬಾ ಹೆಮ್ಮೆ ಇದ್ದು ಬಟ್ಟಮಾವಂಗೆ.
~
ಅಪ್ಪೂ, ಅಲ್ಲದ್ರೂ – ಬಟ್ಟಮಾವಂಗೆ ದಣಿಯ ಉತ್ಪತ್ತಿ ಹೇದು ಎಂತೂ ಇಲ್ಲೆ.
ದೊಡಾ ಹಳೆಕಾಲದ ಮನೆ, ದೇವರುಗೊ, ಆಚರಣೆಗೊ, ಆದರೆ ಆ ಮನೆಯ ಅನುರೂಪದ ಜಾಗೆ-ಉತ್ಪತ್ತಿ ಇಲ್ಲೆ.
ಶಿಷ್ಯವರ್ಗ ಕೊಟ್ಟಾಯೆಕ್ಕಷ್ಟೆ.
ಆದರೆ ಆರತ್ರೂ ಕೇಳುಲೆ ಹೋಗವು, ಮಹಾ ಸ್ವಾಭಿಮಾನಿ ಅವು; ಅದು ಎಲ್ಲೋರಿಂಗೂ ಗೊಂತಿಪ್ಪ ಸಂಗತಿ.
ಮೊನ್ನೆ ಮದ್ದಿಂಗೂ ಹಾಂಗೇ – ಅವ್ವಾಗಿ ಕೇಳದ್ರೂ, ವಿಶಯ ಅರಡಿವ ರಂಗಮಾವನೇ ಕೊಟ್ಟದು.

ಅಂತೂ ಈಗ ಆರೋಗ್ಯಲ್ಲಿ ಇದ್ದವು.
~
ನಮ್ಮ ಬಟ್ಟಮಾವನ ಆಪತ್ತಿಂಗೆ ರಂಗಮಾವ ಸಿಕ್ಕಿದವು.
ಎಲ್ಲ ಬಟ್ಟಮಾವಂದ್ರಿಂಗೂ – ರಂಗಮಾವ ಸಿಕ್ಕುಗೋ?
ಹಾಂಗಾರೆ ಬಟ್ಟಮಾವಂದ್ರ ಆಪತ್ತಿಂಗೆ – ಎಂತಾರು ಒಂದು ರಕ್ಷಣೆ ಆಗೆಡದೋ?
ಇಡೀ ಸಮಾಜದ ಕ್ಷೇಮವ ಬಟ್ಟಕ್ಕೊ ಹರಸುತ್ತವು, ಅವರ ಕ್ಷೇಮವ ನೋಡೆಡದೋ?
ನೋಡೆಕ್ಕು.
ಈ ಸಂಗತಿಗಾಗಿಯೇ – ನಮ್ಮ ಗುರುಗೊ ಮೊನ್ನೆ ಮಾಣಿಮಠಲ್ಲಿ *”ವೈದಿಕರ ಕ್ಷೇಮ ನಿಧಿ”* – ಹೇದು ಆರಂಭ ಮಾಡಿದ್ದು.
ಇನ್ನು ಯಾವದೇ ವೈದಿಕರಿಂಗೂ, ಪುರೋಹಿತರಿಂಗೂ – ಒಂದು ಅಭಯ ಹಸ್ತ.

ಸನಾತನ ಧರ್ಮಲ್ಲೇ ಬದ್ಕಿದ ಬಟ್ಟಮಾವಂದ್ರಿಂಗೆ – ಆಪತ್ತಿನ ಕಾಲಲ್ಲಿ ನಮ್ಮ ಗುರುಪೀಠ ಇದ್ದು, ನಮ್ಮ ಮಠ ಇದ್ದು.
ಭಟ್ಟಮಾವಂದ್ರು ಅಂತಾ ಸಂದರ್ಭಲ್ಲಿ ಮಠಂದ ನೆಡವ “ವೈದಿಕ ಕ್ಷೇಮ ನಿಧಿ”ಯ ಉಪಕಾರ ಪಡಕ್ಕೊಂಬಲಕ್ಕು – ಹೇದು ಮೊನ್ನೆ ಮಾಣಿಮಠಲ್ಲಿ ಗುರುಗೊ ಹೇಳಿದವಾಡ.

ವೈದಿಕರು ಒಟ್ಟಾಯೆಕ್ಕು.
ಸಮಾಜ ಕ್ಷೇಮಲ್ಲಿ ಇರೆಕ್ಕಾರೆ ವೈದಿಕರು ಕ್ಷೇಮಲ್ಲಿ ಇರೆಕ್ಕು.
ಅದಕ್ಕಾಗಿ ನಮ್ಮ ಗುರುಗೊ ಆರಂಭಿಸಿದ ಈ ಕ್ಷೇಮನಿಧಿ ಎಲ್ಲ ವೈದಿಕರ ರಕ್ಷಣೆ ಮಾಡಲಿ.
ವೇದವ್ಯಾಸ, ನಾರಾಯಣ, ಗುರುಪೀಠ ಎಲ್ಲರನ್ನೂ ಹರಸಲಿ.

ಶಿಷ್ಯವರ್ಗದೋರು ಶೆಗ್ತಿಮೀರಿ ವೈದಿಕ ಕ್ಷೇಮನಿಧಿ ಯ ವೃದ್ಧಿಸುವೊ°.
ಅಲ್ದೋ?

ಒಂದೊಪ್ಪ : ವೈದಿಕರ ಕ್ಷೇಮವೇ ಸಮಾಜಕ್ಕೆ ನಿಧಿ

3 thoughts on “ಸಮಾಜದ ಕ್ಷೇಮ ಕಾವ ಪುರೋಹಿತರಿಂಗೆ ಕ್ಷೇಮನಿಧಿ..!

  1. ಒಳ್ಳೆಯದು.ಭಟ್ಟಕ್ಕೊಗೆ ಜೀವವಿಮೆ ,ಅಪಘಾತ ವಿಮೆ ಮಾಡಿಸೆಕ್ಕು.ಈ ಬಗ್ಗೆ ಸಮಾಜ ಅವಕ್ಕೆ ವಿಮಾಕಂತು ಕಟ್ಟುಲೆ ಸಹಾಯ ಮಾಡೆಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×